ದೆವ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಡೆಕ್ಸ್ ಗಿಗಾಸ್ ನಲ್ಲಿ ಕಂಡುಬಂದಂತಹ ದೆವ್ವದ ಚಿತ್ರಣ.

ದೆವ್ವ (ಗ್ರೀಕ್:διάβολος ಅಥವಾ ದಿಯವೊಲೋಸ್ = 'ಅಪನಿಂದಕ' ಅಥವಾ 'ಆಪಾದಕ'[೧])ವನ್ನು ಕೆಲವು ಧರ್ಮಗಳಲ್ಲಿ ಹಾಗು ಸಂಸ್ಕೃತಿಗಳಲ್ಲಿ ಅತ್ಯಂತ ಪ್ರಬಲ ಮಾನವಾತೀತ ಅಸ್ತಿತ್ವವೆಂದು ಅದೆಂದರೆ ದುಷ್ಟಶಕ್ತಿಮೂರ್ತರೂಪ ದ ಜೊತೆಗೆ ದೇವರು ಹಾಗು ಮಾನವಕುಲದ ಶತ್ರುವೆಂದು ಪರಿಗಣಿಸಲಾಗುತ್ತದೆ. ದೆವ್ವವನ್ನು ಸಾಮಾನ್ಯವಾಗಿ ಅಸಂಪ್ರದಾಯವಾದಿಗಳು, ನಾಸ್ತಿಕರು, ಹಾಗು ಇತರ ನಂಬಿಕೆಯಿಲ್ಲದವರ ಜೊತೆಗೆ ಸಂಬಂಧಿಸಲಾಗುತ್ತದೆ.

ಅಬ್ರಹಾಂ ಧರ್ಮವು ದೆವ್ವವನ್ನು ಒಬ್ಬ ಅವಿಧೇಯ ಫಾಲನ್ ಏಂಜಲ್(ಸ್ವರ್ಗದಿಂದ ಬಹಿಷ್ಕರಿಸಲ್ಪಟ್ಟ ದೇವತೆ) ಅಥವಾ ಅಸುರ ದೈತ್ಯ ವೆಂದು ಪರಿಗಣಿಸುತ್ತದೆ. ಇಂತಹ ದುಷ್ಟಶಕ್ತಿಯು ಮಾನವರಿಗೆ ಪಾಪ ಅಥವಾ ದುಷ್ಟಕೃತ್ಯಗಳನ್ನು ಎಸಗಲು ಪ್ರೇರೇಪಿಸುತ್ತವೆ. ಇತರರು ದೆವ್ವವನ್ನು ಒಂದು ಸಾಂಕೇತಿಕ ನಿರೂಪಣೆಯೆಂದು ಪರಿಗಣಿಸಿ,ಅದು ನಂಬಿಕೆಯ ಘರ್ಷಣೆ, ವ್ಯಕ್ತಿತ್ವ, ಇಚ್ಚಾ-ಸ್ವಾತಂತ್ರ್ಯ, ಜ್ಞಾನ ಹಾಗು ಜ್ಞಾನೋದಯದ ಘರ್ಷಣೆಯನ್ನು ಸಂಕೇತಿಸುತ್ತದೆಂದು ಪರಿಗಣಿಸಿದ್ದಾರೆ.

ಕ್ರಿಶ್ಚಿಯನ್ ಧರ್ಮದ ಮುಖ್ಯವಾಹಿನಿಯಲ್ಲಿ, ದೇವರು ಹಾಗು ದೆವ್ವವನ್ನು ಸಾಧಾರಣವಾಗಿ ಮಾನವ ಆತ್ಮಗಳ ಬಗ್ಗೆ ಹೋರಾಟ ನಡೆಸುತ್ತಾರೆಂದು ಚಿತ್ರಿಸಲಾಗುತ್ತದೆ. ದೆವ್ವವು ಮಾನವರನ್ನು ಪ್ರಲೋಭನೆಗೆ ಒಳಪಡಿಸಿ ದೇವರಿಂದ ದೂರ ನರಕಕ್ಕೆ ಕರೆದೊಯ್ಯುತ್ತವೆಂದು ಹೇಳಲಾಗುತ್ತದೆ. ದೆವ್ವವು ದುಷ್ಟ ದೇವತೆಗಳ ಒಂದು ತಂಡವನ್ನು ನಿಯಂತ್ರಿಸುತ್ತದೆ, ಇವುಗಳನ್ನು ಸಾಮಾನ್ಯವಾಗಿ ಅಸುರ ದೈತ್ಯರು ಎಂದು ಕರೆಯಲಾಗುತ್ತದೆ.[೨] ಹಿಬ್ರೂ ಬೈಬಲ್(ಅಥವಾ ಓಲ್ಡ್ ಟೆಸ್ಟಮೆಂಟ್) ವೈರಿ(ಹ-ಸೈತಾನ)ಯನ್ನು ಮಾನವಕುಲವನ್ನು ಪರೀಕ್ಷೆಗಳಿಗೆ ಒಳಪಡಿಸಿ ಚಿತಾವಣೆ ನಡೆಸುವ ಒಬ್ಬ ದೇವತೆ ಎಂದು ವಿವರಿಸಲಾಗಿದೆ.[೩][೪] ಇತರ ಹಲವು ಧರ್ಮಗಳಲ್ಲೂ ಸಹ ದೆವ್ವಕ್ಕೆ ಸಮನಾದ ಒಂದು ತಂಟಲಮಾರಿ ದೆವ್ವ ಅಥವಾ ಪ್ರಲೋಭಕ ಸಂಕೇತಗಳಿವೆ. ದೆವ್ವದ ಆಧುನಿಕ ಕಲ್ಪನೆಯು, ಮಾನವರ ಕೀಳುಮಟ್ಟದ ಸ್ವ ಸ್ವಭಾವ ಅಥವಾ ಪಾಪಿತನವನ್ನು ಸಂಕೇತಿಸುವ ಪರಿಕಲ್ಪನೆಯನ್ನು ಒಳಗೊಂಡಿದೆ.

ಜನರು ದೆವ್ವದ ಪರಿಕಲ್ಪನೆಯನ್ನು ಸಾಮಾಜಿಕ ಹಾಗು ರಾಜಕೀಯ ಸಂಘರ್ಷಗಳಲ್ಲಿ ಬಳಕೆಮಾಡುವುದರ ಜೊತೆಗೆ ತಮ್ಮ ಎದುರಾಳಿಗಳು ದೆವ್ವದ ಪ್ರಭಾವಕ್ಕೆ ಒಳಗಾಗಿದ್ದಾರೆ ಅಥವಾ ದೆವ್ವಕ್ಕೆ ಸ್ವಇಚ್ಛೆಯಿಂದ ಬೆಂಬಲಿಸುತ್ತಿದ್ದಾರೆಂದು ವಾದಿಸುತ್ತಾರೆ. ದೆವ್ವದ ಕಲ್ಪನೆಯನ್ನು ತಪ್ಪು ಹಾಗು ಅಧಾರ್ಮಿಕವೆಂದು ಪರಿಗಣಿಸಲ್ಪಟ್ಟಿರುವ ವಿಷಯಗಳಿಗೆ ಇತರರು ಏಕೆ ನಂಬಿಕೆಯನ್ನು ಇರಿಸಿಕೊಂಡಿದ್ದಾರೆಂದು ವಿವರಿಸಲು ಬಳಕೆ ಮಾಡಲಾಗುತ್ತದೆ.

ಧಾರ್ಮಿಕ ಪರಿಗಣನೆ[ಬದಲಾಯಿಸಿ]

ಜೂಡೇಇಸಮ್(ಯಹೂದ್ಯ ಧರ್ಮ)[ಬದಲಾಯಿಸಿ]

ಜೂಡೇಇಸಮ್(ಯಹೂದ್ಯ ಧರ್ಮ)ನ ಮುಖ್ಯವಾಹಿನಿಯಲ್ಲಿ, ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂ ಧರ್ಮದಂತೆ ದೆವ್ವದ ಯಾವುದೇ ಕಲ್ಪನೆಯಿಲ್ಲ. ಹಿಬ್ರೂ ಭಾಷೆಯಲ್ಲಿ, ಬೈಬಲಿನ ಪದ ಹ-ಸೈತಾನ ಎಂಬುದು "ಸೈತಾನ" ಅಥವಾ ದಿ ಆಬ್ಸ್ಟಕಲ್ (ಅಡಚಣೆ) ಅಥವಾ "ದಿ ಪ್ರಾಸಿಕ್ಯೂಟರ್"(ಫಿರ್ಯಾದಿ) ಎಂಬ ಅರ್ಥವನ್ನೂ ಸಹ ನೀಡುತ್ತದೆ(ದೇವರೇ ಅಂತಿಮ ತೀರ್ಪುಗಾರನೆಂಬ ದೃಷ್ಟಿಕೋನವನ್ನು ಮನಗಾಣುವುದು).

ಹಿಬ್ರೂ ಅಪಾಕ್ರಿಫ[ಬದಲಾಯಿಸಿ]

ದಿ ಅಪಾಕ್ರಿಫ(ಹಳೆಯ ಒಡಂಬಡಿಕೆಯ ಕಾಂಡಗಳು) ಎಂಬ ಧಾರ್ಮಿಕ ಬರವಣಿಗೆಗಳನ್ನು ಸಾಮಾನ್ಯವಾಗಿ ಪವಿತ್ರ ಗ್ರಂಥವೆಂದು ಜೂಡೆಇಸಮ್ ಜೊತೆಗೆ ಕ್ರಿಶ್ಚಿಯನ್ ಧರ್ಮದ ಇಂದಿನ ಹಲವು ಪ್ರಾಟೆಸ್ಟಂಟ್ ಪಂಥಗಳು ಸ್ವೀಕಾರ ಮಾಡುವುದಿಲ್ಲ.

ಬುಕ್ ಆಫ್ ವಿಸ್ಡಮ್ ನಲ್ಲಿ, ದೆವ್ವವು ಜಗತ್ತಿಗೆ ಸಾವೆಂಬ ಕಲ್ಪನೆಯನ್ನು ಪರಿಚಯಿಸಿದ ಸಂಕೇತವೆಂದು ಹೇಳಲಾಗುತ್ತದೆ.[೫]

ಸ್ಲಾವೊನಿಕ್ ಬುಕ್ ಆಫ್ ಎನೋಚ್ ಎಂದು ಕರೆಯಲ್ಪಡುವ 2nd ಬುಕ್ ಆಫ್ ಎನೋಚ್, ಸಟನೆಲ್ ಎಂಬ ಒಂದು ವಾಚರ್ ಗ್ರಿಗೊರಿ(ಬಹಿಷ್ಕೃತ ದೇವತೆ)ಯ ಬಗ್ಗೆ ಉಲ್ಲೇಖಗಳನ್ನು ಒಳಗೊಂಡಿದೆ.[೬] ಇದು ಅನಿಶ್ಚಿತ ದಿನಾಂಕ ಹಾಗು ಅನಾಮಧೇಯ ಬರಹಗಾರಿಕೆಯ ಒಂದು ಸ್ಯೂಡೋಪಿಗ್ರ್ಯಾಫಿಕ್(ಖೋಟ ಸಾಹಿತ್ಯಕೃತಿ)ಕೃತಿ. ಗ್ರಂಥವು ಸಟನೆಲ್, ಗ್ರಿಗೊರಿಯ ರಾಜಕುಮಾರನೆಂದು ವಿವರಿಸುತ್ತದೆ, ಈತನನ್ನು ಸ್ವರ್ಗದಿಂದ ಹೊರಹಾಕಲಾಗುತ್ತದೆ[೭] ಹಾಗು ಈ ದುಷ್ಟ ಶಕ್ತಿಯು "ಸದ್ಗುಣ" ಹಾಗು "ಪಾಪದ" ನಡುವಿನ ವ್ಯತ್ಯಾಸವನ್ನು ಅರಿತಿರುತ್ತದೆ.[೮] ಇದನ್ನು ಹೋಲುವ ಮತ್ತೊಂದು ಕತೆಯನ್ನು 1 ಎನೋಚ್ ಪುಸ್ತಕದಲ್ಲಿ ಕಾಣಬಹುದಾಗಿದೆ; ಆದರೆ, ಈ ಪುಸ್ತಕದಲ್ಲಿ ಗ್ರಿಗೊರಿಯ ಮುಖಂಡನನ್ನು ಸೆಮ್ಜಾಜ ಎಂದು ಕರೆಯಲಾಗಿದೆ.

ಅಪಾಕ್ರಿಫಲ್ ಸಾಹಿತ್ಯದಲ್ಲಿ, ಸೈತಾನ, ದೇವತೆಗಳ ಒಂದು ಸಮೂಹವನ್ನು ಆಳುತ್ತಾನೆ.[೯] ಇಸ್ಸಾಕ್‌ನನ್ನು ಬಲಿ ಕೊಡುವ ಮೂಲಕ ಅಬ್ರಹಾಂನನ್ನು ಪರೀಕ್ಷೆಗೆ ಒಳಪಡಿಸುವಂತೆ ದೇವರನ್ನು ಪ್ರೇರೇಪಿಸಿದ ಮಾಸ್ಟೆಮ ಸಹ ಹೆಸರು ಹಾಗು ಸ್ವಭಾವದಲ್ಲಿ ಸೈತಾನನ ತದ್ರೂಪವಾಗಿದ್ದಾನೆ.[೧೦]

ಹದಿನೆಂಟನೆ ಶತಮಾನದ ಚಾಸಿಡಿಕ್ ಯಹೂದಿ ಗಳಿಗೆ, ಬಾಲ್ ದಾವರ್ ಹ-ಸೈತಾನ ನಾಗಿದ್ದ.[೧೧] ಬುಕ್ ಆಫ್ ಎನೋಚ್ ಸಟರಿಯಲ್ ಬಗ್ಗೆ ಉಲ್ಲೇಖಗಳನ್ನು ಒಳಗೊಂಡಿದೆ, ಇದನ್ನು ಸಟನಿಯಲ್ ಹಾಗು ಸಟನ್'ಎಲ್ ಎಂದೂ ಸಹ ಪರಿಗಣಿಸಲಾಗುತ್ತದೆ(ಪದದ ವ್ಯುತ್ಪತ್ತಿಯು ಬ್ಯಾಬಿಲೋನಿಯನ್ ಉಗಮದಷ್ಟು ಹಳೆಯದಿದೆ). ಇದೆ ರೀತಿಯಾದ ಪದದ ಸರಿಯಾದ ಅಕ್ಷರ ಕ್ರಮವು ಅವನನ್ನು ಸ್ವರ್ಗದಿಂದ ಹೊರಹಾಕುವ ಮುಂಚೆ ಅವನ ದೇವಯೋಗ್ಯರಾದ ಸಹೋದರರ ಹೆಸರುಗಳಲ್ಲಿ ಬಿಂಬಿತವಾಗಿದೆ ಮೈಕಲ್, ರಾಫಲ್, ಯುರಿಯೆಲ್ ಹಾಗು ಗೇಬ್ರಿಯಲ್.

ಕ್ರೈಸ್ತ ಧರ್ಮ[ಬದಲಾಯಿಸಿ]

ದಿ ಟೆಂಪ್ಟೆಷನ್ ಆಫ್ ಕ್ರೈಸ್ಟ್ ನಲ್ಲಿ ಚಿತ್ರಣಗೊಂಡ ದೆವ್ವದ ರೂಪ, ಅರಿ ಸ್ಚೆಫ್ಫೆರ್, 1854.

ಕ್ರೈಸ್ತ ಧರ್ಮದ ಮುಖ್ಯವಾಹಿನಿಯಲ್ಲಿ ದೆವ್ವವು ಸೈತಾನ ರೂಪದಲ್ಲಿ ಕಂಡುಬಂದರೆ ಕೆಲವೊಂದು ಬಾರಿ ಲೂಸಿಫರ್ ರೂಪದಲ್ಲಿ ಕಾಣಲಾಗುತ್ತದೆ, ಆದಾಗ್ಯೂ ಕೆಲವು ವಿದ್ವಾಂಸರು ಇಸೈಯಾ 14:12ನಲ್ಲಿ ಲೂಸಿಫರ್ ಬಗ್ಗೆ ಉಲ್ಲೇಖವನ್ನು ಗುರುತಿಸುತ್ತಾರೆ ಅಥವಾ ಬ್ಯಾಬಿಲೋನಿಯನ್ ರಾಜನಿಗೆ ಮಾರ್ನಿಂಗ್ ಸ್ಟಾರ್ ಉಲ್ಲೇಖವನ್ನು ಗುರುತಿಸುತ್ತಾರೆ.[೧೨] ಹಲವು ಆಧುನಿಕ ಕ್ರೈಸ್ತರು, ದೆವ್ವವನ್ನು ಒಂದು ದೇವತೆಯೆಂದು ಪರಿಗಣಿಸುತ್ತಾರೆ. ಈ ದೇವತೆಯು, ಮೂರನೇ ಒಂದು ಭಾಗದಷ್ಟು ದೇವತಾ ಸಮುದಾಯಗಳ(ಅಸುರ ದೈತ್ಯರು) ಜೊತೆಗೆ ಸೇರಿಕೊಂಡು ದೇವರ ವಿರುದ್ಧ ದಂಗೆ ಎದ್ದಿತು. ಇದರ ಪರಿಣಾಮವಾಗಿ ಈ ದೇವತೆಯನ್ನು ಲೇಕ್ ಆಫ್ ಫೈರ್ ನಲ್ಲಿ ಶಿಕ್ಷೆ ವಿಧಿಸಲಾಯಿತು. ಈ ದೇವತೆಯು ಮಾನವಕುಲದ ಎಲ್ಲರನ್ನು ದ್ವೇಷಿಸುತ್ತಾನೆಂದು ವಿವರಿಸಲಾಗಿದೆ, ಅಥವಾ ಇನ್ನೂ ನಿಖರವಾಗಿ ಹೇಳುವುದಾದರೆ ಸೃಷ್ಟಿಯನ್ನು ದ್ವೇಷಿಸುವುದು, ದೇವರಿಗೆ ವಿರುದ್ಧವಾಗಿರುವುದು, ಮಿಥ್ಯಾಭಾವನೆಯನ್ನು ವ್ಯಾಪಕವಾಗಿ ಹರಡುವುದು ಹಾಗು ಮಾನವಕುಲದ ಆತ್ಮಗಳಿಗೆ ಸಂಪೂರ್ಣ ಹಾನಿ ಉಂಟುಮಾಡುವುದು. ಬೈಬಲ್ ನಲ್ಲಿ ಬರುವ ದೆವ್ವವನ್ನು ಇತರ ಕ್ರೈಸ್ತರು, ಮಾನವನ ಪಾಪ ಹಾಗು ಪ್ರಲೋಭನೆ ಹಾಗು ದೇವರನ್ನು ವಿರೋಧಿಸುವ ಯಾವುದೇ ಮಾನವ ವ್ಯವಸ್ಥೆಗೆ ಸಾಂಕೇತಿಕವಾಗಿ ಸೂಚಿತವಾಗಿದೆಯೆಂದು ಪರಿಗಣಿಸುತ್ತಾರೆ.

ಸೈತಾನನನ್ನು ಸಾಮಾನ್ಯವಾಗಿ ಸರ್ಪದ ರೂಪದಲ್ಲಿ ಗುರುತಿಸಲಾಗುತ್ತದೆ. ಈ ಸರ್ಪವು ಈವ್ ಗೆ ನಿಷೇಧಿತ ಹಣ್ಣನ್ನು ತಿನ್ನಲು ಮನವೊಲಿಸುತ್ತದೆ,ಹೀಗಾಗಿ ಸೈತಾನನ್ನು ಸಾಮಾನ್ಯವಾಗಿ ಒಂದು ಸರ್ಪದ ರೂಪದಲ್ಲಿ ಬಿಂಬಿಸಲಾಗಿದೆ. ಈ ಗುರುತು ಆಡಂ ಹಾಗು ಈವ್‌ನ ನಿರೂಪಣೆಯಲ್ಲಿ ಕಂಡುಬರದಿದ್ದರೂ ಸಹ, ಈ ಉಲ್ಲೇಖವು, ಬುಕ್ ಆಫ್ ರಿವಿಲೇಶನ್‌ನ ರಚನೆಯ ಸಂದರ್ಭದಲ್ಲಿ ಕಂಡುಬರುತ್ತದೆ, ಇದರ ಪ್ರಕಾರ ಸೈತಾನನನ್ನು ಒಂದು ಸರ್ಪವೆಂದು ನಿರ್ದಿಷ್ಟವಾಗಿ ಗುರುತಿಸಲಾಗಿದೆ(Rev. 20:2).

ಬೈಬಲ್ಬುಕ್ ಆಫ್ ರಿವಿಲೇಶನ್ ನಲ್ಲಿ ದೆವ್ವವನ್ನು "ದಿ ಡ್ರ್ಯಾಗನ್" ಹಾಗು "ದಿ ಓಲ್ಡ್ ಸರ್ಪೆಂಟ್" ಎಂದು ಗುರುತಿಸಲಾಗಿದೆ 12:9, 20:2 ಸಹ ಸೈತಾನನನ್ನು ಗುರುತಿಸಿದೆ,"ಜಗತ್ತಿನ ರಾಜಕುಮಾರ"ನೆಂದು ಬುಕ್ ಆಫ್ ಜಾನ್12:31, 14:30ರಲ್ಲಿ ಗುರುತಿಸಲಾಗಿದೆ ;"ದಿ ಪ್ರಿನ್ಸ್ ಆಫ್ ದಿ ಪವರ್ ಆಫ್ ದಿ ಏರ್" ಎಂದು ಕರೆಯಲ್ಪಡುವ ಮೆರಿರಿಂ, ಹಾಗು ಬುಕ್ ಆಫ್ ಎಫೆಸಿಯನ್ಸ್2:2ನಲ್ಲಿ ಬರುವ "ದಿ ಸ್ಪಿರಿಟ್ ಥಟ್ ನೌ ವರ್ಕೆಥ್ ಇನ್ ದಿ ಚಿಲ್ಡ್ರನ್ ಆಫ್ ಡಿಸ್ ಒಬಿಡಿಯನ್ಸ್" ; ಹಾಗು 2 ಕಾರಿಂಥಿಯನ್ಸ್ 4:4ನಲ್ಲಿ ಬರುವ "ದಿ ಗಾಡ್ ಆಫ್ ದಿಸ್ ವರ್ಲ್ಡ್".[೧೩]. ಇದನ್ನು ಬುಕ್ ಆಫ್ ರಿವಿಲೇಶನ್ ನಲ್ಲಿ(ಉದಾಹರಣೆಗೆ[೧೪]) ಹಾಗು ದಿ ಟೆಂಪ್ಟರ್ ಆಫ್ ದಿ ಗಾಸ್ಪೆಲ್ಸ್ ನಲ್ಲಿ(ಉದಾಹರಣೆಗೆ [೧೫]) ಡ್ರ್ಯಾಗನ್‌ನ ರೂಪದಲ್ಲಿ ಗುರುತಿಸಲಾಗಿದೆ. .

ಬೆಲ್ಜಿಬಬ್, ಮೂಲತಃ ಒಂದು ಫಿಲಿಸ್ಟಿನ್ ದೇವರ ಹೆಸರಾಗಿದೆ(ನಿರ್ದಿಷ್ಟವಾಗಿ ಹೇಳುವುದಾದರೆ Ba‘al Zebûb ನಿಂದ ಬಂದ ಒಂದು ನಿಶ್ಚಿತ ಮಾದರಿಯ ಬಾಲ್, ಲಿಟ್. "ಲಾರ್ಡ್ ಆಫ್ ಫ್ಲೈಸ್") ಆದರೆ ಇದನ್ನು ಸೈತಾನ ನ ಒಂದು ಪರ್ಯಾಯವಾಗಿ ನ್ಯೂ ಟೆಸ್ಟಮೆಂಟ್ ನಲ್ಲಿ ಬಳಸಲಾಗಿದೆ. "ಬೆಲ್ಜೆಬೌಬ್" ನ ಒಂದು ಅಶುದ್ಧ ರೂಪಾಂತರವು ದಿ ಡಿವೈನ್ ಕಾಮಿಡಿ ಯಲ್ಲಿ ಕಂಡುಬರುತ್ತದೆ.

ಮುಖ್ಯವಾಹಿನಿಯಲ್ಲಿಲ್ಲದ ಇತರ ಕ್ರಿಶ್ಚಿಯನ್ ನಂಬಿಕೆಗಳಲ್ಲಿ(ಉದಾಹರಣೆಗೆ ಕ್ರಿಸ್ಟಡೆಲ್ಫಿನ್ಸ್ ಗಳ ನಂಬಿಕೆ) ಬೈಬಲ್ ನಲ್ಲಿ ಉಲ್ಲೇಖವಾಗುವ "ಸೈತಾನ" ಎಂಬ ಪದವು ಒಂದು ಮಾನವಾತೀತ ಜೀವಿಗೆ ಸೂಚಿತವಾಗಿದೆ ಎಂದು ಪರಿಗಣಿಸಲಾಗಿಲ್ಲ. ಆದರೆ ಇದು ಯಾವುದೇ "ವೈರಿಗೆ" ಹಾಗು ಮಾನವ ಪಾಪ ಹಾಗು ಪ್ರಲೋಭನೆಗೆ ಸಾಂಕೇತಿಕವಾಗಿ ಸೂಚಿಸಲಾಗಿದೆ.[೧೬]

ಇಸ್ಲಾಂ[ಬದಲಾಯಿಸಿ]

ಇಸ್ಲಾಂ ಧರ್ಮದಲ್ಲಿ ದೆವ್ವವನ್ನು ಇಬ್ಲಿಸ್ ಎಂದು ಕರೆಯಲಾಗಿದೆ(ಅರೇಬಿಕ್ ಭಾಷೆಯಲ್ಲಿ: ಶೈತಾನ್ , ಈ ಪದವು ದುಷ್ಟವಾದ ದೆವ್ವದಂತಹ ಸ್ವರೂಪಕ್ಕೆ ಬಳಕೆಯಾಗುತ್ತದೆ). ಖುರಾನ್ ನ ಪ್ರಕಾರ, ದೇವರು "ಹೊಗೆಯಾಡದ ಬೆಂಕಿಯಿಂದ" ಇಬ್ಲಿಸ್ ನ್ನು ಸೃಷ್ಟಿಸುತ್ತಾರೆ(ಇತರ ಎಲ್ಲ ಜಿನ್ನ್ ಗಳ ಜೊತೆ ಸೇರಿ) ಹಾಗು ಮಾನವನನ್ನು ಜೇಡಿ ಮಣ್ಣಿನಿಂದ ರೂಪಿಸುತ್ತಾರೆ. ಗರ್ವವಲ್ಲದೆ ದೆವ್ವದ ಪ್ರಾಥಮಿಕ ವೈಶಿಷ್ಟ್ಯತೆಯೆಂದರೆ, ಪುರುಷರ ಹಾಗು ಸ್ತ್ರೀಯರ ಮನಸ್ಸುಗಳಲ್ಲಿ ದುಷ್ಟ ಸೂಚನೆಗಳನ್ನು ನೀಡುವ ಶಕ್ತಿಯನ್ನು ಹೊರತುಪಡಿಸಿ ಇತರ ಯಾವುದೇ ಶಕ್ತಿಯಿರುವುದಿಲ್ಲ.

ಮುಸ್ಲಿಂ ಮತಧರ್ಮಶಾಸ್ತ್ರದ ಪ್ರಕಾರ, ಇಬ್ಲಿಸ್‌ನ್ನು ದೇವರ ಅನುಗ್ರಹದಿಂದ ಬಹಿಷ್ಕಾರ ಮಾಡಲಾಯಿತು. ಏಕೆಂದರೆ ಇಬ್ಲಿಸ್, ಮಾನವಕುಲದ ತಂದೆಯೆನಿಸಿದ್ದ ಆಡಂಗೆ ಗೌರವ ಸಲ್ಲಿಸದಿರುವ ಮೂಲಕ ದೇವರಿಗೆ ಅವಿಧೇಯತೆ ತೋರಿಸಿದ. ತನಗಿಂತ ಭಿನ್ನವಾಗಿ ಮಾನವನನ್ನು ಭೂಮಿಯು ಸೃಷ್ಟಿಸಿದೆ ಎಂಬ ಕಾರಣದಿಂದ ಅವನು ಆಡಂಗಿಂತ ತಾನು ಶ್ರೇಷ್ಠನೆಂದು ವಾದಿಸುತ್ತಿದ್ದ. ದೇವತೆಗಳನ್ನು ಕುರಿತು ಹೇಳುವುದಾದರೆ, ಅವರು ಆಡಂಗೆ ಶರಣಾಗಿ ತಮ್ಮ ಗೌರವವನ್ನು ಸಲ್ಲಿಸುವುದರ ಜೊತೆಗೆ ದೇವರಿಗೆ ತಮ್ಮ ವಿಧೇಯತೆಯನ್ನು ಮೆರೆದಿದ್ದರು. ಆದರೆ, ಮನುಷ್ಯ ತನಗಿಂತ ಕೀಳು ಎಂಬ ಅಚಲ ಅಭಿಪ್ರಾಯವನ್ನು ಹೊಂದಿದ್ದ ಇಬ್ಲಿಸ್, ಜೊತೆಗೆ ಇತರ ದೇವತೆಗಳಿಗೆ ನೀಡಿದ ಆಯ್ಕೆಸ್ವಾತಂತ್ರ್ಯಕ್ಕೆ ಭಿನ್ನವಾಗಿ, ಅವನು ದೇವರಿಗೆ ಅವಿಧೇಯನಾಗಿರಲು ಆಯ್ಕೆ ಮಾಡಿಕೊಂಡ. ಈ ಕಾರಣಕ್ಕೆ ಇವನು ದೇವರಿಂದ ಬಹಿಷ್ಕರಿಸಲ್ಪಟ್ಟ, ಈ ಸಂಗತಿಗೆ ಮಾನವಕುಲವೇ ಕಾರಣವೆಂದು ಇಬ್ಲಿಸ್ ಆಪಾದಿಸುತ್ತಾನೆ. ಆರಂಭದಲ್ಲಿ, ದೆವ್ವವು ಆಡಂನನ್ನು ವಂಚಿಸುವಲ್ಲಿ ಯಶಸ್ವಿಯಾಯಿತು. ಆದರೆ ಅದರ ಉದ್ದೇಶಗಳು ಸ್ಪಷ್ಟವಾಗಿ ತಿಳಿದ ಮೇಲೆ ಆಡಂ ಹಾಗು ಈವ್ ದೇವರ ಎದುರು ತಮ್ಮ ತಪ್ಪಿಗಾಗಿ ಪಶ್ಚಾತ್ತಾಪ ಪಡುತ್ತಾರೆ. ಈ ರೀತಿಯಾಗಿ ಅವರು ತಮ್ಮ ಅಪರಾಧಗಳಿಂದ ಮುಕ್ತಗೊಂಡು ದೇವರಿಂದ ಕ್ಷಮಿಸಲ್ಪಡುತ್ತಾರೆ. ದೇವರು ಇಬ್ಲಿಸ್ ಹಾಗು ಫೈರ್ಸ್ ಆಫ್ ಹೆಲ್ ಬಗ್ಗೆ ಅವರಿಗೆ ಒಂದು ಬಲವಾದ ಎಚ್ಚರಿಕೆಯನ್ನು ನೀಡುವುದರ ಜೊತೆಗೆ ಅವರಿಗೆ ಹಾಗು ಅವರ ಮಕ್ಕಳಿಗೆ (ಮಾನವಕುಲ) ಇಂದ್ರಿಯಗಳ ಮೇಲೆ ದೆವ್ವವು ಉಂಟುಮಾಡುವ ಕಪಟಗಳಿಂದ ದೂರ ಉಳಿಯುವಂತೆ ಹೇಳುತ್ತಾರೆ.

ಖುರಾನ್ ನ ಪಂಕ್ತಿಗಳ ಪ್ರಕಾರ,ಕಿಯಮಹ್ ಅಥವಾ ರೆಸರಕ್ಷನ್ ಡೇ(ಯೂಂ-ಉಲ್-ಕಿಯಾಮ )ಯ ತನಕ ಆಡಂನ ಮಕ್ಕಳನ್ನು (ಮಾನವಕುಲ)ವಂಚಿಸುವುದೇ ದೆವ್ವದ ಧ್ಯೇಯವಾಗಿರುತ್ತದೆ. ಇದಾದ ನಂತರ, ಅದನ್ನು ಹಾಗು ಅದರಿಂದ ವಂಚನೆಗೊಳಪಟ್ಟವರ ಜೊತೆಗೆ ಫೈರ್ಸ್ ಆಫ್ ಹೆಲ್ ಗೆ ದೂಡಲಾಗುತ್ತದೆ. ದೆವ್ವವನ್ನು ಜಿನ್ನ್ಗಳಲ್ಲಿ ಒಂದೆಂದೂ ಸಹ ಸೂಚಿಸಲಾಗುತ್ತದೆ, ಏಕೆಂದರೆ ಇವೆಲ್ಲವೂ ಸಹ ಹೊಗೆಯಾಡದ ಬೆಂಕಿಯಿಂದಲೇ ಸೃಷ್ಟಿಯಾಗಿವೆ. ಖುರಾನ್ ಇಬ್ಲಿಸ್ ನನ್ನು ದೇವರ ಶತ್ರುವೆಂದು ವರ್ಣಿಸುವುದಿಲ್ಲ, ಏಕೆಂದರೆ ದೇವರು ತನ್ನ ಎಲ್ಲ ಸೃಷ್ಟಿಗಳಿಗಿಂತ ಸರ್ವೋತ್ಕೃಷ್ಟನಾಗಿದ್ದಾನೆ ಹಾಗು ಇಬ್ಲಿಸ್ ಆತನ ಸೃಷ್ಟಿಗಳಲ್ಲಿ ಕೇವಲ ಒಂದು ಭಾಗ. ಇಬ್ಲಿಸ್ ನ ಏಕೈಕ ಶತ್ರುವೆಂದರೆ ಮಾನವಕುಲ. ಮಾನವರು ದೇವರಿಗೆ ವಿಧೇಯತೆಯನ್ನು ತೋರುವುದನ್ನು ಅಡ್ಡಿಪಡಿಸುವುದೇ ಆತನ ಉದ್ದೇಶ. ಈ ರೀತಿಯಾಗಿ, ಮಾನವಕುಲವು ಸೈತಾನ ಉಂಟುಮಾಡುವ ಕೆಡುಕು ಹಾಗು ಅವರೊಳಗೆ ತುಂಬುವ ಪ್ರಲೋಭನೆಗಳ ವಿರುದ್ಧ ಹೋರಾಟ(ಜಿಹಾದ್ ) ನಡೆಸಬೇಕೆಂದು ಎಚ್ಚರಿಸುತ್ತದೆ. ಇದನ್ನು ಗೆದ್ದು ಬಂದವರು ಸ್ವರ್ಗದಲ್ಲಿ ಸ್ಥಾನ ಗಳಿಸಿಕೊಳ್ಳುವ ಮೂಲಕ ಪ್ರತಿಫಲವನ್ನು ಪಡೆಯುತ್ತಾರೆ(ಜನ್ನತ್ ಉಲ್ ಫಿರ್ದುಸ್ ). ಇದನ್ನು ಕೇವಲ ಸದಾಚಾರ ವರ್ತನೆಯ ಮೂಲಕ ಮಾತ್ರ ಹೊಂದಬಹುದಾಗಿದೆ.

ಬಹಾಯಿ ಮತ[ಬದಲಾಯಿಸಿ]

ಬಹಾಯಿ ಮತ ದಲ್ಲಿ ದೆವ್ವವೆಂಬ ಕೆಡುಕನ್ನು ಉಂಟುಮಾಡುವ ಯಾವುದೇ ಮಾನವಾತೀತ ಅಸ್ತಿತ್ವವಿಲ್ಲ.[೧೭] ಮಾನವ ಜೀವಿಗಳು ಇಚ್ಛಾ ಸ್ವಾತಂತ್ರ್ಯವನ್ನು ಪಡೆದಿರುತ್ತಾರೆ, ಹೀಗಾಗಿ ಅವರು ದೇವರೆಡೆಗೆ ಹಾಗು ಆಧ್ಯಾತ್ಮಿಕ ಗುಣಗಳನ್ನು ಬೆಳೆಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿರುತ್ತಾರೆ ಅಥವಾ ಬದಲಾಗಿ ತಮ್ಮದೇ ಆದ ಆಸೆ ಆಕಾಂಕ್ಷೆಗಳಲ್ಲಿ ಮುಳುಗಿ ತಪ್ಪುಗಳನ್ನು ಎಸಗಬಹುದು. ಜನರು ತಮ್ಮದೇ ಆದ ಆಸೆ ಆಕಾಂಕ್ಷೆಗಳಲ್ಲಿ ಮುಳುಗಿದ್ದರೆ, ಬಹಾಯಿ ಗ್ರಂಥಗಳು ಕೆಲವೊಂದು ಬಾರಿ ಅವರ ಕ್ರಿಯೆಗಳನ್ನು ವಿವರಿಸಲು ಸೈತಾನನನ್ನು ಒಂದು ರೂಪಕಾಲಂಕಾರವಾಗಿ ಬಳಕೆ ಮಾಡುತ್ತದೆ.[೧೭] ಬಹಾಯಿ ಮತವು, ದೆವ್ವವನ್ನು "ಒತ್ತಾಯ ಮಾಡುವ ಆತ್ಮ" ಅಥವಾ "ಆತ್ಮದ ಕೆಳಮಟ್ಟ" ವೆಂದು ರೂಪಕಾಲಂಕಾರವಾಗಿ ಸಹ ವ್ಯಕ್ತಪಡಿಸುತ್ತದೆ. ಇದು ಪ್ರತಿ ವ್ಯಕ್ತಿಗಳಲ್ಲೂ ಇರುವ ಒಂದು ಸ್ವಯಂ-ಪ್ರವೃತ್ತಿ. ಈ ರೀತಿಯಾದ ಪ್ರವೃತ್ತಿಯನ್ನು ಬಹಾಯಿ ಗ್ರಂಥಗಳು ಸಾಮಾನ್ಯವಾಗಿ "ದಿ ಇವಿಲ್ ಒನ್" ಎಂದು ಸೂಚಿಸುತ್ತದೆ.[೧೮][೧೯]

ಯಾಜಿದಿಸಮ್[ಬದಲಾಯಿಸಿ]

ಇಂಡೋ-ಯುರೋಪಿಯನ್ ಅವಧಿಯಲ್ಲಿ ತಾತ್ಕಾಲಿಕವಾಗಿದ್ದ ಯಜಿದಿ ಗುಂಪುಗಳು ತಮ್ಮ ಮಂದಿರದಲ್ಲಿ ಪ್ರಧಾನ ಆರಾಧ್ಯದೈವವಾಗಿದ್ದ, ಮಾಲೆಕ್ ಟುಸ್‌ನನ್ನು ಪರ್ಯಾಯವಾಗಿ ಶೈತಾನ್ ಎಂದು ಕರೆಯುತ್ತಿದ್ದರು.[೨೦] ಆದಾಗ್ಯೂ, ಸೈತಾನನಿಗಿಂತ ಹೆಚ್ಚಾಗಿ, ಯಜಿದಿಸಮ್ ಪಂಥವನ್ನು ಮಧ್ಯ ಪ್ರಾಚ್ಯ ಧರ್ಮದ ಒಂದು ಪೂರ್ವ-ಇಸ್ಲಾಮಿ ಸಂಸ್ಕೃತಿಯ ಅವಶೇಷವೆಂದು ಅರ್ಥೈಸಿಕೊಳ್ಳಲಾಗುತ್ತದೆ, ಹಾಗು/ಅಥವಾ ಶಯ್ಖ್ ಆದಿ ಸ್ಥಾಪಿಸಿದ ಒಂದು ಗ್ಹುಲತ್ ಸೂಫಿ ಚಳವಳಿ. ಹೊರಜಗತ್ತಿನ ಮುಸ್ಲಿಮರು ಮೂಲತಃ ಸೈತಾನನೊಂದಿಗೆ ಕಲ್ಪಿಸಿದ ಸಂಬಂಧದ ಪರಿಣಾಮವಾಗಿ 19ನೇ-ಶತಮಾನದ ಯುರೋಪಿಯನ್ ಯಾತ್ರಿಕರು ಹಾಗು ಅಧಿಕೃತ ಬರಹಗಾರರಲ್ಲಿ ಆಸಕ್ತಿಯನ್ನು ಕೆರಳಿಸಿತು.

ನಿಯೋಪೇಗನಿಸಂ[ಬದಲಾಯಿಸಿ]

ಕ್ರೈಸ್ತ ಧರ್ಮವು ಸಾಧಾರಣವಾಗಿ ಪೇಗನ್ ಧರ್ಮಗಳು ಹಾಗು ವಾಮಾಚಾರವನ್ನು ಸೈತಾನನ ಪ್ರಭಾವವೆಂದು ಗುರುತಿಸುತ್ತವೆ. ಅರ್ಲಿ ಮಾಡರ್ನ್ ಪೀರಿಯಡ್ ನಲ್ಲಿ, ಚರ್ಚ್ ಆಪಾದಿತ ಮಾಟಗಾತಿಯರನ್ನು ಸೈತಾನನ ಜತೆಗೂಡಿ ತಂತ್ರವನ್ನು ಹೂಡಿದರೆಂದು ದೂಷಿಸಿತು. ಹಲವು ಆಧುನಿಕ ಸಂಪ್ರದಾಯವಾದಿ ಕ್ರಿಶ್ಚಿಯನ್ ಬರಹಗಾರರು, ಉದಾಹರಣೆಗೆ ಜ್ಯಾಕ್ ಚಿಕ್ಕ್ ಹಾಗು ಜೇಮ್ಸ್ ಡಾಬ್ಸನ್ ಇಂದಿನ ನಿಯೋಪೇಗನ್ ಜೊತೆಗೆ ವಾಮಾಚಾರದ ಧರ್ಮಗಳು ಸ್ಪಷ್ಟವಾಗಿ ಸೈತಾನೀಯವೆಂದು ಬಿಂಬಿಸುತ್ತಾರೆ.

ಕೆಲವು ನಿಯೋಪೇಗನ್ ರಿ ಕನ್ಸ್‌ಸ್ಟ್ರಕ್ಷನಿಸ್ಟ್ ಸಂಪ್ರದಾಯಗಳು ಸೈತಾನ ಅಥವಾ ದೆವ್ವವನ್ನು ಸಂಪೂರ್ಣವಾಗಿ ಗುರುತಿಸುತ್ತವೆ. ಆದಾಗ್ಯೂ, ಹಲವು ನಿಯೋಪೇಗನ್ ಗುಂಪುಗಳು ಕೆಲವು ವಿಧದ ಕೊಂಬುಳ್ಳ ದೇವತೆಯನ್ನು ಆರಾಧಿಸುತ್ತಾರೆ, ಉದಾಹರಣೆಗೆ ವಿಕ್ಕಾ ಧರ್ಮಕ್ಕೆ ಹೊಂದುವ ಗ್ರೇಟ್ ಗಾಡೆಸ್ಸ್. ಈ ದೇವತೆಗಳು ಸಾಮಾನ್ಯವಾಗಿ ಪೌರಾಣಿಕ ಸಂಕೇತಗಳಾದ ಸೆರ್ನುನ್ನೋಸ್ ಅಥವಾ ಪಾನ್ ನನ್ನು ಪ್ರತಿಬಿಂಬಿಸುತ್ತವೆ, ಹಾಗು ಕ್ರೈಸ್ತಧರ್ಮದಲ್ಲಿ ಬರುವ ದೆವ್ವದ ಕಲ್ಪನೆಗೆ ಯಾವುದೇ ಹೋಲಿಕೆಯಿದ್ದರೆ ಅದು ಕೇವಲ 19ನೇ ಶತಮಾನದಷ್ಟು ಮಾತ್ರ ಹಿಂದಿನದು. ಇದು ಸಾಹಿತ್ಯ ಹಾಗು ಕಲೆಯಲ್ಲಿ ಪಾನ್‌ಗೆ ನೀಡಿದ ಅಧಿಕ ಮಹತ್ವಕ್ಕೆ ಒಂದು ಕ್ರಿಶ್ಚಿಯನ್ ಪ್ರತಿಕ್ರಿಯೆಯಾಗಿದೆ. ಇದರ ಪರಿಣಾಮವಾಗಿ ಅವನ ಆಕೃತಿಯನ್ನು ದೆವ್ವವಾಗಿ ಮಾರ್ಪಡಿಸಲಾಯಿತು.[೨೧]

ನ್ಯೂ ಏಜ್ ಮೂವ್ಮೆಂಟ್[ಬದಲಾಯಿಸಿ]

ನ್ಯೂ ಏಜ್ ಚಳವಳಿಯಲ್ಲಿ ಭಾಗವಹಿಸಿದವರು ಸೈತಾನ, ದೆವ್ವ ಹಾಗು ಇತ್ಯಾದಿಗಳ ಬಗ್ಗೆ ವ್ಯಾಪಕವಾಗಿ ವಿವಿಧ ದೃಷ್ಟಿಕೋನವನ್ನು ಹೊಂದಿದ್ದರು. ಅಧಿಕೃತ ಕ್ರಿಶ್ಚಿಯಾನಿಟಿಯ ಕೆಲವು ಪ್ರಕಾರಗಳಲ್ಲಿ ಸೈತಾನ ಒಂದು ದುಷ್ಟಶಕ್ತಿಯಾಗಿ ಅಥವಾ ಕಡೇಪಕ್ಷ ಪಾಪ ಹಾಗು ಪ್ರಾಪಂಚಿಕತೆಯ ಒಂದು ರೂಪಾಲಂಕಾರವಾಗಿ ಉಳಿಯುತ್ತದೆ, ಆದರೆ ಬಹುವ್ಯಾಪಕವಾದ ಪ್ರವೃತ್ತಿಯೆಂದರೆ ಒಟ್ಟಾರೆಯಾಗಿ ಅದರ ಅಸ್ತಿತ್ವವನ್ನೇ ನಿರಾಕರಿಸುವುದು. ಮತ್ತೊಂದು ಕಡೆಯಲ್ಲಿ, ಲೂಸಿಫರ್, ಮೂಲ ರೋಮನ್ ತಾತ್ಪರ್ಯದಲ್ಲಿ "ಬೆಳಕನ್ನು-ತರುವವ" ಎಂದಾಗುತ್ತದೆ, ಸಾಂದರ್ಭಿಕವಾಗಿ ಕೆಲವು ಗುಂಪಿನ ಸಾಹಿತ್ಯದಲ್ಲಿ ಇವನು ಒಂದು ರೂಪಕಾಲಂಕಾರವಾಗಿ ಸೈತಾನ ಗಿಂತ ಸಂಪೂರ್ಣವಾಗಿ ವಿಭಿನ್ನತೆಯನ್ನು ಹೊಂದಿರುತ್ತಾನೆ, ಹಾಗು ದುಷ್ಟಶಕ್ತಿಗಳ ಯಾವುದೇ ಪ್ರಭಾವಕ್ಕೆ ಇವನು ಒಳಗಾಗಿರುವುದಿಲ್ಲ. ಉದಾಹರಣೆಗೆ, ತಿಆಸಫಿಯ ಸ್ಥಾಪಕಿ ಮ್ಯಾಡಮ್ ಬ್ಲಾವ್ಯಾಟ್ಸ್ಕಿ ತನ್ನ ಪತ್ರಿಕೆಯನ್ನು ಲೂಸಿಫರ್ ಎಂದು ಹೆಸರಿಸುತ್ತಾಳೆ. ಏಕೆಂದರೆ ಅದು "ಬೆಳಕನ್ನು ತರುತ್ತದೆ" ಎಂಬ ಉದ್ದೇಶವನ್ನು ಹೊಂದಿರುತ್ತಾಳೆ. ಹಲವು ನ್ಯೂ ಏಜ್ ನ ಆಧ್ಯಾತ್ಮಿಕ ಚಿಂತನೆಯ ಪರಂಪರೆಗಳು ಒಂದು ದ್ವೈತ ಸಿದ್ಧಾಂತವಲ್ಲದ ತತ್ತ್ವಗಳನ್ನು ಅನುಸರಿಸುತ್ತವೆ. ಈ ತತ್ತ್ವಗಳು ಕೆಡುಕನ್ನು ಒಂದು ಮೂಲಭೂತ ಶಕ್ತಿಯಾಗಿ ಗುರುತಿಸುವುದಿಲ್ಲ.

ತೀಯಿಸ್ಟಿಕ್ ಸೇಟನಿಸಂ ಅನ್ನು ಒಳಗೊಂಡಂತೆ ಕೆಲವು ಲೆಫ್ಟ್-ಹ್ಯಾಂಡ್ ಪಾಥ್ ವ್ಯವಸ್ಥೆಗಳ ಸಂಕೇತಗಳನ್ನು ಅಳವಡಿಸಿಕೊಂಡ ದಿ ಬ್ಯಾಫೋಮೆಟ್.

ಒಂದು ದ್ವೈತ ಸಿದ್ಧಾಂತದ ಮಾದರಿಯನ್ನು ಅನುಸರಿಸಿದರೂ ಸಹ, ಇದು ಯಿನ್ ಹಾಗು ಯಾಂಗ್ಎಂಬ ಚೈನೀಸ್ ವ್ಯವಸ್ಥೆಗೆ ಸಾಮಾನ್ಯವಾಗಿ ಸದೃಶವಾಗಿರುತ್ತವೆ. ಇದರಂತೆ ಒಳಿತು ಹಾಗು ಕೆಡುಕುಗಳು ಸ್ಪಷ್ಟವಾಗಿ ಒಂದು ಪರಸ್ಪರ ಪೂರಕ ಉಭಯತ್ವಗಳಾಗಿರುವುದಿಲ್ಲ. ಆಧ್ಯಾತ್ಮಿಕ ಚಿಂತನಾ ಪರಂಪರೆಗಳು ಒಳಿತು ಹಾಗು ಕೆಡುಕು ಅಥವಾ ಕತ್ತಲು ಹಾಗು ಬೆಳಕಿನ ನಡುವೆ ಒಂದು ಆಧ್ಯಾತ್ಮಿಕ ಯುದ್ಧಕ್ಕೆ ಒತ್ತು ನೀಡುತ್ತವೆ. ಇವುಗಳಲ್ಲಿ ರುಡೊಲ್ಫ್ ಸ್ಟೆಯಿನರ್, ಅಗ್ನಿ ಯೋಗ ಹಾಗು ಚರ್ಚ್ ಯುನಿವರ್ಸಲ್ ಅಂಡ್ ಟ್ರಿಯಂಫ್ಯಾಂಟ್ ತತ್ತ್ವಗಳನ್ನು ಒಳಗೊಂಡಿವೆ.

ಸೆಟಾನಿಸಂ[ಬದಲಾಯಿಸಿ]

ಕೆಲವು ಧರ್ಮಗಳು ದೆವ್ವವನ್ನು ಆರಾಧಿಸುತ್ತವೆ. ಇದು ಬಹುದೇವತಾ ಸಿದ್ಧಾಂತದ ಅಭಿಪ್ರಾಯದಲ್ಲೂ ಇರಬಹುದು. ಇದರಲ್ಲಿ "ದೇವರು", ಸೈತಾನ, ಹಾಗು ಇತರರು ಎಲ್ಲರೂ ದೇವತೆಗಳೇ ಜೊತೆಗೆ ಸೈತಾನ ಆದ್ಯತಾ ಸಂತ; ಅಥವಾ ಇದನ್ನು ಏಕದೈವವಾದದ ದೃಷ್ಟಿಕೋನದಿಂದಲೂ ಕಾಣಬಹುದು. ಇದರಲ್ಲಿ ದೇವರನ್ನು ಒಬ್ಬ ನಿಜವಾದ ದೇವರೆಂದು ಪರಿಗಣಿಸಲಾಗುತ್ತದೆ, ಆದರೆ ಅದೇನೇ ಇದ್ದರೂ ಇದನ್ನು ನಿರಾಕರಿಸುವಂತಿಲ್ಲ.

ಕೆಲವು ಭಿನ್ನತೆಗಳು ದೇವರು ಹಾಗು ದೆವ್ವದ ಅಸ್ತಿತ್ವವನ್ನು ಒಟ್ಟಾರೆಯಾಗಿ ನಿರಾಕರಿಸುತ್ತವೆ, ಆದರೆ ತಮ್ಮನ್ನು ತಾವು ಸೇಟನಿಸ್ಟ್ ಎಂದು ಕರೆದುಕೊಳ್ಳುತ್ತಾರೆ, ಉದಾಹರಣೆಗೆ ಆಂಟನ್ ಲವೇಯ್'ಸ್ ಚರ್ಚ್ ಆಫ್ ಸೆಟಾನ್. ಇದು ಸೈತಾನನನ್ನು ಮಾನವಕುಲದ ಮೂಲಭೂತ ಹಾಗು ಸ್ವಾಭಾವಿಕ ಸ್ಥಿತಿಯ ಸಂಕೇತವೆಂದು ಗುರುತಿಸುತ್ತದೆ.[೨೨]

ಹೆಚ್ಚಿನ "ಸೇಟನಿಕ್" ಸಿದ್ಧಾಂತಗಳು ನಿಜವಾದ ಸೇಟನಿಸ್ಟ್ ಗಳಿಂದ ಹುಟ್ಟಿಕೊಂಡಿಲ್ಲ, ಆದರೆ ಕ್ರೈಸ್ತರಿಂದ ಹುಟ್ಟಿಕೊಂಡಿದೆ. ಇದರಲ್ಲಿ ಪ್ರಸಿದ್ಧವಾದವುಗಳೆಂದರೆ ಅಸುರ ದೈತ್ಯರು ಹಾಗು ಮಂತ್ರವಾದಿಗಳನ್ನು ಸುತ್ತುವರಿದ ಮಧ್ಯಕಾಲೀನ ಜಾನಪದ ಅಧ್ಯಯನ ಹಾಗು ಮತಧರ್ಮಶಾಸ್ತ್ರ. ಒಂದು ತೀರ ಇತ್ತೀಚಿನ ಉದಾಹರಣೆಯೆಂದರೆ 1980ರಲ್ಲಿ ಉಂಟಾದ ಸೈತಾನ ಮತಾಚರಣೆಯ ದುರುಪಯೋಗದ ಭೀತಿ - ಮಿಚೆಲ್ಲೇ ರಿಮೆಂಬರ್ಸ್ ಎಂಬ ಜೀವನ ಚರಿತ್ರೆಯೊಂದಿಗೆ ಪ್ರಾರಂಭವಾದ ಇದು,ಮಕ್ಕಳ ದುರುಪಯೋಗ ಹಾಗು ಮಾನವರ ಬಲಿಯ ಬಗ್ಗೆ ಒಲವನ್ನು ಹೊಂದಿದ್ದ, ಸಮಾಜದ ಗಣ್ಯರು ಹುಟ್ಟುಹಾಕಿದ ಒಂದು ವ್ಯಾಪಕ(ಆಧಾರವಿಲ್ಲದ) ಕುತಂತ್ರವೆಂದು ಸೆಟನಿಸಂ ಬಗ್ಗೆ ವರ್ಣಿಸುತ್ತದೆ. ಈ ಪಂಥವು, ವಾಸ್ತವದಲ್ಲಿ ಸೈತಾನ ರೂಪದಲ್ಲಿ ಬಂದು ಆರಾಧನೆಯನ್ನು ಸ್ವೀಕರಿಸುತ್ತಾನೆಂದು ಸಾಧಾರಣವಾಗಿ ವಿವರಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಇತರ ಧರ್ಮಗಳಲ್ಲಿರುವ ಸದೃಶ ಕಲ್ಪನೆಗಳು[ಬದಲಾಯಿಸಿ]

ಝೊರೊಸ್ಟ್ರಿಅನಿಸಮ್(ಪಾರಸಿ ಧರ್ಮ)[ಬದಲಾಯಿಸಿ]

ಝೊರೊಆಸ್ಟರ್ ಖುದ್ದು ತಾವೇ ರಚಿಸಿದಂತಹ ಝೊರಾಸ್ಟ್ರಿಯನ್ ಅವೆಸ್ತಾ ದ ಅತ್ಯಂತ ಹಳೆಯ ಗ್ರಂಥವಾದ ಗಾಥಾಸ್ ನಲ್ಲಿ, ಕವಿ ಒಂದು ಪ್ರತ್ಯಕ್ಷವೈರಿಯ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡುವುದಿಲ್ಲ. ಅಹುರ ಮಜ್ದಾರ ಸೃಷ್ಟಿಯೇ "ಸತ್ಯ", ಆಶಾ . "ಸುಳ್ಳು"(ದ್ರುಜ್ ) ಎಂಬುದು ಕೇವಲ ಅವನತಿ ಅಥವಾ ಅವ್ಯಕ್ತತೆಯನ್ನು ಸ್ಪಷ್ಟಪಡಿಸುತ್ತದೆ, ಒಂದು ಅಸ್ತಿತ್ವವಾಗಿ ಅಲ್ಲ.

ನಂತರ, ಜುರ್ವನಿಸಮ್ (ಜುರ್ವನೈಟ್ ಝೊರಾಸ್ಟ್ರಿಯನಿಸಮ್)ನಲ್ಲಿ, ಅಹುರ ಮಜ್ದಾ ಹಾಗು ಪ್ರಧಾನ ದುಷ್ಟಶಕ್ತಿಯಾದ ಅಂಗ್ರ ಮೈನ್ಯು, 'ಕಾಲ'ದ ಮೂರ್ತರೂಪ ಜುರ್ವಾನ್ ನ "ಅವಳಿ" ಸಂತಾನ. 10ನೇ ಶತಮಾನದ ನಂತರ ಜುರ್ವಾನಿಸಮ್ ನ ಅಸ್ತಿತ್ವದ ಬಗ್ಗೆ ಯಾವುದೇ ಕುರುಹುಗಳಿಲ್ಲ.

ಇಂದು, ಭಾರತದಲ್ಲಿ ಪಾರ್ಸಿಗಳುಅಹುರ ಮಜ್ದಾನ 'ವಿನಾಶಕಾರಿ ಉದ್ಭವ'ವೆಂಬ, 19ನೇ ಶತಮಾನದ ಅಂಗ್ರ ಮೈನ್ಯು‌ನ ವ್ಯಾಖ್ಯಾನವನ್ನು ವ್ಯಾಪಕವಾಗಿ ಅಂಗೀಕರಿಸುತ್ತಾರೆ. ಖುದ್ದು ಮಜ್ದಾ ವಿರುದ್ಧ ಹೋರಾಟವನ್ನು ನಡೆಸುವ ಬದಲಿಗೆ ಅಂಗ್ರ ಮೈನ್ಯು, ಮಜ್ದಾ ನ 'ಸೃಷ್ಟಿಕಾರಕ ಉದ್ಭವ'ವಾದ ಸ್ಪೆನ್ಟಾ ಮೈನ್ಯು ವಿರುದ್ಧ ಹೋರಾಡುತ್ತಾನೆ.

ಹಿಂದು ಧರ್ಮ[ಬದಲಾಯಿಸಿ]

ಕ್ರೈಸ್ತಧರ್ಮ, ಇಸ್ಲಾಂ ಹಾಗು ಸಾರೋಆಸ್ಟ್ರಿಅನಿಸಮ್‌ಗೆ ಭಿನ್ನವಾಗಿ, ಹಿಂದೂ ಧರ್ಮವು ದೇವರಿಗೆ ವಿರುದ್ಧವಾಗಿ ಯಾವುದೇ ಕೇಂದ್ರ ದುಷ್ಟಶಕ್ತಿ ಅಥವಾ ಅಸ್ತಿತ್ವನ್ನು ಗುರುತಿಸುವುದಿಲ್ಲ. ಹಿಂದೂ ಧರ್ಮವು ತಮಸ್ಸಿನ ಗುಣದ ತಾತ್ಕಾಲಿಕ ಪ್ರಾಬಲ್ಯದಿಂದಾಗಿ ವಿವಿಧ ಜೀವಿಗಳು ಹಾಗು ಅಸ್ತಿತ್ವಗಳು(ಉದಾಹರಣೆಗೆ, ಅಸುರರು ) ದುಷ್ಟ ಕೆಲಸವನ್ನು ಮಾಡಿ,ಪ್ರಾಪಂಚಿಕ ಕಷ್ಟಗಳನ್ನು ಉಂಟುಮಾಡುತ್ತವೆಂದು ಗುರುತಿಸುತ್ತದೆ. ಮಾಯೆಯ ರಜಸ್ಸು ಹಾಗು ತಮಸ್ಸಿನ ಗುಣಗಳು ವಿಶೇಷವಾಗಿ ಅಬ್ರಹಮಿಕ್ ಕಲ್ಪನೆಯನ್ನು ಹೋಲುತ್ತದೆಂದು ಪರಿಗಣಿಸಲಾಗಿದೆ. ಇದು ಅಂತಿಮ ಭ್ರಮೆಯಾದ "ಪ್ರಕೃತಿ"ಯ ಯಾತನಾಮಯ ಭಾಗ. ಇದರಿಂದ ಮೈದಾಳಿದ ಸಿದ್ಧಾಂತವೇ ಅದ್ವೈತ(ದ್ವೈತವಲ್ಲದ್ದು). ಇದರಂತೆ ಒಳಿತು ಅಥವಾ ಕೆಡುಕೆಂಬ ಯಾವುದೇ ಕಲ್ಪನೆಗಳಿಲ್ಲ, ಇದು ಕೇವಲ ಆತ್ಮಸಾಕ್ಷಾತ್ಕಾರದ ವಿವಿಧ ಹಂತಗಳು.

ಒಂದು ರೀತಿಯಲ್ಲಿ ನೋಡಿದರೆ ಹಿಂದೂ ಧರ್ಮವು ವೈದೃಶ್ಯಗಳಿಗೆ ಸಾಕಷ್ಟು ಅವಕಾಶವನ್ನು ಒದಗಿಸುತ್ತದೆ. ದ್ವೈತ(ಡ್ಯೂಅಲಿಸಂ) ಕಲ್ಪನೆಯೂ ಸಹ ಇದೆ. ಇದರ ಪ್ರಕಾರ ಒಳಿತು ಹಾಗು ಕೆಡುಕಿನ ಪ್ರವೃತ್ತಿಗಳು ಪರಸ್ಪರ ಪ್ರಭಾವವನ್ನು ಹೊಂದಿರುತ್ತವೆ.[೨೩] ಒಬ್ಬ ಪ್ರಮುಖ ಅಸುರನೆಂದರೆ ರಾಹು, ಈತನ ಸ್ವಭಾವಗಳು ಹೆಚ್ಚುಕಡಿಮೆ ದೆವ್ವವನ್ನು ಹೋಲುತ್ತವೆ. ಆದಾಗ್ಯೂ, ಹಿಂದೂಗಳಲ್ಲಿ, ಹಾಗು ವಿಶೇಷವಾಗಿ ವೈಷ್ಣವರು, ವಿಷ್ಣುವಿನ ಒಂದು ಅವತಾರವು ಕೆಡುಕು ತನ್ನ ಅತ್ಯಂತ ಪ್ರಬಲ ಶಕ್ತಿಯನ್ನು ತೋರುವಾಗ ಅದನ್ನು ಸಂಹಾರ ಮಾಡುತ್ತದೆ. ದೆವ್ವದ ಪ್ರಭಾವ ಎಂಬುದಕ್ಕಿಂತ ಹೆಚ್ಚಾಗಿ ಒಂದು ಹಂತದವರೆಗೆ ಗುಣ ಹಾಗು ಕರ್ಮದ ಕಲ್ಪನೆಯೂ ಸಹ ಕೆಡುಕಿನ ಬಗ್ಗೆ ಒಂದು ಹಂತದವರೆಗೆ ವಿವರಣೆ ನೀಡುತ್ತವೆ.

ಇನ್ನೂ ನಿಖರವಾಗಿ ಹೇಳಬಹುದಾದರೆ, ಕೇವಲ ಅಸ್ತಿತ್ವದಲ್ಲಿರುವ ಸಂಗತಿಯೇ(ಸತ್ಯ)ಪರಮಾತ್ಮನೆಂದು ಹಿಂದೂ ತತ್ತ್ವವು ವಿವರಿಸುತ್ತದೆ. ಹೀಗಾಗಿ, ಎಲ್ಲ ಅಸುರ ಪ್ರವೃತ್ತಿಯು ನಿಕೃಷ್ಟವಾಗಿರುವುದರ ಜೊತೆಗೆ ಹೆಚ್ಚಾಗಿ ಮನಸ್ಸಿನ ಭ್ರಮೆಗಳಲ್ಲಿ ಅಸ್ತಿತ್ವದಲ್ಲಿರುತ್ತದೆ. ವಿಭಿನ್ನ ನಡತೆಯನ್ನು ಹೊಂದಿರುವ ಅಸುರರಲ್ಲಿ ಕೆಟ್ಟ ಪ್ರಚೋದನೆಗಳು ಹಾಗು ಉದ್ದೇಶಗಳು(ತಮಸ್ಸು) ತಾತ್ಕಾಲಿಕವಾಗಿ ಒಳಿತನ್ನು(ಸತ್ತ್ವ) ಮೀರಿಸುತ್ತವೆ. ವಿವಿಧ ಸ್ವರೂಪಗಳಾದ ಸಿದ್ಧ , ಗಂಧರ್ವ , ಯಕ್ಷ ಮುಂತಾದವರು ಮಾನವಕುಲಕ್ಕೆ ಅಸದೃಶವಾದ ಜೀವಿಗಳೆಂದು ಪರಿಗಣಿಸಲಾಗುವುದರ ಜೊತೆಗೆ ಮಾನವರಿಗಿಂತ ಕೆಲವು ವಿಧದಲ್ಲಿ ಮೇಲ್ಮಟ್ಟದಲ್ಲಿದ್ದಾರೆ.

ತಮಿಳುನಾಡಿನಲ್ಲಿ ಪ್ರಮುಖವಾಗಿರುವ ಹಿಂದೂ ಧರ್ಮದ ಅಧಿಕೃತ ಕವಲುಅಯ್ಯಾವಳಿಯ (ದ್ರಾವಿಡ ಸಂಸ್ಕೃತಿಯನ್ನು ಹೊಂದಿರುವ ಭಾರತದ ದಕ್ಷಿಣ ಭಾಗದಲ್ಲಿರುವ ಒಂದು ರಾಜ್ಯ) ಅನುಯಾಯಿಗಳು, ಹಿಂದೂ ಧರ್ಮದ ಇತರ ಶಾಖೆಗಳಿಗಿಂತ ಭಿನ್ನವಾಗಿ ಸೈತಾನ-ಮಾದರಿಯ ವ್ಯಕ್ತಿ, ಕ್ರೋನಿಯನ್ನು ನಂಬುತ್ತಾರೆ. ಅಯ್ಯಾವಳಿ ಪಂಥದ ಪ್ರಕಾರ, ಕ್ರೋನಿಯು ದುಷ್ಟಶಕ್ತಿಯ ಆದಿರೂಪದ ಸ್ಪಷ್ಟ ಸ್ಥಿತಿ ಹಾಗು ಇದು ಕೆಡುಕಿನ ಹಲವಾರು ರೂಪಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ, ಉದಾಹರಣೆಗೆ, ವಿವಿಧ ಅವಧಿಗಳಲ್ಲಿ ಅಥವಾ ಯುಗಗಳಲ್ಲಿ ಬರುವಂತಹ ರಾವಣ, ದುರ್ಯೋಧನ, ಮುಂತಾದವರು. ಇಂತಹ ಕೆಡುಕಿನ ರೂಪಗಳಿಗೆ ಪ್ರತಿಕ್ರಿಯೆಯಾಗಿ, ಅಯ್ಯ-ವಳಿ ಧರ್ಮದ ಅನುಯಾಯಿಗಳು, ದೇವರು,ವಿಷ್ಣುವಾಗಿರಾಮ ಹಾಗು ಕೃಷ್ಣಅವತಾರಗಳಲ್ಲಿ ಕಾಣಿಸಿಕೊಂಡು, ದುಷ್ಟ ಶಕ್ತಿಯನ್ನು ನಿಗ್ರಹಿಸುತ್ತಾರೆ. ಅಂತಿಮವಾಗಿ,ಏಕಂ ನಾರಾಯಣನ ಆತ್ಮದೊಂದಿಗೆ (ಜಗತ್ತಿನಲ್ಲಿ ಅವತರಿಸಲು ನಾರಾಯಣನು ಈ ರೂಪವನ್ನು ತಾಳುತ್ತಾನೆ) ಜಗತ್ತಿನಲ್ಲಿ ಅಯ್ಯ ವೈಕುನ್ಡರ್ ರೂಪದಲ್ಲಿ ಅವತಾರ ತಳೆದು ಕ್ರೋನಿಯ ಅಂತಿಮ ಅವತಾರವಾದ ಕಲಿಯನ್‌ನನ್ನು ನಾಶಮಾಡುತ್ತಾನೆ.

ಕಲಿ ಯುಗದ ಆತ್ಮವಾದ ಕ್ರೋನಿಯು ಈ ಯುಗದಲ್ಲಿ ಸರ್ವವ್ಯಾಪಿಯಾಗಿದ್ದಾನೆಂದು ಹೇಳಲಾಗಿದೆ. ಹೆಚ್ಚಿನ ಹಿಂದೂಗಳಂತೆ ಅಯ್ಯವಳಿಯ ಅನುಯಾಯಿಗಳು, ಪ್ರಸಕ್ತ ಯುಗ, ಕಲಿ ಯುಗವು ತಿರಸ್ಕಾರಯೋಗ್ಯವಾಗಿದೆ ಎಂದು ನಂಬುವುದಕ್ಕೆ ಒಂದು ಕಾರಣವಾಗಿದೆ.

ಬೌದ್ಧ ಧರ್ಮ[ಬದಲಾಯಿಸಿ]

ಬೌದ್ಧ ಧರ್ಮದಲ್ಲಿ ಒಂದು ದೆವ್ವದಂತಹ ಸಂಕೇತವನ್ನು ಮಾರ ಎಂದು ಕರೆಯುತ್ತಾರೆ. ಒಬ್ಬ ಪ್ರಲೋಭಕನಾದ ಈತ ಗೌತಮ ಬುದ್ಧನನ್ನೂ ಸಹ ಸುಂದರ ಸ್ತ್ರೀಯರನ್ನು ತೋರಿಸುವ ಮೂಲಕ ಅಪಮಾರ್ಗಕ್ಕೆ ಸೆಳೆಯಲು ಪ್ರಯತ್ನಿಸಿದ್ದ. ಹಲವು ದಂತಕಥೆಗಳಲ್ಲಿ ಈ ಸ್ತ್ರೀಯರು ಮಾರನ ಹೆಣ್ಣು ಮಕ್ಕಳೆಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮಾರ ಜಾಣ್ಮೆಯಿಲ್ಲದಿರುವಿಕೆ, ಆಧ್ಯಾತ್ಮಿಕ ಜೀವನದ "ಸಾವಿನ" ಸಾಕಾರರೂಪ. ಈತ ಮನುಷ್ಯರು ಆಧ್ಯಾತ್ಮಿಕ ಜೀವನವನ್ನು ರೂಢಿಸಿಕೊಳ್ಳುವುದಕ್ಕೆ ಭಂಗ ತರುತ್ತಾನೆ. ಈತ ಪ್ರಾಪಂಚಿಕತೆಯೆಡೆಗೆ ಮೋಹ ಉಂಟುಮಾಡುತ್ತಾನೆ ಅಥವಾ ನಿಷೇಧಾತ್ಮಕವನ್ನು ಧನಾತ್ಮಕವಾಗಿ ಕಾಣುವಂತೆ ಮಾಡುತ್ತಾನೆ. ಮಾರನ ಬಗೆಗಿರುವ ಮತ್ತೊಂದು ವ್ಯಾಖ್ಯಾನವೆಂದರೆ, ಈತ ಆಸೆ ಆಕಾಂಕ್ಷೆಗಳ ರೂಪದಲ್ಲಿ ಒಬ್ಬನ ಮನಸ್ಸಿನಲ್ಲಿ ಇರುವುದರ ಜೊತೆಗೆ ವ್ಯಕ್ತಿಯು ಸತ್ಯಶೋಧನೆ ಮಾಡದಂತೆ ತಡೆಗಟ್ಟುತ್ತಾನೆ. ಈ ರೀತಿಯಾಗಿ ಮಾರ ಒಂದು ಪ್ರತ್ಯೇಕ ಸ್ವರೂಪವಲ್ಲ ಆದರೆ ಒಬ್ಬನ ಮನಸ್ಸಿನಲ್ಲಿ ನೆಲೆಯೂರಿರುವ ಒಂದು ಭಾಗ, ಇದನ್ನು ಒಬ್ಬರು ಗೆಲ್ಲಲೇ ಬೇಕಾದ ಅವಶ್ಯಕತೆಯಿದೆ. ಬುದ್ಧನ ನಿತ್ಯ ಬದುಕಿನಲ್ಲಿ ದೆವ್ವದ ಪಾತ್ರವನ್ನು ದೇವದತ್ತನು ನಿರ್ವಹಿಸುತ್ತಾನೆ.

ಪ್ರಾಚೀನ ಈಜಿಪ್ಟ್‌[ಬದಲಾಯಿಸಿ]

ಔಸರಿಯನ್ ನಾಟಕದಲ್ಲಿ (ಗ್ರೀಕ್:ಒಸಿರಿಸ್) ಔಸರ್‌ನನ್ನು ಸೆಟ್ 13 ತುಂಡುಗಳಾಗಿ ಕತ್ತರಿಸಿದ್ದನ್ನು ನಾವು ಕಾಣುತ್ತೇವೆ. ಔಸೆಟ್(ಐಸಿಸ್) ಅವನ ಎಲ್ಲ ಅಂಗಾಂಗಗಳನ್ನು ಸಂಗ್ರಹಿಸಿ ಲಿಂಗವನ್ನು ರಕ್ಷಿಸುತ್ತಾನೆ. ಔಸರ್ ಹಾಗು ಔಸೆಟ್ ನ ಮಗನಾದ ಹೊರುಸ್ ತನ್ನ ಎದುರಾಳಿ ಸೆಟ್‌ನನ್ನು ತನ್ನ ತಂದೆಯ ಸಾವು ಹಾಗು ಅಂಗಚ್ಛೇದನಕ್ಕಾಗಿ ಸೇಡನ್ನು ತೀರಿಸಿಕೊಳ್ಳಲು ಎದುರಿಸುತ್ತಾನೆ. ಹೊರುಸ್, ಸೆಟ್‌ನ ವಿರುದ್ಧ ಜಯಶಾಲಿಯಾಗುತ್ತಾನೆ ಹಾಗು ಮೃತ್ಯುವಿನಿಂದ ಹೊರಬಂದ ಔಸರ್ ಪಾತಾಳಲೋಕದ ದೊರೆಯಾಗುತ್ತಾನೆ. ಒಳಿತು ಹಾಗು ಕೆಡುಕಿನ ನಡುವೆ ಜಗತ್ತಿನ ಸಂಘರ್ಷವೇ ಈ ನಾಟಕದ ವಸ್ತು, ಸೆಟ್ ಕೆಡುಕನ್ನು ಸಂಕೇತಿಸುತ್ತಾನೆ. ಪ್ರಾಚೀನ ಈಜಿಪ್ಷಿಯನ್ ಮತಧರ್ಮಶಾಸ್ತ್ರದಲ್ಲಿ ಸೆಟ್ ನ್ನು ಯಾವಾಗಲು ಒಂದು ಕೆಡುಕಿನ ಸಂಕೇತವೆಂದು ಕಾಣಲಾಗುತ್ತದೆಂಬ ಅರ್ಥವನ್ನು ನೀಡುವುದಿಲ್ಲ. ಪ್ರಾಚೀನ ಈಜಿಪ್ಷಿಯನ್ ಇತಿಹಾಸದಲ್ಲಿ ಹಲವು ಬಾರಿ ಬೇರೆ ಬೇರೆ "ಪಂಥದವರ" ನಡುವೆ ಸಂಘರ್ಷಗಳು ಉಂಟಾಗಿವೆ, ಇದು ಒಂದು ದೇವತೆಗೆ ಸಂಬಂಧಿಸಿ ಮತ್ತೊಂದು ದೇವತೆಯ ಮೌಲ್ಯಕಳೆಯುವುದಕ್ಕೆ ದಾರಿ ಮಾಡಿಕೊಟ್ಟಿದೆ.

ಬಹುದೇವತಾ ಸಿದ್ಧಾಂತಗಳಲ್ಲಿ ಇರುವಂತಹ ಹಲವು ಪಾತ್ರಗಳು ದೆವ್ವದ ಪಾಶ್ಚಿಮಾತ್ಯ ಕಲ್ಪನೆಯಿಂದ ಬೇರ್ಪಡಿಸಿಕೊಳ್ಳುತ್ತವೆ. ಅವುಗಳಲ್ಲಿ ಎಲ್ಲ ದೇವತೆಗಳು ನಿಕಟವಾಗಿ ಸಂಬಂಧವನ್ನು ಹೊಂದಿವೆ. ಈ ಪ್ರಕರಣದಲ್ಲಿ ಅಸಂಖ್ಯಾತ ಐತಿಹಾಸಿಕ ಗ್ರಂಥಗಳು, ಸೆಟ್ ಹೊರುಸ್‌ನ ಸೋದರಮಾವ ಅಥವಾ ಸಹೋದರನೆಂದು ಸೂಚಿಸುತ್ತವೆ. ಸೆಟ್‌ ಅಪಜಯದೊಂದಿಗೆ ನಾವು ಸೆಟ್‌ನ ವಿನಾಶ/ಹೋಲಿಕೆಯನ್ನು ಹೋರಸ್‌ನಲ್ಲಿ ಕಂಡು, ರೂಢಿಯಿಂದ ಮತ್ತೊಂದು ಪ್ರತ್ಯೇಕತೆಯನ್ನು ಕಾಣುತ್ತೇವೆ. ಇದರ ಫಲವಾಗಿ ಹೊರುಸ್ ನನ್ನು ಗಿಡುಗದ ತಲೆ ಹಾಗು (ಒಂದು ಅಜ್ಞಾತ ಪ್ರಾಣಿ) ಸೆಟ್‌ನ ತಲೆ ಎರಡನ್ನೂ ಹೊಂದಿದ್ದನೆಂದು ವಿವರಿಸಲಾಗಿದೆ. ಇದು (ಬೌದ್ಧ ಧರ್ಮದಂತೆ) ದ್ವಿವಿಭಜನೆಯ ಅಳಿವನ್ನು ಸಂಕೇತಿಸುತ್ತದೆ.

ವಿಶ್ವದ ಜನಪದ ಕಥೆಗಳು[ಬದಲಾಯಿಸಿ]

ಮೇಯರ್ ಹಾಲ್ ನ್ನು ಸಂದರ್ಶಿಸುತ್ತಿರುವಂತೆ ಚಿತ್ರಿಸಲಾದ ದೆವ್ವದ ಚಿತ್ರಣ

ಪಾಶ್ಚಿಮಾತ್ಯ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ, ದೆವ್ವವು ಜನಪ್ರಿಯ ಜನಪದ ಅಧ್ಯಯನಗಳಲ್ಲಿ ಪ್ರವೇಶವನ್ನು ಪಡೆದಿದೆ, ವಿಶೇಷವಾಗಿ ತನ್ನ ತಂಟಲಮಾರಿ ದೆವ್ವದ ಸಂಕೇತದಲ್ಲಿ ಕಾಣಿಸಿಕೊಂಡಿದೆ. ಈ ರೀತಿಯಾಗಿ, ಇದು ಐರ್ಲ್ಯಾಂಡ್, ನ್ಯೂಫೌಂಡ್ ಲ್ಯಾಂಡ್, ಇಟಲಿ ಹಾಗು ಯುನೈಟೆಡ್ ಕಿಂಗ್ಡಮ್ಪುರಾಣಗಳಲ್ಲಿ ಹಾಗು ಅಸಂಖ್ಯಾತ ಸಾಂಪ್ರದಾಯಿಕ ಜನಪದ ಕಥೆಗಳಲ್ಲಿ ಒಂದು ಸಂಕೇತವಾಗಿ ಕಂಡುಬಂದಿದೆ. ಈ ಜನಪದ ಕಥೆಗಳಲ್ಲಿ ಇದು ಸಾಮಾನ್ಯವಾಗಿ ಇತರ ವ್ಯಕ್ತಿಗಳ ಮೇಲೆ ಕುತಂತ್ರವನ್ನು ಅಥವಾ ಚತುರತೆಯನ್ನು ಎಸಗಲು ಪ್ರಯತ್ನಿಸುತ್ತದೆ. ಇಂತಹ ಕೆಲವು ಕಥೆಗಳಲ್ಲಿ, ದೆವ್ವವನ್ನು ಕೆಡುಕಿನ ಮೂರ್ತರೂಪಕ್ಕಿಂತ ಹೆಚ್ಚಾಗಿ ಒಂದು ಜನಪದ ದುಷ್ಟನಾಗಿ ಚಿತ್ರಿಸಲಾಗಿದೆ. ದೆವ್ವವು ಒಂದು ಅಸಂಖ್ಯಾತ ಸಂತರ ಕಥೆಗಳಲ್ಲಿ, ಅಥವಾ ಸಂತರ ಜನಪ್ರಿಯ ಕಥೆಯಾದ St. ಡನ್ಸ್ಟನ್ ನ ಕಥೆಗಳಲ್ಲಿ ಪ್ರಮುಖವಾಗಿ ಕಂಡು ಬರುತ್ತದೆ. ಇದರಲ್ಲಿ ಹಲವು ಕಥೆಗಳು ಅಧಿಕೃತ ಧಾರ್ಮಿಕ ಸೂತ್ರಗಳ ಹೊರಗೆ ಹುಟ್ಟಿಕೊಂಡಿವೆ. ಭೌಗೋಳಿಕ ಹೆಸರುಗಳ ವ್ಯುತ್ಪನ್ನವನ್ನು ವಿವರಿಸುವಂತಹ ಕಥೆಗಳಲ್ಲಿ ದೆವ್ವವು ಸಹ ಮತ್ತೆ ಮತ್ತೆ ನೆನಪಾಗುವ ಒಂದು ಸಂಕೇತವಾಗಿದೆ. ಇದು ಅದರ ಹೆಸರನ್ನು ನೈಸರ್ಗಿಕ ರಚನೆಗಳಾದ ದಿ ಡೆವಿಲ್'ಸ್ ಚಿಮ್ನಿಮುಂತಾದುವಕ್ಕೆ ನೀಡಿದೆ.

ಇತರ ಹೆಸರುಗಳು[ಬದಲಾಯಿಸಿ]

ಮತ್ತಷ್ಟು ಮಾಹಿತಿ: ಕ್ರೈಸ್ತ ಧರ್ಮದಲ್ಲಿರುವ ದೆವ್ವದ ಹೆಸರುಗಳು

ಅಸುರ ದೈತ್ಯರು[ಬದಲಾಯಿಸಿ]

ಕೆಲವೊಂದು ಧರ್ಮಗಳು ಹಾಗು ಸಂಪ್ರದಾಯಗಳಲ್ಲಿ ಈ ನಾಮಧೇಯಗಳನ್ನು ಪ್ರತ್ಯೇಕ ಅಸುರ ದೈತ್ಯರುಗಳು ಹೊಂದಿರುತ್ತಾರೆ. ಇತರರು ಈ ಹೆಸರುಗಳನ್ನೂ ದೆವ್ವದ ಬಾಹ್ಯ ರೂಪವೆಂದು ಗುರುತಿಸುತ್ತಾರೆ. ಪ್ರತ್ಯೇಕ ಅಸುರ ದೈತ್ಯರುಗಳೆಂದು ಯೋಚಿಸಿದರೂ ಸಹ, ಕೆಲವು ದೈತ್ಯರು ದೆವ್ವದ ನೇರ ನಿಯಂತ್ರಣದಲ್ಲಿರುತ್ತವೆಂದು ಭಾವಿಸಲಾಗಿದೆ. ಇದು ಕೇವಲ ದೆವ್ವವೆಂದು ಪರಿಗಣಿಸಲ್ಪಟ್ಟಿರುವುದರ ಜೊತೆಗೆ ಮಾತ್ರ ಗುರುತಿಸಲಾಗುತ್ತದೆ; ಅಸುರ ದೈತ್ಯರ ಪಟ್ಟಿಯು ಸಾಮಾನ್ಯವಾಗಿ ಹೆಚ್ಚಿನ ಪಟ್ಟಿಗಳನ್ನು ಹೊಂದಿರುತ್ತವೆ.

ಹೆಸರುಗಳು[ಬದಲಾಯಿಸಿ]

ಈ ಕೆಳಕಂಡ ಹೆಸರುಗಳು ಬಹುತೇಕವಾಗಿ ದೆವ್ವಗಳಿಗೆ ಸೂಚಿತವಾಗಿದೆ.

ದೆವ್ವದ ಧಾರ್ಮಿಕಾಚರಣೆಯ ಹೆಸರುಗಳ ಒಂದು ಪಟ್ಟಿಯನ್ನು ಜೆಫ್ಫ್ರಿ ಬರ್ಟನ್ ರಸ್ಸೆಲ್, ಲೂಸಿಫರ್, ದಿ ಡೆವಿಲ್ ಇನ್ ದಿ ಮಿಡಲ್ ಏಜಸ್ (ಕಾರ್ನೆಲ್ ಯುನಿವರ್ಸಿಟಿ ಪ್ರೆಸ್, 1986), ಪುಟ.128, ಗಮನಿಸಿ 76 ಆನ್ಲೈನ್. ನಲ್ಲಿ ಕಾಣಬಹುದು.

ದೆವ್ವದ ರೂಪದಲ್ಲಿ ದೇವರು[ಬದಲಾಯಿಸಿ]

ಹಲವಾರು ಧಾರ್ಮಿಕ ಬರಹಗಾರರು ಇತಿಹಾಸದುದ್ದಕ್ಕೂ, ಅಬ್ರಹಾಮಿಕ್ ಬೈಬಲ್ ಹಾಗು ಅದರ ಉತ್ತರಭಾಗಗಳಲ್ಲಿ ದೆವ್ವದ ಪಾತ್ರದ ಬಗ್ಗೆ ಸ್ಥಿರವಾಗಿತ್ತೆಂಬ ಕಲ್ಪನೆಯನ್ನು ಹೆಚ್ಚಿಸಿದ್ದಾರೆ. ಅವರು ಬೈಬಲ್ಲಿಗನುಗುಣವಾಗಿ ದೇವರು ಒಂದು ದೈವಿಕ ಶಕ್ತಿ ಎಂದು, ಇದು ವೇದನೆ, ಸಾವು, ಹಾಗು ವಿನಾಶವನ್ನು ಉಂಟುಮಾಡುವುದರ ಜೊತೆಗೆ ಮಾನವಕುಲಕ್ಕೆ ಪ್ರಚೋದನೆಗೆ ಅಥವಾ ಆದೇಶಕ್ಕೆ ಒಳಪಡಿಸಿ ಅಪಾಯಕಾರಿ ಕೆಲಸಗಳು ಹಾಗು ಜನಹತ್ಯೆ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಹೇಳುತ್ತಾರೆ.

ಈ ಬರವಣಿಗೆಗಳು ಬಿಬ್ಲಿಕಲ್ ದೇವರನ್ನು ವಿಧವಿಧವಾಗಿ "ಏ ಡೆಮಿರ್ಗಸ್", "ದುಷ್ಟ ದೇವತೆ", "ದಿ ಡೆವಿಲ್ ಗಾಡ್", "ಕತ್ತಲಿನ ರಾಜಕುಮಾರ", "ಎಲ್ಲ ಕೆಡುಕಿನ ಮೂಲ", "ದೈತ್ಯ ಅಸುರ", "ಕ್ರೂರ, ಕ್ರುದ್ಧ, ಯುದ್ಧಪ್ರಿಯ ಪ್ರಜಾಪೀಡಕ", "ಸೈತಾನ", "ದಿ ಡೆವಿಲ್", ಹಾಗು "ದಿ ಬುಕ್ ಆಫ್ ರೆವೆಲೆಶನ್‌ನ ಮೊದಲ ಪಶು" ಎಂದೆಲ್ಲ ಬಣ್ಣಿಸುತ್ತವೆ.

ಹಲವು ಬರಹಗಾರರು, ಅಬ್ರಹಾಮಿಕ್ ಗ್ರಂಥಗಳಲ್ಲಿ ಬರುವ ದೇವರು ಜೆಹೊವಃ(ತನಖ್ ), ನ್ಯೂ ಟೆಸ್ಟಮೆಂಟ್ ನಲ್ಲಿ ಬರುವ "ಟ್ರೂ ಗಾಡ್" ಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ. ಆದಾಗ್ಯೂ, ಇತರ ಬರಹಗಾರರು ಜೂಡೆಯಿಸಂ, ಕ್ರಿಶ್ಚಿಯಾನಿಟಿ, ಹಾಗು ಇಸ್ಲಾಂನ ಸಂಪೂರ್ಣ ದೈವೀಕತೆಯನ್ನು ಖಂಡಿಸಿದರು.

ಬರಹಗಾರರು ಬೈಬಲಿನ ಗ್ರಂಥದ ಹಲವು ಭಾಗಗಳಲ್ಲಿ ವಿವರಿಸಿದ ಹಾಗೆ ದೇವರ ಕ್ರಿಯೆಗಳು ದುಷ್ಟತನದಿಂದ ಅಥವಾ ದೆವ್ವದ ಮಾದರಿಯಲ್ಲಿ ಕೂಡಿದೆ ಎಂದು ಉಲ್ಲೇಖಿಸುತ್ತಾರೆ. ಹಲವು ಲೇಖಕರನ್ನು ಅವರ ಬರವಣಿಗೆಗಳಿಗಾಗಿ ತೀವ್ರವಾಗಿ ಶಿಕ್ಷಿಸಲಾಗುವುದರ ಜೊತೆಗೆ ಅವರ ಅನುಯಾಯಿಗಳನ್ನು ಕೊಂದು ಹಾಕಲಾಯಿತು.[ಸೂಕ್ತ ಉಲ್ಲೇಖನ ಬೇಕು]

ಇವನ್ನೂ ನೋಡಿ[ಬದಲಾಯಿಸಿ]

ಅಡಿ ಬರಹಗಳು[ಬದಲಾಯಿಸಿ]

  1. "ಡೆವಿಲ್", ಎನ್ಸೈಕ್ಲೋಪೀಡಿಯ ಬ್ರಿಟಾನಿಕ . 2007. ಎನ್ಸೈಕ್ಲೋಪೀಡಿಯ ಬ್ರಿಟಾನಿಕ ಆನ್ಲೈನ್. 29 ಜೂನ್ 2007 <http://www.britannica.com/eb/article-9030155 Archived 2007-12-17 ವೇಬ್ಯಾಕ್ ಮೆಷಿನ್ ನಲ್ಲಿ.>.
  2. Revelation 12:9
  3. 1Chronicles 21:1
  4. Job 1:11
  5. ಆದರೆ ದೆವ್ವದ ಮಾತ್ಸರ್ಯದಿಂದ, ಸಾವೆಂಬುದು ಜಗತ್ತಿಗೆ ಬಂದಿತು" - ಬುಕ್ ಆಫ್ ವಿಸ್ಡಮ್ II. 24
  6. 2 ಎನೋಚ್ 18:3
  7. "ಹಾಗು ನಾನು ಅವನನ್ನು ಅವನ ದೇವತೆಗಳ ಸಹಿತ ಮೇಲಿನಿಂದ ಎಸೆದೆ, ಹಾಗು ಅವನು ಆಧಾರವಿಲ್ಲದೆ ಸತತವಾಗಿ ಗಾಳಿಯಲ್ಲಿ ತೇಲುತ್ತಿದ್ದನು" - 2 ಎನೋಚ್ 29:4
  8. "ದೆವ್ವವೆಂಬುದು ಕೆಳ ಪ್ರದೇಶಗಳಲ್ಲಿರುವ ದುಷ್ಟ ಶಕ್ತಿ, ಒಬ್ಬ ಅಲೆಮಾರಿಯಾಗಿ ತನ್ನ ಹೆಸರು ಸೇಟನಿಲ್ ಎಂಬ ಕಾರಣಕ್ಕೆ ಸ್ವರ್ಗದಿಂದ ಸೋಟೋನ(ಅಡ್ಡದಾರಿ ಹಿಡಿ)ಹೋಗುತ್ತಾನೆ., ಈ ರೀತಿಯಾಗಿ ಈತ ದೇವತೆಗಳಿಂದ ಭಿನ್ನವಾಗುತ್ತಾನೆ. ಆದರೆ ಒಳಿತು ಹಾಗು ಕೆಡುಕಿನ ಸಂಗತಿಗಳ ಬಗ್ಗೆ ಅವನ ತಿಳಿವಳಿಕೆಯು ಅವನ ಸ್ವಭಾವದ ಕಾರಣದಿಂದ ಬದಲಾಗುವುದಿಲ್ಲ" - 2 ಎನೋಚ್ 31:4
  9. ಮಾರ್ಟಿರ್ಡಮ್ ಆಫ್ ಇಸೈಯಃ , 2:2; Vita Adæ et Evæ , 16)
  10. ಬುಕ್ ಆಫ್ ಜುಬಿಲೀಸ್, xvii. 18
  11. ದಿ ಡಿಕ್ಷನರಿ ಆಫ್ ಏಂಜಲ್ಸ್" ಗುಸ್ಟಾವ್ ಡೇವಿಡ್ಸನ್ ರಿಂದ, © 1967
  12. ಉದಾಹರಣೆಗೆ, ನಾವೆ'ಸ್ ಟಾಪಿಕಲ್ ಬೈಬಲ್, ಹೊಲ್ಮ್ಯಾನ್ ಬೈಬಲ್ ಡಿಕ್ಷನರಿ ಹಾಗು ಆಡಮ್ ಕ್ಲಾರ್ಕೆ ಕಾಮೆಂಟರಿ ಯಲ್ಲಿನ ದಾಖಲೆಗಳನ್ನು ನೋಡಿ.
  13. 2 Corinthians 2:2
  14. Rev. 12:9
  15. Mat.4:1
  16. "Do you Believe in a Devil? He is a saint". Retrieved 2007-05-29.
  17. ೧೭.೦ ೧೭.೧ Smith, Peter (2000). "satan". A concise encyclopedia of the Bahá'í Faith. Oxford: Oneworld Publications. p. 304. ISBN 1-85168-184-1.
  18. Bahá'u'lláh (1994) [1873-92]. "Tablet of the World". Tablets of Bahá'u'lláh Revealed After the Kitáb-i-Aqdas. Wilmette, Illinois, USA: Bahá'í Publishing Trust. p. 87. ISBN 0877431744.
  19. ಶೋಘಿ ಎಫ್ಫೆಂಡಿ ಕೋಟೆಡ್ ಇನ್Compilations (1983). Hornby, Helen (Ed.) (ed.). Lights of Guidance: A Bahá'í Reference File. Bahá'í Publishing Trust, New Delhi, India. p. 513. ISBN 8185091463. Archived from the original on 2019-12-16. Retrieved 2010-07-01.
  20. ಡ್ರೋವೇರ್, E.S. ದಿ ಪೀಕಾಕ್ ಏಂಜಲ್. ಬೀಯಿಂಗ್ ಸಮ್ ಅಕೌಂಟ್ ಆಫ್ ವೋಟರೀಸ್ ಆಫ್ ಏ ಸೀಕ್ರೆಟ್ ಕಲ್ಟ್ ಅಂಡ್ ದೆಯರ್ ಸ್ಯಾಂಚುರೀಸ್. ಲಂಡನ್: ಜಾನ್ ಮುರ್ರೆ, 1941.
  21. Hutton, Ronald (1999). Triumph of the Moon. Oxford: Oxford UniverUniversity Press. p. 46. ISBN.
  22. "ಚರ್ಚ್ ಆಫ್ ಸೈತಾನ ಅಫಿಷಿಯಲ್ ಸ್ಟೇಟ್ಮೆಂಟ್ ಆಫ್ ಬಿಲೀಫ್ಸ್". Archived from the original on 2012-07-01. Retrieved 2010-07-01.
  23. "ಹಿಂದೂ ಕಾನ್ಸೆಪ್ಟ್ ಆಫ್ ಗಾಡ್". Archived from the original on 2003-05-04. Retrieved 2010-07-01.
  24. "http://visindavefur.hi.is". Archived from the original on 2012-02-07. Retrieved 2010-07-01. {{cite web}}: External link in |title= (help)

ಆಕರಗಳು[ಬದಲಾಯಿಸಿ]

  • ಹೆಚ್ಚಿನ ಶೀರ್ಷಿಕೆಗಳಿಗೆ ಸೈತಾನನನ್ನು ಸಹ ನೋಡಿ
  • ದಿ ಆರಿಜಿನ್ ಆಫ್ ಸಟಾನ್ , ಎಲೈನೆ ಪಗೆಲ್ಸ್‌ರಿಂದ (ವಿಂಟೇಜ್ ಬುಕ್ಸ್, ನ್ಯೂಯಾರ್ಕ್ 1995) ಪುರಾತನ ಹಿಬ್ರೂ ಧಾರ್ಮಿಕ ಸಂಪ್ರದಾಯಕ್ಕೆ ಕಾನೂನುಬದ್ಧ ಉತ್ತರಾಧಿಕಾರಿಯಾಗಲು ಪೂರ್ವದ ಚರ್ಚ್ ಹಾಗು ಸಿನಗಾಗ್(ಯಹೂದ್ಯರ ಆರಾಧನಾ ಮಂದಿರ) ನಡುವೆ ನಡೆದ ಕಠಿಣ ಹೋರಾಟದ ಹಿನ್ನೆಲೆಯಲ್ಲಿ ಸೈತಾನನ ಪಾತ್ರದ ಬೆಳವಣಿಗೆ ಹಾಗು ದೆವ್ವದಂತೆ ನಿರೂಪಿತವಾಗಿರುವುದನ್ನು ವಿಚಾರ ಮಾಡಲಾಗಿದೆ.
ಸೈತಾನ ಹೇಗೆ ನಮ್ಮದೇ ದ್ವೇಷಗಳು ಹಾಗು ಕೆಡುಕುಗಳ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ಒಂದು ಸಂಕೇತವಾಗಿದೆ ಎಂಬುದರ ಜೊತೆಗೆ ನಮ್ಮ ಪ್ರೀತಿ ತುಂಬಿದ ಸ್ವಭಾವ ಹಾಗು ಭಯದಿಂದ ಕೂಡಿದ ಜಗಳಗಂಟಿ ಸ್ವಭಾವದ ನಡುವಿನ ಹೋರಾಟದ ಬಗ್ಗೆಯೂ ಈಕೆ ವಿಚಾರ ಮಾಡುತ್ತಾಳೆ. 
  • ದಿ ಓಲ್ಡ್ ಎನಿಮಿ: ಸೈತಾನ & ದಿ ಕಾಂಬ್ಯಾಟ್ ಮಿಥ್ , ನೀಲ್ ಫೊರ್ಸಿಥ್ ರಿಂದ( ಪ್ರಿನ್ಸ್‌ಟೌನ್‌, ನ್ಯೂ ಜರ್ಸಿ, 1987)ನಲ್ಲಿ ಸೈತಾನ ಹೇಗೆ ಪ್ರಾಚೀನ ಪೌರಾಣಿಕ ಸಂಪ್ರದಾಯಗಳಿಂದ ಹುಟ್ಟಿಬಂದ ಎಂಬುದನ್ನು ವಿವರಿಸುತ್ತದೆ. ಇದಲ್ಲದೆ ಸೈತಾನನನ್ನು ದುಷ್ಟ ಶಕ್ತಿಯ ಒಂದು ಪ್ರಧಾನ ಸಂಕೇತವೆಂಬುದಕ್ಕಿಂತ ಹೆಚ್ಚಾಗಿ "ದಿ ಕಾಂಬ್ಯಾಟ್ ಮಿಥ್" ನ ಸನ್ನಿವೇಶದಲ್ಲಿ ಕಥೆಯ ಒಂದು ನಿರೂಪಕ ಪಾತ್ರವಾಗಿ ತೋರಿಸಲು ಯತ್ನಿಸುತ್ತದೆ. ಫೋರ್ಸಿತ್, ದೆವ್ವದ ಕಥೆಯನ್ನು ಎಪಿಕ್ ಆಫ್ ಗಿಲ್ಗಮೇಶ್ ನಿಂದ ಹಿಡಿದು St. ಅಗಸ್ಟಿನ್ ನ ಬರವಣಿಗೆಗಳ ತನಕವೂ ದೆವ್ವದ ಕಥೆಯನ್ನು ಹೇಳುತ್ತಾರೆ.
  • ದಿ ಡೆವಿಲ್: ಪರ್ಸೆಪ್ಶನ್ಸ್ ಆಫ್ ಎವಿಲ್ ಫ್ರಮ್ ಆಂಟಿಕ್ವಿಟಿ ಟು ಪ್ರಿಮಿಟಿವ್ ಕ್ರಿಶ್ಚಿಯಾನಿಟಿ ಜೆಫ್ರಿ ಬರ್ಟನ್ ರಸ್ಸಲ್ ರಿಂದ(ಮೆರಿಡಿಯನ್, ನ್ಯೂಯಾರ್ಕ್ 1977), ಇದು "ದುಷ್ಟಶಕ್ತಿಯ ಮೂರ್ತರೂಪದ ಒಂದು ಇತಿಹಾಸ", ಸಂಗತಿಗಳನ್ನು ಸ್ಪಷ್ಟಪಡಿಸುವ ಕಾರಣಕ್ಕೆ, ಇವರು "ದಿ ಡೆವಿಲ್" ಎಂದು ಕರೆಯುತ್ತಾರೆ. ಸುಲಭವಾಗಿ ದೊರೆಯುವ ಹಾಗು ಕುತೂಹಲ ಕೆರಳಿಸುವ ಇದು, ಸಂಗತಿಗಳನ್ನು ಸಚಿತ್ರದ ಮೂಲಕ ವಿವರಿಸಲಾಗಿದೆ. ಇದು ದೆವ್ವದ ಕಲ್ಪನಾ ಇತಿಹಾಸದ ಬಗ್ಗೆ ನಾಲ್ಕು ಸಂಪುಟಗಳಲ್ಲಿ ಮೊದಲನೆಯದಾಗಿದೆ. ಅದರ ಮುಂದಿನ ಸಂಪುಟಗಳೆಂದರೆ, ಸಟಾನ್: ದಿ ಅರ್ಲಿ ಕ್ರಿಶ್ಚಿಯನ್ ಟ್ರೆಡಿಶನ್, ಲೂಸಿಫರ್: ದಿ ಡೆವಿಲ್ ಇನ್ ದಿ ಮಿಡಲ್ ಏಜಸ್, ಹಾಗು ಮೆಫಿಸ್ಟಾಫಿಲಿಸ್: ದಿ ಡೆವಿಲ್ ಇನ್ ದಿ ಮಾಡ್ರನ್ ವರ್ಲ್ಡ್.
  • ದಿ ಡೆವಿಲ್ ಇನ್ ಲೆಜೆಂಡ್ ಅಂಡ್ ಲಿಟರೇಚರ್ , ಮ್ಯಾಕ್ಸಿಮಿಲಿಯನ್ ರುಡ್ವಿನ್(ಓಪನ್ ಕೋರ್ಟ್, ಲಾ ಸಲ್ಲೇ, ಇಲ್ಲಿನೋಯಿಸ್, 1931, 1959), ಇದು "ಸೈತಾನನ ಲೌಕಿಕ ಹಾಗು ಪವಿತ್ರ ಸಾಹಸಗಳ" ಬಗೆಗಿನ ಒಂದು ಸಂಗ್ರಹ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Wikicommons

"https://kn.wikipedia.org/w/index.php?title=ದೆವ್ವ&oldid=1216097" ಇಂದ ಪಡೆಯಲ್ಪಟ್ಟಿದೆ