ಗಂಗ (ರಾಜಮನೆತನ)

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗಂಗರು ಸಾಮಾನ್ಯ ಶಕೆಯ ಸುಮಾರು ೪ನೆಯ ಶತಕದಿಂದ ಸುಮಾರು ೧೦ನೆಯ ಶತಕದವರೆಗೆ ದಕ್ಷಿಣ ಕರ್ನಾಟಕ ತಮಿಳುನಾಡಿನ ಉತ್ತರಭಾಗಗಳನ್ನು ಆಳಿ ಭಾರತದ ಚರಿತ್ರೆಯ ಮೇಲೆ ಅಳಿಸಲಾರದ ಛಾಪು ಮೂಡಿಸಿದ ಕನ್ನಡ ರಾಜವಂಶ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ.

ಗಂಗ ನಾಡಿನ ತಿರುಳುಭಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು. ಇದು ೯೬೦೦೦ ಗ್ರಾಮಗಳ ಘಟಕ - ಶಾಸನಗಳಲ್ಲಿ ಗಂಗವಾಡಿ ತೊಂಭತ್ತಱುಸಾಸಿರ ಎಂದೇ ಸಾಮಾನ್ಯವಾದ ಉಲ್ಲೇಖ. ಗಂಗವಾಡಿಯ ನಾಗರಿಕರೆ ಗಂಗವಾಡಿಕಾರರು. ಈ ಹೆಸರು ಇಂದಿಗೂ ಗಂಗಡಿಕಾರ ಎಂದಾಗಿ ಉಳಿದಿಕೊಂಡು ಬಂದಿದೆ.


ಪರಿವಿಡಿ

[ಬದಲಾಯಿಸಿ] ಗಂಗ ರಾಜವಂಶದ ಸ್ಥೂಲ ಚರಿತ್ರೆ

[ಬದಲಾಯಿಸಿ] ಪ್ರಸಿದ್ಧ ರಾಜರುಗಳು

[ಬದಲಾಯಿಸಿ] ಇತರ ರಾಜಮನೆತನಗಳೊಂದಿಗೆಗಿನ ಸಂಬಂಧಗಳು

[ಬದಲಾಯಿಸಿ] ಸಾಹಿತ್ಯ, ಸಂಸ್ಕೃತಿ, ಜನಜೀವನ

ವೈಯಕ್ತಿಕ ಉಪಕರಣಗಳು