ದೊಡ್ಡರಂಗೇಗೌಡ
ದೊಡ್ಡರಂಗೇಗೌಡ - ಕನ್ನಡದ ಕವಿಗಳಲ್ಲೊಬ್ಬರು ಮತ್ತು ಚಿತ್ರಸಾಹಿತಿಗಳಲ್ಲೊಬ್ಬರು.
ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ 0೭ ಫೆಬ್ರುವರಿ ೧೯೪೬ರಲ್ಲಿ ಜನಿಸಿದರು.ತಂದೆ-ಶ್ರೀ ಕೆ. ರಂಗೇಗೌಡರು.ತಾಯಿ-ಶ್ರೀಮತಿ ಅಕ್ಕಮ್ಮ
ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು, ನಂತರ ಕನ್ನಡದಲ್ಲಿ ನವೋದಯ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿದರು. ಇವರ "ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ" ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್ಡಿ(ಡಾಕ್ಟರೇಟ್) ಪದವಿ ದೊರಕಿತು.
೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.೧೯೮೨ರಲ್ಲಿ ಗೌಡರು ಆಲೆಮನೆ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಇವರು.ಇವರು "ಮನುಜ" ಎಂಬ ಕಾವ್ಯ ನಾಮದಿಂದಲೂ ಬರೆಯುತ್ತಾರೆ. "ನಮನ"
ಪರಿವಿಡಿ |
ಸಾಹಿತ್ಯ ಕೃತಿಗಳು [ಬದಲಾಯಿಸಿ]
- ಕನ್ನಡದಲ್ಲಿ ನವೋದಯ ಸಾಹಿತ್ಯ (ಸಂಶೋಧನಾ ಗ್ರಂಥ)
- ರಾಗ ರಂಗು (ಪುಸ್ತಕ)
ಕಾರ್ಯ ನಿರ್ವಹಿಸಿದ ಹುದ್ದೆಗಳು [ಬದಲಾಯಿಸಿ]
ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಚಲನಚಿತ್ರಗಳು [ಬದಲಾಯಿಸಿ]
- ರಂಗನಾಯಕಿ
- ಪರಸಂಗದ ಗೆಂಡೆತಿಮ್ಮ
- ಆಲೆಮನೆ
- ಅನುಪಮ
- ಅರುಣರಾಗ
- ಮುದುಡಿದ ತಾವರೆ ಅರಳಿತು
- ಏಳು ಸುತ್ತಿನ ಕೋಟೆ
- ಅಶ್ವಮೇಧ
- ಹೃದಯಗೀತೆ
- ಭೂಲೋಕದಲ್ಲಿ ಯಮರಾಜ
- ಜನುಮದ ಜೋಡಿ
- ಕುರುಬನ ರಾಣಿ
- ರಮ್ಯ ಚೈತ್ರಕಾಲ
- ತಂದೆಗೆ ತಕ್ಕ ಮಗ
- ಪಡುವಾರಳ್ಳಿ ಪಾಂಡವರು
ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಭಾವಗೀತೆ ಆಲ್ಬಂಗಳು [ಬದಲಾಯಿಸಿ]
- ಮಾವು-ಬೇವು
- ಪ್ರಾಯ ಮೂಡಿತು
