ತಾತ್ವಿಕ ಕಾವ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾತ್ವಿಕ ಕಾವ್ಯದ ಪರಿಚಯ[ಬದಲಾಯಿಸಿ]


  • ತಾತ್ವಿಕ ಕಾವ್ಯಗಳು ಭಾರತಕ್ಕೆ , ಕನ್ನಡ ನಾಡಿಗೆ ಹೊಸತಲ್ಲ. ಪ್ರಾಚೀನ ಕಾವ್ಯಗಳಲ್ಲಿ , ವಚನಗಳಲ್ಲಿ , ದಾಸರ ಪದಗಳಲ್ಲಿ, ಸರ್ವಜ್ಞತ್ರಿಪದಿಗಳಲ್ಲಿ, ಇತ್ತೀಚೆಗೆ ಬರುತ್ತಿರುವ ಕೆಲವು ಕವನಗಳು, ಚೌಪದಿ ಗಳು - ಕಗ್ಗಗಳು ಮೊದಲಾದವುಗಳಲ್ಲಿ ಅವುಗಳನ್ನು ಕಾಣಬಹುದು.
  • ಉದಾಹರಣೆಗೆ ಕೆಳಗೆ ಒಂದು ಕವನ ಕೊಟ್ಟಿದೆ.

ತಾತ್ವಿಕ ಕವನ-ಕಗ್ಗಗಳು[ಬದಲಾಯಿಸಿ]


  • ಸತ್ಯ - ಮಿಥ್ಯ,
  • ನಿದ್ದೆ ಕೊಡವಿ ಕಣ್ಣ ತೆರೆಯೆ ಬರಿಯ ಬಯಲ ಭೂಮವು ;
  • ಎದ್ದು ನೋಡೆ ನೆತ್ತಿ ಮೇಲೆ ಹತ್ತಿ ಉರಿವ ಸ್ವಾಮಿಯು ;
  • ಸದ್ದೆ ಇಲ್ಲ ಉದ್ದ ಬಯಲು ಪವನ ಮಂದ ಗಾಮಿಯು ;
  • ಇದ್ದರಿಲ್ಲಿ ನಾನೆ ಒಬ್ಬ ನನಗೆ ನಾನೆ ಸ್ವಾಮಿಯು . ||೧||

-

  • ಜಗದೆ ಇದಕು ಮಿಗಿಲು ಏನು ?-ಇರುವುದೆಲ್ಲ ಇಲ್ಲಿಯೆ ;
  • ಸೊಗವು ಏನು? ಕೊರಗು ಏನು? ತಿರುಳು ಎಲ್ಲ ಇಷ್ಟೆಯೆ ;
  • ಬಗೆಯು ಕೆಡಲು ಇದುವೆ ಭವವು -ಎಲ್ಲ ಮನದೊಳಲ್ಲವೆ?
  • ನಗೆಯ ಕಡಲು ಸುಖದ ಹೊನಲು ಬರಿಯ ಮಿಥ್ಯೆಯಲ್ಲವೆ! ||೨||

-

  • ಇರುಳೊಲೆಲ್ಲ ವಿರಹಬಟ್ಟು ಇನನು ಬರಲು ಅರಳುವ ;
  • ದುಂಬಿ ಮುದಿಸೆ ಬಯಸಿ ಬಳಲಿ ನಿಂತ ಕುಸುಮ ಕುಸುಮಿಪ;
  • ಭಾವ ತುಂಬಿ ನೋಟ ಸೇರಿ ಹೃದಯ ಹೃದಯ ಮಿಡಿಯುವ;
  • ಎಲ್ಲ ಬೆಮೆಯು ಸಾವ ನೋಡೆ ಸನಿಹ ಕುಳಿತು ಕರೆಯುವ. ||೩||

-

  • ಕೋಟಿ ಕೋಟಿ ವರುಷದಿಂದ ಎಣಿಪ ದಿನದ ಸಂಖ್ಯೆಯು,
  • ಸಾಟಿಯಿಲ್ಲವೆಂದು ತಿಳಿವ ಧೀಯ ಕೃತಿಯ ಕಂತೆಯು,
  • ಮೇರೆ ಮೀರಿ ಅರಿವ ಮೀರಿ ಹರಿದ ಜಗದ ಸಂಖ್ಯೆಯು,
  • ಸುಳ್ಳು ಕತೆಯು ಕಾದುಕುಳಿತ ಸಾವು ತಾನು ನುಂಗಲು! ||೪||

-

  • ಟಿಪ್ಪಣಿ: ಭೂಮ -ಅತಿ ದೊಡ್ಡದು, ವಿಶಾಲವಾದುದು.; ಸ್ವಾಮಿ=ಸೂರ್ಯ; ೨)ಆತ್ಮ , ಬ್ರಹ್ಮ , ಬಗೆ=ಮನಸ್ಸು ; ಮಿಥ್ಯೆ =ಸುಳ್ಳು ,ಅಸ್ಥಿರ; ಬೆಮೆ=ಭ್ರಮೆ; ಧೀ =ಬುದ್ಧಿ , ಮೇಧಾಶಕ್ತಿ. ಹರಿದ =ಹರಡಿದ ವಿಸ್ತರಿಸಿದ

. -

ಕವನ ೨: ನಾನೆಂಬುವನಾರು ?[ಬದಲಾಯಿಸಿ]


  • <ನಾನೆಂಬುವನಾರು ?>
  • ನಾನು ನಾನೆಂದೆನುತ ನನಗೆ ನನಗೆಂದೆನುತ
  • ಎನ್ನೊಳಗಡಗಿದ್ದು ಆಳುವನಾರೋ ಇವನು?
  • ಪರಿಪರಿಯ ತರದಲ್ಳಿ ಪರಿಪರಿಯ ಊಹೆಗಳ
  • ತೆರವಿಲ್ಲದಯೆ ಮಾಡುವ ಗೂಢನಿವನಾರು? ||೧||

-

  • ಹಿಂದು ಮುಂದಿನದೆಲ್ಲ ಕಂಡಂತೆ ಚಿತ್ರಿಸುತ
  • ಸುಂದರದ ಕನಸುಗಳ ಹೆಣೆವನಾರೊ ಇವನು?
  • ಐದು ಇಂದ್ರಿಯಗಳಲಿ ಬೇರೆ ಬೇರೆಯೆ ತೋರಿ
  • ಬಗೆ ಬಗೆಯ ಅನುಭವವ ಪಡೆವನಾರೊ ಇವನು

-

  • ವಿವಿಧ ಅಣುಗಳು ಸೇರಿ ವಿವಿಧ ಅನ್ನವ ಸೇರಿ
  • ಸವೆಯುವೀ ದೇಹಕ್ಕೆ ಕೊರಗುವವನಾರೊ ಇವನು?
  • ಸುಪ್ತ ಚೇತನದಲ್ಲಿ ಸುಪ್ತವಲ್ಲದೆ ತೋರಿ
  • ಸುಪ್ತವಾನಿರ್ಗುಣದಿ ಸಗುಣನಿವನಾರೋ?

-

  • ನಾನು ನನಗೆಂದೆನುತ ತನ್ನಿಷ್ಟದಲೆ ನಡೆದು
  • ತನ್ನ ಹುಟ್ಟರಿಯದಿಹನಾರೊ ಇವನು?
  • ಎಲ್ಲಿಂದ ಬಂದಿರುವ ಎಲ್ಲಿ ಹೋಗುವನಿವನು
  • ಇಲ್ಲಿ ಇಂತೇಕೆ ಬಂಡಾಟಗೊಳುವನಿವನು?
  • (ರಚನೆ :-ಬಿ.ಎಸ್.ಚಂದ್ರಶೇಖರ,ಸಾಗರ ಕಾಪಿ ರೈಟಿನಿಂದ ಮುಕ್ತ))

ಶ್ರೀ ಡಿ.ವಿ.ಜಿಯವರ ಕಗ್ಗ[ಬದಲಾಯಿಸಿ]


  • ಶ್ರೀ ಡಿ.ವಿ.ಜಿ
  • ಕನ್ನಡ ಕಾವ್ಯಕ್ಷೇತ್ರದಲ್ಲಿ "ಮಂಕುತಿಮ್ಮನ ಕಗ್ಗ" ಹಾಗೂ "ಮರುಳ ಮುನಿಯನ ಕಗ್ಗ" ದ ಮೂಲಕ ಡಿ ವಿ ಜಿ ಮನೆಯ ಮಾತಾದವರು: ಇದು ಕನ್ನಡ ಭಗವದ್ಗೀತೆ ಎಂದು ಹೆಸರಾಗಿದೆ.
  • ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
  • ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
  • ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
  • ಪದ ಕುಸಿಯೆ ನೆಲವಿಹುದು -- ಮಂಕುತಿಮ್ಮ ||"
  • (ಡಿ.ವಿ.ಜಿ - ತಾಣದಿಂದ)

-

ಸರ್ವಜ್ಞ ವಚನ[ಬದಲಾಯಿಸಿ]


  • ಒಂದರ ಮೊದಲೊಳಗೆ ಬಂದಿಹುದು ಜಗವೆಲ್ಲ
  • ಒಂದರ ಮೊದಲನರಿದರೆ ಜಗ ಕಣ್ಣ -
  • ಮುಂದೆ ಬಂದಿಹುದು ಸರ್ವಜ್ಞ ||
  • ಟಿ : ಜಗದ ಮೂಲವಾದ ಆ ಒಂದು ಬ್ರಹ್ಮವನ್ನು ಅರಿತರೆ ಜಗತ್ತನ್ನೇ ಅರಿಯಬಹುದು.

-

  • ತನ್ನ ತಾ ಅರಿದಂಗೆ ಭಿನ್ನ ಭಾವನೆ ಯಿಲ್ಲ,
  • ತನ್ನವರು ಇಲ್ಲ ,ಪರರಿಲ್ಲ, ತ್ರಿಭುವನ
  • ತನ್ನೊಳಗೆ ಇಹುದು ಸರ್ವಜ್ಞ ||
  • ಟಿ : ತಾನು ಆತ್ಮ ಸ್ವರೂಪನು ಎಂದು ಅರಿತವನು, ಎಲ್ಲವನ್ನೂ ತನ್ನೊಳಗೆ ಕಾಣುತ್ತಾನೆ. "ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನು ಪಶ್ಯತಿ, ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ|| ಈಶಾವಾಸ್ಯೋಪನಿಷತ್ ||

-

ನೋಡಿ :[ಬದಲಾಯಿಸಿ]