ಪೆರ್ಲ ಗೋಪಾಲಕೃಷ್ಣ ಪೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ರವರು, ಕನ್ನಡ ಭಾಷೆಯಲ್ಲಿ ಕತೆ, ನಾಟಕ , ಪ್ರಬಂಧ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ರವರ ಮತ್ತಿತರ ಕೃತಿಗಳು.

ಕಾದಂಬರಿಗಳು[ಬದಲಾಯಿಸಿ]

  • ಸ್ವಪ್ನ ಸಾರಸ್ವತ
  • ಬ್ರಹ್ಮ (೨೦೨೦)

ಕಥಾ ಸಂಕಲನಗಳು[ಬದಲಾಯಿಸಿ]

  • ಬೇಲಾಡಿ ಹರಿಶ್ಚಂದ್ರ (೨೦೨೦)
  • ಮೂರು ಮತ್ತಿಷ್ಟು (೨೦೧೦)

ಅನುವಾದಗಳು[ಬದಲಾಯಿಸಿ]

  • ಮಹಾತ್ಮನಿಗಾಗಿ ಕಾಯುತ್ತಾ.

ಪ್ರಶಸ್ತಿಗಳು[ಬದಲಾಯಿಸಿ]

ಚಲನಚಿತ್ರ ಸಾಹಿತ್ಯ[ಬದಲಾಯಿಸಿ]

ಉಜ್ವಾಡು’ ಎಂಬ ಕೊಂಕಣಿ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕಾಸರಗೋಡು ಚಿನ್ನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರಮಟ್ಟದ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ವಿಜೇತ,ಖ್ಯಾತ ನಿರ್ದೇಶಕ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಕನಸೆಂಬ ಕುದುರೆಯನ್ನೇರಿ ಚಿತ್ರಕ್ಕೆ ಚಿತ್ರಕಥೆಯನ್ನು ರಚಿಸಿಕೊಟ್ಟಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇವರ ಚಿತ್ರಕಥೆಗಾಗಿ 'ಉತ್ತಮ ಚಿತ್ರಕಥೆ ಪ್ರಶಸ್ತಿ' ದೊರೆತಿದೆ.

ಉಲ್ಲೇಖಗಳು[ಬದಲಾಯಿಸಿ]