ವರ್ಣಾಶ್ರಮ ಪದ್ಧತಿ
ಹಿಂದೂ ಸಿದ್ಧಾಂತ ಸರಣಿಯ ಲೇಖನ |
|
| ಪಂಥಗಳು | |
|---|---|
| ಸಾಂಖ್ಯ · ನ್ಯಾಯ | |
| ವೈಶೇಷಿಕ · ಯೋಗ | |
| ಪೂರ್ವ ಮೀಮಾಂಸಾ · ವೇದಾಂತ | |
| ವೇದಾಂತ ಪಂಥಗಳು | |
| ಅದ್ವೈತ · ವಿಶಿಷ್ಟಾದ್ವೈತ | |
| ದ್ವೈತ | |
| ಪ್ರಮುಖ ವ್ಯಕ್ತಿಗಳು | |
| ಕಪಿಲ · ಗೋತಮ | |
| ಕಣಾದ · ಪತಂಜಲಿ | |
| ಜೈಮಿನಿ · ವ್ಯಾಸ | |
| ಮಧ್ಯಕಾಲೀನ | |
| ಆದಿಶಂಕರ · ರಾಮಾನುಜ | |
| ಮಧ್ವ · ಮಧುಸೂದನ | |
| ವೇದಾಂತ ದೇಶಿಕಾ · ಜಯತೀರ್ಥ | |
| ಆಧುನಿಕ | |
| ರಾಮಕೃಷ್ಣ · ರಮಣ | |
| ವಿವೇಕಾನಂದ · ನಾರಾಯಣ ಗುರು | |
| ಅರವಿಂದ ·ಶಿವಾನಂದ | |
ವರ್ಣಾಶ್ರಮ ಪದ್ಧತಿಯು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಗಗಳನ್ನು ಹೊಂದಿದ ಹಿಂದೂ ಧರ್ಮದ ಒಂದು ಪದ್ಧತಿ.ಇದನ್ನು ಸ್ಥೂಲವಾಗಿ ಬುದ್ಧಿ,ಪರಾಕ್ರಮ,ಸಂಪತ್ತು ಹಾಗೂ ಪರಿಶ್ರಮಗಳ ಆಧಾರದ ಮೇಲೆ ಮಾಡಿದ್ದು.ಪ್ರತಿಯೊಂದು ವರ್ಣದವರೂ ಕೂಡಾ ಒಂದೇ ಪುರುಷನ ಅಂದರೆ ಜಗದ ಕುಟುಂಬದ ವಿವಿಧ ಅಂಗಗಳೇ ಆಗಿದ್ದು ಯಾರು ಯಾರಿಗೆ ಮೇಲಾಗಲೀ ಕೀಳಾಗಲೀ ಆಗಿರುವುದಿಲ್ಲ ಮತ್ತು ಈ ವರ್ಗ ವಿಭಾಗಗಳನ್ನು ವ್ಯಕ್ತಿಯ ಗುಣ-ಕರ್ಮಗಳಿಗೆ ಅನುಸಾರವಾಗಿ ಮಾಡಲಾಗಿದೆ ಎಂಬುದನ್ನು ಹಿಂದೂ ಧರ್ಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಭಗವದ್ಗೀತೆಯಲ್ಲಿ ಬರುವ 'ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗತ:'ಎಂಬ ಶ್ಲೋಕ ಹಾಗೂ ಮಹಾಭಾರತದ ವನಪರ್ವದ ಒಂದು ಶ್ಲೋಕ "ನ ಯೋನಿ: ನಾಪಿ ಸಂಸ್ಕಾರೋ ನ ಶ್ರುತಂ ಚ ಸಂತತಿ:| ಕಾರಣಾನಿ ದ್ವಿಜತ್ವಸ್ಯ ವೃತ್ತಮೇವ ತು ಕಾರಣಮ್ ||" ಎಂದರೆ ಬ್ರಾಹ್ಮಣತ್ವದ ಕಾರಣವು ಜನ್ಮವಲ್ಲ,ಸಂಸ್ಕಾರವಲ್ಲ,ವೇದಾಧ್ಯಯನವಲ್ಲ,ಕುಲವೂ ಅಲ್ಲ.ಅದರ ಕಾರಣವು ಸದಾಚಾರ ಮಾತ್ರವಾಗಿರುತ್ತದೆ.ಆದುದರಿಂದ ಹಿಂದೂಧರ್ಮದ ಮೂಲ ವರ್ಣಾಶ್ರಮ ವಿಭಾಗವು ಈಗಿನ ಜಾತಿ ಪದ್ಧತಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತೆಂದು ತಿಳಿದುಬರುತ್ತದೆ.