ಗುಲ್ವಾಡಿ ವೆಂಕಟರಾಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಲ್ವಾಡಿ ವೆಂಕಟರಾಯರು ೧೮೪೪ರಲ್ಲಿ ಜನಿಸಿದರು;ಮಡಿಕೇರಿಯಲ್ಲಿ ವಾಸವಾಗಿದ್ದರು. ಇವರು ಕನ್ನಡ ಸಾಹಿತ್ಯದ ಆದ್ಯಪುರುಷರಲ್ಲಿ ಒಬ್ಬರು. ೧೯ನೆಯ ಶತಮಾನದ ಅಂತ್ಯದಲ್ಲಿ ಅಂದರೆ ೧೮೯೯ರಲ್ಲಿ ಇವರು ‘ಇಂದಿರಾಬಾಯಿ’ ಕಾದಂಬರಿ ರಚಿಸಿದರು. ಇವರು 'ಭಾಗೀರಥಿ' ಹಾಗು ‘ಸೀಮಂತಿನಿ’ ಕಾದಂಬರಿಗಳನ್ನೂ ರಚಿಸಿದ್ದರೆಂದು ಹೇಳಲಾಗಿದೆ. ಆದರೆ ಅವು ಲಭ್ಯವಿಲ್ಲ. ೧೯೧೩ರಲ್ಲಿ ಇವರ ದೇಹಾಂತವಾಯಿತು.

ಉಲ್ಲೇಖಗಳು[ಬದಲಾಯಿಸಿ]