ಚಿಕ್ಕಬಳ್ಳಾಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಚಿಕ್ಕಬಳ್ಳಾಪುರ -
India-locator-map-blank.svg
Red pog.svg
ಚಿಕ್ಕಬಳ್ಳಾಪುರ -
ರಾಜ್ಯ ಕರ್ನಾಟಕ
ನಿರ್ದೇಶಾಂಕಗಳು 13.43° N 77.72° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 562 101
 - +08156
 - KA-40

ಚಿಕ್ಕಬಳ್ಳಾಪುರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲ್ಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎ೦ದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೇ ಹತ್ತಿರ ಇರುವ ನಂದೀ ದೇವಸ್ಥಾನ ಬಹಳ ಪ್ರಾಚೀನ ದೇವಸ್ಥಾನ. ಇಲ್ಲಿ ಶಿವನ ಲಿಂಗಗಳೇರಡು ಇವೆ. ಗಂಗ, ಕದಂಬರಿಗೀಂತ ಹಳೇಯ ಶಿಲಾಶಾಸನಗಳನ್ನು ಇಲ್ಲಿ ನಾವು ಕಾಣಾಬಹುದು. ಅಂಗ್ಲರಲ್ಲಿನ ಪ್ರಮುಖರಾದ ಲಾರ್ಡ ಕಾರ್ನ್ವಾಲಿಸ್ ಸಹ ಇಲ್ಲಿ ಕೆಲವು ದಿನ ಇದ್ದ ಎನ್ನುವ ಶಾಸನಗಳನ್ನು ಕಾಣಬಹುದು. ಇಲ್ಲೀಗೆ ಸಮೀಪ (೨೫ ಕಿ.ಮಿ.) ಇರುವ ಮಾಕಿರೆಡ್ಡಿಪಲ್ಲಿಯಲ್ಲಿ ಮುತಾರಾಯಾಸ್ವಾಮಿ ದೇವಸ್ಥಾನವು ಸಹ ಬಹಳ ಪ್ರಾಚೀನವಾದ ದೇವಸ್ಥಾನ. ಇಲ್ಲಿ ಶ್ರೀರಾಮ ನವಮಿಯ ದಿನ ಬಹಳ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ನ೦ದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತು೦ಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊ೦ದಿದೆ. ಈ ಜಿಲ್ಲೆಯ ಪ್ರಮುಖ ತಾಲ್ಲುಕುಗಳು:

೧. ಬಾಗೇಪಲ್ಲಿ ೨. ಚಿಕ್ಕಬಳ್ಳಾಪುರ ೩. ಚಿ೦ತಾಮಣಿ ೪. ಗೌರಿಬಿದನೂರು ೫. ಗುಡಿಬ೦ಡೆ. ೬.ಶಿಡ್ಲಘಟ್ಟ.

ಚಿಂತಾಮಣಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಕೈವಾರ, ಮುರುಗಮಲ್ಲ, ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ. ಪ್ರತಿ ಭಾನುವಾರ ಚಿಂತಾಮಣಿ ಸಂತೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಜಾನುವಾರುಗಳವರೆಗೆ ಭಾರೀ ವಹಿವಾಟು ನಡೆಯುತ್ತದೆ. ತಾಲೂಕಿನಲ್ಲಿ ಸಾಹಿತ್ಯಪ್ರೇಮ ಅಷ್ಟಾಗಿ ಕಂಡು ಬರದಿದ್ದರೂ ಖ್ಯಾತ ಕವಿ ಬಿ.ಆರ್​. ಲಕ್ಷ್ಮಣರಾವ್​ ಚಿಂತಾಮಣಿಯವರಾಗಿರುವುದು ಹೆಮ್ಮೆಯ ಸಂಗತಿ. ಪಟ್ಟಣಕ್ಕೆ ಚಿಂತಾಮಣಿ ಎಂಬ ಆಕರ್ಷಕ ಹೆಸರು ಬಂದಿರುವುದರ ಹಿಂದೆ ಸ್ವಾರಸ್ಯಕರ ಕಥೆಯಿದೆ. ಈ ಪ್ರಾಂತ್ಯ ಹಿಂದೆ ಮರಾಠರ ಆಳ್ವಿಕೆಯಲ್ಲಿತ್ತು. ಆಗಿನ ರಾಜ ಚಿಂತಾಮಣಿರಾವ್​ ಪಟ್ಟಣವನ್ನು ನಿರ್ಮಿಸಿದ. ಹಾಗೆಯೇ ಪಟ್ಟಣಕ್ಕೆ ತುಸು ದೂರದಲ್ಲಿರುವ ದೊಡ್ಡ ಬೆಟ್ಟಗಳಿಗೆ ಅಂಬಾಜಿ ದುರ್ಗ ಎಂದು ಹೆಸರಿಡಲಾಗಿದೆ. ಈ ಅಂಬಾಜಿ ರಾವ್​ ಸಹ ಮರಾಠ ರಾಜನಾಗಿದ್ದ. ಪಟ್ಟಣದ ಹೃದಯ ಭಾಗದಲ್ಲಿರುವ ವರದಾಂಜನೇಯ ಬೆಟ್ಟ ಊರಿಗೆ ಕಳಶ ಪ್ರಾಯವಾಗಿದೆ. ಚಿಕ್ಕಬಳಾಪುರ ಜಿಲ್ಲೆ ಯ ಬಗ್ಗೆ ಮಾಹಿತಿ ಗಾಗಿ: http://www.chikballapur.nic.in

ಇದನ್ನೂ ನೋಡಿ [ಬದಲಾಯಿಸಿ]


Karnataka-icon.jpg
ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ಯಾದಗಿರಿ | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ