ಕೆ.ಪಿ.ಪುಟ್ಟಣ್ಣ ಶೆಟ್ಟಿ
ವಿಕಿಪೀಡಿಯ ಇಂದ
ಸರ್ ಕೆ.ಪಿ.ಪುಟ್ಟಣ್ಣ ಶೆಟ್ಟಿ ಇವರು ಬೆಂಗಳೂರು ಜಿಲ್ಲೆಯ ಕೃಷ್ಣರಾಜಪುರದಲ್ಲಿ ೧೮೫೬ ಎಪ್ರಿಲ್ ೨೯ರಂದು ಜನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಪ್ರಮುಖರು.
೧೯೨೧ರಲ್ಲಿ ಚಿಕ್ಕಮಗಳೂರಿನಲ್ಲಿ ಜರುಗಿದ ೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇವರಿಗೆ ‘ರಾಜಸಭಾ ಭೂಷಣ’ ಹಾಗು ‘ದಿವಾನ್ ಬಹಾದ್ದೂರ್’ ಪ್ರಶಸ್ತಿಗಳು ಲಭಿಸಿದ್ದವು.