ತೆಲುಗು ಪಾಕಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೆಲುಗು ಪಾಕಪದ್ಧತಿ ಎಂಬುದು ಭಾರತದ ಆಂಧ್ರಪ್ರದೇಶ ರಾಜ್ಯದ ಜನರಿಂದ ಸೇವಿಸಲ್ಪಡುವ ನಾನಾಬಗೆಯ ಭಕ್ಷ್ಯಗಳಿಗೆ ಉಲ್ಲೇಖಿಸಲ್ಪಡುತ್ತದೆ. ಅನ್ನವು ತೆಲುಗು ಪಾಕಪದ್ಧತಿಯಲ್ಲಿನ ಪ್ರಧಾನ ಆಹಾರವಾಗಿದೆ. ವೈವಿಧ್ಯಮಯವಾದ ಮೇಲೋಗರಗಳು ಮತ್ತು ಲೆಂಟಿಲ್‌ ಎಸರುಗಳು (ಸೂಪ್‌ಗಳು) ಅಥವಾ ತಿಳಿಸಾರುಗಳೊಂದಿಗೆ ಅನ್ನವನ್ನು ಸಾಮಾನ್ಯವಾಗಿ ಸೇವಿಸಲಾಗುತ್ತದೆ. ಈ ಪಾಕಪದ್ಧತಿಯು ರಾಜ್ಯದಾದ್ಯಂತ ಬಹುತೇಕವಾಗಿ ಏಕರೂಪದಲ್ಲಿದೆಯಾದರೂ, ತೆಲಂಗಾಣ, ರಾಯಲಸೀಮಾ ಮತ್ತು ಆಂಧ್ರದಂಥ ವಿಭಿನ್ನ ಪ್ರದೇಶಗಳಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಕಾಣಬಹುದು.

ನಿಯತ ಭೋಜನ[ಬದಲಾಯಿಸಿ]

ಪೂಜಾ ಸಮಾರಂಭದ ನಂತರ ಬಡಿಸಲಾಗುವ ಭೋಜನ

ಆಂಧ್ರಪ್ರದೇಶದ ಒಂದು ವಿಶಿಷ್ಟ ಭೋಜನವು, ಈ ಕೆಳಕಂಡವುಗಳ ಪೈಕಿ ಕೆಲವನ್ನು ಅಥವಾ ಎಲ್ಲವನ್ನೂ ಸಾಮಾನ್ಯವಾಗಿ ಒಳಗೊಂಡಿರುತ್ತದೆ:

  • ಬೇಯಿಸಿದ ಅನ್ನ
  • ಪಪ್ಪು: ಇದು ಬೇಯಿಸಿದ ತೊಗರಿಬೇಳೆ / ಅರಹರ್ ಬೇಳೆಗಳಿಗಿರುವ ತೆಲುಗು ಪದವಾಗಿದೆ.
  • ಒಂದು ವ್ಯಾಪಕ ವೈವಿಧ್ಯತೆಯಿಂದ ಕೂಡಿದ ತರಕಾರಿಗಳಿಂದ ತಯಾರಿಸಲಾದ ಮೇಲೋಗರಗಳು. ವೇಪುಡು ಎಂಬುದು ತರಕಾರಿಯ ಒಂದು ಹುರಿದ/ಬಾಡಿಸಿದ ಮೇಲೋಗರವಾಗಿದೆ. ಮಾಂಸಾಹಾರಿ ಮೇಲೋಗರಗಳಲ್ಲಿ ಇವು ಸೇರಿವೆ: "ಕೋಡಿ " (ಚಿಕನ್‌), "ಮಟನ್‌ " (ಮೇಕೆಯ ಮಟನ್‌), "ಚೆಪಾ " (ಮೀನು), "ರೊಯ್ಯಾಲು " (ಸೀಗಡಿಗಳು) ಮತ್ತು "ಪೀಥಲ " (ಏಡಿ).*
  • ಪಚಡಿ (ಉಪ್ಪಿನಕಾಯಿಗಳು): ತಾಜಾ ಅಥವಾ ಸಂರಕ್ಷಿತ ಸ್ವರೂಪದಲ್ಲಿರುವ ಇವನ್ನು ಎಲ್ಲಾ ಬಗೆಯ ಹಣ್ಣುಗಳು ಮತ್ತು ತರಕಾರಿಗಳಿಂದ ತಯಾರಿಸಬಹುದು. ಉದಾಹರಣೆಗಳಲ್ಲಿ ಇವು ಸೇರಿವೆ: ಆವಕಾಯ (ಮಾವಿನಕಾಯಿಯ ಒಂದು ಮಸಾಲೆಭರಿತ ಉಪ್ಪಿನಕಾಯಿ) ಮತ್ತು ಪುಂಡಿಯಿಂದ ಮಾಡಲ್ಪಡುವ ಗೊಂಗುರಾ .
  • ಪುಲುಸು : ಇದು ತರಕಾರಿಯ ಒಂದು ಬಗೆಯ ಮೇಲೋಗರವಾಗಿದೆ; ಪಶ್ಚಿಮ ದೇಶಗಳಿಗೆ ಅತಿ ವಿಶಿಷ್ಟವಾಗಿ ರಫ್ತುಮಾಡಲಾಗುವ ಬಗೆಗಳಲ್ಲಿ ಇದು ಒಂದೆನಿಸಿದೆ.
  • ಚಾರು - ಹಗುರವಾಗಿರುವ ಒಂದು ತಿಳಿಯಾದ ಎಸರು ಅಥವಾ ಸಾರು.
  • ಪೆರುಗು (ಮೊಸರು) ಅಥವಾ ಮಜ್ಜಿಗ (ಮಜ್ಜಿಗೆ)
  • ಅಪ್ಪಡಮ್‌ (ಹಪ್ಪಳಗಳು)
  • ಸಿಹಿ ಭಕ್ಷ್ಯಗಳು.
  • ಬಾಳೆಹಣ್ಣುಗಳು ಅಥವಾ ಇತರ ಹಣ್ಣು
  • ತಾಮಲಪಾಕು-ವಕ್ಕಪೊಡಿ : ಇದನ್ನು ಕಿಲ್ಲಿ, ಬೀಡಾ ಅಥವಾ ಪಾನ್‌ ಎಂದೂ ಕರೆಯಲಾಗುತ್ತದೆ; ತಾಜಾ ವೀಳ್ಯದ ಎಲೆಗಳು, ಅಡಿಕೆ ಚೂರುಗಳು, ಮತ್ತು ಸುಣ್ಣದಿಂದ ಇದನ್ನು ತಯಾರಿಸಲಾಗುತ್ತದೆ.

ವಿಶಿಷ್ಟ ಭೋಜನಗಳಲ್ಲಿ ಪಪ್ಪುಚಾರು ಅಥವಾ ಪುಲುಸು ಮತ್ತು ಮಜ್ಜಿಗೆ ಅಥವಾ ಮೊಸರು ಕೂಡಾ ಸೇರಿರುತ್ತವೆ. ಹುಣಿಸೆಗೊಜ್ಜಿನ ಅನ್ನವನ್ನು (ಅಥವಾ ಪುಳಿಯೋಗರೆಯನ್ನು) ವಿಶೇಷ ಸಂದರ್ಭಗಳಲ್ಲಿ ಅಥವಾ ಪ್ರಯಾಣದ ಸಮಯದಲ್ಲಿ ಸೇವಿಸಲಾಗುತ್ತದೆ; ಇದು ಒಂದು ಅಥವಾ ಎರಡು ದಿನಗಳವರೆಗೆ ಹಾಳಾಗದೆ ಸಂರಕ್ಷಿಸಲ್ಪಟ್ಟಿರುತ್ತದೆ ಎಂಬುದೇ ಇದಕ್ಕೆ ಕಾರಣ.

ಆಂಧ್ರಪ್ರದೇಶವು ಮೆಣಸಿನ ಕಾಳಿನ ಓರ್ವ ಪ್ರಮುಖ ಉತ್ಪಾದಕನೂ ಆಗಿದ್ದು, ಇಲ್ಲಿನ ಸ್ಥಳೀಯ ಪಾಕಪದ್ಧತಿಯು ಇದನ್ನು ಒಳಗೊಂಡಿರುತ್ತದೆ. ಆಂಧ್ರಪ್ರದೇಶದ ರಾಜಧಾನಿ ನಗರವಾದ ಹೈದರಾಬಾದ್‌, ತನ್ನ ಹೈದರಾಬಾದಿ ಬಿರಿಯಾನಿ ಯಿಂದಾಗಿ ಪ್ರಸಿದ್ಧವಾಗಿದೆ.

ಉಪಾಹಾರದ ಆಹಾರಗಳು[ಬದಲಾಯಿಸಿ]

ಕೊಬ್ಬರಿ ಪಚಡಿ ಯೊಂದಿಗೆ ಬಡಿಸಲಾಗುವ ಪೆಸರಟ್ಟು
ರವಾ ದೋಸೆ

ಇಡ್ಲಿಗಳನ್ನು ಉಪಾಹಾರವಾಗಿ ಸಾಮಾನ್ಯವಾಗಿ ತಿನ್ನಲಾಗುತ್ತದೆ ಮತ್ತು ಇದರ ಜೊತೆಯ ವ್ಯಂಜನವಾಗಿ ಸಾಂಬಾರ್‌ ಮತ್ತು/ಅಥವಾ ತೆಂಗಿನಕಾಯಿ ಚಟ್ನಿಯನ್ನು ಬಳಸಲಾಗುತ್ತದೆ. ಸದರಿ ತೆಂಗಿನಕಾಯಿ ಚಟ್ನಿಯನ್ನು ತೆಲುಗು ಭಾಷೆಯಲ್ಲಿ ಕೊಬ್ಬರಿ ಪಚ್ಚಡಿ ಎಂದು ಕರೆಯಲಾಗುತ್ತದೆ. ಮೆಣಸಿನ ಪುಡಿ (ಕಾರಂಪೊಡಿ ) ಮತ್ತು ಕಡಲೇಕಾಯಿ ಚಟ್ನಿ ಮತ್ತು ಇತರ ಚಟ್ನಿಗಳನ್ನೂ ಸಹ ಇಡ್ಲಿಯೊಂದಿಗೆ ವ್ಯಂಜನವಾಗಿ ಬಳಸಲಾಗುತ್ತದೆ.

ಮಿನಪಟ್ಟನ್ನು (ದೋಸೆ) ಕೂಡಾ ಬೆಳಗಿನ ಉಪಾಹಾರದಲ್ಲಿ ಅಥವಾ ಸಂಜೆ ವೇಳೆಯಲ್ಲಿ ಸೇವಿಸಲಾಗುತ್ತದೆ. ಇದರ ವೈವಿಧ್ಯತೆಗಳಲ್ಲಿ "ಮಸಾಲೆ ದೋಸೆ, ರವಾ ದೋಸೆ, ಸಾದಾ ದೋಸೆ, ಮತ್ತು ರವಾ ಮಸಾಲೆ ದೋಸೆ" ಸೇರಿವೆ. ದಕ್ಷಿಣ ಭಾರತದ ಬೇರಾವುದೇ ಪ್ರದೇಶಗಳಲ್ಲಿ ಕಂಡುಬರುವ ದೋಸೆಗಳಿಗಿಂತ, ಆಂಧ್ರ-ಶೈಲಿಯ ದೋಸೆಗಳು ಹೆಚ್ಚು ಮಸಾಲೆಭರಿತವಾಗಿರುತ್ತವೆ ಮತ್ತು ಗರಿಗರಿಯಾಗಿರುತ್ತವೆ.

ಪೆಸರಟ್ಟು ಎಂಬುದು ಆಂಧ್ರದ ಪಾಕಪದ್ಧತಿಯಲ್ಲಿನ ಒಂದು ಪ್ರಮುಖ ತಿಂಡಿಯಾಗಿದೆ. ಪೆಸರಟ್ಟುಗಳು ದೋಸೆಗಳನ್ನು ಹೋಲುವಂತಿರುತ್ತವೆಯಾದರೂ, ಪೆಸರಟ್ಟುಗಳನ್ನು ಹೊಯ್ಯುವ ತಿಳಿಹಿಟ್ಟನ್ನು ಹೆಸರುಕಾಳುಗಳಿಂದ ತಯಾರಿಸಲಾಗಿರುತ್ತದೆ. ಇದು ತೆಳುವಾಗಿ ಮತ್ತು ಗರಿಗರಿಯಾಗಿದ್ದು, ಅದರ ಮೇಲೆ ಕೊಚ್ಚಿದ ಈರುಳ್ಳಿಗಳು, ಹಸಿರು ಮೆಣಸಿನಕಾಯಿಗಳು, ಶುಂಠಿ ಚೂರುಗಳು, ಮತ್ತು ಕೊಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಸಾಮಾನ್ಯವಾಗಿ ಅಲಂಕರಿಸಲಾಗುತ್ತದೆ. ಇದನ್ನು ಒಂದು ಶುಂಠಿ ಚಟ್ನಿಯೊಂದಿಗೆ ಸೇವಿಸಲಾಗುತ್ತದೆ. MLA ಪೆಸರಟ್ಟು ಎಂಬುದು ಪೆಸರಟ್ಟಿನ ಒಂದು ಜನಪ್ರಿಯ ರೂಪಾಂತರವಾಗಿದ್ದು, ಇದರೊಳಗೆ ಉಪಮಾವನ್ನು (ಮಸಾಲೆಯುಕ್ತ ಉಪ್ಪಿಟ್ಟು) ತುಂಬಿಸಿರಲಾಗುತ್ತದೆ.

ಮಧ್ಯಾಹ್ನದ ಭೋಜನ[ಬದಲಾಯಿಸಿ]

ಮಧ್ಯಾಹ್ನದ ಭೋಜನವು ಅನೇಕ ಕುಟುಂಬಗಳಲ್ಲಿ ಒಂದು ಸುದೀರ್ಘವಾದ ಸಂಗತಿಯಾಗಿರುತ್ತದೆ.

ಸಾಂಪ್ರದಾಯಿಕ ಕುಟುಂಬಗಳಲ್ಲಿ, ಭೋಜನವನ್ನು ಆರತಿ ಆಕು ಎಂದು ಕರೆಯಲಾಗುವ ಒಂದು ಏಕ ಬಾಳೆಎಲೆಯ ಮೇಲೆ ಅಥವಾ ವಿಸ್ತಾರಿ ಎಂದು ಕರೆಯಲ್ಪಡುವ ಒಂದು ದೊಡ್ಡಗಾತ್ರದ ತಟ್ಟೆಯ ಮೇಲೆ ಬಡಿಸಲಾಗುತ್ತದೆ; ಹಲವಾರು ಎಲೆಗಳನ್ನು ಒಟ್ಟಾಗಿ ಹೊಲಿದು ಜೋಡಿಸಿ ವಿಸ್ತಾರಿ ತಟ್ಟೆಯನ್ನು ತಯಾರಿಸಲಾಗುತ್ತದೆ. ಇತ್ತೀಚೆಗೆ, ಕಂಚಮ್‌ ಎಂದು ಕರೆಯಲ್ಪಡುವ ಅಗಲವಾದ ಸ್ಟೀಲ್‌ ತಟ್ಟೆಗಳ ಬಳಕೆಯನ್ನು ಬಹಳಷ್ಟು ಜನರು ಪ್ರಾರಂಭಿಸಿದ್ದಾರೆ. ಆದಾಗ್ಯೂ, ಆರತಿ ಆಕು ಎಲೆ ಮತ್ತು ವಿಸ್ತಾರಿ ತಟ್ಟೆಗಳು ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತವೆ.

ಮಧ್ಯಾಹ್ನದ ಭೋಜನದ ಪದಾರ್ಥಗಳನ್ನು ಒಂದು ಏಕ ತಟ್ಟೆಯಲ್ಲಿ ಒಂದು ನಿರ್ದಿಷ್ಟ ವ್ಯವಸ್ಥೆಯಲ್ಲಿ ಬಡಿಸಲಾಗುತ್ತದೆ. ಮೇಲೋಗರಗಳು ಮತ್ತು ಪಪ್ಪನ್ನು ಊಟ ಮಾಡುವವರ ಬಲಭಾಗದಲ್ಲಿಯೂ, ಉಪ್ಪಿನಕಾಯಿಗಳು ಮತ್ತು ಪೊಡಿಯನ್ನು ಎಡಭಾಗದಲ್ಲಿಯೂ ಬಡಿಸಲಾಗುತ್ತದೆ. ಪುಳಿಯೋಗರೆ ಮತ್ತು ಗರೇಲುವಿನಂಥ ವಿಶೇಷ ಪದಾರ್ಥಗಳನ್ನು ಮೇಲಿನ ಬಲಭಾಗದಲ್ಲಿ ಬಡಿಸಲಾಗುತ್ತದೆ. ಒಂದು ದೊಡ್ಡ ಸೌಟಿನಷ್ಟು ಅನ್ನವನ್ನು ತಟ್ಟೆಯ ಮಧ್ಯಭಾಗದಲ್ಲಿ ಬಡಿಸಲಾಗುತ್ತದೆ. ಪುಲುಸು, ತುಪ್ಪ ಮತ್ತು ಮಜ್ಜಿಗೆ ಇವುಗಳನ್ನು ಸಣ್ಣ ಪ್ರಮಾಣಗಳಲ್ಲಿ ಎಲೆಯ ಮೇಲೆ ವಿಶಿಷ್ಟವಾಗಿ ಚಿಮುಕಿಸಲಾಗುತ್ತದೆ. ಪೆರುಗು/ಮಜ್ಜಿಗವನ್ನು ಹೊರತುಪಡಿಸಿದ ಪ್ರತಿಯೊಂದು ಪದಾರ್ಥಕ್ಕೂ ತುಪ್ಪವನ್ನು ಬೆರೆಸಲಾಗುತ್ತದೆ.

ಮೊದಟಿ ಮುದ್ದ / ಮೊದಲನೆಯ ವರಿಸೆ - ಪೊಡಿ, ಖಾರಂ, ಅಥವಾ ಕೆಲವೊಂದು ವೈವಿಧ್ಯಮಯ ಉಪ್ಪಿನಕಾಯಿಗಳು ಮತ್ತು ತುಪ್ಪದೊಂದಿಗೆ ಅನ್ನವನ್ನು ಸೇವಿಸಲಾಗುತ್ತದೆ. ಇದನ್ನು ಮೊದಟಿ ಮುದ್ದ , ಅಥವಾ ಮೊದಲ ವರಿಸೆ ಎಂದು ಕರೆಯಲಾಗುತ್ತದೆ. ಹುಳಿ ಅಥವಾ ಖಾರದ ರುಚಿಯನ್ನು ಒಳಗೊಂಡಿರುವ ಮೊದಟಿ ಮುದ್ದ ಪದಾರ್ಥಗಳು ಗಾಢವಾದ ಪರಿಮಳಗಳನ್ನು ಹೊಂದಿರುತ್ತವೆ, ಹಾಗೂ ಒಣ ಶುಂಠಿ ಮತ್ತು ಕರಿಬೇವಿನ ಸೊಪ್ಪಿನಂಥ ಔಷಧೀಯ ಮೌಲ್ಯಗಳೊಂದಿಗಿನ ಘಟಕಾಂಶಗಳನ್ನು ಒಳಗೊಂಡಿರುತ್ತವೆ. ಅವು ಹಸಿವನ್ನು ಪ್ರಚೋದಿಸುತ್ತವೆ ಮತ್ತು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತವೆ ಎಂಬ ಉದ್ದೇಶದೊಂದಿಗೆ ಅವನ್ನು ಆಹಾರದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಕೇವಲ ಅತ್ಯಂತ ಸಣ್ಣ ಪ್ರಮಾಣದಲ್ಲಿ ಸೇವಿಸಲಾಗುವ, ಅನ್ನದ ನಾಲ್ಕು ಅಥವಾ ಐದು ಉಂಡೆಗಳನ್ನು ಮುದ್ದಲು ಎಂದು ಕರೆಯಲಾಗುತ್ತದೆ. ಗುಂಟೂರಿನಂಥ ಕೆಲವೊಂದು ಜಿಲ್ಲೆಗಳಲ್ಲಿ, ಚಟ್ನಿಗಳನ್ನು ಮೊದಟಿ ಮುದ್ದ ಪದಾರ್ಥಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಬೇರಾವುದೇ ಪದಾರ್ಥಕ್ಕಿಂತ ಮುಂಚಿತವಾಗಿ ಅವನ್ನು ಸೇವಿಸಲಾಗುತ್ತದೆ.

ವಿಶಿಷ್ಟವಾದ ಮೊದಟಿ ಮುದ್ದ ಪದಾರ್ಥಗಳಲ್ಲಿ ಇವು ಸೇರಿರುತ್ತವೆ:

  • ಧನಿಯಾಲ ಕಾರಪ್ಪೊಡಿ: ಕೊತ್ತಂಬರಿ ಬೀಜಗಳೊಂದಿಗೆ ಹುರಿದ ಮೆಣಸಿನಕಾಯಿಗಳನ್ನು ಸೇರಿಸಿ ಬೀಸಿ ಮಾಡಲಾದ ಪುಡಿ.
  • ಕರಿವೆಪಾಕು ಕಾರಪ್ಪೊಡಿ: ಹುರಿದ ಮೆಣಸಿನಕಾಯಿಗಳು ಮತ್ತು ಕರಿಬೇವಿನ ಸೊಪ್ಪು.
  • ಶೊಂಠಿ ಪೊಡಿ: ಒಂದು ಚಿಟಿಕೆಯಷ್ಟು ಉಪ್ಪಿನೊಂದಿಗೆ ಒಣ ಶುಂಠಿಯನ್ನು ರುಬ್ಬಿ ಮಾಡಿದ ಪುಡಿ.
  • ನುವ್ವುಲ ಪೊಡಿ: ಹುರಿದ ಮೆಣಸಿನಕಾಯಿಗಳೊಂದಿಗೆ ಎಳ್ಳು ಬೀಜಗಳನ್ನು ಸೇರಿಸಿ ಬೀಸಿ ಮಾಡಲಾದ ಪುಡಿ.
  • ಕೊತ್ತಿಮಿರ ಖಾರಂ: ಕಚ್ಚಾ ಅಥವಾ ಹುರಿದ ಕೆಂಪು ಮೆಣಸಿನಕಾಯಿಗಳೊಂದಿಗೆ ಕೊತ್ತಂಬರಿ ಎಲೆಗಳನ್ನು ರುಬ್ಬಿ ಮಾಡಿದ ಒಂದು ವ್ಯಂಜನ.
  • ಕರಿವೆಪಾಕು ಖಾರಂ: ಕಚ್ಚಾ ಅಥವಾ ಹುರಿದ ಕೆಂಪು ಮೆಣಸಿನಕಾಯಿಗಳೊಂದಿಗೆ ಕರಿಬೇವಿನ ಸೊಪ್ಪನ್ನು ರುಬ್ಬಿ ಮಾಡಿದ ಒಂದು ವ್ಯಂಜನ.
  • ಅಲ್ಲಂ ಖಾರಂ: ಕಚ್ಚಾ ಅಥವಾ ಹುರಿದ ಕೆಂಪು ಮತ್ತು ಹಸಿರು ಮೆಣಸಿನಕಾಯಿಗಳೊಂದಿಗೆ ಶುಂಠಿಯನ್ನು ರುಬ್ಬಿ ಮಾಡಿದ ಒಂದು ವ್ಯಂಜನ.
  • ಪಚಿಮಿರಪಕಾಯ ಖಾರಂ: ಹಸಿರು ಮೆಣಸಿನಕಾಯಿಗಳನ್ನು ಹುರಿದ ಮತ್ತು ರುಬ್ಬಿ ತಯಾರಿಸಲಾದ ಒಂದು ವ್ಯಂಜನ.
  • ಉಸಿರಿಕಾಯ ಪಚಡಿ: ಊರಿಟ್ಟ ಅಥವಾ ಉಪ್ಪಿನಕಾಯಿ ಹಾಕಲಾದ ನೆಲ್ಲಿಕಾಯಿಗಳನ್ನು ಹುರಿದ ಕೆಂಪು ಮೆಣಸಿನಕಾಯಿಗಳು ಅಥವಾ ಮೆಣಸಿನ ಪುಡಿಯೊಂದಿಗೆ ವಿಶಿಷ್ಟವಾಗಿ ಬೆರೆಸಿ ತಯಾರಿಸಲಾದ ಒಂದು ವ್ಯಂಜನ.
  • ನಿಮ್ಮಕಾಯ ಪಚಡಿ: ಉಪ್ಪಿನಕಾಯಿ ಹಾಕಲಾದ ಭಾರತದ ಅತಿ ಮುಖ್ಯವಾದ ನಿಂಬೆಕಾಯಿ
  • ದಬ್ಬಕಾಯ ಪಚಡಿ: ಉಪ್ಪಿನಕಾಯಿ ಹಾಕಲಾದ ಭಾರತದ ಚಕ್ಕೋತದ ಬಳಗದ ಹಣ್ಣು

ಮುಖ್ಯ ನಡವಳಿ[ಬದಲಾಯಿಸಿ]

'ಮೊದಟಿ ಮುದ್ದ' ಪದಾರ್ಥದ ನಂತರ ಏನನ್ನು ಸೇವಿಸಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಮಟ್ಟದಲ್ಲಿ ಒಂದು ಮಹಾನ್‌ ಬದಲಾವಣೆಯನ್ನು ಕಾಣಬಹುದು. ಕೃಷ್ಣ ಮತ್ತು ಗುಂಟೂರಿನಂಥ ಕೆಲವೊಂದು ಜಿಲ್ಲೆಗಳಲ್ಲಿ, ಕೂರ (ಮೇಲೋಗರ) ಎಂಬ ಪದಾರ್ಥವು ಅತ್ಯಂತ ಸಾಮಾನ್ಯ ಆಯ್ಕೆಯಾಗಿರುತ್ತದೆ. ಪಶ್ಚಿಮ ಗೋದಾವರಿಯನ್ನು ಒಳಗೊಂಡಂತೆ ಇತರ ಜಿಲ್ಲೆಗಳಲ್ಲಿ ಪಪ್ಪು (ದಾಲ್‌‌) ಮತ್ತು ಪಚಡಿ, ಪುಲುಸು ಮತ್ತು ಮಜ್ಜಿಗವನ್ನು ಸಾಮಾನ್ಯವಾಗಿ ಬಡಿಸಲಾಗುತ್ತದೆ.

ಕೂರ ಓರೆಬರಹದ ಪಠ್ಯ - ಈ ಪ್ರದೇಶವು ಕೂರಲು ಪದಾರ್ಥದ (ಮೇಲೋಗರಗಳ) ಒಂದು ವ್ಯಾಪಕವಾದ ವೈವಿಧ್ಯತೆಗಳನ್ನು ಉತ್ಪಾದಿಸುತ್ತದೆ; ಅದರ ಪ್ರಭೇದಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ:

  • ವೇಪುಡು : ಗರಿಗರಿಯಾಗಿರುವ ಹುರಿದ ತರಕಾರಿಗಳನ್ನು ಇದು ಒಳಗೊಂಡಿರುತ್ತದೆ; ವಿಶಿಷ್ಟವಾಗಿ ಹೇಳಬೇಕೆಂದರೆ, ಬೆಂಡಕಾಯ (ಬೆಂಡೇಕಾಯಿ), ದೊಂಡಕಾಯ, ಬಂಗಲಡುಂಪ (ಆಲೂಗಡ್ಡೆ), ಮತ್ತು ಕೆಸವು ಇದರಲ್ಲಿ ಸೇರಿರುತ್ತವೆ.
  • ಕಾರಂ ಪೆಟ್ಟಿ ಕೂರ / ಕೂರ ಪೊಡಿ ಕೂರ: ಸ್ವಲ್ಪವೇ ಜಿಡ್ಡಿನಲ್ಲಿ ಬೇಗನೆ ಹುರಿದ ತರಕಾರಿಗಳನ್ನು ಮಸಾಲೆಯ ಪುಡಿ ಅಥವಾ ಮಸಾಲೆಯ ಜಲಪಿಷ್ಟದೊಂದಿಗೆ (ಪೇಸ್ಟ್‌ನೊಂದಿಗೆ) ಬೇಯಿಸಿ, ಒಂದು ಘನರಾಶಿಯಾಗಿ ಇದನ್ನು ಬಡಿಸಲಾಗುತ್ತದೆ. ತರಕಾರಿಗಳ ಒಳಗೆ ಮಸಾಲೆಯ ಪುಡಿ ಅಥವಾ ಮಸಾಲೆಯ ಜಲಪಿಷ್ಟವನ್ನು ತುಂಬಿಸಲು ಸಾಧ್ಯವಿರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಇಡಿಯಾಗಿ ಬೇಯಿಸಲಾಗುತ್ತದೆ.
  • ಪುಲುಸು ಕೂರ / ಆವ ಪೆಟ್ಟಿ ಕೂರ: ಇದು ಬೆಂದಿರುವ ತರಕಾರಿಗಳನ್ನು ಹುಣಿಸೇಗೊಜ್ಜು ಮತ್ತು ಸಾಸಿವೆಯ ಜಲಪಿಷ್ಟದಲ್ಲಿ ಮತ್ತೊಮ್ಮೆ ಬೇಯಿಸಿ ತಯಾರಿಸುವ ಒಂದು ವ್ಯಂಜನವಾಗಿದೆ.
  • ಪಪ್ಪು ಕೂರ: ಇದು ಬೇಯಿಸಿದ ತರಕಾರಿಗಳನ್ನು ಅರ್ಧ-ಬೇಯಿಸಿದ ಲೆಂಟಿಲ್‌ಗಳ (ದಾಲ್‌) ಒಂದು ಸಣ್ಣ ಪ್ರಮಾಣದೊಂದಿಗೆ ಕಲಕುತ್ತಾ-ಬಾಡಿಸಿ ತಯಾರಿಸುವ ಒಂದು ವ್ಯಂಜನವಾಗಿದೆ.
  • ಟೊಮೆಟೊ ಗೊಜ್ಜಿನಲ್ಲಿ ಬೇಯಿಸಿದ ತರಕಾರಿಗಳು ಹಾಗೂ ಕೊತ್ತಂಬರಿ ಪುಡಿ ಮತ್ತು ಜೀರಿಗೆ ಪುಡಿ ಹಾಗೂ ಈರುಳ್ಳಿಯನ್ನು ಬಳಸಿಕೊಂಡು, ಮಾಂಸರಸ ಆಧರಿತ ಇತರ ಮೇಲೋಗರಗಳನ್ನು ಮುಖ್ಯವಾಗಿ ತಯಾರಿಸಲಾಗುತ್ತದೆ.

ಪಪ್ಪು - ಇದು ಒಂದು ತರಕಾರಿ ಅಥವಾ ಸೊಪ್ಪಿನೊಂದಿಗೆ ಬೇಯಿಸಲಾದ ತೊಗರಿಬೇಳೆ‌ (ಕಂಡಿ ಪಪ್ಪು) ಅಥವಾ ಹೆಸರುಬೇಳೆ (ಪೆಸರ ಪಪ್ಪು) ಆಗಿದೆ. ಸದರಿ ದಾಲ್‌ಗೆ ಯಾವುದೇ ಮಸಾಲೆಯು ಸೇರಿಸಲ್ಪಡುವುದಿಲ್ಲ. ಕೆಲವೊಂದು ಪ್ರದೇಶಗಳಲ್ಲಿ, ಮಸಾಲೆಹಾಕುವಿಕೆಯ ಪ್ರಕ್ರಿಯೆಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಗಳನ್ನು ಸೇರಿಸಿಕೊಳ್ಳಲಾದರೆ, ಇನ್ನು ಕೆಲವೊಂದು ಪ್ರದೇಶಗಳು ಇಂಗನ್ನು (ಹಿಂಗ್‌/ಇಂಗುವಾ) ಆದ್ಯತಾಪೂರ್ವಕವಾಗಿ ಬಳಸಿಕೊಳ್ಳುತ್ತವೆ. ಕೆಲವೊಮ್ಮೆ, ದಾಲ್‌ನ ಬೇಯಿಸಿದ ರೂಪಾಂತರವನ್ನು ದಾಲ್‌ನ ಒಂದು ಹುರಿದ ಮತ್ತು ರುಬ್ಬಲಾದ ರೂಪಾಂತರದಿಂದ ಬದಲಾಯಿಸಲಾಗುತ್ತದೆ; ಕಂಡಿ ಪಚಡಿ (ಕೆಂಪು ಮೆಣಸಿನಕಾಯಿಗಳೊಂದಿಗೆ ರುಬ್ಬಲಾದ ಹುರಿದ ತೊಗರಿಬೇಳೆ‌) ಮತ್ತು ಪೆಸರ ಪಚಡಿಗಳು (ಕೆಂಪು ಮೆಣಸಿನಕಾಯಿಗಳು ಅಥವಾ ಹಸಿರು ಮೆಣಸಿನಕಾಯಿಗಳೊಂದಿಗೆ ರುಬ್ಬಲಾದ ನೆನೆಸಿದ ಹೆಸರುಬೇಳೆ‌) ಇವಕ್ಕೆ ಉದಾಹರಣೆಗಳಾಗಿವೆ.

ಆವಕಾಯ ಜೊತೆಗಿನ ಮುದ್ದ ಪಪ್ಪು (ಉಪ್ಪಿನೊಂದಿಗೆ ಬೇಯಿಸಿದ ಸಾದಾ ತೊಗರಿಬೇಳೆ) ಆಂಧ್ರದ ಪಾಕಪದ್ಧತಿಯಲ್ಲಿನ ಒಂದು ಅತ್ಯಂತ ಜನಪ್ರಿಯ ಆಹಾರ-ಕೂಟವಾಗಿದೆ.

ಪಚಡಿ / ಊರಗಾಯ - ಇದರಲ್ಲಿ ಎರಡು ವ್ಯಾಪಕ ವೈವಿಧ್ಯತೆಗಳಿವೆ. ಅವುಗಳೆಂದರೆ: ಪಚಡಿ (ಚಟ್ನಿ) ಮತ್ತು ಊರಗಾಯ. ತರಕಾರಿಗಳು/ಸೊಪ್ಪುಗಳು ಮತ್ತು ಹುರಿದ ಹಸಿರು/ ಕೆಂಪು ಮೆಣಸಿನಕಾಯಿಗಳಿಂದ ಪಚಡಿಯನ್ನು ವಿಶಿಷ್ಟವಾಗಿ ತಯಾರಿಸಲಾಗುತ್ತದೆ. ಇದನ್ನು ತಾಜಾ ಆಗಿ ಸಿದ್ಧಪಡಿಸಲಾಗುತ್ತದೆ ಮತ್ತು ಒಂದು ದಿನ ಅಥವಾ ಎರಡು ದಿನದೊಳಗಾಗಿ ಸೇವಿಸಲಾಗುತ್ತದೆ. ಊರಗಾಯವನ್ನು ಕಾಲೋಚಿತವಾಗಿ ಬೃಹತ್‌ ಪ್ರಮಾಣಗಳಲ್ಲಿ ತಯಾರಿಸಲಾಗುತ್ತದೆ ಮತ್ತು ಇದಕ್ಕಾಗಿ ದೊಡ್ಡ ಪ್ರಮಾಣಗಳಲ್ಲಿ ಮೆಣಸಿನ ಪುಡಿ, ಮೇಥಿ (ಮೆಂತ್ಯ) ಪುಡಿ, ಸಾಸಿವೆ ಪುಡಿ ಮತ್ತು ಎಣ್ಣೆಯನ್ನು ಬಳಸಲಾಗುತ್ತದೆ. ಆಂಧ್ರಪ್ರದೇಶದ ಓರ್ವ ವಿಶಿಷ್ಟ ವ್ಯಕ್ತಿಗೆ ಸಂಬಂಧಿಸಿ ಹೇಳುವುದಾದರೆ, ಈ ಅತ್ಯಾವಶ್ಯಕವಾದ ವ್ಯಂಜನ-ಪದಾರ್ಥವಿಲ್ಲದೆಯೇ ಭೋಜನವು ಸಂಪೂರ್ಣವಾಗುವುದಿಲ್ಲ ಎನ್ನಬಹುದು. ಇದನ್ನು ಹಾಗೆಯೇ ಅನ್ನದೊಂದಿಗೆ ಬೆರೆಸಿ ಕಲೆಸಿಕೊಂಡು ಸೇವಿಸಲಾಗುತ್ತದೆ ಹಾಗೂ ಪಪ್ಪು / ಕೂರದೊಂದಿಗೆ ಒಂದು ವಿಶೇಷ ಭಕ್ಷ್ಯವಾಗಿಯೂ ಸೇವಿಸಲಾಗುತ್ತದೆ. ಕೆಲವೊಂದು ಪದಾರ್ಥಗಳಲ್ಲಿ ಇವು ಸೇರಿವೆ:

  • ತರಕಾರಿ ಪಚಡಿ - ಇದನ್ನು ಸೋರೆಕಾಯಿ, ಬಿಳಿಬದನೆ, ಮತ್ತು ಬೆಂಡೇಕಾಯಿಯಂಥ ತರಕಾರಿಗಳಿಂದ ತಯಾರಿಸಲಾಗುತ್ತದೆ. ಅಗಿದರೆ ಇನ್ನೂ ಗಟ್ಟಿಯಾಗಿರುವಂಥ ಹದಕ್ಕೆ ತರಕಾರಿಯನ್ನು ಬೇಯಿಸಲಾಗುತ್ತದೆ ಮತ್ತು ಅದನ್ನು ಹುರಿದ ಕೆಂಪು ಮೆಣಸಿನಕಾಯಿಗಳು/ ಹಸಿರು ಮೆಣಸಿನಕಾಯಿಗಳು, ಮೆಂತ್ಯದ ಬೀಜಗಳು ಮತ್ತು ಸಾಸಿವೆ ಬೀಜಗಳೊಂದಿಗೆ ರುಬ್ಬಲಾಗುತ್ತದೆ.
  • ಸೊಪ್ಪಿನ ಪಚಡಿ - ಇವುಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವಂಥದ್ದು ಗೊಂಗುರಾ ಪಚಡಿ. ಇದನ್ನು ಪುಲ್ಲಂಪುರಚಿ ಜಾತಿಯ ಸಸ್ಯದ ಕೆಂಪು ಎಲೆಗಳು ಮತ್ತು ಹುರಿದ ಕೆಂಪು ಮೆಣಸಿನಕಾಯಿಗಳಿಂದ ತಯಾರಿಸಲಾಗುತ್ತದೆ. ಇದು ಆಂಧ್ರದ ಪಾಕಪದ್ಧತಿಗೆ ಅನನ್ಯವೆನಿಸಿರುವ ವ್ಯಂಜನವಾಗಿದ್ದು, ಭೋಜನ ಮಾಡುವವರಿಗೆ ಆಂಧ್ರಪ್ರದೇಶದ ಒಂದು ರುಚಿಯನ್ನು ನೀಡುವುದಕ್ಕೆ ಹೆಮ್ಮೆಪಡುವಂಥ ಆಂಧ್ರದ ಯಾವುದೇ ಭೋಜನ-ಪ್ರಕಾರವು ಇದನ್ನು ಒಳಗೊಂಡಿರುವುದು ಅತ್ಯಗತ್ಯವಾಗಿದೆ. ಇದನ್ನು ಹೊರತುಪಡಿಸಿ, ಚುಕ್ಕ ಕೂರದ (APಯಲ್ಲಿ ಕಂಡುಬರುವ, ಎಲೆಗಳಿಂದ ಭರಿತವಾದ ಒಂದೆ ಬಗೆಯ ಹುಳಿಸೊಪ್ಪು) ಪಚಡಿಯೂ ಅತ್ಯಂತ ಜನಪ್ರಿಯವಾಗಿದೆ. ಕೊತ್ತಂಬರಿ ಸೊಪ್ಪು / ಕರಿಬೇವಿನ ಸೊಪ್ಪಿನಿಂದಲೂ ಚಟ್ನಿಯನ್ನು ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಒಂದು ಮೊದಟಿ ಮುದ್ದ ಪದಾರ್ಥವಾಗಿ ಸೇವಿಸಲಾಗುತ್ತದೆ.

ಊರಗಾಯ - ಆಂಧ್ರಪ್ರದೇಶವು ಈ ಬಗೆಯ ಮಸಾಲೆಭರಿತ ಖಾರದ ಉಪ್ಪಿನಕಾಯಿಗಳಿಗಾಗಿ ಹೆಸರುವಾಸಿಯಾಗಿದೆ. ಒಂದಷ್ಟು ಊರಗಾಯ ಪದಾರ್ಥಗಳಲ್ಲಿ ಇವು ಸೇರಿವೆ:

  • ಆವಕಾಯ - ಇದು ಆಂಧ್ರ ಪಾಕಪದ್ಧತಿಯ ಪೈಕಿಯ ಅತ್ಯಂತ ಜನಪ್ರಿಯ ಪದಾರ್ಥವಾಗಿದೆ. ಕತ್ತರಿಸಿದ ಹಸಿರು ಮಾವಿನಕಾಯಿಗಳು, ಸಾಸಿವೆ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಸಸ್ಯಜನ್ಯ ಎಣ್ಣೆ ಇವೆಲ್ಲವನ್ನೂ ಬಳಸಿಕೊಂಡು ಇದನ್ನು ತಯಾರಿಸಲಾಗುತ್ತದೆ. ಹಸಿರು ಮಾವಿನಕಾಯಿಗಳು ಹೇರಳವಾಗಿ ಕಂಡುಬರುವ ಏಪ್ರಿಲ್‌/ಮೇ ತಿಂಗಳುಗಳ ಅವಧಿಯಲ್ಲಿ ಇದನ್ನು ತಯಾರಿಸಲಾಗುತ್ತದೆ. ಆಂಧ್ರದಲ್ಲಿನ ಪ್ರತಿಯೊಂದು ಕುಟುಂಬವೂ, ಮಾವಿನಕಾಯಿ, ಮೆಣಸಿನಕಾಯಿ ಮತ್ತು ಬಳಸಲ್ಪಡುವ ಎಣ್ಣೆಯ ವೈವಿಧ್ಯತೆಯ ಮೇಲೆ ಆಧರಿಸಿ, ಈ ಉಪ್ಪಿನಕಾಯಿಗೆ ಸಂಬಂಧಿಸಿದ ತನ್ನದೇ ಆದ ಪಾಕವಿಧಾನವನ್ನು ಹೊಂದಿದೆ. ಗೊಂಗುರಾ ಪಚಡಿಯ ರೀತಿಯಲ್ಲಿಯೇ, ಆಂಧ್ರದ ಪಾಕಪದ್ಧತಿಯನ್ನು ಇದು ನಿದರ್ಶನದ ಮೂಲಕ ನಿರೂಪಿಸುತ್ತದೆ ಮತ್ತು ಇದು ಆಂಧ್ರದ ಮಧ್ಯಾಹ್ನದ ಭೋಜನಗಳ ಪ್ರದರ್ಶನ ರಂಗದಲ್ಲಿ ಒಂದು ಪ್ರಧಾನ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಆಂಧ್ರದ ಅನೇಕ ಜನರಿಗೆ, ಇದು ಯಾವುದೇ ಪಪ್ಪು ಪದಾರ್ಥದೊಂದಿಗೆ ಇರಲೇಬೇಕಾದ ಒಂದು ವಿಶೇಷ ಭಕ್ಷ್ಯವಾಗಿದೆ. ಮುದ್ದ ಪಪ್ಪು (ಬೇಯಿಸಿದ ತೊಗರಿಬೇಳೆ) ಮತ್ತು ಆವಕಾಯ ಇವು ಒಟ್ಟಾಗಿ ಸೇರಿಕೊಂಡು ಬಹುಪಾಲು ಕುಟುಂಬಗಳಲ್ಲಿ ಒಂದು ಪ್ರಧಾನ ಆಹಾರವೆನಿಸಿವೆ. ಬೆಳ್ಳುಳ್ಳಿ-ಸಹಿತವಾದ ಅಥವಾ ರಹಿತವಾದ ಬಗೆಗಳು, ಮತ್ತು ಬಳಸಲ್ಪಟ್ಟ ಇತರ ಘಟಕಾಂಶಗಳನ್ನು ಅವಲಂಬಿಸಿ, ಇಲ್ಲಿ ಆವಕಾಯದ ಹೇರಳ ವೈವಿಧ್ಯತೆಗಳನ್ನು ಕಾಣಲು ಸಾಧ್ಯವಿದೆ; ಅಂದರೆ, ಪೆಸರಕಾಯ (ಹೆಸರುಬೇಳೆಯ ಪುಡಿಯೊಂದಿಗಿನ ಆವಕಾಯ), ಮೆಂಥಿ ಕಾಯ (ಮೆಂತ್ಯ ಪುಡಿಯೊಂದಿಗಿನ ಆವಕಾಯ), ನೀಟಿ ಕಾಯ (ಸಾಸಿವೆಯ ಜಲಪಿಷ್ಟವನ್ನು ನೀರಿನೊಂದಿಗೆ ರುಬ್ಬುವ ಮೂಲಕ ತಯಾರಿಸಲಾದ ಆವಕಾಯ) ಇವೇ ಮೊದಲಾದ ಘಟಕಾಂಶಗಳನ್ನು ಅವಲಂಬಿಸಿ ಆವಕಾಯದ ಹೇರಳ ವೈವಿಧ್ಯತೆಗಳನ್ನು ಕಾಣಬಹುದಾಗಿದೆ.
  • ಮಗಾಯ - ಆವಕಾಯದ ರೀತಿಯಲ್ಲಿಯೇ ಇದನ್ನು ಬೇಸಿಗೆಕಾಲದಲ್ಲಿ ತಯಾರಿಸಲಾಗುತ್ತದೆ. ಮಾವಿನಕಾಯಿಗಳನ್ನು ಕತ್ತರಿಸಿ, ಅವುಗಳದೇ ರಸದಲ್ಲಿ ಮ್ಯಾರಿನೇಡ್‌ ದ್ರಾವಣದಲ್ಲಿ ಊರಿಡಲಾಗುತ್ತದೆ. ಆಮೇಲೆ ಅವನ್ನು ಒಣಗಿಸಲಾಗುತ್ತದೆ ಮತ್ತು ನಂತರದಲ್ಲಿ ಮೆಣಸಿನ ಪುಡಿ, ಮೇಥಿಯ ಪುಡಿಯೊಂದಿಗೆ ಬೆರೆಸಿ ಮಸಾಲೆಹಾಕುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಇದು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಅತ್ಯಂತ ಜನಪ್ರಿಯವಾದ ಉಪ್ಪಿನಕಾಯಿಯಾಗಿದೆ. ಕೆಲವೊಂದು ಜನರಿಗೆ, ಇದು ಮೊಸರು (ದಧಿ) ಅನ್ನದೊಂದಿಗೆ ಇರಲೇಬೇಕಾದ ಒಂದು ವಿಶೇಷ ಭಕ್ಷ್ಯವಾಗಿದೆ.
  • ದೋಸೆ ಆವಕಾಯ - ಇದು ಇಂಗ್ಲಿಷ್‌ (ಹಳದಿ) ಸೌತೆಕಾಯಿಯನ್ನು ಬಳಸಿ ತಯಾರಿಸಲಾದ ಆವಕಾಯ ಆಗಿದೆ. ಋತುವಿನ ಅಂತ್ಯದ ವೇಳೆಗೆ ಇದು ನಿಯತವಾದ ಅಥವಾ ಎಂದಿನ ಆವಕಾಯಕ್ಕೆ ಸಂಬಂಧಿಸಿದ ಒಂದು ಪರ್ಯಾಯವಾಗಿ ಪರಿಗಣಿಸಲ್ಪಡುತ್ತದೆ. ಕಚ್ಚಾ ಮಾವಿನಕಾಯಿಗಳು ಅನಾಯಾಸವಾಗಿ ಲಭ್ಯವಿರದ ಚಳಿಗಾಲದಲ್ಲಿ ನಡೆಯುವ ಮದುವೆಗಳ ಸಂದರ್ಭದಲ್ಲಿ ಇದನ್ನು ಪ್ರಧಾನ ಘಟಕವಾಗಿ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಹೂಕೋಸಿನ ಆವಕಾಯಗಳೂ ಪ್ರಸಿದ್ಧವಾಗಿವೆ. ಹೂಕೋಸಿನಿಂದ ಇಂಗ್ಲಿಷ್‌ ಸೌತೆಕಾಯಿಯು ಈ ರೂಪಾಂತರದಲ್ಲಿ ಪಲ್ಲಟಗೊಳಿಸಲ್ಪಡುತ್ತದೆ.
  • ಟೊಮೆಟೊ - ಇದು ಆಂಧ್ರದ ಉಪ್ಪಿನಕಾಯಿಗಳ ವ್ಯಾಪಕ ಶ್ರೇಣಿಗೆ ತುಲನಾತ್ಮಕವಾಗಿ ಹೊಸದಾಗಿರುವ (19ನೇ ಶತಮಾನ) ಒಂದು ಸೇರ್ಪಡೆಯಾಗಿದೆ. ಇದನ್ನು ಚಳಿಗಾಲದ ಋತುವಿನಲ್ಲಿ ತಯಾರಿಸಲಾಗುತ್ತದೆ; ಟೊಮೆಟೊಗಳನ್ನು ಅವುಗಳದೇ ರಸದಲ್ಲಿ ಮ್ಯಾರಿನೇಡ್‌ ದ್ರಾವಣದಲ್ಲಿ ಊರಿಟ್ಟು, ಆಮೇಲೆ ಒಣಗಿಸಿ ಮತ್ತು ನಂತರದಲ್ಲಿ ಅವನ್ನು ರಸ, ಮೆಣಸಿನ ಪುಡಿ, ಮೇಥಿಯ ಪುಡಿಯೊಂದಿಗೆ ಬೆರೆಸಿ ಮಸಾಲೆಹಾಕುವ ಮೂಲಕ ಇದನ್ನು ತಯಾರಿಸಲಾಗುತ್ತದೆ.
  • ಕೊರಿವಿ ಖಾರಂ - ಇದು ಇಲ್ಲಿನ ಉಪ್ಪಿನಕಾಯಿಗಳ ಪೈಕಿ ಅತ್ಯಂತ ಮಸಾಲೆಯುಕ್ತ ಉಪ್ಪಿನಕಾಯಿ ಎನಿಸಿಕೊಂಡಿದೆ. ಹುಣಿಸೇಹಣ್ಣು ಮತ್ತು ಉಪ್ಪಿನೊಂದಿಗೆ ಹಣ್ಣಾದ ಕೆಂಪು ಮೆಣಸಿನಕಾಯಿಗಳನ್ನು (ಪಂಡು ಮಿರಪಕಾಯ) ರುಬ್ಬುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಪಂಡು ಮಿರಪಕಾಯನ್ನು ಆಂಧ್ರಪ್ರದೇಶದ ಪಲ್ನಾಡು ಪ್ರದೇಶದಲ್ಲಿ (ಗುಂಟೂರು ಜಿಲ್ಲೆ ಮತ್ತು ಸುತ್ತಮುತ್ತಲ ಪ್ರದೇಶಗಳು) ಅಗಾಧವಾಗಿ ಬೆಳೆಯಲಾಗುತ್ತದೆ. ಈ ಪ್ರಭೇದವು ತನ್ನ ಮಸಾಲೆ-ಅಂಶ ಮತ್ತು ಬಣ್ಣದಿಂದಾಗಿ ಅತ್ಯಂತ ಪ್ರಸಿದ್ಧವಾಗಿದೆ. ಪಂಡುಮಿರಪಕಾಯಯನ್ನು ಗೊಂಗುರಾದೊಂದಿಗೆ ಅಥವಾ ಕಚ್ಚಾ ಹುಣಿಸೆ ಹಣ್ಣಿನೊಂದಿಗೆ (ಚಿಂತಕಾಯ) ಸಂಯೋಜಿಸಿ ತಯಾರಿಸುವ ಉತ್ಪನ್ನಗಳು, ಈ ಉಪ್ಪಿನಕಾಯಿಗೆ ಮಾಡಲಾಗುವ ಕೆಲವೊಂದು ಮಾರ್ಪಾಡುಗಳಲ್ಲಿ ಸೇರಿವೆ.
  • ಚಿಂತಕಾಯ - ಕಚ್ಚಾ ಹುಣಿಸೆ ಹಣ್ಣು (ಚಿಂತಕಾಯ) ಮತ್ತು ಉಪ್ಪನ್ನು ಒಟ್ಟಿಗೆ ಸೇರಿಸಿ ರುಬ್ಬುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಇದನ್ನು ಚಳಿಗಾಲದ ಋತುವಿನ ಅವಧಿಯಲ್ಲಿ ತಯಾರಿಸಲಾಗುತ್ತದೆ. ಮ್ಯಾರಿನೇಡ್‌ ದ್ರಾವಣದಲ್ಲಿ ಊರಿಟ್ಟ ಉಪ್ಪಿನಕಾಯಿಯನ್ನು ಸಣ್ಣ ಪ್ರಮಾಣಗಳಲ್ಲಿ ತೆಗೆದುಕೊಳ್ಳಲಾಗುತ್ತದೆ ಮತ್ತು ಸೇವಿಸಬೇಕಾದ ಸಂದರ್ಭ ಬಂದಾಗಲೆಲ್ಲಾ ಇದನ್ನು ಹುರಿದ ಕೆಂಪು ಮೆಣಸಿನಕಾಯಿಗಳೊಂದಿಗೆ ಸೇರಿಸಿ ಒಂದು ಚಟ್ನಿಯಾಗಿ ತಯಾರಿಸಲಾಗುತ್ತದೆ.
  • ನಿಮ್ಮಕಾಯ - ಭಾರತದ ಅತಿಮುಖ್ಯವಾದ ನಿಂಬೆಕಾಯನ್ನು ಅದರದೇ ರಸದಲ್ಲಿ ಮ್ಯಾರಿನೇಡ್‌ ದ್ರಾವಣದಲ್ಲಿ ಕೆಲವು ದಿನಗಳವರೆಗೆ ಊರಿಟ್ಟು, ನಂತರದಲ್ಲಿ ಅದನ್ನು ಉಪ್ಪು, ಮೇಥಿಯ ಪುಡಿ ಮತ್ತು ಮೆಣಸಿನ ಪುಡಿಯೊಂದಿಗೆ ಬೆರೆಸಿ ನಿಮ್ಮಕಾಯವನ್ನು ತಯಾರಿಸಲಾಗುತ್ತದೆ.
  • ಉಸಿರಿಕಾಯ - ನೆಲ್ಲೀಕಾಯಿಗಳು ಮತ್ತು ಉಪ್ಪನ್ನು ಒಟ್ಟಿಗೆ ಸೇರಿಸಿ ರುಬ್ಬುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಈ ಉಪ್ಪಿನಕಾಯಿಯನ್ನು ವರ್ಷಾದ್ಯಂತ ಮ್ಯಾರಿನೇಡ್‌ ದ್ರಾವಣದಲ್ಲಿ ಊರಿಡಲಾಗುತ್ತದೆ, ಮತ್ತು ಅಗತ್ಯವಾದಾಗಲೆಲ್ಲಾ ಸಣ್ಣ ಪ್ರಮಾಣಗಳಲ್ಲಿ ಉಪ್ಪಿನಕಾಯಿಯನ್ನು ಹಾಕಲಾಗುತ್ತದೆ; ಅಷ್ಟೇ ಅಲ್ಲ, ಹುರಿದ ಕೆಂಪು ಮೆಣಸಿನಕಾಯಿಗಳೊಂದಿಗೆ ಇದನ್ನು ರುಬ್ಬುವ ಮೂಲಕ ಇದರಿಂದ ಒಂದು ಚಟ್ನಿಯನ್ನೂ ತಯಾರಿಸಲಾಗುತ್ತದೆ. ಬಹುತೇಕ ಜನರು ರಾತ್ರಿ ವೇಳೆಯಲ್ಲಿ ನೆಲ್ಲೀಕಾಯಿಗಳನ್ನು ಸೇವಿಸುವ ಪರಿಪಾಠವನ್ನು ತಪ್ಪಿಸುತ್ತಾರೆ. ರಾತ್ರಿಯಲ್ಲಿ ಅದರ ಹೆಸರನ್ನು (ಉಸಿರಿಕಾಯ) ಹೇಳುವುದರ ಮೇಲೂ ಒಂದು ನಿಷೇಧವಿದೆ ಮತ್ತು ಇದನ್ನು ಪ್ರಧಾನವಾಗಿ ನಲ್ಲಕಾಯ ಎಂದು ಕರೆಯಲಾಗುತ್ತದೆ. ಈ ಕಾಯಿಯ ಮರಗಳನ್ನು ವಿಷ್ಣುವಿನ ಆವಾಸಸ್ಥಾನ ಎಂಬಂತೆ ಭಯಭಕ್ತಿಗಳಿಂದ ಕಾಣಲಾಗುತ್ತದೆ ಮತ್ತು ಕಾರ್ತಿಕಮಾಸದಲ್ಲಿ (ಅಕ್ಟೋಬರ್‌/ನವೆಂಬರ್‌) ಇವನ್ನು ಪೂಜಿಸಲಾಗುತ್ತದೆ. ನೆಲ್ಲೀಕಾಯಿಯ ಮರದ ಕೆಳಗೆ ಕುಳಿತುಕೊಂಡು ಕಚ್ಚಾ ನೆಲ್ಲೀಕಾಯಿಯ ಚಟ್ನಿಯನ್ನು ಒಳಗೊಂಡಿರುವ ಒಂದು ಊಟವನ್ನು ಸೇವಿಸುವುದು, ಈ ತಿಂಗಳುಗಳ ಅವಧಿಯಲ್ಲಿ ಕಂಡುಬರುವ ಒಂದು ಸಂಪ್ರದಾಯವಾಗಿದೆ.
  • ದಬ್ಬಕಾಯ - ಇದು ಇಂದಿನ ಪೀಳಿಗೆಗೆ ಅಷ್ಟಾಗಿ ಪರಿಚಯವಿಲ್ಲದ ಒಂದು ಉಪ್ಪಿನಕಾಯಿಯಾಗಿದ್ದು, ಭಾರತದಲ್ಲಿ ಕಂಡುಬರುವ ಚಕ್ಕೋತದ ಬಳಗದ ಹಣ್ಣಿನಿಂದ ಇದನ್ನು ತಯಾರಿಸಲಾಗುತ್ತದೆ. ಇದು ಒಂದು ಮೊದಟಿ ಮುದ್ದ ಪದಾರ್ಥವಾಗಿ ವಿಶಿಷ್ಟವಾಗಿ ಸೇವಿಸಲ್ಪಡುತ್ತದೆ. ಎಳೆಯ ದಬ್ಬಕಾಯ ಎಲೆಗಳೊಂದಿಗೆ ಬೆರೆಸಲಾಗುವ ಮಜ್ಜಿಗೆಯು (ದಬ್ಬಕು ಮಜ್ಜಿಗ) ಬಿಸಿಯಿಂದ ತುಂಬಿರುವ ಬೇಸಿಗೆಯ ತಿಂಗಳುಗಳ ಅವಧಿಯಲ್ಲಿ ಅತೀವವಾದ ಬಾಯಾರಿಕೆಯನ್ನು ನೀಗಿಸುತ್ತದೆ ಎಂದು ಹೇಳಲಾಗುತ್ತದೆ.

ಪುಲುಸು / ಚಾರು - ಇತರ ಬಹುತೇಕ ಪಾಕಪದ್ಧತಿಗಳಿಗಿಂತ ಭಿನ್ನವಾಗಿರುವ ಆಂಧ್ರದ ಪಾಕಪದ್ಧತಿಯು ಒಂದು ಎಸರು ಅಥವಾ ಕೋಸಂಬರಿಯನ್ನು ಒಳಗೊಂಡಿರುವುದಿಲ್ಲ. ಪುಲುಸು/ಧಪ್ಪಲಮ್‌ ಎಂಬುದು ಭೋಜನದ ಅತ್ಯಂತ ಪ್ರಮುಖ ದ್ರವಾಹಾರ ಪದಾರ್ಥವಾಗಿದೆ. ವಿಶಿಷ್ಟವಾದ ಪುಲುಸು ಪದಾರ್ಥಗಳಲ್ಲಿ ಇವು ಸೇರಿವೆ:

  • ಖಾರಂ ಪುಲುಸು - ದುರ್ಬಲಗೊಳಿಸಲಾದ ಹುಣಿಸೆಹಣ್ಣಿನ ರಸ ಮತ್ತು ಪುಲುಸು ಪೊಡಿಯಲ್ಲಿ (ಹುರಿದ ಕೆಂಪು ಮೆಣಸಿನಕಾಯಿಗಳು, ಕೊತ್ತಂಬರಿಬೀಜದ ಪುಡಿಯ ಒಂದು ಹದವಾದ ಮಿಶ್ರಣ) ಬೇಯಿಸಿದ ಯಾವುದೇ ತರಕಾರಿ.
  • ತಿಯ್ಯ ಪುಲುಸು - ಬೆಲ್ಲವನ್ನು ಒಳಗೊಂಡಿರುವ ಲಘುವಾದ ಹುಣಿಸೆಹಣ್ಣಿನ ರಸದಲ್ಲಿ ಬೇಯಿಸಲಾದ, ಕುಂಬಳಕಾಯಿ ಅಥವಾ ಸಿಹಿಗೆಣಸಿನಂಥ ಲಘುವಾಗಿ ಸಿಹಿಯಾಗಿರುವ ತರಕಾರಿಗಳು.
  • ಪಚ್ಚಿ ಪುಲುಸು - ಇದು ಪುಲುಸಿನ ಬಿಸಿಮಾಡದ ರೂಪಾಂತರವಾಗಿದೆ. ಬೆಲ್ಲವನ್ನು ಒಳಗೊಂಡಿರುವ ಅತ್ಯಂತ ದುರ್ಬಲವಾದ ಹುಣಿಸೆಹಣ್ಣಿನ ರಸದಲ್ಲಿ ಸಣ್ಣದಾಗಿ ಕೊಚ್ಚಿದ ಕಚ್ಚಾ ಈರುಳ್ಳಿಗಳನ್ನು ಇದು ಒಳಗೊಂಡಿರುತ್ತದೆ. ಮಾವಿನಕಾಯಿಗಳು ಹೇರಳವಾಗಿ ಕಂಡುಬರುವ ಬೇಸಿಗೆ ಋತುವಿನಲ್ಲಿ, ಒಳಗುದಿಯಲ್ಲಿ ಬೇಯಿಸಿದ ಕಚ್ಚಾ ಮಾವಿನಕಾಯಿಯು ಹುಣಿಸೇಹಣ್ಣಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಇದನ್ನು ಬೇಸಿಗೆ ಕಾಲದಲ್ಲಿ ಸೇವಿಸಲಾಗುತ್ತದೆ.
  • ಪಪ್ಪುಚಾರು - ಬೇಯಿಸಿದ ತೊಗರಿಬೇಳೆ ಮತ್ತು ಹುಣಿಸೆ ಹಣ್ಣಿನೊಂದಿಗೆ ಬೇಯಿಸಲಾದ ತರಕಾರಿಗಳು. ಇದಕ್ಕೆ ಸಾಂಬಾರ್‌/ಮಸಾಲೆ ಪುಡಿಯನ್ನು ಸೇರಿಸಲಾಗುವುದಿಲ್ಲ.
  • ಸಾಂಬಾರ್‌ - ಬೇಯಿಸಿದ ತೊಗರಿಬೇಳೆ, ಹುಣಿಸೆಹಣ್ಣು ಮತ್ತು ಸಾಂಬಾರ್‌ ಪುಡಿಯೊಂದಿಗೆ ಬೇಯಿಸಲಾದ ತರಕಾರಿಗಳು.
  • ಚಲ್ಲ ಪುಲುಸು / ಮಜ್ಜಿಗ ಪುಲುಸು - ಹುರಿಗಡಲೆ ಮತ್ತು ತೆಂಗಿನಕಾಯಿ ಜಲಪಿಷ್ಟದೊಂದಿಗೆ ಬೇಯಿಸಲಾದ ಹುಳಿ ಮಜ್ಜಿಗೆ.
  • ಮೆಂಥಿ ಚಲ್ಲ / ಮೆಂಥಿ ಮಜ್ಜಿಗ - ಶುಂಠಿ / ಹಸಿರು ಮೆಣಸಿನಕಾಯಿಯ ಜಲಪಿಷ್ಟ ಮತ್ತು ಎಣ್ಣೆಯಲ್ಲಿ ಹುರಿದ ಮೆಂಥಿ ಬೀಜಗಳೊಂದಿಗೆ ಹದಮಾಡಲ್ಪಟ್ಟ ಹುಳಿ ಮಜ್ಜಿಗೆ.
  • ಚಾರು - ಹುಣಿಸೆಹಣ್ಣು ಮತ್ತು ಚಾರು ಪೊಡಿಯ (ಕೊತ್ತಂಬರಿ ಬೀಜಗಳು, ದಾಲ್‌, ಶುಂಠಿ, ಕರಿಮೆಣಸಿನಕಾಳು ಮತ್ತು ಹಿಂಗನ್ನು ಬಳಸಿ ಇದನ್ನು ತಯಾರಿಸಲಾಗಿರುತ್ತದೆ‌) ಒಂದು ಅತ್ಯಂತ ದುರ್ಬಲವಾದ ಮಿಶ್ರಣ. ಅಂತೆಯೇ ಇದನ್ನು ಅನ್ನದೊಂದಿಗೆ ಬೆರೆಸದೆಯೇ, ಒಂದು ಎಸರು ಅಥವಾ ಸೂಪ್‌ ರೀತಿಯಲ್ಲಿಯೂ ಊಟದ ವೇಳೆಯಲ್ಲಿ ಸೇವಿಸಲಾಗುತ್ತದೆ.

ಪೆರುಗು / ಮಜ್ಜಿಗ - ಇದು ಭೋಜನದ ಕೊನೆಯ ಪದಾರ್ಥವಾಗಿದೆ. ಪಚಡಿ ಅಥವಾ ಊರಗಾಯದ ರೀತಿಯಲ್ಲಿ, ಒಂದು ಜೊತೆಯ-ವ್ಯಂಜನವಾಗಿ ಪೆರುಗನ್ನು (ದಧಿ) ಸಾಮಾನ್ಯವಾಗಿ ಸೇವಿಸಲಾಗುತ್ತದೆ. ಮಜ್ಜಿಗ (ಮಜ್ಜಿಗೆ) ಹೊಂದಿರುವ ಔಷಧೀಯ ಗುಣಗಳ ಕಾರಣಗಳಿಂದಾಗಿ, ಕೆಲವೊಂದು ಜನರು ಪೆರುಗು ಬದಲಿಗೆ ಮಜ್ಜಿಗಕ್ಕೆ ಆದ್ಯತೆನೀಡುತ್ತಾರೆ. ಪೆರುಗನ್ನು ನೀರಿನೊಂದಿಗೆ ಬೆರೆಸಿ ಕಡೆದು ಮಜ್ಜಿಗೆಯಾಗಿ ಮಾಡುವ ಮೂಲಕ ಅದರ ಉತ್ತಮ ಗುಣಗಳು ಹೆಚ್ಚಿಸಲ್ಪಡುತ್ತವೆ ಮತ್ತು ಕೆಟ್ಟ ಪರಿಣಾಮಗಳು ತಗ್ಗಿಸಲ್ಪಡುತ್ತವೆ ಎಂದು ಭಾವಿಸಲಾಗುತ್ತದೆ.

ಸಂಜೆ ವೇಳೆಯ ಕುರುಕಲು ತಿಂಡಿಗಳು[ಬದಲಾಯಿಸಿ]

ಮನೆಯಲ್ಲಿರುವಾಗ, ರುಚಿಕರವಾದ ಅನೇಕ ಕುರುಕಲು ತಿಂಡಿಗಳು ಸಂಜೆಯ ವೇಳೆಯಲ್ಲಿ ತಮ್ಮ ಹಾಜರಿಯನ್ನು ಹಾಕುತ್ತವೆ. ಅವುಗಳೆಂದರೆ:

  • ಕಾರಪ್ಪೂಸ
  • ಚೆಕ್ಕಲು
  • ಜಂತಿಕಲು
  • ಸಕಿನಾಲು ಅಥವಾ ಚಕ್ಕಿರಾಲು
  • ಚುಪ್ಪುಲು
  • ಚೆಗೊಡಿಲು
  • ಗುಗ್ಗಿಳ್ಳು
  • ಪಕೋಡಿ
  • ಬೂಂದಿ
  • ಮಿಕ್ಸ್‌ಚರ್‌ ಅಥವಾ ಖಾರಾಶೇವೆಯ ರೀತಿಯಲ್ಲಿನ ಬೂಂದಿಕಾಳು (ಕೊಚ್ಚಿದ ಈರುಳ್ಳಿಗಳು ಮತ್ತು ನಿಂಬೆ ರಸದೊಂದಿಗೆ ಬೆರೆಸಲಾಗುವ ಬೂಂದಿ) -
  • ಪೊಂಗನಾಲು
  • ಪುನುಕುಲು
  • ಉಪಮಾ
  • ಬೋಂಡಾಲು ಅಥವಾ ಮಸಾಲೆಭರಿತ ಗೊಜ್ಜುಗಳು ಅಥವಾ ವ್ಯಂಜನಗಳೊಂದಿಗಿನ ಪುನುಕುಲು (ಅಲ್ಲಂ ಪಚಡಿ)
  • ಮಿರಪಕಾಯ ಬಜ್ಜಿ - ಇದು ಹೆಚ್ಚುವರಿ-ಖಾರವನ್ನು ಹೊಂದಿರುವ ಮೆಣಸಿನಕಾಯಿಗಳಿಂದ ತಯಾರಿಸಲಾಗುವ ಒಂದು ಸ್ಥಳೀಯ ಆಹಾರ-ವೈವಿಧ್ಯವಾಗಿದೆ; ಖಾರದ ಮೆಣಸಿನಕಾಯಿಗಳ ಒಳಗೆ ಮಸಾಲೆಗಳನ್ನು ತುಂಬಿಸಿ, ಕಡಲೆಹಿಟ್ಟಿನ ತಿಳಿಹಿಟ್ಟಿನಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯುವುದು ಇದರ ವಿಶೇಷತೆ
  • ಉಲ್ಲಿಪಕೋಡಿ - ಇವು ಕತ್ತರಿಸಿದ ಈರುಳ್ಳಿ ಮತ್ತು ಮಸಾಲೆಗಳನ್ನು ಕಡಲೆಹಿಟ್ಟಿನ ತಿಳಿಹಿಟ್ಟಿಗೆ ಸೇರಿಸಿ ತಯಾರಿಸಲಾದ ಪನಿಯಾಣಗಳಾಗಿವೆ
  • ಗಾರೆ (ಇದು ವಡೆಯನ್ನು ಹೋಲುತ್ತದೆ). ಗಾರೆಗಳು, ಆಳವಾಗಿ ಕರಿಯಲ್ಪಟ್ಟ ಮತ್ತು ಮಸಾಲೆಯುಕ್ತವಾಗಿರುವ ಒಂದು ಕಣಕದ ಮುದ್ದೆಯಾಗಿವೆ.
  • ಪೆರುಗು ಗಾರೆ / ಆವಡಲು ಇವು ಒಂದು ಮೊಸರು ಗೊಜ್ಜಿನಲ್ಲಿ ಮ್ಯಾರಿನೇಡ್‌ ದ್ರಾವಣದಲ್ಲಿ ಊರಿಟ್ಟ ತಿನಿಸಾಗಿವೆ.

ಸಿಹಿತಿಂಡಿಗಳು[ಬದಲಾಯಿಸಿ]

  • ಲಡ್ಡು
  • ಪೂರ್ಣಾಲು ಅಥವಾ ಬೂರೆಲು
  • ರವಾ ಲಡ್ಡು
  • ಭಕ್ಷ್ಯಾಲು ಅಥವಾ ಬೊಬ್ಬಟ್ಲು ಅಥವಾ ಪೊಲೆಲು
  • ಪೂಥಾರೆಕುಲು
  • ಅರಿಸೆಲು
  • ಖಾಜಾ
  • ಪಾಯಸಮ್‌
  • ಗವ್ವಾಲು
  • ತೆಲಂಗಾಣ ಗರ್ಜಾಲು
  • ಚಕ್ಕೆರ ಪೊಂಗಲಿ (ಸಕ್ಕರೆ ಪೊಂಗಲ್‌)
  • ಲಸ್ಕೊರ ಉಂಡಾಲು (ತೆಂಗಿನಕಾಯಿ ಲಡ್ಡು) ಅಥವಾ ರಸ್ಕೊರ ಉಂಡಾಲು (ತೆಂಗಿನಕಾಯಿ ಲಡ್ಡು)
  • ಬೂಂದಿ
  • ಪಲಥಾಲಿಕಾಲು
  • ರವಾ ಕೇಸರಿ
  • ಪಪ್ಪುಚೆಕ್ಕ
  • ಜೀಡಿಲು
  • ಕೊಬ್ಬರಿ ಲವುಜು
  • ತೆಲಂಗಾಣ ಸಕಿನಾಲು
  • ವೆನ್ನಪ್ಪಾಲು

ಪ್ರಾದೇಶಿಕ ವೈವಿಧ್ಯತೆಗಳು[ಬದಲಾಯಿಸಿ]

ತೆಲುಗು ಪಾಕಪದ್ಧತಿಯಲ್ಲಿ ಒಂದಷ್ಟು ಪ್ರಾದೇಶಿಕ ಬದಲಾವಣೆಗಳು ಕಂಡುಬರುತ್ತವೆ. ಆಂಧ್ರಪ್ರದೇಶದ ಪಶ್ಚಿಮದ ಪ್ರದೇಶವಾದ ತೆಲಂಗಾಣವು ತನ್ನ ಪಾಕಪದ್ಧತಿಯಲ್ಲಿ ಕೆಲವೊಂದು ಅನನ್ಯ ಭಕ್ಷ್ಯಗಳನ್ನು ಹೊಂದಿದೆ. ಅವುಗಳೆಂದರೆ: ಜೊನ್ನ ರೊಟ್ಟೆ (ಹುಲ್ಲುಜೋಳ), ಸಜ್ಜಾ ರೊಟ್ಟೆ (ಸಜ್ಜೆ), ಅಥವಾ ಉಪ್ಪುಡಿ ಪಿಂಡಿ (ನುಚ್ಚಿನ ಅನ್ನ). ತೆಲಂಗಾಣ ಪ್ರದೇಶವು ಒಂದು ಸುದೀರ್ಘಕಾಲದವರೆಗೆ ಮುಸ್ಲಿಮ್‌ ರಾಜರ ನಿಯಂತ್ರಣದ ಅಡಿಯಲ್ಲಿದ್ದ ಕಾರಣದಿಂದಾಗಿ, ತೆಲಂಗಾಣ ಪಾಕಪದ್ಧತಿಯು ಪರ್ಷಿಯನ್‌ ಮತ್ತು ಆಫ್ಘನ್‌ ಪಾಕಪದ್ಧತಿಯಿಂದ ಪ್ರಭಾವಿತಗೊಂಡಿದೆ. ಮಹಾರಾಷ್ಟ್ರದಲ್ಲಿ ಕಂಡುಬರುವ ಕಡಿ ಎಂಬ ವ್ಯಂಜನವನ್ನು ಹೋಲುವ ಭಕ್ಷ್ಯಗಳನ್ನು ಉತ್ತರದ ತೆಲಂಗಾಣ ಜಿಲ್ಲೆಗಳಲ್ಲಿನ ಪಾಕಪದ್ಧತಿಯು ಹೊಂದಿದೆ.

ರಾಯಲಸೀಮಾ ಪ್ರದೇಶಗಳಲ್ಲಿ ವಿಭಿನ್ನ ಆಹಾರಗಳು ಮತ್ತು ಕುರುಕಲು ತಿಂಡಿಗಳನ್ನು ತಯಾರಿಸಲಾಗುತ್ತದೆ. ಅವುಗಳೆಂದರೆ: ಅತಿರಸಾಲು (ಅರೆಸಿ) ಬಾದುಷಾ ಜಾಂಗಿರ್‌ ಜಿಲೇಬಿ ಪಾಕಂ ಉಂಡಾಲು (ಇದು ಆವಿಯಿಂದ ಬೇಯಿಸಿದ ಅಕ್ಕಿಹಿಟ್ಟು, ಕಡಲೇಕಾಯಿಗಳು, ಬೆಲ್ಲ ಇವುಗಳ ಒಂದು ಮಿಶ್ರಣವಾಗಿದೆ) ಬೊರುಗು ಉಂಡಾಲು (ಜೋಳದ ಕಾಳು ಮತ್ತು ಬೆಲ್ಲದಿಂದ ತಯಾರಿಸಲಾದ ಒಂದು ಸಿಹಿ ವೈವಿಧ್ಯ) ಮಸಾಲೆ ಬೊರುಗುಲು (ಕುರುಕಲು ತಿಂಡಿಗಳ ರೀತಿಯದು) ರಾಗಿ ಮುದ್ದೆ ಸದ್ದಿ ಅನ್ನಂ (ಇದನ್ನು ರಾತ್ರಿ ಬೇಯಿಸಿದ ಅನ್ನವನ್ನು ಮಜ್ಜಿಗೆಯಲ್ಲಿ ನೆನೆಸಿ ಮಾಡಲಾಗುತ್ತದೆ) ಜೊನ್ನ, ರಾಗಿ ರೊಟ್ಟೆ, (ತುಪ್ಪದ ಒಂದು ಸಂಯೋಜನೆ) ಪೊಂಗನಾಲು (ನೆನೆಸಿದ ಅಕ್ಕಿಹಿಟನ್ನು ಎಣ್ಣೆ, ಕ್ಯಾರಟ್‌, ಈರುಳ್ಳಿಗಳು, ಮೆಣಸಿನಕಾಯಿಗಳಳೊಂದಿಗೆ ಹುರಿದು ತಯಾರಿಸಿದ್ದು) ಬೋಂಡಾ, ಮೆಣಸಿನಕಾಯಿ ಬಜ್ಜಿಯ ರೋಸ್ಟ್‌ ರವಾ ಲಡ್ಡು

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಭಾರತೀಯ ಪಾಕಪದ್ಧತಿ
  • ತಮಿಳು ಪಾಕಪದ್ಧತಿ
  • ಕರ್ನಾಟಕದ ಪಾಕಪದ್ಧತಿ