ಪ್ರಜಾ ರಾಜ್ಯಮ್ ಪಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Praja Rajyam Party
HeadquartersHyderabad

ಪ್ರಜಾ ರಾಜ್ಯಮ್ |' (ತೆಲುಗು  : ఫ్రజా రాజ్యం ಅನುವಾದ :''''ಪ್ರಜೆಗಳ ಆಡಳಿತ)[೧] ಭಾರತದಲ್ಲಿನ ಆಂಧ್ರ ಪ್ರದೇಶ ರಾಜ್ಯದ ಒಂದು ಪ್ರಾದೇಶಿಕ ರಾಜಕೀಯ ಪಕ್ಷವಾಗಿದೆ, ಇದು ತೆಲುಗು ಸಿನೆಮಾ ನಟ ಚಿರಂಜೀವಿಯಿಂದ ಆಗಸ್ಟ್ ೨೬, ೨೦೦೮ ರಂದು ಸ್ಥಾಪಿಸಲ್ಪಟ್ಟಿತು[೨].

ಇತಿಹಾಸ[ಬದಲಾಯಿಸಿ]

ರಾಜಕೀಯದೊಳಕ್ಕೆ ಚಿರಂಜೀವಿಯ ಪ್ರವೇಶವು ಮಾಧ್ಯಮಗಳು ಮತ್ತು ರಾಜಕೀಯ ವಲಯದ ಜನರಿಂದ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಅಪೇಕ್ಷಿಸಲ್ಪಟ್ಟಿತ್ತು.[೩][೪] ಅದೇ ಸಮಯದಲ್ಲಿ ಅವರು ಅಂದರೆ ೨೦೦೭ ರ ಕೊನೆಯ ಅರ್ಧದ ಸಮಯದಲ್ಲಿ ಜನರ ಅಭಿಪ್ರಾಯಗಳನ್ನು ಕಲೆಹಾಕುತ್ತಿದ್ದರು ಎಂಬ ಅಂಶವು ವರದಿ ಮಾಡಲ್ಪಟ್ಟಿತು, ಜನವರಿ ೨೦೦೮ ರಲ್ಲಿ ಅವರು ತನ್ನ ನಿರ್ಧಾರವನ್ನು ಘೋಷಿಸುತ್ತಾರೆ ಎಂದೂ ಕೂಡ ಮಾಧ್ಯಮವು ವರದಿ ಮಾಡಿತು.[೩] ಅವರು ತನ್ನ ಮೂಲ ರಾಜ್ಯ ಆಂಧ್ರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ತೆಲುಗು ದೇಶಮ್ ಪಕ್ಷಕ್ಕೆ ಪರ್ಯಾಯವಾಗಿ ತನ್ನ ಪಕ್ಷವನ್ನು ಸ್ಥಾಪಿಸಿದರು.[೫]

ವರ್ತಮಾನದಲ್ಲಿ[ಬದಲಾಯಿಸಿ]

ಚಿರಂಜೀವಿಯಿಂದ ಮೊದಲ ಸಾರ್ವಜನಿಕ ಸಭೆಯು[೨] ಆಗಸ್ಟ್ ೨೬, ೨೦೦೮ ರಂದು120-acre (0.49 km2) ತಿರುಪತಿಯ ಸಮೀಪದ ಅವಿಲಾಲಾ ಟ್ಯಾಂಕ್‌ನಲ್ಲಿ ನಡೆಸಲ್ಪಟ್ಟಿತು. ಅವರು ಅಲ್ಲಿ ನೆರೆದಿದ್ದ ಸುಮಾರು ಒಂದು ಮಿಲಿಯನ್ ಜನರ ಕುರಿತು ಮಾತನಾಡಿದರು ಮತ್ತು ತನ್ನ ಪಕ್ಷದ ಹೆಸರು ಮತ್ತು ಅದರ ಕಾರ್ಯಸೂಚಿಗಳ ಬಗ್ಗೆ ಘೋಷಣೆಯನ್ನು ಮಾಡಿದರು. ಪಕ್ಷದ ಬಾವುಟ (ಧ್ವಜ)ವು ತನ್ನ ಮೇಲಿನ ೩/೪ ಭಾಗದಲ್ಲಿ ಬಿಳಿಯ ಬಣ್ಣದಿಂದ, ಮತ್ತು ಕೆಳಗಿನ ೧/೪ ಭಾಗದಲ್ಲಿ ಹಸಿರು ಬಣ್ಣದಿಂದ ಆವೃತವಾಗಿದೆ, ಈ ಬಾವುಟವು ಸಭೆಯ ಸಮಯದಲ್ಲಿ ಅನಾವರಣ ಮಾಡಲ್ಪಟ್ಟಿತು. ಬಾವುಟದ ಮಧ್ಯದಲ್ಲಿ ಒಂದು ಕೆಂಪು ಬಣ್ಣದ ಸೂರ್ಯನ ಚಿಹ್ನೆಯು ಒಂದು ಹಳದಿ ಗೆರೆಯಿಂದ ಆವೃತವಾಗಲ್ಪಟ್ಟಿದೆ. ಹಳದಿ ವೃತ್ತದ ನಂತರದಲ್ಲಿ ಮತ್ತು ಸುತ್ತಮುತ್ತ ೨೪ ಕೆಂಪು ಬಣ್ಣದ ಗೆರೆಗಳಿವೆ.

ಹಸಿರು ಬಣ್ಣವು "ಕೃಷಿಕರ ಬಗೆಗಿನ ತಿಳುವಳಿಕೆಯಾಗಿದೆ", ಕೆಂಪು ಬಣ್ಣವು "ಬದಲಾವಣೆ ಮತ್ತು ಕ್ರಾಂತಿಯನ್ನು" ಸಂಕೇತಿಸುತ್ತದೆ, ಸೂರ್ಯನ ಸುತ್ತಲಿರುವ ಹಳದಿ ಬಣ್ಣವು "ಪ್ರತಿ ಮನೆಯಲ್ಲೂ ಸಂತೋಷ"ವನ್ನು ಪ್ರತಿನಿಧಿಸುತ್ತದೆ, ಬಿಳಿ ಬಣ್ಣವು "ಸ್ವಚ್ಛವಾದ ಆಡಳಿತ ಮತ್ತು ಪಾರದರ್ಶಕತೆಯನ್ನು" ಸಂಕೇತಿಸುತ್ತದೆ; ಮಧ್ಯದಲ್ಲಿರುವ ಸೂರ್ಯನು ಬದಲಾವಣೆ ಮತ್ತು ಕ್ರಾಂತಿಯ ಅವಶ್ಯಕತೆಯನ್ನು ಸಂಕೇತಿಸುತ್ತಾರೆ.

ಪಕ್ಷದ ಹೆಸರು ಘೋಷಿಸಲ್ಪಟ್ಟ ದಿನದಂದು, ಚಿರಂಜೀವಿಯ ಪ್ರತಿನಿಧಿಗಳು ಪಕ್ಷದ ನೊಂದಣಿಗಾಗಿ ಭಾರತೀಯ ಚುನಾವಣಾ ಮಂಡಳಿಗೆ ಒಂದು ಮನವಿ ಪತ್ರವನ್ನು ಸಲ್ಲಿಸಿದರು.[೬]

ವಿಲೀನಗಳು[ಬದಲಾಯಿಸಿ]

ಮುಂಚಿನ ಮಿನಿಸ್ಟರ್ ಮತ್ತು ಮುಂಚಿನ ಟಿಡಿಪಿ ರಾಜಕೀಯ ಧುರೀಣ ದೇವೇಂದರ್ ಗೌಡರ ಅಧ್ಯಕ್ಷತೆಯಲ್ಲಿ ನಡೆಸಲ್ಪಡುತ್ತಿದ್ದ ನವ ತೆಲಂಗಾಣ ಪಕ್ಷವು (ಎನ್‌ಟಿಪಿ) ಪ್ರಜಾರಾಜ್ಯಮ್ ಪಕ್ಷದ ಜೊತೆಗೆ ವಿಲೀನ ಹೊಂದಿತು. ಎನ್‌ಟಿಪಿಯು ತೆಲಂಗಾಣ ರಾಜ್ಯ ನಿರ್ಮಾಣಕ್ಕಾಗಿ ಆಂದೋಲನಗಳನ್ನು ನಡೆಸುತಿದ್ದ ಒಂದು ರಾಜಕೀಯ ಪಕ್ಷವಾಗಿತ್ತು ಮತ್ತು ಅದು ಆಂಧ್ರ ಪ್ರದೇಶದ ತೆಲಂಗಾಣ ಪ್ರದೆಶಗಳಲ್ಲಿ ಶಕ್ತಿಯುತವಾದ ಅಡಿಪಾಯವನ್ನು ಹೊಂದಿತ್ತು. ವಿಲೀನದ ನಂತರ, ಮಿನಿಸ್ಟರ್ ಗೌಡರು ಪ್ರಜಾರಾಜ್ಯಮ್ ಪಕ್ಷದ ಉಪ-ಅಧ್ಯಕ್ಷರಾಗಿ ನೇಮಕ ಮಾಡಲ್ಪಟ್ಟರು.

ಚಿರಂಜೀವಿಯು ರಾಷ್ಟ್ರೀಯ ಮಟ್ಟಗಳಲ್ಲಿ ಒಂದು "ಫೋರ್ತ್ ಫ್ರಂಟ್" ಅನ್ನು ನಿರ್ಮಾಣ ಮಾಡುವುದಕ್ಕೂ ಕೂಡ ತನ್ನ ಬೆಂಬಲವನ್ನು ವ್ಯಪ್ತಪಡಿಸಿದರು.

೨೦೦೯ ರ ಚುನಾವಣೆ[ಬದಲಾಯಿಸಿ]

ಈ ಪಕ್ಷವು ೨೯೪ ರಲ್ಲಿ ೧೮ ಅಸೆಂಬ್ಲಿ ಸೀಟ್‌ಗಳನ್ನು ಪಡೆದುಕೊಂಡಿತು. ಪಕ್ಷದ ಅಧ್ಯಕ್ಷ ಚಿರಂಜೀವಿಯು ತಿರುಪತಿ ಮತ್ತು ಪಾಲಾಕೋಲ್‌ನಲ್ಲಿನ ಎರಡು ಅಸೆಂಬ್ಲಿ ಸೀಟುಗಳಲ್ಲಿ ಸ್ಪರ್ಧಿಸಿದ್ದರು ಮತ್ತು ತಿರುಪತಿಯಲ್ಲಿ ಜಯಗಳಿಸಿದರು. ಅದು ೧೭ % ಮತಗಳನ್ನು ಪಡೆಯಿತು ೧೮ ಅಸೆಂಬ್ಲಿ ಸೀಟ್‌ಗಳನ್ನು ಗಳಿಸಿತು, ಲೋಕ ಸಭೆಯಲ್ಲಿ ಯಾವುದೇ ಸೀಟ್‌ಗಳನ್ನು ಗಳಿಸಲಿಲ್ಲ.[೭]

ಪಿಆರ್‌ಪಿಯ ಪ್ರಣಾಳಿಕೆ[ಬದಲಾಯಿಸಿ]

ಕಾಂಗ್ರೆಸ್ ಸರ್ಕಾರದಿಂದ ಆಯೋಜಿತಗೊಳ್ಳಲ್ಪಟ್ಟ ನೀರಾವರಿ ಯೋಜನೆಗಳಲ್ಲಿನ ಭ್ರಷ್ಟಾಚಾರಗಳ ಕಡೆಗೆ ಉಚ್ಚ ನ್ಯಾಯಾಲಯದ ಒಬ್ಬ ಸಿಟ್ಟಿಂಗ್ ನ್ಯಾಯಾಧೀಶನ ಮೂಲಕ ಒಂದು ಪರೀಕ್ಷೆಯನ್ನು ನಡೆಸುವುದಾಗಿ ಪಿಆರ್‌ಪಿಯ ಚುನಾವಣಾ ಪ್ರಣಾಳಿಕೆಯು ಹೇಳಿಕೆ ನೀಡಿತು.

ಪ್ರಣಾಳಿಕೆಯು ಅಡಿಗೆ ಅನಿಲ ಸಿಲಿಂಡರ್ ಮತ್ತು ಕಿರಾಣಿ ಸಾಮಾನುಗಳನ್ನು ಪ್ರತಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳಿಗೆ ೨೦೦ ರೂಪಾಯಿಗಳಿಗೆ ನೀಡುವುದಾಗಿ ಆಶ್ವಾಸನೆಯನ್ನು ನೀಡಿತು, ಬಡವರ ನಡುವೆ ಭೂಮಿಯನ್ನು ಹಂಚುವುದು ಮತ್ತು ಮಜಲುಗಳಲ್ಲಿ ಪೂರ್ಣ ಪ್ರಮಾಣದ ಪ್ರತಿಬಂಧನೆಯನ್ನು ಮಾಡುವುದಾಗಿಯೂ ಭರವಸೆ ನೀಡಿತು.

ಪ್ರಣಾಳಿಕೆಯಲ್ಲಿ, ಚಿರಂಜೀವಿಯು ಈ ರೀತಿ ಹೇಳಿದರು, ಅವರು ತನ್ನ ಪಕ್ಷವು ಅಧಿಕಾರಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಅವರ ಪಕ್ಷವು ಕಿರಾಣಿ ಸಾಮಾನುಗಳನ್ನು ಪ್ರತಿ ಬಡ ಕುಟುಂಬಕ್ಕೆ ಪ್ರತಿ ತಿಂಗಳು ೧೦೦ ರೂಪಾಯಿಗಳಲ್ಲಿ ನೀಡುವುದಾಗಿ ಭರವಸೆಯನ್ನು ನೀಡುತ್ತಿತ್ತು ಮತ್ತು ಅಡಿಗೆ ಅನಿಲದ ಸಿಲಿಂಡರ್ ಅನ್ನೂ ಕೂಡ ೧೦೦ ರೂಪಾಯಿಗಳಲ್ಲಿ ನೀಡುವ ಆಶ್ವಾಸನೆಯನ್ನು ನೀಡುತ್ತಿತ್ತು.

ಪ್ರಣಾಳಿಕೆಯು ತೆಲುಗು ದೇಶಮ್ ಪಕ್ಷದ ಉಚಿತ ಬಣ್ಣದ ದೂರದರ್ಶನ ಮತ್ತು ಬಡವರಿಗಾಗಿ ಹಣ ಸಂದಾಯ ಯೋಜನೆ ಮತ್ತು ಪ್ರಸ್ತುತದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಆಚರಣೆಗೆ ತರಲ್ಪಟ್ಟ ಒಂದು ಕೆಜಿ ಅಕ್ಕಿಗೆ ೨ ರೂಪಾಯಿಯಂತಹ ಯೋಜನೆಗಳಿಗೆ ಎದುರೇಟು ನೀಡುವುದಕ್ಕೆ ಹಲವಾರು ಜನಪ್ರಿಯ ಯೋಜನೆಗಳ ಬಗ್ಗೆ ಭರವಸೆಯನ್ನು ನೀಡಿತು. ಕಿರಾಣಿ ಸಾಮಾನಿನ ಯೋಜನೆಯು ಬಡವರಿಗೆ ಆಹಾರದ ಭದ್ರತೆಯನ್ನು ಒದಗಿಸುವುವ ಉದ್ದೇಶವನ್ನು ಹೊಂದಿತ್ತು.

ಪಿಆರ್‌ಪಿಯು ಭೂ ಸುಧಾರಣೆಗಳನ್ನು ಕೈಗೊಳ್ಳುವುದರ ಬಗ್ಗೆ ಮತ್ತು ಭೂಮಿಯಿಲ್ಲದ ಬಡವರಿಗೆ ಎರಡರಿಂದ 5 acres (20,000 m2) ರಷ್ಟು ಭೂಮಿಯನ್ನು ನೀಡುವುದಾಗಿ ಭರವಸೆಯನ್ನು ನೀಡಿತು.

ಪಕ್ಷವು ಅಧಿಕಾರಗಳನ್ನು ಹಸ್ತಾಂತರಿಸುವ ಮೂಲಕ ಮತ್ತು ಗ್ರಾಮ ಮಟ್ಟದ ವಿಭಾಗಗಳಿಗೆ ಹಣಕಾಸುಗಳನ್ನು ನೀಡುವ ಮೂಲಕ ’ಗ್ರಾಮ ಸ್ವರಾಜ್’ನಲ್ಲಿ ನಿರ್ದೇಶನ ಮಾಡುವುದಕ್ಕೆ ಪ್ರತಿಜ್ಞೆಯನ್ನು ಮಾಡಿತು.

ಪ್ರಸ್ತುತದ ಬಡವರಿಗೆ ಉಚಿತ ವಿದ್ಯುತ್ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಭರವಸೆಯನ್ನು ನಿಡುವ ಮೂಲಕ ಪ್ರಣಾಳಿಕೆಯು ಉಚಿತ ವಿದ್ಯುತ್ ಅವಧಿಯು ಪ್ರಸ್ತುತದ ಏಳು ಘಂಟೆಗಳಿಂದ ೧೦ ಘಂಟೆಗಳವರೆಗೆ ಹೆಚ್ಚಿಸುವ ಭರವಸೆಯನ್ನು ನೀಡಿತು. ಇದು ಕೃಷಿಕರಿಗೆ ಪಿಂಚಣಿ ಯೋಜನೆಗಳನ್ನು ಪರಿಚಯಿಸುವ ಮೂಲಕ ಸಾಮಾಜಿಕ ಸುರಕ್ಷತೆಯನ್ನು ಒದಗಿಸುವುದಾಗಿಯೂ ಕೂಡ ಹೇಳಿತು.

ಪ್ರಣಾಳಿಕೆಯಲ್ಲಿನ ಮತ್ತೊಂದು ಸಾರ್ವಜನಿಕ ಯೋಜನೆಯ ಅಡಿಯಲ್ಲಿ, ಸರ್ಕಾರವು ಆಗ ತಾನೇ ಜನಿಸಿದ ಪ್ರತಿ ಹೆಣ್ಣು ಮಗುವಿನ ಹೆಸರಲ್ಲಿ ೧೦೦,೦೦೦ ರೂಪಾಯಿಗಳ ಠೇವಣಿಯನ್ನು ಇಡುವುದಾಗಿಯೂ ಭರವಸೆಯನ್ನು ನೀಡಿತು. ಆ ಮಗುವು ವರ್ಷಗಳ ವಯಸ್ಸನ್ನು ತಲುಪಿದ ನಂತರದಲ್ಲಿ ಅವಳಿಗೆ ಆ ಹಣವನ್ನು ನೀಡಲಾಗುವುದು.

ಎಲ್ಲಾ ಹೆಣ್ಣುಮಕ್ಕಳು ಕಿಂಡರ್ ಗಾರ್ಟನ್ (ಕೆಜಿ)ಯಿಂದ ಸ್ನಾತಕೋತ್ತರ ಪದವಿಯ ಮಟ್ಟದವರೆಗೆ ಉಚಿತ ಶಿಕ್ಷಣವನ್ನು ಪಡೆದುಕೊಳ್ಳುವ ಅವಕಾಶವನ್ನು ನೀಡಲಾಯಿತು. ಸ್ವಯಂ-ಸಹಾಯ ಡಿಡಬ್ಲುಎಸಿಆರ್‌ಎ ಗುಂಪುಗಳ ಮಹಿಳಾ ಸದಸ್ಯರುಗಳಿಗೆ ಬಡ್ಡಿ-ರಹಿತ ಸಾಲಗಳನ್ನು ನೀಡಲಾಗುತ್ತಿತ್ತು. ಮಹಿಳೆಯರು ಶಿಕ್ಷಕಿಯರಾಗಿ ನೇಮಕಗೊಳ್ಳುವುದಕ್ಕೆ ೫೦ ಪ್ರತಿಶತ ಮೀಸಲಾತಿಗಳನ್ನು ನೀಡಲ್ಪಟ್ಟಿದ್ದರು.

ಪಿಆರ್‌ಪಿಯು ೧,೦೦೦ ದಿನಗಳಲ್ಲಿ ಅರ್ಧ ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಭರವಸೆಯನ್ನು ನೀಡಿತು. ಇದು ಪ್ರತಿ ನಿರುದ್ಯೋಗ ಯುವಕರಿಗೆ ಪ್ರತಿ ತಿಂಗಳು ೧,೦೦೦ ರೂಪಾಯಿಗಳನ್ನು ನಿರುದ್ಯೋಗ ಮೊತ್ತವಾಗಿ ನೀಡುವುದಾಗಿಯೂ ಹೇಳಿತು, ಮತ್ತು ದೈಹಿಕವಾಗಿ ಊನಗೊಂಡಿರುವ ವ್ಯಕ್ತಿಗಳಿಗೆ ಪ್ರತಿ ತಿಂಗಳು ೧,೫೦೦ ರೂಪಾಯಿಗಳನ್ನು ನೀಡುವುದಾಗಿ ಹೇಳಿತು.

ಪಕ್ಷವು ಮಜಲುಗಳಲ್ಲಿ ಪೂರ್ತಿ ಪ್ರಮಾಣದ ನಿರ್ಬಂಧವನ್ನು ಪರಿಚಯಿಸುವುದಕ್ಕೆ ಮತ್ತು ಎಲ್ಲಾ ’ಬೆಲ್ಟ್ ಅಂಗಡಿ’ಗಳ (ಪರವಾನಗಿ ಹೊಂದಿದ ಸಾರಾಯಿ ಅಂಗಡಿಗಳ ಕಾನೂನು ಬದ್ಧವಲ್ಲದ ಕೌಂಟರುಗಳು) ಮುಚ್ಚುವಿಕೆಗೆ ಭರವಸೆಯನ್ನು ನೀಡಿತು.

ತೆಲುಗು ರಾಜ್ಯ ಸಮಸ್ಯೆಯ ಮೇಲೆ ಪಿಆರ್‌ಪಿ/ಚಿರಂಜೀವಿ[ಬದಲಾಯಿಸಿ]

ಪ್ರಜಾ ರಾಜ್ಯಮ್ ಪಕ್ಷವು ೨೦೦೯ ರ ಸಾಮಾನ್ಯ ಚುನಾವಣೆಗಳನ್ನು ತೆಲಂಗಾಣವನ್ನು ಬೇರ್ಪಡಿಸುವ ಭರವಸೆಯನ್ನು ನೀಡುವ ಮೂಲಕ ಪ್ರವೇಶಿಸಿತು. ಪಿಆರ್‌ಪಿಯ ಅಧ್ಯಕ್ಷ ಚಿರಂಜೀವಿ ತೆಲಂಗಾಣ ಪ್ರದೇಶದಲ್ಲಿ ಕ್ರಿಯಾಶೀಲವಾಗಿ ಆಂದೋಲನಗಳನ್ನು ನಡೆಸಿದರು. ಅವರು ಬೇರ್ಪಡುವಿಕೆಯ ರಾಜ್ಯತ್ವದ ಮೇಲೆ ತೆಲಂಗಾಣದಲ್ಲಿ ಅತ್ಯಂತ ಭಾವುಕವಾದ ಭಾಷಣಗಳನ್ನು ನೀಡಿದರು. ಆದಾಗ್ಯೂ, ಈ ತಂತ್ರಗಾರಿಕೆಯು ೨೦೦೯ ರ ಚುನಾವಣೆಗಳಲ್ಲಿ ಸಹಾಯವನ್ನು ಮಾಡಲಿಲ್ಲ ಏಕೆಂದರೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು (ಅಂದರೆ, ಕಾಂಗ್ರೆಸ್, ತೆಲುಗು ದೇಶಮ್ ಪಕ್ಷ, ತೆಲಂಗಾಣ ರಾಷ್ಟ್ರ ಮಂಡಳಿ, ಸಿಪಿಐ, ಬಿಜೆಪಿ) ಪ್ರತ್ಯೇಕ ತೆಲಂಗಾಣದ ನಿರ್ಮಾಣಕ್ಕೆ ಬೆಂಬಲವನ್ನು ನೀಡಿದವು. ಇದು ಪಿಆರ್‌ಪಿಯು ತೆಲಂಗಾಣ ಪ್ರದೇಶದಲ್ಲಿ ಕೇವಲ ಎರಡು ಅಸೆಂಬ್ಲಿ ಸೀಟ್‌ಗಳನ್ನು (೧೧೯ ಅಸೆಂಬ್ಲಿ ಚುನಾವಣಾ ಕ್ಷೇತ್ರಗಳಲ್ಲಿ) ಪಡೆಯುವುದಕ್ಕೆ ಕಾರಣವಾಯಿತು ಮತ್ತು ಯಾವುದೇ ಪಾರ್ಲಿಮೆಂಟರಿ ಸೀಟ್‌ಗಳನ್ನು ಪಡೆಯಲಿಲ್ಲ.

೭ ಡಿಸೆಂಬರ್ ೨೦೦೯ ರಂದು ಎಲ್ಲ ಪಕ್ಷಗಳ ಸಭೆಗಳ ಸಮಯದಲ್ಲಿ, ಪಿಆರ್‌ಪಿ ಅಧ್ಯಕ್ಷ ಮತ್ತು ಪಿಆರ್‌ಪಿ ಎಮ್‌ಎಲ್‌ಎ ಗಳು ಪ್ರತ್ಯೇಕ ತೆಲಂಗಾಣ ರಾಜ್ಯದ ನಿರ್ಮಾಣವನ್ನು ಬೆಂಬಲಿಸಿದರು.

೯ ಡಿಸೆಂಬರ್ ೨೦೦೯ ರಂದು ಭಾರತ ಸರ್ಕಾರವು ಪ್ರತ್ಯೇಕ ತೆಲಂಗಾಣ ರಾಜ್ಯದ ನಿರ್ಮಾಣಕ್ಕಾಗಿ ನೀಡಲ್ಪಟ್ಟ ಬೇಡಿಕೆಯನ್ನು ಅನುಮೋದಿಸಿತು, ಅದಕ್ಕಾಗಿ ಕಾರ್ಯಗಳು ಪ್ರಾರಂಭವಾಗಲ್ಪಟ್ಟವು ಮತ್ತು ಒಂದು ಸರಿಯಾದ ಠರಾವು (ನಿರ್ಣಯ) ಆಂಧ್ರ ಪ್ರದೇಶದ ಅಸೆಂಬ್ಲಿಯಲ್ಲಿ ಮಂಡನೆ ಮಾಡುವುದಾಗಿ ಹೇಳಿತು. ಗೃಹ ಮಂತ್ರಿಗಳ ಹೇಳಿಕೆಯ ನಂತರ, ಪಿಆರ್‌ಪಿಯ ಎಮ್‌ಎಲ್‌ಎಗಳು ಸಂಘಟಿತ ರಾಜ್ಯದ ಬೆಂಬಲಕ್ಕೆ ರಾಜೀನಾಮೆಯನ್ನು ನೀಡಿದರು. ಅವರುಗಳು ಕೂಡ ತೆಲಂಗಾಣಕ್ಕೆ ಬೆಂಬಲವನ್ನು ನೀಡಿದರು.[೮]

ಪಿಆರ್‌ಪಿಯ ಅಧ್ಯಕ್ಷರು ತಾವು ಆಂಧ್ರದ ಕರಾವಳಿ ಮತ್ತು ರಾಯಲಸೀಮೆಯ ಪ್ರದೇಶಗಳಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬಹುದು ಎಂಬ ಹೆದರಿಕೆಯಿಂದ ರಾಜ್ಯ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಅವರು ಬೇರ್ಪಟ್ಟ ತೆಲಂಗಾಣ ವಿಭಾಗದ ಜೊತೆಗೆ ಚುನಾವಣೆಗೆ ಪ್ರವೇಶಿಸಿದರು ಮತ್ತು ಅವರು ಪ್ರಸ್ತುತದಲ್ಲಿ ಏಕೀಕೃತ ಆಂಧ್ರಕ್ಕಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Chiranjeevi names his political party 'Praja Rajyam'". Indo-Asian News Services. Hindustan Times. 2008-08-26. Archived from the original on 2009-03-14. Retrieved 2008-08-26.
  2. ೨.೦ ೨.೧ "Chiranjeevi launches 'Praja Rajyam'". Press Trust of India. ದಿ ಹಿಂದೂ. 2008-08-26. Archived from the original on 2011-06-29. Retrieved 2008-08-26.
  3. ೩.೦ ೩.೧ "Andhra Pradesh: Chiranjeevi entering politics?". Press Trust of India. Rediff.com. 2007-12-07. Retrieved 2008-08-26.
  4. "So what's cooking Chiru?". Times News Network. Indiatimes.com. 2007-09-05. Retrieved 2008-08-26.
  5. IANS (2008-08-17). "Telugu superstar Chiranjeevi enters politics". Agencies. ThaIndian. Archived from the original on 2012-10-16. Retrieved 2010-10-26.
  6. "Chiranjeevi moves EC for registration of his party". Press Trust of India. ದಿ ಹಿಂದೂ. 2008-08-26. Archived from the original on 2009-03-15. Retrieved 2008-08-26.
  7. "Chiranjeevi leader of PRP legislature party in Andhra". Thaindian News. 18 May 2009. Archived from the original on 3 ಡಿಸೆಂಬರ್ 2009. Retrieved 26 ಅಕ್ಟೋಬರ್ 2010.
  8. "Centre agrees to form Telangana state".