ತಮಿಳುನಾಡಿನ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟೋಲೆಮಿಯ ನಂತರ ಸೃಷ್ಟಿಸಿದ ದಕ್ಷಿಣ ಭಾರತದ ಪ್ರಾಚೀನ ನಕ್ಷೆ. ಬಹುಶಃ ಅವನ ನಕ್ಷಾಶಾಸ್ತ್ರವನ್ನು ಅನುಸರಿಸಿ ಇದನ್ನು ಸೃಷ್ಟಿಸಿರಬಹುದು.
ಫೋರ್ಟ್ ಸೇಂಟ್ ಜಾರ್ಜ್, ಚೆನ್ನೈ. 18 ಶತಮಾನದ ರೇಖಾಚಿತ್ರ
ಮದ್ರಾಸ್ ಪ್ರೆಸಿಡೆನ್ಸಿ, 1909
ಮುಂಚಿನ ಮದ್ರಾಸ್ ರಾಜ್ಯವನ್ನು ಮರುಹೆಸರಿಸಿ 1969ರಲ್ಲಿ ತಮಿಳುನಾಡಿನ ರಾಜಕೀಯ ವ್ಯವಸ್ಥೆಯ ರಾಜ್ಯವನ್ನು ರಚಿಸಲಾಯಿತು.

ಆಧುನಿಕ ಭಾರತದಲ್ಲಿ ಇತಿಹಾಸಪೂರ್ವ ಕಾಲದಿಂದಲೂ ಕರ್ನಾಟಕ ಕರ್ನಾಟಕ ಕರ್ನಾಟಕ ಕರ್ನಾಟಕ ಕರ್ನಾಟಕ ಪ್ರದೇಶವು ಸತತವಾಗಿ ಮಾನವನ ನೆಲೆಯಾಗಿದೆ. ತಮಿಳು ಜನರ ನಾಗರಿಕತೆ ವಿಶ್ವದಲ್ಲೇ ಅತೀ ಪ್ರಾಚೀನವಾದ ನಾಗರೀಕತೆಗಳಲ್ಲಿ ಒಂದೆಂದು ಪರಿಗಣಿಸ ಲಾಗಿದೆ. ಇತಿಹಾಸದುದ್ದಕ್ಕೂ, ಪೂರ್ವ ಪ್ರಾಚೀನ ಶಿಲಾಯುಗದಿಂದ ಹಿಡಿದು ಆಧುನಿಕ ಕಾಲದವರೆಗೆ, ಈ ಪ್ರದೇಶವು ವಿವಿಧ ಬಾಹ್ಯ ಸಂಸ್ಕೃತಿಗಳ ಜತೆಯಲ್ಲಿ ಬೆಳೆದಿದೆ. ಅದರ ಇತಿಹಾಸದಲ್ಲಿ ಅಲ್ಪಾವಧಿಗಳನ್ನು ಹೊರತುಪಡಿಸಿ, ತಮಿಳು ಪ್ರದೇಶವು ಬಾಹ್ಯ ಆಕ್ರಮಣದಿಂದ ಸ್ವತಂತ್ರವಾಗಿ ಉಳಿದಿದೆ.

ನಾಲ್ಕು ಪ್ರಾಚೀನ ಕನ್ನಡ ಸಾಮ್ರಾಜ್ಯಗಳಾದ ಚಾಲುಕ್ಯ, ಕದಂಬ, ರಾಷ್ಟ್ರಕೂಟ, ಹೊಯ್ಸಳ, ಗಂಗರು ಪ್ರಾಚೀನ ಮೂಲಗಳಿಗೆ ಸೇರಿದೆ. ಅವರು ಒಂದಾಗಿ ವಿಶಿಷ್ಟ ಸಂಸ್ಕೃತಿ ಮತ್ತು ಭಾಷೆಯೊಂದಿಗೆ ಈ ನೆಲವನ್ನು ಆಳಿದರು ಹಾಗು ವಿಶ್ವದಲ್ಲೇ ಕೆಲವು ಅತ್ಯಂತ ಪ್ರಾಚೀನ ಚಾಲ್ತಿಯಲ್ಲಿರುವ ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡಿದರು. ಅವರು ರೋಮ್ ಸಾಮ್ರಾಜ್ಯದ ಜತೆಗೆ ಕಡಲ ವ್ಯಾಪಾರ ಸಂಪರ್ಕಗಳನ್ನು ವ್ಯಾಪಕವಾಗಿ ಹೊಂದಿದ್ದರು. ಈ ಮೂರು ರಾಜಮನೆತನಗಳು ನೆಲದ ಆಧಿಪತ್ಯಕ್ಕಾಗಿ ಪೈಪೋಟಿಯಲ್ಲಿ ಪರಸ್ಪರ ಸತತ ಸೆಣಸಾಟ ನಡೆಸಿದ್ದರು.

ಇತಿಹಾಸಪೂರ್ವ ಅವಧಿ[ಬದಲಾಯಿಸಿ]

೩ನೇ ಶತಮಾನದಲ್ಲಿ ಕಳಭ್ರರ ಆಕ್ರಮಣದಿಂದ ರಾಜ್ಯವಾಳುತ್ತಿದ್ದ ಮೂರು ಪ್ರಭುತ್ವಗಳು ಸ್ಥಳಪಲ್ಲಟಗೊಳ್ಳುವ ಮೂಲಕ ನೆಲದ ಸಾಂಪ್ರದಾಯಿಕ ವ್ಯವಸ್ಥೆ ಕದಡಿತು. ಪಾಂಡ್ಯರು ಮತ್ತು ಪಲ್ಲವರು ಮತ್ತೆ ತಲೆಎತ್ತಿದ್ದರಿಂದ ಈ ಆಕ್ರಮಣಕಾರರನ್ನು ಪದಚ್ಯುತಗೊಳಿಸಲಾಯಿತು. ನಂತರ ಅವರು ಸಾಂಪ್ರದಾಯಿಕ ಪ್ರಭುತ್ವಗಳನ್ನು ಮರುಸ್ಥಾಪಿಸಿದರು.

೯ನೇ ಶತಮಾನದಲ್ಲಿ ಅಜ್ಞಾತರಾಗಿದ್ದ ಚೋಳರು ಮತ್ತೆ ಚೇತರಿಸಿಕೊಂಡು ಪಲ್ಲವರು ಮತ್ತು ಪಾಂಡ್ಯರನ್ನು ಸೋಲಿಸಿ, ಬಲಾಢ್ಯ ಶಕ್ತಿಯಾಗಿ ಹೊರಹೊಮ್ಮಿದರು. ಜೊತೆಗೆ ಇಡೀ ದಕ್ಷಿಣ ಪರ್ಯಾಯ ದ್ವೀಪದಲ್ಲಿ ತಮ್ಮ ಸಾಮ್ರಾಜ್ಯವನ್ನು ಅವರು ವಿಸ್ತರಿಸಿದರು. ಅದರ ಉತ್ಕರ್ಷಕಾಲದಲ್ಲಿ ಚೋಳ ಸಾಮ್ರಾಜ್ಯವು ಬಹುಮಟ್ಟಿಗೆ ೩,೬೦೦,000 ಕಿಮಿ² (1,389,968 ಚದರ ಮೈಲು)ಹರಡಿಕೊಂಡು, ಬಂಗಾಳಕೊಲ್ಲಿವರೆಗೆ ವ್ಯಾಪಿಸಿತ್ತು. ಚೋಳ ನೌಕಾದಳವು ಆಗ್ನೇಯ ಏಷ್ಯಾದ ಶ್ರೀವಿಜಯ ಪ್ರಭುತ್ವದ ಮೇಲೆ ನಿಯಂತ್ರಣ ಸಾಧಿಸಿತ್ತು.

ವಾಯವ್ಯ ಪ್ರದೇಶದಿಂದ ಮುಸ್ಲಿಂ ಸೇನೆಗಳ ಹಠಾತ್ ದಾಳಿಗಳಿಂದ ದೇಶದ ಉಳಿದ ಭಾಗದಲ್ಲಿ ಕ್ಷಿಪ್ರಗತಿಯ ಬದಲಾವಣೆಗಳುಂಟಾಗಿ ತಮಿಳುನಾಡಿನ ಇತಿಹಾಸದಲ್ಲಿ ತಿರುವು ತೆಗೆದುಕೊಂಡಿತು. ೧೪ನೇ ಶತಮಾನದಲ್ಲಿ ಮೂರು ಪ್ರಾಚೀನ ರಾಜವಂಶಗಳ ಕುಸಿತದಿಂದ, ತಮಿಳು ದೇಶವು ವಿಜಯನಗರ ಸಾಮ್ರಾಜ್ಯದ ಅಧೀನಕ್ಕೆ ಒಳಪಟ್ಟಿತು. ಈ ಸಾಮ್ರಾಜ್ಯದ ಅಧೀನದಲ್ಲಿ ತೆಲುಗು ಭಾಷಿಕ ನಾಯಕ್ ಮಂಡಲಾಧಿಪತಿಗಳು ತಮಿಳುನಾಡನ್ನು ಆಳ್ವಿಕೆ ಮಾಡಿದರು.

ಮರಾಠರ ಸಂಕ್ಷಿಪ್ತ ದರ್ಶನವು ಐರೋಪ್ಯ ವ್ಯಾಪಾರ ಕಂಪನಿಗಳಿಗೆ ದಾರಿ ಕಲ್ಪಿಸಿತು. ೧೭ನೇ ಶತಮಾನದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ ಅವರು, ನಾಡಿನ ಸ್ಥಳೀಯ ಅರಸರ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದರು. ದಕ್ಷಿಣ ಭಾರತದ ಬಹುತೇಕ ಭಾಗವನ್ನು ಒಳಗೊಂಡಿದ್ದ ಮದ್ರಾಸ್ ಪ್ರೆಸಿಡೆನ್ಸಿಯನ್ನು 18ನೇ ಶತಮಾನದಲ್ಲಿ ಸೃಷ್ಟಿಸಲಾಯಿತು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಅದನ್ನು ನೇರವಾಗಿ ಆಳ್ವಿಕೆ ಮಾಡಿತು. ಭಾರತದ ಸ್ವಾತಂತ್ರ್ಯದ ನಂತರ, ಭಾಷಾವಾರು ಗಡಿಗಳ ಆಧಾರದ ಮೇಲೆ ತಮಿಳುನಾಡು ರಾಜ್ಯವನ್ನು ಸೃಷ್ಟಿಸಲಾಯಿತು.

ಆರಂಭಿಕ ಇತಿಹಾಸ[ಬದಲಾಯಿಸಿ]

ಖರವೇಲರ ಹಥಿಗುಂಪ ಶಾಸನ

ಪ್ರಾಚೀನ ತಮಿಳುನಾಡು ಮೂರು ರಾಜಾಡಳಿತದ ರಾಜ್ಯಗಳನ್ನು ಹೊಂದಿದ್ದು, ವೆಂಟಾರ್ ಎಂದು ಹೆಸರಾದ ರಾಜರ ಆಧಿಪತ್ಯ ಹೊಂದಿತ್ತು ಮತ್ತು ಅನೇಕ ಬುಡಕಟ್ಟು ನಾಯಕತ್ವಗಳಿಗೆ ವೆಲ್ ಅಥವಾ ವೆಲಿರ್ ಎಂದು ಸಾಮಾನ್ಯ ವರ್ಗನಾಮದಿಂದ ಕರೆಯಲಾಗುತ್ತಿದ್ದ ಮುಖಂಡರು ಮುಂದಾಳತ್ವ ವಹಿಸಿದ್ದರು.[೧] ಸ್ಥಳೀಯ ಮಟ್ಟದಲ್ಲಿ ಇನ್ನೂ ಕೆಳಗೆ ಜನಾಂಗದ ಮುಖಂಡರಾದ ಕಿಜರ್ ಅಥವಾ ಮನ್ನಾರ್ ‌ಗಳಿದ್ದರು.[೨]

೩ನೇ ಶತಮಾನದ BCEನಲ್ಲಿ, ಡೆಕ್ಕನ್ ಪ್ರಸ್ತಭೂಮಿಯು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ೧ನೇ ಶತಮಾನದ BCEಯ ಮಧ್ಯಾವಧಿಯಿಂದ ೨ನೇ ಶತಮಾನದ CEವರೆಗೆ ಇದೇ ಪ್ರದೇಶವನ್ನು ಸತ್ಯವಾಹನ ರಾಜವಂಶ ಆಳುತ್ತಿತ್ತು. ಈ ಉತ್ತರದ ಸಾಮ್ರಾಜ್ಯಗಳ ಹತೋಟಿಯ ಹೊರಗೆ ತಮಿಳು ಪ್ರದೇಶವು ಸ್ವತಂತ್ರ ಅಸ್ತಿತ್ವವನ್ನು ಹೊಂದಿತ್ತು. ತಮಿಳು ಅರಸರು ಮತ್ತು ಮುಖಂಡರು ಬಹುಮಟ್ಟಿಗೆ ಆಸ್ತಿಪಾಸ್ತಿಯ ವಿಷಯದಲ್ಲಿ ಪರಸ್ಪರ ಸದಾ ಸಂಘರ್ಷದಲ್ಲಿ ತೊಡಗಿರುತ್ತಿದ್ದರು. ರಾಜಮನೆತನದ ಆಸ್ಥಾನಗಳು ಅಧಿಕಾರದ ಹಂಚಿಕೆಯ ಸ್ಥಳಗಳಾಗುವ ಬದಲಿಗೆ ಬಹುಮಟ್ಟಿಗೆ ಸಾಮಾಜಿಕ ಕೂಟವಾಗಿತ್ತು ಹಾಗು ಸಂಪನ್ಮೂಲಗಳ ವಿತರಣೆಯ ಕೇಂದ್ರಗಳಾಗಿತ್ತು.

ಕ್ರಮೇಣ ಅರಸರು ಉತ್ತರ ಭಾರತದ ಪ್ರಭಾವ ಮತ್ತು ವೈದಿಕ ಸಿದ್ಧಾಂತದ ಆಕರ್ಷಣೆಗೆ ಒಳಗಾದರು. ಅರಸನ ಸ್ಥಾನಮಾನ ವೃದ್ಧಿಗೆ ಯಜ್ಞಗಳನ್ನು(ಬಲಿಕೊಡುವುದು) ನಿರ್ವಹಿಸಲು ಉತ್ತೇಜಿಸಲಾಯಿತು.[೩] ಮೂರು ರಾಜಮನೆತನಗಳಾದ ಚೋಳರು, ಪಾಂಡ್ಯರು ಮತ್ತು ಚೇರರ ಹೆಸರುಗಳನ್ನು ಅಶೋಕ ಸ್ತಂಭಗಳ 273 -232 BCEಯಲ್ಲಿ ಕೆತ್ತಲಾಗಿದೆ)ಕೆತ್ತನೆಗಳಲ್ಲಿ ಉಲ್ಲೇಖಿಸಲಾಗಿದೆ.

ಅಶೋಕನ ಅಧೀನದಲ್ಲಿಲ್ಲದ ಪ್ರಭುತ್ವಗಳು ಕೂಡ ಅವನ ಜತೆ ಸ್ನೇಹಭಾವದಿಂದ ಇದ್ದವು.[೪][೫]

ಸುಮಾರು 150 BCEನಲ್ಲಿ ಆಳ್ವಿಕೆ ಮಾಡಿದ ಕಳಿಂಗದ ರಾಜ ಖಾರವೆಲನನ್ನು ಸುಮಾರು 100 ವರ್ಷಗಳವರೆಗೆ ಅಸ್ತಿತ್ವದಲ್ಲಿದ್ದ ತಮಿಳು ಪ್ರಭುತ್ವಗಳ ಒಕ್ಕೂಟದ ಪ್ರಖ್ಯಾತ ಹಥಿಗುಂಪ ಕೆತ್ತನೆಯಲ್ಲಿ ಉಲ್ಲೇಖಿಸಲಾಗಿದೆ.[೬]

ಈ ಮುಂಚಿನ ಸಾಮ್ರಾಜ್ಯಗಳು ಪ್ರಾಚೀನವಾದ ಈಗ ಚಾಲ್ತಿಯಲ್ಲಿರುವ ತಮಿಳು ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು. ಸಂಗಂ ಸಾಹಿತ್ಯ ಎಂದು ಉಲ್ಲೇಖಿಸಲಾದ ಶ್ರೇಷ್ಠ ತಮಿಳು ಸಾಹಿತ್ಯವು 200BCE and 300 CEನಡುವಿನ ಅವಧಿಯಲ್ಲಿ ಪ್ರವರ್ಧಿಸಿತು.[೭][೮]

ಸಂಗಮ್ ಸಾಹಿತ್ಯದ ಕಾವ್ಯಗಳು ಭಾವನಾತ್ಮಕ ಮತ್ತು ಬೌತಿಕ ವಿಷಯಗಳನ್ನು ಒಳಗೊಂಡಿದ್ದು, ಮಧ್ಯಕಾಲೀನ ಯುಗದಲ್ಲಿ ವಿವಿಧಕಾವ್ಯ ಸಂಕಲನಗಳಲ್ಲಿ ವರ್ಗೀಕರಿಸಲಾಗಿದೆ ಮತ್ತು ಸಂಗ್ರಹಿಸಲಾಗಿದೆ. ಈ ಸಂಗಂ ಕವನಗಳು ವಿವಿಧ ಔದ್ಯೋಗಿಕ ಗುಂಪುಗಳಾಗಿ ಸಂಘಟಿತರಾದ ಜನರು ಮತ್ತು ಫಲವತ್ತಾದ ಭೂಮಿಯ ಬಗ್ಗೆ ಚಿತ್ರಣ ಒದಗಿಸುತ್ತದೆ. ವಂಶಾಡಳಿತದ ರಾಜಪ್ರಭುತ್ವಗಳು ಪ್ರದೇಶವನ್ನು ಆಳುತ್ತಾರೆ. ಆದರೆ ರಾಜ್ಯದ ಚಟುವಟಿಕೆಗಳ ಕ್ಷೇತ್ರ ಮತ್ತು ಅರಸನ ಅಧಿಕಾರಗಳ ವ್ಯಾಪ್ತಿಯು ಸ್ಥಾಪಿತ ವ್ಯವಸ್ಥೆ(ಧರ್ಮ )ಗೆ ನಿಷ್ಠೆಯಿಂದಿರುವ ಮೂಲಕ ಸೀಮಿತಗೊಂಡಿದೆ.[೯]

ಜನರು ತಮ್ಮ ಅರಸರಿಗೆ ನಿಷ್ಠೆಯಿಂದ ಇರುತ್ತಿದ್ದರು ಮತ್ತು ಸಂಚಾರಿ ಕವಿಗಳು,ಸಂಗೀತಗಾರರು ಮತ್ತು ನರ್ತಕಿಯರು ಉದಾರಿ ರಾಜರ ಆಸ್ಥಾನಗಳಲ್ಲಿ ಕಲೆಯುತ್ತಿದ್ದರು. ಸಂಗೀತ ಮತ್ತು ನೃತ್ಯದ ಕಲೆಗಳು ಹೆಚ್ಚು ಅಭಿವೃದ್ಧಿಯಾಗಿತ್ತು ಮತ್ತು ಜನಪ್ರಿಯವಾಗಿತ್ತು.

ಸಂಗಂ ಕವಿತೆಗಳಲ್ಲಿ ವಿವಿಧ ರೀತಿಯ ಸಂಗೀತೋಪಕರಣಗಳನ್ನು ಉಲ್ಲೇಖಿಸಲಾಗಿದೆ. ದಕ್ಷಿಣ ಮತ್ತು ಉತ್ತರ ಶೈಲಿಗಳ ನೃತ್ಯದ ಸಂಯೋಜನೆ ಈ ಅವಧಿಯಲ್ಲಿ ಆರಂಭವಾಯಿತು ಮತ್ತು ಸಿಲಪ್ಪದಿಕಾರಂ ಕೃತಿಯಲ್ಲಿ ಇದನ್ನು ಪೂರ್ಣವಾಗಿ ಬಿಂಬಿಸಲಾಗಿದೆ.[೧೦]

ಆಂತರಿಕ ಮತ್ತು ಬಾಹ್ಯ ವ್ಯಾಪಾರ ಉತ್ತಮವಾಗಿ ಸಂಘಟಿತವಾಗಿ ಸಕ್ರಿಯವಾಗಿತ್ತು. ಪುರಾತತ್ವಶಾಸ್ತ್ರ ಮತ್ತು ಸಾಹಿತ್ಯದ ಸಾಕ್ಷ್ಯಾಧಾರದಿಂದ ಯವನರ (ಗ್ರೀಕರ)ಜತೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ವಿದೇಶಿ ವ್ಯಾಪಾರವನ್ನು ಕುರಿತು ಉಲ್ಲೇಖಿಸಲಾಗಿದೆ. ದಕ್ಷಿಣ ಭಾರತದ ಪೂರ್ವತೀರದ ಪುಹಾರ್ ಬಂದರು ನಗರ ಮತ್ತು ಪಶ್ಚಿಮತೀರದ ಮುಜಿರಿಸ್ ವಿದೇಶಿ ವ್ಯಾಪಾರದ ವಾಣಿಜ್ಯ ಕೇಂದ್ರಗಳಾಗಿದ್ದು, ಬೃಹತ್ ಹಡಗುಗಳು ಲಂಗರು ಹಾಕಿ ಅಮೂಲ್ಯ ವಾಣಿಜ್ಯ ಸರಕುಗಳನ್ನು ಇಳಿಸುತ್ತವೆ.[೧೧]

ಈ ವ್ಯಾಪಾರವು 2ನೇ ಶತಮಾನದ CEನಲ್ಲಿ ಕುಸಿಯಲಾರಂಭಿಸಿತು ಮತ್ತು ರೋಮ್ ಸಾಮ್ರಾಜ್ಯ ಮತ್ತು ಪ್ರಾಚೀನ ತಮಿಳು ದೇಶದ ನಡುವೆ ನೇರ ಸಂಪರ್ಕಕ್ಕೆ ಬದಲಿಯಾಗಿ ಅರಬ್ಬರು ಮತ್ತು ಪೂರ್ವಆಫ್ರಿಕದ ಆಕ್ಸಿಮೈಟರ ಜತೆ ವ್ಯಾಪಾರ ನಡೆಯಿತು.

ಆಂತರಿಕ ವ್ಯಾಪಾರ ಕೂಡ ಬಿರುಸಾಗಿತ್ತು ಮತ್ತು ಸರಕುಗಳು ಮಾರಾಟ ಮತ್ತು ವಿನಿಮಯವಾಗುತ್ತಿತ್ತು. ಜನಸಂಖ್ಯೆಯ ಬಹುತೇಕ ಮಂದಿ ಕೃಷಿಯನ್ನು ಮುಖ್ಯಕಸುಬಾಗಿ ಹೊಂದಿದ್ದರು ಮತ್ತು ವೆಳ್ಳಾಲರ್‌ರು ವಂಶಪಾರಂಪರ್ಯ ಕೃಷಿಕರು ಭೂಮಿಯ ದೊಡ್ಡ ಪ್ರಮಾಣವನ್ನು ಹೊಂದಿದ್ದರು.[೧೨]

ಪ್ರಾಚೀನ ಶಿಲಾಯುಗ[ಬದಲಾಯಿಸಿ]

ಇತಿಹಾಸಪೂರ್ವ ಅವಧಿಯಲ್ಲಿ ಪ್ರಾಚೀನ ಶಿಲಾಯುಗದ ವಾಸ್ತವ್ಯಗಳು ತಮಿಳುನಾಡು ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದವು. ಇದು 500,000 BCEಯಿಂದ ಸುಮಾರು 3000 BCEವರೆಗಿನ ಅವಧಿಯವರೆಗೆ ವಿಸ್ತರಿಸಿತ್ತು.[೧೩]

ಕೆಳ ಪ್ರಾಚೀನ ಶಿಲಾಯುಗ ಹಂತದಲ್ಲಿ ಬಹುಮಟ್ಟಿನ ಭಾಗದಲ್ಲಿ ಮಾನವರು ನದಿಕಣಿವೆಗಳಿಗೆ ಸಮೀಪದಲ್ಲಿ ವಿರಳ ಅರಣ್ಯಪ್ರದೇಶ ಅಥವಾ ಹುಲ್ಲುಗಾವಲು ಪರಿಸರಗಳಲ್ಲಿ ವಾಸಿಸಿದರು. ಜನಸಂಖ್ಯೆ ಸಾಂದ್ರತೆ ತೀರ ಕಡಿಮೆಯಿದ್ದು, ದಕ್ಷಿಣ ಭಾರತದಲ್ಲಿ ಇಲ್ಲಿಯವರೆಗೆ ಕೆಳ ಪ್ರಾಚೀನ ಶಿಲಾಯುಗ ದ ಸಂಸ್ಕೃತಿಯ ಕುರುಹು ಎರಡು ಪ್ರದೇಶಗಳಲ್ಲಿ ಮಾತ್ರ ಪತ್ತೆಯಾಗಿದೆ. ಇವುಗಳಲ್ಲೊಂದು ತಮಿಳುನಾಡಿನ ಚೆನ್ನೈನ ವಾಯವ್ಯಕ್ಕಿರುವ ಅಟ್ಟಿರಾಮ್‌ಪಕ್ಕಮ್ ಕಣಿವೆ.[೧೪]

ಪುರಾತತ್ವ ಇಲಾಖೆ ಸಂಶೋಧನೆಯಿಂದ ಉತ್ತರ ತಮಿಳುನಾಡಿನ ಸುತ್ತ ಪ್ರಾಣಿಗಳ ಅವಶೇಷಗಳು ಮತ್ತು ಪ್ರಾಚೀನಕಾಲದ ಕಲ್ಲಿನ ಆಯುಧಗಳ ಕುರುಹುಗಳು ಪತ್ತೆಯಾಗಿವೆ. ಇದು ೩00,000 BCE ಅವಧಿಗೆ ಸೇರಿದ್ದೆಂದು ಭಾವಿಸಲಾಗಿದೆ.[೧೫]

ಹೋಮೋ ಎರೆಕ್ಟಸ್ ಪ್ರಭೇದಗಳಿಗೆ ಸೇರಿದ ದಕ್ಷಿಣ ಭಾರತದ ಜನರು ಈ ಪ್ರಾಚೀನ ಹಳೆಯ ಶಿಲಾಯುಗದಲ್ಲಿ(ಪ್ಯಾಲಿಯೋಲಿಥಿಕ್)ಸುದೀರ್ಘಕಾಲದವರೆಗೆ ವಾಸಿಸಿದ್ದರು. ಕೈಕೊಡಲಿ ಮತ್ತು ಕಡುಗತ್ತಿ ಮುಂತಾದ ಕಚ್ಚಾ ಆಯುಧಗಳನ್ನು ಬಳಸಿಕೊಂಡು ಬೇಟೆ-ಸಂಗ್ರಹಕಾರರಾಗಿ ಜೀವನೋಪಾಯ ಸಾಗಿಸಿದ್ದರು.[೧೬]

ಆಧುನಿಕ ಮಾನವ ಜೀವಿಗಳ ಪೂರ್ವಜ (ಹೋಮೋ ಸ್ಯಾಪಿಯನ್ಸ್ ಸ್ಯಾಪಿಯನ್ಸ್ )ಸುಮಾರು 50 ,೦೦೦ ವರ್ಷಗಳ ಹಿಂದೆ ವಾಸಿಸಿದ್ದು, ಹೆಚ್ಚು ಸುಧಾರಣೆ ಹೊಂದಿದ್ದ. ಅವನು ವಿವಿಧ ಕಲ್ಲುಗಳನ್ನು ಬಳಸಿಕೊಂಡು ತೆಳು ಕಲ್ಲಿನ ಆಯುಧಗಳು ಮತ್ತು ಹರಿತವಾದ ಅಲಗಿನ ಆಯುಧಗಳನ್ನು ತಯಾರಿಸುತ್ತಿದ್ದ. ಸುಮಾರು 10,000 ವರ್ಷಗಳ ಹಿಂದೆ ಮಾನವರು ಮೈಕ್ರೋಲಿಥಿಕ್ ಸಾಧನಗಳೆಂದು ಕರೆಯಲಾದ ಇನ್ನೂ ಸಣ್ಣ ಸಾಧನಗಳನ್ನು ತಯಾರಿಸಿದರು.

ಈ ಸಾಧನಗಳನ್ನು ತಯಾರಿಸಲು ಪೂರ್ವ ಮಾನವರು ಬಳಸಿದ ಸಾಮಗ್ರಿಗಳು ಜಾಸ್ಪರ್, ಅಗೇಟ್, ಫ್ಲಿಂಟ್(ಚಕಮಕಿ ಕಲ್ಲು), ಬೆಣಚುಕಲ್ಲು ಮುಂತಾದವು. 1949ರಲ್ಲಿ, ಸಂಶೋಧಕರು ಇಂತಹ ಮೈಕ್ರೋಲಿಥ್(ಸಣ್ಣಶಿಲೆ)‌ಗಳನ್ನು ತಿರುನಲ್ವೇಲಿ ಜಿಲ್ಲೆಯಲ್ಲಿ ಪತ್ತೆ ಮಾಡಿದರು.[೧೭] ಪುರಾತತ್ವ ಸಾಕ್ಷ್ಯಾಧಾರಗಳು ಮೈಕ್ರೋಲಿಥಿಕ್(ಮೈಕ್ರೊಶಿಲಾ) ಯುಗವು 6000–3000 BCEವರೆಗೆ ವ್ಯಾಪಿಸಿತ್ತು ಎಂದು ಸೂಚಿಸುತ್ತದೆ.[೧೮]

ನಿಯೋಲಿಥಿಕ್ (ನವಶಿಲಾಯುಗ)[ಬದಲಾಯಿಸಿ]

ತಮಿಳುನಾಡಿನಲ್ಲಿ ಸುಮಾರು ೨೫೦೦ BCEಯಲ್ಲಿ ನವಶಿಲಾಯುಗ ಕಾಲಿಟ್ಟಿತು. ನವಶಿಲಾಯುಗದ ಅವಧಿಯಲ್ಲಿ ಜನರು ತಮ್ಮ ಕಲ್ಲಿನ ಆಯುಧಗಳಿಗೆ ಉಜ್ಜುವ ಮೂಲಕ ಮೆರಗು ನೀಡಿ ಉತ್ಕೃಷ್ಟ ಆಕಾರಗಳಲ್ಲಿ ತಯಾರಿಸಿದರು.

ತುದಿಯಲ್ಲಿ ಪ್ರಾಚೀನ ಬರಹವಿರುವ ನವಶಿಲಾಯುಗದ ಕೊಡಲಿಯು ತಮಿಳುನಾಡಿನಲ್ಲಿ ಪತ್ತೆಯಾಗಿದೆ.[೧೯]

ನವಶಿಲಾಯುಗದ ಮಾನವರು ಸಣ್ಣ ಚಪ್ಪಟೆ ಬೆಟ್ಟಗಳಲ್ಲಿ ಅಥವಾ ಬೆಟ್ಟದ ತಪ್ಪಲುಗಳಲ್ಲಿ ಹೆಚ್ಚುಕಡಿಮೆ ಕಾಯಂ ನೆಲೆಗಳಲ್ಲಿ ವಾಸಿಸುತ್ತಿದ್ದರು. ಆದರೆ ಪ್ರಾಣಿಗಳನ್ನು ಮೇಯಿಸುವ ಉದ್ದೇಶಗಳಿಗಾಗಿ ಕಾಲ ಕಾಲಕ್ಕೆ ವಲಸೆ ಹೋಗುತ್ತಿದ್ದರು. ಅವರು ಮೃತರ ಚಿತಾಭಸ್ಮವನ್ನು ಕರಂಡಕಗಳಲ್ಲಿ ಅಥವಾ ಮೃತರನ್ನು ಕುಳಿಗಳಲ್ಲಿ ಹೂಳುವ ಮೂಲಕ ಮೃತರಿಗೆ ಸೂಕ್ತ ಶವಸಂಸ್ಕಾರವನ್ನು ಮಾಡುತ್ತಿದ್ದರು. ಅವರು ಕೆಲವು ಸಾಧನಗಳನ್ನು ಮತ್ತು ಆಯುಧಗಳನ್ನು ತಯಾರಿಸಲು ತಾಮ್ರವನ್ನು ಬಳಸಲು ಆರಂಭಿಸಿದರು.

ಕಬ್ಬಿಣದ ಯುಗ[ಬದಲಾಯಿಸಿ]

ಕಬ್ಬಿಣದ ಯುಗದಲ್ಲಿ ಮಾನವರು ಕಬ್ಬಿಣವನ್ನು ಸಾಧನಗಳು ಮತ್ತು ಆಯುಧಗಳ ತಯಾರಿಕೆಯಾಗಿ ಬಳಸಲಾರಂಭಿಸಿದರು. ಉಪಖಂಡ ಭಾರತದಲ್ಲಿ ಕಬ್ಬಿಣದ ಯುಗದ ಸಂಸ್ಕೃತಿಯನ್ನು ಮೆಗಾಲಿತಿಕ್(ಬೃಹತ್‌ಶಿಲೆ) ಸಮಾಧಿ ಸ್ಥಳಗಳಿಂದ ಗುರುತಿಸಬಹುದು. ಇವು ನೂರಾರು ಸ್ಥಳಗಳಲ್ಲಿ ಪತ್ತೆಯಾಗಿವೆ.[೨೦]

ಕೆಲವು ಉತ್ಖನನಗಳು ಮತ್ತು ಸಮಾಧಿ ಸ್ಮಾರಕಗಳ ಸಂಕೇತಗಳ ಅಧ್ಯಯನದ ಆಧಾರದ ಮೇಲೆ ಕಬ್ಬಿಣ ಯುಗದ ಸ್ಥಳಗಳು ಉತ್ತರದಿಂದ ದಕ್ಷಿಣಕ್ಕೆ ಕ್ರಮೇಣ ವಿಸ್ತರಿಸಿತೆಂದು ಹೇಳಲಾಗಿದೆ. ತಿರುನಲ್ವೇಲಿ ಜಿಲ್ಲೆಯ ಆದಿಚನಲ್ಲುರ್ ಮತ್ತು ಉತ್ತರ ಭಾರತದಲ್ಲಿ ನಡೆಸಿದ ತುಲನಾತ್ಮಕ ಉತ್ಖನನ ಗಳಲ್ಲಿ ಮೆಗಾಲಿಥಿಕ್ ಸಂಸ್ಕೃತಿಯು ದಕ್ಷಿಣಕ್ಕೆ ವಲಸೆ ಬಂದಿರುವುದಕ್ಕೆ ಸಾಕ್ಷ್ಯಾಧಾರ ಒದಗಿಸಿದೆ.[೨೧]

ಮೆಗಾಲಿಥಿಕ್ ಚಿತಾಭಸ್ಮ ಕರಂಡಕಗಳ ಸಮಾಧಿಯ ಉಪಸ್ಥಿತಿಗೆ ಮುಂಚಿನ ಸ್ಪಷ್ಟ ಸಾಕ್ಷ್ಯವು ಸುಮಾರು 1000BCE ಯಿಂದೀಚೆಗೆ ಸಿಗುತ್ತದೆ. ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಇವನ್ನು ಪತ್ತೆಹಚ್ಚಲಾಗಿದೆ. ಗಮನಾರ್ಹವಾಗಿ ತಿರುನಲ್ವೇಲಿಗೆ 24 ಕಿಮೀ ದೂರದ ಆದಿಚನಲ್ಲುರ್. ಅಲ್ಲಿ ಭಾರತದ ಪುರಾತತ್ವ ಇಲಾಖೆಯ ಪುರಾತತ್ವಶಾಸ್ತ್ರಜ್ಞರು 157 ಚಿತಾಭಸ್ಮ ಕರಂಡಕಗಳನ್ನು 15 ಮಾನವ ತಲೆಬುರುಡೆಗಳು, ಅಸ್ಥಿಪಂಜರಗಳು ಮತ್ತು ಮೂಳೆಗಳ ಸಮೇತ ಅಗೆದು ತೆಗೆದರು. ಇವುಗಳ ಜತೆಗೆ ತೊಗಟೆಗಳು, ಅಕ್ಕಿ ಕಾಳುಗಳು, ಸುಟ್ಟಿರುವ ಅಕ್ಕಿ ಮತ್ತು ನವಶಿಲಾಯುಗದ ಕಲ್ಲಿನ ಆಯುಧಗಳು ಸಿಕ್ಕಿದ್ದವು.

ಒಂದು ಕರಂಡಕದ ಒಳಗೆ ಬರಹವು ಗೋಚರಿಸಿದ್ದು, ಇದು ಭಾರತದ ಪುರಾತತ್ವ ಇಲಾಖೆ ಪುರಾತತ್ವಶಾಸ್ತ್ರಜ್ಞರ ಪ್ರಕಾರ, ಪೂರ್ವದ ತಮಿಳು-ಬ್ರಾಹ್ಮಿ ಲಿಪಿಯನ್ನು ಹೋಲುತ್ತದೆ. ಇದು 2800 ವರ್ಷಗಳ ಹಿಂದಿನ ನವಶಿಲಾಯುಗದ ಅವಧಿಯದೆಂದು ದೃಡಪಟ್ಟಿದೆ.[೨೨]

ಇನ್ನಷ್ಟು ಉತ್ಖನನ ಮತ್ತು ಅಧ್ಯಯನಗಳಿಗಾಗಿ ಆದಿಚನಲ್ಲೂರನ್ನು ಪುರಾತತ್ವ ಸ್ಥಳವೆಂದು ಪ್ರಕಟಿಸಲಾಗಿದೆ.[೨೩][೨೪]

ಸಾಮಾನ್ಯ ಯುಗಕ್ಕೆ ಮುಂಚಿನ ತಮಿಳುನಾಡಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಉಲ್ಲೇಖಗಳು c 300 BCEದಿನಾಂಕದ ಅಶೋಕನ ಶಾಸನಗಳಲ್ಲಿ ಪತ್ತೆಯಾಗಿವೆ. c.150 BCEದಿನಾಂಕದ ಹಥಿಗುಂಪ ಕೆತ್ತನೆಯಲ್ಲಿ ಅಸ್ಪಷ್ಟವಾಗಿ ಕಂಡು ಬಂದಿದೆ. ತಮಿಳು ದೇಶದಲ್ಲಿ ಅತೀ ಮುಂಚಿನ ಶಾಸನ ಲಿಪಿಯ ಸಾಕ್ಷ್ಯಾಧಾರವು ಪಾಂಡ್ಯ ರಾಜ ಕಡುಂಗೋನ್‌ನಲ್ಲಿ ಪತ್ತೆಯಾಗಿದೆ(c. 560–590 CE)ಅವನು ಪಾಂಡ್ಯರ ರಾಜ್ಯದಿಂದ ಕಳಭ್ರರನ್ನು ಹೊರಗಟ್ಟಿದನು.-ನೀಲಾಂಕರಿ ಶಾಸ್ತ್ರಿ,ಎ ಹಿಸ್ಟರಿ ಆಫ್ ಸೌತ್ ಇಂಡಿಯ pp 105, 137

ನಡುಗಾಲ(೩00–೬00)[ಬದಲಾಯಿಸಿ]

ಸಂಗಂ ಯುಗದ ಮುಕ್ತಾಯದ ನಂತರ, ೩೦೦ ರಿಂದ ೬೦೦ CE ವರೆಗೆ ತಮಿಳು ನೆಲದ ಘಟನೆಗಳಿಗೆ ಸಂಬಂಧಿಸಿದಂತೆ ಮಾಹಿತಿಯ ಬಹುಮಟ್ಟಿನ ಕೊರತೆ ಕಂಡು ಬಂದಿದೆ. ಸುಮಾರು 300 CEಯಲ್ಲಿ ಕಳಭ್ರರ ಆಗಮನದಿಂದ ಇಡೀ ಪ್ರದೇಶವೇ ಉದ್ವೇಗಕ್ಕೆ ಒಳಗಾಗಿತ್ತು. ನಂತರದ ಸಾಹಿತ್ಯದಲ್ಲಿ ಈ ಜನರನ್ನು 'ದುಷ್ಟ ಅರಸರು'ಎಂದು ಬಣ್ಣಿಸಲಾಯಿತು.

ಸ್ಥಾಪಿತ ತಮಿಳು ರಾಜರನ್ನು ಪದಚ್ಯುತಗೊಳಿಸಿ ತಮಿಳು ದೇಶದಲ್ಲಿ ಹಿಡಿತವನ್ನು ಸಾಧಿಸಿದ್ದರು.[೨೫] ಅವರ ಮೂಲದ ಬಗ್ಗೆ ಮತ್ತು ಅವರ ರಾಜ್ಯಭಾರದ ಬಗ್ಗೆ ವಿವರಗಳ ಅಭಾವವಿದೆ. ಅವರು ಹೆಚ್ಚು ಕಲಾಕೃತಿಗಳನ್ನು ಮತ್ತು ಸ್ಮಾರಕಗಳನ್ನು ಬಿಟ್ಟು ಹೋಗಿಲ್ಲ. ಬೌದ್ದ ಮತ್ತು ಜೈನ ಸಾಹಿತ್ಯದಲ್ಲಿ ಅವರ ಚದುರಿದ ಪ್ರಸ್ತಾಪಗಳು ಮಾತ್ರ ಏಕೈಕ ಮಾಹಿತಿಯ ಮೂಲವಾಗಿದೆ.[೨೬]

ಈ ಜನರು ಬೌದ್ಧ ಅಥವಾ ಜೈನ ಮತಧರ್ಮಗಳನ್ನು ಪಾಲಿಸಿದರು ಎಂದು ಇತಿಹಾಸಜ್ಞರು ಊಹಿಸಿದ್ದಾರೆ ಹಾಗು ಪೂರ್ವಶತಮಾನಗಳ C.Eಯಲ್ಲಿ ಬಹುತೇಕ ನಿವಾಸಿಗಳು ನಿಷ್ಠೆ ಹೊಂದಿದ್ದ ಹಿಂದು ಧರ್ಮಗಳತ್ತ ಹಗೆತನ ಸಾಧಿಸಿದ್ದರು(ಉದಾ .ಆಸ್ಟಿಕಾ ಶಾಲೆಗಳು).[೨೭] ಇದರ ಫಲವಾಗಿ 7ನೇ ಮತ್ತು 8ನೇ ಶತಮಾನದಲ್ಲಿ ಹಿಂದು ವಿದ್ವಾಂಸರು ಮತ್ತು ಲೇಖಕರು ಕಳಭ್ರರ ಅವನತಿಯ ನಂತರ ತಮ್ಮ ಕೃತಿಗಳಲ್ಲಿ ಅವರ ಪ್ರಸ್ತಾಪವನ್ನು ಕೈಬಿಟ್ಟಿದ್ದಾರೆ ಹಾಗೂ ಸಾಮಾನ್ಯ ವಾಗಿ ಅವರ ಆಡಳಿತವನ್ನು ನಕಾರಾತ್ಮಕ ರೀತಿಯಲ್ಲಿ ಚಿತ್ರಿಸಿದ್ದಾರೆ.

ಬಹುಶಃ ಈ ಕಾರಣದಿಂದ ಅವರ ಆಳ್ವಿಕೆಯ ಅವಧಿಯು 'ಕರಾಳ ಯುಗ'-ನಡುಗಾಲ ಎಂದು ಹೆಸರಾಗಿದೆ. ಕೆಲವು ರಾಜ ಕುಟುಂಬಗಳು ಉತ್ತರದ ಕಡೆ ವಲಸೆ ಹೋಗಿ ಕಳಭ್ರರಿಂದ ದೂರದಲ್ಲಿ ಪರಾವೃತಭಾಗದಲ್ಲಿ ನೆಲೆಸಿದರು.[೨೮] ಜೈನ ಮತ್ತು ಬೌದ್ಧ ಧರ್ಮಗಳು ಸಮಾಜದಲ್ಲಿ ಆಳವಾಗಿ ಬೇರೂರಿತು ಹಾಗು ಹೆಚ್ಚಿನ ಪ್ರಮಾಣದ ನೈತಿಕ ಕವಿತೆಗೆ ಜನ್ಮ ನೀಡಿತು.

ಬರಹವು ವ್ಯಾಪಕವಾಯಿತು ಹಾಗು ತಮಿಳ್-ಬ್ರಾಹ್ಮಿಯಿಂದ ವಿಕಾಸಗೊಂಡ ವಟ್ಟೆಲುಟ್ಟು ತಮಿಳು ಬರವಣಿಗೆಗೆ ಪರಿಪಕ್ವ ಲಿಪಿಯಾಯಿತು.[೨೯] ಅನೇಕ ಕಾವ್ಯಸಂಕಲನಗಳನ್ನು ಮುಂಚಿನ ಶತಮಾನಗಳ ಕವಿಗಳ ಕವನಗಳಿಂದ ಸಂಗ್ರಹಿಸಿ ಒಟ್ಟು ಸೇರಿಸಲಾಯಿತು.

ಕೆಲವು ಮಹಾಕಾವ್ಯಗಳು ಸಿಲಪ್ಪದಿಕಾರಂ ಮತ್ತು ತಿರುಕ್ಕುರಳ್ ಮುಂತಾದ ನೀತಿ ಬೋಧಕ ಕೃತಿಗಳನ್ನು ಈ ಅವಧಿಯಲ್ಲಿ ಬರೆಯಲಾಗಿದೆ.[೩೦]

ಜೈನ ಮತ್ತು ಬೌದ್ಧ ವಿದ್ವಾಂಸರಿಗೆ ಕಳಭ್ರ ರಾಜರ ಆಶ್ರಯವು ಆ ಅವಧಿಯ ಸಾಹಿತ್ಯದ ಸ್ವರೂಪದ ಮೇಲೆ ಪ್ರಭಾವ ಬೀರಿತು ಮತ್ತು ಈ ಅವಧಿಗೆ ಸೇರಿದ ಬಹುತೇಕ ಕೃತಿಗಳನ್ನು ಜೈನ ಮತ್ತು ಬೌದ್ಧ ಲೇಖಕರು ಬರೆದಿದ್ದಾರೆ. ನೃತ್ಯ ಮತ್ತು ಸಂಗೀತದ ಕ್ಷೇತ್ರದಲ್ಲಿ ಗಣ್ಯರು ಹೊಸ ಮೆರುಗಿನ ಶೈಲಿಗಳಿಗೆ ಆಶ್ರಯ ನೀಡಲಾರಂಭಿಸಿದರು. ಕೆಲವು ಮುಂಚಿನ ಕತ್ತರಿಸಿದ ಕಲ್ಲುಗಳ ದೇವಸ್ಥಾನಗಳು ಈ ಅವಧಿಗೆ ಸೇರಿದ್ದಾಗಿದೆ.

ಕೊಟ್ಟಾಮ್‌, ದೇವಕುಲಂ, ಮತ್ತುಪಲ್ಲಿ )ಎಂದು ಹೆಸರಾದ ವಿವಿಧ ದೇವರುಗಳಿಗೆ ಅರ್ಪಿತವಾದ ಇಟ್ಟಿಗೆಯಿಂದ ನಿರ್ಮಿಸಿದ ದೇವಸ್ಥಾನಗಳ ಬಗ್ಗೆ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖವಿದೆ. ಪಲ್ಲವ ಮತ್ತು ಪಾಂಡ್ಯ ಅಧಿಕಾರದ ಪುನಶ್ಚೇತನದಿಂದ ಕಳಭ್ರರು ೭ನೇ ಶತಮಾನದಲ್ಲಿ ಸ್ಥಾನಚ್ಯುತರಾದರು.[೩೧]

ಕಳಭ್ರರ ನಿರ್ಗಮನದ ನಂತರವೂ, ತಮಿಳುನಾಡಿನಲ್ಲಿ ಜೈನ ಮತ್ತು ಬೌದ್ದಧರ್ಮಗಳ ಪ್ರಭಾವ ಇನ್ನೂ ಉಳಿದಿದೆ. ಪೂರ್ವದ ಪಾಂಡ್ಯ ಮತ್ತು ಪಲ್ಲವ ರಾಜರು ಈ ಮತಧರ್ಮಗಳ ಅನುಯಾಯಿಗಳು. ತಮ್ಮ ಧರ್ಮದ ಅವನತಿಯ ಬಗ್ಗೆ ಹಿಂದುಗಳ ಪ್ರತಿಕ್ರಿಯೆ ಬೆಳೆಯಿತು ಮತ್ತು 7ನೇ ಶತಮಾನದ ಕೊನೆಯ ಭಾಗದಲ್ಲಿ ತುತ್ತತುದಿಯನ್ನು ಮುಟ್ಟಿತು.[೩೨]

ವ್ಯಾಪಕ ಹಿಂದು ಪುನಶ್ಚೇತನದಿಂದಾಗಿ ಆ ಸಂದರ್ಭದಲ್ಲಿ ಶೈವ ಮತ್ತು ವೈಷ್ಣವ ಪಂಥಗಳ ಅಪಾರ ಸಾಹಿತ್ಯಗಳನ್ನು ಸೃಷ್ಟಿಸಲಾಯಿತು. ಅನೇಕ ಶೈವ ನಯನ್ಮಾರರು ಮತ್ತು ವೈಷ್ಣವ ಆಳ್ವಾರರು ಜನಪ್ರಿಯ ಭಕ್ತಿಸಾಹಿತ್ಯದ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ಒದಗಿಸಿದರು. ೬ನೇ ಶತಮಾನದ CEಯಲ್ಲಿ ವಾಸವಿದ್ದ ಕರೈಕ್ಕಾಲ್ ಅಮ್ಮೈಯಾರ್ ಈ ನಯನ್ಮಾರ್‌ಗಳಲ್ಲಿ ಅತೀ ಮುಂಚಿನವರು. ಪ್ರಸಿದ್ಧ ಶೈವ ಭಕ್ತಿಗೀತೆ ಕವಿಗಳಾದ ಸುಂದರಮೂರ್ತಿ, ತಿರುಗ್ನಾನ ಸಂಬಂತರ್ ಮತ್ತು ತಿರುನವುಕ್ಕರಸರ್ ಅವರ ಅವಧಿಗೆ ಸೇರಿದವರು.

ಪೌಗೈ ಆಳ್ವಾರ್, ಭೂತಾಳ್ವಾರ್ ಮತ್ತು ಪೆಯಾಳ್ವಾರ್ಮುಂತಾದ ವೈಷ್ಣವ ಆಳ್ವಾರ್‌ಗಳು ತಮ್ಮ ಧರ್ಮಕ್ಕಾಗಿ ಭಕ್ತಿಗೀತೆಗಳನ್ನು ರಚಿಸಿದರು. ಅವರ ಹಾಡುಗಳನ್ನು ನಂತರನಲಾಯಿಯರ ಡಿವ್ಯಪ್ ಪ್ರಬಂಧಮ್‌ ನ ನಾಲ್ಕು ಸಾವಿರ ಕವಿತೆಗಳಲ್ಲಿ ಸಂಗ್ರಹಿಸಲಾಯಿತು.[೩೩]

ಸಾಮ್ರಾಜ್ಯಗಳ ಯುಗ (೬೦೦–೧೩೦೦)[ಬದಲಾಯಿಸಿ]

ತಮಿಳು ದೇಶದ ಇತಿಹಾಸದ ಮಧ್ಯಕಾಲೀನ ಅವಧಿಯಲ್ಲಿ ಅನೇಕ ಪ್ರಭುತ್ವಗಳ ಏಳುಬೀಳುಗಳನ್ನು ಕಂಡಿತು. ಅವರಲ್ಲಿ ಕೆಲವರು ಸಾಮ್ರಾಜ್ಯದವರೆಗೆ ವಿಸ್ತರಿಸಿದರು ಹಾಗು ಭಾರತ ಮತ್ತು ವಿದೇಶಗಳು ಎರಡೂ ಕಡೆ ತಮ್ಮ ಪ್ರಭಾವ ಬೀರಿದರು. ಸಂಗಮ್ ಯುಗದಲ್ಲಿ ಸಕ್ರಿಯರಾಗಿದ್ದ ಚೋಳರು ಮೊದಲ ಕೆಲವು ಶತಮಾನಗಳ ಕಾಲ ಸಂಪೂರ್ಣವಾಗಿ ಅನುಪಸ್ಥಿತಿಯಲ್ಲಿದ್ದರು.[೩೪]

ಈ ಅವಧಿಯು ಪಾಂಡ್ಯರು ಮತ್ತು ಪಲ್ಲವರ ನಡುವೆ ವೈರದಿಂದ ಆರಂಭವಾಯಿತು. ಇದು ಪ್ರತಿಯಾಗಿ ಚೋಳರ ಪುನಶ್ಚೇತನಕ್ಕೆ ಕಾರಣವಾಯಿತು. ಚೋಳರು ಮಹಾ ಶಕ್ತಿಯಾಗಿ ಹೊರಹೊಮ್ಮಿದರು. ಆದರೆ ಅವರ ಕುಸಿತವು ಪಾಂಡ್ಯರು ಸಂಕ್ಷಿಪ್ತವಾಗಿ ಮತ್ತೆ ತಲೆಎತ್ತಲು ಕಾರಣವಾಯಿತು. ಈ ಅವಧಿಯಲ್ಲಿ ಹಿಂದುಧರ್ಮಕ್ಕೆ ಮರುಚೇತನ ನೀಡಲಾಯಿತು ಹಾಗು ದೇವಸ್ಥಾನದ ನಿರ್ಮಾಣ ಮತ್ತು ಧಾರ್ಮಿಕ ಸಾಹಿತ್ಯದ ಬೆಳವಣಿಗೆ ಅತ್ಯುತ್ತಮ ಮಟ್ಟದಲ್ಲಿತ್ತು.[೩೫]

ಹಿಂದು ಪಂಥಗಳಾದ ಶೈವ ಮತ್ತು ವೈಷ್ಣವ ಪಂಥಗಳು ವ್ಯಾಪಕವಾಗಿ ಹರಡಿದ್ದ ಪೂರ್ವಯುಗದ ಜೈನ ಮತ್ತು ಬೌದ್ಧಧರ್ಮಗಳ ಬದಲಿಗೆ ಪ್ರಬಲವಾಗಿ ಬೆಳೆದವು. ಶೈವಪಂಥಕ್ಕೆ ಚೋಳ ರಾಜರು ಆಶ್ರಯ ನೀಡಿದರು ಮತ್ತು ಇದು ಹೆಚ್ಚುಕಡಿಮೆ ರಾಜ್ಯದ ಧರ್ಮವಾಗಿ ಬೆಳೆಯಿತು.[೩೬]

ಈಗಲೂ ಸ್ಥಿರವಾಗಿ ನಿಂತಿರುವ ಕೆಲವು ಮುಂಚಿನ ದೇವಸ್ಥಾನಗಳು ಪಲ್ಲವರ ಈ ಅವಧಿಯಲ್ಲಿ ನಿರ್ಮಿಸಲಾಯಿತು. ಕತ್ತರಿಸಿದ ಕಲ್ಲಿನ ದೇವಸ್ಥಾನಗಳಾದ ಮಾಮಲ್ಲಪುರಂ ಮತ್ತು ಕಂಚೀಪುರಂನ ಭವ್ಯವಾದ ಕೈಲಾಸನಾಥ ಮತ್ತು ವೈಕುಂಠಪೆರುಮಾಳ್ ದೇವಸ್ಥಾನಗಳು ಪಲ್ಲವ ಕಲೆಗೆ ಸಾಕ್ಷಿ ಯಾಗಿ ನಿಂತಿವೆ.

ತಮ್ಮ ವಿಸ್ತಾರವಾದ ವಿಜಯಗಳಿಂದ ಗಳಿಸಿದ ಅಪಾರ ಸಂಪತ್ತನ್ನು ಚಿರವಾಗಿ ನಿಂತ ಕಲ್ಲಿನ ಕೆತ್ತನೆಯ ದೇವಸ್ಥಾನಗಳನ್ನು ನಿರ್ಮಾಣಕ್ಕೆ ಚೋಳರು ಬಳಸಿಕೊಂಡರು. ಇವುಗಳಲ್ಲಿ ತಂಜಾವೂರಿನ ಮಹಾ ಬೃಹದೇಶ್ವರ ದೇವಸ್ಥಾನ ಹಾಗೂ ಅತ್ಯುತ್ಕೃಷ್ಟ ಕಂಚಿನ ಶಿಲ್ಪಗಳೂ ಸೇರಿವೆ. ಶಿವ ಮತ್ತು ವಿಷ್ಣುವಿಗೆ ಮುಡಿಪಾದ ದೇವಸ್ಥಾನಗಳು ಹಣ, ಆಭರಣಗಳು, ಪ್ರಾಣಿಗಳು ಮತ್ತು ಭೂಮಿ ಮುಂತಾದ ಉದಾರ ದೇಣಿಗೆಗಳನ್ನು ಸ್ವೀಕರಿಸಿದವು. ಈ ಮೂಲಕ ಅವು ಶಕ್ತಿಶಾಲಿ ಆರ್ಥಿಕ ಸಂಸ್ಥೆಗಳಾಗಿ ರೂಪುಗೊಂಡವು.[೩೭]

ತಮಿಳು ಲಿಪಿಯ ಬದಲಿಗೆ ವಟ್ಟೆಲುಟ್ಟು ಲಿಪಿ ತಮಿಳು ಭಾಷೆಯ ಬರವಣಿಗೆ ಸಲುವಾಗಿ ಚಾಲ್ತಿಗೆ ಬಂತು. ಜಾತ್ಯತೀತ ಮತ್ತು ಧಾರ್ಮಿಕ ಸಾಹಿತ್ಯವೆರಡೂ ಈ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದವು. 13ನೇ ಶತಮಾನದಲ್ಲಿ ತಮಿಳು ಮಹಾಕೃತಿ ಕಂಬನ್‌ನ ರಾಮಾವತಾ ರಂ ಬರೆಯಲಾಯಿತು.

ಕಂಬನ್ ಸಮಕಾಲೀನರಾದ ಪ್ರಖ್ಯಾತ ಕವಯಿತ್ರಿ ಅವುವೈಯಾರ್ ಎಳೆಯ ಮಕ್ಕಳಿಗಾಗಿ ಬರೆಯುವುದರಲ್ಲಿ ಹೆಚ್ಚಿನ ಸಂತೋಷ ಕಂಡು ಕೊಂಡರು. ಲೌಕಿಕ ಸಾಹಿತ್ಯ ಹೆಚ್ಚಾಗಿ ಆಸ್ಥಾನ ಕವಿತೆಗಳಾಗಿದ್ದು, ಅರಸರ ಸ್ತುತಿಗೆ ಹೆಚ್ಚು ಮೀಸಲಾಗಿತ್ತು. ಹಿಂದಿನ ಯುಗದ ಧಾರ್ಮಿಕ ಕವನಗಳು ಮತ್ತು ಸಂಗಮ್ ಅವಧಿಯ ಶಾಸ್ತ್ರೀಯ ಸಾಹಿತ್ಯವನ್ನು ಸಂಗ್ರಹಿಸಿ, ಅನೇಕ ಕವನಸಂಕಲನಗಳಾಗಿ ಕ್ರಮಬದ್ಧಗೊಳಿಸಲಾಯಿತು.

ಸಂಸ್ಕೃತವನ್ನು ಪುರೋಹಿತ ವರ್ಗಗಳು ಧಾರ್ಮಿಕ ಕ್ರಿಯಾವಿಧಿಗಳು ಮತ್ತು ಇತರೆ ಕರ್ಮಾಚರಣೆ ಉದ್ದೇಶಗಳಿಗಾಗಿ ಪೋಷಿಸಿದರು. ರಾಜರಾಜ ಚೋಳ ಅರಸನ ಸಮಕಾಲೀನ ನಂಬಿ ಅಂಡಾರ್ ನಂಬಿ ಶೈವಪಂಥದ ಪುಸ್ತಕಗಳನ್ನು ಸಂಗ್ರಹಿಸಿ ತಿರುಮುರೈ ಸ್ ಎಂದು ಹೆಸರಾದ ೧೧ ಪುಸ್ತಕಗಳಲ್ಲಿ ಸಂಗ್ರಹಿಸಿದರು. ಶೈವಪಂಥದ ಸಂತ ಸಾಹಿತ್ಯವನ್ನು ಸೆಕ್ಕಿಲಾರ್ ಅವರ ಪೆರಿಯಪುರಾಣಂ ನಲ್ಲಿ ಪ್ರಮಾಣಬದ್ಧಗೊಳಿಸಲಾಯಿತು. ಅವರು ಕುಲೊತುಂಗ 2ನೇ ಚೋಳ(1133–1150 CE)ನ ರಾಜ್ಯಾಡಳಿತ ಅವಧಿಯಲ್ಲಿ ವಾಸವಿದ್ದರು.

ಕುಲೋತುಂಗ ಒಂದನೇ ಚೋಳ ಅರಸ ಕಳಿಂಗದ ಮೇಲೆ ಎರಡು ಬಾರಿ ಆಕ್ರಮಣಗಳನ್ನು ನಡೆಸಿದ ಅರೆ ಐತಿಹಾಸಿಕ ವಿವರಗಳಿಂದ ಕೂಡಿ ಜಯಮ್‌ಕೊಂಡಾರ್ ಅವರ ಕಲಿಂಗಟ್ಟುಪ್ಪರಾನಿ ಜೀವನಚರಿತ್ರೆ ಕೃತಿಯ ಪೂರ್ವ ಉದಾಹರಣೆಯಾಗಿದೆ.[೩೮]

ಚೇರರು[ಬದಲಾಯಿಸಿ]

ಚೇರರ ಪ್ರಭುತ್ವವು ದಕ್ಷಿಣ ಭಾರತದ ಮಲಬಾರ್ ತೀರ ಅಥವಾ ಪಶ್ಚಿಮದಲ್ಲಿ ಕೇರಳ ಆಧುನಿಕ ರಾಜ್ಯವನ್ನು ಒಳಗೊಂಡಿತ್ತು. ಸಮುದ್ರದ ಜತೆ ಅವರ ಸಾಮೀಪ್ಯತೆಯು ಆಫ್ರಿಕಾ ಜತೆ ವ್ಯಾಪಾರಕ್ಕೆ ಉತ್ತೇಜಿಸಿತು.[೩೯][೪೦] ಚೇರರ ಪ್ರಾಚೀನ ಪ್ರದೇಶಗಳನ್ನು ಒಳಗೊಂಡಿರುವ ಪ್ರಸ್ತುತ ಭಾರತದ ರಾಜ್ಯ ಕೇರಳದ ಜನರು ಇದೇ ಭಾಷೆಯಲ್ಲಿ ಮಾತನಾಡುತ್ತಿದ್ದು, ತಮಿಳು ಪ್ರದೇಶದ ಉಳಿದ ಭಾಗದೊಂದಿಗೆ ವ್ಯಾಪಕ ಪರಸ್ಪರ ಸಂಪರ್ಕವಿರಿಸಿಕೊಂಡಿದ್ದರು.

೯ ಅಥವಾ ೧೦ನೇ ಶತಮಾನದ CEಯಲ್ಲಿ ಮಾತ್ರ ತಮಿಳಿನ ಮೇಲೆ ಸಂಸ್ಕೃತದ ಪ್ರಭಾವಗಳಿಂದ ಅವರ ವೈಯಕ್ತಿಕ ಚಹರೆ ಬದಲಾಯಿತು ಮತ್ತು ಹೊಸ ಭಾಷೆ ವಿಕಸಿಸಲಾರಂಭಿಸಿತು.[೪೧]

ಪಲ್ಲವರು[ಬದಲಾಯಿಸಿ]

ಪಲ್ಲವರು ನಿರ್ಮಿಸಿದ ಮಾಮ್ಮಲಪುರಂನ ಶೋರ್ ದೇವಸ್ಥಾನ(c. ಎಂಟನೇ ಶತಮಾನ C.E.)

೭ನೇ ಶತಮಾನದ ತಮಿಳುನಾಡು ಒಂದನೇ ಮಹೇಂದ್ರವರ್ಮನ್ ಮತ್ತು ಅವನ ಪುತ್ರ ಮಾಮಲ ಒಂದನೇ ನರಸಿಂಹವರ್ಮನ್ ನೇತೃತ್ವದಲ್ಲಿ ಪಲ್ಲವರ ಏಳಿಗೆಯನ್ನು ಕಂಡಿತು. 2ನೇ ಶತಮಾನಕ್ಕೆ ಮುಂಚಿತವಾಗಿ ಪಲ್ಲವರು ಗುರುತಿಸಲಾದ ರಾಜಕೀಯ ಶಕ್ತಿಯಾಗಿ ಬೆಳೆದಿರಲಿಲ್ಲ.[೪೨] ಅವರು ಮೂಲತಃ ಸಾತವಾಹನ ಅರಸರ ಆಳ್ವಿಕೆಯಲ್ಲಿ ಕಾರ್ಯಪಾಲಕ ಅಧಿಕಾರಿಗಳು ಎಂದು ವಿದ್ವಾಂಸರು ವ್ಯಾಪಕವಾಗಿ ನಂಬಿದ್ದಾರೆ.[೪೩]

ಶಾತವಾಹನರ ಪತನದ ನಂತರ, ಅವರು ಆಂಧ್ರ ಮತ್ತು ತಮಿಳು ದೇಶದ ಭಾಗಗಳ ಮೇಲೆ ನಿಯಂತ್ರಣ ಸಾಧಿಸಲಾರಂಭಿಸಿದರು. ನಂತರ ಡೆಕ್ಕನ್ ಆಳ್ವಿಕೆ ಮಾಡಿದ ವಿಷ್ಣುಕುಂಡಿನ ಜತೆ ವೈವಾಹಿಕ ಸಂಬಂಧಗಳನ್ನು ಬೆಳೆಸಿದರು. ಸುಮಾರು ೫೫೦ ADಯಲ್ಲಿ ಸಿಂಹವಿಷ್ಣು ನೇತೃತ್ವದಲ್ಲಿ ಪಲ್ಲವರು ಪ್ರಸಿದ್ಧಿಗೆ ಬಂದರು. ಅವರು ಚೋಳರನ್ನು ನಿಗ್ರಹಿಸಿ ದಕ್ಷಿಣದ ಕಾವೇರಿ ನದಿವರೆಗೆ ರಾಜ್ಯಭಾರ ನಡೆಸಿದರು.

ಪಲ್ಲವರು ಒಂದನೇ ನರಸಿಂಹವರ್ಮ ಮತ್ತು ಪಲ್ಲವಮಲ್ಲ ಎರಡನೇ ನಂದಿವರ್ಮನ್ ರಾಜ್ಯಭಾರದ ಕಾಲದಲ್ಲಿ ಶ್ರೇಷ್ಠ ಮಟ್ಟದಲ್ಲಿದ್ದರು. ಪಲ್ಲವರು ಕಾಂಚಿಪುರಂ ತಮ್ಮ ರಾಜಧಾನಿಯಾಗಿ ಮಾಡಿಕೊಂಡು ದಕ್ಷಿಣ ಭಾರತದ ಬಹುಭಾಗವನ್ನು ಆಳ್ವಿಕೆ ಮಾಡಿದರು. ಪಲ್ಲವ ಆಡಳಿತದ ಅವಧಿಯಲ್ಲಿ ದ್ರಾವಿಡ ವಾಸ್ತುಶಿಲ್ಪ ತುತ್ತ ತುದಿಯನ್ನು ತಲುಪಿತು. ಎರಡನೇ ನರಸಿಂಹವರ್ಮನ್ ಶೋರ್ ಟೆಂಪಲ್ ನಿರ್ಮಿಸಿದ. ಇದು ಯುನೆಸ್ಕೊ(UNESCO) ವಿಶ್ವಪಾರಂಪರಿಕ ಸ್ಥಳವಾಗಿದೆ.

ಚೀನಾದಲ್ಲಿ ಜೆನ್ ಬೌದ್ಧಶಾಲೆಯನ್ನು ಸ್ಥಾಪಿಸಿದ ಬೋಧಿಧರ್ಮ ಪಲ್ಲವ ಸಾಮ್ರಾಜ್ಯದ ರಾಜಕುಮಾರ ಎಂದು ಅನೇಕ ಮೂಲಗಳು ಉಲ್ಲೇಖಿಸುತ್ತವೆ.[೪೪][೪೫]

೬ ಮತ್ತು ೭ನೇ ಶತಮಾನಗಳಲ್ಲಿ, ಪಶ್ಚಿಮ ಡೆಕ್ಕನ್ ವಾತಾಪಿಯಲ್ಲಿ ನೆಲೆಸ್ಥಾಪಿಸಿದ ಚಾಲುಕ್ಯರ ಏಳಿಗೆಗೆ ಸಾಕ್ಷಿಯಾಯಿತು. ೨ನೇ ಪುಲಿಕೇಶಿ(c.610–642) ಒಂದನೇ ಮಹೇಂದ್ರವರ್ಮನ್ ಆಳ್ವಿಕೆಯಲ್ಲಿ ಪಲ್ಲವ ಸಾಮ್ರಾಜ್ಯದ ಮೇಲೆ ದಾಳಿಮಾಡಿದ. ಮಹೇಂದ್ರವರ್ವನ ಉತ್ತರಾಧಿಕಾರಿಯಾದ ನರಸಿಂಹವರ್ಮನ್ ಚಾಲುಕ್ಯ ರಾಜ್ಯದ ಮೇಲೆ ಪ್ರತಿದಾಳಿ ನಡೆಸಿ ವಾತಾಪಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡ.

ಚಾಲುಕ್ಯರು ಮತ್ತು ಪಲ್ಲವರ ನಡುವೆ ವೈರತ್ವವು ೭೫೦ರಲ್ಲಿ ಚಾಲುಕ್ಯರು ಅವನತಿ ಹೊಂದುವ ತನಕ ಮತ್ತೆ ೧೦೦ ವರ್ಷಗಳ ಕಾಲ ಮುಂದುವರಿಯಿತು. ಚಾಲುಕ್ಯರು ಮತ್ತು ಪಲ್ಲವರು ಅಸಂಖ್ಯಾತ ಸಮರಗಳಲ್ಲಿ ಪರಸ್ಪರ ಹೋರಾಡಿದರು ಹಾಗು ಎರಡನೇ ನಂದಿವರ್ಮನ ಆಳ್ವಿಕೆಯಲ್ಲಿ ಪಲ್ಲವ ರಾಜಧಾನಿ ಕಂಚಿಪುರಂನ್ನು ಎರಡನೇ ವಿಕ್ರಮಾದಿತ್ಯ ಸ್ವಾಧೀನಕ್ಕೆ ತೆಗೆದುಕೊಂಡ.[೪೬]

ಎರಡನೇ ನಂದಿವರ್ಮನು ದೀರ್ಘಕಾಲ ರಾಜ್ಯಭಾರ ನಡೆಸಿದನು(732–796). ಅವನು ೭೬೦ ರಲ್ಲಿ ಗಂಗಾ ಪ್ರಭುತ್ವದ(ದಕ್ಷಿಣ ಮೈಸೂರು)ಮೇಲೆ ದಂಡಯಾತ್ರೆ ನೇತೃತ್ವ ವಹಿಸಿದ. ಪಲ್ಲವರು ಕೂಡ ಪಾಂಡ್ಯರ ಜತೆ ಸತತ ಸಂಘರ್ಷ ನಡೆಸಿದರು ಹಾಗು ಕಾವೇರಿ ನದಿವರೆಗೆ ತಮ್ಮ ಗಡಿಯನ್ನು ವಿಸ್ತರಿಸಿದರು. ಆದರೆ ಅವರಿಬ್ಬರ ನಡುವೆ ಪಲ್ಲವರ ಅಸ್ತಿತ್ವದ ಹೋರಾಟವು ಕಷ್ಟಕರವಾಗಿತ್ತು. ಅವರು ಪಾಂಡ್ಯರು ಮತ್ತು ಚಾಲುಕ್ಯರ ವಿರುದ್ಧ ಎರಡೂ ಕಡೆಯಿಂದ ಹೋರಾಟ ಮಾಡಬೇಕಾಯಿತು.

ಪಾಂಡ್ಯರು[ಬದಲಾಯಿಸಿ]

ಪಾಂಡ್ಯರ ಸಾಮ್ರಾಜ್ಯ

ಪಾಂಡ್ಯ ರು ಪ್ರಾಚೀನ ಕಾಲದಿಂದಲೂ ರೋಮನ್ ಸಾಮ್ರಾಜ್ಯವನ್ನೂ ತಲುಪಿದ ರಾಜತಾಂತ್ರಿಕ ಸಂಪರ್ಕಗಳಲ್ಲಿ ಹೆಸರಾಗಿದ್ದರು. 13ನೇ ಶತಮಾನದ ಕ್ರೈಸ್ತಯುಗಕ್ಕೆ ಸೇರಿದ ಮಾರ್ಕೊಪೋಲೊ ಅಸ್ತಿತ್ವದಲ್ಲಿದ್ದ ಅತೀಶ್ರೀಮಂತ ಸಾಮ್ರಾಜ್ಯ ಎಂದು ಅದನ್ನು ಬಣ್ಣಿಸಿದ್ದಾನೆ.[೪೭] ಪಾಂಡ್ಯ ಕಾಡುಂಗನ್(560–590)ದಕ್ಷಿಣದಲ್ಲಿ ಕಳಭ್ರರನ್ನು ಪದಚ್ಯುತಿಗೊಳಿಸಿದ ಕೀರ್ತಿಗೆ ಪಾತ್ರನಾಗಿದ್ದಾನೆ.[೪೮] ಕಾಡುಂಗನ್ ಮತ್ತು ಅವನ ಪುತ್ರ ಮಾರವರ್ವನ್ ಅವನಿಸುಲಮಣಿ ಪಾಂಡ್ಯರ ಅಧಿಕಾರವನ್ನು ಪುನಶ್ಚೇತನಗೊಳಿಸಿದರು.

ಪಾಂಡ್ಯ ಸೆಂಡನ್ ತಮ್ಮ ಆಳ್ವಿಕೆಯನ್ನು ಚೆರಾ ದೇಶದವರೆಗೆ ವಿಸ್ತರಿಸಿದರು. ಅವನ ಪುತ್ರ ಅರಿಕೇಸರಿ ಪರಂತಕ ಮಾರವರ್ವನ್(c. 650–700)ಸುದೀರ್ಘ ಮತ್ತು ಸಮೃದ್ಧಿಯ ಆಳ್ವಿಕೆ ನಡೆಸಿದ. ಅವನು ಅನೇಕ ಯುದ್ಧಗಳಲ್ಲಿ ಹೋರಾಡಿದ ಮತ್ತು ಪಾಂಡ್ಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿದ. ಪಾಂಡ್ಯರು ಆರಂಭದಲ್ಲಿ ಕೊರ್ಕಾರಿಯಿಂದ ರಾಜ್ಯಭಾರ ಮಾಡಿದರು. ಇದು ಭಾರತದ ಉಪಖಂಡದ ದಕ್ಷಿಣ ತುದಿಯ ಬಂದರಾಗಿದೆ. ನಂತರದ ಕಾಲದಲ್ಲಿ ಅವರು ಮಧುರೈಗೆ ಸ್ಥಳಾಂತರಗೊಂಡರು.

ಸಂಗಮ್ ಸಾಹಿತ್ಯದಲ್ಲಿ ಪಾಂಡ್ಯರನ್ನು ಕೂಡ ಉಲ್ಲೇಖಿಸಲಾಗಿದೆ. ಆ ಕಾಲದ ಗ್ರೀಕ್ ಮತ್ತು ರೋಮನ್ ಮೂಲಗಳಲ್ಲೂ ಪಾಂಡ್ಯರನ್ನು ಉಲ್ಲೇಖಿಸಲಾಗಿದೆ. ಮೆಗಾಸ್ತಾನೀಸ್ ತಮ್ಮ ಇಂಡಿಕಾ ದಲ್ಲಿ ಪಾಂಡ್ಯರ ಪ್ರಭುತ್ವವನ್ನು ಪ್ರಸ್ತಾಪಿಸಿದ್ದಾರೆ.[೪೯]

ಪಾಂಡ್ಯರು ಈಗಿನ ಜಿಲ್ಲೆಗಳಾದ ಮಧುರೈ, ತಿರುನಲ್ವೇಲಿ ಮತ್ತು ದಕ್ಷಿಣ ಕೇರಳದ ಕೆಲವು ಭಾಗಗಳ ಮೇಲೆ ನಿಯಂತ್ರಣ ಸಾಧಿಸಿದ್ದರು. ಗ್ರೀಸ್ ಮತ್ತು ರೋಮ್ ಜತೆ ಅವರು ವ್ಯಾಪಾರ ಸಂಪರ್ಕಗಳನ್ನು ಹೊಂದಿದ್ದರು.[೫೦] ತಮಿಳಕಂನ ಇತರೆ ಪ್ರಭುತ್ವಗಳ ಜತೆ ಅವರು ವ್ಯಾಪಾರ ಸಂಪರ್ಕಗಳನ್ನು ಮತ್ತು ಈಳಂನ ತಮಿಳು ವರ್ತಕರ ಜತೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರು.

ಸಂಗಂ ಸಾಹಿತ್ಯದ ಅನೇಕ ಕಾವ್ಯಗಳಲ್ಲಿ ವಿವಿಧ ಪಾಂಡ್ಯ ರಾಜರನ್ನು ಪ್ರಸ್ತಾಪಿಸಲಾಗಿದೆ. ಅವುಗಳಲ್ಲಿ ನೆಡುಂಚೆಳಿಯನ್, ತಲೈಯಾನಂಗಮನ್ ವಿಜಯಿ,ಇನ್ನೊಬ್ಬ ನೆಡುಂಚೆಳಿಯನ್ 'ಅನೇಕ ಯಜ್ಞಗಳ' ಆರಂಡ್ ಮುಡುಕುಡಿಮಿ ಪೆರುವಾಲುಡಿಯನ್ನು ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಅದಲ್ಲದೇ ಅನೇಕ ಸಣ್ಣ ಕವನಗಳು ಅಕನೂರು ಮತ್ತು ಪುರನಾನುರು ಸಂಗ್ರಹಗಳಲ್ಲಿ ಕಂಡು ಬರುತ್ತವೆ.

ಎರಡು ಪ್ರಮುಖ ಕೃತಿಗಳು—ಮಧುರೈಕಾನ್ಸಿ ಮತ್ತು ನೇಟುನಲ್ವಟೈ ( ಪಟ್ಟುಪಾಟ್ಟು ಸಂಗ್ರಹದಲ್ಲಿ ) ಸಂಗಮ್ ಕಾಲದಲ್ಲಿ ಪಾಂಡ್ಯ ಪ್ರಭುತ್ವದ ಸಮಾಜ ಮತ್ತು ವಾಣಿಜ್ಯ ಚಟುವಟಿಕೆಗಳ ಬಗ್ಗೆ ಮಿನುಗುನೋಟ ನೀಡುತ್ತದೆ. ಪೂರ್ವದ ಪಾಂಡ್ಯರು ಕಳಭ್ರರ ಆಕ್ರಮಣದ ಸಂದರ್ಭವಾದ 3ನೇ ಶತಮಾನದ CEಯಲ್ಲಿ ಅಜ್ಞಾತರಾಗಿ ಉಳಿದರು.

ವಿಸ್ತರಣೆಯ ಕೆಲವು ಶತಮಾನಗಳ ನಂತರ, ಪಾಂಡ್ಯರ ಸಾಮ್ರಾಜ್ಯ ಪಲ್ಲವರ ಅಧಿಕಾರಕ್ಕೆ ಗಂಭೀರ ಬೆದರಿಕೆ ಒಡ್ಡುವಷ್ಟು ದೊಡ್ಡದಾಯಿತು. ಪಾಂಡ್ಯ ಮಾರವರ್ಮನ್ ರಾಜಸಿಂಹ ಚಾಲುಕ್ಯ ಎರಡನೇ ವಿಕ್ರಮಾದಿತ್ಯನ ಜತೆಗೂಡಿ ಪಲ್ಲವ ರಾಜ ಎರಡನೇ ನಂದಿವರ್ಮನ ಮೇಲೆ ದಾಳಿ ಮಾಡಿದ.[೫೧] ಕಾವೇರಿ ನದಿಯ ದಂಡೆಯ ಮೇಲೆ ನಡೆದ ಯುದ್ಧದಲ್ಲಿ ಒಂದನೇ ವರಗುನನ್ ಪಲ್ಲವರನ್ನು ಸೋಲಿಸಿದ.

ಪಾಂಡ್ಯರ ಬೆಳೆಯುತ್ತಿರುವ ಅಧಿಕಾರವನ್ನು ಮೊಟಕುಮಾಡಲು ಪಲ್ಲವ ರಾಜ ನಂದಿವರ್ಮನ್ ಪ್ರಯತ್ನಿಸಿ, ಕೊಂಗು ಮತ್ತು ಚೆರಾ ದೇಶಗಳ ಊಳಿಗಮಾನ್ಯ ಮುಖಂಡರ ಜತೆ ಮೈತ್ರಿ ಮಾಡಿಕೊಂಡ. ಅನೇಕ ಯುದ್ಧಗಳಲ್ಲಿ ಸೇನಾಪಡೆಗಳು ಎದುರಾಗಿ ಪಾಂಡ್ಯ ಸೇನೆಯು ಅವುಗಳಲ್ಲಿ ನಿರ್ಣಾಯಕ ಗೆಲುವನ್ನು ಸಾಧಿಸಿತು. ಪಾಂಡ್ಯರು ಸ್ರೀಮರ ಸ್ರೀವಲ್ಲಭನ ನೇತೃತ್ವದಲ್ಲಿ ಶ್ರೀಲಂಕದ ಮೇಲೆ ಕೂಡ ದಾಳಿ ಮಾಡಿ 840ರಲ್ಲಿ ಉತ್ತರದ ಪ್ರಾಂತ್ಯಗಳನ್ನು ನಾಶಮಾಡಿದರು.[೫೨]

ಪಾಂಡ್ಯ ಅಧಿಕಾರವು ಸ್ರೀಮರನ ನೇತೃತ್ವದಲ್ಲಿ ಬೆಳವಣಿಗೆ ಸಾಧಿಸಿತು ಹಾಗು ಪಲ್ಲವ ಪ್ರದೇಶಗಳವರೆಗೆ ಮತ್ತಷ್ಟು ಅತಿಕ್ರಮಿಸಿತು. ಪಶ್ಚಿಮ ಡೆಕ್ಕನ್‌‌ನಲ್ಲಿ ಚಾಲುಕ್ಯರ ಬದಲಿಗೆ ಬಂದ ರಾಷ್ಟ್ರಕೂಟರ ರೂಪದಲ್ಲಿ ಪಲ್ಲವರು ಹೊಸ ಬೆದರಿಕೆಯನ್ನು ಎದುರಿಸಿದರು. ಆದಾಗ್ಯೂ ಪಲ್ಲವರು 3ನೇ ನಂದಿವರ್ಮನಲ್ಲಿ ಸಮರ್ಥ ಪ್ರಭುವನ್ನು ಕಂಡುಕೊಂಡರು. ನಂದಿವರ್ಮನು ಗಂಗಾ ಮತ್ತು ಚೋಳ ಮೈತ್ರಿಕೂಟಗಳ ಜತೆ ಸೇರಿ ತೆಲ್ಲಾರು ಕದನದಲ್ಲಿ ಸ್ರೀಮರನನ್ನು ಸೋಲಿಸಿದರು.

ಪಲ್ಲವ ಸಾಮ್ರಾಜ್ಯವು ಪುನಃ ವಾಯಿಗಾಯ್ ನದಿಯವರೆಗೆ ವಿಸ್ತರಿಸಿತು. ಪಾಂಡ್ಯರು ಪಲ್ಲವ ನೃಪತುಂಗನ ಕೈಯಲ್ಲಿ ಅರಿಸಿಲ್‌ನಲ್ಲಿ ಇನ್ನಷ್ಟು ಸೋಲುಗಳನ್ನು ಅನುಭವಿಸಿದರು(c. 848). ಇದಾದ ನಂತರ ಪಾಂಡ್ಯರು ಪಲ್ಲವರ ಆಧಿಪತ್ಯವನ್ನು ಒಪ್ಪಿಕೊಳ್ಳಬೇಕಾಯಿತು.[೫೩]

ಚೋಳರು[ಬದಲಾಯಿಸಿ]

ರಾಜೇಂದ್ರ ಚೋಳ ನೇತೃತ್ವದ ಚೋಳ ಸಾಮ್ರಾಜ್ಯ (c. 1030).
ಬೃಹದೀಶ್ವರ ದೇವಸ್ಥಾನ

ಸುಮಾರು ೮೫೦ರಲ್ಲಿ ಅಜ್ಞಾತ ಸ್ಥಿತಿಯಿಂದ ಮೇಲೆರಿದ ವಿಜಯಾಲಯ ಪಾಂಡ್ಯರು ಮತ್ತು ಪಲ್ಲವರ ನಡುವಿನ ಸಂಘರ್ಷದಿಂದ ಉದ್ಭವಿಸಿದ ಅವಕಾಶವನ್ನು ಬಳಸಿಕೊಂಡ ಹಾಗು ತಂಜಾವೂರನ್ನು ವಶಕ್ಕೆ ತೆಗೆದುಕೊಂಡ. ತರುವಾಯ ಮಧ್ಯಕಾಲೀನ ಚೋಳರ ಸಾಮ್ರಾಜ್ಯಶಾಹಿಗೆ ಹಾದಿ ಸ್ಥಾಪಿಸಿದ. ಚೋಳ ಸಾಮ್ರಾಜ್ಯಕ್ಕೆ ವಿಜಯಾಲಯ ಪುನಶ್ಚೇತನ ನೀಡಿದ ಹಾಗು ಅವನ ಪುತ್ರ ಒಂದನೇ ಆದಿತ್ಯ ಚೋಳರ ಸ್ವಾತಂತ್ರ್ಯ ಸ್ಥಾಪನೆಗೆ ನೆರವಾದ. ಅವನು ಪಲ್ಲವ ಪ್ರಭುತ್ವದ ಮೇಲೆ 903ರಲ್ಲಿ ದಂಡೆತ್ತಿ ಹೋಗಿ ಯುದ್ದದಲ್ಲಿ ಪಲ್ಲವ ರಾಜ ಅಪರಾಜಿತನನ್ನು ಹತ್ಯೆ ಮಾಡಿ ಪಲ್ಲವ ಆಳ್ವಿಕೆ ಅಂತ್ಯಗೊಳಿಸಿದ.[೫೪]

ಒಂದನೇ ಪರಾಂತಕ ನೇತೃತ್ವದಲ್ಲಿ ಚೋಳ ಪ್ರಭುತ್ವವು ಇಡೀ ಪಾಂಡ್ಯ ರಾಜ್ಯವನ್ನು ಒಳಗೊಂಡಂತೆ ವ್ಯಾಪಿಸಿತು. ಆದಾಗ್ಯೂ,ಅವನ ಆಳ್ವಿಕೆಯ ಅಂತ್ಯಕಾಲದಲ್ಲಿ ರಾಷ್ಟ್ರಕೂಟರಿಂದ ಅನೇಕ ಹಿನ್ನಡೆಗಳನ್ನು ಎದುರಿಸಿದ.ರಾಷ್ಟ್ರಕೂಟರು ತಮ್ಮ ಪ್ರದೇಶಗಳನ್ನು ಚೋಳ ಸಾಮ್ರಾಜ್ಯದವರೆಗೆ ವಿಸ್ತರಿಸಿದರು. ಕರಿಕಾಲ ಚೋಳ ಅತ್ಯಂತ ಪ್ರಖ್ಯಾತ ಪೂರ್ವ ಚೋಳರಾಜ. ಸಂಗಮ್ ಕವಿತೆಯ ಅನೇಕ ಕವನಗಳಲ್ಲಿ ಅವನ ಹೆಸರನ್ನು ಪ್ರಸ್ತಾಪಿಸಲಾಗಿದೆ.[೫೫] ನಂತರದ ದಿನಗಳಲ್ಲಿ ಸಿಲಪಟ್ಟಿಕಾರಂ ನಲ್ಲಿ ಕಂಡು ಬಂದ ಅನೇಕ ಐತಿಹ್ಯಗಳಲ್ಲಿ, ಕೆತ್ತನೆಗಳಲ್ಲಿ ಹಾಗು ೧೧ ಮತ್ತು ೧೨ನೇ ಶತಮಾನಗಳ ಸಾಹಿತ್ಯ ಕೃತಿಗಳಲ್ಲಿ ಕರಿಕಾಲನ ಹೆಸರನ್ನು ಉಲ್ಲೇಖಿಸಲಾಗಿದೆ. ಹಿಮಾಲಯದವರೆಗೆ ಇಡೀ ಭಾರತದ ಮೇಲೆ ವಿಜಯ ಸಾಧಿಸಲು ಮತ್ತು ತನ್ನ ಸಾಮಂತ ರಾಜರ ನೆರವಿನಿಂದ ಕಾವೇರಿ ನದಿಗೆ ಪ್ರವಾಹ ದಂಡೆಗಳನ್ನು ನಿರ್ಮಾಣಕ್ಕೆ ಕಾರಣಕರ್ತನೆಂದು ಅವರು ಹೇಳಿದ್ದಾರೆ.[೫೬]

ಆದಾಗ್ಯೂ ಈ ಐತಿಹ್ಯಗಳು ಸಂಗಮ್ ಕಾವ್ಯಗಳಲ್ಲಿ ಅನುಪಸ್ಥಿತಿಯಿಂದ ಗಮನಸೆಳೆದಿದೆ. ಕೊಸಿಂಗಣ್ಣನ್ ಇನ್ನೊಬ್ಬ ಪ್ರಖ್ಯಾತ ಪೂರ್ವದ ಚೋಳ ರಾಜನಾಗಿದ್ದು, ಸಂಗಮ್ ಅವಧಿಯ ಅನೇಕ ಕಾವ್ಯಗಳಲ್ಲಿ ಅವನನ್ನು ವೈಭವೀಕರಿಸಲಾಗಿದೆ. ಮಧ್ಯಕಾಲೀನ ಯುಗದಲ್ಲಿ ಅವನನ್ನು ಶೈವ ಸಂತ ನಾಗಿ ಬಿಂಬಿಸಲಾಯಿತು.[೫೭] ದುರ್ಬಲ ಅರಸರು, ಅರಮನೆಯಲ್ಲಿ ಪಿತೂರಿಗಳು ಮತ್ತು ಉತ್ತರಾಧಿಕಾರ ವಿವಾದಗಳ ಕಾರಣದಿಂದ ಮುಂದಿನ ಕೆಲವು ವರ್ಷಗಳ ಕಾಲ ಚೋಳರು ತಾತ್ಕಾಲಿಕ ಕುಸಿತ ಕಂಡರು.

ಅನೇಕ ಪ್ರಯತ್ನಗಳ ನಡುವೆಯೂ ಪಾಂಡ್ಯ ದೇಶವನ್ನು ಸಂಪೂರ್ಣ ಅಡಗಿಸಲು ಸಾಧ್ಯವಾಗಲಿಲ್ಲ ಹಾಗು ಉತ್ತರದಲ್ಲಿ ರಾಷ್ಟ್ರಕೂಟರು ಪ್ರಬಲ ವೈರಿಗಳಾಗಿದ್ದರು. ಆದಾಗ್ಯೂ, ಚೋಳರ ಪುನಶ್ಚೇತನ ೯೮೫ ರಲ್ಲಿ ಒಂದನೇ ರಾಜರಾಜ ಚೋಳನ ಪ್ರವೇಶದೊಂದಿಗೆ ಆರಂಭವಾಯಿತು. ಚೋಳರು ರಾಜರಾಜ ಮತ್ತು ಅವನ ಪುತ್ರ ಒಂದನೇ ರಾಜೇಂದ್ರ ಚೋಳನ ನೇತೃತ್ವದಲ್ಲಿ ಏಷ್ಯದಲ್ಲಿ ಗಮನಾರ್ಹ ಮಿಲಿಟರಿ, ಆರ್ಥಿಕ ಮತ್ತು ಸಾಂಸ್ಕೃತಿಕ ಶಕ್ತಿಯಾಗಿ ಹೊಮ್ಮಿದರು.

ಚೋಳ ಪ್ರದೇಶಗಳು ದಕ್ಷಿಣದಲ್ಲಿ ಮಾಲ್ಡೀವ್ ದ್ವೀಪಗಳಿಂದ ಉತ್ತರದಲ್ಲಿ ಬಂಗಾಳದ ಗಂಗಾ ನದಿ ದಂಡೆವರೆಗೆ ವ್ಯಾಪಿಸಿತು. ರಾಜೇಂದ್ರ ಚೋಳ ದಕ್ಷಿಣ ಭಾರತವನ್ನು ಗೆದ್ದುಕೊಂಡ ಮತ್ತು ಶ್ರೀಲಂಕಾದ ಕೆಲವು ಭಾಗಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿದ ಹಾಗೂ ಮಾಲ್ಡೀವ್ ದ್ವೀಪ ಗಳನ್ನು ಆಕ್ರಮಿಸಿಕೊಂಡ. ರಾಜೇಂದ್ರ ಚೋಳ ಶ್ರೀವಿಜಯ ರಾಜ್ಯವನ್ನು ಸೋಲಿಸುವ ಮೂಲಕ ಮಲಯ ದ್ವೀಪಸ್ತೋಮದವರೆಗೆ ಚೋಳರ ವಿಜಯಗಳನ್ನು ವಿಸ್ತರಿಸಿದ.[೫೮] ಅವನು ಬಿಹಾರ ಮತ್ತು ಬೆಂಗಾಳದ ಅರಸ ಮಹಿಪಾಲನನ್ನು ಸೋಲಿಸಿದ.

ಈ ವಿಜಯದ ಸ್ಮರಣೆಗಾಗಿ ಗಂಗೈಕೊಂಡ ಚೋಳಪುರಂ(ಗಂಗೆಯನ್ನು ಸೋಲಿಸಿದ ಚೋಳರ ಪಟ್ಟಣ )ಎಂಬ ರಾಜಧಾನಿಯನ್ನು ನಿರ್ಮಿಸಿದ. ಉತ್ಕರ್ಷದ ಕಾಲದಲ್ಲಿ ಚೋಳ ಸಾಮ್ರಾಜ್ಯವು ದಕ್ಷಿಣದಲ್ಲಿ ಶ್ರೀಲಂಕಾ ದ್ವೀಪದಿಂದ ಉತ್ತರದಲ್ಲಿ ಗೋದಾವರಿ ಜಲಾನಯನ ಪ್ರದೇಶದವರೆಗೆ ವ್ಯಾಪಿಸಿತು. ಭಾರತದ ಪೂರ್ವತೀರದ ರಾಜ್ಯಗಳಿಂದ ಹಿಡಿದು ಗಂಗಾ ನದಿ ದಂಡೆಯವರೆಗೆ ಚೋಳರ ಸಾರ್ವಭೌಮತ್ವಕ್ಕೆ ಮನ್ನಣೆ ನೀಡಲಾಯಿತು.

ಮಲಯ ದ್ವೀಪಸ್ತೋಮದಲ್ಲಿ ಚೋಳ ನೌಕಾಪಡೆಯು ಶ್ರೀವಿಜಯನ ಮೇಲೆ ದಾಳಿ ಮಾಡಿ ಜಯಗಳಿಸಿತು.[೫೯]

ಚೋಳ ಸೇನೆಗಳು ಥಾಯ್ಲೆಂಡ್ ಮತ್ತು ಕಾಂಬೋಡಿಯದ ಕೇಮರ್ ಸಾಮ್ರಾಜ್ಯದಿಂದ ಕಪ್ಪಗಳನ್ನು ಸ್ವೀಕರಿಸಿತು.[೬೦]

ರಾಜರಾಜ ಮತ್ತು ರಾಜೇಂದ್ರನ ಆಳ್ವಿಕೆಯಲ್ಲಿ ಚೋಳ ಸಾಮ್ರಾಜ್ಯದ ಆಡಳಿತವು ಗಣನೀಯ ಪರಿಪಕ್ವತೆ ಗಳಿಸಿತು. ಸಾಮ್ರಾಜ್ಯವು ಅನೇಕ ಸ್ವಯಮಾಡಳಿತದ ಸ್ಥಳೀಯ ಸರ್ಕಾರಿ ಘಟಕಗಳಾಗಿ ವಿಭಜನೆಯಾಯಿತು ಮತ್ತು ಅಧಿಕಾರಿಗಳನ್ನು ಜನಪ್ರಿಯ ಚುನಾವಣೆಗಳ ವ್ಯವಸ್ಥೆ ಮೂಲಕ ಆಯ್ಕೆಮಾಡಲಾಯಿತು.[೬೧]

ಚೋಳರು ತಮ್ಮ ಅವಧಿಯುದ್ದಕ್ಕೂ, ಸದಾ ಚೇತರಿಸಿಕೊಂಡು ಲಂಕಾದಲ್ಲಿ ಚೋಳರ ಸ್ವಾಧೀನವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದ ಸಿಂಹಳರಿಂದ, ತಮ್ಮ ಸಾಂಪ್ರದಾಯಿಕ ಪ್ರದೇಶಗಳ ಸ್ವಾತಂತ್ರ್ಯಕ್ಕಾಗಿ ಗೆಲುವಿಗೆ ಪ್ರಯತ್ನಿಸುತ್ತಿದ್ದ ಪಾಂಡ್ಯ ರಾಜರಿಂದ ಹಾಗೂ ಪಶ್ಚಿಮ ಡೆಕ್ಕನ್‌ನಲ್ಲಿ ಚಾಲುಕ್ಯರ ಹೆಚ್ಚಿದ ಮಹತ್ವಾಕಾಂಕ್ಷೆಗಳಿಂದ ಸತತ ತೊಂದರೆಗೆ ಸಿಲುಕಿದರು. ಚೋಳರ ಅವಧಿಯ ಇತಿಹಾಸವು ಚೋಳರು ಮತ್ತು ಅವರ ನಡುವಿನ ವೈರಿಗಳ ನಡುವೆ ಸತತ ಯುದ್ಧದ ಅವಧಿಯಾಗಿತ್ತು.

ಚಾಲುಕ್ಯರು ಮತ್ತು ಚೋಳರ ನಡುವೆ ಅಧಿಕಾರ ಸಮತೋಲನ ಅಸ್ತಿತ್ವದಲ್ಲಿತ್ತು ಹಾಗು ಎರಡು ಸಾಮ್ರಾಜ್ಯಗಳ ನಡುವೆ ತುಂಗಭದ್ರ ನದಿಯನ್ನು ಗಡಿಯನ್ನಾಗಿ ಒಪ್ಪಿಕೊಂಡಿದ್ದವು. ಆದರೆ ವೆಂಗಿ ರಾಜ್ಯದಲ್ಲಿ ಬೆಳೆಯುತ್ತಿರುವ ಚೋಳ ಪ್ರಭಾವವು ಎರಡು ಶಕ್ತಿಗಳ ನಡುವೆ ವಿವಾದದ ಕೇಂದ್ರ ಬಿಂದುವಾಗಿತ್ತು. ಚೋಳರು ಮತ್ತು ಚಾಲುಕ್ಯರು ಅನೇಕ ಯುದ್ಧಗಳಲ್ಲಿ ಹೋರಾಡಿದರು ಹಾಗೂ ಎರಡೂ ರಾಜ್ಯಗಳು ಕೊನೆಯಿಲ್ಲದ ಯುದ್ಧಗಳಿಂದ ಮತ್ತು ಅದರಿಂದ ಉಂಟಾದ ಬಿಕ್ಕಟ್ಟಿನಿಂದ ದಣಿದರು.

ರಾಜರಾಜ ವೆಂಗಿಯ ಮೇಲೆ ಜಯಗಳಿಸಿದ ನಂತರ ಅವನ ಆಳ್ವಿಕೆಯ ಅವಧಿಯಲ್ಲಿ ಗೋದಾವರಿ ನದಿಯ ದಕ್ಷಿಣ ದಂಡೆಗಳಲ್ಲಿರುವ ವೆಂಗಿಯ ಸುತ್ತ ನೆಲೆಗೊಂಡಿದ್ದ ಪೂರ್ವ ಚಾಲುಕ್ಯ ರಾಜರ ನಡುವೆ ವೈವಾಹಿಕ ಮತ್ತು ರಾಜಕೀಯ ಮೈತ್ರಿಗಳು ಬೆಳೆಯಿತು. ವಿಜಯರಾಜ ಚೋಳನ ಪುತ್ರ ಅಥಿರಾಜೇಂದ್ರ ಚೋಳ ೧೦೭೦ರಲ್ಲಿ ನಾಗರಿಕ ಅಶಾಂತಿಯಲ್ಲಿ ಹತ್ಯೆಗೀಡಾದ ಮತ್ತು ಒಂದನೇ ಕುಲೊತುಂಗ ಚೋಳನು ಚೋಳ ಸಿಂಹಾಸನವನ್ನು ಏರಿ, ಚಾಲುಕ್ಯ ಚೋಳ ಸಾಮ್ರಾಜ್ಯಕ್ಕೆ ನಾಂದಿ ಹಾಡಿದ. ಕುಲೋತುಂಗ ವೆಂಗಿ ಅರಸ ರಾಜರಾಜ ನರೇಂದ್ರನ ಪುತ್ರನಾಗಿದ್ದ.

ಚಾಲುಕ್ಯ ಚೋಳ ರಾಜವಂಶವು ಒಂದನೇ ಕುಲೋತುಂಗ ಚೋಳ ಮತ್ತು ವಿಕ್ರಮ ಚೋಳರ ಸಮರ್ಥ ಆಡಳಿತವನ್ನು ಕಂಡಿತು. ಆದಾಗ್ಯೂ ಈ ಅವಧಿಯಲ್ಲಿ ಚೋಳ ಅಧಿಕಾರದ ಅವನತಿ ಕಾರ್ಯತಃ ಆರಂಭವಾಯಿತು. ಚೋಳರು ಲಂಕಾ ದ್ವೀಪದ ಮೇಲಿನ ತಮ್ಮ ನಿಯಂತ್ರಣ ಕಳೆದು ಕೊಂಡರು ಹಾಗು ಸಿಂಹಳ ಶಕ್ತಿಯ ಪುನಶ್ಚೇತನದಿಂದ ಉಚ್ಚಾಟಿತರಾದರು.[೬೨]

ಸುಮಾರು ೧೧೧೮ ರಲ್ಲಿ ಅವರು ವೆಂಗಿ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಪಶ್ಚಿಮ ಚಾಲುಕ್ಯ ರಾಜ ನಾಲ್ಕನೇ ವಿಕ್ರಮಾದಿತ್ಯನ ಕೈವಶವಾಯಿತು. ಗಂಗವಾಡಿಯನ್ನು(ದಕ್ಷಿಣ ಮೈಸೂರು ಜಿಲ್ಲೆಗಳು) ಚಾಲುಕ್ಯರ ಅಧೀನ ರಾಜ ಹೊಯ್ಸಳ ವಿಷ್ಣುವರ್ಧನನ ಹೆಚ್ಚಿದ ಅಧಿಕಾರದಿಂದ ಕಳೆದುಕೊಂಡರು. ಪಾಂಡ್ಯ ಪ್ರದೇಶಗಳಲ್ಲಿ ಕೇಂದ್ರಾಡಳಿತದ ನಿಯಂತ್ರಣದ ಕೊರತೆಯಿಂದ ಪಾಂಡ್ಯ ಸಿಂಹಾಸನದ ಮೇಲೆ ಅನೇಕ ಮಂದಿ ಹಕ್ಕುಸಾಧಿಸಲು ಪ್ರೇರೇಪಿಸಿತು. ಇದರಲ್ಲಿ ಸಿಂಹಳೀಯರು ಮತ್ತು ಚೋಳರು ಪರೋಕ್ಷವಾಗಿ ಭಾಗಿಯಾಗಿದ್ದರು.

ಚೋಳದ ಅಸ್ತಿತ್ವದ ಕೊನೆಯ ಶತಮಾನದಲ್ಲಿ, ಪಾಂಡ್ಯರ ಬೆಳೆಯುತ್ತಿರುವ ಪ್ರಭಾವದಿಂದ ರಕ್ಷಿಸಿಕೊಳ್ಳಲು ಕಾಂಚಿಪುರಂನಲ್ಲಿ ಕಾಯಂ ಹೊಯ್ಸಳ ಸೇನೆಯನ್ನು ಸ್ಥಾಪಿಸಲಾಗಿತ್ತು. ಮೂರನೇ ರಾಜೇಂದ್ರ ಚೋಳ ಕೊನೆಯ ಚೋಳ ರಾಜನಾಗಿದ್ದ. ಕಡವ ಅರಸ ಒಂದನೇ ಕೊಪ್ಪೇರುಂಚಿಂಗ ರಾಜೇಂದ್ರನನ್ನು ಸೆರೆಹಿಡಿದು ಬಂಧಿಯಾಗಿಸಿದ. ರಾಜೇಂದ್ರನ ಆಳ್ವಿಕೆಯ(೧೨೭೦) ಅಂತ್ಯದಲ್ಲಿ ಪಾಂಡ್ಯನ್ ಸಾಮ್ರಾಜ್ಯ ಸಮೃದ್ಧಿಯ ತುತ್ತತುದಿಯಲ್ಲಿತ್ತು ಹಾಗು ಚೋಳ ಆಧಿಪತ್ಯವನ್ನು ಪೂರ್ತಿ ವಶಕ್ಕೆ ತೆಗೆದುಕೊಂಡಿತು.[೬೩]

ಪಾಂಡ್ಯರ ಪುನರುದಯ[ಬದಲಾಯಿಸಿ]

ಪಲ್ಲವರು ಮತ್ತು ಚೋಳರಿಂದ ಶತಮಾನಗಳವರೆಗೆ ಕುಗ್ಗಿದ ನಂತರ, ಜಾಟವರ್ಮನ್ ಸುಂದರ ಪಾಂಡ್ಯನ್ ಪಾಂಡ್ಯ ವೈಭವಕ್ಕೆ 1251ರಲ್ಲಿ ಅಲ್ಪಕಾಲದವರೆಗೆ ಮರುಚೇತನ ನೀಡಿದ ಮತ್ತು ಪಾಂಡ್ಯ ಅಧಿಕಾರವು ಗೋದಾವರಿ ನದಿ ದಂಡೆಗಳ ತೆಲುಗು ದೇಶಗಳಿಂದ ಶ್ರೀಲಂಕಾದ ಉತ್ತರದ ಅರ್ಧಭಾಗದವರೆಗೆ ವಿಸ್ತರಿಸಿತು.

ಒಂದನೇ ಮಾರವರಂಬಂ ಕುಲಶೇಖರ ಪಾಂಡ್ಯನ್ ೧೩೦೮ ರಲ್ಲಿ ನಿಧನದ ನಂತರ ಅವನ ಪುತ್ರರಾದ- ಕಾನೂನುಬದ್ಧ ಹಕ್ಕನ್ನು ಹೊಂದಿದ್ದ ಸುಂದರ ಪಾಂಡ್ಯ ಮತ್ತು ಕಾನೂನುಬದ್ಧನಲ್ಲದ ವೀರ ಪಾಂಡ್ಯ(ಅವನಿಗೆ ರಾಜನ ಒಲವಿತ್ತು)ನಡುವೆ ಉತ್ತರಾಧಿಕಾರ ವಿವಾದದಿಂದ ಸಂಘರ್ಷ ಉದ್ಭವಿಸಿತು. ಅವರಿಬ್ಬರು ಸಿಂಹಾಸನಕ್ಕಾಗಿ ಪರಸ್ಪರ ಹೋರಾಡಿದರು. ಶೀಘ್ರದಲ್ಲೇ ಮಧುರೈ ದೆಹಲಿ ಸುಲ್ತಾನರ ಆಧಿಪತ್ಯದ ದಂಡೆತ್ತಿದ ಸೇನೆಗಳ ಕೈಗೆ ಸಿಕ್ಕಿತು.(ದೆಹಲಿ ಸುಲ್ತಾನ ಆಧಿಪತ್ಯ ಆರಂಭದಲ್ಲಿ ಪರಾಭವಗೊಂಡ ಸುಂದರ ಪಾಂಡ್ಯನ್‌ಗೆ ರಕ್ಷಣೆ ನೀಡಿದ)

ದೆಹಲಿ ಸುಲ್ತಾನರು[ಬದಲಾಯಿಸಿ]

ದೆಹಲಿ ಸುಲ್ತಾನ ಅಲ್ಲಾದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ೧೩೧೧ ರಲ್ಲಿ ಮಧುರೈ ಮೇಲೆ ದಂಡೆತ್ತಿ ಹೋಗಿ ಅದನ್ನು ಲೂಟಿ ಮಾಡಿದ.[೬೪] ಪಾಂಡ್ಯರು ಮತ್ತು ಅವರ ವಂಶಸ್ಥರು ತಿರುನಲ್ವೇಲಿ ಸುತ್ತ ಸಣ್ಣ ಪ್ರದೇಶದಲ್ಲಿ ಕೆಲವು ವರ್ಷಗಳ ಕಾಲ ಉಳಿಯಬೇಕಾಯಿತು. ಕುಲಶೇಖರ ಪಾಂಡ್ಯನ ಚೇರ ಸಾಮಂತ ರಾಜನಾಗಿದ್ದ ರವಿವರ್ಮ ಕುಲಶೇಖರ(1299–1314) ಪಾಂಡ್ಯ ಸಿಂಹಾಸನದ ಮೇಲೆ ತನ್ನ ಹಕ್ಕು ಪ್ರತಿಪಾದಿಸಿದ.

ರವಿವರ್ಮ ಕುಲಶೇಖರ ರಾಷ್ಟ್ರದ ಅವ್ಯವಸ್ಥೆಯ ಸ್ವರೂಪವನ್ನು ಬಳಸಿಕೊಂಡು,ದಕ್ಷಿಣ ತಮಿಳುನಾಡಿನಲ್ಲಿ ಕನ್ಯಾಕುಮಾರಿಯಿಂದ ಕಾಂಚಿಪುರಂವರೆಗೆ ಇಡೀ ಪ್ರದೇಶವನ್ನು ಚೇರ ಆಧಿಪತ್ಯದ ವ್ಯಾಪ್ತಿಗೆ ತಂದ. ಮದ್ರಾಸ್‌ನ ಉಪನಗರ ಪುನಾಮಲ್ಲಿಯಲ್ಲಿ ಅವನ ಶಾಸನ ಪತ್ತೆಯಾಗಿದೆ.[೬೫]

ವಿಜಯನಗರ ಮತ್ತು ನಾಯಕ್ ಅವಧಿ(೧೩೦೦–೧೬೫೦)[ಬದಲಾಯಿಸಿ]

ನಾಯಕ್ ರಾಜನಿಂದ ನವೀಕೃತಗೊಂಡ ದಕ್ಷಿಣ ಭಾರತದ ಮಧುರೈ ನಗರದ ಮೀನಾಕ್ಷಿ ದೇವಸ್ಥಾನ

೧೪ನೇ ಶತಮಾನದಲ್ಲಿ ದೆಹಲಿ ಸುಲ್ತಾನರ ಆಕ್ರಮಣದ ವಿರುದ್ಧ ಹಿಂದುಗಳು ಪ್ರತೀಕಾರ ತೀರಿಸಿಕೊಳ್ಳಲು ಹೊಸ ಪ್ರಭುತ್ವದ ನಿರ್ಮಾಣಕ್ಕೆ ಕಂಕಣಬದ್ಧರಾದರು. ಇದನ್ನು ವಿಜಯನಗರ ಸಾಮ್ರಾಜ್ಯ ಎಂದು ಕರೆಯಲಾಯಿತು. ಬುಕ್ಕ ತನ್ನ ಸಹೋದರ ಹರಿಹರನ ಜತೆಯಲ್ಲಿ ಹಿಂದು ವಿಜಯ ನಗರ ಸಾಮ್ರಾಜ್ಯ ಸ್ಥಾಪಿಸಿದ. ಕರ್ನಾಟಕದ ವಿಜಯನಗರ ನಗರದಲ್ಲಿ ಇದು ನೆಲೆಗೊಂಡಿತ್ತು.[೬೬] ಬುಕ್ಕನ ನೇತೃತ್ವದಲ್ಲಿ ಸಾಮ್ರಾಜ್ಯವು ಸಮೃದ್ಧಿಗೊಂಡಿತು ಮತ್ತು ದಕ್ಷಿಣದತ್ತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿತು.

ಬುಕ್ಕ ಮತ್ತು ಅವನ ಪುತ್ರ ಕಂಪಣ ದಕ್ಷಿಣ ಭಾರತದ ಬಹುತೇಕ ಪ್ರಭುತ್ವಗಳ ವಿರುದ್ಧ ಜಯಗಳಿಸಿದರು. ೧೩೭೧ ರಲ್ಲಿ ವಿಜಯನಗರ ಸಾಮ್ರಾಜ್ಯವು ಅಲ್ಪಕಾಲವಿದ್ದ ಮಧುರೈ ಸುಲ್ತಾನ ಆಧಿಪತ್ಯವನ್ನು ಸೋಲಿಸಿತು. ಇದನ್ನು ದಂಡೆತ್ತಿ ಬಂದಿದ್ದ ಕಿಲ್ಜಿ ಸೇನೆಯ ಅವಶೇಷಗಳಿಂದ ಸ್ಥಾಪಿಸ ಲಾಗಿತ್ತು.[೬೭] ತರುವಾಯ ಸಾಮ್ರಾಜ್ಯ ಇಡೀ ದಕ್ಷಿಣ ಭಾರತದಲ್ಲಿ ವಿಸ್ತರಿಸಿತು. ಸಾಮ್ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆಳ್ವಿಕೆಗೆ ವಿಜಯನಗರ ಸಾಮ್ರಾಜ್ಯ ನಾಯಕ್‌‌ರು ಎಂದು ಕರೆಯುವ ಸ್ಥಳೀಯ ಮಂಡಲಾಧಿಪತಿಗಳನ್ನು ಸ್ಥಾಪಿಸಿತು.

ತಾಳಿಕೋಟೆ ಕದನದಲ್ಲಿ ದಖ್ಖನ್ನಿನ ಸುಲ್ತಾನರಿಂದ ಸೋಲಪ್ಪಿದ ವಿಜಯನಗರ ಸಾಮ್ರಾಜ್ಯ ೧೫೬೪ ರಲ್ಲಿ ಅವನತಿ ಹೊಂದಿತು.[೬೮]

ಸ್ಥಳೀಯ ನಾಯಕ ಮಂಡಲಾಧಿಪತಿಗಳು ಸ್ವಾತಂತ್ರ್ಯ ಘೋಷಿಸಿಕೊಂಡು ಆಡಳಿತ ನಡೆಸಿದರು. ಅವರಲ್ಲಿ ಮಧುರೈ ಮತ್ತು ತಂಜಾವೂರಿನ ನಾಯಕರು ಬಹಳ ಪ್ರಮುಖರಾಗಿದ್ದರು. ರಘುನಾಥ್ ನಾಯಕ(1600–1645) ತಂಜಾವೂರು ನಾಯಕರಲ್ಲಿ ಅತ್ಯಂತ ಪ್ರಮುಖನಾಗಿದ್ದನು.[೬೯]

ರಘುನಾಥ್ ನಾಯಕ್ ವ್ಯಾಪಾರಕ್ಕೆ ಉತ್ತೇಜನ ನೀಡಿದ ಹಾಗೂ ತರಂಗಂಬಡಿಯಲ್ಲಿ ಡಚ್ಚರ ವಸಾಹತಿಗೆ ಅವಕಾಶ ನೀಡಿದ.[೭೦] ಇದು ದೇಶದ ವ್ಯವಹಾರಗಳಲ್ಲಿ ಮುಂದಿನ ಐರೋಪ್ಯ ಒಳಗೊಳ್ಳುವಿಕೆಗೆ ಅಡಿಪಾಯ ಹಾಕಿಕೊಟ್ಟಿತು. ಡಚ್ಚರ ಯಶಸ್ಸಿನಿಂದ ಇಂಗ್ಲೀಷರು ತಂಜಾವೂರಿನ ಜತೆ ವ್ಯಾಪಾರಕ್ಕೆ ಸ್ಫೂರ್ತಿ ನೀಡಿತು.ಇದು ಬಹು ವ್ಯಾಪಕ ಪರಿಣಾಮಗಳಿಗೆ ದಾರಿ ಕಲ್ಪಿಸಿತು.

ತಂಜಾವೂರು ನಾಯಕರಲ್ಲಿ ವಿಜಯರಾಘವೇಂದ್ರ (೧೬೩೧–೧೬೭೫)ಕೊನೆಯವನು. ನಾಯಕರು ದೇಶದ ಪ್ರಾಚೀನ ದೇವಸ್ಥಾನಗಳ ಪುನರ್ನಿರ್ಮಾಣ ಮಾಡಿದರು ಹಾಗು ಅವರ ಕೊಡುಗೆಗಳನ್ನು ಈಗಲೂ ಕಾಣಬಹುದು. ನಾಯಕ್‌ರು ಅಸ್ತಿತ್ವದಲ್ಲಿದ್ದ ದೇವಸ್ಥಾನಗಳನ್ನು ದೊಡ್ಡ ಸ್ತಂಭದ ಭವನಗಳು,ಉದ್ದದ ಪ್ರವೇಶದ ದ್ವಾರದ ಗೋಪುರಗಳಿಂದ ವಿಸ್ತರಿಸಿದರು.ಇವು ಆ ಕಾಲದ ಧಾರ್ಮಿಕ ವಾಸ್ತುಶಿಲ್ಪವನ್ನು ಬಿಂಬಿಸುತ್ತಿತ್ತು.

ಮಧುರೈನಲ್ಲಿ ತಿರುಮಲೈ ನಾಯಕ್ ಅತೀ ಪ್ರಖ್ಯಾತ ನಾಯಕ್ ಆಡಳಿತಗಾರ. ಅವನು ಹೊಸ ನಿರ್ಮಾಣಗಳನ್ನು ಸೃಷ್ಟಿಸುವ ಮೂಲಕ ಕಲೆ ಮತ್ತು ವಾಸ್ತುಶಿಲ್ಪವನ್ನು ಪೋಷಿಸಿದ ಹಾಗು ಮಧುರೈ ಸುತ್ತಮುತ್ತ ಗಡಿ ಗುರುತುಗಳನ್ನು ವಿಸ್ತರಿಸಿದ. ತಿರುಮಲೈ ನಾಯಕ್ ೧೬೫೯ರಲ್ಲಿ ಮರಣವಪ್ಪಿದ ನಂತರ, ಮಧುರೈ ನಾಯಕ್ ಪ್ರಭುತ್ವ ಒಡೆಯಲು ಆರಂಭಿಸಿತು. ಅವನ ಉತ್ತರಾಧಿಕಾರಿಗಳು ದುರ್ಬಲ ಆಡಳಿತಗಾರರು ಮತ್ತು ಮಧುರೈ ಮೇಲೆ ಆಕ್ರಮಣ ಪುನಾರಂಭಗೊಂಡಿತು.

ಶಿವಾಜಿ ಬೋನ್ಸ್‌ಲೆ,ಮಹಾ ಮರಾಠ ರಾಜ ದಕ್ಷಿಣದ ಮೇಲೆ ದಂಡೆತ್ತಿಬಂದ. ಇದೇ ರೀತಿ ಮೈಸೂರಿನ ಚಿಕ್ಕದೇವರಾಯ ಮತ್ತು ಇತರೆ ಮುಸ್ಲಿಂ ಆಡಳಿತಗಾರರು ದಂಡೆತ್ತಿದರು.ಇದರ ಫಲವಾಗಿ ಗೊಂದಲಗಳು ಮತ್ತು ಅಸ್ಥಿರತೆ ಮೂಡಿತು. ಸ್ಥಳೀಯ ರಾಣಿಯಾದ ರಾಣಿ ಮಂಗಮ್ಮಾಳ್ ಈ ಆಕ್ರಮಣಕ್ಕೆ ಮಹಾ ಧೈರ್ಯದಿಂದ ಪ್ರತಿರೋಧ ಒಡ್ಡಿದಳು.[೭೧]

ನಿಜಾಮರು ಮತ್ತು ನವಾಬರ ಆಡಳಿತ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತಮಿಳು ರಾಷ್ಟ್ರದಲ್ಲಿ ಐರೋಪ್ಯ ವಸಾಹತುಗಳು ತಲೆ ಎತ್ತತೊಡಗಿದವು. ೧೬೦೫ ರಲ್ಲಿ ಡಚ್ಚರು ಗಿಂಜಿ ಮತ್ತು ಪುಲಿಕ್ಯಾಟ್‌ನ ಬಳಿಯ ಕೋರೊಮಂಡೆಲ್ ತೀರದಲ್ಲಿ ವ್ಯಾಪಾರಿ ಸ್ಥಳಗಳನ್ನು ಸ್ಥಾಪಿಸಿದರು. ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಪುಲಿಕ್ಯಾಟ್ ಉತ್ತರಕ್ಕೆ ವ್ಯಾಪಿಸಿದ ಗ್ರಾಮ ಆರ್ಮಗಾನ್(ದುರ್ಗರಾಜ ಪಟ್ನಂ)ಬಳಿ 'ಕಾರ್ಖಾನೆ'(ಮಳಿಗೆ)ಯೊಂದನ್ನು ೧೬೨೬ರಲ್ಲಿ ನಿರ್ಮಿಸಿದರು.

೧೬೩೯ ರಲ್ಲಿ ಕಂಪನಿಯ ಅಧಿಕಾರಿಯಾದ ಫ್ರಾನ್ಸಿಸ್ ಡೇ ವಂಡವಾಸಿಯ ನಾಯಕ್ ಡಾಮಾರ್ಲ ವೆಂಕಟಾದ್ರಿ ನಾಯಕುಡು ಅವರಿಂದ ಮೀನುಗಾರಿಕೆ ಗ್ರಾಮ ಮದ್ರಸಪಟ್ನಂನ ಮೂರು ಮೈಲಿ(೫ ಕಿ.ಮೀ) ಉದ್ದದ ಭೂಮಿಯ ಪಟ್ಟೆಯ ಮೇಲೆ ಹಕ್ಕುಗಳನ್ನು ಪಡೆದುಕೊಂಡರು. ಈಸ್ಟ್ ಇಂಡಿಯ ಕಂಪನಿ ಫೋರ್ಟ್ ಸೈಂಟ್ ಜಾರ್ಜ್ ಮತ್ತು ಮಹಲನ್ನು ಅಂದಾಜು ಐದು ಚದರ ಕಿಲೋಮೀಟರ್ ಮರಳಿನ ಹಾಸಿನ ಮೇಲೆ ನಿರ್ಮಿಸಿದರು.[೭೨] ಇದು ಮದ್ರಾಸ್ ಪಟ್ಟಣದ ಆರಂಭಕ್ಕೆ ದಾರಿಕಲ್ಪಿಸಿತು.

ಚಂದ್ರಗಿರಿ ಮತ್ತು ವೆಲ್ಲೂರು ಕೋಟೆಯ ನೆಲೆಗೊಂಡಿದ್ದ ಅರವಿಡು ರಾಜವಂಶದ ವಿಜಯನಗರ ರಾಜ ಪೆದ ವೆಂಕಟ ರಾಯಕೊರೊಮಂಡಲ್ ತೀರವನ್ನು ಆಳುತ್ತಿದ್ದ. ಅವನ ಒಪ್ಪಿಗೆಯೊಂದಿಗೆ ಇಂಗ್ಲೀಷರು ತಮ್ಮ ನೆಲದ ಮೇಲೆ ಸಾರ್ವಬೌಮ ಅಧಿಕಾರಗಳನ್ನು ಚಲಾಯಿಸಲಾರಂಭಿಸಿದರು.[೭೩]

೧೬೭೫ ರಲ್ಲಿ ಬಿಜಾಪುರ ಸೇನೆಯ ತುಕಡಿಯು ವಿಜಯರಾಘವನಿಗೆ ನೆರವಾಗಲು ತಂಜಾವೂರಿಗೆ ಆಗಮಿಸಿತು ಮತ್ತು ಮಧುರೈ ನಾಯಕ್‌ನಿಂದ ವೆಲ್ಲಂನ್ನು ಕಸಿದುಕೊಂಡಿತು. ಆದರೆ ಅದೇ ಸೇನೆಯು ತರುವಾಯ ವಿಜಯರಾಘವ ನಾಯಕ್‌ನನ್ನು ಹತ್ಯೆಮಾಡಿತು. ಆಗ ಎಕೋಜಿ ತಂಜಾವೂರು ಪ್ರಭುತ್ವದ ಸಿಂಹಾಸನವನ್ನು ಏರಲು ಸಮರ್ಥನಾದ. ಹೀಗೆ ತಂಜಾವೂರಿನಲ್ಲಿ ಮರಾಠರ ಆಡಳಿತಕ್ಕೆ ನಾಂದಿಯಾಯಿತು.

ಎಕೋಜಿ ನಂತರ, ಅವನ ಮೂವರು ಪುತ್ರರಾದ ಶಾಜಿ, ಒಂದನೇ ಸರ್ಫೋಜಿ, ತುಕ್ಕೋಜಿ ಅಲಿಯಾಸ್ ಒಂದನೇ ತುಲಜ ತಂಜಾವೂರನ್ನು ಆಳಿದರು. ಮರಾಠ ಅರಸರಲ್ಲಿ ಅತೀ ಪ್ರಖ್ಯಾತ ಎರಡನೇ ಸರ್ಫೋಜಿ(೧೭೯೮ರ-೧೮೩೨). ಸರ್ಫೋಜಿ ತನ್ನ ಜೀವನವನ್ನು ಸಂಸ್ಕೃತಿಯ ಅನ್ವೇಷಣೆಗೆ ಮುಡುಪಾಗಿಟ್ಟ ಮತ್ತು ತಂಜಾವೂರನ್ನು ವ್ಯಾಸಂಗದ ತಾಣವಾಗಿ ಪ್ರಖ್ಯಾತವಾಯಿತು. ಸರ್ಫೋಜಿ ಕಲೆ ಮತ್ತು ಸಾಹಿತ್ಯವನ್ನು ಪೋಷಿಸಿದ ಮತ್ತು ತನ್ನ ಅರಮನೆಯಲ್ಲಿ ಸರಸ್ವತಿ ಮಹಲ್ ಗ್ರಂಥಾಲಯವನ್ನು ನಿರ್ಮಿಸಿದ.

ಉತ್ತರದಿಂದ ಮುಸ್ಲಿಂ ಸೇನೆಗಳ ಆಕ್ರಮಣದಿಂದ ಹಿಂದುಗಳು ನಾಯಕ್ ಮತ್ತು ಮರಾಠ ರಾಜರ ಆಶ್ರಯ ಕೋರಿ ಕೇಂದ್ರ ದಖ್ಖನ್ ಮತ್ತು ಆಂಧ್ರದೇಶಗಳಿಗೆ ದಕ್ಷಿಣಾಭಿಮುಖವಾಗಿ ವಲಸೆ ಬಂದರು. ಪ್ರಖ್ಯಾತ ಕರ್ನಾಟಿಕ್ ಸಂಗೀತ ರಚನೆಕಾರ ತ್ಯಾಗರಾಜ(೧೭೬೭–೧೮೪೭)ಕರ್ನಾಟಿಕ್ ಸಂಗೀತದ ತ್ರಿತ್ರಯರ ಜತೆಯಿಂದ ಈ ಕಾಲದಲ್ಲಿ ತಂಜಾವೂರು ಜಿಲ್ಲೆಯಲ್ಲಿ ಸಂಗೀತ ಪ್ರವರ್ಧಮಾನಕ್ಕೆ ಬಂದಿತು.[೭೪]

೧೭೦೭ ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಾವಿನೊಂದಿಗೆ, ಅವನ ಸಾಮ್ರಾಜ್ಯವು ಅಸಂಖ್ಯಾತ ಉತ್ತರಾಧಿಕಾರದ ಸಮರಗಳ ಮಧ್ಯೆ ವಿಸರ್ಜನೆಗೊಂಡಿತು ಮತ್ತು ಸಾಮ್ರಾಜ್ಯದ ಸಾಮಂತರು ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ತಮಿಳುನಾಡಿನ ದಕ್ಷಿಣ ಜಿಲ್ಲೆಗಳ ಆಡಳಿತ ಚೂರಾಗಿ ನೂರಾರು ಪಾಲಿಗರ್‌ಗಳು ಅಥವಾ ಪಾಲಯಕ್ಕಾರರು ಪ್ರತಿಯೊಬ್ಬರೂ ಕೆಲವು ಗ್ರಾಮಗಳ ಆಡಳಿತ ನಡೆಸಿದರು. ಈ ಸ್ಥಳೀಯ ಮುಖಂಡರು ಪ್ರದೇಶದ ಒಡೆತನಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಪರಸ್ಪರ ಕಚ್ಚಾಡಿದರು. ಇದು ದಕ್ಷಿಣ ಭಾರತದಲ್ಲಿ ತಮಿಳು ದೇಶದ ರಾಜಕೀಯ ಸನ್ನಿವೇಶವನ್ನು ಗೊಂದಲ ಮತ್ತು ಗಲಿಬಿಲಿಗೆ ಪರಿವರ್ತಿಸಿತು. ಐರೋಪ್ಯ ವ್ಯಾಪಾರಿಗಳು ಈ ಗೊಂದಲದ ಸ್ಥಿತಿಯನ್ನು ತಮ್ಮ ಸ್ವಂತ ಅನುಕೂಲಕ್ಕೆ ಬಳಸಿಕೊಳ್ಳಲು ಸಾಧ್ಯವೆಂದು ಕಂಡು ಕೊಂಡರು.[೭೫]

ಐರೋಪ್ಯ ವಸಾಹತು (೧೭೫೦–೧೮೫೦)[ಬದಲಾಯಿಸಿ]

ಆಂಗ್ಲ-ಫ್ರೆಂಚ್ ಸಂಘರ್ಷಗಳು[ಬದಲಾಯಿಸಿ]

ಮೊಹಮದ್ ಅಲಿ ಖಾನ್ ವಲ್ಲಾಜ, ನವಾಬ್ ಆಫ್ ದಿ ಕರ್ನಾಟಕ್(1717–1795)

ಫ್ರೆಂಚರು ಭಾರತಕ್ಕೆ ಹೊಸಬರಾಗಿ ಆಗಮಿಸಿದರು. ಫ್ರೆಂಚ್ ಈಸ್ಟ್ ಇಂಡಿಯ ಕಂಪನಿ ೧೬೬೪ರಲ್ಲಿ ರಚನೆಯಾಯಿತು ಮತ್ತು 1666ರಲ್ಲಿ ಪ್ರೆಂಚ್ ಪ್ರತಿನಿಧಿಗಳು ಭಾರತದಲ್ಲಿ ವ್ಯಾಪಾರ ಮಾಡಲು ಔರಂಗಜೇಬ್ ಅನುಮತಿಯನ್ನು ಪಡೆದು ಕೊಂಡರು. ಫ್ರೆಂಚರು ಕೋರಮಂಡಲ್ ತೀರದ ಪಾಂಡೀಚೆರಿಯಲ್ಲಿ ವ್ಯಾಪಾರಿ ಕೇಂದ್ರಗಳನ್ನು ಸ್ಥಾಪಿಸಿದರು. ೧೭೩೯ರಲ್ಲಿ ಕರೈಕಲ್‌ನನ್ನು ಸ್ವಾಧೀನಕ್ಕೆ ತೆಗೆದುಕೊಂಡರು ಮತ್ತು ಜೋಸೆಫ್ ಫ್ರಾಂಕೋಯಿಸ್ ಡೂಪ್ಲೆಕ್ಸ್ ಪಾಂಡಿಚೆರಿಯ ಗವರ್ನರ್‌ ಆಗಿ ನೇಮಕವಾದರು.

ಯುರೋಪ್‌ನಲ್ಲಿ ಆಸ್ಟ್ರಿಯನ್ ಉತ್ತರಾಧಿಕಾರ ಯುದ್ಧವು ೧೭೪೦ರಲ್ಲಿ ಆರಂಭವಾಯಿತು. ತರುವಾಯ ಭಾರತದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ಪಡೆಗಳು ಸಂಘರ್ಷದಲ್ಲಿ ತೊಡಗಿದವು. ಕೋರಮಂಡಲ್ ತೀರದಲ್ಲಿ ಎರಡು ನೌಕಾದಳಗಳ ನಡುವೆ ಅಸಂಖ್ಯಾತ ನೌಕಾಸಮರಗಳು ಸಂಭವಿಸಿದವು. ಲಾ ಬೋರ್ಡೊನೈಸ್ ನೇತೃತ್ವದ ಫ್ರೆಂಚ್ ಸೈನ್ಯವು ೧೭೪೬ ರಲ್ಲಿ ಮದ್ರಾಸಿನ ಕಳಪೆ ರಕ್ಷಣೆಯ ಫೋರ್ಟ್ ಸೇಂಟ್ ಜಾರ್ಜ್ ಮೇಲೆ ದಾಳಿ ಮಾಡಿತು. ರಾಬರ್ಟ್ ಕ್ಲೈವ್ ಈ ಸಮರದಲ್ಲಿ ಯುದ್ಧಕೈದಿಯಾದರು. ೧೭೪೮ರಲ್ಲಿ ಯುರೋಪ್ ಯುದ್ಧವು ಮುಕ್ತಾಯವಾಯಿತು ಹಾಗು ಪೀಸ್ ಆಫ್ ಐಕ್ಸ್-ಲಾ-ಚಾಪಲೆನೊಂದಿಗೆ ಮದ್ರಾಸ್‌ ಬ್ರಿಟಿಷರಿಗೆ ಮರಳಿತು.[೭೬]

ಮಿಲಿಟರಿ ಬದಲಿಗೆ ರಾಜಕೀಯಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಮತ್ತು ಪ್ರೆಂಚರ ನಡುವೆ ಸಂಘರ್ಷ ಮುಂದುವರಿಯಿತು. ಫ್ರೆಂಚರಿಗೆ ಬಲವಾದ ಸಹಾನುಭೂತಿ ಹೊಂದಿದ್ದ ಆಡಳಿತಗಾರರಿಗೆ ಕರ್ನಾಟಿಕ್ ನವಾಬ ಮತ್ತು ಹೈದರಾಬಾದ್ ನಿಜಾಮ ಹುದ್ದೆಗಳು ದಕ್ಕಿದವು. ಚಾಂದ್ ಸಾಹಿಬ್‌ನನ್ನು ಡುಪ್ಲೇಕ್ಸ್ ನೆರವಿನಿಂದ ಕರ್ನಾಟಿಕ್ ನವಾಬನನ್ನಾಗಿ ಮಾಡಲಾಯಿತು. ಬ್ರಿಟಿಷರು ಹಿಂದಿನ ಹುದ್ದೆದಾರ ಮೊಹಮದ್ ಅಲಿ ಖಾನ್ ವಲಾಜಾನ ಹೋರಾಟವನ್ನು ಕೈಗೆತ್ತಿಕೊಂಡರು. ಇದರ ಫಲವಾಗಿ ಎದುರಾಳಿಗಳ ನಡುವೆ ಸಮರದಲ್ಲಿ, ಕ್ಲೈವ್ ಆರ್ಕಾಟ್‌ನಲ್ಲಿನ ಚಂದಾ ಸಾಹಿಬ್ ಕೋಟೆಯ ಮೇಲೆ ದಾಳಿ ಮಾಡಿ ೧೭೫೧ ರಲ್ಲಿ ಅದನ್ನು ವಶಪಡಿಸಿಕೊಳ್ಳುವ ಮೂಲಕ ಮೊಹಮದ್ ಅಲಿಗೆ ನೆರವಾದರು.

ಆರ್ಕಾಟ್‌ನಿಂದ ಕ್ಲೈವ್‌ನನ್ನು ಹೊರದೂಡಲು ಫ್ರೆಂಚರು ಚಾಂದಾ ಸಾಹಿಬ್‌ ಪ್ರಯತ್ನಗಳಿಗೆ ನೆರವಾದರು. ಆದಾಗ್ಯೂ ಫ್ರೆಂಚ್ ಸೇನೆಯ ನೆರವು ಪಡೆದ ದೊಡ್ಡ ಆರ್ಕಾಟ್ ಸೇನೆ ಬ್ರಿಟಿಷರಿಂದ ಸೋಲಪ್ಪಿತು. ಟ್ರೀಟಿ ಆಫ್ ಪ್ಯಾರಿಸ್(೧೭೬೩)ಮೊಹಮದ್ ಅಲಿಯನ್ನು ಕರ್ನಾಟಿಕ್ ನವಾಬನನ್ನಾಗಿ ವಿದ್ಯುಕ್ತವಾಗಿ ದೃಢಪಡಿಸಿತು. ಈ ಕ್ರಿಯೆಯ ಫಲವಾಗಿ ಮತ್ತು ಬ್ರಿಟಿಷರ ಹೆಚ್ಚಿದ ಪ್ರಭಾವದಿಂದಾಗಿ, ೧೭೬೫ ರಲ್ಲಿ ದೆಹಲಿ ಚಕ್ರವರ್ತಿಗಳು ದಕ್ಷಿಣ ಭಾರತದಲ್ಲಿ ಬ್ರಿಟಿಷರ ಸ್ವಾಧೀನಗಳಿಗೆ ಮಾನ್ಯತೆ ನೀಡಿ ಫರ್ಮಾನ್ (ಡಿಕ್ರಿ)ಹೊರಡಿಸಿತು.[೭೭]

ಬ್ರಿಟಿಷ್ ಸರ್ಕಾರದ ನಿಯಂತ್ರಣ[ಬದಲಾಯಿಸಿ]

ಕಂಪೆನಿಯು ಪ್ರತಿರೋಧಿಸಿದ ರಾಜ್ಯಗಳನ್ನು ಹತ್ತಿಕ್ಕುವಲ್ಲಿ ಹೆಚ್ಚೆಚ್ಚು ಧೈರ್ಯಶಾಲಿ ಮತ್ತು ಮಹತ್ವಾಕಾಂಕ್ಷಿ ಆಗುತ್ತಿದ್ದರೂ, ವಶಪಡಿಸಿಕೊಂಡ ವಿಶಾಲ ವ್ಯಾಪ್ತಿಯ ಪ್ರದೇಶಗಳಲ್ಲಿ ಆಳ್ವಿಕೆ ನಡೆಸುವಲ್ಲಿ ಕಂಪೆನಿಯು ಅಸಮರ್ಥ ಎನ್ನುವುದು ಮನವರಿಕೆಯಾಯಿತು. ಕಂಪನಿಯ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಬ್ರಿಟಿಷ್ ಸಂಸತ್ತಿನ ಸದಸ್ಯರ ನಡುವೆ ಒಮ್ಮತದ ತೀರ್ಮಾನದ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಯಿತು. ಕಂಪನಿಯ ಆರ್ಥಿಕ ಸ್ಥಿತಿ ಕೂಡ ಹದಗೆಟ್ಟಿತ್ತು ಮತ್ತು ಸಂಸತ್ತಿನಿಂದ ಅದು ಸಾಲಕ್ಕೆ ಅರ್ಜಿಸಲ್ಲಿಸಬೇಕಾಗಿತ್ತು. ಈ ಅವಕಾಶವನ್ನು ಬಳಸಿಕೊಂಡು, ಬ್ರಿಟಿಷ್ ಸಂಸತ್ತು ೧೭೭೩ ರಲ್ಲಿ ರೆಗ್ಯುಲೇಟಿಂಗ್ ಕಾಯ್ದೆ(ಈಸ್ಟ್ ಇಂಡಿಯ ಕಂಪೆನಿ ಕಾಯ್ದೆ ಎಂದು ಕೂಡ ಹೆಸರಾಗಿದೆ)ಯನ್ನು ಅನುಮೋದಿಸಿತು.[೭೮] ಈ ಕಾಯ್ದೆಯು ಕಂಪೆನಿಯ ಮಂಡಳಿಯನ್ನು ನಿಯಂತ್ರಿಸಲು ನಿಬಂಧನೆಗಳನ್ನು ವಿಧಿಸಿತು ಮತ್ತು ಗವರ್ನರ್ ಜನರಲ್ ಸ್ಥಾನವನ್ನು ಸೃಷ್ಟಿಸಿತು. ವಾರನ್ ಹೇಸ್ಟಿಂಗ್ಸ್ ಪ್ರಥಮ ಗವರ್ನರ್ -ಜನರಲ್‌ರಾಗಿ ನೇಮಕವಾದರು. ಇಸವಿ ೧೭೮೪ರಲ್ಲಿ ಪಿಟ್ಸ್ ಇಂಡಿಯ ಕಾಯ್ದೆಯು ಕಂಪೆನಿಯನ್ನು ಬ್ರಿಟಿಷ್ ಸರ್ಕಾರಕ್ಕೆ ಅಧೀನವನ್ನಾಗಿ ಮಾಡಿತು.

ಮುಂದಿನ ಕೆಲವು ದಶಕಗಳು ಬ್ರಿಟಿಷ್ ನಿಯಂತ್ರಣದ ಪ್ರದೇಶಗಳ ಕ್ಷಿಪ್ರ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಕಂಡಿತು. ೧೭೬೬ ಮತ್ತು ೧೭೯೯ರ ಆಂಗ್ಲ-ಮೈಸೂರು ಕದನಗಳು ಮತ್ತು ೧೭೭೨ ಮತ್ತು ೧೮೮೧ ರ ಆಂಗ್ಲ-ಮರಾಠ ಕದನಗಳು ಭಾರತದ ಬಹುತೇಕ ಭಾಗವನ್ನು ಕಂಪೆನಿಯ ನಿಯಂತ್ರಣದಲ್ಲಿ ಇರಿಸಿತು.[೭೯] ಇಂಗ್ಲಿಷರ ದಬ್ಬಾಳಿಕೆ ವಿರುದ್ಧ ಮುಂಚಿನ ಪ್ರತಿರೋಧದ ಕುರುಹು ಹಳೆಯ ಮಧುರೈ ಪ್ರಭುತ್ವದ ಪಾಲಯಕ್ಕರಾರ್ ಮುಖಂಡರಲ್ಲಿ ಕಂಡು ಬಂತು. ಅವರು ತಮ್ಮ ಪ್ರದೇಶಗಳ ಮೇಲೆ ಸ್ವತಂತ್ರ ಅಧಿಕಾರವನ್ನು ಹೊಂದಿದ್ದು, ತೆರಿಗೆ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಕಂಪೆನಿ ಅಧಿಕಾರಿಗಳ ಜತೆ ಸಂಘರ್ಷಕ್ಕೆ ಇಳಿದರು.

ತಿರುನೆಲ್ವೇಲಿ ಜಿಲ್ಲೆಯ ಸ್ಥಳೀಯ ಪಾಲಯಕ್ಕಾರಾರ್ ಮುಖಂಡ ಕಟ್ಟಬೊಮ್ಮನ್ 1790ರ ದಶಕದಲ್ಲಿ ಕಂಪೆನಿಯ ಆಡಳಿತ ವಿಧಿಸಿದ ತೆರಿಗೆಗಳ ವಿರುದ್ಧ ಬಂಡಾಯವೆದ್ದ. ಪ್ರಥಮ ಪಾಲಿಗಾರ್ ಯುದ್ಧದ(೧೭೯೯–೧೮೦೨)ನಂತರ, ಅವನನ್ನು ಸೆರೆಹಿಡಿದು ೧೭೯೯ರಲ್ಲಿ ಗಲ್ಲಿಗೇರಿಸಲಾಯಿತು. ಒಂದು ವರ್ಷದ ನಂತರ, ಎರಡನೇ ಪಾಲಿಗಾರ್ ಯುದ್ದದಲ್ಲಿ ಧೀರನ್ ಚಿನ್ನಮಲೈ ಹೋರಾಡಿದ. ಟಿಪ್ಪುಸುಲ್ತಾನ್ ಆಧಿಪತ್ಯದ ಪತನದ ನಂತರ ಬ್ರಿಟಿಷರ ವಿರುದ್ಧ ಮೂರು ಯುದ್ಧಗಳಲ್ಲಿ ಜಯಗಳಿಸಿದ್ದ.

ಅಂತಿಮವಾಗಿ ಚಿನ್ನಮಲೈ ಮತ್ತು ಅವನ ಇಬ್ಬರು ಸಹೋದರರನ್ನು ಅಕ್ರಮವಾಗಿ ಗಲ್ಲಿ ಗೇರಿಸಲಾಯಿತು. ಧೀರನ್ ಚಿನ್ನಮಲೈ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಅಸುನೀಗಿದ ಕೊನೆಯ ತಮಿಳು ಅರಸನಾಗಿದ್ದು, ಸುದೀರ್ಘ ಮತ್ತು ದುಬಾರಿ ಆಕ್ರಮಣದ ನಂತರ ಕಂಪನಿಯು ಅವನನ್ನು ಅಡಗಿಸಿತು. ಪಾಲಿಗರ್ ಕದನಗಳ ಅಂತ್ಯವು ಬ್ರಿಟಿಷರಿಗೆ ತಮಿಳುನಾಡಿನ ಬಹುತೇಕ ಭಾಗದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಲ್ಪಿಸಿತು.[೮೦]

೧೭೯೮ ರಲ್ಲಿ ಲಾರ್ಡ್ ವೆಲ್ಲೆಸ್ಲಿ ಗವರ್ನರ್-ಜನರಲ್‌ರಾಗಿ ಆಯ್ಕೆಯಾದರು. ಮುಂದಿನ ಆರು ವರ್ಷಗಳ ಅವಧಿಯಲ್ಲಿ ವೆಲ್ಲೆಸ್ಲಿ ವ್ಯಾಪಕ ವಿಜಯಗಳನ್ನು ಸಾಧಿಸಿ ಕಂಪೆನಿಯ ಪ್ರದೇಶಗಳನ್ನು ಇಮ್ಮಡಿಗೊಳಿಸಿದರು. ಫ್ರೆಂಚರು ಭಾರತದಲ್ಲಿ ಮತ್ತಷ್ಟು ಸ್ವಾಧೀನಗಳನ್ನು ಮಾಡಿಕೊಳ್ಳದಂತೆ ಅವರು ತಡೆದು, ದಖ್ಖನ್ ಮತ್ತು ಕರ್ನಾಟಿಕ್‌ನ ಅನೇಕ ಪ್ರಭುತ್ವಗಳನ್ನು ನಾಶ ಮಾಡಿದರು ಹಾಗು ಮೊಘಲ್ ಚಕ್ರವರ್ತಿಯನ್ನು ಕಂಪೆನಿಯ ರಕ್ಷಣೆಯಲ್ಲಿ ಇರಿಸಿತು ಹಾಗು ತಂಜಾವೂರಿನ ರಾಜ ಸೆರ್ಫೋಜಿಗೆ ಅವನ ರಾಜ್ಯದ ಮೇಲೆ ಪ್ರಭುತ್ವವನ್ನು ಕೈಬಿಡುವಂತೆ ಒತ್ತಡ ಹೇರಿದರು.

ಕಂಪನಿಯ ನೇರ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಪರಿಣಾಮಕಾರಿಯಾಗಿ ಆಡಳಿತ ನಡೆಸುವ ಸಲುವಾಗಿ ಮದ್ರಾಸ್ ಪ್ರೆಸಿಡೆನ್ಸಿಯನ್ನು ಸ್ಥಾಪಿಸಲಾಯಿತು. ನೇರ ಆಡಳಿತದಿಂದ ಜನರ ನಡುವೆ ಅಸಮಾಧಾನ ಉಂಟಾಗಲು ಆರಂಭಿಸಿತು. ಸ್ಥಳೀಯ ಸೈನಿಕರು ಎಲ್ಲ ಜಾತಿಯ ಗುರುತು ಗಳನ್ನು ತ್ಯಜಿಸಬೇಕೆಂದು ಮದ್ರಾಸಿನ ಗವರ್ನರ್ ವಿಲಿಯಂ ಬೆಂಟಿಕ್ ಕಟ್ಟಳೆ ವಿಧಿಸಿದಾಗ,1806ರಲ್ಲಿ ವೆಲ್ಲೂರು ದಂಡಿನ ಸೈನಿಕರು ಬಂಡಾಯವೆದ್ದರು.

ಈ ಕ್ರಮವು ಕ್ರೈಸ್ತಧರ್ಮಕ್ಕೆ ಬಲವಂತದ ಮತಾಂತರದ ಪ್ರಯತ್ನ ಎಂದು ಭಯಪಟ್ಟ ಸೈನಿಕರು ಬಂಡಾಯವೆದ್ದಿದ್ದರು. ಬಂಡಾಯವನ್ನು ಅಡಗಿಸಲಾಯಿತಾದರೂ ೧೧೪ ಬ್ರಿಟಿಷ್ ಅಧಿಕಾರಿಗಳು ಹತ್ಯೆಯಾಗಿದ್ದರು ಮತ್ತು ನೂರಾರು ದಂಗೆಕೋರರನ್ನು ಗಲ್ಲಿಗೇರಿಸಲಾಯಿತು. ಅಪಮಾನದಿಂದಾಗಿ ಬೆಂಟಿಂಕ್‌ನನ್ನು ವಾಪಸು ಕರೆಸಲಾಯಿತು.[೮೧][೮೨]

ಕಂಪೆನಿ ಆಡಳಿತ ಅಂತ್ಯ[ಬದಲಾಯಿಸಿ]

ವಿವಿಧ ಜಿಲ್ಲೆಗಳ ಕಂಪೆನಿ ಪ್ರದೇಶಗಳಲ್ಲಿ ಸೈನಿಕರ ಅತೃಪ್ತಿಯು ಕಾಣಿಸಿಕೊಂಡು, ೧೮೫೭ ರಲ್ಲಿ ಭುಗಿಲೆದ್ದು ಸಿಪಾಯಿ ದಂಗೆಗೆ ಕಾರಣವಾಯಿತು. ಈ ದಂಗೆಯಿಂದ ಭಾರತದ ವಸಾಹತುಶಾಹಿ ಆಡಳಿತದ ಸ್ಥಿತಿಗತಿ ಮೇಲೆ ಅಪಾರ ಪರಿಣಾಮ ಬೀರಿತು.

ತಮಿಳುನಾಡಿನಲ್ಲಿ ಇದು ಬಹುತೇಕ ಪರಿಣಾಮ ಉಂಟಾಗಲಿಲ್ಲ. ಸಿಪಾಯಿ ದಂಗೆಯ ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ೧೮೫೮ರ ಕಾಯಿದೆಯನ್ನು ಕಾನೂನಾಗಿಸಿ ಕಂಪನಿಯ ಅಧಿಕಾರಗಳನ್ನು ರದ್ದುಮಾಡಿತು ಹಾಗು ಸರ್ಕಾರವನ್ನು ಬ್ರಿಟಿಷ್ರಾಜಪ್ರಭುತ್ವದ ವಶಕ್ಕೆ ಹಸ್ತಾಂತರಿಸಿತು.

ಬ್ರಿಟಿಷ್ ಆಡಳಿತ (೧೮೫೦–೧೯೪೭)[ಬದಲಾಯಿಸಿ]

ಮದ್ರಾಸ್‌ನಲ್ಲಿ ಬರಗಾಲ(1877). ಪರಿಹಾರ ವಿತರಣೆ ಇಲ್ಲುಸ್ಟ್ರೇಟೆಡ್ ಲಂಡನ್ ನ್ಯೂಸ್‌ನಿಂದ (1877)

೧೮೫೮ ರಲ್ಲಿ ಬ್ರಿಟಿಷ್ ರಾಜಪ್ರಭುತ್ವ ಭಾರತದಲ್ಲಿ ನೇರ ಆಡಳಿತವನ್ನು ವಹಿಸಿಕೊಂಡಿತು. ಪೂರ್ವದ ವರ್ಷಗಳಲ್ಲಿ ಸರ್ಕಾರವು ಅನೇಕ ರೀತಿಗಳಲ್ಲಿ ನಿರಂಕುಶ ಆಡಳಿತವನ್ನು ನೀಡಿತು. ಭಾರತೀಯರ ಸ್ವಂತ ವ್ಯವಹಾರಗಳಲ್ಲಿ ಅವರ ಅಭಿಪ್ರಾಯವು ಮುಖ್ಯವೆಂದು ಬ್ರಿಟನ್ ಪರಿಗಣಿಸಲಿಲ್ಲ. ಆದಾಗ್ಯೂ ಕಾಲಕ್ರಮೇಣ, ಸ್ಥಳೀಯ ಸರ್ಕಾರದಲ್ಲಿ ಭಾರತೀಯ ಪಾಲ್ಗೊಳ್ಳುವಿಕೆಗೆ ಬ್ರಿಟಿಷ್ ರಾಜ್ ಅವಕಾಶ ನೀಡಲಾರಂಭಿಸಿತು. ವೈಸರಾಯ್ ರಿಪನ್ ೧೮೮೨ರಲ್ಲಿ ಗೊತ್ತುವಳಿಯೊಂದನ್ನು ಅಂಗೀಕರಿಸಿದರು. ಇದು ಜನರಿಗೆ ಸ್ಥಳೀಯ ಸರ್ಕಾರದಲ್ಲಿ ಹೆಚ್ಚಿನ ನೈಜ ಪಾಲನ್ನು ನೀಡಿತು.

೧೮೯೨ರ ಭಾರತೀಯ ಕೌನ್ಸಿಲ್ ಕಾಯ್ದೆ ಮುಂತಾದ ಶಾಸನ ಹಾಗು 1909ರ ಮಿಂಟೊ-ಮಾರ್ಲೆ ಸುಧಾರಣೆಗಳು ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್ ಸ್ಥಾಪನೆಗೆ ದಾರಿ ಕಲ್ಪಿಸಿತು.[೮೩] ಮಹಾತ್ಮ ಗಾಂಧಿ ನಾಯಕತ್ವದಲ್ಲಿ ನಡೆದ ಅಸಹಕಾರ ಚಳವಳಿ ಬ್ರಿಟಿಷ್ ಸರ್ಕಾರಕ್ಕೆ ೧೯೧೯ ರಲ್ಲಿ ಗವರ್ನ್‌ಮೆಂಟ್ ಆಫ್ ಇಂಡಿಯ ಆಕ್ಟ್(ಮೊಂಟಾಗು-ಚೆಲ್ಮ್ಸ್‌ಫೋರ್ಡ್ ರಿಫಾರ್ಮ್ಸ್ ಎಂದು ಕೂಡ ಹೆಸರಾಗಿದೆ)ಅನುಮೋದನೆಗೆ ದಾರಿ ಕಲ್ಪಿಸಿತು. ೧೯೨೧ರಲ್ಲಿ ಮೊದಲಿಗೆ ಸ್ಥಳೀಯ ಅಸೆಂಬ್ಲಿಗಳಿಗೆ ಚುನಾವಣೆಗಳು ನಡೆದವು.[೮೩]

ಬೇಸಿಗೆ ಮುಂಗಾರು ಮಳೆಗಳ ವೈಫಲ್ಯ ಮತ್ತು ರಯಟ್‌ವಾರಿ ವ್ಯವಸ್ಥೆಯ ಆಡಳಿತ ಲೋಪದೋಷಗಳು ೧೮೭೬-೧೮೭೭ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ವ್ಯಾಪ್ತಿಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಉಂಟಾಯಿತು.[೮೪] ಸರ್ಕಾರ ಮತ್ತು ಅನೇಕ ದತ್ತಿಧರ್ಮ ಸಂಸ್ಥೆಗಳು ನಗರದಲ್ಲಿ ಮತ್ತು ಉಪನಗರಗಳಲ್ಲಿ ಪರಿಹಾರ ಕಾರ್ಯಗಳನ್ನು ಸಂಘಟಿಸಿತು.

ಭಾರತದ ಐರೋಪ್ಯರಿಂದ ಮತ್ತು ವಿದೇಶಗಳಿಂದ ಬರಪರಿಹಾರಕ್ಕಾಗಿ ನಿಧಿಗಳನ್ನು ಸಂಗ್ರಹಿಸಲಾಯಿತು. ವಿಲಿಯಂ ದಿಗ್‌ಬೈ ಮುಂತಾದ ಮಾನವತಾವಾದಿಗಳು ಬರದಿಂದ ಉಂಟಾದ ಸಂಪೂರ್ಣ ಕಷ್ಟನಷ್ಟಗಳಿಗೆ ಪ್ರತಿಕ್ರಿಯೆಯಾಗಿ ಸಮರ್ಪಕ ಮತ್ತು ಪ್ರಾಮಾಣಿಕ ಕ್ರಮ ಕೈಗೊಳ್ಳಲು ಬ್ರಿಟಿಷ್ ಆಡಳಿತ ವಿಫಲವಾದ ಬಗ್ಗೆ ಕೋಪೋದ್ರಿಕ್ತರಾಗಿ ಬರೆದರು.[೮೫]

೧೮೭೮ರಲ್ಲಿ ಮುಂಗಾರು ಮಳೆಯ ದರ್ಶನದಿಂದ ಬರಗಾಲ ಕೊನೆಗೂ ಅಂತ್ಯಗೊಂಡಾಗ, ಸುಮಾರು ಮೂರರಿಂದ ೫ ದಶಲಕ್ಷ ಜನರು ವಿನಾಶವಾಗಿದ್ದರು.[೮೪] ಬರಗಾಲದ ವಿನಾಶಕಾರಿ ಪರಿಣಾಮಗಳಿಗೆ ಪ್ರತಿಕ್ರಿಯೆಯಾಗಿ ಸರ್ಕಾರವು ೧೮೮೦ ರಲ್ಲಿ ಪ್ರಕೃತಿ ವಿಕೋಪ ಪರಿಹಾರದ ಮೂಲ ತತ್ತ್ವಗಳನ್ನು ವ್ಯಾಖ್ಯಾನಿಸಲು ೧೮೮೦ರಲ್ಲಿ ಬರಗಾಲ ಆಯೋಗವನ್ನು ಆಯೋಜಿಸಿತು. ಸರ್ಕಾರ ಬರಗಾಲ ವಿಮೆ ಅನುದಾನವನ್ನು ಕೂಡ ಸ್ಥಾಪಿಸಿ, ೧.೫ ದಶಲಕ್ಷ ರೂಗಳನ್ನು ಮೀಸಲಿಟ್ಟಿತು. ಇತರ ಪೌರ ಕೆಲಸಗಳಾದ ಕಾಲುವೆ ನಿರ್ಮಾಣ ಮತ್ತು ರಸ್ತೆಗಳು ಮತ್ತು ರೈಲ್ವೆ ಸಂಪರ್ಕಗಳಲ್ಲಿ ಸುಧಾರಣೆಗಳನ್ನು ಮುಂದಿನ ಬರಗಾಲಗಳ ಪರಿಣಾಮಗಳನ್ನು ಕನಿಷ್ಠಗೊಳಿಸುವ ಸಲುವಾಗಿ ಕೈಗೊಳ್ಳಲಾಯಿತು.

ಸ್ವಾತಂತ್ರ್ಯ ಹೋರಾಟ[ಬದಲಾಯಿಸಿ]

ಸ್ವಾತಂತ್ರ್ಯದ ತೀವ್ರ ಅಪೇಕ್ಷೆ ರಾಷ್ಟ್ರದಲ್ಲಿ ಕ್ರಮೇಣ ಗರಿಗೆದರಿತು. ತಮಿಳುನಾಡಿನಲ್ಲಿ ಅದರ ಪ್ರಭಾವದಿಂದ ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷ್ ವಸಾಹತುಶಾಹಿ ಅಧಿಕಾರದ ವಿರುದ್ಧ ಸೆಣಸಾಡಲು ಅಸಂಖ್ಯಾತ ಕಾರ್ಯಕರ್ತರು ಹುಟ್ಟಿ ಕೊಂಡರು. ಅವರಲ್ಲಿ ಗಮನಾರ್ಹವಾದವರು ತಿರುಪ್ಪುರ್ ಕುಮಾರನ್. ಅವರು ೧೯೦೪ ರಲ್ಲಿ ಈರೋಡಿನ ಸಣ್ಣ ಗ್ರಾಮದಲ್ಲಿ ಜನಿಸಿದ್ದರು. ಬ್ರಿಟಿಷರ ವಿರುದ್ಧ ಪ್ರತಿಭಟನೆ ಮೆರವಣಿಗೆಯಲ್ಲಿ ಕುಮಾರನ್ ತಮ್ಮ ಜೀವ ಕಳೆದುಕೊಂಡರು.

ಪಾಂಡೀಚೆರಿಯ ಫ್ರೆಂಚ್ ವಸಾಹತಿನ ಸ್ಥಳವು ಬ್ರಿಟಿಷ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯವನ್ನು ನೀಡಿತು. ಅರವಿಂದರು ೧೯೧೦ರಲ್ಲಿ ಪಾಂಡಿಚೆರಿಯಲ್ಲಿ ವಾಸಿಸುತ್ತಿರುವ ಅಂತಹವರಲ್ಲಿ ಒಬ್ಬರು. ಕವಿ ಸುಬ್ರಮಣ್ಯ ಭಾರತಿ ಅರವಿಂದರ ಸಮಕಾಲೀನರು.[೮೬]

ಭಾರತಿ ಕ್ರಾಂತಿಕಾರಿ ಹೋರಾಟವನ್ನು ವೈಭವೀಕರಿಸಿದ ಅಸಂಖ್ಯಾತ ಕವಿತೆಗಳನ್ನು ತಮಿಳಿನಲ್ಲಿ ಬರೆದರು. ಅವರು ಪಾಂಡಿಚೆರಿಯಲ್ಲಿ ಇಂಡಿಯ ಎಂಬ ಪತ್ರಿಕೆಯನ್ನು ಕೂಡ ಪ್ರಕಟಿಸಿದರು. ಅರವಿಂದರು ಮತ್ತು ಭಾರತಿ ವಿ.ವಿ.ಎಸ್.ಐಯರ್ ಮತ್ತು ವಿ.ಒ.ಚಿದಂಬರಂ ಮುಂತಾದ ಕ್ರಾಂತಿಕಾರಿಗಳ ಜತೆ ಒಡನಾಟ ಹೊಂದಿದ್ದರು.[೮೬] ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ವಿರುದ್ಧ ಹೋರಾಡಲು ನೇತಾಜಿ ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿ(INA)ಗೆ ಗಮನಾರ್ಹ ಪ್ರಮಾಣದಲ್ಲಿ ತಮಿಳರು ಸದಸ್ಯರಾದರು.[೮೭][೮೮] INAನಲ್ಲಿ ತಮಿಳುನಾಡಿಗೆ ಸೇರಿದ ಲಕ್ಷ್ಮಿ ಸಹಗಲ್ ಪ್ರಮುಖ ನಾಯಕಿರಾಗಿದ್ದರು.

೧೯೧೬ ರಲ್ಲಿ ಡಾ.ಟಿ.ಎಂ.ನಾಯರ್ ಮತ್ತು ರಾವ್ ಬಹಾದುರ್ ತ್ಯಾಗರಾಜ ಚೆಟ್ಟಿ ಬ್ರಾಹ್ಮಣೇತರ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿ ದ್ರಾವಿಡ ಆಂದೋಳನಕ್ಕೆ ಬೀಜಗಳನ್ನು ಬಿತ್ತಿದರು.[೮೯] ೧೯೨೦ರ ದಶಕದಲ್ಲಿ, ತಮಿಳುನಾಡಿನಲ್ಲಿ ಪ್ರಾದೇಶಿಕ ರಾಜಕೀಯಕ್ಕೆ ಮುಖ್ಯವಾಗಿ ಗಮನಹರಿಸಿದ ಎರಡು ಆಂದೋಳನಗಳು ಆರಂಭವಾದವು.

ಒಂದು ಜಸ್ಟೀಸ್ ಪಕ್ಷವಾಗಿದ್ದು, ೧೯೨೧ರಲ್ಲಿ ನಡೆದ ಸ್ಥಳೀಯ ಶಾಸನಸಭೆ ಚುನಾವಣೆಗಳನ್ನು ಗೆಲುವು ಗಳಿಸಿತು. ಜಸ್ಟೀಸ್ ಪಕ್ಷವು ಭಾರತದ ಸ್ವಾತಂತ್ರ್ಯ ಚಳವಳಿ ಮೇಲೆ ಗಮನಹರಿಸಲಿಲ್ಲ. ಆದರೆ ಸ್ಥಳೀಯ ವಿಷಯಗಳಾದ ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಿಗೆ ಜಾತಿ ಆಧಾರಿತ ಮೀಸಲಾತಿ(ಅಫರ್ಮಮೇಟಿವ್ ಆಕ್ಷನ್)ಮುಂತಾದ ಕಡೆ ಗಮನಹರಿಸಿತು. ಇನ್ನೊಂದು ಮುಖ್ಯ ಚಳವಳಿಯಾದ ಧಾರ್ಮಿಕ ವಿರೋಧಿ, ಬ್ರಾಹ್ಮಣ ವಿರೋಧಿ ಸುಧಾರಣೆವಾದಿ ಚಳವಳಿ ಇ.ವಿ.ರಾಮಸಾಮಿ ನಾಯ್ಕರ್ ನೇತೃತ್ವದಲ್ಲಿ ನಡೆಯಿತು.[೮೯]

ಬ್ರಿಟಿಷ್ ಸರ್ಕಾರ ೧೯೩೫ರ ಅಖಿಲ ಭಾರತ ಒಕ್ಕೂಟ ಕಾಯ್ದೆಯನ್ನು ಅನುಮೋದಿಸಿದಾಗ, ೧೯೩೫ರಲ್ಲಿ ಸಂಭಾವ್ಯ ಸ್ವಯಮಾಡಳಿತದತ್ತ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು. ಹೊಸ ಸ್ಥಳೀಯ ಚುನಾವಣೆಗಳು ತಮಿಳುನಾಡಿನಲ್ಲಿ ನಡೆದವು. ಜಸ್ಟೀಸ್ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಪಕ್ಷವು ಅಧಿಕಾರದ ಗದ್ದುಗೆ ಹಿಡಿಯಿತು. ೧೯೩೮ರಲ್ಲಿ ರಾಮಸ್ವಾಮಿ ನಾಯ್ಕರ್ ಸಿ.ಎನ್.ಅಣ್ಣಾದೊರೈ ಜತೆ ಶಾಲೆಗಳಲ್ಲಿ ಹಿಂದಿ ಬೋಧನೆಯನ್ನು ಪರಿಚಯಿಸುವ ಕಾಂಗ್ರೆಸ್ ಸಚಿವಾಲಯದ ನಿರ್ಧಾರದ ವಿರುದ್ಧ ಚಳವಳಿಯೊಂದನ್ನು ಆರಂಭಿಸಿದರು.[೯೦]

ಸ್ವಾತಂತ್ರ್ಯ ನಂತರದ ಅವಧಿ[ಬದಲಾಯಿಸಿ]

೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದಯಪಾಲಿಸಿದಾಗ ವಿಭಜನೆಯ ಆಘಾತ ತಮಿಳುನಾಡಿನ ಮೇಲೆ ಪರಿಣಾಮ ಬೀರಲಿಲ್ಲ. ವಿವಿಧ ಧರ್ಮಗಳ ವಿರುದ್ಧ ಜನಾಂಗೀಯ ಹಿಂಸಾಚಾರ ಸಂಭವಿಸಲಿಲ್ಲ. ತಮಿಳುನಾಡಿನಲ್ಲಿ ಎಲ್ಲ ಧರ್ಮಗಳ ನಡುವೆ ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ವಾತಾವರಣ ಸದಾ ಇತ್ತು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಕಾಂಗ್ರೆಸ್ ಪ್ರಥಮ ಸಚಿವಾಲಯವನ್ನು ರಚಿಸಿತು. ಸಿ. ರಾಜಗೋಪಾಲಚಾರಿ (ರಾಜಾಜಿ) ಪ್ರಥಮ ಮುಖ್ಯಮಂತ್ರಿಯಾದರು.

ಮದ್ರಾಸ್ ಪ್ರೆಸಿಡೆನ್ಸಿಯನ್ನು ನಂತರ ಮದ್ರಾಸ್ ರಾಜ್ಯವಾಗಿ ಪುನಾರಚನೆ ಮಾಡಲಾಯಿತು. ಮದ್ರಾಸ್ ರಾಜ್ಯದ ತೆಲುಗು ಭಾಷಿಕ ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಆಂಧ್ರ ರಾಜ್ಯ ರಚಿಸಬೇಕೆಂದು ಪೋಟ್ಟಿ ಶ್ರೀರಾಮುಲು ಚಳವಳಿಗಳನ್ನು ಹೂಡಿದ ನಂತರ,ಮದ್ರಾಸ್ ರಾಜ್ಯವನ್ನು ವಿಭಜನೆ ಮಾಡಲು ಭಾರತ ಸರ್ಕಾರ ನಿರ್ಧರಿಸಿತು.[೯೧]

೧೯೫೩ರಲ್ಲಿ ರಾಯಲಸೀಮಾ ಮತ್ತು ಕರಾವಳಿ ಆಂಧ್ರದ ಪ್ರದೇಶಗಳು ಸೇರಿ ಆಂಧ್ರಪ್ರದೇಶವೆಂಬ ಹೊಸ ರಾಜ್ಯವಾಯಿತು ಹಾಗು ಬಳ್ಳಾರಿ ಜಿಲ್ಲೆ ಮೈಸೂರು ರಾಜ್ಯದ ಭಾಗವಾಯಿತು. ೧೯೫೬ ರಲ್ಲಿ ಕೆನರಾ ಜಿಲ್ಲೆ ಮೈಸೂರಿಗೆ ವರ್ಗಾವಣೆಯಾಯಿತು. ಮಲಬಾರ್ ಕರಾವಳಿ ಜಿಲ್ಲೆಗಳು ಕೇರಳದ ಹೊಸ ರಾಜ್ಯದ ಭಾಗವಾಯಿತು ಮತ್ತು ಮದ್ರಾಸ್ ರಾಜ್ಯವು ತನ್ನ ಪ್ರಸಕ್ತ ರೂಪವನ್ನು ತಾಳಿತು. ಮದ್ರಾಸ್ ರಾಜ್ಯವನ್ನು 1968ರಲ್ಲಿ ತಮಿಳುನಾಡು(ತಮಿಳರ ನಾಡು)ಎಂದು ಹೆಸರಿಸಲಾಯಿತು.

೧೯೭೦ ಮತ್ತು ೧೯೮೦ರ ದಶಕದಲ್ಲಿ ಶ್ರೀಲಂಕಾದ ಜನಾಂಗೀಯ ಸಂಘರ್ಷದಿಂದ ಬಹುಸಂಖ್ಯೆಯಲ್ಲಿ ಶ್ರೀಲಂಕಾ ತಮಿಳರು ತಮಿಳುನಾಡಿಗೆ ವಲಸೆ ಬಂದರು. ತಮಿಳು ನಿರಾಶ್ರಿತರ ಸಂಕಷ್ಟಕ್ಕೆ ಬಹುತೇಕ ತಮಿಳು ರಾಜಕೀಯ ಪಕ್ಷಗಳು ಬಲವಾದ ಬೆಂಬಲ ನೀಡಿದವು.[೯೨] ಶ್ರೀಲಂಕಾ ತಮಿಳರ ಪರವಾಗಿ ಶ್ರೀಲಂಕಾ ಸರ್ಕಾರದ ಜತೆ ಮಧ್ಯಸ್ಥಿಕೆ ವಹಿಸುವಂತೆ ಭಾರತ ಸರ್ಕಾರದ ಮೇಲೆ ಅವರು ಒತ್ತಡ ಹೇರಿದರು.

ಆದಾಗ್ಯೂ, ೧೯೯೧ರ ಮೇ ೨೧ರಂದು ಶ್ರೀಲಂಕಾದ LTTE ಉಗ್ರರಿಂದ ರಾಜೀವ್‌ಗಾಂಧಿ ಹತ್ಯೆಯ ನಂತರ LTTE ತಮಿಳುನಾಡಿನಿಂದ ಬಹುತೇಕ ಬೆಂಬಲವನ್ನು ಕಳೆದುಕೊಂಡಿತು. LTTEಯನ್ನು ನಿಶ್ಶಸ್ತ್ರಗೊಳಿಸಲು ಭಾರತದ ಶಾಂತಿಪಾಲನೆ ಪಡೆಯನ್ನು ಕಳಿಸುವಲ್ಲಿ ಮಾಜಿ ಪ್ರಧಾನಮಂತ್ರಿ ವಹಿಸಿದ ಪಾತ್ರಕ್ಕಾಗಿ ಅವರನ್ನು ಹತ್ಯೆ ಮಾಡಲಾಗಿತ್ತು.[೯೩][೯೪]

ತಮಿಳುನಾಡಿನ ಪೂರ್ವತೀರದ ಪ್ರದೇಶಗಳಲ್ಲಿ ೨೦೦೪ ರ ಹಿಂದುಮಹಾಸಾಗರ ಭೂಕಂಪದಿಂದ ಸಂಭವಿಸಿದ ಸುನಾಮಿಯಿಂದ ವ್ಯಾಪಕ ಹಾನಿಯಾಯಿತು. ಈ ದುರಂತದಲ್ಲಿ ಸುಮಾರು ೮೦೦೦ ಜನರು ಪ್ರಾಣತೆತ್ತರು.[೯೫]

ಭಾರತದ ಒಕ್ಕೂಟದಲ್ಲಿ ೬ನೇ ಅತ್ಯಂತ ಜನಸಂಖ್ಯೆಯ ರಾಜ್ಯವಾದ ತಮಿಳುನಾಡು ಭಾರತದ ರಾಜ್ಯಗಳ ನಡುವೆ ೨೦೦೫ ರಲ್ಲಿ ೭ನೇ ಅತೀ ದೊಡ್ಡ ಆರ್ಥಿಕಶಕ್ತಿಯಾಗಿತ್ತು.[೯೬]

ಕುಶಲ(ತರಬೇತಾದ)ಕೆಲಸಕ್ಕಾಗಿ ಹೆಚ್ಚಿದ ಬೇಡಿಕೆಗಳು ತಮಿಳುನಾಡಿನಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಲು ಕಾರಣವಾಯಿತು. ಜಾತಿ ಆಧಾರಿತ ಮೀಸಲಾತಿ(ಅಫರ್ಮೇಟಿವ್ ಆಕ್ಷನ್)ಗೆ ವ್ಯಾಪಕ ಅರ್ಜಿಯಿಂದ ರಾಜ್ಯವು ಎಲ್ಲ ಶಿಕ್ಷಣ ಮತ್ತು ಉದ್ಯೋಗವಾಕಾಶಗಳಲ್ಲಿ ೬೯% ಹಿಂದುಳಿದ ಜಾತಿಗಳಿಗೆ ಮೀಸಲಿಡಲು ಕಾರಣವಾಯಿತು. ತಮಿಳುನಾಡಿನಲ್ಲಿ ಇಂತಹ ಜಾತಿ ಆಧಾರಿತ ಮೀಸಲಾತಿಗಳಿಗೆ ಭಾರೀ ಸಾರ್ವಜನಿಕ ಬೆಂಬಲ ವ್ಯಕ್ತವಾಯಿತು. ಇದರ ಅನುಷ್ಠಾನದ ವಿರುದ್ಧ ಯಾವುದೇ ಜನಪ್ರಿಯ ಪ್ರತಿಭಟನೆಗಳನ್ನು ಆಯೋಜಿಸಲಿಲ್ಲ.[೯೭]

ಪ್ರಾದೇಶಿಕ ರಾಜಕೀಯದ ವಿಕಾಸ[ಬದಲಾಯಿಸಿ]

ತಮಿಳುನಾಡಿನ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಮೂರು ಹಂತಗಳನ್ನು ಹಾದುಹೋಗಿದೆ. ೧೯೪೭ ರ ನಂತರ ಕಾಂಗ್ರೆಸ್ ಪಕ್ಷದ ಪ್ರಾಬಲ್ಯದಿಂದ ನಂತರ ೧೯೬೦ರ ದಶಕದಲ್ಲಿ ಜನಸಾಮಾನ್ಯರಿಂದ ದ್ರಾವಿಡ ಬೆಂಬಲ ಕ್ರೋಢೀಕರಣಕ್ಕೆ ದಾರಿಯಾಯಿತು. ಈ ಹಂತವು ೧೯೯೦ರ ದಶಕದ ಕೊನೆಯವರೆಗೆ ಉಳಿಯಿತು. ತೀರಾ ಇತ್ತೀಚಿನ ಹಂತವು ದ್ರಾವಿಡ ರಾಜಕೀಯ ಪಕ್ಷಗಳ ವಿಭಜನೆಯನ್ನು ಕಂಡಿತು. ಇದು ರಾಜಕೀಯ ಮೈತ್ರಿಕೂಟಗಳು ಮತ್ತು ಸಮ್ಮಿಶ್ರ ಸರ್ಕಾರಗಳ ಆಗಮನಕ್ಕೆ ದಾರಿಯಾಯಿತು.[೯೮]

ಅಣ್ಣಾದೊರೈ ೧೯೪೯ ರಲ್ಲಿ ದ್ರಾವಿಡರ್ ಕಳಗಂನಿಂದ ಬೇರೆಯಾಗಿ ದ್ರಾವಿಡ ಮುನ್ನೇತ್ರ ಕಳಗಂ(DMK)ಸ್ಥಾಪಿಸಿದರು.[೯೯]

ಡಿಎಂಕೆ ತಮಿಳುನಾಡಿನಲ್ಲಿ 'ಹಿಂದಿ ಸಂಸ್ಕೃತಿಯ ವಿಸ್ತರಣೆ' ವಿರೋಧಿಸಲು ನಿರ್ಧರಿಸಿತು ಮತ್ತು ದಕ್ಷಿಣದಲ್ಲಿ ದ್ರಾವಿಡರಿಗೆ ಪ್ರತ್ಯೇಕ ತಾಯಿನಾಡು ನೀಡಬೇಕೆಂಬ ಬೇಡಿಕೆಯನ್ನಿಡಲು ಆರಂಭಿಸಿತು. ತಮಿಳುನಾಡು, ಆಂಧ್ರ,ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳನ್ನು ಒಳಗೊಂಡ ದ್ರಾವಿಡನಾಡು (ದ್ರಾವಿಡರ ದೇಶ)ಎಂಬ ಸ್ವತಂತ್ರ ರಾಜ್ಯದ ಸ್ಥಾಪನೆಯ ಬೇಡಿಕೆಯಾಗಿತ್ತು.[೧೦೦]

ಮದ್ರಾಸ್‌ನಲ್ಲಿ ೧೯೫೦ರ ದಶಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಹೆಚ್ಚಿನ ಒಳಗೊಳ್ಳುವಿಕೆ ಮತ್ತು ೧೯೬೨ರಲ್ಲಿ ಭಾರತದ ಮೇಲೆ ಚೀನಾ ಆಕ್ರಮಣದಿಂದ ಹುಟ್ಟಿದ ಬಲವಾದ ಭಾರತ ಏಕೀಕರಣ ಭಾವನೆಗಳು ದ್ರಾವಿಡನಾಡು ರಚನೆ ಕುರಿತಾದ ಬೇಡಿಕೆ ತನ್ನ ಜರೂರತ್ತನ್ನು ಕಳೆದುಕೊಂಡಿತು. ಇದರ ಪರಿಣಾಮವಾಗಿ ೧೯೬೩ರಲ್ಲಿ ಭಾರತದ ಸಂವಿಧಾನಕ್ಕೆ ಹದಿನಾರನೇ ತಿದ್ದುಪಡಿಯಲ್ಲಿ ಪ್ರತ್ಯೇಕತಾವಾದಿ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ವಿರೋಧಿಸಿದಾಗ, ಡಿಎಂಕೆ ಸ್ವತಂತ್ರ ದ್ರಾವಿಡಿಸ್ತಾನ್ ಬೇಡಿಕೆಯನ್ನು ಔಪಚಾರಿಕವಾಗಿ ಕೈಬಿಟ್ಟಿತು. ಇದರ ಬದಲಿಗೆ ಭಾರತದ ಸಂವಿಧಾನದ ಚೌಕಟ್ಟಿನೊಳಗೆ ಹೆಚ್ಚಿನ ಕ್ರಿಯಾತ್ಮಕ ಸ್ವಾಯತ್ತತೆಯನ್ನು ಗಳಿಸುವ ಬಗ್ಗೆ ಗಮನಹರಿಸಿತು.[೧೦೧]

ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟದಿಂದ ಹುಟ್ಟಿದ ಜನಬೆಂಬಲದ ಅಲೆಯಲ್ಲಿ ತೇಲುತ್ತಾ, ತಮಿಳುನಾಡಿನಲ್ಲಿ ಪ್ರಥಮ ಸ್ವಾತಂತ್ರ್ಯಾ ನಂತರದ ಸರ್ಕಾರವನ್ನು ರಚಿಸಿತು ಮತ್ತು ೧೯೬೭ ರವರೆಗೆ ಆಡಳಿತ ಮುಂದುವರಿಸಿತು. ೧೯೬೫ ಮತ್ತು ೧೯೬೮ರಲ್ಲಿ ಡಿಎಂಕೆ ರಾಜ್ಯದ ಶಾಲೆಗಳಲ್ಲಿ ಹಿಂದಿಯನ್ನು ಜಾರಿಗೆ ತರುವ ಕೇಂದ್ರಸರ್ಕಾರದ ಯೋಜನೆಗಳ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಹಿಂದಿ ವಿರೋಧಿ ಚಳವಳಿಗಳ ನೇತೃತ್ವ ವಹಿಸಿತು.

ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಮೀಸಲಾತಿ(ಅಫರ್ಮೇಟಿವ್ ಆಕ್ಷನ್)ಯನ್ನು ದ್ರಾವಿಡ ಚಳವಳಿಯ ಬೇಡಿಕೆಗಳ ಆಧಾರದ ಮೇಲೆ ಪ್ರವರ್ತನಗೊಳಿಸಲಾಯಿತು.[೧೦೨] ದ್ರಾವಿಡ ಚಳವಳಿಯ ನಾಯಕತ್ವದಲ್ಲಿ ಸಮರ್ಥ ಲೇಖಕರು ಮತ್ತು ವಿದ್ವಜ್ಜನರಾದ ಅಣ್ಣಾದೊರೈ ಮತ್ತು ಕರುಣಾನಿಧಿ ಇದ್ದರು. ಅವರು ತಮ್ಮ ರಾಜಕೀಯ ಸಂದೇಶಗಳನ್ನು ಹರಡಲು ನಾಟಕಗಳು ಮತ್ತು ಚಲನಚಿತ್ರಗಳ ಜನಪ್ರಿಯ ಮಾಧ್ಯಮವನ್ನು ಶ್ರದ್ಧೆಯಿಂದ ಬಳಸಿಕೊಂಡರು.[೧೦೩]

ನಂತರ ತಮಿಳುನಾಡಿನ ಮುಖ್ಯಮಂತ್ರಿಯಾದ ಎಂ.ಜಿ.ರಾಮಚಂದ್ರನ್(MGR) ಮೊದಲಿಗೆ ನಾಟಕ ಮತ್ತು ಚಲನಚಿತ್ರ ನಟರಾಗಿದ್ದರು.[೧೦೪]

೧೯೬೭ ರಲ್ಲಿ DMK ರಾಜ್ಯ ಚುನಾವಣೆಯಲ್ಲಿ ಜಯಗಳಿಸಿತು. DMK 1972ರಲ್ಲಿ ಎರಡು ಭಾಗವಾಗಿ ಒಡೆಯಿತು. MGR ಒಡೆದ ಬಣದಿಂದ ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ(AIADMK)ರಚಿಸಿದರು. ಆಗಿನಿಂದ ಇವೆರಡು ಪಕ್ಷಗಳು ತಮಿಳುನಾಡು ರಾಜಕೀಯದಲ್ಲಿ ಮೇಲುಗೈ ಪಡೆದಿವೆ.[೧೦೫] AIADMK MGR ನೇತೃತ್ವದಲ್ಲಿ ೧೯೭೭, ೧೯೮೦ ಮತ್ತು ೧೯೮೪ ರ ಮೂರು ಸತತ ವಿಧಾನಸಭೆ ಚುನಾವಣೆಗಳಲ್ಲಿ ರಾಜ್ಯ ಸರ್ಕಾರದ ಮೇಲೆ ಹಿಡಿತವನ್ನು ಉಳಿಸಿಕೊಂಡಿತು. MGR ನಿಧನದ ನಂತರ AIADMKಯಲ್ಲಿ ವಿವಿಧ ಮುಖಂಡರ ನಡುವೆ ಉತ್ತಾರಾಧಿ ಕಾರದ ಪ್ರಶ್ನೆಯು ಮೂಡಿ ಪಕ್ಷವು ಒಡೆಯಿತು. ತರುವಾಯ ಜೆ.ಜಯಲಲಿತಾ AIADMK ನಾಯಕತ್ವವನ್ನು ವಹಿಸಿಕೊಂಡರು.

೧೯೯೦ರ ದಶಕದ ಉತ್ತರಾರ್ಧದಲ್ಲಿ ತಮಿಳುನಾಡಿನ ರಾಜಕೀಯ ಸಮತೋಲನದಲ್ಲಿ ವಿವಿಧ ಮಾರ್ಪಾಟುಗಳು ಉಂಟಾಯಿತು. ಇದು ತರುವಾಯ ತಮಿಳುನಾಡಿನ ರಾಜಕೀಯದಲ್ಲಿ DMK ಮತ್ತು AIADMKಯ ದ್ವಿಸ್ವಾಮ್ಯ ಅಂತ್ಯಕ್ಕೆ ದಾರಿ ಕಲ್ಪಿಸಿತು. ೧೯೯೬ರಲ್ಲಿ ತಮಿಳುನಾಡಿನ ಕಾಂಗ್ರೆಸ್ ಪಕ್ಷದಲ್ಲಿ ಹೋಳಾಗಿ ತಮಿಳು ಮನಿಲಾ ಕಾಂಗ್ರೆಸ್(TMC)ರಚನೆಯಲ್ಲಿ ಅಂತ್ಯಗೊಂಡಿತು.

TMC ಪಕ್ಷವು DMK ಜತೆಗೂಡಿತು ಮತ್ತು DMKಯಿಂದ ಒಡೆದ ಇನ್ನೊಂದು ಪಕ್ಷವಾದ ಮರುಮಳರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK) AIADMK ಪಕ್ಷದ ಜತೆಗೂಡಿತು. ಮಹಾ ಮೈತ್ರಿಕೂಟದ ಪ್ರಥಮ ನಿದರ್ಶನವು ರಾಷ್ಟ್ರೀಯ ಸಂಸತ್‌ನ ೧೯೯೬ರ ಚುನಾವಣೆಯಲ್ಲಿ ಕಂಡು ಬಂದಿದೆ. ಈ ಸಂದರ್ಭದಲ್ಲಿ AIADMK ಪಕ್ಷವು DMK ಮತ್ತು TMC ಮೈತ್ರಿಕೂಟದ ಚುನಾವಣೆ ಬೆದರಿಕೆಯನ್ನು ಎದುರಿಸಲು ಅಸಂಖ್ಯಾತ ಸಣ್ಣ ಪಕ್ಷಗಳನ್ನು ಸೇರಿಸಿಕೊಂಡು ದೊಡ್ಡ ಸಮ್ಮಿಶ್ರಕೂಟವನ್ನು ರಚನೆ ಮಾಡಿತು. ಆಗಿನಿಂದ ದೊಡ್ಡ ಸಂಖ್ಯೆಯ ರಾಜಕೀಯ ಪಕ್ಷಗಳ ಮೈತ್ರಿಕೂಟಗಳ ರಚನೆಯು ತಮಿಳುನಾಡಿನ ಚುನಾವಣೆ ಪರಿಪಾಠವಾಗಿದೆ.[೧೦೬]

೧೯೯೦ರ ಪೂರ್ವಾರ್ದದಲ್ಲಿ ಆರಂಭವಾದ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣೆ ಸೋಲು, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಸಮ್ಮಿಶ್ರ ಭಾಗಿಗಳನ್ನು ಹುಡುಕಲು ಕಾಂಗ್ರೆಸ್‌ಗೆ ಒತ್ತಡ ಉಂಟಾಯಿತು. ಇದು ಕೇಂದ್ರ ಸರ್ಕಾರದ ಭಾಗವಾಗಲು ದ್ರಾವಿಡ ಪಕ್ಷಗಳಿಗೆ ದಾರಿ ಕಲ್ಪಿಸಿತು.[೧೦೭]

ಕಾಲಾನುಕ್ರಮಣಿ[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

  • ಭಾರತದ ಇತಿಹಾಸ
  • ಬಂಗಾಳದ ಇತಿಹಾಸ
  • ಬಿಹಾರದ ಇತಿಹಾಸ
  • ಮಧ್ಯಕಾಲೀನ ಕರ್ನಾಟಕದ ರಾಜಕೀಯ ಇತಿಹಾಸ

ಟಿಪ್ಪಣಿಗಳು[ಬದಲಾಯಿಸಿ]

  1. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ, ಪುಟಗಳು 109–112
  2. 'ಮುಖಂಡರ ವರ್ಗಗಳಿಗೆ ಸಂಬಂಧಿಸಿದಂತೆ ಮೂರು ಹಂತಗಳ ಮರುವಿಂಗಡಣೆಯಿತ್ತು. ಅವು:ವೆಂಟಾರ್, ವೇಲಿರ್ ಮತ್ತು ಕಿಲಾರ್ ಇಳಿಕೆಯ ಕ್ರಮದಲ್ಲಿದೆ. ಮೂರು ಪ್ರಮುಖ ವಂಶಗಳಾದ ಸೆರಾ, ಕೋಲಾ ಮತ್ತು ಪಾಂಡ್ಯರಿಗೆ ವೆಂಟಾರ್ ಮುಖಂಡರಾಗಿದ್ದರು. ವೇಲಿರ್ ಬಹುತೇಕ ಬುಡಕಟ್ಟು ಮುಖಂಡರಾಗಿದ್ದರು. ಕಿಲಾರ್ ವಸಾಹತುಗಳ ಮುಖಂಡ ರಾಗಿದ್ದರು.' —"Perspectives on Kerala History". P.J.Cherian (Ed),. Kerala Council for Historical Research. Archived from the original on 2006-08-26. Retrieved 2006-11-15.{{cite web}}: CS1 maint: extra punctuation (link)
  3. [180] K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , ಪು 418
  4. 'ಎವೆರಿವೇರ್ ವಿತಿನ್ ಬಿಲೋಡ್-ಆಫ್-ದಿ-ಗಾಡ್ಸ್,ಕಿಂಗ್ ಪಿಯಾದಾಸಿಸ್ ಡೊಮೇನ್, ಎಂಡ್ ಎಮಾಂಗ್ ದಿ ಪೀಪಲ್ ಬಿಯಾಂಡ್ ದಿ ಬಾರ್ಡರ್ಸ್, ದಿ ಚೋಳಾಸ್, ದಿ ಪಾಂಡ್ಯಾಸ್, ದಿ ಸತ್ಯಪುತ್ರಾಸ್, ದಿ ಕೇರಳಪುತ್ರಾಸ್, ಆಸ್ ಫಾರ್ ಆಸ್ ತಾಮ್ರಪರ್ಣಿ...' —"Asoka's second minor rock edict". Colorado State University. Archived from colostate. edu /~malaiya/ashoka.html the original on 2001-03-05. Retrieved 2006-11-15. {{cite web}}: Check |url= value (help)
  5. K.A.N. ಶಾಸ್ತ್ರಿ, ದಿ CōĻas , 1935 ಪುಟ 20
  6. "Hathigumpha Inscription". Epigraphia Indica, Vol. XX (1929–1930). Delhi, 1933, pp 86–89. Missouri Southern State University. Archived from HISTORY/PRIMARYDOCS/ EPIGRAPHY/ HathigumphaInscription.htm the original on 2006-10-19. Retrieved 2006-11-15. {{cite web}}: Check |url= value (help); Unknown parameter |deadurl= ignored (help)
  7. ಕಾಮಿಲ್ ವೈಥ್ ಜ್ವೆಲೆಬಿಲ್, ಕಂಪ್ಯಾನಿಯನ್ ಸ್ಟಡೀಸ್ ಟು ದಿ ಹಿಸ್ಟರಿ ಆಫ್ ತಮಿಳ್ ಲಿಟರೇಚರ್ , ಪುಟ 12
  8. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ , OUP (1955) p 105
  9. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ , OUP (1955) pp 118, 119
  10. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ , OUP (1955) p 124
  11. ' ನೀರೊವರೆಗೆ(54–68CE) ರೋಮನ್ ಚಕ್ರವರ್ತಿಗಳು ಟಂಕಿಸಿದ ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿನಾಣ್ಯಗಳು ತಮಿಳುನಾಡಿನಾದ್ಯಂತ ಪತ್ತೆಯಾಗಿರುವುದು ವ್ಯಾಪಾರದ ಪ್ರಮಾಣ ಮತ್ತು ತಮಿಳು ದೇಶದಲ್ಲಿ ರೋಮನ್ ನೆಲಸಿಗರ ಉಪಸ್ಥಿತಿಗೆ ಸಾಕ್ಷಿಯಾಗಿದೆ'. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ , OUP (1955) pp 125–127
  12. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ , OUP (1955) p 128
  13. "Historical Atlas of South India-Timeline". French Institute of Pondicherry. Institut Françoise de Pondichéry. Archived from the original on 2006-09-28. Retrieved 2006-11-15.
  14. ಪಾಪ್ಪು et al., ಆಂಟಿಕ್ವಿಟಿ ಸಂಪುಟ ೭೭ ಸಂಖ್ಯೆ ೨೯೭, ಸೆಪ್ಟೆಂಬರ್ ೨೦೦೩
  15. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ , OUP, ಮರುಮುದ್ರಣ 2000, ಪುಟ 44.
  16. ಮದ್ರಾಸ್ ಇಂಡಸ್ಟ್ರಿ ಯ ಸಾಧನಗಳು ಕಾವೇರಿ ಮತ್ತು ವೈಗೈ ನದಿತಳದಲ್ಲಿ ಪತ್ತೆಯಾಗಿವೆ —K.A.N. ಶಾಸ್ತ್ರಿ, ಶ್ರೀನಿವಾಸಚಾರಿ, ಅಡ್ವಾನ್ಸ್ಡ್ ಹಿಸ್ಟರಿ ಆಫ್ ಇಂಡಿಯ ,ಪುಟ. 14.
  17. [8] K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ, ಪು 45
  18. [180]K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ, ಪು.46
  19. "Significance of Mayiladuthurai find". The Hindu May 1, 2006. The Hindu Group. Archived from the original on 2009-01-06. Retrieved 2006-11-15.
  20. ಇಂತಹದೊಂದು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಪತ್ತೆಯಾಗಿದೆ—com/2006/10/06/stories/2006100617521000.htm "Steps to preserve megalithic burial site". The Hindu, Oct 6, 2006. The Hindu Group. Retrieved 2006-11-15. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  21. [49] K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ, ಪುಟಗಳು 49–51
  22. ಸುಬ್ರಮಣಿಯನ್ T.S. (ಫೆ.17, 2005) ದಿ ಹಿಂದು, ಮರು ಸಂಪಾದಿಸಲಾಗಿದೆ 7/31/2007 ರುಡಿಮೆಂಟರಿ ತಮಿಳ್-ಬ್ರಾಹ್ಮಿ ಸ್ಕ್ರಿಪ್ಟ್' ಅನ್‌ಅರ್ಥಡ್ ಎಟ್ ಆದಿಚನಲ್ಲುರ್ Archived 2005-02-17 ವೇಬ್ಯಾಕ್ ಮೆಷಿನ್ ನಲ್ಲಿ.
  23. ಸುಬ್ರಮಣಿಯನ್ T.S. (May 26, 2004 )ದಿ ಹಿಂದು, ಮರುಸಂಪಾದಿಸಲಾಗಿದೆ 7/31/2007 stories/2004052602871200.htm ಸ್ಕೆಲೆಟನ್ಸ್ ,ಸ್ಕ್ರಿಪ್ಟ್ ಫೌಂಡ್ ಅಟ್ ಏನ್ಸೀಂಟ್ ಬರಿಯಲ್ ಸೈಟ್ ಇನ್ ತಮಿಳ್‌ನಾಡು [ಶಾಶ್ವತವಾಗಿ ಮಡಿದ ಕೊಂಡಿ]
  24. 'ಆದಿ ಚನಲ್ಲೂರಿನಲ್ಲಿ ತಮಿಳು ಭಾರತದ ಅತಿ ಆಸಕ್ತಿಕರ ಇತಿಹಾಸಪೂರ್ವ ಅವಶೇಷಗಳು ಪತ್ತೆಯಾದವು. ಅಲ್ಲಿ ಚಿತಾಭಸ್ಮ ಕರಂಡಕಗಳ ಸರಣಿ ಪತ್ತೆಯಾಯಿತು. ಇವು ಬೃಹತ್‌ ಶಿಲಾಯುಗದ ಸಂಕೀರ್ಣಕ್ಕೆ ಸಂಬಂಧಿಸಿದ್ದಿರಬಹುದು.- ಜ್ವೆಲೆಬಿಲ್, K.A., ಕಂಪ್ಯಾನಿಯನ್ ಸ್ಟಡೀಸ್ ಟು ದಿ ಹಿಸ್ಟರಿ ಆಫ್ ತಮಿಳ್ ಲಿಟರೇಚರ್- pp 21–22, ಬ್ರಿಲ್ ಅಕ್ಯಾಡಮಿಕ್ ಪಬ್ಲಿಷರ್ಸ್.
  25. 'ಕಳಭ್ರಪನ್ನು 'ದುಷ್ಟ ರಾಜರು'ಎಂದು ಖಂಡಿಸಲಾಗಿದೆ(ಕಾಲಿಯರಾರಾರ್ ) —K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ , p 130
  26. ಹರ್ಮನ್ ಕುಲ್ಕೆ, ಡೈಟ್‌ಮಾರ್ ರೋದರ್‌ಮಂಡ್, ಎ ಹಿಸ್ಟರಿ ಆಫ್ ಇಂಡಿಯ , ರೌಟ್‌ಲೆಡ್ಜ್ (UK), p 105
  27. K.A.N.ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , p 130
  28. ಪೂರ್ವದ ಚೋಳರು ಮತ್ತು ಆಂಧ್ರ ದೇಶದ ರೆನಾಂಡು ಚೋಳರ ನಡುವೆ ನೇರ ಸಂಪರ್ಕವಿತ್ತು ಎಂದು K.A. ನೀಲಕಂಠ ಶಾಸ್ತ್ರಿ ತರ್ಕಿಸಿದ್ದಾರೆ. ಉತ್ತರಾಭಿಮುಖವಾಗಿ ವಲಸೆಯು ಬಹುಶಃ ಪಲ್ಲವ ಪ್ರಭುತ್ವದ ಸಿಂಹವಿಷ್ಣು ಕಾಲದಲ್ಲಿ ಆಗಿರಬಹುದು. ಇವರು ಕರಿಕಾಲ ಚೋಳನ ವಂಶಸ್ತರು ಎಂಬ ವಾದವನ್ನು ಶಾಸ್ತ್ರಿ ನೇರವಾಗಿ ಅಲ್ಲಗಳೆಯುತ್ತಾರೆ. - K.A. ನೀಲಕಂಠ ಶಾಸ್ತ್ರಿ, ದಿ CōĻas , p 107
  29. ancientscripts.com/sa_ws.html "South Asian Writing Systems". Lawrence K Lo. Retrieved 2006-11-15. {{cite web}}: Check |url= value (help)
  30. ತಿರುಕ್ಕುರಾಳ್ ಲೇಖಕರ ಗುರುತು ಯಾವುದೇ ಖಚಿತತೆಯಿಂದ ತಿಳಿದು ಬಂದಿಲ್ಲ. ೧೩೩೦ರ ಕಾಲದ ಈ ದ್ವಿಪದಿಗಳ ರಚನೆಯು ತಿರುವಳ್ಳುವಾರ್‌ ಅವರಿಗೆ ಸೇರಿದೆ. ಅವರು ಬಹುಶಃ ಜೈನರಾಗಿದ್ದು, ಸಂಸ್ಕೃತದಲ್ಲಿ ಉತ್ತರದ ನೀತಿಬೋಧಕ ರಚನೆಗಳ ಜ್ಞಾನವನ್ನು ಹೊಂದಿರಬಹುದು.
  31. ಪಾಂಡ್ಯ ಕದುಂಗನ್ ಮತ್ತು ಪಲ್ಲವ ಸಿಂಹವಿಷ್ಣು ಕಳಭ್ರರನ್ನು ಪದಚ್ಯುತಗೊಳಿಸಿದರು. ಅಚ್ಯುತಕಳಭ ಕೊನೆಯ ಕಳಭ್ರ ರಾಜನಾಗಿರ ಬಹುದು—K.A.N. ಶಾಸ್ತ್ರಿ, ದಿ CōĻas , 1935 p 102
  32. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ pp 382
  33. K.A.N.ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , pp 333–335
  34. K.A.N. ಶಾಸ್ತ್ರಿ, ದ CoLas , pp 102
  35. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , p 387
  36. 1160 ರಲ್ಲಿರುವ ಒಂದು ಶಾಸನದಲ್ಲಿ ಶೈವ ಮಂದಿರಗಳ ರಕ್ಷಕರು ವೈಷ್ಣವರ ಜತೆ ಸಾಮಾಜಿಕ ಸಂಬಂಧ ಹೊಂದಿದ್ದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುತ್ತದೆ. —K.A.N. ಶಾಸ್ತ್ರಿ, The CōĻas , 1935 pp 645
  37. ಪ್ರಭುತ್ವದ ಉದ್ದಕ್ಕೂ ಗ್ರಾಮಗಳಿಂದ ಬಂದ ಆದಾಯದ ಸ್ವಲ್ಪ ಭಾಗವನ್ನು ದೇವಸ್ಥಾನಗಳಿಗೆ ನೀಡಲಾಗಿದ್ದು, ಸಂಗ್ರಹವಾದ ಧನದ ಸ್ವಲ್ಪ ಭಾಗವನ್ನು ನೆಲಸಿಗರಿಗೆ ಸಾಲವಾಗಿ ಮರುಹೂಡಿಕೆ ಮಾಡಲಾಯಿತು. ದೇವಸ್ಥಾನವು ಸಂಪತ್ತಿನ ಮರುಹಂಚಿಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಿತು ಮತ್ತು ಪ್ರಭುತ್ವದ ಭದ್ರತೆಗೆ ಕೊಡುಗೆ ನೀಡಿತು—ಜಾನ್ ಕೀಸ್, ಇಂಡಿಯ ಎ ಹಿಸ್ಟರಿ,pp 217–218
  38. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , pp342–344
  39. UCLA ಮತ್ತು ಡೆಲಾವೇರ್ ವಿಶ್ವವಿದ್ಯಾನಿಲಯದ ಪುರಾತತ್ವಜ್ಞ ರು ರೋಮನ್ ಚಕ್ರಾಧಿಪತ್ಯದ ಸಂದರ್ಭದಲ್ಲಿ ಭಾರತ ಮತ್ತು ಈಜಿಪ್ಟ್ ನಡುವೆ ಕಡಲ ವ್ಯಾಪಾರದಿಂದ ಅತೀ ವ್ಯಾಪಕ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ಕಡಲು ಮತ್ತು ನೆಲದ ಮೂಲಕ ಸಂಬಾರಪದಾರ್ಥಗಳು ಮತ್ತು ಇತರೆ ವಿಲಕ್ಷಣ ಸರಕುಗಳು ಯುರೋಪ್‌ಗೆ ಸಾಗಣೆಯಾಗಿರುವ ಬಗ್ಗೆ ಸಾಕ್ಷ್ಯ ಒದಗಿಸುತ್ತದೆ.' dickran.net/history/india_egypt_trade_route.html "Archaeologists Uncover Ancient Maritime Spice Route Between India, Egypt". Veluppillai, Prof. A.,. dickran.net. Retrieved 2006-11-15. {{cite web}}: Check |url= value (help)CS1 maint: extra punctuation (link)
  40. ಸಂಗಮ್ ಯುಗದ ಚೇರರು ಮತ್ತು ರೋಮನ್ ಚಕ್ರಾಧಿಪತ್ಯದ ನಡುವೆ ಕಡಲ ಸಂಪರ್ಕ ಕುರಿತು ಪುರಾತತ್ವ ಸಾಕ್ಷ್ಯವು ತಿರುಚಿ ಬಳಿಯ ಕರೂರ್‌ನಲ್ಲಿ ಪತ್ತೆಯಾಗಿದೆ.—R. ನಾಗಸ್ವಾಮಿ, ರೋಮನ್ ಕರೂರ್
  41. "ಮಲಯಾಳಂ"ಮಣಿಪ್ರಾವಲಂ ಅಥವಾ ಮಣಿ+ಪಾವಲಂ ಮಣಿ=ಸಂಸ್ಕೃತ ಪಾವಲಮ್ ತಮಿಳು, ಮಲೆಯಾಳಂ ಎಂದು ಕರೆಯುವ ಮಣಿಪ್ರಾವಲಂ 830 AD ದಿನಾಂಕದ ವಜಪ್ಪಲ್ಲಿ ಶಾಸನದ ಬರಹದಲ್ಲಿ ಮೊದಲಿಗೆ ಪತ್ತೆಯಾಗಿದೆ."Writing Systems and Languages of the world". Omniglot. Omniglot.com. Retrieved 2006-11-15."Writing Systems and Languages of the world". Omniglot. Omniglot.com. Retrieved 2006-11-15.
  42. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , pp91–92
  43. ದುರ್ಗಾ ಪ್ರಸಾದ್, ಹಿಸ್ಟರಿ ಆಫ್ ಆಂಧ್ರಾಸ್ ಅಪ್ ಟು 1565 A. D ., pp 68
  44. ಕಾಮಿಲ್ V. ಜ್ವೆಲೆಬಿಲ್ (1987). "ದಿ ಸೌಂಡ್ ಆಫ್ ದಿ ಒನ್ ಹ್ಯಾಂಡ್", ಜರ್ನಲ್ ಆಫ್ ದಿ ಅಮೆರಿಕನ್ ಓರಿಯಂಟಲ್ ಸೊಸೈಟಿ , ಸಂಪುಟ 107, No. 1, p. 125-126.
  45. ಗ್ರೇಂ ಲ್ಯಾಲ್ ಸಿಯಾನ್ - ದಿ ಬುದ್ಧಿಸಂ ಆಫ್ ಕೊರಿಯ Archived 2006-05-03 ವೇಬ್ಯಾಕ್ ಮೆಷಿನ್ ನಲ್ಲಿ. .
  46. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ pp 140
  47. http://www.tamilnation.org/heritage/pandya/index.htm
  48. com /eb/article-9058245 "Pandya Dynasty". Encyclopaedia Britannica. Encyclopædia Britannica, Inc. Retrieved 2006-11-15. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  49. ಮೆಗಾಸ್ತಾನೀಸ್ ವಿವರದಲ್ಲಿ (350 BCE – 290 BCE),ಪಾಂಡ್ಯ ರಾಜ್ಯವನ್ನು ಹೆರಾಕ್ಲೇಸ್ ಪುತ್ರಿ ಪಾಂಡಯ್ಯ ಆಳುತ್ತಿದ್ದಳು- K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , ಪುಟ 23
  50. "'Roman Maps and the Concept of Indian Gems". The Bead Museum, Inc. Archived from the original on 2006-06-15. Retrieved 2006-05-15.
  51. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , pp 140
  52. K.A.N.ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , pp 145
  53. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ ,pp 144–145
  54. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , p 159
  55. ಪಟ್ಟಿನಪ್ಪಾಲೈ ,ಪೋರುನಾರಾಟಾ‌ರುಪ್ಪಡೈ ಮತ್ತು ಅಕನಾನುರು ಮತ್ತು ಪುರಾನಾನುರು ನಲ್ಲಿ ಅನೇಕ ಪ್ರತ್ಯೇಕ ಕವಿತೆಗಳು ಕರಿಕಾಳ ರಾಜನ ಕಾಲಕ್ಕೆ ಸೇರಿದ್ದೆಂಬ ಮಾಹಿತಿಗೆ ಮುಖ್ಯ ಮೂಲವಾಗಿದೆ. ಇದನ್ನು ನೋಡಿ K.A.N. ಶಾಸ್ತ್ರಿ, ದಿ ಕೋಲಾಸ್ , 1935
  56. ತಮಿಳು ದೇಶದ ಎಲ್ಲ ಮೂರು ರಾಜವಂಶಗಳ ಉತ್ತರ ದಂಡಯಾತ್ರೆಗಳು ಮತ್ತು ವಿಜಯಗಳಿಂದ ಕೂಡಿದ ಸಿಲಪ್ಪದಿಕಾರಂ (c. 6ನೇ ಶತಮಾನದ C.E.)ಕರಿಕಾಲ ರಾಜನ ಉತ್ತರದ ದಂಡಯಾತ್ರೆಗಳ ಬಗ್ಗೆ ವೈಭವಯುತ ವಿವರಣೆ ನೀಡುತ್ತದೆ. ಈ ದಂಡಯಾತ್ರೆಗಳಲ್ಲಿ ಉತ್ತರದ ಹಿಮಾಲಯದಷ್ಟು ದೂರದವರೆಗೆ ತೆರಳಿ ಅವನಿಗೆ ವಜ್ರ,ಮಗಧ ಮತ್ತು ಅವಂತಿ ದೇಶಗಳ ಜತೆ ಮೈತ್ರಿ ಮತ್ತು ಸ್ವಾಧೀನ ಗಳಿಸಿಕೊಟ್ಟಿತು. ಇಂತಹ ದಂಡಯಾತ್ರೆ ಕುರಿತು ಸಂಗಂ ಸಾಹಿತ್ಯ ಅಥವಾ ಉತ್ತರ ಭಾರತದ ಮೂಲದಿಂದ ಯಾವುದೇ ಸಮಕಾಲೀನ ಸಾಕ್ಷ್ಯವು ಪತ್ತೆಯಾಗಿಲ್ಲ.
  57. "63 Nayanmars". Tamilnation.org. Retrieved 2006-11-15.[ಮಡಿದ ಕೊಂಡಿ]
  58. K.A.N. ಶಾಸ್ತ್ರಿ, The CoLas , 1935. pp 211–215
  59. ಕದರಮ್ ದಂಡಯಾತ್ರೆಯನ್ನು ಮೊದಲ ಬಾರಿಗೆ ನಮೂದಿಸಲಾಗಿದ್ದು, ರಾಜೇಂದ್ರ’ರ ೧೪ನೆಯ ವರ್ಷದ ಕಾಲದ ಶಿಲಾಶಾಸನದಲ್ಲಿ. ಶ್ರೀವಿಜಯ ರಾಜನ ಹೆಸರು ಸಂಗ್ರಾಮ ವಿಜಯತುಂಗವರ್ಮನ್ —K.A.N. ಶಾಸ್ತ್ರಿ, ದಿ CoLas , 1935 pp 211–220
  60. ಚಿದಂಬರಂ ದೇವಸ್ಥಾನದಲ್ಲಿ ೧೧೧೪ನೇ ದಿನಾಂಕದ ಶಾಸನವಿದೆ. ಇದರಲ್ಲಿ ಕಾಂಬೋಜ ರಾಜ (ಕಾಂಪೂಚಿ)ಯ ರಾಜೇಂದ್ರ ಚೋಳನಿಗೆ ವಿಶಿಷ್ಠ ಕಲ್ಲೊಂದನ್ನು ಕೊಡುಗೆಯಾಗಿ ನೀಡಿರುವುದನ್ನು ಪ್ರಸ್ತಾಪಿಸಲಾಗಿದೆ. ಇದನ್ನು ಚೋಳ ರಾಜ ಚಿದಂಬರಂ ದೇವ ಸ್ಥಾನದ ಗೋಡೆಯೊಳಗೆ ಸೇರಿಸಲು ಕಾರಣನಾದ. —K.A.N. ಶಾಸ್ತ್ರಿ, 'The CoLas , 1935 p 325
  61. 'ಒಂದನೇ ಪರಂಟಕಾನ ೧೨ನೇ ವರ್ಷದಲ್ಲಿ [ಉತ್ತರಮೇರುರ್] ಸ್ಥಳೀಯ ಸರ್ಕಾರಿ ಅಧಿಕಾರಿಗಳ ಚುನಾವಣೆಯನ್ನು ಚೀಟಿ ಎತ್ತುವ ಮೂಲಕ ನಡೆಸಲಾಗುವದು ಎಂಬ ಸಭಾ ನಿರ್ಣಯವೊಂದನ್ನು ಅಂಗೀಕರಿಸಿತು[...] .—K.A.N. ಶಾಸ್ತ್ರಿ, ದಿ ಕೋಲಾಸ್ , p 496.
  62. K.A.N. ಶಾಸ್ತ್ರಿ, ಶ್ರೀನಿವಾಸಚಾರಿ, ಅಡ್ವಾನ್ಸಡ್ ಹಿಸ್ಟರಿ ಆಫ್ ಇಂಡಿಯ , pp 294
  63. K.A.N. ಶಾಸ್ತ್ರಿ,ಶ್ರೀನಿವಾಸಚಾರಿ, ಅಡ್ವಾನ್ಸಡ್ ಹಿಸ್ಟರಿ ಆಫ್ ಇಂಡಿಯ , pp 296–297
  64. K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ pp 197
  65. "Chera Coins - Tamil Coins, a Study". R. Nagasamy. Tamil Arts Academy, Madras. Archived from the original on 2006-07-18. Retrieved 2006-11-15.
  66. K.A.N.ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯಾ , pp214–217
  67. ಕಂಪನರ ಪತ್ನಿ ಗಂಗಾ ದೇವಿ ಈ ದಂಡಯಾತ್ರೆಯ ವಿವರವನ್ನು ಸಂಸ್ಕೃತ ಕವಿತೆ ಮಧುರ ವಿಜಯಂ (ಮಧುರೈ ಮೇಲಿನ ಗೆಲುವು)ನಲ್ಲಿ ಬರೆದಿದ್ದಾರೆ.K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ pp 241
  68. ರಾಮ ರಾಯ ಆಲಿ ಅದಿಲ್ ಶಾಹ್ವಿರುದ್ಧ ತಾಳಿಕೋಟೆಯಲ್ಲಿ ೧೫೬೪ ಸೆಪ್ಟೆಂಬರ್ ೧೫ರಂದು ಹೋರಾಡಿದ —K.A.N. ಶಾಸ್ತ್ರಿ, ಎ ಹಿಸ್ಟರಿ ಆಫ್ ಸೌತ್ ಇಂಡಿಯ, p 266
  69. K.A.N. ಶಾಸ್ತ್ರಿ,ಶ್ರೀನಿವಾಸಚಾರಿ, ಅಡ್ವಾನ್ಸಡ್ ಹಿಸ್ಟರಿ ಆಫ್ ಇಂಡಿಯ , pp 428
  70. K.A.N. ಶಾಸ್ತ್ರಿ, ಶ್ರೀನಿವಾಸಚಾರಿ, ಅಡ್ವಾನ್ಸಡ್ ಹಿಸ್ಟರಿ ಆಫ್ ಇಂಡಿಯ , p 427
  71. K.A.N. ಶಾಸ್ತ್ರಿ, ಶ್ರೀನಿವಾಸಚಾರಿ, ಅಡ್ವಾನ್ಸಡ್ ಹಿಸ್ಟರಿ ಆಫ್ ಇಂಡಿಯ , p 553
  72. ಜಾನ್ ಕೀ, ಇಂಡಿಯ, ಎ ಹಿಸ್ಟರಿ , p 370
  73. K.A.N. ಶಾಸ್ತ್ರಿ, ಶ್ರೀನಿವಾಸಚಾರಿ, ಅಡ್ವಾನ್ಸಡ್ ಹಿಸ್ಟರಿ ಆಫ್ ಇಂಡಿಯ, p 583
  74. sarasvati mahallibrary.tn.nic.in/Thanjavur/Maratha_Rulers/maratha_rulers.html "Maratha Kings of Thanjavur". "Saraswathi Mahal Library. Retrieved 2006-11-18. {{cite web}}: Check |url= value (help)
  75. ಜಾನ್ ಕೀ, ಇಂಡಿಯ, ಎ ಹಿಸ್ಟರಿ , pp 372–374
  76. ಜಾನ್ ಕೀ, ಇಂಡಿಯ, ಎ ಹಿಸ್ಟರಿ pp 393–394
  77. ಜಾನ್ ಕೀ, ಇಂಡಿಯ, ಎ ಹಿಸ್ಟರಿ , p 379
  78. ಹರ್ಮಾನ್ ಕುಲ್ಕೆ, ಡಯಿಟ್‌ಮಾರ್ ರೋದರ್‌ಮಂಡ್, ಎ ಹಿಸ್ಟರಿ ಆಫ್ ಇಂಡಿಯ pp 245
  79. ಜಾನ್ ಕೀ, ಇಂಡಿಯ, ಎ ಹಿಸ್ಟರಿ pp 380
  80. ನಿಕೋಲಾಸ್ ಡಿರ್ಕ್, ದಿ ಹಾಲೊ ಕ್ರೌನ್ , pp 19–24
  81. com/thehindu/ mp/2006/ 06/19/stories/2006061900220500.htm "The first rebellion". The Hindu Jun 19, 2006. The Hindu Group. Retrieved 2006-11-15. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  82. ರೀಡ್, ಆಂಥೋನಿ, ದಿ ಪ್ರೌಡೆಸ್ಚ್ ಡೆ—ಇಂಡಿಯ`ಸ್ ಲಾಂಗ್ ರೈಡ್ ಟು ಇಂಡಿಪೆಂಡೆನ್ಸ್, pp 34–37
  83. ೮೩.೦ ೮೩.೧ "The State Legislature—Origin and Evolution". Government of Tamil Nadu. Archived from the original on 2010-04-13. Retrieved 2006-10-16.
  84. ೮೪.೦ ೮೪.೧ ರೊಮೇಶ್ ಚಂದರ್ ದತ್, ಓಪನ್ ಲೆಟರ್ಸ್ ಟು ಲಾರ್ಡ್ ಕರ್ಜನ್ ಆನ್ ಫೆಮೈನ್ಸ್ ಎಂಡ್ ಲ್ಯಾಂಡ್ ಅಸೆಸ್‌ಮೆಂಟ್ಸ್ ಇನ್ ಇಂಡಿಯ, p10
  85. com/ course/10701057/session3.html "Victorian Values: Death and Dying in Victorian India". David Arnold. Fathom Knowledge Network. Retrieved 2006-11-13. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  86. ೮೬.೦ ೮೬.೧ "Political situation in Pondicherry (1910–1915)". Extract from diary of A.B. Purani (PT MS5 (1924), 86. Sri Aurobindo Ashram Trust. Archived from [http: //www.sriaurobindoashram.org/research/show.php?set=doclife&id=25 the original] on 2007-03-11. Retrieved 2006-11-15. {{cite web}}: Check |url= value (help)
  87. "ತಮಿಳರು INA ಬಲದಲ್ಲಿ ದೊಡ್ಡ ಪಾಲನ್ನು ಹೊಂದಿದ್ದಾರೆ ಎಂಬ ಬಗ್ಗೆ ಗಮನಸೆಳೆದು, ಫ್ರೊ.ಪಿಫ್ಯಾಫ್ ಹೇಳುತ್ತಾರೆ, ತಮಿಳುನಾಡಿನ INA ಸದಸ್ಯರ ಜತೆ ಸಂಪರ್ಕಿಸುವುದು ಸದಾ ಹೃದಯಸ್ಪರ್ಶಿ ಅನುಭವ." "Tamils' contribution to INA campaigns recalled". The Hindu Dec 22, 2005. The Hindu Group. Archived from the original on 2006-02-09. Retrieved 2006-11-15.
  88. ತಮಿಳುನಾಡು ಇಂಡಿಯನ್ ನ್ಯಾಷನಲ್ ಆರ್ಮಿಯ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ವಿ.ವೈದ್ಯಲಿಂಗಂ ಪ್ರಕಾರ, "INA ಸೈನಿಕರಲ್ಲಿ ಶೇಕಡ ೭೫ ಕ್ಕೂ ಹೆಚ್ಚು ತಮಿಳರಾಗಿದ್ದಾರೆ" "The unsung heroes". The Hindu Aug 02, 2004. The Hindu Group. Archived from the original on 2004-10-30. Retrieved 2006-11-15.
  89. ೮೯.೦ ೮೯.೧ ಸುಬ್ರಮಣ್ಯ ಸ್ವಾಮಿ, ದ್ರಾವಿಡ ಚಳವಳಿ ಅವನತಿ ಹೊಂದುತ್ತಿದೆ ಯೇ?, ಫ್ರಂಟ್‌ಲೈನ್, Vol.20, Iss. 12, ಜೂನ್ 2003
  90. com /dec2005/languagepolicy1936-1.html "Sowing The Seeds Of A Policy For Free India and the Anti-Hindi Agitation in the South 1910–1915". M. S. Thirumalai, Ph.D. languageinindia.com. Retrieved 2006-11-15. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  91. com/thehindu/mag/2003/03/ 30/ stories/ 2003033000040300.htm "The battle for Andhra". The Hindu, Mar 30, 2003. The Hindu Group. Retrieved 2006-11-17. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  92. ರಾಜೇಶ್ ವೇಣುಗೋಪಾಲ್, ದಿ ಗ್ಲೋಬಲ್ ಡೈಮೆನ್ಶನ್ಸ್ ಆಫ್ ಕಾನ್ಫ್ಲಿಕ್ಟ್ ಇನ್ ಶ್ರೀಲಂಕಾ p 19
  93. ಕ್ರಿಸ್ ಮೆಕ್‌ಡೋವೆಲ್, ಎ ತಮಿಲ್ ಆಸಿಲಂ ಡಯಸ್ಪೋರಾ, p112
  94. co.uk/2/hi/south_asia/5122032.stm?ls "Tamil Tiger 'regret' over Gandhi". BBC News. 2006-06-27. Retrieved 2006-06-27. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  95. "Government of India Ministry of Home Affairs Situation Report". Ministry of Home Affairs, Government of India. Archived from the original on 2006-12-23. Retrieved 2006-11-15.
  96. "Ranking of states". India Today Group. India Today Group. Archived from the original on 2006-10-28. Retrieved 2006-11-15. {{cite web}}: Unknown parameter |deadurl= ignored (help)
  97. com/old/ fe_full_story.php?content_id=128641 "With the highest rate of reservation already in place, TN stays calm". The Financial Express, May 28, 2006. The Financial Express, Mumbai. Retrieved 2006-11-15. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
  98. ಜಾನ್ ಹ್ಯಾರಿಸ್ ಮತ್ತು ಆಂಡ್ರಿವ್ ವ್ಯಾಟ್ THE CHANGING POLITICS OF TAMIL NADU IN THE 1990s,ಕಾನ್ಫರೆನ್ಸ್ ಆನ್ ಸ್ಟೇಟ್ ಪಾಲಿಟಿಕ್ಸ್ ಇನ್ ಇಂಡಿಯ ಇನ್ ದಿ 1990s: ಪೊಲಿಟಿಕಲ್ ಮೊಬಿಲೈಸೇಷನ್ ಎಂಡ್ ಪೊಲಿಟಿಕಲ್ ಕಾಂಪಿಟೇಷನ್, ಡಿಸೆಂಬರ್ 2004. p1
  99. ಜಸ್ಟಿಸ್ ಪಕ್ಷಕ್ಕೆ ೧೯೪೪ ಸೆಪ್ಟೆಂಬರ್‌ನಲ್ಲಿ ದ್ರಾವಿಡರ್ ಕಳಗಂ ಎಂದು ಮರು ಹೆಸರಿಸಲಾಯಿತು (ದ್ರಾವಿಡಿಯನ್ ಅಸೋಸಿಯೇಷನ್ —ನಂಬಿ ಅರೂರನ್, K., ದಿ ಡಿಮ್ಯಾಂಡ್ ಫಾರ್ ದ್ರಾವಿಡ ನಾಡು.
  100. ಉದ್ದೇಶಿತ ದ್ರಾವಿಡ ನಾಡುವಿನ ಭೌಗೋಳಿಕ ಪ್ರದೇಶವು ಸರಿಸುಮಾರು ಆಗಿನ ಮದ್ರಾಸ್ ಪ್ರೆಸಿಡೆನ್ಸಿಗೆ ಸಂಬಂಧಿಸಿದ್ದು, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷಿಕ ಜನರನ್ನು ಒಳಗೊಂಡಿತ್ತು. ಎಸ್.ವಿಶ್ವನಾಥನ್, ಎ ಹಿಸ್ಟರಿ ಆಫ್ ಅಜಿಟೇಷನಲ್ ಪಾಲಿಟಿಕ್ಸ್.
  101. ಹಾರ್‌ಗ್ರೇವ್, R.L.: "ದಿ DMK ಎಂಡ್ ದಿ ಪಾಲಿಟಿಕ್ಸ್ ಆಫ್ ತಮಿಳ್ ನ್ಯಾಷನಲಿಸಂ ", ಪೆಸಿಫಿಕ್ ಅಫೇರ್ಸ್ , 37(4):396–411 at 396–397.
  102. ಸಿಂಥಿಯ ಸ್ಟೀಫನ್, ದಿ ಹಿಸ್ಟರಿ ಆಫ್ ರಿಸರ್ವೇಶನ್ಸ್ ಇನ್ ಇಂಡಿಯ ಫ್ರಂ ದಿ ೧೮೦೦S ಟು ದಿ ೧೯೫೦s
  103. ಎಸ್. ಥಿಯೋಡರ್ ಬಾಸ್ಕರನ್, ದಿ ರೂಟ್ಸ್ ಆಪ್ ಸೌತ್ ಇಂಡಿಯನ್ ಸಿನೇಮಾ, ಜರ್ನಲ್ ಆಫ್ ದಿ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್,
  104. L. R., Jegatheesan. "ஆளும் அரிதாரம் (Reigning filmdom)" (in Tamil). BBC. Retrieved 2006-11-08. {{cite news}}: Cite has empty unknown parameter: |coauthors= (help)CS1 maint: unrecognized language (link)
  105. ಜಾನ್ ಹ್ಯಾರಿಸ್ ಮತ್ತು ಆಂಡ್ರಿವ್ ವ್ಯಾಟ್ THE CHANGING POLITICS OF TAMIL NADU IN THE ೧೯೯೦s,ಕಾನ್ಫರೆನ್ಸ್ ಆನ್ ಸ್ಟೇಟ್ ಪಾಲಿಟಿಕ್ಸ್ ಇನ್ ಇಂಡಿಯ ಇನ್ ದಿ ೧೯೯೦s: ಪೊಲಿಟಿಕಲ್ ಮೊಬಿಲೈಸೇಷನ್ ಎಂಡ್ ಪೊಲಿಟಿಕಲ್ ಕಾಂಪಿಟೇಷನ್, ಡಿಸೆಂಬರ್ ೨೦೦೪. p2
  106. hindu. com/2004/05/06/stories/2004050604981200.htm "The arithmetic of alliance and anti-incumbency". The Hindu, May 06, 2004. The Hindu Group. Retrieved 2006-11-15. {{cite web}}: Check |url= value (help)
  107. ಜಾನ್ ಹ್ಯಾರಿಸ್ ಮತ್ತು ಆಂಡ್ರಿವ್ ವ್ಯಾಟ್ THE CHANGING POLITICS OF TAMIL NADU IN THE 1990s,ಕಾನ್ಫರೆನ್ಸ್ ಆನ್ ಸ್ಟೇಟ್ ಪಾಲಿಟಿಕ್ಸ್ ಇನ್ ಇಂಡಿಯ ಇನ್ ದಿ 1990s: ಪೊಲಿಟಿಕಲ್ ಮೊಬಿಲೈಸೇಷನ್ ಎಂಡ್ ಪೊಲಿಟಿಕಲ್ ಕಾಂಪಿಟೇಷನ್, ಡಿಸೆಂಬರ್ 2004. p4

ಉಲ್ಲೇಖಗಳು[ಬದಲಾಯಿಸಿ]