ಜಗನ್ನಾಥದಾಸರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

[ಬದಲಾಯಿಸಿ] ಕಾಲ

೧೭೨೮-೧೮೦೯

[ಬದಲಾಯಿಸಿ] ಜೀವನ

ಜಗನ್ನಾಥದಾಸರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಗವಟ್ಟಿಯಲ್ಲಿ ,೧೭೨೮ರಲ್ಲಿ (ಕೀಲಕನಾಮ ಸಂವತ್ಸರ - ಶ್ರಾವಣ ಶುದ್ಧ ಬಿದಿಗೆ) ಜನಿಸಿದರು. ಮಾಧ್ವ ಬ್ರಾಹ್ಮಣ ಮನೆತನ ಇವರದು. ತಂದೆ ನರಸಿಂಹಾಚಾರ್ಯರು, ತಾಯಿಯ ಹೆಸರು ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ. ತಂದೆತಾಯಿಗಳ ಒಬ್ಬನೇ ಮಗನಾಗಿದ್ದು, ಗೃಹಸ್ಥಾಶ್ರಮ ಸ್ವೀಕರಿಸಿರಲಿಲ್ಲವೆಂದು ತಿಳಿದುಬಂದಿದೆ. ವರದೇಂದ್ರ ತೀರ್ಥರು ಮತ್ತು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದ್ದರೆಂದು ತಿಳಿದುಬಂದಿದೆ. ಜಗನ್ನಾಥ ವಿಠಲ ಎಂಬುದು ಜಗನ್ನಾಥದಾಸರ ಅಂಕಿತ. ಚಂದ್ರಭಾಗಾ ನದಿಯಲ್ಲಿ ದೊರೆತ ಫಲಕದಿಂದ ಈ ಅಂಕಿತ ದೊರಕಿತೆಂದು ಹೇಳಲಾಗುತ್ತದೆ. ಮಾನ್ವಿಯಲ್ಲಿ ಜಗನ್ನಾಥದಾಸರ ಬೃಂದಾವನವನವಿದೆ.

[ಬದಲಾಯಿಸಿ] ಶ್ರೀ ಗುರು ಭ್ಯೋನಮಃ

ಭಂಧನವ ಪರಿಹರಿಸೊ ಭವವಿದೂರಾ /ಪ/

ಕಂದರ್ಪ ಜನಕ ಕಾರುಣ್ಯದಲಿ ಭಕ್ತರಾ /ಅ.ಪ/

ದುಷ್ಱ ಜನಗಳು ಬಲು ಕಷ್ಟ ಪಡಿಸುತಿಹರು
ನಿನಗೆಷ್ಟು ಹೇಳಲಿ ಕೇಳು ಜಿಷ್ಣು ಸಖನೆ
ವೈಶ್ನಿಷ ನಿ ದಯಾದೃಷ್ಟಿಯಿಂದಲಿ ನೋಡಿ ಹೃಷ್ಟನ್ನ ಮಾಡೋ
ಸಂತುಷ್ಟಿ ಯಿಂದಲಿ /೧/

ಹಯಮುಖನೆ ನಿನ್ನವರ ದಯದಿಂದ ಸಲಹುದು
ವೈಯಗಮ್ಯನೆ ಲೊಕತ್ರಯವ ನಿರುತ
ಪ್ರಿಯನೆಂದು ನಿನಗೆ ನಾ ದೈನದಲಿ ಮೊರೆಯಿಡುವೆ
ದಯಾಮಾಡು ಗುರು ಬೇಗ ಜಯಪ್ರದಾಯಕನಾಗಿ /೨/

ಮಿತ ಶೋಕನೆ ಎನ್ನ ಮಾತು ಲಾಲಿಸಿ ನಿನ್ನ ದೂತರನು
ಸಲಹುದು ಪ್ರೀತಿಯಿಂದ ದಾತ ಶ್ರೀ ಗುರು ಜಗನ್ನಾಥ ವಿಠ್ಠಲ
ನಾ ತುತಿಸಬಲ್ಲೆ ವಿಧಾತ್ರಮುಖವಂದ್ಯೆನೆ /೩/

ಽ * ಶ್ರೀ ಕೃಷ್ಣಾರ್ಪಣಮಸ್ತು * ಽ

  • ಹರಿಕಥಾಮೃತಸಾರ
  • ೧೯೪ ಕೀರ್ತನೆಗಳು
  • ೧೯ ತತ್ವ ಸುವ್ವಾಲಿಗಳು
  • ೨ ಉಗಾಭೋಗಗಳು
  • ೩ ಸುಳಾದಿಗಳು
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು