ಕುಸುಮಾಕರ ದೇವರಗೆಣ್ಣೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಸುಮಾಕರ ದೇವರಗೆಣ್ಣೂರು ( ೧೯೩೦-೨೦೧೨) ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯಕೃಷಿ ಮಾಡುತ್ತಿರುವ ವಸಂತ ಅನಂತ ದಿವಾಣಜಿ ಇವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ , ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.

೧೯೫೬ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಭಾಷೆಯ ಪ್ರಾಧ್ಯಾಪಕರಾಗಿ ೩೫ ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.

ಇವರು ೨೦೧೨ರಲ್ಲಿ ತೀರಿಕೊಂಡರು.

ಕಾದಂಬರಿಗಳು[ಬದಲಾಯಿಸಿ]

ಕುಸುಮಾಕರ ದೇವರಗೆಣ್ಣೂರು ಇವರು ಅನೇಕ ಕಾದಂಬರಿಗಳನ್ನು ರಚಿಸಿದ್ದಾರೆ.

  • ಮುಗಿಯದ ಕಥೆ,(೧೯೬೫)
  • ನಾಲ್ಕನೆಯ ಆಯಾಮ,(೧೯೬೬)
  • ನಿರಿಂದ್ರಿಯ,(೧೯೯೩)
  • ಪರಿಘ (೧೯೯೫)
  • ಬಯಲು-ಬಸಿರು,(೨೦೦೫)

ಕವನ ಸಂಕಲನಗಳು[ಬದಲಾಯಿಸಿ]

  • ಸ್ವಪ್ನನೌಕೆ

ಸಾಹಿತ್ಯ ವಿಮರ್ಶೆ[ಬದಲಾಯಿಸಿ]

  • ಗಾಳಿ ಹೆಜ್ಜೆ ಹಿಡಿದ ಸುಗಂಧ,
  • ನಕ್ಷೆಗೆ ಎಟುಕದ ಕಡಲು
  • ಕ್ರಾಂತ ದರ್ಶನ

ಅನುವಾದ[ಬದಲಾಯಿಸಿ]

  • ಬಯಲು-ಬಸಿರು,( ಇಂಗ್ಲೀಷ್ ಮತ್ತು ಮರಾಠಿಗೆ‌)
  • ದುರ್ದಮ್ಯ,(ಕನ್ನಡ ಭಾಷೆಗೆ ಮರಾಠಿಯಿಂದ )

ಅಭಿನಂದನಾ ಗ್ರಂಥ[ಬದಲಾಯಿಸಿ]

  • ಅವಗಾಹ.

ಪಿಎಚ್ ಡಿ ಪ್ರಬಂಧ[ಬದಲಾಯಿಸಿ]

  • ಪುರಂದರದಾಸರು ಜೀವನ ಹಾಗೂ ಕೃತಿಗಳು : ಒಂದು ಅಧ್ಯಯನ - ಎಂಬ ಪ್ರೌಢ ಪ್ರಬಂಧವನ್ನು ೧೯೬೬ ರಲ್ಲಿ ರಂ.ಶ್ರೀ.ಮುಗಳಿಯವರ ಮಾರ್ಗ ದರ್ಶನದಲ್ಲಿ ಪುಣೆ ವಿಶ್ವವಿದ್ಯಾಲಯದಲ್ಲಿ ಮಂಡಿಸಿ ಪಿಎಚ್.ಡಿ ಪದವಿಯನ್ನು ಪಡೆದರು. ಈ ಕೃತಿಯನ್ನು ಪ್ರಸಾದ ಯೋಗ ಎಂಬ ಹೆಸರಿನಿಂದ ೧೯೭೨ ರಿಂದ ಮಂತ್ರಾಲಯದ ರಾಘವೇಂದ್ರ ಮಠದಿಂದ ಹಲವು ಮರು ಮುದ್ರಣಗೊಂಡಿದೆ.

ಪ್ರಶಸ್ತಿ[ಬದಲಾಯಿಸಿ]

  • ೨೦೦೬ರಲ್ಲಿ ಸತ್ಯಕಾಮ ಪ್ರಶಸ್ತಿ ಪ್ರದಾನವಾಗಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ೨೦೦೩
  • ಮುಂಬೈನ ಗುರುನಾರಾಯಣ ಪ್ರಶಸ್ತಿ ಲಭಿಸಿದೆ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

ಉಲ್ಲೇಖಗಳು[ಬದಲಾಯಿಸಿ]