ಗಳಗನಾಥ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗಳಗನಾಥ ಕಾವ್ಯನಾಮದ ವೆಂಕಟೇಶ ತಿರಕೊ ಕುಲಕರ್ಣಿಯವರು ಹುಟ್ಟಿದ್ದು ೧೮೬೯ ಜನೆವರಿಯಲ್ಲಿ, ಹಾವೇರಿ ತಾಲೂಕಿನ ಗಳಗನಾಥ ಎನ್ನುವ ಹಳ್ಳಿಯಲ್ಲಿ. ಮುಲ್ಕಿ ಪರೀಕ್ಷೆ ಹಾಗು ಶಿಕ್ಷಕರ ಟ್ರೇನಿಂಗ ಪರಿಕ್ಷೆ ಪಾಸು ಮಾಡಿದ ಬಳಿಕ ಇವರು ಶಿಕ್ಷಕರಾಗಿ ಕೆಲಸ ಮಾಡಿದರು. ೧೯೦೬ ರ ಸುಮಾರಿಗೆ ಗುತ್ತಲದಲ್ಲಿ ಕೆಲಸ ಮಾಡುತ್ತಿದ್ದಾಗ, ಸಮೀಪದ ಅಗಡಿಯಲ್ಲಿದ್ದ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳಿಂದ ಪ್ರಭಾವಿತರಾದರು.ಅಲ್ಲಿಂದಲೇ ೧೯೦೮ನೆಯ ಇಸವಿಯಲ್ಲಿ “ ಸದ್ಬೋಧ ಚಂದ್ರಿಕೆ” ಎನ್ನುವ ಮಾಸಪತ್ರಿಕೆಯ ಪ್ರಾರಂಭಕ್ಕೆ ಕಾರಣರಾದರು ಹಾಗು ೧೯೧೮ ರವರೆಗೆ ಅದರ ಮುಖ್ಯ ಲೇಖಕರಾಗಿದ್ದರು.

ಕ್ರಿ.ಶ.೧೮೯೭ನೆಯ ಇಸವಿಯಲ್ಲಿ ಗಳಗನಾಥರು ಬರೆದ “ ಪದ್ಮನಯನೆ” ಎಂಬ ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಏರ್ಪಡಿಸಿದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿತ್ತು. ಗಳಗನಾಥರು ಐದು ಸ್ವತಂತ್ರ ಕಾದಂಬರಿಗಳನ್ನು ಹಾಗು ೧೫-೧೬ ಅನುವಾದಿತ ಕಾದಂಬರಿಗಳನ್ನು ರಚಿಸಿದ್ದಾರೆ. ೧೯೪೪ರಲ್ಲಿ ಗಳಗನಾಥರು ನಿಧನರಾದರು.

ಗಳಗನಾಥರನ್ನು ಕನ್ನಡ ಕಾದಂಬರಿಗಳ ಪಿತಾಮಹ ಎಂದು ಕರೆಯಲಾಗುತ್ತದೆ.


ಗಳಗನಾಥರ ಕೃತಿಗಳು [ಬದಲಾಯಿಸಿ]

  • ಪ್ರಬುದ್ಧ ಪದ್ಮನಯನೆ
  • ನಿಬಂಧ ಶಿಕ್ಷಣ
  • ಈಶ್ವರೀಸೂತ್ರ
  • ಮರಾಟರ ಅಭ್ಯುದಯ
  • ಛತ್ರಪತಿ
  • ಕಮಲಕುಮಾರಿ
  • ಶಿವಪ್ರಭುವಿನ ಪುಣ್ಯ
  • ಗೃಹಕಲಹ
  • ರಾಣಿ ಮೃಣಾಲಿನಿ
  • ಧಾರ್ಮಿಕತೇಜ
  • ಧರ್ಮರಹಸ್ಯ
  • ಕ್ಷಾತ್ರತೇಜ
  • ತಿಲೋತ್ತಮೆ
  • ರಾಣಾ ರಾಜಸಿಂಹ
  • ವೈಭವ
  • ಸತ್ವಸಾರ
  • ಕುಮುದಿನಿ
  • ಸಂಸಾರಸುಖ
  • ಲಕ್ಷ್ಮೀಬಾಯಿ
  • ಸತಿ ಸಾಹಸ
  • ಅದ್ಭುತ ಶೌರ್ಯ
  • ಶುಕಸಂಜೀವನಿ
  • ಭಾಗವತಾಮೃತ
  • ಶೈವ ಸುಧಾರ್ಣವ
  • ತುಲಸೀ ರಾಮಾಯಣ
  • ಕನ್ನಡಿಗರ ಕರ್ಮಕಥೆ
  • ಆನಂದರಾಮಾಯಣ
  • ವೆಂಕಟೇಶಮಹಾತ್ಮ್ಯ
  • ದುರ್ಗದ ಬಿಚ್ಚುಗತ್ತಿ-ಭಾಗ ೧ ಮತ್ತು ೨
  • ಚಿದಂಬರ ಚರಿತ
  • ಉತ್ತರರಾಮಚರಿತ
  • ಗಿರಿಜಾಕಲ್ಯಾಣ
  • ಸತ್ವಾದರ್ಶ
  • ಭಕ್ತಿವಿಜಯ
  • ಶ್ರೀಸುರೇಶ್ವರಾಚಾರ್ಯ ಚರಿತ್ರೆ
  • ದತ್ತಕಥಾಮೃತಸಾರ
  • ಸಾಧುಸದಾಶಿವಲೀಲೆ
  • ಫಕೀರೇಶ್ವರಪುರಾಣ
  • ಕುಟುಂಬ
  • ದಾಂಪತ್ಯ
  • ನಿರ್ಯಾಣ ಮಹೋತ್ಸವ
  • ಹಿಂದೂ ಸಮಾಜವ್ಯವಸ್ಥೆ
  • ವರ್ಣಾಶ್ರಮಧರ್ಮ
  • ಪುನರ್ಜನ್ಮ
  • ಮಾಧವಕರುಣಾವಿಲಾಸ
  • ಗೀತಾವಲೋಕನೆ
  • ಶ್ರೇಷ್ಠ-ಸದುಪದೇಶ
  • ಬ್ರಾಹ್ಮಣ ಪ್ರಾಪ್ತಸಾಧನ
  • ಕಣ್ವಸಂಹಿತೆ
  • ಸುಂದರಲೇಖ ಸಮುಚ್ಚಯ
  • ಭಗವತಿ ಕಾತ್ಯಾಯಿನಿ
  • ಕಲಿಕುಠಾರ -ಭಾಗ ೧ ಮತ್ತು ೨
  • ನಲಚರಿತ್ರೆ
  • ರಹಸ್ಯಗಳು
  • ಮಹಾಭಾರತ - ೧೮ ಪರ್ವಗಳು
  • ನಿಬಂಧಲೇಖನ
  • ಆಧ್ಯಾತ್ಮ ರಾಮಾಯಣ

ಹೊರಗಿನ ಕೊಂಡಿಗಳು [ಬದಲಾಯಿಸಿ]

"http://kn.wikipedia.org/w/index.php?title=ಗಳಗನಾಥ&oldid=312559" ಇಂದ ಪಡೆಯಲ್ಪಟ್ಟಿದೆ