ಝಾನ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಝಾನ್ಸಿ
Jhansi
city
Government
 • MayorDr. B. Lal
Population
 (೨೦೦೧)
 • Total೫೦೪೨೯೨
Websitejhansi.nic.in

ಝಾನ್ಸಿ pronunciation  (ಉರ್ದು: جھانسی, ಹಿಂದಿ: झांसी, ಮರಾಠಿ:झाशी) ಭಾರತದ ಉತ್ತರದಲ್ಲಿರುವ ರಾಜ್ಯವಾದ ಉತ್ತರ ಪ್ರದೇಶದ ಒಂದು ನಗರ. ಝಾನ್ಸಿ ಒಂದು ಪ್ರಮುಖ ರಸ್ತೆ ಹಾಗೂ ರೈಲು ಸಂಧಿಪ್ರದೇಶವಲ್ಲದೇ ಝಾನ್ಸಿ ಜಿಲ್ಲೆ ಹಾಗೂ ಝಾನ್ಸಿ ವಿಭಾಗದ ಆಡಳಿತಾತ್ಮಕ ಪೀಠವೂ ಆಗಿದೆ. ಮೂಲ ನಗರವು ಹತ್ತಿರದ ಬಂಡೆಗೆ ಶಿಖರಪ್ರಾಯವಾಗಿರುವ ತನ್ನ ಕಲ್ಲಿನ ಕೋಟೆಯ ಪ್ರಾಕಾರದ ಸುತ್ತ ಬೆಳೆದಿದೆ.

ಅಟಲ್‌ ಬಿಹಾರಿ ವಾಜಪೇಯಿಯವರ ಸರ್ಕಾರವು ಉಪಕ್ರಮಿಸಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯು, ಝಾನ್ಸಿಯ ಅಭಿವೃದ್ಧಿಯನ್ನು ಉದ್ದೀಪಿಸಿತು. ಕಾಶ್ಮೀರವನ್ನು ಕನ್ಯಾಕುಮಾರಿಯೊಂದಿಗೆ ಸಂಪರ್ಕಿಸುವ ಉತ್ತರ-ದಕ್ಷಿಣ ಕಾರಿಡಾರ್‌ ಝಾನ್ಸಿಯ ಮೂಲಕ ಹಾದುಹೋಗುತ್ತದೆ. ಪೂರ್ವ-ಪಶ್ಚಿಮ ಕಾರಿಡಾರ್‌ ಕೂಡಾ ನಗರದ ಮೂಲಕ ಹಾದುಹೋಗುವುದರಿಂದ ಆಧಾರರಚನೆ ವ್ಯವಸ್ಥೆ ಹಾಗೂ ಸ್ಥಿರಾಸ್ತಿ ವ್ಯವಹಾರಗಳ ಅಭಿವೃದ್ಧಿಗಳ ಹಠಾತ್‌ ತರಾತುರಿ ಏರ್ಪಟ್ಟಿತು. ಹಸಿರುವಲಯದ ವಿಮಾನನಿಲ್ದಾಣ ನಿರ್ಮಾಣ ಯೋಜನೆಯೂ ಪರಿಶೀಲನೆಯಲ್ಲಿದೆ.

ಶಬ್ದವ್ಯುತ್ಪತ್ತಿ ಶಾಸ್ತ್ರ[ಬದಲಾಯಿಸಿ]

ದಂತಕಥೆಯ ಪ್ರಕಾರ, ರಾಜಾ ಬೀರ್‌ ಸಿಂಗ್‌ ದೇವ್‌‌, ಓರ್ಚ್ಛಾದಲ್ಲಿನ ತನ್ನ ಅರಮನೆಯ ಮೇಲ್ಛಾವಣಿಯಲ್ಲಿ ಕುಳಿತು ತನ್ನ ಸ್ನೇಹಿತ ಜೈತ್‌ಪುರ್‌ನ ರಾಜನಿಗೆ ತಾನು ಬಂಗಾ/ಜಾರ ಗುಡ್ಡದ ಮೇಲೆ ಕಟ್ಟಿಸಿದ ನವೀನ ಕೋಟೆಯನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವೇ ಎಂದಾಗ ಆತ ತನಗದು ‘ಜೈಂಸಿ’ (ಎಂದರೆ ಅದೇ ರೀತಿ ಇದೆ) ಇದ್ದ ಹಾಗಿದೆ ಎಂದು ಪ್ರತಿಕ್ರಿಯಿಸುತ್ತಾನೆ. ಈ 'ಜೈಂಸಿ' ಕಾಲಾನುಕ್ರಮೇಣ ಅಪಭ್ರಂಶಗೊಂಡು ಝಾನ್ಸಿ ಆಗಿದೆ. ಬಯಲು ಪ್ರದೇಶದಲ್ಲಿ ಎದ್ದು ನಿಂತಿರುವ ಗುಡ್ಡದ ಮೇಲೆ ಕಟ್ಟಲಾಗಿರುವ ನಗರ ಹಾಗೂ ಸುತ್ತುಮುತ್ತಲಿನ ಪ್ರದೇಶವನ್ನು ನಿಯಂತ್ರಿಸುವ ಭಾವನೆ ಮೂಡಿಸುವ ಈ ಕೋಟೆ ಮಧ್ಯ ಭಾರತದಲ್ಲಿರುವ ಆಯಕಟ್ಟಿನ ಸ್ಥಳಗಳಲ್ಲಿರುವ ಕೋಟೆಗಳಲ್ಲೊಂದಾಗಿದೆ.

ಇತಿಹಾಸ[ಬದಲಾಯಿಸಿ]

ಝಾನ್ಸಿ ಕೋಟೆ, c1857

೯ನೇ ಶತಮಾನದಲ್ಲಿ, ಝಾನ್ಸಿ ಪ್ರಾಂತ್ಯವು ಖಜುರಾಹೋದ ರಜಪೂತ ಚ/ಛಂಡೇಲಾ ರಾಜವಂಶದ ಆಳ್ವಿಕೆಗೆ ಒಳಪಟ್ಟಿತು. ಕೃತಕ ಜಲಾಶಯಗಳು ಹಾಗೂ ವಾಸ್ತುಶಿಲ್ಪಗಳ ಅವಶೇಷಗಳು ಬಹುಶಃ ಈ ಅವಧಿಗೆ ಸಂಬಂಧಿಸಿದ್ದಾಗಿರಬಹುದು. ಚ/ಛಂಡೇಲಾ ವಂಶದ ನಂತರ ಈ ಪ್ರಾಂತ್ಯದ ಅಧಿಕಾರವನ್ನು ಸಮೀಪದ ಕರಾರ್‌ ಕೋಟೆ ಕಟ್ಟಿದ ಖಂಗರ್‌ಗಳು ವಹಿಸಿಕೊಂಡರು. ಹದಿನಾಲ್ಕನೆಯ ಶತಮಾನದ ಹೊತ್ತಿಗೆ ಬುಂಡೇ/ದೇಲಾಗಳು ವಿಂಧ್ಯಪರ್ವತದ ವ್ಯಾಪ್ತಿಯ ಬಯಲುಗಳವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರಲ್ಲದೇ, ಈಗ ಅವರ ಹೆಸರನ್ನೇ ಹೊಂದಿರುವ ಬುಂದೇಲಖಂಡ ಪ್ರದೇಶದವರೆಗೆ ನಿಧಾನವಾಗಿ ವ್ಯಾಪಿಸಿದರು. ಝಾನ್ಸಿಯ ಕೋಟೆಯನ್ನು ಓರ್ಚ್ಛಾ ರಾಜ್ಯದ ರಾಜ ೧೬೧೦ರಲ್ಲಿ ಕಟ್ಟಿಸಿದನು. ದಂತಕಥೆಯ ಪ್ರಕಾರ ಓರ್ಚ್ಛಾದ ದೊರೆಯೊಬ್ಬ ದೂರದಲ್ಲಿರುವ ದಿಬ್ಬದ ಮೇಲೆ ನೆರಳನ್ನು (ಬುಂಡೇಲಖಂಡದ ಭಾಷೆಯಲ್ಲಿ 'ಜೈನ್‌') ಕಂಡಾಗ, ಆತ ಅದನ್ನು ಜೈನ್‌-ಸಿ (ನೆರಳಿನ ತರಹದ್ದು/ಒಂದು ವಿಧದ ನೆರಳು) ಎಂದು ಕರೆದನೆನ್ನಲಾಗಿದೆ. ಝಾನ್ಸಿ ತನ್ನ ಹೆಸರನ್ನು ಈ ಉಚ್ಚಾರಣೆಯಿಂದಾಗಿ ಪಡೆದುಕೊಂಡಿದೆ.

ಮೊಗ/ಘಲ್‌ ಸಾಮ್ರಾಜ್ಯದ ಮುಸಲ್ಮಾನ ರಾಜರು ಬುಂದೇಲಾ ರಾಜ್ಯದ ಮೇಲೆ ನಿರಂತರವಾಗಿ ಆಕ್ರಮಣಗಳನ್ನು ನಡೆಸುತ್ತಾ ಬಂದರು. ೧೭೩೨ರಲ್ಲಿ ಬುಂದೇಲಾದ ದೊರೆ ಛಾತ್ರಸಲ್‌ , ಹಿಂದೂ ಮರಾಠರುಗಳ ಮೊರೆ ಹೊಕ್ಕರು. ಅವರು ಆತನಿಗೆ ನೆರವನ್ನು ನೀಡಿದರು, ಹಾಗೂ ಪ್ರತಿಯಾಗಿ ಮಹಾರಾಜನ ಸಾವಿನ ಎರಡು ವರ್ಷಗಳ ನಂತರ ಆತನ ಆಳ್ವಿಕೆಯ ಪ್ರದೇಶದ ಮೂರನೇ ಒಂದರಷ್ಟು ಭಾಗವನ್ನು ಆತನ ಉಯಿಲಿನ ಮುಖಾಂತರ ಉಡುಗೊರೆಯಾಗಿ ಪಡೆದರು. ಮರಾಠರ ಸೇನಾಧಿಪತಿಯು ಝಾನ್ಸಿ ನಗರವನ್ನು ಅಭಿವೃದ್ಧಿಪಡಿಸಿದುದಲ್ಲದೇ, ಓರ್ಚ್ಛಾ ರಾಜ್ಯದ ನಿವಾಸಿಗಳನ್ನು ಅಲ್ಲಿಗೆ ಕರೆತಂದನು. ೧೮೦೬ರಲ್ಲಿ ಬ್ರಿಟಿಷರು ಮರಾಠ ಸೇನಾಮುಖ್ಯಸ್ಥರಿಗೆ ರಕ್ಷಣೆಯ ಭರವಸೆಯನ್ನು ನೀಡಿದರು. ೧೮೧೭ರಲ್ಲಿ, ಪುಣೆಯ ಪೇಷ್ವಾ ಬುಂಡೇಲಖಂಡದ ಮೇಲಿನ ತನ್ನ ಎಲ್ಲಾ ಹಕ್ಕುಗಳನ್ನು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪೆನಿಯ ಸ್ವಾಧೀನಕ್ಕೆ ಕೊಟ್ಟನು. ೧೮೫೩ರಲ್ಲಿ ಝಾನ್ಸಿಯ ರಾಜ ಮಕ್ಕಳಿಲ್ಲದೇ ಮೃತಪಟ್ಟಾಗ, ಆತನ ಪ್ರಾಂತ್ಯವನ್ನು ಭಾರತದ ಗವರ್ನರ್‌ ಜನರಲ್‌ ತನ್ನ ಸ್ವಾಧೀನಕ್ಕೆ ತೆಗೆದುಕೊಂಡರು. ಝಾನ್ಸಿ ರಾಜ್ಯ ಹಾಗೂ ಜಲಾಂವ್‌ ಮತ್ತು ಛಾಂಡೇರಿ ಜಿಲ್ಲೆಗಳನ್ನು ಆಗ ಒಂದೇ ಮೇಲ್ವಿಚಾರಣೆಯಡಿ ಬರುವಂತೆ ಮಾಡಲಾಯಿತು. ತಾನು ದತ್ತು ತೆಗೆದುಕೊಳ್ಳುವುದಕ್ಕೆ (ಆಗ ರೂಢಿಗತವಾಗಿದ್ದಂತೆ ) ಅಡ್ಡಿಪಡಿಸಿದುದರಿಂದ ಹಾಗೂ ಝಾನ್ಸಿ ಪ್ರಾಂತ್ಯದಲ್ಲಿ ಪಶುವಧೆಗೆ ಅನುಮತಿ ನೀಡಿದುದರಿಂದ ರಾಜನ ವಿಧವೆ, ರಾಣಿ ಲಕ್ಷ್ಮೀಬಾಯಿಯು, ಈ ಸ್ವಾಧೀನವನ್ನು ವಿರೋಧಿಸಿದಳು.

ಅದಕ್ಕೆ ಹೊಂದಿಕೆಯಾಗುವಂತೆ 1857ರ ಕ್ರಾಂತಿಯ ವೇಳೆಗೆ ಝಾನ್ಸಿ ಪ್ರಾಂತ್ಯದ ಪರಿಸ್ಥಿತಿಯು ದಂಗೆ ಏಳಲು ಪಕ್ವವಾಗಿತ್ತು. ಜೂನ್‌ನಲ್ಲಿ ೧೨ನೇ ಸ್ಥಳೀಯ ಪದಾತಿದಳದ ಕೆಲಮಂದಿ ಖಜಾನೆ ಹಾಗೂ ಆಯುಧಾಗಾರಗಳಿದ್ದ ಕೋಟೆಯನ್ನು ವಶಪಡಿಸಿಕೊಂಡು ರಕ್ಷಣಾ ದಳದ ಐರೋಪ್ಯ ಅಧಿಕಾರಿಗಳನ್ನು ಅವರ ಪತ್ನಿ ಮಕ್ಕಳೊಂದಿಗೆ ಸಾಮೂಹಿಕ ಸಂಹಾರ ನಡೆಸಿದರು. ರಾಣಿ ಲಕ್ಷ್ಮೀಬಾಯಿ ತಾನೇ ಕ್ರಾಂತಿಕಾರರ ನೇತೃತ್ವ ವಹಿಸಿದುದಲ್ಲದೇ ಗ್ವಾಲಿಯರ್‌ನಲ್ಲಿ ನಡೆದ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿ ಮರಣವನ್ನಪ್ಪಿದಳು. ನವೆಂಬರ್‌ ೧೮೫೮ರ ನಂತರವಷ್ಟೇ ಝಾನ್ಸಿ ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿದ್ದು. ಇದನ್ನು ಗ್ವಾಲಿಯರ್‌ನ ಮಹಾರಾಜರಿಗೆ ಕೊಟ್ಟಿತ್ತಾದರೂ, ನಂತರ ಪ್ರಾಂತ್ಯಗಳ ವಿನಿಮಯದಲ್ಲಿ, ೧೮೮೬ರಲ್ಲಿ ಬ್ರಿಟಿಷ್‌ ಆಳ್ವಿಕೆಯಡಿ ಬಂದಿತು. ಝಾನ್ಸಿಯನ್ನು ಸಂಯುಕ್ತ ಸಂಸ್ಥಾನಗಳಿಗೆ ಸೇರಿಸಲಾಯಿತು, ನಂತರ ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಅದೇ ಉತ್ತರ ಪ್ರದೇಶ ರಾಜ್ಯವಾಯಿತು.

ಗುಡ್ಡಗಾಡುಗಳ ಪ್ರದೇಶದಲ್ಲಿ ಎದ್ದು ನಿಂತಿರುವ ಕೋಟೆಯೇ ಕೋಟೆ ನಿರ್ಮಾಣದ ಉತ್ತರ ಭಾರತದ ಶೈಲಿಯು ದಕ್ಷಿಣ ಭಾರತಕ್ಕಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ತೋರಿಸುತ್ತದೆ. ದಕ್ಷಿಣದಲ್ಲಿ ಕೇರಳದ ಬೇಕಲ್‌ನಂತೆ ಬಹಳಷ್ಟು ಸುಂದರ ಕೋಟೆಗಳನ್ನು ಸಮುದ್ರ ತೀರ/ತಳದಲ್ಲಿ ಕಟ್ಟಲಾಗಿದೆ

ಜನಸಂಖ್ಯೆ[ಬದಲಾಯಿಸಿ]

ಝಾನ್ಸಿ ನಗರವು ೨೦೦೧ರ ಜನಗಣತಿಯ ಪ್ರಕಾರ ಭಾರತದ ಅತ್ಯಂತ ಜನಭರಿತವಾಗಿರುವ ನಗರಗಳಲ್ಲಿ ೭೭ನೇ ಸ್ಥಾನ ಪಡೆದಿದೆ.

ಚಿತ್ರ:Jhansi railway station2.JPG
ಝಾನ್ಸಿ ರೈಲ್ವೇ ನಿಲ್ದಾಣ
  • ೨೦೦೧ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ: ೫೦೪,೨೯೨
    • ನಗರ್‌ ನಿಗಮ್‌‌ ಒಟ್ಟು ಜನಸಂಖ್ಯೆ: ೪೭೦,೨೧೨
    • ಪುರುಷರು: ೨೪೯,೫೯೨
    • ಮಹಿಳೆಯರು: ೨೨೦,೬೨೦
    • ದಂಡುಪ್ರದೇಶ ಮಂಡಳಿ ಒಟ್ಟು ಜನಸಂಖ್ಯೆ: ೧೮,೫೮೨
    • ಪುರುಷರು: ೧೦,೨೩೯
    • ಮಹಿಳೆಯರು: ೮,೩೪೩
    • ಝಾನ್ಸಿ ರೈಲ್ವೆ ವಸಾಹತು ಒಟ್ಟು ಜನಸಂಖ್ಯೆ: ೧೫,೪೯೯
    • ಪುರುಷರು: ೮,೩೯೫
    • ಮಹಿಳೆಯರು: ೭,೧೦೪

ಭೂಗೋಳ ಮತ್ತು ಹವಾಗುಣ[ಬದಲಾಯಿಸಿ]

ಝಾನ್ಸಿ (ಬೆಟ್ಟದ ಮೇಲಿನ ಒಂದು ನೋಟ )

ಝಾನ್ಸಿಯು ಅಕ್ಷಾಂಶ ರೇಖಾಂಶಗಳ ಪ್ರಕಾರ ೨೫.೪೩೩೩ N ೭೮.೫೮೩೩ E ವಲಯದಲ್ಲಿದೆ. ಈ ನಗರವು ಸರಾಸರಿ ೨೮೪ ಮೀಟರ್‌ಗಳಷ್ಟು (೯೩೫ ಅಡಿಗಳು) ಎತ್ತರದಲ್ಲಿದೆ.[೧] ಝಾನ್ಸಿ ಮಧ್ಯಭಾರತದ, ಹೆಚ್ಚಾಗಿ ಗುಡ್ಡಗಾಡುಗಳಿಂದ ಹಾಗೂ ಖನಿಜಭರಿತ ಮಣ್ಣಿನೊಂದಿಗೆ ಕೂಡಿರುವ ಪ್ರಸ್ಥಭೂಮಿಯಲ್ಲಿ ನೆಲೆಸಿದೆ. ನಗರವು ಉತ್ತರ ಪ್ರದೇಶದ ವಿಸ್ತಾರವಾದ ತರಾಯ್ ‌ ಮೈದಾನ ಪ್ರದೇಶಗಳ ನೈಋತ್ಯ ದಿಕ್ಕಿನಲ್ಲಿರುವ ಕಾರಣ ಉತ್ತರದಲ್ಲಿ ನೈಸರ್ಗಿಕವಾಗಿಯೇ ಇಳಿಜಾರಿನಿಂದ ಕೂಡಿದೆ. ನಗರವು ದಕ್ಷಿಣ ದಿಕ್ಕಿನಲ್ಲಿ ಏರುಮುಖವಾದ ಮೇಲ್ಮೈ ಪ್ರದೇಶವನ್ನು ಹೊಂದಿದೆ. ಇಲ್ಲಿಯ ಜಮೀನು ನಿಂಬೆತಳಿಯ ಹಣ್ಣುಗಳನ್ನು ಬೆಳೆಯಲು ಸೂಕ್ತವಾಗಿದೆ. ಇಲ್ಲಿ ಬೆಳೆಯುವ ಬೆಳೆಗಳೆಂದರೆ ಗೋಧಿ, ದ್ವಿದಳ ಧಾನ್ಯಗಳು, ಅವರೆಕಾಳು, ಎಣ್ಣೆಬೀಜಗಳು ಮುಂತಾದುವು. ನೀರಾವರಿಯ ಎಲ್ಲಾ ಉದ್ದೇಶಗಳಿಗೆ ಈ ಪ್ರದೇಶವು ಮಳೆ ಮಾರುತಗಳ ಮೇಲೆ ವಿಪರೀತ ಅವಲಂಬಿತವಾಗಿದೆ. ಮಹತ್ವಾಕಾಂಕ್ಷೆಯ ಕಾಲುವೆ/ನಾಲೆ ಯೋಜನೆಯಡಿಯಲ್ಲಿ (ರಾಜ್‌ಘಾಟ್‌ ಕಾಲುವೆ/ನಾಲೆ), ಸರ್ಕಾರವು ಝಾನ್ಸಿ, ಲಲಿತಪುರ ಹಾಗೂ ಮಧ್ಯಪ್ರದೇಶದ ಕೆಲ ಪ್ರದೇಶಗಳಲ್ಲಿನ ನೀರಾವರಿಗಾಗಿ ಕಾಲುವೆ/ನಾಲೆಗಳ ಜಾಲವನ್ನು ನಿರ್ಮಿಸುತ್ತಿದೆ.

ಕಲ್ಲುಬಂಡೆಗಳಿಂದ ಕೂಡಿರುವ ಪ್ರಸ್ಥಭೂಮಿಯಾದ ಕಾರಣ, ಝಾನ್ಸಿಯು ಅತಿರೇಕದ ತಾಪಮಾನಗಳನ್ನು ಹೊಂದಿರುತ್ತದೆ. ಚಳಿಗಾಲವು ಅಕ್ಟೋಬರ್‌ನಲ್ಲಿ ‌ನೈಋತ್ಯ ಮಾರುತವು ತೆರಳಿದ ನಂತರ ಆರಂಭವಾಗಿ (ಝಾನ್ಸಿಯು ಈಶಾನ್ಯ ಮಾರುತದಿಂದ ಯಾವುದೇ ಮಳೆಯನ್ನು ಪಡೆಯುವುದಿಲ್ಲ) ಡಿಸೆಂಬರ್‌ ಮಧ್ಯದಲ್ಲಿ ತೀವ್ರ ಚಳಿಗಾಲವನ್ನು ಹೊಂದಿರುತ್ತದೆ. ಇಲ್ಲಿನ ಉಷ್ಣತೆಯು ಸಾಧಾರಣವಾಗಿ ಕನಿಷ್ಟ ಸರಾಸರಿ ೪ ಡಿಗ್ರಿಗಳಿಂದ ಗರಿಷ್ಟ ೨೧ ಡಿಗ್ರಿಗಳವರೆಗೂ ಇರುತ್ತದೆ. ಫೆಬ್ರವರಿಯ ಕೊನೆಯ ಹೊತ್ತಿಗೆ ಬರುವ ವಸಂತಕಾಲವು ಅಲ್ಪಕಾಲೀನ ಸ್ಥಿತ್ಯಂತರವನ್ನು ಹೊಂದಿರುತ್ತದೆ. ಏಪ್ರಿಲ್‌ನಲ್ಲಿ ಬೇಸಿಗೆಯು ಆರಂಭವಾಗುತ್ತದೆ ಹಾಗೂ ಮೇನಲ್ಲಿ ಬೇಸಿಗೆಯ ತಾಪಮಾನವು ೪೭ ಡಿಗ್ರಿಗಳಷ್ಟು ತೀವ್ರತೆಯನ್ನು ಮುಟ್ಟಬಹುದು. ಮಳೆಗಾಲವು ಸಾಧಾರಣವಾಗಿ ಜೂನ್‌ ಮೂರನೇ ವಾರದ ಹೊತ್ತಿಗೆ (ಇದು ವರ್ಷದಿಂದ ವರ್ಷಕ್ಕೆ ವ್ಯತ್ಯಾಸಗೊಳ್ಳುತ್ತಿರುತ್ತದಾದರೂ) ಆರಂಭಗೊಳ್ಳುತ್ತದೆ. ಮಾರುತಪ್ರೇರಿತ ಮಳೆಯು ಸೆಪ್ಟೆಂಬರ್‌ನಲ್ಲಿ ಸಾವಕಾಶವಾಗಿ ಕಡಿಮೆಯಾಗುತ್ತಾ ಬಂದು ಸೆಪ್ಟೆಂಬರ್‌ ಕೊನೆಯ ವಾರದ ಹೊತ್ತಿಗೆ ಕೊನೆಗೊಳ್ಳುತ್ತದೆ. ಮಳೆಗಾಲದ ಅವಧಿಯಲ್ಲಿ, ಸರಾಸರಿ ದೈನಿಕ ಗರಿಷ್ಟ ತಾಪಮಾನವು ಅಧಿಕ ತೇವಾಂಶದೊಂದಿಗೆ ೩೬ ಡಿಗ್ರಿಗಳ ಆಸುಪಾಸಿನಲ್ಲಿರುತ್ತದೆ. ಈ ನಗರದಲ್ಲಿ ಬೀಳುವ ಮಳೆಯ ಸರಾಸರಿ ಪ್ರಮಾಣ ಪ್ರತಿವರ್ಷಕ್ಕೆ ೯೦೦ mmಗಳಷ್ಟಿದ್ದು, ನೈಋತ್ಯ ಮಾರುತದ ಮೂರುವರೆ ತಿಂಗಳುಗಳಲ್ಲೇ ಬಹುಮಟ್ಟಿಗೆ ಇಷ್ಟೂ ಪ್ರಮಾಣದ ಮಳೆಯಾಗಿರುತ್ತದೆ.

ಚಿಕಿತ್ಸಾಲಯಗಳು/ಆಸ್ಪತ್ರೆಗಳು[ಬದಲಾಯಿಸಿ]

ಬುಂಡೇಲಖಂಡ ಸೀಮೆಗೆ ಝಾನ್ಸಿಯು ವೈದ್ಯಕೀಯ ಚಟುವಟಿಕೆಗಳ ಕೇಂದ್ರವಾಗಿದೆ. ಈ ನಗರವು ಪ್ರಸ್ತುತ ನವೀಕೃತಗೊಳ್ಳುತ್ತಿರುವ ವೈದ್ಯಕೀಯ ಮಹಾವಿದ್ಯಾಲಯವನ್ನು ಹೊಂದಿದೆ. ಇಲ್ಲಿನ ಜಿಲ್ಲಾ ಆಸ್ಪತ್ರೆಯು ರೋಗಿಗಳನ್ನು ಉಪಚರಿಸಲು ಅನೇಕ ನೂತನ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿನ ಜಿಲ್ಲಾ ಆಸ್ಪತ್ರೆಯು ರೋಗಿಗಳನ್ನು ಉಪಚರಿಸಲು ಅನೇಕ ನೂತನ ಸೌಲಭ್ಯಗಳನ್ನು ಹೊಂದಿದೆ.

ಸರ್ಕಾರೀ

  • ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಮಹಾವಿದ್ಯಾಲಯ (ಕಾನ್‌ಪುರ್‌ ರಸ್ತೆ ),
  • ಜಿಲ್ಲೆ (ಪೌರ) ಆಸ್ಪತ್ರೆ (ನಗರ),
  • ಬುಂಡೇಲಖಂಡ ಆಯುರ್ವೇದೀಯ ಮಹಾವಿದ್ಯಾಲಯ (ಗ್ವಾಲಿಯರ್‌ ರಸ್ತೆ),
  • ಸೇನಾ ಆಸ್ಪತ್ರೆ (ದಂಡುಪ್ರದೇಶ ),
  • ರೈಲ್ವೇ ಆಸ್ಪತ್ರೆ (ರೈಲು ನಿಲ್ದಾಣದ ಸಮೀಪ),
  • ದಂಡುಪ್ರದೇಶ ಜನರಲ್‌ ಆಸ್ಪತ್ರೆ (ಸಾದರ್‌ ಬಜಾರ್‌ )

ಖಾಸಗಿ:

  • ಅಗರ್ವಾಲ್‌ ಹೆರಿಗೆ ಆಸ್ಪತ್ರೆ & ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಸಾದರ್‌ ಬಜಾರ್‌ )
  • ಆನಂದ್‌ ಆಸ್ಪತ್ರೆ & ಮೂತ್ರಶಾಸ್ತ್ರ ಸಂಶೋಧನಾ ಕೇಂದ್ರ (ವೈದ್ಯಕೀಯ ಮಹಾವಿದ್ಯಾಲಯದ ಎದುರು, ಕರ್ಗುವನ್‌ ರಸ್ತೆ )
  • ಸುಧಾ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ವೈದ್ಯಕೀಯ ಮಹಾವಿದ್ಯಾಲಯದ ಸಮೀಪ, ಕಾನ್‌ಪುರ್‌ ರಸ್ತೆ ))
  • ಶಿವ್‌ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಮಿಷನ್‌ ಕಾಂಪೌಂಡ್‌/ಆವರಣ ),
  • ಲೈಫ್‌ಲೈನ್‌ ಆಸ್ಪತ್ರೆ (ಕಾನ್‌ಪುರ್‌ ರಸ್ತೆ),
  • ಹ್ಯಾಪಿ ಫ್ಯಾಮಿಲಿ ಆಸ್ಪತ್ರೆ (ಹೋಟೆಲ್‌ ಸೀತಾ ಹಿಂದೆ, ಸಿವಿಲ್‌ ಲೈನ್ಸ್‌ ಪ್ರದೇಶ),
  • ಗುಪ್ತಾ ಮೆಡಿಸ್ಕ್ಯಾನ್‌ ಸೆಂಟರ್‌ (ಸಾದರ್‌ ಬಜಾರ್‌ )
  • St. ಜ್ಯೂಡ್‌ ಆಸ್ಪತ್ರೆ (ಜರ್ಮನಿ ) (ಸಿಪ್ರಿ ಬಜಾರ್‌),
  • ಕಪೂರ್‌ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಎಲೈಟ್‌ ಚಿತ್ರಮಂದಿರದ ಸಮೀಪ),
  • ಆರೋಗ್ಯ ಸದನ (ಆವಾಸ್‌ ವಿಕಾಸ್‌ ಕಾಲೊನಿ),
  • ಪ್ರಕಾಶ್‌ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಆವಾಸ್‌ ವಿಕಾಸ್‌ ಕಾಲೊನಿ),
  • ನಿರ್ಮಲ್‌ ಆಸ್ಪತ್ರೆ (ವೈದ್ಯಕೀಯ ಮಹಾವಿದ್ಯಾಲಯದ ಸಮೀಪ),
  • ಚಾವ್ಲಾ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಸಿಪ್ರಿ ಬಜಾರ್‌),
  • ವಿನಾಯಕ್‌ ಆಸ್ಪತ್ರೆ, ಯಾತ್ರಿಕ್‌ ಹೋಟೆಲ್‌ ಹಿಂಭಾಗ (ಎಲೈಟ್‌ ವೃತ್ತ )
  • LRM ಜೈನ್‌ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಸಿವಿಲ್‌ ಲೈನ್ಸ್‌ ಪ್ರದೇಶ),
  • ಕ್ರಿಶ್ಚಿಯನ್‌/ಕ್ರೈಸ್ತ ಆಸ್ಪತ್ರೆ (ಝೋಕಾನ್‌ ಬಾಘ್‌/ಗ್‌‌)
  • ಸಂಜೀವನಿ ಆಸ್ಪತ್ರೆ (ಕಾನ್‌ಪುರ್‌ ರಸ್ತೆ)
  • ರಾಘವೇಂದ್ರ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಕಾನ್‌ಪುರ್‌ ರಸ್ತೆ)
  • ಶೀಲಾ ಜೈನ್‌ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಕಾನ್‌ಪುರ್‌ ರಸ್ತೆ)
  • ನಿರ್ಮಲ್‌ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಕಾನ್‌ಪುರ್‌ ರಸ್ತೆ)
  • ಸುದರ್ಶನ್‌ ಜೈನ್‌ ನರ್ಸಿಂಗ್‌ ಹೋಮ್‌/ಶುಶ್ರೂಷಾ ಆಸ್ಪತ್ರೆ (ಪಂಚ್‌ಕುಯಿಯಾನ್‌ ರಸ್ತೆ)
  • Dr. ಜಿಯಾಲಾಲ್‌ ಮೆಮೋರಿಯಲ್‌ ಕಣ್ಣಿನ ಆಸ್ಪತ್ರೆ (ರಾಘವೇಂದ್ರ ಆಸ್ಪತ್ರೆಯ ಪಕ್ಕದ ವೈದ್ಯಕೀಯ ಸೇವೆ) ಇದು ISO ಪ್ರಮಾಣಿತ ಆಸ್ಪತ್ರೆ

ದಂತ ಚಿಕಿತ್ಸಾ ಕೇಂದ್ರಗಳು:

  • ಗುಬ್ರೆಲ್ಲೆ ದಂತ ಚಿಕಿತ್ಸಾಕೇಂದ್ರ, T.B. ಆಸ್ಪತ್ರೆಯ ಮುಂದೆ, ಜೀವನ್‌ ಷಾ ತಿರಾಹಾ, ಗ್ವಾಲಿಯರ್‌ ರಸ್ತೆ, ಝಾನ್ಸಿ.

ಶೈಕ್ಷಣಿಕ ಸಂಸ್ಥೆಗಳು[ಬದಲಾಯಿಸಿ]

ಝಾನ್ಸಿಯು ಕಾಲಕ್ರಮೇಣ ಭಾರತದ ಶೈಕ್ಷಣಿಕ ಕೇಂದ್ರವೆನಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ. ರಾಷ್ಟ್ರದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ತಮ್ಮ ಉನ್ನತ ಶಿಕ್ಷಣಕ್ಕಾಗಿ ಬರುತ್ತಾರೆ. ಝಾನ್ಸಿ'ಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಲಭ್ಯವಿರುವ ಅನೇಕ ವಿಶಿಷ್ಟ ಕೋರ್ಸ್‌ಗಳನ್ನು ಕಲಿಯಲು ವಿದೇಶೀ ವಿದ್ಯಾರ್ಥಿಗಳು ಕೂಡಾ ಬರುತ್ತಾರೆ.

  • ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ
  • ಸರ್ಕಾರಿ ಮಹಾವಿದ್ಯಾಲಯಗಳು
    • ಬುಂಡೇಲಖಂಡ ವಿಶ್ವವಿದ್ಯಾಲಯ, ಮೆಡಿಕಲ್‌ ರಸ್ತೆ
    • BBC ಮಹಾವಿದ್ಯಾಲಯ, ಗೋವಿಂದ್ ಚೌರಾಹ ಹಿಂದೆ
    • BKD ಮಹಾವಿದ್ಯಾಲಯ, ಎಲೈಟ್‌ ರಸ್ತೆ, BKD ಚೌರಾಹ
    • ಸರ್ಕಾರಿ ಇಂಟರ್‌ಕಾಲೇಜು (GIC), ಗ್ವಾಲಿಯರ್‌ ರಸ್ತೆ, ಝಾನ್ಸಿ
    • ಸೂರಜ್‌ ಪ್ರಸಾದ್‌ ಮಹಾವಿದ್ಯಾಲಯ, ಸಾದರ್‌ ಬಜಾರ್‌
    • ಬಾಲಕಿಯರ ಇಂಟರ್‌ಕಾಲೇಜು(GIC), ಮಿಷನ್‌ ಕಾಂಪೌಂಡ್‌/ಆವರಣ
  • ಸೇನಾ ಶಾಲೆಗಳು
    • ಸೇನಾ ಶಾಲೆ, ದಂಡುಪ್ರದೇಶ, ಝಾನ್ಸಿ
  • ಖಾಸಗೀ ಶಾಲೆಗಳು
    • ಬಾಲಭಾರತಿ ಪಬ್ಲಿಕ್‌ ಶಾಲೆ, ಇಸಾಯ್‌ ಟೋಲಾ, ಪ್ರೇಂನಗರ್‌, ಝಾನ್ಸಿ
    • ಶ್ರೀ ರಘುರಾಜ್‌ ಸಿಂಗ್‌ ಇಂಟರ್‌ಕಾಲೇಜು, ಡತಿಯಾ ಗೇಟ್‌ ಹೊರಗೆ, ಝಾನ್ಸಿ
    • ವೀರಾಂಗನಾ ಝಲ್ಕರಿಬಾಯಿ ಇಂಟರ್‌ಕಾಲೇಜು, ಖುಷಿಪುರ, ಝಾನ್ಸಿ
    • ಗ್ಯಾನ್‌ ಸ್ಥಲಿ ಪಬ್ಲಿಕ್‌ ಶಾಲೆ, ಶಿವಾಜಿ ನಗರ, ಝಾನ್ಸಿ
    • ಮಹಾತ್ಮ ಹನ್ಸ್‌ರಾಜ್‌ ಮಾಡರ್ನ್ ಶಾಲೆ, ಶಿವಪುರಿ ರಸ್ತೆ, ಝಾನ್ಸಿ
    • ಷೀರ್‌ವುಡ್‌ ಮಹಾವಿದ್ಯಾಲಯ, ಖತಿ ಬಾಬಾ, ಝಾನ್ಸಿ
    • ದ ವುಡ್ಸ್‌ ಹೆರಿಟೇಜ್‌ ಸ್ಕೂಲ್‌, ಝಾನ್ಸಿ
    • ರಾಣಿ ಲಕ್ಷ್ಮೀಬಾಯಿ ಪಬ್ಲಿಕ್‌ ಶಾಲೆ, ಝಾನ್ಸಿ Archived 2010-03-24 ವೇಬ್ಯಾಕ್ ಮೆಷಿನ್ ನಲ್ಲಿ.
    • ಕ್ರೈಸ್ಟ್‌ ದ ಕಿಂಗ್‌ ಮಹಾವಿದ್ಯಾಲಯ (ಬಾಲಕರಿಗೆ ಮಾತ್ರ)
    • ಸಂತ ಮಾರ್ಕ್ಸ್‌ ಮಹಾವಿದ್ಯಾಲಯ
    • St. ಕ್ಸೇವಿಯರ್ಸ್‌ ಮಹಾವಿದ್ಯಾಲಯ, B.H.E.L ಖೈಲಾರ್‌ (ನಗರ ಕೇಂದ್ರದಿಂದ ೧೪ KM ದೂರದಲ್ಲಿದೆ)
    • ಬ್ಲೂ ಬೆಲ್ಸ್‌ ಶಾಲೆ, ರಾಜ್‌ಗಢ
    • ಸಂತ ಫ್ರಾನ್ಸಿಸ್‌ ಶಾಲೆ (ಬಾಲಕಿಯರಿಗೆ ಮಾತ್ರ )
    • ಸನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ , R.T.O. ಕಛೇರಿ ಹತ್ತಿರ ಕಾನ್‌ಪುರ್‌ ರಸ್ತೆ, ಝಾನ್ಸಿ.
    • ಸರಸ್ವತಿ ವಿದ್ಯಾ ಮಂದಿರ, ಬಾಲಾಜಿ ರಸ್ತೆ, ಝಾನ್ಸಿ.
  • ಅರೆಸರಕಾರಿ ಮಹಾವಿದ್ಯಾಲಯಗಳು
    • ಶ್ರೀಲಕ್ಷ್ಮಿ ವ್ಯಾಯಾಮ್‌ ಮಂದಿರ್‌ ಇಂಟರ್‌ಕಾಲೇಜು, ಝಾನ್ಸಿ

ದೂರವಾಣಿ ಕಂಪೆನಿಗಳು[ಬದಲಾಯಿಸಿ]

ಸ್ಥಿರ ಹಾಗೂ ಸ್ಥಿರ ನಿಸ್ತಂತು ದೂರವಾಣಿ ವ್ಯವಸ್ಥೆಯ ನಾಲ್ಕು ಸೇವಾದಾರರು ಇಲ್ಲಿ ಲಭ್ಯವಿದ್ದಾರೆ.

ಮೇಲೆ ನಮೂದಿಸಲಾಗಿರುವ ಎಲ್ಲಾ ಕಂಪೆನಿಗಳೂ ಬ್ರಾಂಡ್‌ಬ್ಯಾಂಡ್‌ ಅಂತರ್ಜಾಲ ಸೇವಾ ಪೂರೈಕೆದಾರರು ಕೂಡಾ.

ಝಾನ್ಸಿ ನಗರದ ಸಂಚಾರಿ ದೂರವಾಣಿ ವ್ಯವಸ್ಥೆಯ ಸೇವಾದಾರರುಗಳ ಪಟ್ಟಿ ಕೆಳಗೆ ನೀಡಲಾಗಿದೆ.

ರೇಡಿಯೋ ಕೇಂದ್ರಗಳು[ಬದಲಾಯಿಸಿ]

ನಗರವು ಎರಡು FM ರೇಡಿಯೋ ಕೇಂದ್ರಗಳನ್ನು ಹೊಂದಿದೆ.

ಎರಡು ಇತರೆ ಖಾಸಗಿ ರೇಡಿಯೋ ಕೇಂದ್ರಗಳ ಸದ್ಯದಲ್ಲೇ ಆರಂಭವಾಗಲಿವೆ.

ಪ್ರವಾಸೋದ್ಯಮ[ಬದಲಾಯಿಸಿ]

ಪ್ರಸಿದ್ಧ ಸ್ಥಳಗಳು[ಬದಲಾಯಿಸಿ]

  • ಝಾನ್ಸಿ ಕೋಟೆ
  • ರಾಣಿ ಮಹಲ್‌ (ರಾಣಿಯ ಅರಮನೆ)
  • U.P. Govt. ವಸ್ತು ಸಂಗ್ರಹಾಲಯ
  • ಮಹಾಲಕ್ಷ್ಮಿ ದೇವಾಲಯ
  • ಲೆಹೆರ್‌ ಕಿ ದೇವಿ ದೇವಾಲಯ
  • ಪಂಚ್‌ ಕುಯಿಯಾನ್‌ ದೇವಾಲಯ - ಸಾಂಪ್ರದಾಯಿಕ ದೇವಾಲಯ, ಲಕ್ಷ್ಮೀಬಾಯಿ ಇಲ್ಲಿ ಪೂಜೆ ಮಾಡುತ್ತಿದ್ದಳು
  • ಗಣೇಶ ಮಂದಿರ
  • ಸಿದ್ದೇಶ್ವರ ದೇವಾಲಯ (GIC ಇಂಟರ್‌ಕಾಲೇಜಿನ ಸಮೀಪ) - ಪಂಡಿತ್‌ ರಘುನಾಥ್‌ ವಿನಾಯಕ್‌ ಧೂಲೆಕರ್‌ ಕಟ್ಟಿಸಿದ್ದು
  • ಪಂಚತಂತ್ರ ಉದ್ಯಾನ (ಜನಪ್ರಿಯ ಪ್ರೇಕ್ಷಣೀಯ ಸ್ಥಳ)
  • ದಂಡುಪ್ರದೇಶದಲ್ಲಿರುವ ಸಾರ್ವಜನಿಕ ಉದ್ಯಾನದ ಭೇಟಿ ಅಪೇಕ್ಷಣೀಯ
  • "ಶೌರ್ಯ ಸ್ತಂಭ" (ದೇಶದಲ್ಲೇ ಈ ರೀತಿಯ ಪ್ರಥಮ ಸ್ಮಾರಕ) ಸ್ವತಂತ್ರ ಭಾರತದ ೨೧ ಪರಮವೀರ ಚಕ್ರ ಪಡೆದವರ ಸ್ಮಾರಕ. ದೇಶಭಕ್ತರಿಗೆ ಆಸಕ್ತಿಯ ಸ್ಥಳ. (ಭೇಟಿ ನೀಡಬೇಕೆಂದಿರುವವರು ೦೯೪೧೫೦೫೯೮೭೩ ಸಂಖ್ಯೆಗೆ ಕರೆ ನೀಡಬಹುದು)

ಝಾನ್ಸಿಯ ಪ್ರೇಂನಗರ್‌ನ ಇಸಾಯ್‌ ಟೋಲಾದ ಖತಿಬಾಬಾನ, ಬಾಲಭಾರತಿ ಪಬ್ಲಿಕ್‌ ಶಾಲೆಯಲ್ಲಿ ಸ್ಥಾಪಿಸಲಾಗಿದೆ.

ವಿಹಾರ ಸ್ಥಳಗಳು[ಬದಲಾಯಿಸಿ]

  • ಸುಖ್‌ಮಾ-ದುಖ್‌ಮಾ ಅಣೆಕಟ್ಟು : ಬಬೀನಾ ಪಟ್ಟಣದ ಹತ್ತಿರದ ಹಳೆಯ, ಉದ್ದದ ಹಾಗೂ ಸುಂದರ ಅಣೆಕಟ್ಟು, ಝಾನ್ಸಿಯಿಂದ ಸರಿಸುಮಾರು ೪೫ km ದೂರವಿರುವ ಇದನ್ನು ಬೇತ್ವಾ ನದಿಗೆ ಕಟ್ಟಲಾಗಿದೆ. ಮುಂಗಾರಿನ ನಂತರದ ಅವಧಿಯಲ್ಲಿ (ಚಳಿಗಾಲ) ಸುಂದರ ದೃಶ್ಯ.
  • ಮಾತಾತಿಲ ಅಣೆಕಟ್ಟು : ಝಾನ್ಸಿ ನಗರದಿಂದ ಅಂದಾಜು ೫೫ km ದಕ್ಷಿಣಕ್ಕಿರುವ ಇದು ಸುಂದರ ಪಿಕ್‌ನಿಕ್‌ ತಾಣ. ಈ ಅಣೆಕಟ್ಟನ್ನು ಬೇತ್ವಾ ನದಿಗೆ ಕಟ್ಟಲಾಗಿದೆ. ಅಣೆಕಟ್ಟಿನ ಪ್ರದೇಶದ ಸಮೀಪ ಸಸ್ಯಶಾಸ್ತ್ರೀಯ ಉದ್ಯಾನವಿದೆ.
  • ದೇವ್‌ಘರ್‌ : ಝಾನ್ಸಿ ನಗರದಿಂದ ೧೨೩ km ದೂರವಿರುವ ಇದು ಲಲಿತಪುರ ಪಟ್ಟಣಕ್ಕೆ ಸಮೀಪವಿದೆ. ಬೇತ್ವಾ ನದಿ ದಂಡೆಯಲ್ಲಿರುವ ಈ ನಗರದಲ್ಲಿ ಗುಪ್ತರ ಕಾಲದ ವಿಷ್ಣು ದೇವಾಲಯ ಹಾಗೂ ಇನ್ನೂ ಅನೇಕ ಹಳೆಯ ಹಾಗೂ ಸುಂದರ ಜೈನ ದೇವಾಲಯಗಳ ಅವಶೇಷಗಳಿವೆ.
  • ಓರ್ಚ್ಛಾ : ಝಾನ್ಸಿ-ಖಜುರಾಹೋ ರಸ್ತೆಯಲ್ಲಿ ಝಾನ್ಸಿ ನಗರದಿಂದ ೧೮ km ದೂರದಲ್ಲಿರುವ ಸಣ್ಣ ಮಧ್ಯಯುಗದ ನಗರ. ರಾಮದೇವರ ದೇವಾಲಯಕ್ಕೆ ಇದು ಪ್ರಸಿದ್ಧವಾಗಿದೆ.
  • ಖಜುರಾಹೋ : ಝಾನ್ಸಿ ನಗರದಿಂದ ೧೭೮ km ದೂರದಲ್ಲಿದೆ. ಝಾನ್ಸಿ ನಗರದ ರೈಲು ನಿಲ್ದಾಣದಿಂದ ಖಜುರಾಹೋವರೆಗೆ ಬೆಳಗಿನ ವೇಳೆಯಲ್ಲಿ ಡೀಲಕ್ಸ್‌ ಬಸ್‌ಗಳ ಸೇವೆಯಿದೆ. ಟ್ಯಾಕ್ಸಿಗಳು ಸಹಾ ಲಭ್ಯವಿರುತ್ತವೆ. ಖಜುರಾಹೋದಿಂದ ೩೨ km ದೂರದಲ್ಲಿರುವ ಪನ್ನಾ ರಾಷ್ಟ್ರೀಯ ಉದ್ಯಾನ ಹಾಗೂ ಸಮೀಪವಿರುವ ಕೆಲ ಜಲಪಾತಗಳನ್ನು ನೋಡಬಹುದು.
  • ಡಾತಿಯಾ : ಝಾನ್ಸಿ-ಗ್ವಾಲಿಯರ್‌ -ಆಗ್ರಾ-ದೆಹಲಿ ರಸ್ತೆಯಲ್ಲಿ ಝಾನ್ಸಿ ನಗರದಿಂದ ೨೮ km ದೂರದಲ್ಲಿದೆ. ಶ್ರೀ ಪೀತಾಂಬ್ರ ದೇವಿ ದೇವಾಲಯ ಹಾಗೂ ರಾಜಾ ಬೀರ್‌ ಸಿಂಗ್‌ ಜು ದೇವ್‌ ಕಟ್ಟಿಸಿದ ಏಳು ಅಂತಸ್ತಿನ ಅರಮನೆಗಳಿಗೆ ಪ್ರಸಿದ್ಧವಾಗಿದೆ.
  • ಶಿವ್‌ಪುರಿ : ಝಾನ್ಸಿ ನಗರದಿಂದ ೧೦೧ km ದೂರದಲ್ಲಿದೆ. ಇದು ಗ್ವಾಲಿಯರ್‌ನ ಸಿಂಧ್ಯಾ ರಾಜರುಗಳ ಬೇಸಿಗೆಯ ರಾಜಧಾನಿಯಾಗಿತ್ತು. ಸಿಂಧ್ಯಾರಾಜರುಗಳು ಕಟ್ಟಿಸಿದ ಅಮೃತಶಿಲೆಯ ಛಾತ್ರಿಗಳಿಗೆ (ಸ್ಮಾರಕ ಸಮಾಧಿಗಳು) ಪ್ರಸಿದ್ಧ. ವೈವಿಧ್ಯಮಯ ಪ್ರಾಣಿಗಳು ವಾಸಿಸುವ ಸುಂದರ ಮಾಧವ್‌ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿರುವ ಮೊಸಳೆಗಳಿರುವ ಬೃಹತ್‌ ಸುಂದರ ಸರೋವರಕ್ಕೆ ಸಹಾ ಭೇಟಿ ನೀಡಬಹುದು.
  • ಉನ್ನಾವೋ/ಪಹುಜ್‌: ಝಾನ್ಸಿ ನಗರದ ಉನ್ನಾವೋ ಗೇಟ್‌ನಿಂದ ೧೮ km ದೂರದಲ್ಲಿದೆ. ಇದು ದೇವಾಲಯ ಹಾಗೂ ಪಹುಜ್‌ ನದಿಗಳಿಗಾಗಿ ಪ್ರಸಿದ್ಧವಾಗಿದೆ.
  • ಪರಿಚ್ಛಾ ಅಣೆಕಟ್ಟು : ಕಾನ್‌ಪುರದ ಕಡೆಗೆ ಝಾನ್ಸಿ ನಗರದಿಂದ ೨೦ km ದೂರದಲ್ಲಿದೆ. ಇದೊಂದು ಸುಂದರ ಸ್ಥಳ. ಅಣೆಕಟ್ಟನ್ನು ಬೇತ್ವಾ ನದಿಗೆ ಕಟ್ಟಲಾಗಿದೆ

ಕಾಲೊನಿ/ಮೊಹಲ್ಲ[ಬದಲಾಯಿಸಿ]

  • ಶಿವ್‌ ಪರಿವಾರ್‌ ಫೇಸ್‌ ೧ ರಿಂದ ೬ K K G ರಿಯಲ್‌ ಎಸ್ಟೇಟ್‌ ಸಂಸ್ಥೆಯಿಂದ ನಿರ್ಮಿತವಾಗಿವೆ (ಉನ್ನಾವೋ ಗೇಟ್, ಅಲಿಗೋಲ್‌, ಗರಿಯಾಗಾಂವ್‌, ಡಾಲಿ, ಸಿಜ್ವಾಹಾ etcಗಳಲ್ಲಿರುವ ಕಾಲೊನಿಗಳು).
  • ಕೈಲಾಷ್‌ ರೆಸಿಡೆನ್ಸಿ, ಮಹಾಕಾಳಿ ವಿದ್ಯಾಪೀಠ ರಸ್ತೆ , ಸಮೀಪ ನವೀನ ಗಲ್ಲಾ ಮಂಡಿ, ಝಾನ್ಸಿ
  • ಓಂ ಶಾಂತಿ ನಗರ, ಸಮೀಪ ಕಾಳಿ ಮಂದಿರ, ಲಕ್ಷ್ಮಿ ಗೇಟ್‌ನ ಹೊರಭಾಗದಲ್ಲಿ, ಝಾನ್ಸಿ
  • ಸುಂದರ್‌ ವಿಹಾರ ಕಾಲೊನಿ/ಮೊಹಲ್ಲ, ಸ್ಟೇಷನ್‌ ರಸ್ತೆ, ಸಮೀಪ DIG ಬಂಗಲೆ, ಝಾನ್ಸಿ
  • ಫ್ರೆಂಡ್ಸ್‌ ಕಾಲೊನಿ/ಮೊಹಲ್ಲ, ಗ್ವಾಲಿಯರ್‌ ರಸ್ತೆ, ಸಮೀಪ ರೈಲ್ವೇ ಕ್ರಾಸಿಂಗ್‌, ಝಾನ್ಸಿ

ಹೋಟೆಲ್‌ಗಳು[ಬದಲಾಯಿಸಿ]

  • ಹೋಟೆಲ್‌ ಪುಜನ್‌, ಸಿವಿಲ್‌ ಲೈನ್ಸ್‌
  • ಹೋಟೆಲ್‌ ಚಂದಾ (೩ ನಕ್ಷತ್ರ )
  • ಹೋಟೆಲ್‌ ಪ್ರಕಾಶ್‌, ಎಲೈಟ್‌ ಚೌಕ್‌
  • ಹೋಟೆಲ್‌ ಸೀತಾ (೩ ನಕ್ಷತ್ರ)
  • ಹೋಟೆಲ್‌ ಶ್ರೀನಾಥ
  • ಹೋಟೆಲ್‌ ಜೈಸ್ವಾಲ್‌ ಟವರ್‌ (೩ ನಕ್ಷತ್ರ )

ಚಿತ್ರಮಂದಿರಗಳು[ಬದಲಾಯಿಸಿ]

  • ಭೂಷಣ್‌
  • ಡಮ್ರು
  • ಎಲೈಟ್‌
  • ಖಿಲೋನಾ
  • ಕೃಷ್ಣ
  • ಲಕ್ಷ್ಮಿ
  • ನಂದಿನಿ
  • ನಟರಾಜ
  • ಶ್ಯಾಮ್‌ ಅರಮನೆ

ತೋಟಗಳು & ಉದ್ಯಾನವನಗಳು[ಬದಲಾಯಿಸಿ]

  • ರಾಣಿ ಲಕ್ಷ್ಮಿ ಉದ್ಯಾನ
  • ನಾರಾಯಣ್‌ ಬಾಗ್‌
  • ಕಾರ್ಗಿಲ್‌ ಷಹೀದ್‌ ಉದ್ಯಾನ
  • ನೆಹರೂ ಉದ್ಯಾನ
  • ಪಂಚತಂತ್ರ ಉದ್ಯಾನ
  • ಇಂದ್ರ ಉದ್ಯಾನ
  • ಸಾರ್ವಜನಿಕ ಉದ್ಯಾನ/ಪಬ್ಲಿಕ್‌ ಪಾರ್ಕ್‌

ಝಾನ್ಸಿಗೆ ಸಂಬಂಧಿಸಿದ ಉನ್ನತ ವ್ಯಕ್ತಿಗಳು[ಬದಲಾಯಿಸಿ]

ಆಕರಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]


"https://kn.wikipedia.org/w/index.php?title=ಝಾನ್ಸಿ&oldid=1189977" ಇಂದ ಪಡೆಯಲ್ಪಟ್ಟಿದೆ