ಚಾಮುಂಡರಾಯ
ವಿಕಿಪೀಡಿಯ ಇಂದ
ಚಾಮುಂಡರಾಯನು ಪಶ್ಚಿಮಗಂಗರ ಆಧಿಪಥ್ಯದ ಗಂಗವಾಡಿ ಸೀಮೆಯ ರಾಜ ೨ನೇ ಮಾರಸಿಂಹ (ಕ್ರಿ.ಶ ೯೬೧-೭೭) ಇವನ ಹಿರಿಯಮಗ ೪ನೇ ರಾಚಮಲ್ಲ (ಕ್ರಿ.ಶ ೯೭೪-೭೭) ಮತ್ತು ಅವನ ತಮ್ಮ ರಲಕ್ಕಸಗಂಗ (ಕ್ರಿ.ಶ ೯೭೭-೮೪) ಇವರ ಸೇವೆಯಲ್ಲಿ ಸೇನಾಧಿಪತಿ, ಸಂಧಿವಿಗ್ರಹಿ, ಮಂತ್ರಿ ಪದವಿಗಳಲ್ಲಿ ಇದ್ದನೆಂದು ತಿಳಿದುಬರುತ್ತದೆ. ಶ್ರವಣಬೆಳಗೊಳದ ಗೊಮ್ಮಟ ಇವನ ಕೊಡುಗೆ.
ಪರಿವಿಡಿ |
ಇತರ ಹೆಸರು [ಬದಲಾಯಿಸಿ]
- ಚಾವುಂಡರಾಯ
- ಚಾಮುಂಡರಾಜ
- ಚಾವುಂಡಯ್ಯ
- ಚಾಮುಂಡಯ್ಯ
- ಚಾವುಂಡ
- ಗೊಮ್ಮಟರಾಯ
ವಂಶ [ಬದಲಾಯಿಸಿ]
ಚಾಮುಂಡರಾಯನು ತನ್ನನ್ನು ಬ್ರಹ್ಮಕ್ಷತ್ರಿಯ ವಂಶಜನೆಂದು ಕರೆದುಕೊಂಡಿದ್ದಾನೆ. ಬಾಹುಬಲಿಚರಿತೆಯಲ್ಲಿ ಹೇಳಿರುವ "ಬ್ರಹ್ಮ-ಕ್ಷತ್ರಿಯ-ವೈಶ್ಯ-ಶುಕ್ತಿ ನುಮಣಿಃ" ಎಂಬ ಮಾತಿನ ಆಧಾರದಿಂದ ಆತನ ಪೂರ್ವಜರು ಮೊದಲಿಗೆ ಬ್ರಾಹ್ಮಣ ಮತ್ತು ವೈಶ್ಯರಾಗಿದ್ದು ಆನಂತರ ಕ್ಷತ್ರಿಯ ವೃತ್ತಿಯನ್ನು ಧಾರಣೆ ಮಾಡಿದವರಾಗಿರಬೇಕೆಂದು ಅಭಿಪ್ರಾಯವಿದೆ.
ಈತನ ತಾಯಿಯ ಹೆಸರು ಕಾಳಲಾದೇವಿ (ಕಾಳಿಕಾಂಬೆ,ಕಾಳಮ್ಮ). ಇವನಿಗೆ ನಾಗವರ್ಮನೆಂಬ ತಮ್ಮನಿದ್ದ. ಇವನ ಮಗ ಜಿನದೇವ.
ಗುರುಗಳು [ಬದಲಾಯಿಸಿ]
ಚಾಮುಂಡರಾಯನಿಗೆ ಇಬ್ಬರು ಗುರುಗಳು.
- ಅಜಿತಸೇನಾಚಾರ್ಯ
- ನೇಮಿಸೇನ ಸಿದ್ದಾಂತರು
ಕೃತಿಗಳು [ಬದಲಾಯಿಸಿ]
- ಮಹಾಪುರಾಣ (ಕನ್ನಡ)
- ಚಾಮುಂಡರಾಯ ಪುರಾಣ (ಕ್ರಿ.ಶ ೯೭೮)
- ಗೊಮ್ಮಟಸಾರ
ಕೊಡುಗೆ [ಬದಲಾಯಿಸಿ]
- ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಗೊಮ್ಮಟನ ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿ ಪ್ರತಿಷ್ಥಾಪನೆ ಮಾಡಿಸಿದನು
- ಅನೇಕ ಬಸದಿಗಳು
ಆಕರ ಗ್ರಂಥ [ಬದಲಾಯಿಸಿ]
- ಕನ್ನಡ ಆದಿತೀರ್ಥಂಕರ ಚರಿತೆಗಳು - ಡಾ|| ಸರಸ್ವತಿ ವಿಜಯಕುಮಾರ್
- ಬಾಹುಬಲಿಚರಿತೆ