ನಕ್ಸಲೀಯ-ಮಾವೋವಾದಿ ಬಂಡಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಕ್ಸಲರ ಬಂಡಾಯ ಚಟುವಟಿಕೆ ಪ್ರದೇಶಗಳು: 2007 ರಲ್ಲಿ
ನಕ್ಸಲರ ಬಂಡಾಯ ಚಟುವಟಿಕೆ ಪ್ರದೇಶಗಳು: 2013ರಲ್ಲಿ

ಪೀಠಿಕೆ[ಬದಲಾಯಿಸಿ]

ಪ್ರಧಾನಿ ಮನಮೋಹನಸಿಂಗ್ ಅವರು ನಕ್ಸಲೀಯರ ಸಮಸ್ಯೆಯು, ನಮ್ಮ ದೇಶವು ಹಿಂದೆಂದೂ ಎದುರಿಸದ. ಒಂದು ದೊಡ್ಡ ಭದ್ರತಾ ಸವಾಲು ಎಂದು ಕರೆದರು. ಹದಿನಾಲ್ಕು ಭಾರತೀಯ ರಾಜ್ಯಗಳು, ನಕ್ಸಲರ 20,000 ಬಂಡಾಯ ಕಾದಾಳಿಗಳಿಂದ ನಡೆಸಲ್ಪಡುತ್ತರುವ ಬಂಡಾಯದ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಅವರಿಂದ ಸುಮಾರು 2,600 ಜನರು ಸಾವನ್ನಪ್ಪಿದ್ದಾರೆ. ಈ ನಕ್ಸಲೀಯರು ಭಾರತದ ಭದ್ರತೆಯ ಸವಾಲಿನ ಮೂಲವಾಗಿವೆ.(ಭಯೊತ್ಪಾದಕತೆಯ ಮೂಲ)

ಪರಿಚಯ[ಬದಲಾಯಿಸಿ]

  • ಪದ "ನಕ್ಸಲೈಟ್" ಪದ ಭಾರತದ ಮಾವೊವಾದಿ ಚಳವಳಿಯು ಶುರುವಾದ ಪಶ್ಚಿಮ-ಬಂಗಾಳ ಪಟ್ಟಣದ ಹೆಸರು ಹುಟ್ಟಿಕೊಂಡಿದೆ. 1960 ರ ಉತ್ತರಾರ್ಧದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ಭಾರತದಲ್ಲಿ ಕಮ್ಯೂನಿಸ್ಟ್ ಕ್ರಾಂತಿಯನ್ನು ತೀವ್ರವಾಗಿ ತರುವ ಬಗೆ ಹೇಗೆ ಎಂದು ವಿಭಿನ್ನ ಯೋಜನೆ ಹೊಂದಿತ್ತು. . ಆ: ಪಕ್ಷದವು ಎರಡು ಬಣಗಳಾಗಿ ಒಡೆಯಿತು; ಒಂದು ಕಮ್ಯುನಿಸ್ಟ್ ಸರ್ಕಾರ ತರಲು ಚುನಾವಣೆಯ ಮೂಲಕ ಗಳಿಸಿದ ಶಕ್ತಿಯ ಪರವಾಗಿ; ಮತ್ತೊಂದು ಆ ಪಕ್ಷದ ಒಂದು ದೊಡ್ಡ ನಗರ ದಂಗೆಯೇಳುವಂತೆ ಆವೇಗ ಒದಗಿಸಲು ಪ್ರಭಾವವನ್ನು ಬೀರುವುದು. ಅದಕ್ಕೆ ದೇಶದ ದೊಡ್ಡ ರೈತ ವರ್ಗವನ್ನು ಬಳಸಿಕೊಂಡು ಸಶಸ್ತ್ರ ಬಂಡಾಯದ ಮೂಲಕ ಸರ್ಕಾರವನ್ನು ಉರುಳಿಸುವುದರ ಪರವಾಗಿ ಇತ್ತು ಈ ಎರಡನೇ ಗುಂಪಿನಲ್ಲಿದ್ದ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ ಚಾರು ಮಜುಮ್ದಾರ್, ಅವರು . ಸ್ಥಳೀಯ ಗುಂಪಿನ ತೀವ್ರತರ ಚಿಂತನೆ ಮತ್ತು ಚರ್ಚೆಗಳಿಂದ ಹೈರಾಣಾಗಿದ್ದರು. 1967 ರಲ್ಲಿ ಅವರು ಸ್ವತಃ ಕ್ರಾಂತಿ ಆರಂಭಿಸಲು ಹೊರಟರು. . ನಕ್ಸಲ್ ಬರಿ ದಂಗೆ ಅಥವಾ ಕ್ರಾಂತಿಗಳು ಆ ಪ್ರಯತ್ನಗಳ ಫಲವಾಗಿತ್ತು.
  • ಮಜುಮ್ದಾರ್ ತನ್ನ ಹೊಸ ಚಳುವಳಿಗೆ " ಕಮ್ಯುನಿಸ್ಟ್ ಕ್ರಾಂತಿಕಾರರ ಆಲ್ ಇಂಡಿಯಾ ಸಹಯೋಗ ಸಮಿತಿ " ಎಂದು ಕರೆದರು. ಆದರೆ ಅನೇಕ ಭಾರತೀಯರು ಆ ಸಂಘವನ್ನು ಅದರ ಮೂಲ ಸ್ಥಳದ ಮೂಲಕ ಗರುತಿಸಿ. ನಕ್ಸಲ್ ರು , ಮತ್ತು ಮಾವೋವಾದಿ ಶೈಲಿಯ ಗೆರಿಲ್ಲಾಗಳು ಎಂದು ಕರೆಯಲು ಪ್ರಾರಂಭಿಸಿದರು. "ನಕ್ಸಲೀಯರ." ಎಡಪಂಥೀಯ ಕಾಲೇಜು ವಿದ್ಯಾರ್ಥಿಗಳು (ಹೆಚ್ಚಾಗಿ ಕಲ್ಕತ್ತದಿಂದ) ಮತ್ತು ಕೆಳಮಟ್ಟದ ಬಡ ದಲಿತರು ಮತ್ತು ಆದಿವಾಸಿಗಳು ಬೆಂಬಲಿಸಿದರು. ಅವರು 20ನೇ ಶತಮಾನದಲ್ಲಿ ಅನುಭವಿಸಿದ ಕೆಟ್ಟ ಬರಗಾಲದಲ್ಲಿ ಎಲುಬು – ಚರ್ಮವಷ್ಟೆ ಉಳಿಯುವುದರ ಮೂಲಕ ಬದುಕುಳಿದರು. ಈ ಚಳುವಳಿಯನ್ನು ಮೇಲಿನ ಎರಡು ವಿಭಿನ್ನ ಗುಂಪುಗಳು ಬೆಂಬಲಿಸಿದವು. ಚೀನಾ ದಿಂದ ಏಕಪ್ರಕಾರವಾಗಿ ಬಂದ ನೆರವು ಯೋಜನೆಯ ಹರಿವು ಈ ಚಳುವಳಿಗೆ ಶಕ್ತಿ ನೀಡಿತು. , ಈ ನೆರವಿನ ಕಾರಣ ಇದು ನಕ್ಸಲ್ ಬರಿ ಪ್ರದೇಶ ಮೀರಿ ಹರಡಲು ಅವಕಾಶ ಆಂಧ್ರ ಪ್ರದೇಶ, ಚತ್ತೀಸ್ಗಡ ಮತ್ತು ಜಾರ್ಖಂಡ್ ಗಳಲ್ಲಿ ಗಟ್ಟಿಯಾಗಿ ಬೇರೂರಿ ಇನ್ನಷ್ಟು ಬಲಪಡೆಯಿತು[೧]

ಸಂಕ್ಷಿಪ್ತ ಇತಿಹಾಸ ಮತ್ತು ಸಿದ್ದಾಂತ[ಬದಲಾಯಿಸಿ]

ಮಾರ್ಕ್ಸ್; ಏಂಜೆಲ್ಸ್; ಲೆನಿನ್


  • ನಕ್ಷಲ್ ವಾದಿಗಳು ಚೀನಾದ ಮಾವೊತ್ಸೆ ತುಂಗ ಅವರ ಉಗ್ರ-ಸಮಾಜವಾದ ಅಥವಾ ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ನಂಬುಗೆಯುಳ್ಳವರು. ಮೊದಲು ಕಮ್ಯೂನಿಸ್ಟ್ ಪಾರ್ಟಿ ಅಥವಾ ವೈಜ್ಞಾನಿಕ ಸಮಾಜವಾದದ ಸಿದ್ಧಾಂತಗಳನ್ನು ಪ್ರಚುರಪಡಿಸಿದವನು ಜರ್ಮನಿಯ ಕಾರ್ಲ್ ಮಾಕ್ರ್ಸ್.
  • ಲೆನಿನ್ ರಷ್ಯಾದಲ್ಲಿ ದೊಡ್ಡ ಕ್ರಾಂತಿಯ ಮೂಲಕ ಮೊದಲು ಈ ಸಿದ್ಧಾಂತದ ಕಮ್ಯೂನಿಸ್ಟ್ ಸರ್ಕಾರವನ್ನು 1917ರಲ್ಲಿ ಸ್ಥಾಪಿಸಿದನು. ಅದು ಚೀನಾದ ಮೇಲೆ ಪ್ರಭಾವ ಬೀರಿತು. ಮಾವೊ ತ್ಸೆ ತುಂಗ್ 1949ರಲ್ಲಿ ದೊಡ್ಡ ರಕ್ತಕ್ರಾಂತಿಯ ಮೂಲಕ ಚೀನಾದಲ್ಲಿ ಕಮ್ಯೂನಿಸ್ಟ್ ಆಡಳಿತವನ್ನು ತಂದನು.. ದೊಡ್ಡಜಮೀನುದಾರರು, ಬಂಡವಾಳಸಾಹಿಗಳು ವಿರೋಧಿಸಿದ ಎಲ್ಲಾ ಶ್ರೀಮಂತರನ್ನು ಕೊಂದು, ರಷ್ಯಾದ ಮಾದರಿಯಲ್ಲಿ ಚೀನಾ ಗಣರಾಜ್ಯವನ್ನು ಸ್ಥಾಪಿಸಿದನು.
  • ಮಾವೊ ಸಮುದಾಯ ವ್ಯವಸಾಯ ಪದ್ಧತಿಯನ್ನು ಜಾರಿಗೆ ತಂದನು. ಸರ್ಕಾರದ ಅಧೀನದಲ್ಲಿ ಕೈಗಾರಿಕಾ ಉದ್ಯಮಗಳು ಆರಂಭಗೊಂಡು ನಡೆದವು. ದೇಶದ ಎಲ್ಲಾ ಸ್ವತ್ತುಗಳೂ ರಾಜ್ಯದ ಸ್ವತ್ತೆಂದು ಘೋಷಿಸಲ್ಪಟ್ಟಿತು.
  • ಭಾರತದ ಬಂಗಾಳಾರಾಜ್ಯದ ನಕ್ಷಲ್ ಬರಿಯಲ್ಲಿ ಆರಂಭವಾದ ಈ ಉಗ್ರ ಕಮ್ಯೂನಿಸ್ಟ ಪಾರ್ಟಿಯು ಈ ಮಾವೋ ರವರ ಉಗ್ರ ಸಮಾಜವಾದ ಸಿದ್ಧಾಂತವನ್ನು ನಂಬುತ್ತದೆ ಮತ್ತು ಅನುಸರಿಸುತ್ತದೆ. ಆದ್ದರಿಂದ ಅದಕ್ಕೆ ಕಮ್ಯೂನಿಸ್ಟ್ ಪಾರ್ಟಿ (ಮಾವೊ) ಎಂದು ಹೆಸರಿಸಲಾಗಿದೆ.

ಕಮ್ಯೂನಿಸ್ಟ್ ಮೂಲ ಸಿದ್ದಾಂತಗಳು[ಬದಲಾಯಿಸಿ]

  • ಎಲ್ಲಾ ಆಸ್ತಿಗಳೂ ದೇಶದ ಅಥವಾ ರಾಜ್ಯದ ಆಸ್ತಿ - ಸ್ವಂತ ಆಸ್ತಿ ಎಂಬುದಿಲ್ಲ. ಅಥವಾ ಎಲ್ಲಾ ಆಸ್ತಿಯೂ ಸಮಾಜಕ್ಕೆ ಸೇರಿದ್ದು.
  • ಜಮೀಬುದಾರರು ಮತ್ತು ಶ್ರೀಮಂತರು ರೈತರ ಮತ್ತು ಕೆಲಸಗಾರರ ಶೋಷಕರು. ಆದ್ದರಿಂದ ಅವರಿಗೆ ಜೀವಿಸುವ ಹಕ್ಕೇ ಇಲ್ಲ.
  • ದೇಶದ ಪ್ರಜೆಗಳೆಲ್ಲಾ ಸಮಾನರು.
  • ಪ್ರತಿಯೊಬ್ಬರೂ ಸಮಾಜಕ್ಕಾಗಿ ದುಡಿಯಬೇಕು’
  • ಸ್ವಂತ ಆಸ್ತಿಯ ಹಕ್ಕೆಂಬುದಿಲ್ಲ.
  • ತನ್ನ ಶಕ್ತಿಗೆ ಅನುಸಾರ ಕೆಲಸ ಮತ್ತು ಅಗತ್ಯಕ್ಕೆ ತಕ್ಕಂತೆ ಆಹಾರ” (‘Work according to ability and Food according to need’) ಇದು ವೈಜ್ಞಾನಿಕ ಸಮಾಜವಾದದ ಧ್ಯೇಯದ ಘೋಷವಾಕ್ಯ. ಆಹಾರ ಎಂಬ ಪದದಲ್ಲಿ ಎಲ್ಲಾ ಅಗತ್ಯಗಳೂ ಸೇರಿದವು.
  • "ಈ ಸಿದ್ಧಾಂತದ ಸಮಾನತೆಯ ಸಮಾಜವಾದಿ ರಾಜ್ಯ ಸ್ಥಾಪನೆ ಕೋವಿ ಕತ್ತಿ ಮತ್ತು ರಕ್ತಪಾತದಿಂದ ಮಾತ್ರಾ ಸಾಧ್ಯ. ಹಿಂಸೆಯಿಂದಲಾದರೂ ಸಮಾಜವಾದದ ರಾಜ್ಯಸ್ಥಾಪನೆ ಮಾಡತಕ್ಕದ್ದು. ಯಾರೂ ಶಾಂತಿಯ ಮಾತಿಗೆ ತಮ್ಮ ಆಸ್ತಿ ಹಕ್ಕುಗಳನ್ನು ಬಿಟ್ಟುಕೊಡುವುದಿಲ್ಲ".
  • ಪಶ್ಚಿಮ ಬಂಗಾಳದ ನಕ್ಸಲ್ ಬರಿ ಪ್ರಾಂತ್ಯದ ಮುಜುಂಮ್ದಾರ್ ಎಂಬ ಕ್ರಾಂತಿಕಾರಿ ಈ ಬಂಡಾಯದ ಚಳುವಳಿಯನ್ನು ಕಮ್ಯೂನಿಸ್ಟ್ ಪರ್ಟಿ (ಮವೋ) ಎಂಬ ಹೆಸರಿನಲ್ಲಿ ಹುಟ್ಟುಹಾಕಿದನು. ನಂತರದಲ್ಲಿ ಅದು ನಕ್ಸಲರ ಬಂಡಾಯ ಅಥವಾ ಚಳುವಳಿ ಎಂದು ಭಾರತದಲ್ಲಿ ಗುರುತಿಸಲ್ಪಟ್ಟಿದೆ.ಈ ಚಳವಳಿಗೆ ಕೆಲವು ಯುವಕರು ಆಕರ್ಶಿತರಾಗಿ ಹಿಂಸಾಮಾರ್ಗವನ್ನು ಅನುಸರಿಸುತ್ತಿದ್ದಾರೆ. [೨]

ನಕ್ಸಲ್‍ವಾದ ಮತ್ತು ಭಾರತ ನೀತಿ[ಬದಲಾಯಿಸಿ]

  • ಭಾರತವು 1947 ರ ನಂತರ ಜವಾಹರಲಾಲ್ ನೆಹರೂ ಮುಂದಾಳತ್ವದಲ್ಲಿ ಗಣತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಪ್ರಜಾಸತ್ತಾತ್ಮಕ ಸಮಾಜವಾದವನ್ನು ಅನುಸರಿಸಿತು. ಅದರ ಪ್ರಯತ್ನ ಪ್ರಜಾಸತ್ತಾತ್ಮಕವಾಗಿ ಸಮಾಜದ ಎಲ್ಲರ ಏಳಿಗೆಗೆ ಶಾಂತಿಯುತವಾಗಿ ಸಮಾಜವಾದವನ್ನು ಜಾರಿಗೊಳಿಸುವ ಯೋಜನೆಗಳನ್ನು ಹಾಕಿಕೊಂಡಿತು. ಭಾರತವು ಪ್ರಜಾತಂತ್ರ ಗಣರಾಜ್ಯವಾಗಿದ್ದು ವ್ಯಕ್ತಿಯ ಮೂಲಭೂತ ಹಕ್ಕಿಗೆ ಮತ್ತು ಸ್ವಾತಂತ್ರ್ಯಕ್ಕೆ ಪೂರ್ಣ ಮಾನ್ಯತೆ ಕೊಡುವುದು. ಭಾರತ ಸರ್ಕಾರ ಭಾರತದ ರಾಜ್ಯಾಂಗಕ್ಕೆ ಬದ್ಧವಾಗಿದ್ದು ಪ್ರಜಾತಂತ್ರಕ್ಕೆ ಮನ್ನಣೆ ಕೊಡುವುದು. ಹಾಗಾಗಿ ಪ್ರಜಾತಂತ್ರಕ್ಕೆ ವಿರುದ್ಧವಾದ ನಕ್ಸಲ್ ಬಂಡಾಯಕ್ಕೆ ವಿರೋಧವಾಗಿದೆ. ಅಮಾಯಕರನ್ನು ಕ್ರಾಂತಿಯ ಹೆಸರಲ್ಲಿ ಕೊಲ್ಲುವುದನ್ನು ವಿರೋಧಿಸುವುದು. ಪ್ರಜೆಗಳ ರಕ್ಷಣೆ ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ನಕ್ಷಲರ ವಿರುದ್ಧ ಸತತ ಕಾರ್ಯಾಚರಣೆ ನಡೆದಿದೆ.[೩]

ಬಂಡಾಯದ ಪರಿಣಾಮದ ಪ್ರದೇಶಗಳು[ಬದಲಾಯಿಸಿ]

  • ನಕ್ಸಲೀಯರು ಮುಖ್ಯವಾಗಿ ಭಾರತದಲ್ಲಿ 60 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ; ಈ ಜಿಲ್ಲೆಗಳು: ಒಡಿಶಾ (5 ಜಿಲ್ಲೆಗಳಲ್ಲಿ), ಜಾರ್ಖಂಡ್ (14 ಜಿಲ್ಲೆಗಳಲ್ಲಿ), ಬಿಹಾರ (5 ಜಿಲ್ಲೆಗಳಲ್ಲಿ), ಆಂಧ್ರ ಪ್ರದೇಶ, ಛತ್ತೀಸ್ಗಢ (ಪ್ರತಿ ಹತ್ತು ಜಿಲ್ಲೆಗಳಲ್ಲಿ), ಮಧ್ಯಪ್ರದೇಶ (8 ಜಿಲ್ಲೆಗಳಲ್ಲಿ ಮಹಾರಾಷ್ಟ್ರ (2 ಜಿಲ್ಲೆಗಳಲ್ಲಿ) ಮತ್ತು ಪಶ್ಚಿಮ ಬಂಗಾಳ (8 ಪರಿಣಾಮ ಜಿಲ್ಲೆ). [24] ಪಶ್ಚಿಮ ಬಂಗಾಳದಲ್ಲಿ ಹೌರಾದ ಪಶ್ಚಿಮ ಪ್ರದೇಶದಲ್ಲಿ ಆತಂಕವಾದದ ಸಮಸ್ಯೆಯ ಪ್ರಭಾವ ಇದೆ. [28] ಛತ್ತೀಸ್ಗಢ ಸಂಘರ್ಷದ (2007) ಮುಖ್ಯಕೇಂದ್ರ ಹೊಂದಿದೆ. [೪]
  • ಭಾರತದ ಪಶ್ಚಿಮ ಬಂಗಾಳದಲ್ಲಿ ಚುನಾಯಿತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಆಡಳಿತ ಪ್ರದೇಶಗಳು ನಿರ್ದಿಷ್ಟವಾಗಿ ಜಂಗಲ್ಮಹಲ್ , ಲಾಲ್ಗಢ್; ಇಲ್ಲಿ ಕೆಲವು ಲೆಕ್ಕಕ್ಕೆ ಸಿಗದ ಹಣವನ್ನು (ಕಪ್ಪುಹಣವನ್ನು) ಕ್ರೋಢೀಕರಣಹೊಂದಿದ ಕೆಟ್ಟ ಶ್ರೀಮಂತಿಕೆಯ ಸಿಪಿಎಂ ನಾಯಕರು ಮತ್ತು ಅದನ್ನು ನಿವಾರಿಸದ ನಿರ್ದಿಷ್ಟ ವೈಫಲ್ಯಗಳನ್ನು ಮಾವೋವಾದಿ ಆಡಳಿತ ವಿರೋಧಿ ಗುಂಪುಗಳು ಹೇಳುತ್ತವೆ. ಸಿಪಿಎಂ ನಾಯಕರು ರಾಜ್ಯದ ಜಾತಿ ತಾರತಮ್ಯ ಮತ್ತು ಬಡತನವನ್ನು ಪರಿಹರಿಸಲು ಆಯ್ಕೆಯಾಗಿದ್ದರು, ಆದರೆ ಈ ಸಮಸ್ಯೆಗಳನ್ನು ಎದುರಿಸಲು ವಿಫಲವಾಗಿವೆ ಎನ್ನುತ್ತಾರೆ. ಹಿಂಸೆಯು ವ್ಯಾಪಕವಾಗಿ, ಕಲ್ಲಿದ್ದಲಿನ ಸಂಪನ್ಮೂಲಗಳ ಮತ್ತು ದಂಗೆಯ ಪ್ರಭಾವಿತ ಪ್ರದೇಶಗಳ ನಡುವೆ ಪರಸ್ಪರ ಸಂಬಂಧ ಹೊಂದಿದೆ. ನಕ್ಸಲರು ಕಾರ್ಯಾಚರಣೆಗಳ ಪ್ರಾರಂಭಿಸುವ ಮೊದಲು, ಗುರಿಯ ಪ್ರದೇಶದಲ್ಲಿ ವಿವರವಾದ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳನ್ನು ನಿರ್ವಹಿಸುವರು. ನಕ್ಸಲ ದಂಗೆಕೋರರು 14 ಶತಕೋಟಿ ಭಾರತೀಯ ರೂಪಾಯಿಗಳನ್ನು ( $ ಯು.ಎಸ್.300 ದಶಲಕ್ಷಕ್ಕೂ ಹೆಚ್ಚು) ಬಲಾತ್ಕರವಾಗಿ ಸಂಗ್ರಹಿಸಿರುವರೆಂದು ಹೇಳಲಾಗುತ್ತದೆ.[೫]

ರೆಡ್ ಕಾರಿಡಾರ್[ಬದಲಾಯಿಸಿ]

  • ರೆಡ್ ಕಾರಿಡಾರ್ (ಕೆಂಪುಪಟ್ಟಿಯ ಪ್ರದೇಶ) ಭಾರತದ ಪೂರ್ವದ ಒಂದು ಪ್ರದೇಶವಾಗಿದೆ ಈ ಭಾಗದಲ್ಲಿ ಭಾರತ ಗಣನೀಯ ನಕ್ಸಲೀಯ-ಮಾವೋವಾದಿ ಬಂಡುಕೋರರ ಧಾಳಿಗಳನ್ನು ಅನುಭವಿಸುತ್ತದೆ.
  • ನಕ್ಸಲೈಟ್ ತಂಡ, ಭಾರತದ ಕಮ್ಯುನಿಸ್ಟ್ ಪಕ್ಷ (ಮಾವೊವಾದಿ) ಸಶಸ್ತ್ರ ಪಡೆಗಳನ್ನು ಒಳಗೊಂಡಿದೆ. ಈ ತಂಡಗಳು ಮುಖ್ಯವಾಗಿ ಆಂಧ್ರಪ್ರದೇಶ, ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಭಾಗಗಳಲ್ಲಿ ಹರಡಿವೆ. ಇವು ಆಧುನಿಕ ಭಾರತದ ಮಹಾನ್ ಅನಕ್ಷರತೆ, ಬಡತನ ಮತ್ತು ಜನಸಂಖ್ಯಾ ಬಾಹುಳ್ಯದಿಂದ ನರಳುವ ಪ್ರದೇಶಗಳಾಗಿ ಗೋಚರವಾಗುತ್ತವೆ. [೬][೭]

ಕಾನೂನು ಬಾಹಿರ ಸಂಸ್ಥೆ[ಬದಲಾಯಿಸಿ]

  • ನಕ್ಸಲೈಟ್ ಸಂಸ್ಥೆಗಳ ಎಲ್ಲಾ ರೂಪಗಳನ್ನು “ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಭಾರತದ ಆಕ್ಟ್ (1967)”ರ ಅಡಿಯಲ್ಲಿ “ಭಯೋತ್ಪಾದಕ ಸಂಘಟನೆಗಳು” ಕಾನೂನು ಬಾಹಿರ ಸಂಸ್ಥೆ ಎಂದು ಘೋಷಿಸಲಾಗಿದೆ. ಭಾರತ ಸರ್ಕಾರವು ಜುಲೈ 2011 ರ ಪ್ರಕಾರ, 10 ರಾಜ್ಯದುದ್ದಕ್ಕೂ 83 ಜಿಲ್ಲೆಗಳಲ್ಲಿ ಎಡಪಂಥೀಯ ಉಗ್ರಗಾಮಿತ್ವದ ಪರಿಣಾಮದ ಕಾರಣ ಈ ಘೋಷಣೆ ಮಾಡಲಾಗಿದೆ. (ಈ ಅಂಕಿಯು ಅದರಲ್ಲಿ ಉದ್ದೇಶಿತ 20 ಜಿಲ್ಲೆಗಳನ್ನು ಒಳಗೊಂಡಿದೆ) [9] [10] 2009 ರಲ್ಲಿ 180 ಜಿಲ್ಲೆಗಳಷ್ಟಿತ್ತು.[೮]

ನಕ್ಸಲ್ ಬಂಡಾಯದ ಹಿಂಸೆಯಲ್ಲಿ ಸತ್ತವರ ವಿವರ[ಬದಲಾಯಿಸಿ]

  • N/A : ಲಭ್ಯವಿಲ್ಲ;
ಕಾಲ/ಇಸವಿ ನಾಗರೀಕರು ಭದ್ರತಾ ಸಿಬ್ಬಂದಿ ಬಂಡಾಯಕೋರರು. ಒಟ್ಟು (ಕಾಲದಲ್ಲಿ)
1996 N/A N/A N/A 156
1997 202 44 102 348
1998 118 42 110 270
1999 502 96 261 859
2000 452 98 254 804
2001 439 125 182 746
2002 382 100 141 623
2003 410 105 216 731
2004 466 100 87 653
2005 524 153 225 902
2006 521 157 274 952
2007 460 236 141 837
2008 490 231 199 920
2009 591 317 220 1,128
2010 720 285 172 1,177
2011 469 142 99 710
2012 301 114 74 489
2013 282 115 100 497
2014 222 88 63 373
2015 168 58 89 315
2016 120 66 244 430
TOTAL 7,839 2,672 3,253 13,920[೯][೧೦][೧೧]

Insert non-formatted text here

ಛತ್ತೀಸ್‌ಗಡದಲ್ಲಿ ನಕ್ಸಲ್‌ ದಾಳಿ[ಬದಲಾಯಿಸಿ]

  • 24 Apr, 2017;26 ಸಿಆರ್‌ಪಿಎಫ್‌ ಯೋಧರು ಹುತಾತ್ಮ;
  • ಛತ್ತೀಸಗಡದ ದಕ್ಷಿಣ ಬಸ್ತರ್‌ ಪ್ರಾಂತ್ಯದ ಸುಕ್ಮಾ ಜಿಲ್ಲೆಯ ಕಾಲಾಪತ್ಥರ್ ಎಂಬಲ್ಲಿ ದಿ.24-4-2017ಸೋಮವಾರ ಮಧ್ಯಾಹ್ನ 12.25ಕ್ಕೆ ನಕ್ಸಲರು ಮತ್ತು ಸಿಆರ್‌ಪಿಎಫ್‌ ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ 26 ಯೋಧರು ಸತ್ತಿದ್ದಾರೆ; 7 ಯೋಧರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. ಸಿಆರ್‌ಪಿಎಫ್‌ ಯೋಧರು ಇಲ್ಲಿನ ಅರಣ್ಯದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಸುಮಾರು 300 ಮಂದಿ ನಕ್ಸಲರು ಯೋಧರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು. ಸಿಆರ್‌ಪಿಎಫ್‌ ಪಡೆ ಮರುದಾಳಿ ನಡೆಸಿದೆ. ಅದರಲ್ಲಿ 10–12 ನಕ್ಸಲರು ಸತ್ತಿರಬಹುದು ಎಂದು ಯೋಧ ಹೇಳಿದ್ದಾನೆ. [೧೨]

ಹಿಂದಿನ ಪ್ರಮುಖ ಧಾಳಿಗಳು[ಬದಲಾಯಿಸಿ]

  • 2008, ಜೂನ್‌ 29: ಒಡಿಶಾದ ಬಾಲಿಮೇಲಾ ಜಲಾಶಯದ ಬಳಿ ದೋಣಿ ಮೇಲೆ ದಾಳಿ ನಡೆಸಿ 38 ಯೋಧರನ್ನು ಕೊಂದ ನಕ್ಸಲೀಯರು.
  • 2008, ಜುಲೈ 16: ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯಲ್ಲಿ ನೆಲಬಾಂಬ್‌ ಸ್ಫೋಟಿಸಿ 21 ಪೊಲೀಸರನ್ನು ಕೊಂದ ನಕ್ಸಲೀಯರು.
  • 2009, ಏಪ್ರಿಲ್ 13: ಪೂರ್ವ ಒಡಿಶಾದಲ್ಲಿ ಅರೆಸೈನಿಕ ಪಡೆಯ 10 ಸೈನಿಕರನ್ನು ಕೊಂದ ನಕ್ಸಲೀಯರು.
  • 2009, ಮೇ 22: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ 16 ಪೊಲೀಸರ ಸಾವು.
  • 2009, ಜೂನ್‌ 10: ಜಾರ್ಖಂಡ್‌ನ ಸಾರಂಡಾದಲ್ಲಿ ಒಂಬತ್ತು ಪೊಲೀಸರ ಹತ್ಯೆ.
  • 2009, ಸೆಪ್ಟೆಂಬರ್ 26: ಬಿಜೆಪಿ ಸಂಸದ ಬಲಿರಾಂ ಕಶ್ಯಪ್ ಅವರ ಇಬ್ಬರು ಮಕ್ಕಳನ್ನು ಜಗದಾಲ್ಪುರದ ಪೈರಗುಡ ಹಳ್ಳಿಯಲ್ಲಿ ಹತ್ಯೆ ಮಾಡಿದ ನಕ್ಸಲೀಯರು.
  • 2009, ಅಕ್ಟೋಬರ್ 8: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಲಹೇರಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯಲ್ಲಿ 17 ಪೊಲೀಸರು ಹತ.
  • 2010, ಫೆಬ್ರುವರಿ 15: ಪಶ್ಚಿಮ ಬಂಗಾಳದಲ್ಲಿ ನಡೆದ ದಾಳಿಯಲ್ಲಿ ಈಸ್ಟರ್ನ್‌ ಫ್ರಂಟಿಯರ್ ರೈಫಲ್ಸ್‌ನ 24 ಸೈನಿಕರ ಸಾವು.
  • 2010, ಏಪ್ರಿಲ್ 4: ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ಸ್ಫೋಟಕ ಬಳಸಿ 11 ಜನ ಪೊಲೀಸ್ ಕಮಾಂಡೊಗಳ ಹತ್ಯೆ.
  • 2010, ಏಪ್ರಿಲ್ 6: ದಾಂತೇವಾಡ ಜಿಲ್ಲೆಯಲ್ಲಿ 76 ಜನ ಸಿಆರ್‌ಪಿಎಫ್‌ ಯೋಧರ ಹತ್ಯೆ.
  • 2010, ಮೇ 8: ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ವಾಹನ ಸ್ಫೋಟಿಸಿ 8 ಜನ ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ನಕ್ಸಲೀಯರು.
  • 2010, ಜೂನ್ 29: ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಹಠಾತ್ ದಾಳಿಗೆ 26 ಸಿಆರ್‌ಪಿಎಫ್‌ ಯೋಧರ ಬಲಿ.
  • 2011ರ ಫೆಬ್ರುವರಿಯಲ್ಲಿ ಮಲ್ಕನ್‌ಗಿರಿ ಜಿಲ್ಲಾಧಿಕಾರಿ ಆಗಿದ್ದ, ಐಎಎಸ್‌ ಅಧಿಕಾರಿ ವಿನೀಲ್ ಕೃಷ್ಣ ಅವರನ್ನು ನಕ್ಸಲೀಯರುಅಪಹರಿಸಿ, ಒಂಬತ್ತು ದಿನ ಒತ್ತೆ ಇರಿಸಿಕೊಂಡಿದ್ದರು. ನಕ್ಸಲೀಯರ ಜೊತೆ ಮಾತುಕತೆ ನಡೆಸಿದ್ದ ಒಡಿಶಾ ಸರ್ಕಾರ, ಐದು ಜನ ಶಂಕಿತ ನಕ್ಸಲೀಯರನ್ನು ಬಂಧಮುಕ್ತಗೊಳಿಸಿ, ವಿನೀಲ್ ಅವರನ್ನು ಒತ್ತೆಯಿಂದ ಬಿಡಿಸಿಕೊಂಡಿತ್ತು.
  • 2012, ಅಕ್ಟೋಬರ್ 18: ಗಯಾ ಜಿಲ್ಲೆಯಲ್ಲಿ ಆರು ಸಿಆರ್‌ಪಿಎಫ್‌ ಯೋಧರ ಬಲಿ ಪಡೆದ ನಕ್ಸಲೀಯರು.
  • 2013, ಮೇ 25: ಛತ್ತೀಸಗಡದ ದರ್ಭಾ ಕಣಿವೆಯಲ್ಲಿ ನಕ್ಸಲೀಯರು ನಡೆಸಿದ ದಾಳಿಯಲ್ಲಿ ರಾಜ್ಯದ ಮಾಜಿ ಸಚಿವ ಮಹೇಂದ್ರ ಕರ್ಮಾ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಪಟೇಲ್ ಸೇರಿದಂತೆ 25 ಕಾಂಗ್ರೆಸ್ ಮುಖಂಡರ ಸಾವು.
  • 2013, ಜುಲೈ 2: ಜಾರ್ಖಂಡ್ ರಾಜ್ಯದ ಡುಮ್ಕಾದಲ್ಲಿ ನಡೆದ ದಾಳಿಯಲ್ಲಿ ಪಾಕುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಐದು ಪೊಲೀಸ್ ಅಧಿಕಾರಿಗಳ ಸಾವು.
  • 2014, ಫೆಬ್ರುವರಿ 28: ಛತ್ತೀಸಗಡದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ ಆರು ಪೊಲೀಸ್ ಅಧಿಕಾರಿಗಳ ಬಲಿ.
  • 2014, ಮಾರ್ಚ್‌ 11: ಸುಕ್ಮಾ ಜಿಲ್ಲೆಯಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 15 ಭದ್ರತಾ ಸಿಬ್ಬಂದಿ ಸಾವು.
  • 2017, ಮಾರ್ಚ್‌ 12: ಛತ್ತೀಸಗಡ ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಹಠಾತ್ ದಾಳಿಗೆ ಸಿಆರ್‌ಪಿಎಫ್‌ನ 12 ಯೋಧರ ಸಾವು. ಯೋಧರಿಂದ ಶಸ್ತ್ರಾಸ್ತ್ರ ದೋಚಿದ ನಕ್ಸಲರು.[೧೩]

ನಕ್ಸಲ್ಬರಿ ಬಂಡಾಯದ ಹುಟ್ಟು[ಬದಲಾಯಿಸಿ]

  • ಬರೋಬ್ಬರಿ ಐವತ್ತು ವರ್ಷಗಳ ಹಿಂದೆ ಮಾವೋವಾದಿಗಳ ಸಶಸ್ತ್ರ ದಂಗೆಗೆ ಚಿಮ್ಮು ಹಲಗೆಯಾದ ಊರು ನಕ್ಸಲ್ಬರಿ. ಅದು ಕೇವಲ ಊರಿನ ಹೆಸರಾಗಿ ಉಳಿಯದೆ ಕ್ರಾಂತಿಕಾರಿ ಮಾರ್ಗವೊಂದರ ದ್ಯೋತಕವಾಗಿ ದೇಶದ ತುಂಬಾ ಸಂಚಲನ ಮೂಡಿಸಿದ ಘೋಷವಾಯಿತು. ಶೋಷಣೆಗೆ ಒಳಗಾದ ಸಮುದಾಯಗಳ ಯುವಕರ ಎದೆಯೊಳಗಿನ ಹಾಡಾಯಿತು. ಆ ಮಾರ್ಗದಲ್ಲಿ ಹೆಜ್ಜೆ ಹಾಕಿದವರನ್ನು ‘ನಕ್ಸಲೀಯರು’ ಎಂದು ಗುರ್ತಿಸಲಾಯಿತು.ಭೂಮಾಲೀಕರಿಂದ ನಿರಂತರವಾಗಿ ಅನುಭವಿಸಿದ ಶೋಷಣೆಯಿಂದ ಮಡುವುಗಟ್ಟಿದ್ದ ಕೃಷಿ ಕಾರ್ಮಿಕರ ಆಕ್ರೋಶಕ್ಕೆ ಚಾರು ಮಜುಂದಾರ್‌ ನೇತೃತ್ವದ ಕ್ರಾಂತಿಕಾರಿ ಕಮ್ಯುನಿಸ್ಟ್‌ ಕಾರ್ಯಕರ್ತರು ಹಳ್ಳಿ–ಹಳ್ಳಿಗಳಲ್ಲಿ ಓಡಾಡಿ ಉತ್ತೇಜನ ಕೊಟ್ಟರು. ರಷ್ಯಾ ಹಾಗೂ ಚೀನಾ ಕ್ರಾಂತಿಗಳ ಯಶಸ್ಸಿನ ಕಥೆಗಳು ಹೋರಾಟಕ್ಕೆ ಹುರುಪು ತುಂಬಿದ್ದವು.
  • ಅದು 1967ರ ಮಾರ್ಚ್‌ ತಿಂಗಳು. ಜಮೀನ್ದಾರರ ವಶದಲ್ಲಿದ್ದ ಭೂಮಿಯನ್ನು ಸುತ್ತುವರಿದ ರೈತರ ಗುಂಪು, ಅಲ್ಲಿ ಕೆಂಬಾವುಟ ನೆಟ್ಟು, ಬಲು ವೀರಾವೇಶದಿಂದ ಬೆಳೆಯನ್ನೆಲ್ಲ ಕೊಯ್ಲು ಮಾಡಿಬಿಟ್ಟಿತು. ಪ್ರತಿದಾಳಿಯನ್ನು ಸಶಸ್ತ್ರ ಹೋರಾಟದ ಮೂಲಕವೇ ಹಿಮ್ಮೆಟ್ಟಿಸಲು ನಿರ್ಧರಿಸಿದ ಈ ಗುಂಪು, ಬಿಲ್ಲು–ಬಾಣ, ಕೃಷಿ ಸಲಕರಣೆ, ಲಾಠಿಗಳೊಂದಿಗೆ ಸಾಗಿ ಹಳ್ಳಿಗಳ ಭೂಮಾಲೀಕರ ತಿಜೋರಿಗಳಲ್ಲಿದ್ದ ದಸ್ತಾವೇಜುಗಳನ್ನೆಲ್ಲ ವಶಪಡಿಸಿಕೊಂಡು ಸುಟ್ಟುಹಾಕಿತು. ಬಿಗುಲ್‌ ಕಿಸನ್‌ ಎಂಬ ಗೇಣಿ ರೈತನ ಮೇಲೆ ಭೂಮಾಲೀಕರು ಮಾರಣಾಂತಿಕ ಹಲ್ಲೆ ನಡೆಸಿದಾಗ ನೇರ ಘರ್ಷಣೆ ಆರಂಭವಾಯಿತು. ಬಂಗಾಳದಲ್ಲಿ ಸಂಯುಕ್ತರಂಗದ ಆಡಳಿತದ ಕಾಲವದು. ಹೋರಾಟದ ಕಾವನ್ನು ತಗ್ಗಿಸಲು ಕಮ್ಯುನಿಸ್ಟ್‌ ನಾಯಕರು ಪ್ರಯತ್ನ ಮಾಡಿದರಾದರೂ ಚಾರು ನೇತೃತ್ವದ ತಂಡ ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಗೃಹ ಮಂತ್ರಿಯಾಗಿದ್ದ ಕಮ್ಯುನಿಸ್ಟ್‌ ನಾಯಕ ಜ್ಯೋತಿಬಸು, ಹೋರಾಟವನ್ನು ಹತ್ತಿಕ್ಕಲು ಒಂದುಕಾಲದ ತಮ್ಮ ಸಂಗಾತಿಗಳ ಮೇಲೆ ಪೊಲೀಸ್‌ ಬಲ ಪ್ರಯೋಗಕ್ಕೆ ಆದೇಶ ನೀಡಿದರು. ಅದೇ ವರ್ಷ ಮೇ 25ರಂದು ಆದಿವಾಸಿ ಹಟ್ಟಿಯೊಂದರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಲು ಬಂದಾಗ ನಡೆದ ಘರ್ಷಣೆಯಲ್ಲಿ ಸೋನಮ್‌ ವಾಂಗಡಿ ಎಂಬ ಇನ್‌ಸ್ಪೆಕ್ಟರ್‌ ಹತ್ಯೆಗೀಡಾದರು. ಮುಂದಿನ ಐವತ್ತು ವರ್ಷಗಳಲ್ಲಿ ಸಶಸ್ತ್ರ ಕ್ರಾಂತಿ ಹಾಗೂ ಅದನ್ನು ಹತ್ತಿಕ್ಕಲು ನಡೆಸಿದ ಪೊಲೀಸ್‌ ಕಾರ್ಯಾಚರಣೆಗಳು ಹರಿಸಿದ ರಕ್ತದ ಹೊನಲಿಗೆ ನಾಂದಿಯಾದ ಘಟನೆ ಇದು.

ವಸಂತ ಮೇಘ ಗರ್ಜನೆ[ಬದಲಾಯಿಸಿ]

  • ನಕ್ಸಲ್ಬರಿ ಬಂಡಾಯವನ್ನು ಚೀನಾ ಸರ್ಕಾರ ‘ವಸಂತ ಮೇಘ ಗರ್ಜನೆ’ ಎಂದು ಕಾವ್ಯಾತ್ಮಕವಾಗಿ ಬಣ್ಣಿಸಿತು. ‘ಭಾರತ ಭೂಮಿಯ ಮೇಲೆ ವಸಂತ ಮೇಘ ಗರ್ಜನೆಯ ನಾದವೊಂದು ಮೊಳಗಿದೆ. ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಕ್ರಾಂತಿಕಾರಿ ಗುಂಪಿನ ನಾಯಕತ್ವದಲ್ಲಿ ಗ್ರಾಮೀಣ ಕ್ರಾಂತಿಕಾರಿ ಸಶಸ್ತ್ರ ಹೋರಾಟದ ಕೆಂಪು ಪ್ರದೇಶವೊಂದು ರೂಪುಗೊಂಡಿದೆ’ ಎಂದು ಅಲ್ಲಿನ ಸರ್ಕಾರ ಸಂಭ್ರಮಿಸಿತು.
  • ತಣ್ಣನೆಯ ಹಿಮಾಲಯಕ್ಕೆ ಹತ್ತಿರದಲ್ಲಿರುವ, ದಟ್ಟ ಕಾಡಿನಿಂದ ಸುತ್ತುವರಿದ, ಚಹಾ ತೋಟಗಳ ನಡುವೆ ಪವಡಿಸಿದ ನಕ್ಸಲ್ಬರಿ ಎಂಬ ಪುಟ್ಟ ಊರಿನಲ್ಲಿ ನಡೆದ ಬಂಡಾಯದ ಕಿಚ್ಚು ಹಿರಿದಾದ ಪರ್ವತಗಳು, ದಟ್ಟ ಕಾಡುಗಳು, ನದಿ–ತೊರೆಗಳನ್ನೆಲ್ಲ ದಾಟಿಕೊಂಡು ಉಲ್ಕೆಗಳಂತೆ ಉರಿಯುತ್ತಾ ಬಿದ್ದ ಪರಿಣಾಮ, ಬಿಹಾರ, ಒಡಿಶಾ, ಪಂಜಾಬ್‌, ತೆಲಂಗಾಣ, ಆಂಧ್ರಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆಗಳು ಆರಂಭಗೊಡವು.
  • ಈ ಮಧ್ಯೆ ಸಿಪಿಎಂ ನಾಯಕತ್ವ ನಕ್ಸಲ್ಬರಿ ಹೋರಾಟವನ್ನು ಕೈಬಿಡಬೇಕೆನ್ನುವ ತನ್ನ ನಿಲುವಿಗೆ ಬಲವಾಗಿ ಅಂಟಿಕೊಂಡಿತು. ಆ ಪಕ್ಷದಲ್ಲಿದ್ದ ಕ್ರಾಂತಿಕಾರಿ ಹೋರಾಟದ ಪ್ರತಿಪಾದಕರು, ಅಲ್ಲಿಂದ ಸಿಡಿದುಬಂದು ಸಶಸ್ತ್ರ ಬಂಡಾಯವನ್ನು ಮುನ್ನಡೆಸಲು ‘ಸಿಪಿಐ’ (ಎಂ.ಎಲ್‌; ಮಾರ್ಕ್ಸ್‌ ಮತ್ತು ಲೆನಿನ್‌ ವಾದ) ಪಕ್ಷ ಕಟ್ಟಿದರು. ನಕ್ಸಲ್ಬರಿ ದಂಗೆಯ ನೇತಾರ ಚಾರು, ಅದರ ಮೊದಲ ಕಾರ್ಯದರ್ಶಿಯಾದರು.
  • ಮಾವೋ ಪ್ರತಿಪಾದಿಸಿದ ‘ಬಂದೂಕಿನ ನಳಿಕೆಯಿಂದ ಮಾತ್ರ ಅಧಿಕಾರ ಪ್ರವಹಿಸುತ್ತದೆ’, ‘ಸುದೀರ್ಘ ಪ್ರಜಾಯುದ್ಧದ ಮೂಲಕ ಮಾತ್ರ ಹಿಂದುಳಿದ ದೇಶಗಳಲ್ಲಿ ಕ್ರಾಂತಿ ಸಾಧ್ಯ’ ಎಂಬ ಚಿಂತನೆಗೆ ಈ ಪಕ್ಷ ಒತ್ತು ನೀಡಿತು. ಕೋಲ್ಕತ್ತದ ರೈಲ್ವೆ ಕಾಲೊನಿಯ ಮನೆಯೊಂದರಲ್ಲಿ ಮದುವೆ ಸಮಾರಂಭದ ಸೋಗಿನಲ್ಲಿ ಸಭೆ ನಡೆಸಿ, ‘ಭಾರತದ ಕ್ರಾಂತಿಯ ಪಥ’ದ ದಸ್ತಾವೇಜನ್ನು ಅಂತಿಮಗೊಳಿಸಿದ ನಾಯಕರು, ‘ಚೀನಾದ ಅಧ್ಯಕ್ಷರೇ ನಮ್ಮ ಅಧ್ಯಕ್ಷರು’, ‘ಚೀನಾದ ಹಾದಿಯೇ ನಮ್ಮ ಹಾದಿ’ ಎಂದು ಸಾರಿದರು. ಹಳ್ಳಿಗಳಲ್ಲಿ ಭೂಮಾಲೀಕರನ್ನು ಇಲ್ಲವಾಗಿಸಿದರೆ ರೈತ ಸಮಿತಿಗಳ ಮೂಲಕ ಅಲ್ಲಿ ವಿಮೋಚಿತ ಪ್ರದೇಶಗಳನ್ನು ನಿರ್ಮಾಣ ಮಾಡಬಹುದು. ನಂತರ ನಗರಗಳನ್ನು ಸುತ್ತುವರಿದು ವಶಕ್ಕೆ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿತ್ತು ಆ ಪಕ್ಷದ ನಾಯಕತ್ವ. ಕ್ರಾಂತಿಯ ವಸಂತ ಋತು ಶುರುವಾಗಿ ಹತ್ತು ವರ್ಷಗಳಲ್ಲಿ ಸಂಪೂರ್ಣ ಗುರಿ ಸಾಧನೆಯಾಗುತ್ತದೆ ಎಂಬ ಭ್ರಾಂತಿಯಲ್ಲೂ ಮುಳುಗಿತು. ಸಶಸ್ತ್ರ ಹೋರಾಟಕ್ಕಾಗಿ ಸೈನ್ಯವನ್ನು ಕಟ್ಟಲು ನಿರ್ಧರಿಸಿ, ವರ್ಗಶತ್ರುವಿನ ರಕ್ತದಲ್ಲಿ ಕೈ ಅದ್ದಿದವರು ಇಲ್ಲವೇ ಪ್ರಭುತ್ವದಿಂದ ಬಂದೂಕು ಕಿತ್ತುಕೊಂಡು ಬಂದವರಿಗೆ ಪಕ್ಷದ ಸದಸ್ಯತ್ವ ಎಂಬ ಬಿಗಿ ಷರತ್ತನ್ನು ಹಾಕಿಕೊಳ್ಳಲಾಯಿತು! ಕ್ರಾಂತಿಕಾರಿ ಶಕ್ತಿಗಳ ಧ್ರುವೀಕರಣದ ಜೊತೆ ಜೊತೆಗೆ ಸಶಸ್ತ್ರ ಹೋರಾಟ ಮತ್ತೆ ಹರಡತೊಡಗಿತು. ಊಳಿಗಮಾನ್ಯ ವ್ಯವಸ್ಥೆ ವಿರುದ್ಧ ಬಂಡೆದ್ದ ವಿದ್ಯಾರ್ಥಿಗಳು ಸಾವಿರ, ಸಾವಿರ ಸಂಖ್ಯೆಯಲ್ಲಿ ಹೋರಾಟಕ್ಕೆ ಧುಮುಕಿದರು. ಆದರೆ, ದಂಗೆಯನ್ನು ಸರ್ಕಾರ ಬಲವಾಗಿ ಹತ್ತಿಕ್ಕಿತು.[೧೪]

ಕರನಾಟಕದಲ್ಲಿ ಕ್ರಾಂತಿಕಾರಿಗಳು[ಬದಲಾಯಿಸಿ]

  • ‘ಪೀಪಲ್ಸ್‌ ವಾರ್‌’ ಪಕ್ಷದ ಚಟುವಟಿಕೆಗಳು ರಾಜ್ಯದಲ್ಲಿ ಶುರುವಾಗಿದ್ದು ಹೇಗೆ ಎಂಬುದನ್ನು ಮೂರು ದಶಕಗಳವರೆಗೆ ನಕ್ಸಲ್‌ ಚಳವಳಿ ಭಾಗವೇ ಆಗಿದ್ದ, ಈಗ ಅದರಿಂದ ಹೊರಬಂದು ಜನಸಮೂಹದ ಹೋರಾಟಗಳ ಜತೆ ಗುರ್ತಿಸಿಕೊಂಡಿರುವ ನೂರ್‌ ಶ್ರೀಧರ್‌ (ನೂರ್‌ ಜುಲ್ಫಿಕರ್‌) ಚರಿತ್ರೆಯ ಕೆಲವು ಪುಟಗಳನ್ನು ಅವರು ತೆರೆದಿಟ್ಟರು.ರಾಜ್ಯದ ಕೆಲವು ಕ್ರಾಂತಿಕಾರಿಗಳು 1980ರ ದಶಕದ ಉತ್ತರಾರ್ಧದಲ್ಲಿ ‘ಪೀಪಲ್ಸ್‌ ವಾರ್‌’ ಪಕ್ಷದ ಕರ್ನಾಟಕ ಘಟಕವನ್ನು ಪ್ರಾರಂಭಿಸಿದರು. ‘ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ’ದಲ್ಲಿ (ಜೆಎನ್‌ಯು) ಅಧ್ಯಯನ ನಡೆಸಿಬಂದ ಮೇಧಾವಿ ಸಾಕೇತ್‌ ರಾಜನ್‌ (ಸಂಗಾತಿಗಳಿಗೆ ಸಾಕಿ) ಅವರೇ ರಾಜ್ಯದ ನಕ್ಸಲೀಯ ಚಟುವಟಿಕೆಗಳ ಪ್ರಮುಖ ರೂವಾರಿ
  • ‘ಮೇಕಿಂಗ್‌ ಹಿಸ್ಟರಿ’ಯಂತಹ ಅನನ್ಯ ಕೃತಿಯನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ಕೊಟ್ಟವರು ಅವರು. ಪಾಳೆಗಾರಿಕೆ ವಿರುದ್ಧ ಸಿಡಿದೆದ್ದಿದ್ದ ಆಂಧ್ರದ ವಿದ್ಯಾರ್ಥಿಗಳಿಂದ ರಾಜ್ಯದ ಬಿಸಿರಕ್ತದ ತರುಣರಿಗೂ ‘ಆರ್‌ಎಸ್‌ಯು’ನ ಪರಿಚಯವಾಯಿತು. ಅಲ್ಲಿನ ವಿದ್ಯಾರ್ಥಿಗಳು ಹಳ್ಳಿಗಳಿಗೆ ತೆರಳಿ, ರೈತಾಪಿ ಜನರೊಂದಿಗೆ ಬೆರೆತು, ಅವರ ಹಕ್ಕುಗಳಿಗೆ ಹೋರಾಡುತ್ತಾ, ಪೊಲೀಸರೊಂದಿಗೆ ಘರ್ಷಣೆಯಲ್ಲಿ ಮಡಿದ ಯುದ್ಧದ ಕಥೆಗಳನ್ನು ಕೇಳಿ ಇಲ್ಲಿನ ಯುವಕರಲ್ಲಿ ಭಾವೋದ್ವೇಗದಿಂದ ಮೈ ನವಿರೆದ್ದಿತು. ಆಂಧ್ರದ ಕ್ರಾಂತಿಕಾರಿ ಚಳವಳಿಯ ನೇತಾರರ ಮಾರ್ಗದರ್ಶನದಲ್ಲಿ ರಾಜ್ಯದಲ್ಲೂ ‘ಆರ್‌ಎಸ್‌ಯು’ ಚಟುವಟಿಕೆಗಳು ಶುರುವಾದವು.
  • ಚಳವಳಿ ಬೆಳೆಸಲು ಕಾರಣರಾದ ಪಾರ್ವತಿ, ಹಾಜಿಮಾ ಅವರಿಗೂ ಅದೇ ಗತಿ ಒದಗಿತು. ರಕ್ತರಂಜಿತವಾಗಿದ್ದ ಆ ದಿನಗಳಲ್ಲಿ ಶಿವಲಿಂಗು, ಉಮೇಶ್‌, ಅಜಿತ್‌, ಚನ್ನಪ್ಪ, ಮನೋಹರ್‌, ದಿನಕರ್‌, ಆನಂದ್‌... ಹೀಗೆ ಸಾಲು, ಸಾಲು ನಕ್ಸಲೀಯರು ಪೊಲೀಸರ ಗುಂಡಿಗೆ ಬಲಿಯಾದರು. ಪ್ರತೀಕಾರದ ಹೋರಾಟಗಳಿಂದ ನಕ್ಸಲೀಯರೂ ಸದ್ದು ಮಾಡಿದರು. ಪೊಲೀಸರಿಗೆ ಮಾಹಿತಿಕೊಟ್ಟ ಶೇಷಯ್ಯ ಎಂಬುವರನ್ನು ಅವರ ಕುಟುಂಬದ ಸದಸ್ಯರ ಎದುರೇ ಹತ್ಯೆ ಮಾಡಿದರು. ನಂತರದ ದಿನಗಳಲ್ಲಿ ಶಸ್ತ್ರ ಕೆಳಗಿಟ್ಟು ಹಲವರು ಮುಖ್ಯವಾಹಿನಿಗೆ ಬಂದರೆ, ಉಳಿದವರು ಬೇರೆ ನೆಲೆಗಳನ್ನು ಕಂಡುಕೊಂಡರು.[೧೫] ಡಿಸೆಂಬರ್ 8, 2014 ರಂದು ಕರ್ನಾಟಕದ ಚಿಕ್ಕಮಗಳೂರುನಲ್ಲಿ ಎರಡು ಪ್ರಮುಖ ನಕ್ಸಲ್ ನಾಯಕರು ಸಿರಿಮಾನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಚಳವಳಿಗಳ ಮುಖ್ಯವಾಹಿನಿಗೆ ಮರಳಿ ಬಂದರು (ರಿಟರ್ನ್ ಟು ಮೇನ್ ಸ್ಟ್ರೀಮ್).

[೧೬]

ನೋಡಿ[ಬದಲಾಯಿಸಿ]

ಪಶ್ಚಿಮ ಬಂಗಾಳ

ಉಲ್ಲೇಖ[ಬದಲಾಯಿಸಿ]

  1. Naxalism: A Short Introduction to India's Scariest Security Challenge;Posted by T. Greer in Bharat, COIN, Stealth Conflicts
  2. ದಸ್ ಕ್ಯಾಪಿಟಲ್ ಲೇಖಕ: ಕಾರ್ಲ್ ಮಾರ್ಕ್ಸ; ಇಂಗ್ಲಿಷ್‍ಗೆ ಅನುವಾದಕ: ಏಂಜೆಲ್ಸ್.
  3. 2. Jawaharlal Nehru's Ideal of Socialism as a Form of Humanism
  4. Centre to declare more districts Naxal-hitManeesh Chhibber , Maneesh Chhibber : New Delhi, Tue Jul 05 2011, 00:28 h
  5. "A Modern Insurgency: India's Evolving Naxalite Problem William Magioncalda" (PDF). Archived from the original (PDF) on 2017-08-30. Retrieved 2017-03-25.
  6. Rising Maoists Insurgency in India; By admin | Published May 13, 2007
  7. Left-wing Extremist group
  8. The Union Government of India to Bring 20 More Districts in the Naxal-hit states;Jul 7, 2011 17:15 IST;KUNAL
  9. http://www.satp.org/satporgtp/countries/india/maoist/data_sheets/fatalitiesnaxalmha.htm
  10. http://www.justice.gov/sites/default/files/eoir/legacy/2014/02/25/India_Maoist.pdf Archived 2015-07-12 ವೇಬ್ಯಾಕ್ ಮೆಷಿನ್ ನಲ್ಲಿ. 2009-03-17
  11. http://www.satp.org/satporgtp/countries/india/maoist/data_sheets/fatalitiesnaxal05-11.htm title=Fatalities in Left-wing Extremism : 2005-2017|publisher=|accessdate=14 March 2017}}
  12. ಛತ್ತೀಸ್‌ಗಡದಲ್ಲಿ ನಕ್ಸಲ್‌ ದಾಳಿ: 26 ಸಿಆರ್‌ಪಿಎಫ್‌ ಯೋಧರು ಹುತಾತ್ಮ;24 Apr, 2017
  13. ನಕ್ಸಲ್‌ ಕ್ರೌರ್ಯ: 25 ಯೋಧರು ಬಲಿ;24 Apr, 2017
  14. "ಹೊರಳು ಹಾದಿಯಲ್ಲಿ 'ಕೆಂಪು ಸೂರ್ಯ'!;ಪ್ರವೀಣ ಕುಲಕರ್ಣಿ;4 Jun, 2017". Archived from the original on 2017-06-03. Retrieved 2017-06-04.
  15. ಪ್ರಜಾವಾಣಿ ೪-೬-೨೦೧೭
  16. ಟಿವಿ 9 ಸುದ್ದಿ:ಯುಟ್ಯೂಬ್