ದಾವಣಗೆರೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಾವಣಗೆರೆ: ಸೂರ್ಯಕಾಂತಿ ಹೊಲದ ದೃಶ್ಯ
ದಾವಣಗೆರೆ: ಸೂರ್ಯಕಾಂತಿ ಹೊಲದ ದೃಶ್ಯ
ದಾವಣಗೆರೆ: ದುರ್ಗಾದೇವಾಲಯದ ಎದುರಿನ ಜಾತ್ರೆಯ ದೃಶ್ಯ
ದಾವಣಗೆರೆ: ದುರ್ಗಾದೇವಾಲಯದ ಎದುರಿನ ಜಾತ್ರೆಯ ದೃಶ್ಯ
ದಾವಣಗೆರೆ: ದಾವಣಗೆರೆಯಲ್ಲಿ ಮುಹರ್ರಂ
ದಾವಣಗೆರೆ: ದಾವಣಗೆರೆಯಲ್ಲಿ ಮುಹರ್ರಂ
ದಾವಣಗೆರೆ: ಮುಂಜಾನೆಯಲ್ಲಿ ಕುಂದವಾಡ ಕೆರೆಯಿಂದ ದಾವಣಗೆರೆ ನಗರದ ವಿಹಂಗಮ  ದೃಶ್ಯ
ದಾವಣಗೆರೆ: ಮುಂಜಾನೆಯಲ್ಲಿ ಕುಂದವಾಡ ಕೆರೆಯಿಂದ ದಾವಣಗೆರೆ ನಗರದ ವಿಹಂಗಮ ದೃಶ್ಯ


ದಾವಣಗೆರೆ - ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆ, ಊರು. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಬಹಳ ವೇಗದಿಂದ ಬೆಳೆಯುತ್ತಿರುವುದು ಅಸಮಂಜಸವೇನಲ್ಲ. ದಾವಣಗೆರೆಯ ಮೊದಲಿನ ಹೆಸರು "ದವನಗಿರಿ" ಅದು ಕಾಲ ಕ್ರಮೇಣ ದಾವಣಾಗೆರೆ ಆಯಿತು

ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.

ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್, ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.


ಪರಿವಿಡಿ

[ಬದಲಾಯಿಸಿ] ಭೂಗೋಳ

ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಸುತ್ತುವರೆದ ಈ ಊರು, ಪ್ರಮುಖ ಪ್ರದೇಶ. ಬೆಂಗಳೂರಿನಿಂದ ಮುಂಬೈಗೆ ಹೋಗುವ ಯಾತ್ರಿಕರು ದಾವಣಗೆರೆ ಮೂಲಕವೇ ಹೋಗಬೇಕು. ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ 14° 28’ ರೇಖಾಂಶ ಮತ್ತು 75° 59’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 602.5 ಮೀ ಎತ್ತರದಲ್ಲಿದೆ.

[ಬದಲಾಯಿಸಿ] ಇತಿಹಾಸ

1997 ನೇ ಇಸವಿಯಲ್ಲಿ ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆ ಎಂದು ಘೋಷಿಸಲಾಯಿತು. ದಾವಣಗೆರೆ ಜಿಲ್ಲೆಯು ಆರು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದು ಪರಿಗಣಿಸಲ್ಪಡುತ್ತದೆ.

[ಬದಲಾಯಿಸಿ] ಪ್ರೇಕ್ಷಣೀಯ ಸ್ಥಳಗಳು

ಹರಿಹರತುಂಗಭದ್ರೆ ಮತ್ತು ಹರಿಹರೇಶ್ವರ ದೇವಾಲಯ, ಶಾಂತಿಸಾಗರ, ಕೊಂಡಜ್ಜಿಯ ಅರಣ್ಯಧಾಮ, ಬಾಗಳಿ ಕಲ್ಲೇಶ್ವರ ದೇವಾಲಯ, ನೀಲಗುಂದದ ದೇವಾಲಯಗಳು, ಸಂತೆಬೆನ್ನೂರಿನ ಪುಷ್ಕರಿಣಿ.ದೊಡ್ಡಬಾತಿ ಪವಿತ್ರವನ. ಕುಂದವಾಡ ಕೆರೆ

[ಬದಲಾಯಿಸಿ] ಪ್ರಾದೇಶಿಕ

ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ ೧೫, ೧೯೯೭ರಂದು ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ನಿರ್ಧಾರದಿಂದ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು, ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು.

[ಬದಲಾಯಿಸಿ] ದಾವಣಗೆರೆಯ ವಿವಿಧ ಭಾಗಗಳು

ದುಗ್ಗಮ್ಮನ ಪೇಟೆ, ಹಳೇ ಪೇಟೆ, ಗಡಿಯಾರ ಕಂಬ, ಹೊಂಡದ ಸರ್ಕಲ್, ವಿನೋಬನಗರ, ಪಿ.ಜೆ. ಬಡಾವಣೆ, ಎಂ.ಸಿ. ಕಾಲೋನಿ, ಆಂಜನೇಯ ಬಡಾವಣೆ, ಮಂಡಿ ಪೇಟೆ, ದೇವರಾಜ್ ಅರಸು ಬಡಾವಣೆ, ಹಗೇದಿಬ್ಬ ಸರ್ಕಲ್, ಗಾಂಧಿ ನಗರ, ವಿದ್ಯಾನಗರ, ಆಜಾದ್ ನಗರ, ಚಿತ್ರಗಾರ ಗಲ್ಲಿ, ಮ್ಯಾಸಬೇಡರ ಕೇರಿ, ಕುರುಬರ ಬೀದಿ, ರೈತರ ಬೀದಿ, ಅಕ್ಕಮಹಾದೇವಿ ರಸ್ತೆ, ಶ್ಯಾಮನೂರು ರಸ್ತೆ, ಹದಡಿ ರಸ್ತೆ, ನಿಟುವಳ್ಳಿ, ಲೇಬರ್ ಕಾಲೋನಿ, ಎಪಿಎಂಸಿ ಮಾರ್ಕೆಟ್, ನೀಲಮ್ಮನ ತೋಟ, ಶಿವಪ್ಪಯ್ಯ ಸರ್ಕಲ್, ಶಿವಯೋಗಿ ಸರ್ಕಲ್, ಲಾಯರ್ ರಸ್ತೆ, ಬೇತೂರು ರಸ್ತೆ, ಅಕ್ಕಮಹಾದೇವಿ ರಸ್ತೆ, ಬೆಣ್ಣೆ ಮಾರ್ಕೆಟ್, ಪ್ರವಾಸಿಮಂದಿರ ರಸ್ತೆ, ಹಳೇ ಅಂಡರ್ ಬ್ರಿಡ್ಜ್ ರಸ್ತೆ, ಮೀನು ಮಾರುಕಟ್ಟೆ, ಕೆ.ಟಿ. ಜಂಬಣ್ಣ ನಗರ, ಬಂದೂರ್ ಕ್ಯಾಂಪ್, ಅವರಗೆರೆ, ಶಿವಕುಮಾರ ಸ್ವಾಮಿ ಬಡಾವಣೆ, ವಿದ್ಯುತ್ ನಗರ, ಯಲ್ಲಮ್ಮ ನಗರ, ಹೈಸ್ಕೂಲ್ ಮೈದಾನ, ಮಾಮಾಸ್ ಜಾಯಿಂಟ್ ರಸ್ತೆ, ಟಿ.ವಿ. ಸ್ಟೇಷನ್, ಕಿರುವಾಡಿ ಬಡಾವಣೆ, ಕೆ.ಬಿ. ಬಡಾವಣೆ, ವಿಶ್ವೇಶ್ವರಯ್ಯ ಪಾರ್ಕ್, ಟ್ಯಾಂಕ್ ಪಾರ್ಕ್, ಡಾಂಗೆ ಪಾರ್ಕ್, ಸಿದ್ದಮ್ಮ ಪಾರ್ಕ್, ಗುಂಡಿ ಮಹಾದೇವಪ್ಪ ಸರ್ಕಲ್, ಅಶೋಕ ರಸ್ತೆ, ಶ್ರೀರಾಮ ಮಂದಿರ, ರಾಯರ ಮಠ, ವನಿತಾ ಸಮಾಜ ರಸ್ತೆ, ವಿದ್ಯಾರ್ಥಿ ಭವನ ರಸ್ತೆ, ಸ್ಟೇಡಿಯಂ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಮೆಡಿಕಲ್ ಕಾಲೇಜು ರಸ್ತೆ.

[ಬದಲಾಯಿಸಿ] ತಾಲ್ಲೂಕುಗಳು

ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳನ್ನು ತೋರಿಸುವ ನಕ್ಷೆ
ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳನ್ನು ತೋರಿಸುವ ನಕ್ಷೆ


[ಬದಲಾಯಿಸಿ] ಇವನ್ನೂ ನೋಡಿ

[ಬದಲಾಯಿಸಿ] ದಾವಣಗೆರೆ ವಿಶೀಷ್ಟ ತಿನಿಸುಗಳು

ಬೆಣ್ಣೆದೋಸೆ, ಖಾರ ಮಂಡಕ್ಕಿ, ಗುಲ್ಲಡಕಿ ಉ೦ಡಿ

[ಬದಲಾಯಿಸಿ] ಪ್ರಮುಖ ವಿದ್ಯಾಸಂಸ್ಥೆಗಳು

[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು

[ಬದಲಾಯಿಸಿ] ಹೊರಗಿನ ಸಂಪರ್ಕಗಳು

ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
ವೈಯಕ್ತಿಕ ಉಪಕರಣಗಳು