ಟಿ. ಆರ್. ಅನಂತರಾಮು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ. ಆರ್. ಅನಂತರಾಮು
ಜನನ೩, ಆಗಸ್ಟ್, ೧೯೪೯
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾಳಗುಂದ
ವೃತ್ತಿಭೂವಿಜ್ಞಾನಿ, ಅಂಕಣಕಾರ, ವಿಜ್ಞಾನ ಲೇಖಕ & ಸಂಪಾದಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪೌರತ್ವಭಾರತೀಯ
ವಿದ್ಯಾಭ್ಯಾಸಭೂವಿಜ್ಞಾನದಲ್ಲಿ ಎಂ.ಎಸ್ಸಿ
ವಿಷಯArts
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇತ್ಯಾದಿ

ಸಹಿಚಿತ್ರ:T.r anantharamu

ತಾಳಗುಂದ ರಾಮಣ್ಣ ಅನಂತರಾಮು (ಟಿ. ಆರ್. ಅನಂತರಾಮು) ಒಬ್ಬ ಭೂವಿಜ್ಞಾನಿ, ಸಂಶೋಧಕ, ಪರಿಶೋಧಕ, ಜನಪ್ರಿಯ ಅಂಕಣಕಾರ, ವಿಜ್ಞಾನ ಲೇಖಕ ಮತ್ತು ಸಂಪಾದಕ. ಇವರು ಅನೇಕ ಪತ್ರಿಕೆಗಳಲ್ಲಿ, ತಮ್ಮ ಅತ್ಯಂತ ವಿಚಾರಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ವಿವಿಧ ಮಾಧ್ಯಮಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸದಲ್ಲಿ ಹಲವು ದಶಕಗಳಿಂದ ತೊಡಗಿದ್ದಾರೆ. ಭೂವಿಜ್ಞಾನದಂತಹ ವಿಷಯದಲ್ಲಿಯ ಸಂಗತಿಗಳನ್ನು ಜನಸಾಮಾನ್ಯರಿಗೂ ಮನಮುಟ್ಟುವಂತೆ ತಲುಪಿಸಿ ಅವರಲ್ಲಿ ಆಸಕ್ತಿಯನ್ನುಂಟು ಮಾಡಿದ ಕನ್ನಡ-ವಿಜ್ಞಾನ ಲೇಖಕರಾಗಿದ್ದಾರೆ. ಅವರು ವಿಜ್ಞಾನ ಪ್ರಸಾರ, ಗ್ರಂಥ ರಚನೆ ಹಾಗೂ ಗ್ರಂಥ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 'ವಿಸ್ಮಯ ವಿಜ್ಞಾನ ಮಾಲಿಕೆ,' ಯಲ್ಲಿ ಕೃತಿಗಳ ಸಂಪಾದನೆ, ಸಾಕ್ಷ್ಯಚಿತ್ರಗಳಿಗೆ ಸಾಹಿತ್ಯ, 'ಕನ್ನಡ ವಿಶ್ವಕೋಶ', 'ಜ್ಞಾನ-ವಿಜ್ಞಾನಕೋಶ', 'ಕಿರಿಯರ ಕರ್ನಾಟಕ', 'ಕರ್ನಾಟಕ ಸಂಗಾತಿ', 'ಕರ್ನಾಟಕ ಕೋಶ' ಮುಂತಾದ, 'ಪರಾಮರ್ಶನ ಗ್ರಂಥ' ಗಳಿಗೆ ಅವರು ಬರೆದಿರುವ ಲೇಖನ ಮುಂತಾದವುಗಳು ಅನಂತರಾಮುರವರನ್ನು ಕನ್ನಡ ವಿಜ್ಞಾನ ಸಾಹಿತ್ಯದ ಒಬ್ಬ ವಿಶಿಷ್ಠ ವ್ಯಕ್ತಿಯನ್ನಾಗಿಸಿವೆ. ನವಕರ್ನಾಟಕ ಪ್ರಕಟನಾ ಸಂಸ್ಥೆಯ 'ಪದ ವಿವರಣಾ ಕೋಶ’ ಮತ್ತು ’ಜ್ಞಾನ -ವಿಜ್ಞಾನ ಕೋಶ’ಗಳಲ್ಲಿ ಸಹಾಯಕ ಸಂಪಾದಕರಾಗಿ ಮಾಡಿದ ಕೆಲಸ ಮಹತ್ವದ್ದೆಂದು ಗುರುತಿಸಲ್ಪಟ್ಟಿದೆ.

ಪ್ರಾಥಮಿಕ ಜೀವನ[ಬದಲಾಯಿಸಿ]

  • 'ಅನಂತರಾಮು' ಅವರು, ೦೩ ಆಗಸ್ಟ್ ೧೯೪೯ರಂದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ, ತಾಳಗುಂದವೆಂಬ ಊರಿನಲ್ಲಿ ಜನಿಸಿದರು.
  • ತಂದೆ ಶ್ರೀ ರಾಮಣ್ಣನವರು. ಸ್ವತಃ ಓದಿನಲ್ಲಿ ಅತ್ಯಂತ ಆಸಕ್ತರಾದ ತಾಯಿ ವೆಂಕಟಲಕ್ಷ್ಮಮ್ಮನವರು ಅನಂತರಾಮುರಿಗೆ ಬಾಲ್ಯದ ಆದರ್ಶವ್ಯಕ್ತಿಯಾಗಿದ್ದಾರೆ.
  • ಸರ್ಕಾರಿ ಮಾಧ್ಯಮಿಕ ಶಾಲೆ ಹಾಗೂ ಮುನಿಸಿಪಲ್ ಹೈಸ್ಕೂಲ್ (೧೯೬೩-೧೯೬೬), ಶಿರಾದಲ್ಲಿ ಶಾಲಾಶಿಕ್ಷಣ ಮುಗಿಸಿದರು.
  • ತುಮಕೂರು ಸರ್ಕಾರಿ ಕಾಲೇಜಿನಿಂದ (೧೯೬೬-೭೦) ಪದವಿ ಪಡೆದರು.
  • ೧೯೭೨ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಭೂವಿಜ್ಞಾನ) ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು.

ವೃತ್ತಿ-ಜೀವನ[ಬದಲಾಯಿಸಿ]

  • ೧೯೭೨ ರಿಂದ ೧೯೭೬ ರ ವರೆಗೆ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದ ಅಧ್ಯಾಪಕ.
  • ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ.
  • ೧೯೭೭ ರಿಂದ ೨೦೦೮ವರೆಗೆ ಬೆಂಗಳೂರಿನ ಭಾರತೀಯ ಭೂ-ವೈಜ್ಞಾನ ಸರ್ವೇಕ್ಷಣ ಸಂಸ್ಥೆಯಲ್ಲಿ ಭೂ-ವಿಜ್ಞಾನಿ.
  • ನಾಡಿನಾದ್ಯಂತ ಚಿನ್ನದ ನಿಕ್ಷೇಪಕ್ಕಾಗಿ ವ್ಯಾಪಕ ಶೋಧನೆ. ದುರ್ಗಮ ಕಾಡುಗಳ ಸಮೀಕ್ಷೆಗಳನ್ನು ನಡೆಸಿದರು.
  • ಡಿಸೆಂಬರ್ ೨೦೦೮ರಲ್ಲಿ ವೃತ್ತಿಯಿಂದ ನಿವೃತ್ತರಾದರು.


ಸಾಹಿತ್ಯಕ ಚಟುವಟಿಕೆಗಳು: ಜನಪ್ರಿಯ ವಿಜ್ಞಾನ ಕ್ಷೇತ್ರ[ಬದಲಾಯಿಸಿ]

  • ಕಳೆದ ೪೦ ವರ್ಷಗಳಿಂದ ವಿಜ್ಞಾನವನ್ನು ಜನಪ್ರಿಯಗೊಳಿಸಲು ನಾಡಿನ ವಿವಿಧ ಪತ್ರಿಕೆಗಳಲ್ಲಿ ೮೦೦ಕ್ಕೂ ಹೆಚ್ಚಿನ ಲೇಖನಗಳ ಪ್ರಕಟಣೆ.
  • ಬೆಂಗಳೂರು ಆಕಾಶವಾಣಿಯಲ್ಲಿ ೧೯೭೨ರಿಂದಲೂ ವಿಜ್ಞಾನದ ಮುನ್ನಡೆಯೂ ಸೇರಿದಂತೆ ಭಾಷಣ, ಸಂದರ್ಶನ.
  • ಬಹುತೇಕ ಕರ್ನಾಟಕದ ಎಲ್ಲ ಟಿ.ವಿ. ಚಾನೆಲ್‌ಗಳು ಇವರ ವೈಜ್ಞಾನಿಕ ಕಾರ್ಯಕ್ರಮಗಳನ್ನು ಪ್ರಸಾರಮಾಡಿವೆ.
    • ಉದಯ ಟಿ.ವಿ’ಯು ರೂಪಿಸಿದ ’ಪರಿಚಯ ಕಾರ್ಯಕ್ರಮ’ ದಲ್ಲಿ ಸಂದರ್ಶನ
    • 'ಈ ಟೀವಿ'ಯಲ್ಲಿ ಪ್ರಸಾರವಾದ ಶಿವರಾಮ ಕಾರಂತರ ವಿಜ್ಞಾನ ಸಾಹಿತ್ಯ ನಿರ್ಮಾಣ ಕುರಿತು ಸಂದರ್ಶನಗಳು.
    • ಚಂದನ ವಾಹಿನಿ’ಯಲ್ಲಿ ವಿಜ್ಞಾನ ಕಾರ್ಯಕ್ರಮಗಳು-೧೦
  • ಪ್ರಧಾನ ಸಂಪಾದಕ : ಸುಭಾಷ್ ಪಬ್ಲಿಕೇಷನ್ಸ್ `ವಿಸ್ಮಯ ವಿಜ್ಞಾನ ಮಾಲಿಕೆ` - ೨೭ ಕೃತಿಗಳ ಸಂಪಾದನೆ
  • ನವಕರ್ನಾಟಕ ಸಂಸ್ಥೆಯ ಪ್ರಕಟಣೆ `ಜ್ಞಾನ-ವಿಜ್ಞಾನ ಕೋಶ`ದ ಸಹಾಯಕ ಸಂಪಾದಕ
  • ನವಕರ್ನಾಟಕ ಸಂಸ್ಥೆಯ `ವಿಜ್ಞಾನ ತಂತ್ರಜ್ಞಾನ ಪದ ಸಂಪದದ ಪರಿಷ್ಕತ ಆವೃತ್ತಿಯ (೨೦೧೧) ಸಂಪಾದಕರಲ್ಲೊಬ್ಬರು.
  • `ನವಕರ್ನಾಟಕ ವಿಜ್ಞಾನ ತಂತ್ರಜ್ಞಾನ ನಿಘಂಟು’ ಸಂಪಾದಕರು
  • ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಕಟಿಸುತ್ತಿರುವ ` ವಿಜ್ಞಾನ ಸಂಗಾತಿ` ಮಾಸಪತ್ರಿಕೆಯ ಸಂಪಾದಕತ್ವ - ೨೦೦೨-೨೦೦೩
  • ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ `ವಿಜ್ಞಾನ ಲೋಕ ‘ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯ.
  • ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪ್ರಕಟಣೆ ` ಕಿರಿಯರ ಕರ್ನಾಟಕ` ಮತ್ತು `ಕರ್ನಾಟಕ ಕೋಶ`ಕ್ಕೆ ಲೇಖನಗಳು.
  • ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯ, ನವದೆಹಲಿ ಮತ್ತು ಸಿ.ಎಸ್.ಐ.ಆರ್. ಸಂಸ್ಥೆಗೆ ವಿಜ್ಞಾನ ಪುಸ್ತಕಗಳ ಅನುವಾದಕ
  • ಡಿ.ಎಸ್.ಇ.ಆರ್.ಟಿ. ಸಂಸ್ಥೆಗೆ ಶಿಲೆಗಳನ್ನು ಕುರಿತಂತೆ ಎರಡು ಸಾಕ್ಷ್ಯಚಿತ್ರ ಹಾಗೂ ಭೂವಿಜ್ಞಾನ ಕುರಿತಂತೆ ನಾಲ್ಕು ಚಿತ್ರಪಟ (ಚಾರ್ಟ್) ತಯಾರಿಕೆ.
  • ತುಮಕೂರು ವಿಜ್ಞಾನ ಕೇಂದ್ರಕ್ಕೆ ಪರಿಸರ ಕುರಿತಂತೆ ೨೨ ಚಿತ್ರಪಟಗಳ ಅನುವಾದ.
  • ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ `ಕನ್ನಡ ವಿಶ್ವಕೋಶ` ಕ್ಕೆ ಭೂವಿಜ್ಞಾನ ಕುರಿತಂತೆ ಲೇಖನಗಳು.
  • ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ಮುಖಪತ್ರಿಕೆ `ವಿಜ್ಞಾನ ಲೋಕ’ ದ ಸಂಪಾದಕ ವರ್ಗದ ಸದಸ್ಯ
  • ಕುವೆಂಪು ಭಾ಼ಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಜೆ.ಡಿ. ಬರ್ನಾಲ್‌ರವರ ` ಇತಿಹಾಸದಲ್ಲಿ ವಿಜ್ಞಾನ’ ಅನುವಾದ ಕೃತಿಗಳ (ನಾಲ್ಕು ಸಂಪುಟಗಳು) ಸಂಪಾದಕರು. (೨೦೧೨)
  • ಪ್ರಜಾವಾಣಿ ಪತ್ರಿಕೆಯಲ್ಲಿ `ವಿಸ್ಮಯ ಜಗತ್ತು’ ಕಿರು ಅಂಕಣಕ್ಕೆ ೨೦೧೨-೧೩ (೭೭೦ ಕಿರು ಮಾಹಿತಿ)
  • ಕಸ್ತೂರಿ ಮಾಸಪತ್ರಿಕೆಯಲ್ಲಿ ಅಂಕಣ ‘ಜ್ಞಾನ ವಿಜ್ಞಾನ’ ಮಾರ್ಚ್, ೨೦೧೪ ರಿಂದ ಇಂದಿಗೂ ಮುಂದುವರಿದಿದೆ.
  • ಕನ್ನಡ ಸಾಹಿತ್ಯ ಪರಿಷತ್ತು ಯೋಜಿಸಿರುವ `ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ’ಯ ಭಾಗವಾಗಿ `ವಿಜ್ಞಾನ-ತಂತ್ರಜ್ಞಾನ ಸಂಪುಟದ ಸಂಪಾದಕ, ೨೦೧೫
  • `ಡಿಜಿಟಲ್ ಕನ್ನಡ’ ಇ-ಪತ್ರಿಕೆಗೆ ವಿಜ್ಞಾನದ ಅಂಕಣ `ಸೈನ್ಸ್ ಸ್ಕೋಪ್’– ೨೦೧೬ರ ಫೆಬ್ರವರಿಯಿಂದ.
  • ಉದಯಭಾನು ಕಲಾಸಂಘ ಪ್ರಕಟಿಸಿರುವ `ಬೆಂಗಳೂರು ದರ್ಶನ’ಕ್ಕೆ ಮೂರು ಲೇಖನಗಳು ೨೦೧೬ (ಪರಿಷ್ಕೃತ ಆವೃತ್ತಿ).
  • ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿರುವ ೨೦೦೩ ’ಕರ್ನಾಟಕ ಸಂಗಾತಿ’, ಪರಾಮರ್ಶನ ಗ್ರಂಥಕ್ಕೆ ಕರ್ನಾಟಕ ಭೂ ವಿಜ್ಞಾನ’ ಕುರಿತಂತೆ ಆಕರ ಲೇಖನ.
  • ’ಹಂಪಿ ಕನ್ನಡ ವಿಶ್ವವಿದ್ಯಾಲಯ’ ಪ್ರಕಟಣೆ ’ಕಿರಿಯರ ಕರ್ನಾಟಕ’ ಮತ್ತು ’ಕರ್ನಾಟಕ ಕೋಶ’ ಕ್ಕೆ ಲೇಖನಗಳು.
  • ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ, ’ಬಾಲ ವಿಜ್ಞಾನ ಮಾಸಪತ್ರಿಕೆ’ ಯ ಸಂಪಾದಕ ಮಂಡಳಿಯ ಸದಸ್ಯ.
  • ಮೈಸೂರಿನಲ್ಲಿರುವ, ಭಾರತೀಯ ಭಾಷಾ ವಿಜ್ಞಾನ ಕೇಂದ್ರ '(CICL)' ಕುರಿತು ನಿರ್ಮಿಸುತ್ತಿರುವ ಕರ್ನಾಟಕ ಕುರಿತ ’ಭಾಷಾ ಮಂದಾಕಿನಿ’ ಸರಣಿಗೆ, ಕರ್ನಾಟಕ ಭೂ-ವೈಜ್ಞಾನಿಕ ಅದ್ಭುತಗಳನ್ನು ಕುರಿತಂತೆ ೨ ಕಂತುಗಳ ಸಾಕ್ಷ್ಯಚಿತ್ರಗಳಿಗೆ ಭೂ-ವೈಜ್ಞಾನಿಕ ಸಾಹಿತ್ಯ ರಚನೆ.
  • ’ಬೆಂಗಳೂರಿನ ಕನ್ನಡ ಗಣಕ ಪರಿಷತ್ತು’ ಅಭಿವೃದ್ಧಿಪಡಿಸಿದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವ ಕೋಶದ ಸೀಡಿ ('CD') ಆವೃತ್ತಿಯ ವಿಜ್ಞಾನ ವಿಭಾಗಕ್ಕೆ ಪ್ರಧಾನ ಸಂಪಾದಕ.
  • ’ಅಂತಾರಾಷ್ಟ್ರೀಯ ಭೂಗ್ರಹ ವರ್ಷಾಚರಣೆ’ ಅಂಗವಾಗಿ ೮-೯ ರಲ್ಲಿ ರಾಜ್ಯದಾದ್ಯಂತ ’ಉಪನ್ಯಾಸ’.
  • ’ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶನ ಮತ್ತು ಉಪನ್ಯಾಸ.

ಟಿ ಆರ್. ಅನಂತರಾಮುರವರ ಪ್ರಕಟಿತ ಕೃತಿಗಳು[ಬದಲಾಯಿಸಿ]

ಕನ್ನಡ ವಿಜ್ಞಾನ ಸಾಹಿತ್ಯ ಪ್ರಕಟಣೆಗಳು

ಒಟ್ಟು ಪ್ರಕಟಣೆಗಳು (ಮೇ 2021ವರೆಗೆ): ೧೧೬ ಕೃತಿಗಳು (ಸಂಪಾದಿತ ಕೃತಿಗಳೂ ಸೇರಿದಂತೆ)
ಸ್ವಂತ ರಚನೆಗಳು ೫೯ ಕೃತಿಗಳು
ಅನುವಾದಿತ ಕೃತಿಗಳು ೧೩ ಕೃತಿಗಳು
ಸಂಪಾದಿತ ಕೃತಿಗಳು ೩೩ ಕೃತಿಗಳು
ಸಂಪಾದನೆ (ಇತರರೊಡನೆ) ೧೦ ಕೃತಿಗಳು
ಮಕ್ಕಳ ಸಾಹಿತ್ಯ (ಸಂಪಾದನೆ) ೩ ಕೃತಿಗಳು

ಸ್ವಂತ ರಚನೆಗಳು[ಬದಲಾಯಿಸಿ]

ಸ್ವಂತ ರಚನೆಗಳು:
ಕ್ರಮ ಸಂಖ್ಯೆ ಪ್ರಕಟಣೆಯ ವರ್ಷ ಪುಸ್ತಕ ಪ್ರಕಾಶನ
೧೯೭೮ ಕನ್ನಡದಲ್ಲಿ ಭೂವಿಜ್ಞಾನ ಸಾಹಿತ್ಯ ನಭಶ್ರೀ ಪ್ರಕಾಶನ, ಮೈಸೂರು-೫೭೦೦೦೯
೧೯೭೯ ಎಂ.ಎಸ್. ಕೃಷ್ಣನ್ (ಭೂವಿಜ್ಞಾನಿ) ರಾಷ್ಟ್ತೋತ್ಥಾನ ಸಾಹಿತ್ಯ ಪರಿಷತ್ತು, ಬೆಂಗಳೂರು
೧೯೮೦ ಭೂಮಿಯ ಅಂತರಾಳ ಕನ್ನಡ ವಿಜ್ಞಾನ ಪರಿಷತ್ತು, ಬೆಂಗಳೂರು
೧೯೮೦ ಬಿಸಿನೀರಿನ ಬುಗ್ಗೆಗಳು ಕನ್ನಡ ಸಾಹಿತ್ಯ ಪರಿಷತ್ತು,ಬೆಂಗಳೂರು
೧೯೮೧ ಬದಲಾಗುತ್ತಿರುವ ಭೂಮಿ ಕನ್ನಡ ವಿಕಾಸ, ಮೈಸೂರು
೧೯೮೫ ಹಿಮದ ಸಾಮ್ರಾಜ್ಯದಲ್ಲಿ ರಚನಾ ವಾಚನ, ಬೆಂಗಳೂರು
೧೯೯೧ ಭೂಮಿಯ ವಯಸ್ಸು(೪ನೇ ಮುದ್ರಣ) ನವಕರ್ನಾಟಕ ಪ್ರಕಾಶನ, ಬೆಂಗಳೂರು
೧೯೯೧ ಭೂಗರ್ಭ ಯಾತ್ರೆ ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೯೯೨ ಬೆಳೆಯುತ್ತಿರುವ ಹಿಮಾಲಯ ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೦ ೧೯೯೨ ರಾಜರ ಲೋಹ-ಲೋಹಗಳ ರಾಜ: ಚಿನ್ನ ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೧ ೧೯೯೨ ಜ್ವಾಲಾಮುಖಿ ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೨ ೧೯೯೨ ಪೆಡಂಭೂತಗಳು ಅಳಿದವೇಕೆ? ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೩ ೧೯೯೨ ವಿಶ್ವವಿಖ್ಯಾತ ನೈಸರ್ಗಿಕ ವಿಕೋಪಗಳು ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೧೪ ೧೯೯೪ ರತ್ನಗಳು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
೧೫ ೧೯೯೪ ಭೂಕಂಪನಗಳು ಭಾರತೀಯ ಭೂವೈಜ್ಞಾನಿಕ ಸಂಘ, ಬೆಂಗಳೂರು
೧೬ ೧೯೯೪ ಮಳೆ ಕನ್ನಡ ವಿಶ್ವವಿದ್ಯಾಲಯ, ಹಂಪಿ
೧೭ ೧೯೯೫ ಆಲ್ಫ್ರೆಡ್ ವೆಗೆನರ್ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
೧೮ ೧೯೯೬ ಪೆಡಂಭೂತಗಳು: ಮಕ್ಕಳ ಸಚಿತ್ರಕೋಶ ನವಕರ್ನಾಟಕ ಪಬ್ಲಿಕೇಷನ್ಸ್ ಬೆಂಗಳೂರು
೧೯ ೧೯೯೭ ಪ್ರಿ ಹಿಸ್ಟಾರಿಕ್ ಅನಿಮಲ್ಸ್ ನವಕರ್ನಾಟಕ ಪಬ್ಲಿಕೇಷನ್ಸ್ ಬೆಂಗಳೂರು
೨೦ ೧೯೯೯ ಭೂವಿಜ್ಞಾನ ಸಪ್ನ ಬುಕ್ ಹೌಸ್, ಬೆಂಗಳೂರು
೨೧ ೧೯೯೯ ಅಂಟಾರ್ಕ್ಟಿಕ ಸಚಿತ್ರ ವಿಜ್ಞಾನಕೋಶ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಬೆಂಗಳೂರು
೨೨ ೧೯೯೯ ಚೌಚೌ ಚಾಕಿ ವಿಜ್ಞಾನ ವಿನೋದ - ಅಂಕಿತ ಪುಸ್ತಕ, ಬೆಂಗಳೂರು
೨೩ ೧೯೯೯ ಕಾಲಗರ್ಭಕ್ಕೆ ಕೀಲಿಕೈ ಬ್ಯಾಲದಕೆರೆ ಪ್ರಕಾಶನ, ನಾಗಮಂಗಲ ತಾ. ಮಂಡ್ಯ ಜಿಲ್ಲೆ
೨೪ ೧೯೯೯ ಪ್ರಾಚೀನ ಭಾರತದಲ್ಲಿ ಲೋಹ ತಂತ್ರಜ್ಞಾನ ಬ್ಯಾಲದಕೆರೆ ಪ್ರಕಾಶನ, ನಾಗಮಂಗಲ ತಾ. ಮಂಡ್ಯ ಜಿಲ್ಲೆ
೨೫ ೧೯೯೯ ಪೆಟ್ರೋಲ್ ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು
೨೬ ೨೦೦೦ ವರಾಹಮಿಹಿರ ಸಪ್ನ ಬುಕ್ ಹೌಸ್, ಬೆಂಗಳೂರು
೨೭ ೨೦೦೦ ಬಾನಂಗಳದ ಬತ್ತಳಿಕೆಯಲ್ಲಿ ನೆಲಮನೆ ಪ್ರಕಾಶನ, ರಂಗನಾಥಪುರ, ಶ್ರೀರಂಗಪಟ್ಟಣ, ಮಂಡ್ಯಜಿಲ್ಲೆ,
೨೮ ೨೦೦೦ ಬೀರಬಲ್ ಸಾಹ್ನಿ ಸಪ್ನ ಬುಕ್ ಹೌಸ್, ಬೆಂಗಳೂರು
೨೯ ೨೦೦೨ ಶಕ್ತಿಸಾರಥಿ ರಾಷ್ಟ್ರಪತಿ: ಅಬ್ದುಲ್ ಕಲಾಂ ಸಪ್ನ ಬುಕ್ ಹೌಸ್, ಬೆಂಗಳೂರು
೩೦ ೨೦೦೨ ಸೃಷ್ಟಿವಾದಿಗಳ ಮುಷ್ಟಿಯಲ್ಲಿ ಡಾರ್ವಿನ್ ಸಿ.ವಿ.ಜಿ. ಪಬ್ಲಿಕೇಷನ್ಸ್ ಬೆಂಗಳೂರು
೩೧ ೨೦೦೩ ಕರ್ತಾರನಿಗೊಂದು ಕಿವಿಮಾತು ಸಿ.ವಿ.ಜಿ. ಪಬ್ಲಿಕೇಷನ್ಸ್ ಬೆಂಗಳೂರು
೩೨ ೨೦೦೫ ಸರಸ್ವತೀ ನದಿ ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರ
೩೩ ೨೦೦೫ ದಿವ್ಯನೇತ್ರ ವರ್ಷಾ ಎಂಟರ್‌ಪ್ರೆöÊಸಸ್, ಬೆಂಗಳೂರು
೩೪ ೨೦೦೬ ಅಮೂಲ್ಯರೆಡ್ಡಿ ಸಪ್ನ ಬುಕ್ ಹೌಸ್, ಬೆಂಗಳೂರು
೩೫ ೨೦೦೭ ದಣಿಯಿಲ್ಲದ ಧರಣಿ ಸುಧಾ ಎಂಟರ್‌ಪ್ರೆöÊಸಸ್, ಬೆಂಗಳೂರು
೩೬ ೨೦೦೮ ಪಶ್ಚಿಮಮುಖಿ : ಪ್ರವಾಸ ಕಥನ ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೩೭ ೨೦೦೯ ಲೋಹವಿದ್ಯಾಪಾರಂಗತ ಕೆ. ನಾಗೇಶರಾವ್ ಹೊಯ್ಸಳ ಕರ್ನಾಟಕ ಸಂಘ (ರಿ.)ಬೆಂಗಳೂರು
೩೮ ೨೦೦೯ ತಂತ್ರಪ್ರಪಂಚದಲ್ಲಿ ನ್ಯಾನೋ ಮಂತ್ರ ವಸಂತ ಪಬ್ಲಿಕೇಷನ್ಸ್, ಬೆಂಗಳೂರು
೩೯ ೨೦೦೯ ಸರ್. ಎಂ. ವಿಶ್ವೇಶ್ವರಯ್ಯ : ಸಾಧಕನ ಹೆಜ್ಜೆಗಳು ನವಕರ್ನಾಟಕ ಪಬ್ಲಿಕೇಷನ್ಸ್, ಬೆಂಗಳೂರು
೪೦ ೨೦೦೯ ಡಾರ್ವಿನ್ ಕಂಡ ಗಲಪಗಾಸ್ ದ್ವೀಪ ಪ್ರಗತಿ ಗ್ರಾಫಿಕ್ಸ್, ಬೆಂಗಳೂರು
೪೧ ೨೦೦೯ ದೂರದರ್ಶಕ ಕಂಡ ವಿಶ್ವರೂಪ ಪ್ರಗತಿ ಗ್ರಾಫಿಕ್ಸ್, ಬೆಂಗಳೂರು
೪೨ ೨೦೧೦ ಜೀವಿರಕ್ಷಕ ಓಜೋನ್ ಪದರ ಸಪ್ನ ಬುಕ್ ಹೌಸ್, ಬೆಂಗಳುರು
೪೩ ೨೦೧೦ ವಿಜ್ಞಾನ : ಪ್ರಶ್ನೆ ಪರಿಹಾರ ವಸಂತ ಪಬ್ಲಿಕೇಷನ್ಸ್, ಬೆಂಗಳೂರು
೪೪ ೨೦೧೦ ವಿಜ್ಞಾನ : ಸವಾಲು ಜವಾಬು ವಸಂತ ಪಬ್ಲಿಕೇಷನ್ಸ್, ಬೆಂಗಳೂರು
೪೫ ೨೦೧೧ ವಿಜ್ಞಾನ ಜಗತ್ತು - ೨೦೧೦ ಶಂಕರ್ ಪ್ರತಿಷ್ಠಾನ, ಗುಲಬರ್ಗಾ
೪೬ ೨೦೧೧ ಕೆರೆಗಳು ಬತ್ತಿದಾಗ ಜಲ ಸಮಸ್ಯೆ ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಬೆಂಗಳೂರು
೪೭ ೨೦೧೧ ಮರ್ಫಿ ಲಾ ಅಂಕಿತ ಪುಸ್ತಕ, ಬೆಂಗಳೂರು
೪೮ ೨೦೧೧ ರಸವಿದ್ಯೆ ಸಪ್ನಾ ಬುಕ್ ಹೌಸ್, ಬೆಂಗಳೂರು
೪೯ ೨೦೧೧ ನಿಮ್ಮೊಳಗೊಬ್ಬ ಜೀನಿಯಸ್ ಅರ್ಕಾವತಿ ಪ್ರಕಾಶನ, ಬೆಂಗಳೂರು
೫೦ ೨೦೧೨ ದೈತ್ಯಪ್ರತಿಭೆಗಳ ಹೆಗಲ ಮೇಲೆ ಸಪ್ನಾ ಬುಕ್ ಹೌಸ್, ಬೆಂಗಳೂರು
೫೧ ೨೦೧೩ ಭೂಮಿಯ ಟೈಂ ಬಾಂಬ್ ಜ್ವಾಲಾಮುಖಿ ನವಕರ್ನಾಟಕ ಪ್ರಕಾಶನ, ಬೆಂಗಳೂರು
೫೨ ೨೦೧೩ ನಗ್ ನಗ್ತಾ ವಿಜ್ಞಾನ ಭೂಮಿ ಬುಕ್ಸ್, ಬೆಂಗಳೂರು
೫೩ ೨೦೧೪ ಭಾರತರತ್ನ ಸಿ.ಎನ್. ಆರ್. ರಾವ್–ರಸಾಯನ ವಿಜ್ಞಾನದ ಚಿಂತಾಮಣಿ ಸಪ್ನ ಬುಕ್ ಹೌಸ್, ಬೆಂಗಳೂರು
೫೪ ೨೦೧೫ ಖ್ಯಾತ ಭೂವಿಜ್ಞಾನಿ ಬಿ.ಪಿ. ರಾಧಾಕೃಷ್ಣ ನವಕರ್ನಾಟಕ ಪ್ರಕಾಶನ, ಬೆಂಗಳೂರು
೫೫ ೨೦೧೫ ಸಲೀಂ ಅಲಿ ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
೫೬ ೨೦೧೬ ನೀಲಿ ತಿಮಿಂಗಿಲಗಳ ಹೃದಯ ವಸಂತ ಪ್ರಕಾಶನ, ಬೆಂಗಳೂರು
೫೭ ೨೦೧೮ ಮತ್ತೆ ಸುದ್ದಿಯಲ್ಲಿ ಬರ್ಮುಡಾ ಟ್ರೆöಯಾಂಗಲ್ ಐ.ಬಿ.ಎಚ್. ಪ್ರಕಾಶನ, ಬೆಂಗಳೂರು
೫೮ ೨೦೧೮ ಕರೆಯದೆ ಬಂದ ಅತಿಥಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು
೫೯ ೨೦೧೯ ಚಂದ್ರನ ಮೇಲೆ ಮತ್ತೊಮ್ಮೆ ಸಪ್ನಾ ಬುಕ್ ಹೌಸ್, ಬೆಂಗಳೂರು

ಅನುವಾದಿತ ಕೃತಿಗಳು[ಬದಲಾಯಿಸಿ]

ಇಂಗ್ಲೀಷಿನಿಂದ ಅನುವಾದಿತ ಕೃತಿಗಳು
ಕ್ರಮ ಸಂಖ್ಯೆ ಪ್ರಕಟಣೆಯ ವರ್ಷ ಪುಸ್ತಕ ಪ್ರಕಾಶನ ಮೂಲ
೧೯೯೫ ಸಂಪನ್ಮೂಲಗಳಿಗಾಗಿ ಸಮುದ್ರ ಮಥನ ನವಕರ್ನಾಟಕ ಪಬ್ಲಿಕೇಷನ್ಸ್ ಟಿ.ಕೆ.ಎಸ್. ಮೂರ್ತಿ,
೧೯೯೫ ನಮ್ಮ ಜಲ ಸಂಪನ್ಮೂಲಗಳು ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯ, ನವದೆಹಲಿ ರಾಮ
೨೦೦೦ ವಿಸ್ಮಯಗಳ ನಾಡಿನಲ್ಲಿ ನವಕರ್ನಾಟಕ ಪಬ್ಲಿಕೇಷನ್ಸ್ ವಿ.ಜಿ. ಕುಲಕರ್ಣಿ. ವಿ.ಜಿ. ಗಂಭೀರ್, ಆರ್. ಎಮ್ ಭಾಗವತ್,.
೨೦೦೭ ಸುನೀತಾ ವಿಲಿಯಮ್ಸ್ ಸಪ್ನಾ ಬುಕ್ ಹೌಸ್, ಬೆಂಗಳೂರು ಆರಾಧಿಕಾ ಶಮ್, ಕ್ಯಾ. ಎಸ್. ಶೇಷಾದ್ರಿ
೨೦೦೯ ಅಂಟಾರ್ಕ್ಟಿಕ ಕಥೆ (ಇಲಾಖಾ ಪ್ರಕಟಣೆ) ಗೋವ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘ ಬೆಂಗಳೂರು ರಾಷ್ಟ್ರೀಯ ಅಂಟಾರ್ಕ್ಟಿಕ ಮತ್ತು ಸಾಗರ ಸಂಶೋಧನಾ ಕೇಂದ್ರ,
೨೦೦೫ ಪರಿಸರಸ್ಥಿತಿ ವರದಿ ಮತ್ತು ಕಾರ್ಯಯೋಜನೆ-೨೦೦೩ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ
೨೦೦೯ ವಾಯುಗುಣ ಬದಲಾವಣೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
೨೦೧೧ ರಾಕೆಟ್ : ಇತಿಹಾಸ, ವಿಜ್ಞಾನ - ತಂತ್ರಜ್ಞಾನ ಪ್ರಿಸಂ ಬುಕ್ ಹೌಸ್, ಬೆಂಗಳೂರು
೨೦೧೧ ಸೌರಶಕ್ತಿಯ ಕಥೆ ನವಕರ್ನಾಟಕ ಪ್ರಕಾಶನ, ಬೆಂಗಳೂರು
೧೦ ೨೦೧೩ ಅಸಾಧಾರಣ ಪರಿಶೋಧಕರು ಸಪ್ನ ಬುಕ್ ಹೌಸ್, ಬೆಂಗಳೂರು
೧೧ ೨೦೧೪ ಮಕ್ಕಳ ಸಚಿತ್ರ ಜ್ವಾನ ಭಂಡಾರ : ಭೂಮಿ ಸಪ್ನ ಬುಕ್ ಹೌಸ್, ಬೆಂಗಳೂರು
೧೨ ೨೦೧೪ ಮಕ್ಕಳ ಸಚಿತ್ರ ಜ್ವಾನ ಭಂಡಾರ : ವಿಶ್ವ ಸಪ್ನ ಬುಕ್ ಹೌಸ್, ಬೆಂಗಳೂರು
೧೩ ೨೦೧೬ ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೆ? ಸಪ್ನ ಬುಕ್ ಹೌಸ್, ಬೆಂಗಳೂರು

ಸಂಪಾದಿತ ಕೃತಿಗಳು[ಬದಲಾಯಿಸಿ]

ಸಂಪಾದಿತ ಕೃತಿಗಳು
ಕ್ರಮ ಸಂಖ್ಯೆ ಪ್ರಕಟಣೆಯ ವರ್ಷ ಪುಸ್ತಕ ಪ್ರಕಾಶನ
೧೯೯೭ ಕಾವೇರಿ ಹರಿದು ಬಂದು ದಾರಿ ದಿಕ್ಸೂಚಿ ಪ್ರಕಾಶನ, ಬಸವೇಶ್ವರನಗರ, ಬೆಂಗಳೂರು
೨೦೦೦ ತ್ರಿವಿಕ್ರಮ ಹೆಜ್ಜೆಗಳು ಸಿ.ವಿ.ಜಿ. ಪಬ್ಲಿಕೇಷನ್ಸ್, ಬೆಂಗಳೂರು.
೨೦೦೨ ವಿಸ್ಮಯ ವಿಜ್ಞಾನ ಮಾಲಿಕೆ (೨೮ ಪುಸ್ತಕಗಳ ಪ್ರಧಾನ ಸಂಪಾದಕ) ಸುಭಾಷ್ ಪಬ್ಲಿಷಿಂಗ್ ಹೌಸ್, ಬೆಂಗಳೂರು
೨೦೧೨ ಇತಿಹಾಸದಲ್ಲಿ ವಿಜ್ಞಾನ (೪ ಸಂಪುಟಗಳು) (ಜೆ.ಡಿ. ಬರ್ನಾಲ್ ಅವರ `ಸೈನ್ಸ್ ಇನ್ ಹಿಸ್ಟರಿ’) ಕುವೆಂಪು ಭಾಷಾ ಭಾರತಿ, ಬೆಂಗಳೂರು
೨೦೧೫ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ ೧೪ – ವಿಜ್ಞಾನ ತಂತ್ರಜ್ಞಾನ ಸಂಪುಟ) ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
೨೦೧೭ ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು ನವಕರ್ನಾಟಕ ಪ್ರಕಾಶನ, ಬೆಂಗಳೂರು
೨೦೨೩ ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು ಹರಿವು ಬುಕ್ಸ್, ಬೆಂಗಳೂರು

ಇತರರೊಡನೆ ಸಂಪಾದಿತ ಕೃತಿಗಳು[ಬದಲಾಯಿಸಿ]

ಇತರರೊಡನೆ ಸಂಪಾದಿತ ಕೃತಿಗಳು
ಕ್ರಮ ಸಂಖ್ಯೆ ಪ್ರಕಟಣೆಯ ವರ್ಷ ಪುಸ್ತಕ ಪ್ರಕಾಶನ ಟಿಪ್ಪಣಿ
೧೯೯೮ ನವಕರ್ನಾಟಕ ಜ್ಞಾನ ವಿಜ್ಞಾನ ಕೋಶ (೪ ಸಂಪುಟಗಳು - ಸಹ ಸಂಪಾದಕ) ನವಕರ್ನಾಟಕ ಪ್ರಕಾಶನ, ಬೆಂಗಳೂರು
೨೦೧೧ ವಿಜ್ಞಾನ ತಂತ್ರಜ್ಞಾನ ಪದಸಂಪದ ನವಕರ್ನಾಟಕ ಪ್ರಕಾಶನ, ಬೆಂಗಳೂರು
೨೦೧೨ ಕನ್ನಡದಲ್ಲಿ ವಿಜ್ಞಾನ ಸಂವಹನೆ ಉದಯಭಾನು ಕಲಾಸಂಘ, ಬೆಂಗಳೂರು
೨೦೧೨ ವಿಜ್ಞಾನ (ಬೆಳ್ಳಾವೆ ವೆಂಕಟನಾರಣಪ್ಪ ನಂಗಪುರಂ ವೆಂಕಟೇಶ ಐಯ್ಯಂಗಾರ್) ಉದಯಭಾನು ಕಲಾಸಂಘ, ಬೆಂಗಳೂರು
೨೦೧೩ ವಿಜ್ಞಾನ ತಂತ್ರಜ್ಞಾನ ನಿಘಂಟು ನವಕರ್ನಾಟಕ ಪ್ರಕಾಶನ, ಬೆಂಗಳೂರು
೨೦೧೩ ಕಿರಿಯರ ಸಚಿತ್ರ ವಿಶ್ವಕೋಶ ವಸಂತ ಪ್ರಕಾಶನ, ಬೆಂಗಳೂರು
೨೦೧೩ ವಿಜ್ಞಾನ ಯಾನ ಸಮೃದ್ಧ ಪ್ರಕಾಶನ, ಬೆಂಗಳೂರು
೨೦೧೮ ಮೀನಾಕ್ಷಿಯ ಸೌಗಂಧ (ಬಿ.ಜಿ.ಎಲ್. ಸ್ವಾಮಿ ಅವರ ಬಿಡಿ ಲೇಖನಗಳು) ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
೨೦೨೧ ನಮ್ಮ ದೇಹದ ವಿಜ್ಞಾನ ನವಕರ್ನಾಟಕ ಪ್ರಕಾಶನ, ಬೆಂಗಳೂರು ಇನ್ನೊಬ್ಬ ಸಂಪಾದಕರು: ನಾ. ಸೋಮೇಶ್ವರ
೧೦ ೨೦೨೩ ಖಗೋಳ ದರ್ಶನ ನವಕರ್ನಾಟಕ ಪ್ರಕಾಶನ, ಬೆಂಗಳೂರು ಇನ್ನೊಬ್ಬ ಸಂಪಾದಕರು: ಬಿ. ಎಸ್. ಶೈಲಜಾ

ಮಕ್ಕಳ ಸಾಹಿತ್ಯಕ್ಕೆ ಕೊಡುಗೆ (ಪ್ರಧಾನ ಸಂಪಾದಕ)[ಬದಲಾಯಿಸಿ]

ಮಕ್ಕಳ ಸಾಹಿತ್ಯಕ್ಕೆ ಕೊಡುಗೆ (ಪ್ರಧಾನ ಸಂಪಾದಕ)
ಕ್ರಮ ಸಂಖ್ಯೆ ಪ್ರಕಟಣೆಯ ವರ್ಷ ಪುಸ್ತಕ ಪ್ರಕಾಶನ
೨೦೧೩ ಕಿರಿಯರ ಸಚಿತ್ರ ವಿಶ್ವಕೋಶ ವಸಂತ ಪ್ರಕಾಶನ, ಬೆಂಗಳೂರು
೨೦೧೩ ಮಕ್ಕಳ ಜ್ಞಾನಕೋಶ ೨ ಸಂಪುಟ ವಸಂತ ಪ್ರಕಾಶನ, ಬೆಂಗಳೂರು
೨೦೧೬ ನಮ್ಮ ನಿಸರ್ಗ-೬೧ ಸರಳ ಪ್ರಯೋಗಗಳು ವಸಂತ ಪ್ರಕಾಶನ, ಬೆಂಗಳೂರು

ವೃತ್ತಿಜೀವನದ ಕೊಡುಗೆಗಳು[ಬದಲಾಯಿಸಿ]

ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಹಿರಿಯ ವೈಜ್ಞಾನಿಯಾಗಿ ಟಿ. ಆರ್. ಅನಂತರಾಮುರ ಕೊಡುಗೆ ಬಹಳ ಮಹತ್ವದ್ದಾಗಿದೆ.

  • 'ಕೋಲಾರ ಗೋಲ್ಡ್ ಫೀಲ್ಡ್ಸ್,’ ನ ಗಣಿಯೊಳಗೆ ೩ ಕಿ.ಮೀಟರ್ ಗೂ ಹೆಚ್ಚಿನ ಆಳದ ಪರಿಸರಕ್ಕೆ ಇಳಿದುಹೋಗಿ, ೬೯ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ, ಸಂಶೋಧನಾ ಕೆಲಸಗಳನ್ನು ಕೈಗೊಂಡಿದ್ದಾರೆ. ಉತ್ತರಭಾರತದ ’ಮೇಘಾಲಯ ರಾಜ್ಯ’ ದ ಬೆಟ್ಟ-ಕಣಿವೆಗಳಲ್ಲಿಯೂ-ನಿಕ್ಷೇಪಗಳನ್ನು ಶೋಧಿಸುವ ಕೆಲಸದಲ್ಲಿ ಯಶನ್ನು ಪಡೆದಿದ್ದಾರೆ.
  • ದಕ್ಷಿಣ ಭಾರತದ ’ಮಲೆಮಹದೇಶ್ವರ’ ಬೆಟ್ಟಗಳ ಪ್ರದೆಶದಲ್ಲಿ ೨,೫೦೦ ಚ. ಕಿಲೋಮೀಟರ್ ವಿಸ್ತೀರ್ಣದ ದುರ್ಗಮಕಾಡುಗಳ-ಭೂಪ್ರದೇಶದಲ್ಲಿ, ಸಂಚರಿಸಿ, ಅಲ್ಲಿಯೇ ಶಿಬಿರವನ್ನು ಹೂಡಿ, ಅಲ್ಲಿನ ಶಿಲಾನಿಕ್ಷೇಪಗಳ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಇಂತಹ ನಕ್ಷೆಯನ್ನು ಸಿದ್ಧಪಡಿಸಿದವರಲ್ಲಿ ಮೊದಲಿಗರು.
  • ಜಿಲ್ಲಾಮಟ್ಟದಲ್ಲಿ ಸರ್ವ ಸಮಸ್ತ ಸಂಪಮ್ಮೂಲಗಳನ್ನೂ ನೀರು, ಮಣ್ಣು ಅರಣ್ಯ, ಕೈಗಾರಿಕಾ ಕಚ್ಚಾವಸ್ತುಗಳು, ಖನಿಜ ನಿಕ್ಷೇಪಗಳು, ಇತ್ಯಾದಿಗಳನ್ನು ಒಳಗೊಂಡ ಮಹತ್ವ ’ಜಿಲ್ಲಾ ಸಂಪಮ್ಮೂಲ ನಕ್ಷೆ,’ ಯನ್ನು ಸಿದ್ಧಪಡಿಸುವ ಪರಿಪಾಠವನ್ನು ಅವರು ಜಾರಿಗೆ ತಂದಿದ್ದಾರೆ.[೧]

ಕೆಲ ಉಲ್ಲೇಖಾರ್ಹ ಸಂಗತಿಗಳು[ಬದಲಾಯಿಸಿ]

೨೦೧೩ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ ಕನ್ನಡ ವಿಕಿಪೀಡಿಯ ದಶಮಾನೋತ್ಸವದಲ್ಲಿ
  • ’ಭೂವೈಜ್ಞಾನಿಕ ಸರ್ವೆಕ್ಷನ ಸಂಸ್ಥೆ’ ಯ ೧೫೦ ನೇ ವರ್ಷಾಚರಣೆ’ ಯ ಸಂದರ್ಭದಲ್ಲಿ ಅ ಸಂಪಾದಿಸಿದ " ನ್ಯಾಶನಲ್ ಜಿಯೊಲಾಜಿಕಲ್ ಮಾನ್ಯುಮೆಂಟ್ಸ್," ಅತಿ ವಿಶಿಷ್ಠವಾದ, ಹಾಗೂ ಅತ್ಯಂತ ಮಹತ್ವದ ಕೃತಿಯಾಗಿದೆಯೆಂಬುದು ಕೃತಿ-ವಿಮರ್ಶಕರ ಅಂಬೋಣ. ಈ ಕೃತಿ, ಬಹಳ ಕಾಲದವರೆಗೆ ಎಲ್ಲರ ಸಂಶೋಧನೆಗಳಿಗೆ ನೆರವಾಗುವ ಉಲ್ಲೇಖಗಳಾಗುವ ಕೃತಿಯಾಗಿದೆ. ಕರ್ನಾಟಕದ ಮರಡಿಹಳ್ಳಿಯಲ್ಲಿರುವ ದಿಂಬುಲಾವ, ಬೆಂಗಳೂರಿನ ಲಾಲ್ ಬಾಗ್ ನ, ಶಿಲಾಬೆಟ್ಟ, ಸೆಂಟ್ ಮೇರಿ ದ್ವೀಪದ, ಶಿಲಾಕಂಬಗಳು, ಕೆ.ಜಿ.ಎಫ್ ನಲ್ಲಿರುವ ಜ್ವಾಲಾಮುಖಿಯ ಕಲ್ಲುಗಳ ರಾಶಿಗಳಬಗ್ಗೆ ಮಾಡಿದ ಅಧ್ಯಯನದ ತಥ್ಯಗಳನ್ನು ತಮ್ಮ ಕೃತಿ ಪಟ್ಟಿಯಲ್ಲಿ ಸೇರಿಸಿದ್ದಾರೆ.[೨]
  • ಅಂಕಣಕಾರ ಡಾ. ಎಚ್. ಆರ್. ಕೃಷ್ಣಮೂರ್ತಿಯವರ ಬರೆದಿರುವಂತೆ ಅನಂತರಾಮುರವರು ಕನ್ನಡದ ಜನಪ್ರಿಯ ವಿಜ್ಞಾನ ಪತ್ರಿಕೆಯ ಹೇಗಿರಬೇಕೆಂಬ ’ಬೆಂಚ್ ಮಾರ್ಕ್’ನ್ನು ’ವಿಜ್ಞಾನ ಸಂಗಾತಿ’ಯ ಮೂಲಕ ಮಾಡಿ ತೋರಿಸಿಕೊಟ್ಟಿದ್ದಾರೆ. ’ಟಿ. ಆರ್. ಅನಂತರಾಮು’ ರವರ ವಿದ್ವತ್ತನ್ನು ಕಂಡುಹಿಡಿದ ವ್ಯಕ್ತಿಗಳಲ್ಲಿ ಜಿ. ಟಿ.ನಾರಾಯಣರಾಯರು ಮೊದಲಿಗರು.
  • ಅನಂತರಾಮು ಹಾಗೂ ನಾಗೇಶ ಹೆಗಡೆಯವರ ಸಂಪಾದಕತ್ವದಲ್ಲಿ ಹಂಪಿ ವಿಶ್ವವಿದ್ಯಾ ಲಯದಿಂದ ಹತ್ತು ಸಂಚಿಕೆಗಳು ಒಂದು ಶ್ರೇಷ್ಠಮಾದರಿ ಕನ್ನಡ ಕಾವ್ಯಲೋಕದ ಕಾವ್ಯ-ಸಂಪತ್ತಾಗಿ ಉಳಿಯುತ್ತವೆ.

ಪ್ರಶಸ್ತಿ ಮತ್ತು ಗೌರವಗಳು[ಬದಲಾಯಿಸಿ]

  • `ಭೂಕಂಪನಗಳು` ಕೃತಿಗೆ ಆರ್ಯಭಟ ಪ್ರಶಸ್ತಿ. - ೧೯೯೪
  • `ಕಾಲಗರ್ಭಕ್ಕೆ ಕೀಲಿಕೈ` ಕೃತಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ-೨೦೦೬
  • ವಿಜ್ಞಾನ ಸಾಹಿತ್ಯದ ಕೊಡುಗೆಗಾಗಿ - ಮೌಲ್ಯ ಗೌರವ ಪ್ರಶಸ್ತಿ. ಮೂಡಬಿದರೆ, ದ.ಕ. - ೨೦೦೬
  • ಕರ್ನಾಟಕ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ೨೦೦೮ರ `ಪರಿಸರ ಪತ್ರಿಕೋದ್ಯಮ ಪ್ರಶಸ್ತಿ’.
  • ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ `ವಿಷನ್ ಗ್ರೂಪ್’ಇಂದ `ಶ್ರೇಷ್ಠ ವಿಜ್ಞಾನ ಸಂವಹನಕಾರ’ ಪ್ರಶಸ್ತಿ-೨೦೧೧
  • ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ `ಶ್ರೇಷ್ಠ ಲೇಖಕ ಪ್ರಶಸ್ತಿ’ (೨೦೧೨-೧೩). ಕೃತಿ:`ದೈತ್ಯ ಪ್ರತಿಭೆಗಳ ಹೆಗಲ ಮೇಲೆ’
  • ಕರ್ನಾಟಕ ಸರ್ಕಾರದ `ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದ ಅನುವಾದ ಪುರಸ್ಕಾರ, ೨೦೧೧ (ಕೃತಿ `ರಾಕೆಟ್’)
  • ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಕೊಡುಗೆಯನ್ನು ಪರಿಗಣಿಸಿ 'ಗೌರವ ಡಾಕ್ಟರೇಟ್'- ತುಮಕೂರು ವಿಶ್ವವಿದ್ಯಾಲಯ, ತುಮಕೂರು, ೨೦೧೫[೩]
  • ಶಿವಮೊಗ್ಗ ಕರ್ನಾಟಕ ಸಂಘದಿಂದ ಜೀವಮಾನ ಸಾಧನೆಗಾಗಿ `ಡಾ. ಶಿವರಾಮ ಕಾರಂತ ವಿಜ್ಞಾನ ಪ್ರಶಸ್ತಿ’ – ೨೦೧೭
  • ವಿ.ಸಿ. ಸಂಪದದಿಂದ ಜೀವಮಾನ ಸಾಧನೆಗಾಗಿ ಗೌರವಾರ್ಪಣೆ - ೨೦೧೮
  • ವಿಜ್ಞಾನ ಶಿಕ್ಷಕರಿಗೆ, ಸಂವಹಕರಿಗೆ ಕರ್ನಾಟಕ ಸರ್ಕಾರದ ವಾರ್ಷಿಕ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಪುರಸ್ಕಾರ[೪][ಬದಲಾಯಿಸಿ]

  • ೧೯೮೫ರ ಅತ್ಯುತ್ತಮ ವಿಜ್ಞಾನ ಕೃತಿ - `ಹಿಮದ ಸಾಮ್ರಾಜ್ಯದಲ್ಲಿ`
  • ೨೦೦೩ರ ಅತ್ತುತ್ತಮ ವಿಜ್ಞಾನ ಕೃತಿ - `ಕರ್ತಾರನಿಗೊಂದು ಕಿವಿಮಾತು'
  • ೨೦೦೮ರ ಅತ್ಯುತ್ತಮ ಪ್ರವಾಸ ಸಾಹಿತ್ಯ ಕೃತಿ - `ಪಶ್ವಿಮ ಮುಖಿ’[೫]

ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ[ಬದಲಾಯಿಸಿ]

  1. ಅಖಿಲ ಭಾರತ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನ – ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ, ಶಿವಮೊಗ್ಗ, ೨೦೦೬
  2. ಅಖಿಲ ಭಾರತ ೮೧ನೇ ಸಾಹಿತ್ಯ ಸಮ್ಮೇಳನ – ವಿಜ್ಞಾನ ಗೋಷ್ಠಿಯ ಅಧ್ಯಕ್ಷತೆ, ಮಡಿಕೇರಿ, ಕೊಡಗು, ೨೦೧೪
  3. ೩ನೇ ಸಿರಾ ತಾಲ್ಲೂಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ, ಸಿರಾ, ೨೦೧೫

ಡಾ. ಟಿ.ಆರ್.ಎ.ವಿಜ್ಞಾನ ಪ್ರತಿಶ್ಠಾನ ಸ್ಥಾಪನೆ[ಬದಲಾಯಿಸಿ]

ಡಾ.ಟಿ.ಆರ್.ಅನಂತರಾಮುರವರು, ವಿಜ್ಞಾನ ಪ್ರತಿಷ್ಠಾನವನ್ನು ೧೨ ಜನವರಿ ೨೦೨೧ ರಂದು ಔಪಚಾರಿಕವಾಗಿ ನೋಂದಾಯಿಸಿದರು. [೬] ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶದಿಂದ ೭೦ ರ ದಶಕದ ಆರಂಭದಿಂದಲೂ ವಿಜ್ಞಾನವನ್ನು ಜನಪ್ರಿಯಗೊಳಿಸುವತ್ತ ಅವರ ಕೊಡುಗೆಯು ಈ ಲಾಭೋದ್ದೇಶವಿಲ್ಲದ ಉಪಕ್ರಮಕ್ಕೆ ಪ್ರೇರಕ ಶಕ್ತಿಯಾಗಿದೆ. ಅವರ ವಿಚಾರಧಾರೆಗಳನ್ನು ಈ ಟ್ರಸ್ಟ್ ನ ಮೂಲಕ ಕರ್ನಾಟಕದ ಮೂಲೆ ಮೂಲೆಯನ್ನು ತಲುಪಲು ಯೋಜನೆಗಳನ್ನು ಹೆಚ್ಚಿಸುವ ಆಶಯವನ್ನು ಹೊಂದಲಾಗಿದೆ.

ಅನಂತರಾಮುರವರ ಕುಟುಂಬ ಮತ್ತು ವಿಳಾಸ[ಬದಲಾಯಿಸಿ]

  • ಪತ್ನಿ ಅನ್ನಪೂರ್ಣರವರು, ಕರಡುಪ್ರತಿಗಳನ್ನು ತಿದ್ದುವುದರಿಂದ ಹಿಡಿದು, ಅದಕ್ಕೆ ಅಂತಿಮ ಮೆರುಗನ್ನು ಕೊಡುವವರೆಗೂ ಅತ್ಯಂತ ಕಾಳಜಿ ಶ್ರದ್ಧೆಗಳಿಂದ ಪತಿಯ ಜೊತೆ ಸಹಕರಿಸುತ್ತಿದ್ದಾರೆ. ಮಗ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಇಂಜಿನಿಯರ್. ಮಗಳು ’ಸ್ಪೇನ್ ದೇಶ’ದಲ್ಲಿ ನೆಲೆಸಿದ್ದಾರೆ. ಮೊಮ್ಮಕ್ಕಳು ’ಅಮೋಘ್’ ಮತ್ತು ´ಅನನ್ಯ´.
  • ವಿಳಾಸ: ೫೩೪, ’ಧಾತ್ರಿ,’ ೭೦ ನೇ ಅಡ್ಡ ರಸ್ತೆ, ೧೪ ನೇ ಮುಖ್ಯ ರಸ್ತೆ, ಕುಮಾರಸ್ವಾಮಿ ಬಡಾವಣೆ, ೧ ನೇ ಹಂತ, ಬೆಂಗಳೂರು-೫೬೦೦೭೮. ದೂರವಾಣಿ : ೨೬೬೬೪೨೦೪/೯೮೮೬೩೫೬೦೮೫

ಉಲ್ಲೇಖಗಳು[ಬದಲಾಯಿಸಿ]

  1. http://www.newindianexpress.com/lifestyle/books/article169009.ece?service=print[ಶಾಶ್ವತವಾಗಿ ಮಡಿದ ಕೊಂಡಿ]
  2. http://bedrebaraha.blogspot.in/2008/03/pashchima-mukhi-of-t-r-anantharamu.html
  3. ಇ-ಜ್ಞಾನ ಪತ್ರಿಕೆ- 'ಪ್ರಿಯ ಮಿತ್ರ ಅನಂತರಾಮು'.ನಾಗೇಶ್ ಹೆಗಡೆಯವರ ಅಭಿನಂದನಾ ಪತ್ರ.[ಶಾಶ್ವತವಾಗಿ ಮಡಿದ ಕೊಂಡಿ]
  4. About the author-T R Anantharamu,www.bookbrahma.com
  5. http://bedrefoundation.blogspot.in/2009/08/50th-work-of-sri-t-r-anantharamu-to-be.html
  6. ಡಾ.ಟಿ.ಆರ್.ಎ.ಪ್ರತಿಷ್ಠಾನ

ಹೊರಸಂಪರ್ಕಕೊಂಡಿಗಳು[ಬದಲಾಯಿಸಿ]