ನರಗುಂದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು



ನರಗುಂದ ಗದಗ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಭಾರತದ ಸ್ವಾತಂತ್ರ್ಯ ಹೋರಾಟಗಾರ ನರಗುಂದ ಬಾಬಾಸಾಹೇಬರು ಈ ಊರಿನವರು.

ನರಗುಂದವನ್ನು 18 ನೇ ಶತಮಾನದಲ್ಲಿ ಪುಣೆಯ ಮರಾಠಾ ಪೇಶ್ವೆಗಳ ಪರವಾಗಿ 18 ನೇ ಶತಮಾನದಲ್ಲಿ ಭಾವೆ ರಾಜವಂಶದ ವೆಂಕಟರಾವ್ ಆಳುತ್ತಿದ್ದನು. ಮೈಸೂರಿನ ಹೈದರ್ ಅಲಿಯು, ೧೭೭೮ ರಲ್ಲಿ ಅದನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿದನು. ೧೭೮೪ ರಲ್ಲಿ ಟಿಪ್ಪು ಸುಲ್ತಾನ್ ನರಗುಂದದ ಮೇಲೆ ದಾಳಿ ಮಾಡಿದನು. ಮರಾಠರು ಮತ್ತು ಭಾವೆ ಪರಿವಾರ ಮತ್ತು ಅವರ ಲೆಕ್ಕಿಗರಾಗಿದ್ದ ಪೇಠೆ ಪರಿವಾರಗಳು ಟಿಪ್ಪು ಮತ್ತು ಅವರ ಸಹಚರರ ಕೈಯಲ್ಲಿ ಕ್ರೂರ ಚಿತ್ರಹಿಂಸೆ ಮತ್ತು ಅತ್ಯಾಚಾರ ಮೂಲಕ ತೇಜೋವಧೆ ಹೊಂದಿದರು. ಅವರನ್ನು ೧೭೯೯ ರಲ್ಲಿ ಬಿಡುಗಡೆ ಮಾಡುವವರೆಗೆ ಅವರು ಮೈಸೂರಿನಲ್ಲಿ ಜೈಲಿನಲ್ಲಿರಬೇಕಾಯಿತು. ನಂತರ ಅವರು ನರಗುಂದಕ್ಕೆ ಮರಳಿದರು.

ಬ್ರಿಟಿಷ್ ಆಧಿಪತ್ಯದ ವಿರುದ್ಧ ದೇಶದಲ್ಲಿ 1857 ಮೇ 10ರಂದು ನಡೆದ ಮೊದಲ ಹೋರಾಟದ ಸಮಯದಲ್ಲೇ ಬಾಬಾಸಾಹೇಬನ ಮುಂದಾಳುತನದಲ್ಲಿ ಬ್ರಿಟಿಷ್ ಆಳಿಕೆಯ ವಿರುದ್ಧ ಹೋರಾಟದ ಧ್ವನಿ ಮೊಳಗಿತು. ೧೮೫೭ರ ನರಗುಂದ ಬಂಡಾಯದಷ್ಟೇ ೧೯೮೦ ರ ರೈತ ಬಂಡಾಯವೂ ಇಲ್ಲಿನ ಪ್ರಮುಖ ಘಟನೆಯಾಗಿದೆ.

ನರಗುಂದ ನಗರವು ಹುಬ್ಬಳ್ಳಿ-ಸೊಲ್ಲಾಪೂರ ರಸ್ತೆಯಲ್ಲಿ ಬರುತ್ತದೆ. 2011 ರ ಜನಗಣತಿಯ ಪ್ರಕಾರ 36318 ಜನಸಂಖ್ಯೆಯನ್ನು ಹೊಂದಿದೆ. ಪ್ರಾಚೀನ ಶಾಸನಗಳಲ್ಲಿ ಪಿರಿಯಾ ನರಗುಂದ ಎಂದು ಉಲ್ಲೇಖಿತಗೊಂಡಿರುತ್ತದೆ. ಈಗಿನ ಪುರಸಭೆಯ ಕಟ್ಟಡವು ಹಿಂದೆ ರಾಜನ ಅರಮನೆಯಾಗಿತ್ತು. ಇದರ ಒಂದು ಕೊಠಡಿಯಲ್ಲಿ ರಾಜನ ಖಡ್ಗವು ಇದೆ.

ನರಗುಂದ ಗುಡ್ಡವು ನೋಡಲು ಮಲಗಿದ ಸಿಂಹದಂತೆ ಇದೆ. ಗುಡ್ಡದ ಮೇಲೆ ಸಿದ್ದೇಶ್ವರ ದೇವಸ್ಥಾನ ಹಾಗೂ ಇಳಿಜಾರಿನಲ್ಲಿ ಬೃಹತ್ತಾದ ವೆಂಕಟೇಶ್ವರ ದೇವಾಲಯವಿದ್ದು ದ್ರಾವಿಡ ಶೈಲಿಯಲ್ಲಿವೆ.

ಪುರಸಭೆಯ ಎದುರಿಗೆ 1857 ರ ದಂಗೆಯ ಬಾಬಾಸಾಹೇಬನ ಎದೆಮಟ್ಟದ ಆಧುನಿಕ ಪ್ರತಿಮೆ ಇದೆ.

ಮಲಪ್ರಭಾ ನದಿಯ ನೀರಾವರಿಯಿಂದಾಗಿ ಇಲ್ಲಿನ ರೈತರು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ನರಗುಂದ ತನ್ನ ಹತ್ತಿ ಬೆಳೆಗೆ ಪ್ರಸಿದ್ಧವಾಗಿದೆ.

೧೯೮೦ ರ ರೈತ ಬಂಡಾಯ [ಬದಲಾಯಿಸಿ]

೧೯೮೦ ರ ಜುಲೈ ೨೧ ರಂದು ನರಗುಂದದ ತಹಸಿಲ್ದಾರರ ಕಚೇರಿಯನ್ನು ಪ್ರವೇಶಿಸಲು ಎಂಟರಿಂದ ಹತ್ತು ಸಾವಿರ ಸಂಖ್ಯೆಯಲ್ಲಿದ್ದ ರೈತರು ಪ್ರಯತ್ನಿಸಿದರು. ಆಗ ಆದ ಲಾಠೀಚಾರ್ಜ್ ಮತ್ತು ಗೋಲಿಬಾರ್ ನಲ್ಲಿ ಮೂವರು ರೈತರು ಬಲಿಯಾದರು. ರೊಚ್ಚಿಗೆದ್ದ ರೈತಸಮೂಹವು ಮೂರು ಜನ ಪೋಲೀಸರನ್ನು ಸಾಯಿಸಿದರು . ನಂತರದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಜನ ರೈತರು ಪ್ರಾಣಕಳೆದುಕೊಂಡರು . ಸಾವಿರಾರು ಜನ ಗಾಯಗೊಂಡರು.. ಪರಿಣಾಮವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಆಡಳಿತಕ್ಕೆ ಬಂದಿತು.

"http://kn.wikipedia.org/w/index.php?title=ನರಗುಂದ&oldid=328734" ಇಂದ ಪಡೆಯಲ್ಪಟ್ಟಿದೆ