ಐರಾವಣ
| Iravan / Aravan | |
|---|---|
Aravan worshipped at Sri Mariamman Temple, Singapore. A cobra hood is sheltering Aravan's head. |
|
| ದೇವನಾಗರಿ | इरावान् |
| Tamil script | அரவான் |
| ಸಂಬಂಧ | Nāga |
| ಹೆಂಡತಿ | Krishna in his form of Mohini |
ಐರಾವಣ (ಸಂಸ್ಕೃತ:इरावान्, Irāvāṇ), ಹಾಗೂ ಐರಾವತ (ಸಂಸ್ಕೃತ:इरावत्, Irāvat)[೧] ಮತ್ತು ಐರಾವಂತ ಎಂದೂ ಹೆಸರಾಗಿರುವುದು, ಹಿಂದೂ ಮಹಾಕಾವ್ಯವಾದ ಮಹಾಭಾರತದ ಕಿರು ಪಾತ್ರವಾಗಿದೆ. ಪಾಂಡವ ರಾಜ ಅರ್ಜುನನ (ಮಹಾಭಾರತದ ಒರ್ವ ಮುಖ್ಯ ನಾಯಕ) ಮತ್ತು ನಾಗ ರಾಣಿ ಉಲುಪಿಯ ಪುತ್ರನಾದ, ಐರಾವಣನು ಕುತ್ತಂತವರ್ ಭಕ್ತ ವೃಂದರ ಮುಖ್ಯ ದೇವನಾಗಿದ್ದನು—ಇದು ಆ ಭಕ್ತ ವೃಂದದಲ್ಲಿ ನೀಡುವ ಸಾಮಾನ್ಯ ಹೆಸರೂ ಸಹ ಆಗಿದೆ—ಮತ್ತು ದ್ರೌಪದಿಯ ಉಪಾಸನೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಈ ಎರಡೂ ಭಕ್ತ ಗಣದವರು ದಕ್ಷಿಣ ಭಾರತ ಮೂಲದವರಾಗಿದ್ದು, ರಾಷ್ಟ್ರದ ಈ ಪ್ರದೇಶದಲ್ಲಿ ಅವನನ್ನು ಗ್ರಾಮ ದೇವರೆಂದು ಪೂಜಿಸಲಾಗುತ್ತದೆ ಮತ್ತು ಅರಾವಣ (ತಮಿಳು:அரவான், Aravāṇ) ಎಂದು ಹೆಸರಾಗಿದ್ದಾನೆ. ಅವನು ಅಲಿ ಎಂದು ಕರೆಯಲಾಗುವ (ಹಾಗೆಯೇ ದಕ್ಷಿಣ ಭಾರತದಲ್ಲಿ ಅರಾವಣಿ ಮತ್ತು ದಕ್ಷಿಣ ಏಷ್ಯಾದಾದ್ಯಂತ ಹಿಜ್ರಾ ) ಹೆಸರಾಂತ ಲಿಂಗಪರಿವರ್ತಕರ ಪೋಷಕ ದೇವನಾಗಿದ್ದಾನೆ.[೨]
ಮಹಾಭಾರತವು ಐರಾವಣನನ್ನು 18 ನೇ ದಿನದ ಕುರುಕ್ಷೇತ್ರ ಯುದ್ಧ (ಮಹಾಭಾರತ ಯುದ್ಧ) ದಲ್ಲಿ ಸಾಯುವ ಮಹಾಪುರುಷನಾಗಿ ನಿರೂಪಿಸಿದ್ದು, ಇದು ಮಹಾಕಾವ್ಯದ ಮುಖ್ಯ ವಿಷಯವಾಗಿದೆ. ಆದರೆ, ದೇವಿ ಕಾಳಿಯ ಕೃಪಾಕಟಾಕ್ಷವನ್ನು ಮತ್ತು ಯುದ್ಧದಲ್ಲಿ ಪಾಂಡವರ ಜಯವನ್ನು ಖಚಿತಪಡಿಸಿಕೊಳ್ಳಲು ಸ್ವಯಂ-ತ್ಯಾಗ ಮಾಡಿದವನಾಗಿ ಅರಾವಣನನ್ನು ಗೌರವಿಸುವ ಪೂರಕವಾದ ಸಂಪ್ರದಾಯವನ್ನು ದಕ್ಷಿಣ ಭಾರತೀಯ ಭಕ್ತ ವೃಂದದವರು ಹೊಂದಿದ್ದಾರೆ. ಈ ಸ್ವಯಂ-ತ್ಯಾಗಕ್ಕೆ ಪ್ರತಿಯಾಗಿ ಕೃಷ್ಣನು ಅರಾವತನಿಗೆ ಅನುಗ್ರಹಿಸಿದ ಮೂರು ವರಗಳಲ್ಲಿ ಒಂದರ ಬಗ್ಗೆ ಕುಟ್ಟಾಂತವರ್ ಭಕ್ತ ವೃಂದದವರು ಒತ್ತು ನೀಡುತ್ತಾರೆ. ತಾನು ಸಾಯುವುದಕ್ಕೆ ಮೊದಲು ಮದುವೆಯಾಗಬೇಕೆಂದು ಅರಾವಣನು ಕೋರಿಕೆ ಸಲ್ಲಿಸುತ್ತಾನೆ. ಕೃಷ್ಣನು ಮೋಹಿನಿಯಾಗಿ ತನ್ನ ಮಹಿಳೆಯ ರೂಪದಲ್ಲಿ ಈ ವರವನ್ನು ಪೂರೈಸುತ್ತಾನೆ. ತಮಿಳುನಾಡಿನ ಕೂವಾಗಮ್ನಲ್ಲಿ ಈ ಘಟನೆಯನ್ನು ಮೊದಲು ಅರಾವಣ ಮತ್ತು ಪುರುಷ ಗ್ರಾಮಸ್ಥರೊಂದಿಗೆ (ಅರಾವಣನಿಗೆ ಹರಕೆ ಹೊತ್ತವರು) ಅಲಿ ಯೊಂದಿಗೆ ವಿಧ್ಯುಕ್ತ ಮದುವೆ, ತದನಂತರ ರಾವಣನ ತ್ಯಾಗದ ಮರು-ಪಾತ್ರವಹಿಸುವಿಕೆಯೊಂದಿಗೆ ಅವರ ವೈಧವ್ಯ ಹೀಗೆ 18 ದಿನದ ಉತ್ಸವದ ರೂಪದಲ್ಲಿ ಮರು-ಪಾತ್ರವಹಿಸುತ್ತಾರೆ.
ದ್ರೌಪದಿ ಭಕ್ತ ವೃಂದದವರು ಇನ್ನೊಂದು ವರದ ಬಗ್ಗೆ ಒತ್ತು ನೀಡುತ್ತಾರೆ: ತನ್ನ ಬೇರ್ಪಟ್ಟ ತಲೆಯ ಕಣ್ಣಿನ ಮೂಲಕ ಮಹಾಭಾರತ ಯುದ್ಧದ ಸಂಪೂರ್ಣ ಕಾಲಾವಧಿಯನ್ನು ವೀಕ್ಷಿಸಲು ಅರಾವಣನಿಗೆ ಕೃಷ್ಣನು ಅನುಮತಿ ನೀಡುತ್ತಾನೆ. ಮತ್ತೊಂದು 18 ದಿನದ ಉತ್ಸವದಲ್ಲಿ, ಮಹಾಭಾರತದ ಯುದ್ಧದ ಸಾಂಪ್ರದಾಯಿಕ ಮರು-ಪಾತ್ರವಹಿಸುವಿಕೆಯನ್ನು ವೀಕ್ಷಿಸಲು ಅರಾವಣನ ಔಪಚಾರಿಕ ತಲೆಯನ್ನು ಇರಿಸಲಾಗುತ್ತದೆ. ಅರಾವಣನ ತಲೆಯು ದ್ರೌಪದಿ ದೇವಾಲಯಗಳಲ್ಲಿ ಸಾಮಾನ್ಯವಾದ ಅಲಂಕಾರ ಸಂಕೇತವಾಗಿದೆ. ಸಾಮಾನ್ಯವಾಗಿ ಅದು ಸಾಗಿಸಬಹುದಾದ ಮರದ ತಲೆಯಾಗಿರುತ್ತದೆ; ಕೆಲವೊಮ್ಮೆ ದೇವಾಲಯದ ಪ್ರಾಂಗಣದಲ್ಲಿ ಅದರದ್ದೇ ಆದ ದೇಗುಲವಿರುತ್ತದೆ ಅಥವಾ ದೇವಾಲಯದ ಮೇಲ್ಭಾವಣಿಯ ತುದಿಗಳಲ್ಲಿ ದುಷ್ಟಶಕ್ತಿಗಳ ವಿರುದ್ಧ ರಕ್ಷಕನಾಗಿ ಇರಿಸಲಾಗುತ್ತದೆ. ಅರಾವಣನನ್ನು ಅವನ ಬೇರ್ಪಟ್ಟ ತಲೆಯ ರೂಪದಲ್ಲಿ ಪೂಜಿಸಲಾಗುತ್ತದೆ ಮತ್ತು ಅದು ರೋಗಗಳನ್ನು ವಾಸಿಮಾಡುತ್ತದೆ ಮತ್ತು ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳನ್ನು ಕರುಣಿಸುತ್ತಾನೆ ಎಂದು ನಂಬಲಾಗಿದೆ.
ಐರಾವಣನು ಇಂಡೋನೇಷ್ಯಾದಲ್ಲೂ ಸಹ ಜನಪ್ರಿಯನಾಗಿದ್ದಾನೆ (ಅಲ್ಲಿ ಅವನ ಹೆಸರನ್ನು ಐರಾವಣ ಎಂದು ಉಚ್ಛರಿಸಲಾಗುತ್ತದೆ). ಜಾವಾದ ಮುಖ್ಯ ದ್ವೀಪದಲ್ಲೂ ಸಹ ಐರಾವಣನ ಸುತ್ತಲೂ ಸ್ವತಂತ್ರ್ಯವಾದ ಸಂಪ್ರದಾಯಗಳು ಬೆಳೆದು ಬಂದಿದ್ದು, ಅಲ್ಲಿ ಉದಾಹರಣೆಗೆ ಅವನು ನಾಗಾದೊಂದಿಗೆ ಸಂಬಂಧವನ್ನು ಕಳೆದುಕೊಳ್ಳುತ್ತಾನೆ. ಪ್ರತ್ಯೇಕವಾದ ಜವಾನೀಸ್ ಸಂಪ್ರದಾಯಗಳು ಕೃಷ್ಣನ ಮಗಳು ತಿತಿಸಾರಿಯೊಂದಿಗೆ ಐರಾವಣನ ನಾಟಕೀಯ ಮದುವೆಯನ್ನು ಮತ್ತು ತಪ್ಪಾದ ಗುರುತಿನಿಂದ ಕಾರಣವಾದ ಸಾವನ್ನು ಪ್ರಸ್ತುತಪಡಿಸುತ್ತಾರೆ. ಕಥೆಗಳನ್ನು ಸಾಂಪ್ರದಾಯಿಕ ಜವಾನೀಸ್ ನಾಟಕ (ವಯಾಂಗ್ ) ಮಾಧ್ಯಮದ ಮೂಲಕ, ಪ್ರಮುಖವಾಗಿ ವಯಂಗ್ ಕುಲಿಟ್ ಎಂದು ಕರೆಯಲಾಗುವ ಪ್ರತಿಬಿಂಬಿದ- ಸೂತ್ರದ ನಾಟಕಗಳ ಮೂಲಕ ಹೇಳಲಾಗುತ್ತದೆ.
ಪರಿವಿಡಿ |
ವ್ಯುತ್ಪತ್ತಿಶಾಸ್ತ್ರ ಮತ್ತು ಇತರ ಹೆಸರುಗಳು[ಬದಲಾಯಿಸಿ]
ಮಾನಿಯರ್ ವಿಲಿಯಮ್ಸ್ ಸಂಸ್ಕೃತ-ಇಂಗ್ಲೀಷ್ ಶಬ್ಧಕೋಶದ ಪ್ರಕಾರ (1899), ಐರಾವಣ, ಐರಾವನ್ ಎಂತಲೂ ಉಚ್ಚರಿಸಲಾಗುವ ಹೆಸರು ಮೂಲತಃ ಐರಾವತ (इरावत्, Irāvat) ದಿಂದ ರಚಿತಗೊಂಡಿದೆ, ಹಾಗೆಯೇ ಐರಾವತ ಎಂತಲೂ ಉಚ್ಚರಿಸಲಾಗುತ್ತದೆ.[೩] ಪ್ರತಿಯಾಗಿ, ಮೂಲ ಐರಾವತವು ಇರಾ (इरा)—ಇಡಾ (इडा) ದೊಂದಿಗೆ ನಿಕಟವಾಗಿ ಸಂಪರ್ಕಿತವಾಗಿದೆ - ಅರ್ಥವೆಂದರೆ "ಆಹಾರವನ್ನು ಹೊಂದಿರುವುದು", "ಸರಬರಾಜಿನೊಂದಿಗೆ ಕೊಡುವುದು" ಅಥವಾ, ವಿಸ್ತರಣೆಯಿಂದ, "ತೃಪ್ತಿದಾಯಕ" (ಮಹಾಭಾರತದಲ್ಲಿ ಮತ್ತು ಋಗ್ವೇದ ಮತ್ತು ಅಥರ್ವ ವೇದ ಗ್ರಂಥಗಳಲ್ಲಿ ಬಳಸಿರುವಂತೆ).[೪] ಆಲ್ಫ್ ಹಿಲ್ಟೆಬೀಟೆಲ್, ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಧಾರ್ಮಿಕ ಪ್ರೊಫೆಸರ್ ಅವರು [೫] ಐರಾವಣ ಅಥವಾ ಐರಾವಂತ ಸಂಸ್ಕೃತ ಹೆಸರು ಇದಾ-ವಂತ, ಅಂದರೆ "ಇದಾವನ್ನು ಹೊಂದಿರುವವನು" ನಿಂದ ವ್ಯತ್ಪನ್ನವಾಗಿದೆ ಎಂದು ಸೂಚಿಸುತ್ತಾರೆ. ಫ್ರೆಂಚ್ ಭಾರತಜ್ಞರಾದ ಮ್ಯಾಡೆಲಿನ್ ಬಿರಾಡಿಯು ಅವರು ಇದಾ ಪದದ ಧಾರ್ಮಿಕ ಬಳಕೆಯನ್ನು "ಪಾಲುಗೊಳ್ಳುವವರು ಸೇವಿಸುವ ನೈವೇದ್ಯದ ವಸ್ತುವಾಗಿದ್ದು, ಅದು ತ್ಯಾಗದ ಎಲ್ಲಾ ಫಲಶಕ್ತಿಯಿಂದ ಬರುತ್ತದೆ" ಎಂದು ವಿವರಿಸಿದ್ದಾರೆ.[೬] ಈ ವಿವರಣೆಯನ್ನು ಆಧರಿಸಿ, ಐರಾವಂತ ಎಂದರೆ ಮಹಾಭಾರತದಲ್ಲಿನ ತ್ಯಾಗದ ಬಲಿ ಎಂದು ನಿಶ್ಚಯಿಸಿದ್ದಾರೆ. ಇದಾ ಅನ್ನು ಬೇರೆಡೆಯಲ್ಲಿ ದೇವಸ (ಡೆಮಿ-ದೇವರುಗಳು) ಮತ್ತು ಅಸುರರು (ರಾಕ್ಷಸರು) ಪೈಪೋಟಿ ಮಾಡುವ ವಸ್ತುವನ್ನು ಸೂಚಿಸಲು ಬಳಸಲಾಗಿದೆ.[೬]
ಐರಾವಣವು ಸಾಮಾನ್ಯವಾಗಿ ಐರಾವಣ್ ಎಂದು ಹೆಸರಾಗಿದೆ, ಹಾಗು ದಕ್ಷಿಣ ಭಾರತದಲ್ಲಿ ಅರಾವಣ್ ಎಂದು ಉಚ್ಚರಿಸಲಾಗುತ್ತದೆ. ಅವನನ್ನು ಎರಡು ದಕ್ಷಿಣ ಭಾರತದ ಹಿಂದೂ ಭಕ್ತ ಸಮುದಾಯದಲ್ಲಿ ದೇವರೆಂದು ಪೂಜಿಸಲಾಗುತ್ತದೆ: ಕುಟ್ಟಂತವರ್ ಭಕ್ತ ಸಮುದಾಯದವರು (ಅರಾವಣ್ಗೆ ಸಂಪೂರ್ಣವಾಗಿ ಅರ್ಪಿತವಾದವರು) ಮತ್ತು ದ್ರೌಪದಿಯ ಭಕ್ತ ಸಮುದಾಯದವರು (ಅರಾವಣ್ನ ಮಲತಾಯಿ ಮತ್ತು ಅರ್ಜುನನ ಪತ್ನಿ). ಅವನ ಸ್ವಂತ ಭಕ್ತ ಸಮುದಾಯದಲ್ಲಿ, ಅರಾವಣನು ಕುಟ್ಟಾಂತವರ್ ಎಂದೂ ಹೆಸರಾಗಿದ್ದು, ಕುಟ್ಟಕುರನ್ ರಾಕ್ಷಸನನ್ನು ಕೊಂದ ಧೀರ ಕುಟ್ಟಂತವರ್ ಮೂಲದಿಂದ ಬಂದಿದೆ. ಈ ಹೆಸರನ್ನು ಕೆಲವೊಮ್ಮೆ ಕುಟ್ಟಂದರ್ , ಖೂತಾಂಡವರ್ ಅಥವಾ ಕೂತಾಂಡವರ್ ಎಂದು ಹೇಳಲಾಗುತ್ತದೆ.[೭]
ದಕ್ಷಿಣ ಭಾರತದ ತಮಿಳು ಹೆಸರಾದ ಅರಾವಣ ಎಂಬ ಹೆಸರು ಅರಾವು (ಹಾವು) ಪದದಿಂದ ವ್ಯುತ್ಪತ್ತಿಯಾಗಿದೆ ಎಂದು ಜನಪ್ರಿಯವಾಗಿ ನಂಬಲಾಗಿದೆ. ಹಾವುಗಳೊಂದಿಗೆ ಅರಾವಣನ ಸಂಬಂಧವು ಅವನ ಮೂರ್ತಿಚಿತ್ರಣದಲ್ಲೂ ಸ್ಪಷ್ಟವಾಗುತ್ತದೆ.[೬]
ಮೂರ್ತಿಚಿತ್ರಣ[ಬದಲಾಯಿಸಿ]
ಅರಾವಣನ ಬೇರ್ಪಟ್ಟ ತಲೆಯ ರೂಪದಲ್ಲಿ ಅವನನ್ನು ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ. ಅವನನ್ನು ಸಾಮಾನ್ಯವಾಗಿ ಮೀಸೆ, ಎದ್ದುಕಾಣುವ ಕಣ್ಣುಗಳು ಮತ್ತು ದೊಡ್ಡ ಕಿವಿಗಳೊಂದಿಗೆ ಚಿತ್ರಿಸಲಾಗುತ್ತದೆ. ಪ್ರಾಸಂಗಿಕವಾಗಿ, ಅವನು ಶಂಕುವಿನಾಕೃತಿಯ ಕಿರೀಟವನ್ನು, ತನ್ನ ಹಣೆಯಲ್ಲಿ ವೈಷ್ಣವ ತಿಲಕ ವನ್ನು ಸಾಮಾನ್ಯವಾಗಿ ಧರಿಸುತ್ತಾನೆ. ಅರಾವಣನನ್ನು ಆಗಾಗ್ಗೆ ಕಿರೀಟದ ಮೇಲ್ಭಾಗದಲ್ಲಿ ನಾಗರಹಾವಿನ ಹೆಡೆಯೊಂದಿಗೆ ಕಿರೀಟದ ಮೂಲಕ ಅದು ಹೊರ ಮೂಡಿರುವಂತೆ ಅಥವಾ ಕಿರೀಟದ ಹಿಂಭಾಗದಿಂದ ಹಾವು ಹೊರ ಸೂಸಿರುವಂತೆ ಚಿತ್ರಿಸಲಾಗುತ್ತದೆ.[೮] ಮುಖ್ಯ ಕೂವಾಗಮ್ ಪ್ರತಿಮೆಯೂ ಸಹ ಅರಾವಣನ ಕಿರೀಟದ ಮೇಲೆ ಸರ್ಪವನ್ನು ಒಳಗೊಂಡಿರುತ್ತದೆ.[೯]
ಅರಾವಣನ ಮೂರ್ತಿಶಿಲ್ಪದ ಮತ್ತೊಂದು ಪ್ರಮುಖವಾದ ವೈಶಿಷ್ಟ್ಯವು ಅತಿಮಾನುಷ ಶಕ್ತಿಯುಳ್ಳ ಕೋರೆಹಲ್ಲಿನ ಉಪಸ್ಥಿತಿಯಾಗಿದೆ. ಅಂತಹ ಅತಿಮಾನುಷ ಶಕ್ತಿಯ ಹಲ್ಲನ್ನು ಮಧ್ಯ ಕೂವಗಮ್ ಪ್ರತಿಮೆಯು ಹೊಂದಿಲ್ಲದಿದ್ದರೂ, ಅವುಗಳು ಹೆಚ್ಚಿನ ದ್ರೌಪದಿ ಆರಾಧನಾ ಪದ್ಧತಿ ಚಿತ್ರಗಳ ಸಾಮಾನ್ಯ ವೈಶಿಷ್ಟ್ಯವಾಗಿದೆ.[೧೦]
ಅರಾವಣ-ತಲೆಯ ಪ್ರತಿಮೆಗಳು ಒಂದೋ ಬಣ್ಣದಲ್ಲಿ ಚಿತ್ರಿಸಲಾಗಿರುತ್ತದೆ ಅಥವಾ ಉತ್ಸವಗಳಿಗೆ ಬಣ್ಣ ರಹಿತವಾದ ಚಲಿಸಲಾಗುವಂತಹವುಗಳಾಗಿರುತ್ತದೆ; ಅವುಗಳನ್ನು ಒಟ್ಟಿಗೆ ಅರಾವಣನ ದೇವಾಲಯಗಳಲ್ಲಿ ಇರಿಸಲಾಗಿರುತ್ತದೆ. ಕೂವಗಮ್, ಕೋಥಡೈ, ಕೋಥಟ್ಟೈ ಮತ್ತು ಪಿಲ್ಲೈಯಾರ್ಕುಪ್ಪಮ್ಗಳು ಕೆಂಪು ಮುಖವಾಗಿ ಬಣ್ಣಬಳಿದ ಮತ್ತು ಬಹು-ವರ್ಣದ ಅಲಂಕರಣದ ಪ್ರತಿಮೆಗಳನ್ನು ಹೊಂದಿರುತ್ತದೆ. ಬಣ್ಣ ರಹಿತವಾದ ಕಪ್ಪು ಕಲ್ಲಿನ ಅರಾವಣ-ತಲೆಯ ಚಿತ್ರಗಳನ್ನು ಕೋಥಟ್ಟೈ, ಮಧುಕರೈ ಮತ್ತು ಪಿಲ್ಲೈಯಾರ್ಕುಪ್ಪಮ್ಗಳಲ್ಲಿ ನೋಡಬಹುದು.[೯][೧೧][೧೨][೧೩][೧೪][೧೫]
ಕೆಲವು ಚಿತ್ರಕಲೆಗಳು ಅರಾವಣನ ತ್ಯಾಗವನ್ನು ಸಹ ರೂಪಿಸುತ್ತವೆ. ಈ ದೃಶ್ಯಗಳಲ್ಲಿ, ಅವನ ತಲೆಯನ್ನು ಇನ್ನೇನು ಛೇದನ ಮಾಡುವಾಗ ಅವನು ಆಗಾಗ್ಗೆ ಕಾಳಿಗೆ ತಲೆಬಾಗುವ ಅಥವಾ ಸೌಕಾರ್ಪೇಟ್ ಚಿತ್ರಕಲೆಯಲ್ಲಿ ತೋರುವಂತೆ, ಸ್ವಯಂ-ಶಿರಚ್ಛೇದನ ಮಾಡಿಕೊಂಡಿರುವ ಅರಾವಣನು ಖಡ್ಗ ಮತ್ತು ತನ್ನ ಬೇರ್ಪಡಿತ ತಲೆಯನ್ನು ದೇವಿಗೆ ಅರ್ಪಿಸುತ್ತಿರುವಂತೆ ಚಿತ್ರಿಸಲಾಗಿದೆ.[೧೬][೧೭]
ಐತಿಹಾಸಿಕ ಬೆಳವಣಿಗೆ[ಬದಲಾಯಿಸಿ]
ಐರಾವಣನು ಮೊದು ಮಹಾಭಾರತ ಮಹಾಕಾವ್ಯದ ಮುಖ್ಯ ನಾಯಕನಾದ ಅರ್ಜುನನ ಮಗನಾಗಿ ಸಣ್ಣ ಪಾತ್ರವೊಂದರಲ್ಲಿ ಕಂಡುಬರುತ್ತಾನೆ. ಮಹಾಭಾರತದ ಹಿನ್ನೆಲೆಯು "ಅತೀ ಮೊದಲಿನ ವೇದಿಕ ಕಾಲಾವಧಿಯ ನಂತರ" ಮತ್ತು ಮೂರನೇ ಶತಮಾನ ಬಿ.ಸಿ. ಯಲ್ಲಿ ಮೊದಲ ಭಾರತೀಯ 'ಸಾಮ್ರಾಜ್ಯ'ವು ಹುಟ್ಟುವ ಮೊದಲು, ಅಂದರೆ "ಸುಮಾರು ಎಂಟನೇ ಅಥವಾ ಒಂಬತ್ತನೇ ಶತಮಾನದ" ಸಂದರ್ಭದ ಕಾಲಕ್ಕೆ ಊಹಿಸುತ್ತದೆ.[೧೮] ಅದನ್ನು ಸಾಮಾನ್ಯವಾಗಿ ಒಪ್ಪಲಾಗಿದೆ, ಆದರೆ, ಪಾತ್ರವನ್ನು ಸಂಪೂರ್ಣವಾಗಿ ಬಿಡದಂತೆ ಕಾಪಾಡಿಕೊಳ್ಳಬೇಕಾದ " ವೇದಗಳಿಗೆ ಭಿನ್ನವಾಗಿ, ಮಹಾಕಾವ್ಯವು ಜನಪ್ರಿಯ ಕಾರ್ಯವಾಗಿತ್ತು ಮತ್ತು ಅದರ ವಾಚನ ಸಂಗ್ರಹಗಳು ಭಾಷೆಗಳು ಮತ್ತು ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಲು ಅನಿವಾರ್ಯವಾಗಿ ರೂಪಿಸುತ್ತವೆ."[೧೮] ಈ ಕ್ರಿಯಾಶಕ್ತಿಯ ಪಠ್ಯದ ಅತೀ ಮೊದಲಿನ ಉಳಿದಿರುವ ಅಂಶಗಳನ್ನು ಮಹಾಕಾವ್ಯದ ಮೊತ್ತಮೊದಲಿನ ಬಾಹ್ಯ ಉಲ್ಲೇಖಗಳಿಗಿಂತ ಹಳೆಯವು ಎಂದು ನಂಬಲಾಗಿದ್ದು, ಅವುಗಳು ಪಾಣಿನಿಯ 4 ನೇ ಶತಮಾನದ ವ್ಯಾಕರಣ ಕೈಪಿಡಿ ಅಷ್ಟಧ್ಯಾಯಿ (4:2:56)ಯಲ್ಲಿನ ಪರೋಕ್ಷ ಪ್ರಸ್ತಾಪವನ್ನು ಒಳಗೊಂಡಿರಬಹುದು.[೧೮][೧೯] ಸಂಸ್ಕೃತ ಪಠ್ಯವು ಮೊತ್ತ ಮೊದಲಿನ ಗುಪ್ತ ಕಾಲದ (ಸುಮಾರು 4ನೇ ಶತಮಾನ ಸಿಇ) ದಿಂದ "ನಿರ್ಣಾಯಕ ರೂಪ"ದಂತಹ ಒಂದನ್ನು ಬಹುಶಃ ತಲುಪಿರಬಹುದು.[೧೮] ಮಹಾಭಾರತದ ಮೊದಲ ಪ್ರಮುಖ ವಿಮರ್ಶಾತ್ಮಕ ಆವೃತ್ತಿಯ ಸಂಪಾದಕರು ಹೀಗೆ ವ್ಯಾಖ್ಯಾನಿಸಿದ್ದಾರೆ: "ಮೂಲರೂಪ ಮತ್ತು ಪಠ್ಯ ಟೀಕೆ ಯ ಆಧಾರದಲ್ಲಿ ಅಸ್ಥಿರ ಪಠ್ಯವನ್ನು ಅಕ್ಷರಶಃ ಮೂಲ ಆಕಾರಕ್ಕೆ ಮರು ನಿರ್ಮಿಸುವ ಬಗ್ಗೆ ಯೋಚಿಸುವುದು ನಿಷ್ಪ್ರಯೋಜಕವಾಗಿದೆ. ಹಾಗಾದರೆ ಯಾವುದು ಸಾಧ್ಯವಿದೆ? ನಮ್ಮ ಉದ್ದೇಶವನ್ನು ಮಾತ್ರ ಲಭ್ಯವಿರವ ಹಸ್ತಪ್ರತಿ ಸಾಮಗ್ರಿಗಳ ಆಧಾರದಲ್ಲಿ ತಲುಪಲು ಸಾಧ್ಯವಾಗಬಹುದಾದ ಅತೀ ಹಳೆಯ ಪಠ್ಯ ಸ್ವರೂಪ ವನ್ನು ಮರುನಿರ್ಮಿಸಬಹುದು."[೨೦]
ಐರಾವಣನನ್ನು ಅರ್ಜುನ ಮತ್ತು ಉಲುಪಿಯ ಮಗನಾಗಿ ಎರಡು ಪುರಾಣಗಳಾದ ("ಪವಿತ್ರ ಗ್ರಂಥಗಳಲ್ಲಿ") ವಿಷ್ಣು ಪುರಾಣ (4:20:12) - ಹಾಗೆಯೇ ಗುಪ್ತ ಕಾಲಾವಧಿಗಳ ಮೂಲಕ ಹಿಂದಿನ ವೈದಿಕ ಸಂಸ್ಕೃತಿಯ ಪಠ್ಯ ಇತಿಹಾಸದಿಂದ- ಮತ್ತು ಭಾಗವತ ಪುರಾಣ (9:22:32)- ಸಾಂಪ್ರದಾಯಿಕವಾಗಿ ವೈದಿಕ ಅವಧಿಗೆ ಸೂಚಿಸಲ್ಪಡುತ್ತದೆ ಆದರೆ ಆಧುನಿಕ ವಿದ್ವಾಂಸರು ಅದನ್ನು 9 ನೇ ಅಥವಾ 10 ನೇ ಶತಮಾನ ಸಿಇ ಎಂದು ಸೂಚಿಸುತ್ತಾರೆ, ಹೀಗೆ ಎರಡು ಪುರಾಣಗಳಲ್ಲಿ ನಮೂದಿಸಲಾಗಿದೆ.[೨೧][೨೨][೨೩]
ಮಹಾಭಾರತದ ಸಂಸ್ಕೃತದ ಮೂಲ ಆವೃತ್ತಿಯು ಐರಾವಣನು (ಸಂಸ್ಕೃತ ಹೆಸರು) 18-ದಿನದ ಮಹಾಭಾರತದ ಯುದ್ಧದಲ್ಲಿ ಸಾವನ್ನಪ್ಪಿದ ಎಂದು ದಾಖಲಿಸಿದ್ದರೂ, ತಮಿಳು ಆವೃತ್ತಿಗಳು ಯುದ್ಧದ ಮೊದಲು ಕಾಳಿ ಮಾತೆಗೆ ಅರಾವಣನ (ತಮಿಳು ಹೆಸರು) ಅನುಷ್ಠಾನದ ಸ್ವಯಂ-ತ್ಯಾಗವನ್ನು ಚರ್ಚಿಸುತ್ತದೆ. ಹಿಲ್ಟ್ಬೀಟಲ್ ಇದನ್ನು ದೇವಿಯ ಎದುರಿಗೆ "ವೀರೋಚಿತ" ಸ್ವಯಂ-ಅಂಗಹೀನಗೊಳಿಸುವಿಕೆ ಮತ್ತು ಸ್ವಯಂ-ಶಿರಚ್ಛೇದನದ ದಕ್ಷಿಣ ಭಾರತೀಯರ ವೈಭವೀಕರಣಕ್ಕೆ ಸಂಬಂಧ ಕಲ್ಪಿಸುತ್ತದೆ.[೨೪][೨೫] ವಿಜಯಕ್ಕೆ ಪ್ರತಿಯಾಗಿ ಪುರಾಣ ದಲ್ಲಿರುವಂತೆ ವೀರ ರಾಜನು ತನ್ನ ದೇವಿಯ ಭಕ್ತಿ ಸಮರ್ಪಿಸಲು ತನ್ನ ರಕ್ತ ಹರಿಸುವುದನ್ನು ಚಿತ್ರಿಸುವ ಹಳೆಯ ತಮಿಳು ಶಿಲ್ಪಕಲಾಕೃತಿಗಳನ್ನು ವ್ಯಾಖ್ಯಾನಿಸುವಾಗ ಪುರಾಣ ಪಠ್ಯವಾದ ದೇವಿ ಮಹಾತ್ಮಯಂ ದ ಕೊನೆಯಲ್ಲಿನ ನಿರ್ದಿಷ್ಟ ದೃಶ್ಯವನ್ನು ಅವನು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಾರೆ.[೨೪] ತಮಿಳು ಶಿಲ್ಪಕಲಾಕೃತಿಗಳಲ್ಲಿ, ದೇವಿಯು ಕೊರ್ರಾವೈ ಆಗಿದ್ದು, ಅವಳು ದುರ್ಗೆಯೊಂದಿಗೆ ಸಂಬಂಧಿಸಿದುದರಿಂದ ಕಾಳಿಯಾಗಿದ್ದಾಳೆ.[೨೪] ಅವನು ಮತ್ತೊಬ್ಬ ಮಹಾಭಾರತದ ಪಾತ್ರವಾದ ಬಾರ್ಬರಿಕಾ[೨೬] ದ ತ್ಯಾಗದ ಬಗೆಗಿನ ತೆಲುಗು ದಂತಕಥೆಯಲ್ಲಿ ಮತ್ತು ರಾಜಸ್ತಾನದ ಅದರ ರೂಪಗಳಲ್ಲಿ ಸಾಮ್ಯವನ್ನು ಹೊಂದಿದ್ದಾನೆ (ಇಲ್ಲೂ ನೋಡಿ: ಖತುಶ್ಯಂಜಿ), ಹಿಮಾಚಲ ಪ್ರದೇಶ, ಘರವಾಲ್, ಕುರುಕ್ಷೇತ್ರ, ಬುಂದೇಲಖಂಡ್ ಮತ್ತು ಒರಿಸ್ಸಾ. ಅರಾವಣ ಮತ್ತು ಬಾರ್ಬರಿಕಾ ನಡುವಿನ ಹೆಚ್ಚು ಗಮನಿಸಬಹುದಾದ ಸಾಮ್ಯತೆಯು ಮಹಾಭಾರತ ಯುದ್ಧದ ಸಂಪೂರ್ಣ ಕಾಲಾವಧಿಯನ್ನು ತ್ಯಾಗದ ಬಳಿಕವೂ ಬೇರ್ಪಡಿತ ತಲೆಯ ಕಣ್ಣುಗಳ ಮೂಲಕ ವೀಕ್ಷಿಸುವ ವರವಾಗಿದೆ.[೨೭][೨೮]
ಅರಾವಣನ ತ್ಯಾಗದ ಮೊದಲ ವಿವರಣೆಯು ಪೆರುಂತೇವನಾರ್ (9ನೇ ಶತಮಾನದ) ಅವರ ಮೊಟ್ಟಮೊದಲ ಉಳಿದಿರುವ ಮಹಾಭಾರತದ ತಮಿಳು ಆವೃತ್ತಿಯಾದ ಪಾರ್ಥ ವೆಂಪಾ ದಲ್ಲಿ ಕಾಣಬಹುದು. ಕಥನವನ್ನು ನಂತರ ವಿಲ್ಲುಪುಟುರಾಲ್ವರ್ ಅವರ 14 ನೇ ಶತಮಾನದ ಮಾಕಪಾರಾಟಮ್ ಮತ್ತು 18 ನೇ ಶತಮಾದಲ್ಲಿ ನಲ್ಲಿಪಿಲ್ಲೈಯವರಿಂದ ಅದೇ ರೀತಿಯಲ್ಲಿ ಹೇಳಲಾಯಿತು.[೨೯] ಪುರಾಣ ಕಥೆಯನ್ನು ಕುಟ್ಟಂತವರ್ ದೇಗುಲಕ್ಕೆ ಸಂಬಂಧಿಸಿದ ಖೂತಾನ್ವರ್ ಸ್ಥಳ ಪುರಾಣ ಗ್ರಂಥದಲ್ಲೂ ಉಲ್ಲೇಖಿಸಲಾಗಿದೆ.[೩೦]
ಅರಾವಣ ಸಂಪ್ರದಾಯಗಳ ಮತ್ತೊಂದು ಮೂಲವೆಂದರೆ ಕೂತು ಎಂದು ಕರೆಯಲಾಗುವ ತಮಿಳುನಾಡಿನ ಜಾನಪದ-ನಾಟಕವಾಗಿದೆ. ಅರಾವಣ ಕಾಲಾಪ್ಪಾಲಿ (ಅಥವಾ ಅರಾವಣ ಕಾಲಬಾಲಿ ), "ಅರಾವಣನ ಯುದ್ಧಭೂಮಿಯ ತ್ಯಾಗ"ವು ಸಾಂಪ್ರದಾಯಿಕ ತೆರುಕುಟ್ಟು ("ಬೀದಿ ನಾಟಕ")ದ ಜನಪ್ರಿಯ ವಿಷಯವಸ್ತುವಾಗಿದೆ. ಅರಾವಣ ಕಾಲಾಪ್ಪಾಲಿ ಯು ಅರಾವಣನು ಕಾಳಿಯ ಬೆಂಬಲವನ್ನು ಗಳಿಸಲು ಅವಳಿಗೆ ಯುದ್ಧದ ಮೊದಲು ಸ್ವಯಂ-ತ್ಯಾಗ ಮಾಡುವ ಮೂಲಕ ಮಹಾಭಾರತ ಯುದ್ಧದಲ್ಲಿ ಪಾಂಡವರಿಗೆ (ಅರ್ಜುನ ಮತ್ತು ಅವರ ಸಹೋದರರು) ಜಯವನ್ನು ನಿಶ್ಚಿತಗೊಳಿಸಿದ ಕಥೆಯನ್ನು ಹೇಳುತ್ತದೆ. ವಿವಿಧ ಪ್ರಕಾರಗಳ ಕೂತು ಜಾನಪದ-ನಾಟಕದ ಪ್ರಕಾರವಾಗಿ ಅರಾವಣ ಕಾಲಪ್ಪಾಲಿ ಯನ್ನು ಮೆಲತ್ತೂರು, ಕೊಡುಕಿಜಿ ಮತ್ತು ಯೆರ್ವಾಡಿಯ ಗ್ರಾಮಗಳಲ್ಲಿ ವಾರ್ಷಿಕವಾಗಿ ನಡೆಸಲಾಗುತ್ತದೆ. ಕಾರಂಬಾಯಿಯಲ್ಲಿ, ಅರಾವಣ ಕಾಲಪ್ಪಾಲಿ ಯನ್ನು ದೇವತೆಯನ್ನು ಸಂತೃಪ್ತಪಡಿಸಲು ವಾರ್ಷಿಕ ಉತ್ಸವದ (ಏಪ್ರಿಲ್-ಮೇ) 18 ನೇ ದಿನದಂದು ದ್ರೌಪದಿಯ ಆರಾಧನೆಯಾಗಿ ನಿರ್ವಹಿಸಲಾಗುತ್ತದೆ.[೩೧]
ಆಧುನಿಕ ವ್ಯಾಖ್ಯಾನದಲ್ಲಿ, ಅರಾವಣನ ತಲೆಯು ಕೇವಲ ಸ್ವಯ-ತ್ಯಾಗವನ್ನು ಮಾತ್ರ ಸಂಕೇತಿಸುವುದು ಮಾತ್ರವಲ್ಲದೇ, ಅವನ ತ್ಯಾಗದ ಬಳಿಕ ಯುದ್ಧವನ್ನು ನೋಡುವ ಅವನ ಸಾಮರ್ಥ್ಯದ ಕಾರಣದಿಂದ ಪುನರ್ಜನ್ಮ ಮತ್ತು ನಿರಂತರತೆಯನ್ನು ಸಂಕೇತಿಸುತ್ತದೆ.[೩೨] ಉದಾಹರಣೆಗಾಗಿ, ಅರಾವಣನ ಕಥನವನ್ನು ವಿವರಿಸುವ ಇರಾಮಾಕಾಮಿಪ್ಪುಲವರ್ ಅವರ ಮೇರ್ಕೋಲ್ವಿಲಕ್ಕಾ ಕ್ಕಾಟೈ ಅಕಾರವಾರಿಕೈ (1963)ದ ಅಂತ್ಯದಲ್ಲಿ ಹೇಳುವಂತೆ ಅರಾವಣನು "ಸ್ವಯಂ-ತ್ಯಾಗದ ಆದರ್ಶ" ವನ್ನು ಸಾಕಾರಗೊಳಿಸಿದ ಕಾರಣದಿಂದ ಅವನು ತಮಿಳುನಾಡಿನ ಜಾನಪದ ನಾಯಕನಾಗಿ ನಿರಂತರವಾಗಿ ಇರುತ್ತಾನೆ.[೩೩] ಅರಾವಣನನ್ನು ಯುದ್ಧದ ನೋವಿನ ಪ್ರತಿನಿಧಿಯಾಗಿ ಪರಿಗಣಿಸಲಾಗಿದೆ, ಒಲ್ಲದ ಮನಸ್ಸಿನಿಂದ "ತೃಪ್ತಳಾಗದ ಯುದ್ಧದ ದೇವತೆಯಿಂದ ಸೇವಿಸಲು" ಅವರ ತಾಯಿಯಂದಿರು ಒಲ್ಲದ ಮನಸ್ಸಿನಿಂದ ಕಳುಹಿಸಿದ "ಅಸಂಖ್ಯಾತ ಅಮಾಯಕರನ್ನು" ಅವನು ನೆನಪಿಸುತ್ತಾನೆ.[೩೧] ಮತ್ತೊಂದು ಪ್ರಕಾರವಾಗಿ ಅರಾವಣನ ತ್ಯಾಗವನ್ನು ಭಾರತಜ್ಞರಾದ ಡೇವಿಡ್ ಶುಲ್ಮನ್ ಅವರು ತಮಿಳು ಮಹಾಕಾವ್ಯದ ಸಂಪ್ರದಾಯದಲ್ಲಿನ ಸರ್ಪದ ತ್ಯಾಗದ ಮರುನೆನಪೆಂದು ಪರಿಗಣಿಸುತ್ತಾರೆ.[೩೪]
ಮಹಾಭಾರತ[ಬದಲಾಯಿಸಿ]
ಮಹಾಭಾರತದ ಪ್ರಥಮ ಪುಸ್ತಕವಾದ ಆದಿ ಪರ್ವ (ಪ್ರಾರಂಭಗಳ ಪುಸ್ತಕ) ದಲ್ಲಿ ಐರಾವಣನ ಪೋಷಕರ ಮದುವೆಯನ್ನು ನಮೂದಿಸಲಾಗಿದ್ದರೂ, ಐರಾವಣನ ಜನ್ಮ ಮತ್ತು ಸಾವುಗಳೆರಡನ್ನೂ ನಂತರದ ಆರನೇ ಪುಸ್ತಕವಾದ ಭೀಷ್ಮ ಪರ್ವ (ಭೀಷ್ಮನ ಪುಸ್ತಕ)ದಲ್ಲಿ ನಮೂದಿಸಲಾಗಿದೆ.[೩೫][೩೬] ಈ ಮಹಾಕಾವ್ಯದ ಆರನೇ ಪುಸ್ತಕದಲ್ಲಿ, ಪಾಂಡವರ ಮೂರನೇ ಸಹೋದರನಾದ ಅರ್ಜುನನನ್ನು ಇಂದ್ರಪ್ರಸ್ಥ (ಪಾಂಡವ ರಾಜ್ಯದ ರಾಜಧಾನಿ)ಯಿಂದ ಪಾಂಡವ ಸಹೋದರರ ಸರ್ವಸಮಾನ ಪತ್ನಿಯಾದ ದ್ರೌಪದಿಯೊಂದಿಗಿನ ಮದುವೆಯ ನಿಯಮಗಳನ್ನು ಮೀರಿದ್ದಕ್ಕಾಗಿ ಒಂದು ವರ್ಷದ ಪ್ರಾಯಶ್ಚಿತ್ತದ ತೀರ್ಥಯಾತ್ರೆಗೆ ಹೋಗಲು ಗಡೀಪಾರು ಮಾಡಲಾಗುತ್ತದೆ. ಅರ್ಜುನನು ಪ್ರಸ್ತುತ ಭಾರತದ ಉತ್ತರ-ಪೂರ್ವ ಪ್ರಾಂತ್ಯಕ್ಕೆ ತಲುಪುತ್ತಾನೆ ಮತ್ತು ನಾಗ (ಸರ್ಪ) ರಾಣಿಯ ವಿಧವಾ ಪತ್ನಿಯಾದ ಉಲುಪಿಯೊಂದಿಗೆ ಪ್ರೇಮಪಾಶದಲ್ಲಿ ಸಿಲುಕುತ್ತಾನೆ. ಇಬ್ಬರೂ ಮದುವೆಯಾಗುತ್ತಾರೆ ಮತ್ತು ಐರಾವಣ ಎಂಬ ಹೆಸರಿನ ಮಗನನ್ನು ಹೊಂದುತ್ತಾರೆ; ನಂತರ, ಅರ್ಜುನನು ಐರಾವಣ ಮತ್ತು ಉಲುಪಿಯನ್ನು ನಾಗಗಳ ನಿವಾಸಸ್ಥಾನವಾದ ನಾಗಲೋಕದಲ್ಲಿ ಬಿಟ್ಟು ತೀರ್ಥಯಾತ್ರೆಯನ್ನು ಮುಂದುವರೆಸುತ್ತಾನೆ.[೩೭] ಐರಾವಣನನ್ನು ಪರಕ್ಷೇತ್ರೆ ಯಲ್ಲಿ ಜನಸಿದವನೆಂದು ವಿವರಿಸಲಾಗುತ್ತದೆ, ಪ್ರಾಸಂಗಿಕವಾಗಿ "ಮತ್ತೋರ್ವ ವ್ಯಕ್ತಿಗೆ ಸೇರಿದ ಪ್ರಾಂತ್ಯ", ಹಿಲ್ಟೆಬೀಟೆಲ್ ವ್ಯಾಖ್ಯಾನಿಸುವಂತೆ "ಮತ್ತೊಬ್ಬ ಪತ್ನಿಯೊಂದಿಗೆ". ಐರಾವಣನು ನಾಗಲೋಕದಲ್ಲಿ ತಾಯಿಯ ರಕ್ಷಣೆಯಲ್ಲಿ ಬೆಳೆಯುತ್ತಾನೆ, ಆದರೆ ಅರ್ಜುನನೊಂದಿಗಿನ ದ್ವೇಷದಿಂದಾಗಿ ಅವನ ತಾಯಿಯ ಚಿಕ್ಕಪ್ಪನು ಇವನನ್ನು ತಿರಸ್ಕರಿಸುತ್ತಾನೆ. ಪ್ರಬುದ್ಧಾವಸ್ಥೆಯನ್ನು ತಲುಪಿದ ಬಳಿಕೆ, ಐರಾವಣನು ತನ್ನ ತಂದೆಯೊಂದಿಗೆ ಒಗ್ಗೂಡುವ ಆಕಾಕ್ಷೆಯೊಂದಿಗೆ, ಅರ್ಜುನನ ತಂದೆಯಾದ ದೇವ ಇಂದ್ರನ ವಾಸಸ್ಥಾನವಾದ ಇಂದ್ರಲೋಕಕ್ಕೆ ತೆರಳುತ್ತಾನೆ. ತನ್ನ ಪ್ರೌಢ ಪುತ್ರನನ್ನ ನೋಡಿದ ಅರ್ಜುನನು ಕುರುಕ್ಷೇತ್ರ ಯುದ್ಧದಲ್ಲಿ ಅವನ ಸಹಾಯವನ್ನು ಕೋರುತ್ತಾನೆ.[೩೫][೩೮]
ಈ ಮೂಲಕ ಐರಾವಣನು ಅಂತಿಮವಾಗಿ ತನ್ನ ಸೋದರ ಸಂಬಂಧಿಗಳು ಮತ್ತು ವಿರೋಧಿಗಳಾದ ಕೌರವರ ವಿರುದ್ಧ ತನ್ನ ತಂದೆ ಮತ್ತು ಪಾಂಡವರಿಗೆ ಸಹಾಯ ಮಾಡಲು ಯುದ್ಧ ಭೂಮಿಯಾದ ಕುರುಕ್ಷೇತ್ರವನ್ನು ತಲುಪುತ್ತಾನೆ. ಯುದ್ಧದ ಮೊದಲನೇ ದಿನದಂದು, ಹಿಂದಿನ ಅವತಾರದಲ್ಲಿ ಕ್ರೋಧಾವಸನೆಂಬ ದೈತ್ಯ (ರಾಕ್ಷಸ)ನಾಗಿದ್ದ ಕ್ಷತ್ರಿಯರಾಜನಾದ ಶ್ರುತಾಯುಷನೊಂದಿಗೆ ಸೆಣಸುತ್ತಾನೆ. ಅರ್ಜುನನನು ನಂತರ ಶ್ರುತಾಯುಷನನ್ನು ಕೊಲ್ಲುತ್ತಾನೆ.[೩೯][೪೦] ಯುದ್ಧದ ಏಳನೇ ದಿನದಂದು, ಐರಾವಣನು ಅವಂತಿಯ ರಾಜರಾದ ವಿಂಧ ಮತ್ತು ಅನುವಿಂಧರನ್ನು ಪರಾಭವಗೊಳಿಸುತ್ತಾನೆ, ಅವರನ್ನು ನಂತರ ಅರ್ಜುನನು ಕೊಲ್ಲುತ್ತಾನೆ.[೪೧][೪೨]
ಯುದ್ಧದ ಎಂಟನೇ ದಿನದಂದು, ಗಾಂಧಾರ ರಾಜಕುಮಾರ, ರಾಜ ಸುವಲನ ಪುತ್ರರು ಮತ್ತು ಕೌರವರ ವಿಶ್ವಾಸಘಾತುಕ ಸೋದರಮಾಮನಾದ ಶಕುನಿಯ ಕಿರಿಯ ಪುತ್ರರೊಂದಿಗೆ ಐರಾವಣನು ಸೆಣಸಾಡುತ್ತಾನೆ. ಸಹೋದರರಾದ ಗಯಾ, ಗವಾಕ್ಷ, ವೃಶ್ವ, ಚರ್ಮಾವತ, ಆರ್ಜವ ಮತ್ತು ಸುಕರು ಐರಾವಣನ ಮೇಲೆ ಸಂಪೂರ್ಣ ಕೌರವ ಸೈನ್ಯದ ನೆರವಿನಿಂದ ಆಕ್ರಮಣ ಮಾಡುತ್ತಾರೆ, ಆದರೆ ಐರಾವಣನ ನಾಗಾ ಸೈನ್ಯವು ಎಲ್ಲ ವಿರೋಧಿಗಳನ್ನು ಸಂಹಾರ ಮಾಡುತ್ತದೆ. "ಶತ್ರುಗಳ ಶಿಕ್ಷಕ"ನಾದ ಐರಾವಣನು ಮಾಯಾ (ಮಾಯೆ)ಯಲ್ಲಿ ಪರಿಣಿತನಾಗಿದ್ದು, ಖಡ್ಗದ ಯುದ್ಧದಲ್ಲಿ ಕೌರವ ಸಹೋದರರಲ್ಲಿ ಐವರನ್ನು ಸಂಹಾರ ಮಾಡುತ್ತಾನೆ; ವೃಷವ ಮಾತ್ರ ಸಾವಿನಿಂದ ಪಾರಾಗುತ್ತಾನೆ.[೪೩][೪೪]
ಇದರಿಂದ ಕಂಗೆಟ್ಟ ಹಿರಿಯ ಕೌರವನಾದ ದುರ್ಯೋಧನನು ಐರಾವಣನನ್ನು ಕೊಲ್ಲಲು ಋಷ್ಯಶೃಂಗನ ಮಗನಾದ ರಾಕ್ಷಸ (ದೈತ್ಯ) ಅಲಂವುಷ (ಅಥವಾ ಅಲಂಬುಷ)ನಿಗೆ ಆದೇಶಿಸುತ್ತಾನೆ. ಈ ಬಾರಿ ಅಲಂಬುಷ ಹಾಗೂ ಐರಾವಣನ ಇಬ್ಬರೂ ಯುದ್ಧದಲ್ಲಿ ಮಾಯೆಯನ್ನು ಬಳಸುತ್ತಾರೆ. ಅಲಂಬುಷನು ಐರಾವಣನನ್ನು ಬಿಲ್ಲಿನಿಂದ ಆಕ್ರಮಣ ಮಾಡುತ್ತಾನೆ, ಆದರೆ ಪ್ರತಿಯಾಗಿ ಐರಾವಣನು ಅಲಂಬುಷನ ಬಿಲ್ಲನ್ನು ಮುರಿಯುತ್ತಾನೆ ಮತ್ತು ರಾಕ್ಷಸನನ್ನು ಹಲವು ಭಾಗಗಳಾಗಿ ಸಂಹರಿಸುತ್ತಾನೆ. ಆದರೆ ಅಲಂಬುಷನ ದೇಹವು ತನ್ನಷ್ಟಕ್ಕೇ ಮರುರೂಪುಗೊಳ್ಳುತ್ತದೆ. ಆಗ ಐರಾವಣನು ಶೇಷ (ಅನಂತ) ಸರ್ಪದ ರೂಪವನ್ನು ತಾಳುತ್ತಾನೆ ಮತ್ತು ಅವನ ಸರ್ಪ ಸೈನ್ಯವು ಅವನನ್ನು ರಕ್ಷಿಸಲು ಸುತ್ತವರಿಯುತ್ತದೆ. ಇದಕ್ಕ ಪ್ರತಿಯಾಗಿ ಅಲಂಬುಷನು ಸರ್ಪಗಳ ಅನಂತ ವೈರಿಯಾದ ಗರುಡ (ಹದ್ದು)ನ ರೂಪವನ್ನು ತಾಳುತ್ತಾನೆ ಮತ್ತು ಸರ್ಪದ ಸೈನ್ಯವನ್ನು ನಾಶ ಮಾಡುತ್ತಾನೆ. ಅಂತಿಮವಾಗಿ, ಅಲಂಬುಷನು ಐರಾವಣನ ಶಿರಚ್ಛೇದವನ್ನು ಮಾಡುವ ಮೂಲಕ ಸಂಹಾರ ಮಾಡುತ್ತಾನೆ, ಆದರೂ ನಂತರ ಅವನ ಸೋದರ ಸಂಬಂಧಿಯಾದ ಘಟೋತ್ಕಜನು ಅಂತಿಮವಾಗಿ ಅಲಂಬುಷನನ್ನು ಕೊಲ್ಲುತ್ತಾನೆ.[೩೮][೪೩][೪೫]
ತಮಿಳು ಸಂಪ್ರದಾಯಗಳು[ಬದಲಾಯಿಸಿ]
ತ್ಯಾಗದ ಬಲಿಯಾಗಿ ಆಯ್ಕೆ[ಬದಲಾಯಿಸಿ]
ಐರಾವಣಕ್ಕೆ ಸಂಬಂಧಿಸಿದಂತೆ ತಮಿಳು ಸಂಪ್ರದಾಯದ ಮೊಟ್ಟಮೊದಲಿನ ಮೂಲಗಳು ಮಹಾಭಾರತದ 9 ನೇ ಶತಮಾನದ ಆವೃತ್ತಿಯಾದ ಪೆರುಂತೆವನಾರ್ ಅವರ ಪಾರ್ಥ ವೆಂಪ ದಲ್ಲಿ ಕಂಡು ಬರುತ್ತದೆ.[೪೬] ಈ ಸಾಹಿತ್ಯ ಕೃತಿಯ ವೈಶಿಷ್ಟ್ಯವೆಂದರೆ ಅದು ಕಾಲಪ್ಪಾಲಿ ("ಯುದ್ಧಭೂಮಿಗೆ ಬಲಿದಾನ") ಎಂದು ಕರೆಯುವ ಧಾರ್ಮಿಕ ವಿಧಿಯಾಗಿದ್ದು, ಈ ಪದವು ತಮಿಳು ಆವೃತ್ತಿಯ ಮಹಾಭಾರತದಲ್ಲಿ ಮಾತ್ರ ಕಂಡುಬರುತ್ತದೆ. ಇದು ವಿಜಯವನ್ನು ಖಚಿತಪಡಿಸಿಕೊಳ್ಳಲು ಯುದ್ಧಕ್ಕೆ ತೆರಳುವ ಮುನ್ನ ಕೈಗೊಳ್ಳುವ ಧಾರ್ಮಿಕ ಕಾರ್ಯವಾಗಿದೆ. ಪೆರುಂತೆವನಾರ್ ಅವರ ನಿರೂಪಣೆಯಲ್ಲಿ, ಮಹಾಭಾರತದ ಯುದ್ಧದ ಸ್ವಲ್ಪ ಮೊದಲು, ಕೌರವರ ನಾಯಕ ಮತ್ತು ಪಾಂಡವರ ವಿರೋಧಿಯಾದ ದುರ್ಯೋಧನನು ನಿಜವಾಗಿಯೂ ನಾಳೆಯ ದಿನವಾದ ಹುಣ್ಣಿಮೆಯು ಕಾಲಪ್ಪಾಳಿ ಗೆ ಪ್ರಶಸ್ತ ದಿನವೆಂದು ಪಾಂಡವರ ನುರಿತ ಜ್ಯೋತಿಷಿಯಾದ ಸಹದೇವನಿಂದ ತಿಳಿದುಕೊಳ್ಳುತ್ತಾನೆ. ಈ ಪ್ರಕಾರವಾಗಿ, ದುರ್ಯೋಧನನು ಐರಾವಣನನ್ನು ಸಂಪರ್ಕಿಸಿ ಕಾಲಪ್ಪಾಳಿ ಗೆ ತ್ಯಾಗದ ಬಲಿಯಾಗಬೇಕೆಂದು ಮನವೊಪ್ಪಿಸುತ್ತಾನೆ.[೨೫]
ಪಾಂಡವರ ನಿಕಟ ಸಲಹಾಗಾರ ಮತ್ತು ಆಪ್ತನಾದ ಕೃಷ್ಣನು ದುರ್ಯೋಧನನ ಯೋಜನೆಯ ಬಗ್ಗೆ ಕೇಳುತ್ತಾನೆ ಮತ್ತು ಐರಾವಣನು ಕೌರವರ ಬದಲಿಗೆ ಪಾಂಡವರ ಪರವಾಗಿ ತನ್ನಷ್ಟಕ್ಕೇ ಬಲಿದಾನ ಮಾಡುವಂತೆ ಖಚಿತಪಡಿಸಿಕೊಳ್ಳಲು ಯೋಜನೆಯೊಂದನ್ನು ಸಿದ್ಧಪಡಿಸುತ್ತಾನೆ. ಮೊದಲು ಸಮಸ್ಯೆಯನ್ನು ಕೃಷ್ಣನು ಪಾಂಡವರ ಹಿರಿಯನಾದ ಯುಧಿಷ್ಠಿರ (ಧರ್ಮ ಅಥವಾ ಧರ್ಮರಾಜ)ನೊಂದಿಗೆ ಚರ್ಚಿಸುತ್ತಾನೆ, ಮತ್ತು ಕಾಳಿಯನ್ನು ಆಯುಧ-ಪೂಜೆ ("ಶಸ್ತ್ರಾಸ್ತ್ರಗಳ ಪೂಜೆ")ಯ ಭಾಗವಾಗಿ ಬಲಿ ನೀಡುವಂತೆ ಶಿಫಾರಸು ಮಾಡುತ್ತಾನೆ. ಬಲಿಯಾಗಿ ನೀಡಲು ನಾಲ್ಕು ಜನ ಹೆಚ್ಚು ಅರ್ಹರಾದ ಜನರಿದ್ದಾರೆಂದು ಕೃಷ್ಣನು ತಿಳಿದುಕೊಳ್ಳುತ್ತಾನೆ: ಕೌರವರ ಪಕ್ಷದಲ್ಲಿರುವ ಶಲ್ಯ, ಪಾಂಡವರ ನಾಯಕನಾದ ಅರ್ಜುನ, ಅರಾವಣ ಮತ್ತು ಸ್ವತಃ ಕೃಷ್ಣ. ಈ ಪಟ್ಟಿಯಿಂದ, ಕೃಷ್ಣನು ಅಂತಿಮವಾಗಿ ಅರಾವಣನೇ ಅತ್ಯುತ್ತಮ ಆಯ್ಕೆಯೆಂದು ನಿರ್ಧರಿಸುತ್ತಾನೆ. ಪಾಂಡವರ ಪರವಾಗಿ ಕಾರಪ್ಪಾಳಿ ಗೆ ಒಳಗಾಗಲು ಅರಾವಣನು ಒಪ್ಪುತ್ತಾನೆ ಆದರೆ ತನ್ನ ಮುಂಚಿತ ವಾಗ್ಧಾನವನ್ನು ದುರ್ಯೋಧನನಿಗೆ ತಿಳಿಸುತ್ತಾನೆ.[೪೭][೪೮]
ನಂತರ ತಮಿಳು ಮೂಲಗಳು ಪೆರುಂತೆವನಾರ್ ಅವರ ಆವೃತ್ತಿಗೆ ಭಿನ್ನರೂಪಗಳನ್ನು ಒದಗಿಸುತ್ತವೆ. ವಿಲ್ಲಿಪುತುರಾವರ್ ಅವರ 14 ನೇ ಶತಮಾನದ ಆವೃತ್ತಿಯಲ್ಲಿ, ಮೊದಲಿಗೆ ಕೃಷ್ಣನೇ ತ್ಯಾಗದ ಬಲಿಯಾಗಿ ಅರ್ಪಿಸಿಕೊಳ್ಳಲು ಸಿದ್ಧನಾಗುತ್ತಾನೆ ಆದರೆ ನಂತರ ಅವನ ಬದಲು ಅರಾವಣನು ಸ್ವಯಂಪ್ರೇರಣೆಯಿಂದ ಒಪ್ಪುತ್ತಾನೆ. ಪುರಾಣ ಕಥೆಯ ಈ ಆವೃತ್ತಿಯಲ್ಲಿ ದುರ್ಯೋಧನನ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.[೪೯] ಇತರ ವಿವರಣೆಗಳಲ್ಲಿ, ಕೌರವರು ನೀಡಿದ ಬಿಳಿ ಆನೆಯ ಬಲಿಗೆ ಪ್ರತಿರೋಧವಾಗಿ ಅರಾವಣನು ಬಲಿದಾನ ಮಾಡಿದನು.[೪೯] ತಂಜಾವೂರು ಜಿಲ್ಲೆಯ ನೆಪ್ಪಟ್ಟೂರು ಗ್ರಾಮದ ಸಂಪ್ರದಾಯಗಳಲ್ಲಿ, ಅರಾವಣನನ್ನು ಎಲ್ಲಾ ದುರ್ಯೋಧನನನ್ನು ಒಂದೇ ಬಾರಿಗೆ ಸಂಹಾರಮ ಮಾಡುವಷ್ಟು ಮತ್ತು ಈ ಮೂಲಕ ಸಂಭವಿಸಬಹುದಾದ ಯಾವುದೇ ಯುದ್ಧವನ್ನು ತಪ್ಪಿಸುವಷ್ಟು ಬಲಶಾಲಿಯಾಗಿ ವಿವರಿಸಲಾಗುತ್ತದೆ. ಆದ್ದರಿಂದ "ಯುದ್ಧದ ಬಹುದೊಡ್ಡ ತ್ಯಾಗವು ನಡೆಯಲಿ" ಎಂಬ ಕಾರಣಕ್ಕಾಗಿ ಅರಾವಣನ ಮಾನವ ಬಲಿಯನ್ನು ಕೃಷ್ಣನು ಸೂಚಿಸುತ್ತಾನೆ.[೫೦]
ತೆರುಕುಟ್ಟು ಪ್ರದರ್ಶನಗಳಲ್ಲಿ, ಅರಾವಣನ ಬಲಿದಾನದ ಸಂದರ್ಭದಲ್ಲಿ, ಅವನನ್ನು ಆಗಾಗ್ಗೆ ತಮ್ಮ ತಂದೆಯವರಾದ ಯಯಾತಿ ಮತ್ತು ಶಂತನುವಿಗಾಗಿ ತಮ್ಮ ತಾರುಣ್ಯವನ್ು ಮತ್ತು ಲೈಂಗಿಕ ಇಚ್ಛೆಗಳನ್ನು ತ್ಯಾಗ ಮಾಡಿದ ಮಹಾಭಾರತದ ಪಾತ್ರಗಳಾದ ಪುರು ಮತ್ತು ಭೀಷ್ಮನಿಗೆ ಹೋಲಿಕೆ ಮಾಡಲಾಗುತ್ತದೆ. ನಾಟಕದಲ್ಲಿ, ಅರಾವಣನ ಅನುಮತಿಯನ್ನು ಪಡೆದ ಬಳಿಕ, ಕೃಷ್ಣನು ಅರಾವಣನ ತಾಯಿಯಾದ ಉಲುಪಿ- ತಮಿಳಿನಲ್ಲಿ ನಾಗಕನ್ನಿ ಅಥವಾ ನಾಕಕನ್ನಿ ("ಸರ್ಪ ಕನ್ನಿಕೆ)ಯ ಒಪ್ಪಿಗೆಗಾಗಿ ಸಂಪರ್ಕಿಸುತ್ತಾನೆ. ಮೊದಲು ಅವಳು ತನ್ನ ಮಗನ ಉದ್ದೇಶಿತ ಬಲಿಗೆ ಬಲವಾಗಿ ವಿರೋಧವನ್ನು ವ್ಯಕ್ತಪಡಿಸುತ್ತಾಳೆ, ಆದರೆ ಅಂತಿಮವಾಗಿ ಅರಾವಳು ತಾನು ಕಾಳಿಗೆ ಮಾತ್ರ ಸಮರ್ಪಿತನಾದವನೆಂದು ವಿವರಿಸಿದ ಬಳಿಕ ಅಂತಿಮವಾಗಿ ಒಪ್ಪುತ್ತಾಳೆ.[೪೭]
ಅಂತಿಮವಾಗಿ, ಪುರಾಣ ಕಥನದ ಎಲ್ಲಾ ಆವೃತ್ತಿಗಳಲ್ಲಿ, ಹೊಸ ಚಂದ್ರನ ದಿನವು ಒಂದು ದಿನ ಮೊದಲೇ ಅಂದರೆ ಪ್ರಸ್ತುತ ದಿನವೇ ಬರುವಂತೆ ಸಹಕರಿಸಲು ಸೂರ್ಯ (ಸೂರ್ಯ) ಮತ್ತು ಚಂದ್ರ (ಚಂದ್ರ)ರಿಗೆ ಚಮತ್ಕಾರ ಮಾಡುತ್ತಾನೆ. ಇದು ಅರಾವಣನಿಗೆ ಪಾಂಡವರ ಪರವಾಗಿ ಮೊದಲು ಮಾಂಸವನ್ನು ಬಲಿ ಕೊಡುವಂತೆ ಮತ್ತು ನಂತರ ಕೇವಲ ದುರ್ಯೋಧನನಿಗೆ ನೀಡಿದ ವಾಗ್ಧಾನವನ್ನು ಪೂರೈಸಲು ಅವನ ಪರವಾಗಿ ಮಾರನೇ ದಿನ ಉಳಿಕೆಯ ಬಲಿದಾನವನ್ನು ಮಾಡಲು ಅವಕಾಶ ನೀಡುತ್ತದೆ.[೪೬][೪೭][೪೮]
ಮೂರು ವರಗಳು[ಬದಲಾಯಿಸಿ]
ಪರಾತ ವೆನ್ಪ ದಲ್ಲಿ, ಧೀರ ಯೋಧನ ಕೈಯಲ್ಲಿ ಯುದ್ಧಭೂಮಿಯಲ್ಲಿ ನನಗೆ ವೀರ ಮರಣವನ್ನು ನೀಡಲು ವರವನ್ನು ನೀಡುವಂತೆ ಅರಾವಣನು ಕೃಷ್ಣನಿಗೆ ಕೇಳುತ್ತಾನೆ. ಪರಾತ ವೆನ್ಪ ವು ಕೇವಲ ವರದ ಕುರಿತಂತೆ ಮಾತ್ರ ವಿವರಿಸಿದರೂ, ಒಟ್ಟಾರೆಯಾಗಿ ತಮಿಳು ಸಂಪ್ರದಾಯವು ಒಟ್ಟು ಮೂರು ವಿಶಿಷ್ಟ ವರಗಳನ್ನು ಉಳಿಸಿಕೊಂಡು ಬಂದಿದೆ. ಹಿಲ್ಟೆಬೀಟಲ್ ಪ್ರಕಾರವಾಗಿ ಪರಾತ ವೆನ್ಪ ದ ಏಕೈಕ ವರವು ಅಲಂಬುಷನ ಕೈಯಲ್ಲಿ (ತಮಿಳಿನಲ್ಲಿ ಅಲಂಪುಕನ್) ಯುದ್ಧದ ಸಮಯದಲ್ಲಿ ಅರಾವಣನ ಸಾವಿನ ಬಗ್ಗೆ ಮೂಲ ಸಂಸ್ಕೃತದ ವಿವರಣೆಯೊಂದಿಗೆ ಅರಾವಣನ ಯುದ್ಧ-ಮುಂಚಿನ ತ್ಯಾಗದ ತಮಿಳು ಸಂಪ್ರದಾಯವನ್ನು ಸಮನ್ವಯಗೊಳಿಸುವ ಮೊದಲಿನ (9 ನೇ ಶತಮಾನದ) ಪ್ರಯತ್ನವಾಗಿತ್ತು ಎಂದು ಸೂಚಿಸುತ್ತದೆ.[೪೬]
ಕುಟ್ಟಂತಾವರ್ ಮತ್ತು ದ್ರೌಪದಿ ಭಕ್ತ ವೃಂದಗಳಲ್ಲಿ, ಅರಾವಣನಿಗೆ ಯುದ್ಧದ ಸಂಪೂರ್ಣ 18 ದಿನಗಳನ್ನು ನೋಡಲು ಎರಡನೆಯ ವರವನ್ನು ನೀಡಿದುದಾಗಿ ನಂಬಲಾಗಿದೆ. ಎರಡನೆಯ ವರವನ್ನು ನಿಜವಾಗಿಯೂ ಮಹಾಭಾರತದ ವಿಲ್ಲಿಪುಟ್ಟುರಾಲ್ವರ್ ಅವರು 14 ನೇ ಶತಮಾನದ ಆವೃತ್ತಿಯಲ್ಲಿ ಕಾಣಬಹುದಾಗಿದೆ. ಈ ಆವೃತ್ತಿಯಲ್ಲಿ, ಅರಾವಣನಿಗೆ ಯುದ್ಧದ " ಕೆಲವು ದಿನಗಳನ್ನು" ವೀಕ್ಷಿಸಲು ಮತ್ತು ಹಲವು ವೈರಿಗಳನ್ನು ಕೊಂದ ನಂತರ ವೀರೋಚಿತವಾಗಿ ಸಾವನ್ನು ಪಡೆಯಲು ವರಗಳನ್ನು ನೀಡಲಾಯಿತು, ಆದರೂ ವಿಲ್ಲಿಪುಟ್ಟುರಾಲ್ವರ್ ಅವರು ಎಂಟನೇ ದಿನದಂದು ಅರಾವಣನ ಸಾವಿನ ನಂತರ ಸಂಪೂರ್ಣ ಯುದ್ಧವನ್ನು ನೋಡಲು ಅವನ ತಲೆಯು ಬದುಕಿತ್ತೇ ಎಂಬ ಬಗ್ಗೆ ಪ್ರಸ್ತಾಪವನ್ನು ಮಾಡುವುದಿಲ್ಲ.[೫೧]
ಮೂರನೇ ವರವನ್ನು ಕೇವಲ ಸಾಂಪ್ರದಾಯಿಕ ಆಚರಣೆಗಳಲ್ಲಿ ಮಾತ್ರ ಕಾಣಬಹುದು. ಈ ಮೂರನೇ ವರವು ತ್ಯಾಗಕ್ಕೂ ಮೊದಲು ಅರಾವಣನಿಗೆ ಮದುವೆಯಾಗಲು, ಈ ಮೂಲಕ ಅಂತ್ಯಸಂಸ್ಕಾರ ಮತ್ತು ಶವಸಂಸ್ಕಾರಕ್ಕೆ ಸಂಬಂಧಿಸಿದ ನೀಡುವಿಕೆಗಳಿಗೆ ಅರ್ಹತೆಯನ್ನು ಒದಗಿಸುತ್ತದೆ (ಅವಿವಾಹಿತರನ್ನು ಹೂತು ಹಾಕಲಾಗುತ್ತಿತ್ತು). ಆದರೆ,ವೈಧವ್ಯದ ತಪ್ಪಿಸಲಾಗದ ವಿಧಿಯ ಬಗ್ಗೆ ಭಯಭೀತರಾಗಿ ಯಾವ ಮಹಿಳೆಯೂ ಸಹ ಅರಾವಣನನ್ನು ಮದುವೆಯಾಗಲು ಬಯಸುವುದಿಲ್ಲ (ಸತಿ ಸಹ ನೋಡಿ). ಕುಟ್ಟಾಂತವರ್ ಆರಾಧನೆಯ ಆವೃತ್ತಿಯಲ್ಲಿ, ಕೃಷ್ಣನು ಸ್ವತಃ ಮಾಯಾಂಗನೆ ಮೋಹಿನಿಯ ರೂಪವನ್ನು ಧರಿಸಿ, ಅರಾವಣನನ್ನು ಮದುವೆಯಾಗಿ, ಆ ರಾತ್ರಿಯನ್ನು ಅವನೊಂದಿಗೆ ಕಳೆದು ಈ ಬಿಕ್ಕಟ್ಟನ್ನು ಪರಿಹರಿಸುತ್ತಾನೆ. ಕೂವಗಾಮ್ ಆವೃತ್ತಿಯು ಹೆಚ್ಚುವರಿಯಾಗಿ ಮಾರನೇ ದಿನ ಅರಾವಣನ ಬಲಿಯ ನಂತರ ವಿಧವೆಯಾಗಿ ಕೃಷ್ಣನು ದುಃಖಿಸುವುದನ್ನು , ನಂತರ ಅವನು ಯುದ್ಧದ ಅವಧಿಗೆ ತನ್ನ ಮೂಲ ಪುರುಷ ರೂಪಕ್ಕೆ ಮರಳುವುದನ್ನು ನಿರೂಪಿಸುತ್ತದೆ.[೪೬][೪೭][೪೮][೫೨] ತರ್ಕುಟ್ಟು ಪ್ರದರ್ಶನವು ಸೊಗಸಾದ ಮದುವೆ ಸಮಾರಂಭ ಮತ್ತು ಆ ನಂತರ ಮೋಹಿನಿಯ ಹಠಾತ್ ತೆರಳುವಿಕೆಯನ್ನು ಪ್ರಸ್ತುತ ಪಡಿಸುವ ಮೂಲಕ ಮದುವೆಯು ಸಂಪೂರ್ಣವಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.[೫೩] ವ್ಯತ್ಯಸ್ಥ ಲಿಂಗಿಗಳಲ್ಲಿ ಜನಪ್ರಿಯವಾಗಿರುವ ಮತ್ತೊಂದು ಆವೃತ್ತಿಯು ಅರಾವಣನು "ಮೈಥುನದ ಸ್ವರ್ಗಸುಖ"ವನ್ನು ಅನುಭವಿಸುವ ಬಯಕೆಯ ಹಿಂದಿನ ಕಾರಣವನ್ನು ನೀಡುತ್ತದೆ ಮತ್ತು ಮದುವೆಯ ಸಂಪೂರ್ಣತೆಯ ಬಗ್ಗೆ ವಿವರಪೂರ್ಣವಾಗಿ ತಿಳಿಸುತ್ತದೆ.[೫೪][೫೫] ಈ ಮೂರನೇ ಮದುವೆಯ ವರವು ಆದರೆ ಎಲ್ಲಾ ಸಾಂಪ್ರದಾಯಿಕ ಪದ್ಧತಿಗಳಲ್ಲಿ ಒಂದೇ ರೀತಿಯಾಗಿಲ್ಲ. ಮತ್ತೊಂದು ಪುರಾಣ ಕಥೆಗಳಲ್ಲಿ, ಕೃಷ್ಣನು ಕೆಲವು ಇತರೆ ಮದುವೆ ಪೂರ್ಣ-ಯುದ್ಧವನ್ನು ಸಂಘಟಿಸುತ್ತಾನೆ. ತಂಜಾವೂರಿನಲ್ಲಿ, ಅರಾವಣ ಮತ್ತು ಮೋಹಿನಿಯ ಮದುವೆಯು ತಿಳಿದಿಲ್ಲ; ಬದಲಿಗೆ ಅರಾವಣನು ಕೃಷ್ಣನ ಕಿರಿಯ ಸೋದರ-ಸಂಬಂಧಿ ಸತ್ಯಕಿಯ ಮಗಳಾದ ಪಾರವನಸ್ಸಿಯಲ್ಳನ್ನು ಮದುವೆಯಾದನು ಎಂದು ಚಿತ್ರಿಸುತ್ತದೆ.[೫೬]
ಮೊದಲ (ವೀರೋಚಿತ-ಮರಣ) ಮತ್ತು ಮೂರನೇ (ಮದುವೆ)ಯ ವರಗಳು ಕುಟ್ಟಾಂತವರ್ ಭಕ್ತ ವರ್ಗದಿಂದ ಹುಟ್ಟಿದವು ಮತ್ತು ಎರಡನೆಯ ವರವು ದ್ರೌಪದಿ ಭಕ್ತ ವರ್ಗದಿಂದ ಹುಟ್ಟಿತು ಎಂದು ಹಿಲ್ಟೆಬೀಟೆಲ್ ಊಹಿಸುತ್ತಾರೆ. ಕುಟ್ಟಾಂತವರ್ ಭಕ್ತ ವರ್ಗವು ಅಲಿ (ತಮಿಳುನಾಡಿನಲ್ಲಿ ಅಧಿಕೃತವಾಗಿ, "ಎನುಚ್ಸ್" ) ಪಾತ್ರ ನಿರ್ವಹಣೆಯ ಮೂಲಕ ವೀರೋಚಿತ ಮರಣ ಮತ್ತು ಮದುವೆ ಸಮಾರಂಭಗಳೆರಡನ್ನೂ ಧಾರ್ಮಿಕ ಸಂಸ್ಕಾರವಾಗಿಸಿದೆ. ಆದರೆ, ದ್ರೌಪದಿ ಭಕ್ತ ವರ್ಗದಲ್ಲಿ ಅದು ಅರಾವಣನ ಮಣ್ಣಿನ ತಲೆಯಾಗಿದ್ದು, ಅದನ್ನು ವೇದಿಕೆ ಮೇಲೆ ಕುಳ್ಳಿರಿಸಿ 18 ದಿನದ ಯುದ್ಧವನ್ನು ಮರು ಪಾತ್ರ ನಿರ್ವಹಣೆ ಮಾಡುತ್ತಾರೆ ,ಅದು ಪ್ರಮುಖವಾಗಿ ಧಾರ್ಮಿಕ ಸಂಸ್ಕಾರವಾಗಿದೆ. ಹೆಚ್ಚಿನದಾಗಿ, ತಂಜಾವೂರು ಭಾಗದ ದ್ರೌಪದಿ ಭಕ್ತ ವರ್ಗದ ಉಲ್ಲೇಖಗಳು ಇತರ ಎರಡು ವರಗಳನ್ನು ಬಿಟ್ಟು ಕೇವಲ ಈ ಎರಡನೆಯ ವರದ ಬಗ್ಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ.[೫೭][೫೮]
ಯುದ್ಧ-ಪೂರ್ವದ ತ್ಯಾಗವು ಮೊದಲ ಮತ್ತು ಎರಡನೆಯ ವರಗಳೊಂದಿಗೆ ಸಾಮರಸ್ಯವನ್ನು ಹೊಂದಿಲ್ಲ, ಆದರೆ ಭಕ್ತ ಜನರು ತಮ್ಮದೇ ವಿವರಣೆಗಳನ್ನು ಹೊಂದಿದ್ದಾರೆ. ಯುದ್ಧಕ್ಕೂ ಮೊದಲು ಸ್ವಯ-ತ್ಯಾಗವು ಯುದ್ಧದ ಸಂದರ್ಭದಲ್ಲಿನ ವೀರೋಚಿತ ಮರಣದೊಂದಿಗೆ ಸಾಮರಸ್ಯತೆಯನ್ನು ಹೊಂದಿಲ್ಲ ಮತ್ತು ಎರಡೂ ಸಹ ಯುದ್ಧದ ಪೂರ್ಣಾವಧಿಯನ್ನು ನೋಡಲು ಬದುಕುಳಿಯುವುದಕ್ಕೂ ಸಾಮರಸ್ಯತೆಯನ್ನು ಹೊಂದಿಲ್ಲ. ಅರಾವಣನ ದೇಹವು ತ್ಯಾಗದ ನಂತರ ತನ್ನಷ್ಟಕ್ಕೇ ಮರುರೂಪುಗೊಂಡಿತು ಮತ್ತು ಅರಾವಣನು ಯುದ್ಧದ ಎಂಟನೇ ದಿನದಂದು ವೀರೋಚಿತ ಮರಣವನ್ನು ಹೊಂದಿದನು ಎಂದು ವಾದಿಸುತ್ತಾ ಕುತ್ತಂತವರ್ ಭಕ್ತ ವರ್ಗವು ಮೊದಲ ವಾದವನ್ನು ಪರಿಹರಿಸುತ್ತದೆ. ಕುಟ್ಟಾಂತವರ್ ಭಕ್ತ ವರ್ಗವು ಯುದ್ಧದ ನಿರಂತರ ವೀಕ್ಷಣೆಯು ಎರಡನೆ ವರದ ಬಗ್ಗೆ ಅಷ್ಟು ಹೆಚ್ಚಾಗಿ ಕಾಳಜಿಯನ್ನು ಹೊಂದಿಲ್ಲ. ಮತ್ತೊಂದು ಕಡೆ, ದ್ರೌಪದಿ ಭಕ್ತ ವರ್ಗದವರು ವೀರೋಚಿತ ಮರಣದ ಮೊದಲನೇ ವರದ ಬಗ್ಗೆ ಅಷ್ಟು ಹೆಚ್ಚಾಗಿ ಕಾಳಜಿಯನ್ನು ಹೊಂದಿಲ್ಲ; ಅರಾವಣನು ತನ್ನ ಬೇರ್ಪಡಿತ ತಲೆಯ ಕಣ್ಣುಗಳ ಮೂಲಕ ಸಂಪೂರ್ಣ ಯುದ್ಧವನ್ನು ವೀಕ್ಷಿಸಲು ಸಾಮರ್ಥ್ಯ ಹೊಂದಿದ್ದನು ಎಂದು ವಾದಿಸುವ ಮೂಲಕ ಅವರು ಅರಾವಣನ ಯುದ್ಧದ ನಿರಂತರ ವೀಕ್ಷಣೆಯು ಎರಡನೆಯ ವರವನ್ನು ಪರಿಹರಿಸುತ್ತಾರೆ. ಅರಾವಣನ ದೇಹವು ತ್ಯಾಗದ ನಂತರ ಮರುರೂಪುಗೊಂಡಿತು, ಅವನು ನಂತರ ಎಂಟನೇ ದಿನದಂದು ಸಾವನ್ನಪ್ಪುವ ಮೊದಲು ವೀರೋಚಿತವಾಗಿ ಹೋರಾಡಿದ, ತನ್ನ ಬೇರ್ಪಡಿತ ತಲೆಯ ಕಣ್ಣುಗಳ ಮೂಲಕ ಸಂಪೂರ್ಣ ಯುದ್ಧವನ್ನು ವೀಕ್ಷಿಸಿದ ಎಂದು ಹೇಳುವ ಮೂಲಕ ಮೂರನೆಯ ಅಭಿಪ್ರಾಯವು ಎಲ್ಲಾ ವರಗಳನ್ನು ಸಾಮರಸ್ಯಗೊಳಿಸುತ್ತದೆ.[೫೭]
ಯಾವುದೇ ದೃಷ್ಟಾಂತದಲ್ಲಿ, ತಮಿಳು ಸಂಪ್ರದಾಯಗಳಲ್ಲಿ ಯುದ್ಧ-ಪೂರ್ವ ತ್ಯಾಗವು ಸಾಮಾನ್ಯವಾದ ವಸ್ತುವಾಗಿದೆ. ಅರಾವಣನು ಕೋರಿಕೊಂಡ ಮತ್ತು ವರಗಳನ್ನು ಪಡೆದ ಬಳಿಕ, ಅವನು ತ್ಯಾಗಕ್ಕೆ ಸಿದ್ಧನಾಗಿದ್ದ. ಅವನು ಕುರುಕ್ಷೇತ್ರ ಯುದ್ಧಭೂಮಿಯತ್ತ ತೆರಳಿದ. ಯುಧಿಷ್ಠಿರನು ತನ್ನ "ಶಸ್ತ್ರಾಸ್ತ್ರಗಳ ಪ್ರಾಂಗಣ" ದಲ್ಲಿ ಕಾಳಿಯನ್ನು ಪೂಜಿಸುತ್ತಿರುವಾಗ, ಅರಾವಣನು ತನ್ನ ಭುಜಬಂಧ ಮತ್ತು ಎದೆಗೂಡಿನ ಕವಚವನ್ನು ತೆಗೆದುಹಾಕಿದ. ಅವನು ನಂತರ ತನ್ನ ದೇಹವು 32 ತುಂಡುಗಳಾಗಿ ಕತ್ತರಿಸಿದ -ತನ್ನ 32 ದೇಹದ ಸಂಪೂರ್ಣತೆಗೆ ಒಂದೊಂದು ತುಂಡು- ಅವುಗಳನ್ನು ಯುಧಿಷ್ಟಿರನು ಕಾಳಿಗೆ ಸಮರ್ಪಿಸಿದ. ತೆರ್ಕುಟ್ಟು ಪ್ರದರ್ಶನದಲ್ಲಿ, ಅರಾವಣನ ಪಾತ್ರವನ್ನು ಮಾಡುವ ಪಾತ್ರಧಾರಿಯ ಕುತ್ತಿಗೆಯ ಕೆಳಭಾಗವನ್ನು ಬಿಳಿಯ ಬಟ್ಟೆಯಿಂದ ಮುಚ್ಚುವ ಮೂಲಕ ಇದನ್ನು ಚಿತ್ರಿಸಲಾಗುತ್ತದೆ. ಈ ಹಂತದಲ್ಲಿ ಅರಾವಣನ ಉತ್ಸಾಹವು ನಟನನ್ನು ಪ್ರಭಾವಗೊಳಿಸುತ್ತದೆ ಎಂದೂ ಸಹ ನಂಬಲಾಗಿದೆ. ಕೆಲವೊಮ್ಮೆ ಬಲಿಯನ್ನು ಸೂಚಿಸಲು ತೆರ್ಕುಟ್ಟು ವೇದಿಕೆಯಲ್ಲಿ ಕೋಳಿಯನ್ನು ಬಲಿ ನೀಡಲಾಗುತ್ತದೆ.[೫೬][೫೯] ವಿಲ್ಲುಪುಟುರಾಲ್ವರ್ ಅವರ ಹೇಳುವಿಕೆಯಲ್ಲಿ, ಅರಾವಣನ ಸ್ವಯಂ ಬಲಿದಾನಕ್ಕೆ ಪೂರಕವಾಗಿ ಆನೆಯೊಂದನ್ನು ದೇವತೆಗೆ ಬಲಿ ನೀಡಲಾಯಿತು.[೪೯]
ಅರಾವಣನ ಮಾಂಸವನ್ನು ತೆಗೆದ ಬಳಿಕ ಕೇವಲ ಅವನ ತಲೆ ಮತ್ತು ಎಲುಬುಗಳು ಉಳಿದಿದ್ದವು. ಕೃಷ್ಣನು ಅವನ ತಾತ ಮತ್ತು ಉಲುಪಿಯ ತಂದೆಯಾದ ನಾದ ನಾಗ, ಆದಿ-ಶೇಷನಿಗೆ ಪ್ರಾರ್ಥನೆ ಮಾಡಲು ಸಲಹೆ ನೀಡುತ್ತಾನೆ. ಆದಿಶೇಷನು ಅರಾವಣನ ಸುತ್ತಲೂ ಸ್ವತಃ ಸುರುಳಿಯನ್ನು ಮಾಡುತ್ತಾನೆ ಮತ್ತು ಅವನ ಮಾಂಸವಾಗುತ್ತಾನೆ ಮತ್ತು ಅವನ ದೇಹವನ್ನು ಮರುಸ್ಥಾಪಿಸುತ್ತಾನೆ.[೬೦] ಎರಡನೆಯ ವರವನ್ನು ಪೂರ್ಣಗೊಳಿಸಲು, ಕೃಷ್ಣನು ಬಲಶಾಲಿ ಅರಾವಣನನ್ನು ಸೋಲಿಸಲು ವೈರಿಯೊಬ್ಬನನ್ನು ಸಾಕಷ್ಟು ಬಲವುಳ್ಳವನಾಗಿ ಮಾಡಿ ಅವನಿಗೆ ವೀರೋಚಿತವಾದ ಮರಣವನ್ನು ದಯಪಾಲಿಸುತ್ತಾನೆ. ಕೃಷ್ಣನು ಅಲಂಬುಷನನ್ನು ಆಯ್ಕೆ ಮಾಡುತ್ತಾನೆ. ನಂತರ, ಕಥೆಯ ಆವೃತ್ತಿಯನ್ನಾಧರಿಸಿ, ಕೃಷ್ಣನು ಒಂದೋ ಅಲೌಕಿಕ ಧ್ವನಿಯ ಮೂಲಕ ಗರುಡನ ರೂಪವನ್ನು ತಾಳಲು ಅಲಂಬುಷನಿಗೆ ಸಲಹೆ ನೀಡುತ್ತಾನೆ, ಇಲ್ಲವೇ ಅಲಂಬುಷನಿಗೆ ಸಹಾಯ ಮಾಡಲು ನಿಜವಾದ ಗರುಡನನ್ನು ಕಳುಹಿಸುತ್ತಾನೆ. ಗರುಡನ ದೃಷ್ಟಿಯಲ್ಲಿ - ಅವನ ಚಿರಸ್ಥಾಯಿ "ಹದ್ದು" ವೈರಿ- ಶೇಷನು ಭಯದಿಂದ ಸುರುಳಿಯನ್ನು ಬಿಚ್ಚಿ, ಅರಾವಣನನ್ನು ರಕ್ಷಣೆಯಿಲ್ಲದಂತೆ ಮಾಡಿ ಅಂತಿಮವಾಗಿ ಬಲಹೀನನಾದ ಅರಾವಣನ್ನು ಅಲಂಬುಷನು ಶಿರಚ್ಛೇದ ಮಾಡುತ್ತಾನೆ.[೬೧]
ಅರಾವಣನಿಂದ ಕುಟ್ಟಾಂತವರ್[ಬದಲಾಯಿಸಿ]
ಕೂವಾಗಮ್ನ ಸ್ಥಳೀಯ ಸಾಂಪ್ರದಾಯಿಕ ಕಥೆಯು ಅರಾವಣನನ್ನು ಹೇಗೆ ಕುಟ್ಟಾಂತವರ್ ಎಂದು ಕರೆಯುತ್ತಾರೆ ಎಂದು ವಿವರಿಸುತ್ತದೆ. ಯುದ್ಧದ ನಂತರ, ಪಾಂಡವರು ಕೌರವರನ್ನು ಪರಾಭವಗೊಳಿಸಿದ ಬಗ್ಗೆ ಹೆಮ್ಮೆ ಪಡುತ್ತಿದ್ದರೆ, ಕೃಷ್ಣನು ಯುದ್ಧದ ಏಕೈಕ ಸಾಕ್ಷಿಯಾದ ಅರಾವಣನಿಗೆ ಕೇಳುತ್ತಾನೆ ,"ಈ ಯುದ್ಧವನ್ನು ಗೆಲ್ಲಲು ನಿಜವಾಗಿ ಯಾರು ಕಾರಣರು?" ಅರಾವಣನು ತಾನು ಎರಡು ಸಂಗತಿಗಳನ್ನು ನೋಡಿದ ಬಗ್ಗೆ ಪ್ರತಿಕ್ರಿಯಿಸುತ್ತಾನೆ: ವೈರಿಗಳನ್ನು ಶಿರಚ್ಛೇದ ಮಾಡಿದ ಕೃಷ್ಣನ ಚಕ್ರ, ಮತ್ತು ಅವರ ರಕ್ತವನ್ನು ಸಂಗ್ರಹಿಸಿದ ಅವನ ಶಂಖ. ಈ ಪ್ರತ್ಯುತ್ತರವು ಕೃಷ್ಣನಿಗೆ ಜಯದ ಸಂಪೂರ್ಣ ಶ್ರೇಯವನ್ನು ನೀಡಿದುದನ್ನು ಅರ್ಥ ಮಾಡಿಸುತ್ತದೆ.[೭]
ಅರಾವಣನ ಅಭಿಪ್ರಾಯವು ಮಹಾಭಾರತದಲ್ಲಿ ಯುದ್ಧದ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಭಾವ ವಹಿಸಿದ ಬಗ್ಗೆ ವಿವರವಾಗಿ ಒಳಗೊಂಡಿರುವ ಜಂಭದ ಮತ್ತು ಮುಂಗೋಪಿಯಾದ ಭೀಮನನ್ನು ಕೆರಳಿಸುತ್ತದೆ. ಆದರೆ, ಭೀಮನು ಅರಾವಣನನ್ನು ಘಾಸಿಗೊಳಿಸುವ ಮೊದಲೇ, ಅರಾವಣನ ಶಿರವನ್ನು ಕರಪಾರಿಕಾ ನದಿಯಲ್ಲಿ ಎಸೆಯುವ ಬಗ್ಗೆ ಕೃಷ್ಣನು ಆದೇಶ ನೀಡುತ್ತಾನೆ, ಅಲ್ಲಿ ಅವನು ಮಗುವಿನ ರೂಪವನ್ನು ಧರಿಸುತ್ತಾನೆ ಮತ್ತು ಅಂತಿಮವಾಗಿ ನದಿ ತೀರದ ಚಂದ್ರಗಿರಿ ರಾಜನಿಗೆ ಕಂಡುಬರುತ್ತದೆ. ಮಗುವನ್ನು ರಾಜನು ಎತ್ತಿಕೊಂಡಾಗ ಅದು "ಕುವ ಕುವ" ಎಂದು ಅಳುತ್ತದೆ, ಆದ್ದರಿಂದ ಅವನು ಆ ಸ್ಥಳವನ್ನು ಕುವಕ್ಕಮ್ (ಕೂವಗಮ್) ಎಂದು ಹೆಸರಿಸುತ್ತಾನೆ. ರಾಜನು ಮಗುವಿಗೆ ಕಾರಪಾಲನ್ ("ಬಾಣದ-ಮಗು") ಎಂದೂ ಹೆಸರಿಡುತ್ತಾನೆ.[೭]
ಕಾರಪಾಲನು ಬೆಳೆಯುವ, ಯುದ್ಧದಲ್ಲಿ ಅವನ ದತ್ತು ತಂದೆಯನ್ನು ಗಾಯಗೊಳಿಸಿದ ರಾಕ್ಷಸಸಾದ ಕುಟ್ಟಕುರನ್ ಅನ್ನು ಕೊಲ್ಲುವ ಬಗ್ಗೆಯೂ ಸಂಪ್ರದಾಯಗಳು ನಿರೂಪಿಸುತ್ತವೆ. ಈ ಸಂಪ್ರದಾಯದಲ್ಲಿ ಅತ್ಯುಚ್ಛ ದೇವತೆಯಾಗಿ ಗುರುತಿಸಲಾಗುವ ದ್ರೌಪದಿಯು ಕಾರಪಾಲನಿಗೆ ಕುಟ್ಟಾಂತವರ್ -ಕುಟ್ಟಕುರನ್ನ ಸಂಹಾರಕ ಎಂದು ಹೆಸರಿಸಿ ಆಶೀರ್ವಾದಿಸುತ್ತಾಳೆ ಮತ್ತು ಅವನಿಗೆ ಕೂವಾಗಮ್ನಲ್ಲಿ ದೇವಾಲಯವೊಂದನ್ನು ನೀಡುತ್ತಾಳೆ.[೭]
ಈ ಪದ್ಧತಿಯಲ್ಲಿ ಹಲವಾರು ಭಿನ್ನತೆಗಳಿವೆ. ಕೆಲವು ಆವೃತ್ತಿಗಳು ಮಗುವನ್ನು ಕಂಡುಹಿಡಿದ ಕೀರ್ತಿಯನ್ನು ಚಂದ್ರಗಿರಿಯ ರಾಣಿ ಕಿರುಪಾನ್ಸಿಗೆ ನೀಡುತ್ತವೆ.[೭] ಇತರರು ಒಟ್ಟಾರೆಯಾಗಿ ಚಂದ್ರಗಿರಿಯ ರಾಜನ ಹೆಸರನ್ನೇ ಬಿಡುತ್ತವೆ ಮತ್ತು ಕೂವಾಗಮ್ ದೇವಾಲಯದ ಉಲ್ಲೇಖವನ್ನೇ ಬಿಟ್ಟು ಬಿಡುತ್ತವೆ. ಬದಲಿಗೆ ಅವುಗಳು ಕುಟ್ಟುಕುರನ್ ರಾಕ್ಷಸನ ಬಗ್ಗೆ ಮತ್ತು ಒಂದು ತಲೆ ಮತ್ತು ನೀರಿನಿಂದ ಜನಿಸಿದ ವ್ಯಕ್ತಿಯೊಬ್ಬನಿಂದ ಅವನು ಕೊಲ್ಲಲ್ಪಡುವ ಅಸಾಧ್ಯವಾದ ವರವನ್ನು ಅವನಿಗೆ ನೀಡಿದ ಬಗ್ಗೆ ಕೇಂದ್ರೀಕರಿಸುತ್ತವೆ. ಕೃಷ್ಣನಾಗಿ ರೂಪತಾಳಿದ ವಿಷ್ಣುವು ಅರಾವಣನು ಈ ರಾಕ್ಷಸನನ್ನು ಕೊಲ್ಲವನು ಎಂದು ದೇವರಿಗೆ ಮಾಹಿತಿ ನೀಡುತ್ತಾನೆ. ಇದನ್ನು ಮನಸ್ಸಿನಲ್ಲಿರಿಸಿಕೊಂಡು, ಅರಾವಣನ ತಲೆಯನ್ನು ನೀರಿಗೆ ಹಾಕಲಾಗುತ್ತದೆ ಮತ್ತು ಅದು ಕುಟ್ಟನ್ ಎಂದು ("ನೀರಿನಿಂದ ಜನಿಸಿದ") ಕರೆಯಲಾಗುವ ಮಗುವಾಗಿ ರೂಪಾಂತರವಾಗುತ್ತದೆ ಮತ್ತು ಅದು ರಾಕ್ಷಸನನ್ನು ಕೊಲ್ಲುತ್ತದೆ.[೬೨]
ಪೂಜೆ[ಬದಲಾಯಿಸಿ]
ಆಚರಣೆಗಳು ಮತ್ತು ದೇವಾಲಯಗಳು[ಬದಲಾಯಿಸಿ]
ಹಿಲ್ಟೆಬೀಟೆಲ್ , ಕುಟ್ಟಾಂತವರ್ ಆರಾಧನಾ ಪದ್ದತಿಯು ಅರಾವಣನ ಬಗ್ಗೆ ವಿವರಿಸುವ ಮೂಲ ತಮಿಳು ಸಂಪ್ರದಾಯವಾಗಿದ್ದಿರಬಹುದು ಎಂದು ವಾದಿಸುತ್ತಾನೆ,[೬೩] ಆದರೆ ಈ ಸಂಪ್ರದಾಯವೊಂದೇ ಗೌರವಾನ್ವಿತವಾದುದಲ್ಲ. ದ್ರೌಪದಿ ಆರಾಧನಾ ಪದ್ದತಿಯು ತನ್ನದೇ ಆದ ಸಂಪ್ರದಾಯ ಮತ್ತು ಶಾಸ್ತ್ರೋಕ್ತಗಳನ್ನು ಬೆಳೆಸಿಕೊಂಡಿದೆ.
ಬಹುತೇಕ ಕುಟ್ಟಾಂತವರ್ ಭಕ್ತರು ತಮಿಳು ನಾಡಿನ ಕಡಲೂರು, ತಿರುವಣ್ಣಾಮಲೈ, ವೆಲ್ಲೂರ್ ಮತ್ತು ವಿಲ್ಲಿಪುರಂನಲ್ಲಿ ನೆಲೆಸಿದ್ದಾರೆ.[೬೪][೬೫] ದ್ರೌಪದಿಯ ಭಕ್ತರು ಈ ಜಿಲ್ಲೆಗಳಲ್ಲಿ ವ್ಯಾಪಿಸಿರುವುದಲ್ಲದೇ, ಕಾಂಚೀಪುರಂ (ಹಳೆಯ ಚಿಂಗ್ಲೆ ಪೇಟ್) ಜಿಲ್ಲೆಯಲ್ಲೂ ಇದ್ದಾರೆ. ಈಕೆಯ ದೇವಸ್ಥಾನಗಳನ್ನು ತಂಜಾವೂರು ಜಿಲ್ಲೆ ಮತ್ತು ಆಂದ್ರ ಪ್ರದೇಶ ಹಾಗೂ ಕರ್ನಾಟಕದ ದಕ್ಷಿಣ ಜಿಲ್ಲೆಗಳ ಆಚೆಗೂ ಕಾಣಬಹುದು. ದ್ರೌಪದಿಯ ದೇವಸ್ಥಾನಗಳಿಗೆ ಹೋಲಿಸಿದಲ್ಲಿ ಕುಟ್ಟಾಂತವರ್ನ ದೇವಾಲಯಗಳು ಕೆಲವೇ ಇವೆ.ಇವು ಕೋಯಮತ್ತೂರಿನ ಮೂಲಕ ಹಾದು ಹೋಗುವ ಕಡಲೂರು ಮತ್ತು ವಿಲ್ಲಾಪುರಂ ಜಿಲ್ಲೆಗಳ ಪ್ರಾಂತಗಳಿಗೆ ಮಾತ್ರ ಸೀಮಿತವಾಗಿವೆ. ಈ ದೇವಾಲಯಗಳಲ್ಲಿ ಮೂವತ್ತೆರಡು ದೇವಾಲಯಗಳು ಪ್ರಾಮುಖ್ಯವಾಗಿದ್ದು, ಕೂವಾಗಂ ಅತ್ಯಂತ ಪ್ರಮುಖವಾಗಿದೆ. The 32 temples are:[೬೬]
|
ಕೊಯಂಬತ್ತೂರು ಜಿಲ್ಲೆ
ಕಡ್ಡಲೂರ್ ಜಿಲ್ಲೆ[೬೪]
|
ಈರೋಡ್ ಜಿಲ್ಲೆ[೬೭]
ಸೇಲಂ ಜಿಲ್ಲೆ
ತಿರುವಣ್ಣಾಮಲೈ ಜಿಲ್ಲೆ[೬೪]
|
ವೆಲ್ಲೂರು ಜಿಲ್ಲೆ[೬೪]
ವಿಲ್ಲುಪುರಂ ಜಿಲ್ಲೆ[೬೪]
|
ಅರಾವಣನ ಬೇರ್ಪಟ್ಟ ತಲೆಯು ಸಾಮಾನ್ಯವಾಗಿ ದ್ರೌಪದಿ ದೇವಾಲಯಗಳ ಪ್ರಮುಖ ಅಂಶವಾಗಿದೆ. ಕೆಲವೊಮ್ಮೆ ಇದು ಮರದಿಂದ ಮಾಡಲ್ಪಟ್ಟಿದ್ದು ಹಗುರವಾಗಿರುತ್ತದೆ; ಕೆಲವು ಸಮಯಗಳಲ್ಲಿ ದೇವಸ್ಥಾನದಲ್ಲಿ ಇದು ತನ್ನದೇ ಆದ ಪಾವಿತ್ರತೆಯನ್ನು ಹೊಂದಿರುತ್ತದೆ.[೬೯] ಕೆಲವೊಮ್ಮೆ ಅರಾವಣನ ತಲೆಯ ಪ್ರತಿಮೆಗಳನ್ನು ದ್ರೌಪದಿ ದೇವಾಲಯಗಳ ಮೂಲೆಗಳಲ್ಲಿ ಹಾಗೂ ಮೇಲ್ಛಾವಣಿಯ ತುದಿಗಳಲ್ಲಿ ಇರಿಸಲಾಗಿರುತ್ತದೆ. ಒಬ್ಬ ಪೇಯಿ ಅಥವಾ ಭೂತ ( ಪ್ರೇತಾತ್ಮ) ವಾಗಿ , ಅರಾವಣನು ದೇವಾಲಯ ಮತ್ತು ಪಾತುಕಾಲಮ್ ಆಚರಣೆಗೆ, ಇತರ ಆತ್ಮಗಳ ವಿರುದ್ಧ ರಕ್ಷಕನಾಗಿ ನಿಲ್ಲುತ್ತಾನೆ.[೭೦] ದ್ರೌಪದಿ ಧರ್ಮಾಚರಣೆಯಲ್ಲಿ ಪಾತುಕಾಲಮ್ ಮಹಾಭಾರತ ಯುದ್ಧದ ಸಾಂಕೇತಿಕ ಸ್ಥಳವಾಗಿದ್ದು ಶಾಸ್ತ್ರೋಕ್ತವಾಗಿ ಪುನರ್-ಅಭಿನಯಿಸಲಾಗುತ್ತದೆ. ತಂಜಾವೂರಿನ ತಾಲ್ಲೂಕು ಗಳಾದ , ಕುಂಬಕೋಣಂ ಮತ್ತು ಪಟ್ಟುಕ್ಕೋಟೈ ನಲ್ಲಿ , ಅರಾವಣನ ತಲೆಯನ್ನು ಶಾಶ್ವ.ತವಾಗಿ ಒಂದು ಮಂಟಪ ಅಥವಾ ದೇವಸ್ಥಾನದ ಗೂಡಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಕುಂಬಕೋಣಂನ ಹಾಜಿಯಾರ್ ತಿರು ದೇವಾಲಯದಲ್ಲಿ ಅರಾವಣನ ಅತ್ಯಂತ ದೊಡ್ಡ ತಲೆಯ ಮೂರ್ತಿ ಇದೆ.[೭೧]
ಕುಟ್ಟಾಂತವರ್ ಧರ್ಮಾಚರಣೆ ಪದ್ಧತಿಗಳು[ಬದಲಾಯಿಸಿ]
ಅರಾವಣನನ್ನು ಕುಟ್ಟಾಂತವರ್ ಧರ್ಮಾಚರಣೆಯಲ್ಲಿ ತನ್ನದೇ ಹೆಸರಿನಿಂದ ಸೂಚಿಸಲಾಗುತ್ತದೆ, ಇದರಲ್ಲಿ ಆತನೇ ಪ್ರಧಾನ ದೇವತೆಯಾಗಿರುತ್ತಾನೆ. ಈತನ ಪ್ರಮುಖ ದೇವಾಲಯವು ತಮಿಳು ನಾಡಿನ,[೭೨] ಕೂವಾಗಂ ನಲ್ಲಿದೆ ಇಲ್ಲಿ, ಅರಾವಣ ಮತ್ತು ಕೃಷ್ಣನ ಹೆಣ್ಣಿಮ ಸ್ವರೂಪವಾದ ಮೋಹಿನಿಯ ಮದುವೆ, ಆಕೆಯ ವಿಧವೆತನ, ಅರಾವಣನ ಬಲಿಯ ನಂತರದ ರೋದನೆ, ಮುಂತಾದುವು ತಮಿಳು ತಿಂಗಳಿನ ಸಿತ್ತಿರೈ (ಏಪ್ರಿಲ್-ಮೇ) ನ ಹುಣ್ಣಿಮೆಯ ರಾತ್ರಿ ನಡೆಯುವ ವಾರ್ಷಿಕ ಹಬ್ಬದ 18ನೇ ದಿನದ ಮುಖ್ಯಾಂಶಗಳಾಗಿವೆ. ಹುಣ್ಣಿಮೆಯ ದಿನವು ಹಬ್ಬದ ಪ್ರಮುಖ ದಿನವಾಗಿದ್ದು, ಅಂದು ಅರಾವಣನ ಬಲಿಯನ್ನು ಶಾಸ್ತ್ರೋಕ್ತವಾಗಿ ಪುನರುಜ್ಜೀವನಗೊಳಿಸಲಾಗುತ್ತದೆ.[೫೫][೭೩]
ಈ ಸ್ಥಳದಲ್ಲಿ ತಮ್ಮನ್ನು ಅರಾವಣಿಗಳೆಂದೆ ಕರೆದುಕೊಳ್ಳುವು ಆಲಿ ಗಳು, ಮೋಹಿನಿ ಮತ್ತು ಅರಾವಣನ ಮದುವೆಯ ಪುನರ್ -ನಟನೆಯ ಮೂಲಕ ಕೂವಾಗಮ್ ಹಬ್ಬದಲ್ಲಿ ಭಾಗವಹಿಸುತ್ತಾರೆ. ಆಲಿ ಗಳು , ಚಿದಂಬರಂನ ಈಶಾನ್ಯ ಭಾಗದಲ್ಲಿರುವ ತೇವನಾಂಪಟ್ಟಣಂ, ತಿರುವೆಟ್ಕಾಲಂ, ಆದಿವರಹಾನಾತ್ತಂ—೫ ಮೈಲಿ ( ಕಿ.ಮಿ) ನಂತಹ ಇತರ ಹಳಿಗಳಲ್ಲಿ ಮತ್ತು ಕೊಟ್ಟಾತೈ (ಎಲ್ಲವೂ ತಮಿಳು ನಾಡಿನಲ್ಲಿವೆ) ಮತ್ತು ಪಾಂಡಿಚೇರಿಯಲ್ಲಿನ ಪಿಲ್ಲೈಯಾರ್ ಕುಪ್ಪಂಗಳಲ್ಲಿ ಇದೇ ರೀತಿಯ ಕುಟ್ಟಾಂತವರ್ ಹಬ್ಬಗಳಲ್ಲಿ ಸಣ್ಣಪ್ರಮಾಣದಲ್ಲಿ ಭಾಗವಹಿಸುತ್ತಾರೆ.[೭೪] ಹಲವಾರು ವರ್ಷಗಳಿಂದ ಸ್ಥಳೀಯ ಅಲಿ ಗಳೇ ಈ ಹಬ್ಬದಲ್ಲಿ ಭಾಗವಹಿಸುತ್ತಿದ್ದರೂ ,1960ರಿಂದ ಇತರ ಸ್ಥಳಗಳಿಂದಲೂ ಆಲಿ ಗಳು ಹಬ್ಬಕ್ಕೆ ಆಗಮಿಸುತ್ತಿದ್ದಾರೆ:ಇಡೀ ತಮಿಳು ನಾಡು, ಭಾರತದ ಸಂಪೂರ್ಣ ಭಾಗ ಮತ್ತು ಸಿಂಗಪೂರ್ ನಂತಹ ದೂರದ ಸ್ಥಳಗಳಿಂದಲೂ ಆಗಮಿಸುತ್ತಿದ್ದಾರೆ.[೫೧][೭೫][೭೬] ಆಲಿ ಗಳೂ ಸೇರಿದಂತೆ ಸುಮಾರು 25,000 ಭಕ್ತರು ಹಬ್ಬದಲ್ಲಿ ಭಾಗವಹಿಸುತ್ತಾರೆ.[೭೭] ಫ್ರಾನ್ಸಿಸ್ ರವರ 1906ರ ದಾಖಲೆಗಳ ಪ್ರಕಾರ , ವಾಣ್ಣಿಯಾರ್ನ ಮತ್ತು ಇತರ ಶೂದ್ರ ಜಾತಿಯ ಗಂಡಸರು ಹೆಂಗಸರಂತೆ ವೇಷ ಧರಿಸಿ ,ಹಬ್ಬದ ಪ್ರಮುಖ ಭಾಗವಾದ "ಶೂದ್ರರ ಜನಪ್ರಿಯ ಔತಣ" ವನ್ನು ಆಚರಿಸುತ್ತಾರೆ, ಆಲಿ ಗಳ ಕುರಿತು ಸ್ಪಷ್ಟವಾದ ಉಲ್ಲೇಖಗಳಿಲ್ಲ. ಈಗಿನ ಹಬ್ಬಗಳಂತಲ್ಲದೇ, ಪುರುಷರನ್ನು ಕುಟ್ಟಾಂತವರ್ ಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಡುವುದುಮತ್ತು ಅವರ ವಿಧವೆ ತನ ಹಬ್ಬದ ಕೊನೆಯ ದಿನದಂದು ನಡೆಯುತ್ತಿತ್ತು. ಮದುವೆಯ ಸಮಾರಂಭವು 14ನೇ ದಿನದಂದು ಹಾಗೂ ವಿಧವಾ ಆಚರಣೆಯನ್ನು 16ನೇ ದಿನದಂದೂ ನಡೆಸಲಾಗುತ್ತಿತ್ತು.[೭೮]
ಕುಟ್ಟಾಂತವರ್ ಹಬ್ಬದ ಮೊದಲ ಆರು ದಿನಗಳಲ್ಲಿ, ಕೂವಾಗಮ್ ಬೀದಿಗಳೆಲ್ಲಾ ಅರಾವಣನ ತಲೆಯನ್ನು (ಕಾಮಿ ) ಸಂಗೀತ ಮತ್ತು ಪಟಾಕಿಗಳೊಂದಿಗೆ ನೃತ್ಯದ ಮೂಲಕ ಮೆರೆವಣಿಗೆ ಮಾಡಲಾಗುತ್ತದೆ. ಪ್ರತಿ ಮನೆಯೂ ಅರಾವಣನಿಗೆ, ಆರತಿ, ತೆಂಗಿನಕಾಯಿ ಮತ್ತು ಶಾಸ್ತ್ರೋಕ್ತ ವಿಧಿಗಳ ಮೂಲಕ ಪೂಜೆ (ಒಂದು ವಿಧವಾದ ಭಕ್ತಿಯ ಆಚರಣೆ) ಯನ್ನು ಸಲ್ಲಿಸಲಾಗುತ್ತದೆ. ಔಪಚಾರಿಕವಾಗಿ, ಆಡು ಮತ್ತು ಕೋಳಿಗಳನ್ನು ಬಲಿಕೊಡಲಗಾಗುತ್ತಿತ್ತು, ಆದರೆ ಈಗ ರಾಜ್ಯ ಸರ್ಕಾರವು ಪ್ರಾಣಿಗಳ ಬಲಿಯನ್ನು ನಿಷೇಧಿಸಿದೆ. 13ನೇ ದಿನದಂದು ಶಾಸ್ತ್ರೋಕ್ತವಾಗಿ ಅರಾವಣನ ಆತ್ಮವನ್ನು ಒಂದು ಮಡಿಕೆಗೆ ವರ್ಗಾಯಿಸಲಾಗುತ್ತದೆ, ನಂತರ ತಲೆಗೆ ಪುನಃ ಬಣ್ಣ ಬಳಿಯಲಾಗುತ್ತದೆ. 14ನೇ ದಿನದ ಸಾಯಂಕಾಲ, ಮೆರವಣಿಗೆಯ ರಥದಲ್ಲಿ ಒಂದು ೨೦-ಅಡಿ (. ಮೀ) ಎತ್ತರದ ಮರದ ಕಂಬವನ್ನು ನಿಲ್ಲಿಸಲಾಗುತ್ತದೆ. ನಂತರ ಹಬ್ಬದ ಸಮಯದಲ್ಲಿ ಈ ಕಂಬವು ಅರಾವಣನ ತಲೆ ಮತ್ತು ಶರೀರಕ್ಕೆ ಆಧಾರವಾಗಿರುತ್ತದೆ. ಕಂಬವನ್ನು ನಿಲ್ಲಿಸುವ ಆಚರಣೆಯ ನಂತರ (ಕಂಬಂ ನಿರುತ್ತತಳ್ ), ಅರಾವಣನನ್ನು ಮದುವೆಯಾಗುತ್ತೇನೆಂದು ಹರಕೆ ಹೊತ್ತಿದ್ದ ಯುವಕರು ಮತ್ತು ಮಧ್ಯ ವಯಸ್ಸಿನ ಪುರುಷರು (ಕೂವಾಗಮ್ ಹಾಗೂ ಸುತ್ತ ಮುತ್ತ ಹಳ್ಳಿಗಳಿಂದ ಬಂದ ರೈತರೂ ಹಾಗೂ ವರ್ತಕರು) ಮದುವೆಯಾದ ಹೆಣ್ಣಿನ ಸಾಂಪ್ರದಾಯಿಕ ಗುರುತಾದ ತಾಳಿಯನ್ನು ಖರೀದಿಸುತ್ತಾರೆ. ಇಲ್ಲಿ ತಾಳಿ ಯು ಒಂದು ದಾರದ ಮಧ್ಯದಲ್ಲಿ ತೂಗಾಡುತ್ತಿರುವ ಅರಿಶಿನ ಕೊಂಬನ್ನು ಹೊಂದಿರುತ್ತದೆ. ಅರಾವಣನನ್ನು ಪ್ರತಿನಿಧಿಸುವ ಅರ್ಚಕನು ದೇವಾಲಯದ ಒಳ ಗರ್ಭಗುಡಿಯಲ್ಲಿ ಅವರ ಕುತ್ತಿಗೆಗೆ ತಾಳಿ ಕಟ್ಟುತ್ತಾನೆ.[೭೯][೮೦] ಮದುವೆಯಾದ ಗಂಡಸರೂ ಮತ್ತು ಕಾಯಿಲೆಯಿಂದ ನರಳುತ್ತಿರುವ ಪುರುಷರೂ ಸಹ ಸ್ತ್ರೀಯ ವೇಷವನ್ನು ಧರಿಸಿ, ದೇವತೆಯನ್ನುಗುತ್ತಾ ಹಬ್ಬದಲ್ಲಿ ಅರಾವಣನನ್ನು ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಾರೆ.[೭೫]
14ನೇ ದಿನದಿಂದ 16ನೇ ದಿನದ ವರೆಗೆ ಆಲಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ನಂತರ 15ನೇ ದಿನದ ರಾತ್ರಿ , ಅವರು ಅರಾವಣನ ಪುಷ್ಪ ಕಿರೀಟ (ಕರಾಕಮ್ ) ನೃತ್ಯವನ್ನು ಮಾಡುತ್ತಾರೆ. ಅವರ ನಂಬಿಕೆಯ ಪ್ರಕಾರ ಇದರಲ್ಲಿ ಆತನ ಶಕ್ತಿ ಅಡಕವಾಗಿರುತ್ತದೆ.[೭೯] ಈ ನೃತ್ಯದ ನಂತರ ಅರ್ಚಕನು ಆಲಿ ಗಳನ್ನು ಸಾಂಪ್ರದಾಯಿಕವಾಗಿ ತಾಳಿ -ಕಟ್ಟುವುದರ ಮುಖಾಂತರ ಅರಾವಣನಿಗೆ ಮದುವೆ ಮಾಡಿಸಿಕೊಡುತ್ತಾನೆ. ನಂತರ ಆಲಿ ಗಳು ತಮ್ಮ ಮದುವೆಯ ಉತ್ಕೃಷ್ಟ ಸಂಕೇತವಾದ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಆಲಿ ಗಳು ವಿಕೃತವಾದ ಆನಂದ ಮತ್ತು ಮಿಶ್ರ ಲೈಂಗಿಕತೆಯಲ್ಲಿ ತೊಡಗುತ್ತಾರೆ.[೫೫][೭೩] ಆದರೆ, ಅರಾವಣನನ್ನು ಮದುವೆಯಾದ ಗ್ರಾಮಸ್ಥರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದುದರ ಬಗ್ಗೆ ಯಾವುದೇ ರೀತಿಯ ವಿವರಣೆಗಳಿಲ್ಲ. ಆಲಿ ಗಳು ಸ್ತ್ರೀಯರ ವಸ್ತ್ರ, ಆಭರಣಗಳನ್ನು ಧರಿಸಿಕೊಂಡರೆ, ಗ್ರಾಮಸ್ಥರು ತಾವು ಅರಾವಣನನ್ನು ಮದುವೆಯಾಗುತ್ತೇವೆಂಬ ಹರಕೆಯನ್ನು ತೀರಿಸಿಕೊಳ್ಳಲು ತಮ್ಮ ಸಾಧಾರಣವಾದ ಪುರುಷ ವಸ್ತ್ರಗಳನ್ನೇ ಧರಿಸಿರುತ್ತಾರೆ.[೮೧]
16ನೇ ದಿನದಲ್ಲಿ ಮುಂಜಾನೆ, ಅರಾವಣನ ಆತ್ಮವನ್ನು ಆತನ ಬಣ್ಣ ಬಳಿದ ತಲೆಗೆ ವರ್ಗಾಯಿಸಲಾಗುತ್ತದೆ, ಕುವಾಮಿ ತಿರುಕ್ಕಮ್ ತಿರತ್ತಲ್ (ದೇವರ ಪವಿತ್ರ ಕಣ್ಣು ತೆರೆಯುವಿಕೆ) ಆಚರಣೆಯನ್ನು ಕಣ್ಣು ಗುಡ್ದೆಗೆ ಬಣ್ಣ ಬಳಿಯುವುದರ ಮೂಲಕ ಅಚರಿಸಲಾಗುತ್ತದೆ. ನಂತರ ತಲೆಯನ್ನು ಕೇತಾಯಮ್ ಹೊತ್ತುಕೊಂಡು ಹೋಗಬಹುದಾದ ಹಗುರವಾದ ವೇದಿಕೆಯ ಮೇಲೆ ಹಳ್ಳಿಯ ತುಂಬಾ ಮೆರವಣಿಗೆ ಮಾಡಲಗುತ್ತದೆ. ಕೇತಾಯಂ ಇತರ ಎರಡು ರಥ ವೇದಿಕೆಗಳನ್ನುಹೊಂದಿರುತ್ತದೆ, ಒಂದು ಅರಾವಣನ ಎದೆಯ ಕವಚವನ್ನೂ ಮತ್ತು ಭುಜದ ಪಟ್ಟಿಗಳನ್ನೂ ಹಿಡಿದಿಕೊಂಡಿರುತ್ತದೆ-ಇದು ಇಲ್ಲದೇ ಹಬ್ಬವು ಅಪೂರ್ಣ ಎಂದು ಭಾವಿಸಲಾಗುತ್ತದೆ; ಇನ್ನೊಂದು ಅತನ ಹೂವಿನ ಕಿರೀಟವನ್ನು ಹೊಂದಿರುತ್ತದೆ. ಈ ಆಚರಣೆಯು ಕೋಳಿಗಳನ್ನು ಮೇಲ್ಛಾವಣಿಯ ಮೇಲೆ ಬಿಸಾಡಿ ಅವುಗಳನ್ನು ಸಾಯಿಸುವುದರ ಮೂಲಕ ಸಲ್ಲಿಸುವ ಕಾಣಿಕೆಗಳಿಂದ ಅಂತ್ಯಗೊಳ್ಳುತ್ತದೆ. ಏಕೆಂದರೆ ಅವುಗಳನ್ನು ಕತ್ತರಿಸಿ ಬಲಿಕೊಡುವುದನ್ನು ನಿಷೇಧಿಸಲಾಗಿದೆ. ಅರಾವಣನ ತಲೆಯನ್ನು ಒಂದು ಕಂಬಕ್ಕೆ ಜೋಡಿಸಿ, ಅತನ ದೊಡ್ಡ ಭುಜ ಪಟ್ಟಿಗಳನ್ನು ಮತ್ತು ಎದೆಯ ಕವಚವನ್ನು ಒಣ ಹುಲ್ಲು ಹಾಗೂ ಹೂಮಾಲೆಯಿಂದ ಆವೃತವಾದ ಆತನ ಶರೀರಕ್ಕೆ ಜೋಡಿಸಲಾಗುತ್ತದೆ. ಈ ಪ್ರತಿಮೆಯನ್ನು ಆತನ ಕಾಲಪ್ಪಲಿ ಯ ತಯಾರಿಗೋಸ್ಕರ ಹಳ್ಳಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಆತನ ಸಾವಿನ ದಿನವಾದ ಯುದ್ಧದ ಎಂಟನೇ ದಿನದ ಪುನರ್-ನಟನೆಗಾಗಿ ಶಾಸ್ತ್ರಗಳನ್ನು ನಡೆಸಲಾಗುತ್ತದೆ. ಮಧ್ಯಾಹ್ನ ಆತನ ರಥವು ಉತ್ತರಕ್ಕೆ ತಿರುಗುತ್ತದೆ, ಇದು ಆತನ ಕಾಲಪ್ಪಲಿ ಯ ಭಂಗಿಯನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ನಂತರ ಆತನು ಕುರುಕ್ಷೇತ್ರದ ರಣರಂಗದ ಕಡೆಗೆ ಮುಖಮಾಡುತ್ತಾನೆ, ಇದು ಆತನು ರಣರಂಗವನ್ನು ಪ್ರವೇಶಿಸಿ ಅಲಾಂಬುಶನ ಕೈಗಳಲ್ಲಿ ಮರಣಹೊಂದುವುದನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಕುರುಕ್ಷೇತ್ರವನ್ನು ಪ್ರವೇಶಿಸಿದ ನಂತರ, ಹೂವಿನ ಮಾಲೆಗಳನ್ನು ತೆಗೆದು ಹಾಕಲಾಗುತ್ತದೆ, ಇದು ಆತನು ಯುದ್ಧದ ಎಂಟನೇ ದಿನದಂದು ಸೋಲನ್ನಪ್ಪುವುದನ್ನು ಸೂಚಿಸುತ್ತದೆ.[೭೯]
ರಣರಂಗದಿಂದ ಹಿಂದಿರುಗಿದ ನಂತರ, ರಥವು ಶೋಕಾಚರಣೆಯ ಶಾಸ್ತ್ರೋಕ್ತಗಳನ್ನು ನಡೆಸುವ, ರೊದನಾ ಸ್ಥಳ (ಆಲುಕಾಲಂ )ಗೆ ಬರುತ್ತದೆ. ವಿಧವೆಯರಾದ ಆಲಿಗಳು, ತಮ್ಮ ಕೇಶ ಮುಂಡನ ಮಾಡಿಕೊಂಡು ಕಲಾಪ್ಪಲಿ ಯನ್ನು ಆಚರಿಸುವಾಗ ತಮ್ಮ ಗಂಡನ ಸಾವಿಗಾಗಿ ಪ್ರಲಾಪಿಸುತ್ತಾರೆ. ತನ್ನ ಶಕ್ತಿಯನ್ನು ಕ್ರಮೇಣವಾಗಿ ಕಳೆದುಕೊಂಡಿರುವುದನ್ನು ಸೂಚಿಸುವುದರ ಸಂಕೇತವಾಗಿ, ಭಕ್ತರು ಅರಾವಣನ ಪ್ರತಿಮೆಯ ಮೇಲಿದ್ದ ಹೂಮಾಲೆಗಳನ್ನು ಒಂದೊಂದಾಗಿ ಎಸೆಯುತ್ತಾರೆ. ಈ "ರೋದನಾಸ್ಥಳ"ದಲ್ಲಿ, ಆಲಿ ಗಳು ಅರಾವಣನ ಸಾವಿನಿಂದಾಗಿ, ತಮ್ಮ ಬಳೆಗಳನ್ನು ಒಡೆದುಕೊಂಡು, ಎದೆ ಬಡಿದುಕೊಳ್ಳುತ್ತಾ, ಮೋಹಿನಿ-ಕೃಷ್ಣರ ದಂತಕಥೆಯಂತೆ ತಮ್ಮ ಮುತ್ತೈದೆ ತನವನ್ನು ಕಳೆದುಕೊಂದಿದ್ದಕ್ಕೆ ರೋದಿಸುತ್ತಾರೆ. ತಮ್ಮ ತಾಳಿ ಗಳನ್ನು ಹರಿದುಕೊಂಡು, (ವೆಳ್ಳಿಕಳ್ ) ಆಚರಣೆಗಾಗಿ ನಿಲ್ಲಿಸಿದ ಕಂಬದ ಮೇಲೆ ಅವುಗಳನ್ನು ಬಿಸಾಡುತ್ತಾರೆ. ಸ್ನಾನದ ನಂತರ ತಮ್ಮ ವಿಧವೆತನದ ಸಂಕೇತವಾಗಿ ಬಿಳಿ ಸೀರೆಗಳನ್ನು ಉಟ್ಟುಕೊಳ್ಳುತ್ತಾರೆ. ಆಲಿ ಗಳು ವಿಧವೆತನದ ಈ ಚಿಹ್ನೆಗಳನ್ನು ಒಂದು ತಿಂಗಳಿನವರೆಗೂ ಹೊತ್ತುಕೊಂಡಿರುತ್ತಾರೆ. ನಂತರ ಬಳೆಗಳು ಮತ್ತು ಬಣ್ಣದ ಸೀರೆಗಳನ್ನು ತಮ್ಮಷ್ಟಕ್ಕೆ ತಾವೇ ಧರಿಸಿಕೊಳ್ಳುತ್ತಾರೆ.[೭೯]
ನಡು-ಮಧ್ಯಾಹ್ನದ ವೇಳೆಗೆ ರಥವು ಆಲುಕಾಲಮ್ ಗೆ ಬರುತ್ತದೆ, ಇಲ್ಲಿ ಅರಾವಣನನ್ನು ಆತನ ಒಣಹುಲ್ಲಿನ ದೇಹವು ತೋರುವಂತೆ ಬೆತ್ತಲೆ ಮಾಡಲಾಗುತ್ತದೆ. ಬಹಳಷ್ಟು ಆಲಿ ಗಳು ಸ್ಥಳವನ್ನು ಬಿಟ್ಟಿರುತ್ತಾರೆ ಮತ್ತು ಅರಾವಣನನ್ನು ಮದುವೆಯಾದ ಪುರುಷರೂ ಸಹ ತಮ್ಮ ತಾಳಿಗಳನ್ನು ಮತ್ತು ಬಳೆಗಳನ್ನು ಹರಿದುಕೊಂಡು ವಿಧವೆತನದ ಧರ್ಮವಿಧಿಯನ್ನು ( ವೆಳ್ಳಿಕಳ್ ವಿಧಿಗಳು) ಅರಾವಣನ ಪ್ರತಿಮೆಯ ಮುಂದೆ ಮಾಡುತ್ತಾರೆ. ಈ ಮಧ್ಯೆ ಪಾರತಿಯಾರ್ (ಮಹಾಭಾರತದ ಕಥೆ ಹೇಳುವವನು) ಯುದ್ಧದ ಉತ್ತುಂಗತೆಯ ಕಥೆಯನ್ನು ವಿವರಿಸುತ್ತಾನೆ, ಇದು ಯುದ್ಧವನ್ನು ನೋಡಬೇಕೆಂಬ ತನ್ನ ಅಭಿಲಾಷೆಯನ್ನು ಸಾಂಕೇತಿಕವಾಗಿ ಸೂಚಿಸುತ್ತದೆ. ಹಿಲ್ಟೆಬೀಟೆಲ್ ಹೇಳುವಂತೆ, ಆಲಿ ಗಳು ಅರಾವಣನ ಕಾಲಪ್ಪಲಿ ಗಾಗಿ ಗೋಳಾಡುತ್ತಿದ್ದರೆ, ಯುದ್ಧದಲ್ಲಿ ಕೊನೆಯಲ್ಲಿ ಅರಾವಣನ ತಲೆಯು ಬಿದ್ದು ಹೋದದ್ದರಿಂದ ತಮ್ಮ ಪೂರ್ವಜನ ಸಾವಿಗಾಗಿ ರೋದಿಸುತ್ತಾರೆ.[೭೯]
ಇಷ್ಟೇ ಅಲ್ಲದೆ ಆಲುಕಾಲಂ ನಲ್ಲಿ, ಮೃತ ಅರಾವಣನ ಗೌರವಾರ್ಥವನ್ನು ಸಾಂಕೇತಿಕವಾಗಿ ಸೂಚಿಸುವುದಕ್ಕಾಗಿ ಬೇಯಿಸಿದ ರಕ್ತ ಸಿಕ್ತ ಅನ್ನವನ್ನು ಎಲ್ಲರಿಗೂ ವಿತರಿಸಲಾಗುತ್ತದೆ. ಈ ಅಕ್ಕಿ ಕಾಳುಗಳು ಮಕ್ಕಳಿಲ್ಲದ ಹೆಂಗಸರೂ ಸಹ ಗರ್ಭಿಣಿಯಾಗುವಂತೆ ಮಾಡುತ್ತವೆ ಎಂದು ನಂಬುತ್ತಾರೆ. ಮರಣೋತ್ತರ ವಿಧಿವಿಧಾನಗಳ ನಂತರ, ರಥವನ್ನು ಸಾವಿನ ಮನೆ ಎಂದು ಪರಿಗಣಿಸಲಾಗುತ್ತದೆ. ನಿರ್ಜೀವ ತಲೆಯನ್ನು ಅಸ್ತಿ ಪಂಜರದ ದೇಹದಿಂದ ಬೇರ್ಪಡಿಸಲಾಗುತ್ತದೆ,ನಂತರ ಇದನ್ನು ಒಂದು ಬಟ್ಟೆಯಿಂದ ಮುಚ್ಚಿ, ಅಂತಿಮವಾಗಿ ಹಳ್ಳಿಯಲ್ಲಿ ಅಂತ್ಯ ಸಂಸ್ಕಾರದವರೆಗೂ ಮೆರವಣಿಗೆ ಮಾಡಿಸಲಾಗುತ್ತದೆ. ಈ ತಲೆಯನ್ನು ಕಾಳಿಯ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿ ಪುನರುಜ್ಜೀವಿತ ಗೊಳಿಸಲಾಗುತ್ತದೆ. ವಿತ್ತೈಯತ್ತಿ (ಮರು ಪ್ರವೇಶದ ನೃತ್ಯ) ಎಂಬ ಒಂದು ಸಮಾರಂಭದಲ್ಲಿ, 17ನೇ ದಿನದ ಬೆಳಗಿನ ಜಾವದ ವರೆಗೂ ಮತ್ತೊಮ್ಮೆ ತಲೆಯನ್ನು ನೃತ್ಯದ ಮೂಲಕ ಹಳ್ಳಿಯಲ್ಲಿ ಕೊಂಡೊಯ್ಯಲಾಗುತ್ತದೆ. 18ನೇ ಮತ್ತು ಅಂತಿಮ ದಿನದಲ್ಲಿ, ತಲೆಯನ್ನು ಶೃಂಗರಿಸಿ, ಕೊನೇಯದಾಗಿ ಹಳ್ಳಿಯ ತುಂಬಾ ಮೆರವಣಿಗೆ ಮಾಡಲಾಗುತ್ತದೆ. ಸಾಯಂಕಾಲದಂದು ಪೂಜಾರಿಯು (ಅರ್ಚಕ) ತನ್ನ ದೇವಾಲಯದ ಒಳ ಗರ್ಭ ಗುಡಿಯಲ್ಲಿ ಯುಧಿಷ್ಟಿರ (ಧರ್ಮರಾಜ) ನಾಗಿ ಅರಾವಣನ ತಲೆಯ ಮೇಲೆ ಕಿರೀಟವನ್ನು ಇರಿಸುವುದರ ಮೂಲಕ ಪಟ್ಟಾಭಿಷೇಕದ ಕಾರ್ಯಕ್ರಮವನ್ನು ನೆರವೇರಿಸುತ್ತಾನೆ.[೭೯][೮೨]
ದ್ರೌಪದಿ ಧರ್ಮಾಚರಣೆಯ ಪದ್ಧತಿಗಳು[ಬದಲಾಯಿಸಿ]
ದ್ರೌಪದಿಯ ಭಕ್ತರು ಪಾತುಕಾಲಂ ಎಂಬ ವಾರ್ಷಿಕ ಹಬ್ಬವನ್ನು ಆಚರಿಸುವುದರ ಮೂಲಕ ಮಹಾಭಾರತದ ಯುದ್ಧವನ್ನು ಸ್ಮರಿಸಿಕೊಳ್ಳುತ್ತಾರೆ. ಈ ಹಬ್ಬವು ಸಾಮಾನ್ಯವಾಗಿ ದ್ರೌಪದಿಯ ಸ್ವಯಂವರವನ್ನು ನಟಿಸಿ ತೋರಿಸುವ ಕುತ್ತು ("ನಾಟಕ") ದಿಂದ ಪ್ರಾರಂಭವಾಗುತ್ತದೆ.[೮೩] ಹಬ್ಬದ ಸಮಯದಲ್ಲಿ , ದ್ರೌಪದಿಯ ಪಾತ್ರ ಮಾಡುವ ನಟಿಯು (ಇತರ ಹೆಣ್ಣು ಮಕ್ಕಳು ಸಾರ್ವಜನಿಕ ಸಮಾರಂಭದಲ್ಲಿ ಭಾವಹಿಸಿರುತ್ತಾರೆ) ಯುದ್ಧದಲ್ಲಿ ಅರಾವಣ ಮತ್ತು ಇತರ ಯೋಧರ ಸಾವಿಗಾಗಿ ಪ್ರಲಾಪಿಸುತ್ತಾಳೆ.[೮೪] ಪಾತುಕಾಲಂ ಹಬ್ಬದ ಆಚರಣೆಯಲ್ಲಿ ಕೆಲವು ವ್ಯತ್ಯಾಸಗಳಿವೆ, ಅರಾವಣನ ಬಲಿ ( ಕಾಲಪ್ಪಲಿ )ಯ ಕುತ್ತು ವನ್ನು ಆಚರಿಸಲು ಒಂದು ದಿನವನ್ನು ನಿರ್ಧರಿಸಿದಲ್ಲಿ, ಕಾಲಪ್ಪಲಿ ಯನ್ನು ಎಲ್ಲಿ ಆಚರಿಸಲಾಗುತ್ತದೋ ಅದನ್ನು ಸಾಂಕೇತಿಕವಾಗಿ ಕುರುಕ್ಷೇತ್ರದ ಯುದ್ಧ ಭೂಮಿ ಎಂದು ಘೋಷಿಸಲಾಗುತ್ತದೆ.[೮೫]
ತಮಿಳು ನಾಡಿನ ,ಇರುಂಕಲ್ನಲ್ಲಿ ಈಕುಟ್ಟು ವನ್ನು ಸಾಮಾನ್ಯವಾಗಿ 18ದಿನಗಳ ಹಬ್ಬದ ದಿನದ ಕೊನೆಯ ದಿನವಾದ ಪಾಟುಕಾಲಂ ನ 16 ದಿನಗಳ ಮುಂಚೆ ಆಚರಿಸಲಾಗುತ್ತದೆ. ಆದರೆ ಸಿಂಗಪೂರ್ನಲ್ಲಿ ,ಕುತ್ತು ವನ್ನು ತಮಿಳು ತಿಂಗಳಿನ ಪುರತ್ತಾಸಿ (ಸೆಪ್ಟಂಬರ್ -ಅಕ್ಟೋಬರ್)ನ ಹುಣ್ಣಿಮೆಯಂದು ಆಚರಿಸಲಾಗುತ್ತದೆ.[೮೬] 10ರಿಂದ 12 ನೇ ದಿನಗಳ ನಂತರದಲ್ಲಿಯೇ, ಹಬ್ಬದ ಕೊನೆಯ ರಾತ್ರಿ ಕುತ್ತು ಮತ್ತು ಅರಾವಣನ ಕಲಾಪ್ಪಲಿ ಯ ಶಾಸ್ತ್ರೋಕ್ತಗಳನ್ನು ನಡೆಸಲಾಗುತ್ತದೆ, ಇದನ್ನು ಬೆಂಗಳೂರು ಮತ್ತು ಚನ್ನೈನ ಸಾವುಕಾರ್ ಪೇಟ್, ಅಲಾಂತೂರ್ ಮತ್ತು ಪುನಾಮಲ್ಲಿಯಲ್ಲಿ ಕಾಣಬಹುದು.[೮೫]
ಹಬ್ಬಗಳಲ್ಲಿ ಅರಾವಣನನ್ನು ವಿವರಿಸುವ ವಿಧಾನಗಳಲ್ಲಿ ಅನೇಕ ಭಿನ್ನತೆಗಳಿವೆ. ಚನ್ನೈ ಮತ್ತು ಪಾಂಡಿಚೇರಿಯ ದೇವಸ್ಥಾನಗಳಲ್ಲಿ ಮರದಿಂದ ಮಾಡಿದ ಶಾಶ್ವತವಾದ ಅರಾವಣನ ತಲೆಯನ್ನು ಉಪಯೋಗಿಸಲಾಗುತ್ತದೆ.ಹಳ್ಳಿಗಳಲ್ಲಿ ಅರಾವಣನ ತಲೆ ಮತ್ತು ದೇಹಗಳೆರಡನ್ನೂ ಜೇಡಿ ಮಣ್ಣಿನಿಂದ ಮಾಡಲಾಗುತ್ತದೆ.ಇವೆರಡನ್ನೂ ಹಬ್ಬದ ನಂತರ ನಾಶ ಮಾಡಲಾಗುತ್ತದೆ.[೮೫] ತಿಂದೀವನಂ ನಲ್ಲಿ ಅರಾವಣನು ತನ್ನ ಎಡ ಮೊಣಕಾಲಿನ ಮೇಲೆ ನಿಂತು ಒಂದು ಬಿಲ್ಲನ್ನು ಹಿಡಿದಿರುವ ಪರಾಕ್ರಮಶಾಲಿಯ ಭಂಗಿಯನ್ನು ತೋರಿಸುವ ತಲೆ ಇಲ್ಲದ ಪ್ರತಿಮೆಯನ್ನು ಜೇಡಿ ಮಣ್ಣು ಮತ್ತು ಬಿದಿರಿನಿಂದ ಮಾಡಲಾಗುತ್ತದೆ. ನಂತರ ಜೇಡಿ ಮಣ್ಣಿನಿಂದ ಮಾಡಲಾದ ಒಂದು ತಲೆಯನ್ನು ಕೆಲವು ವಿಧಿವಿಧಾನಗಳಿಂದ ಅಂಟಿಸಿ ಪ್ರತಿಕೃತಿಯು೭ ಅಡಿಗಳು (. ಮೀ) ಉದ್ದವಾಗಿ ಕಾಣುವಂತೆ ಮಾಡಲಾಗುತ್ತದೆ. ಅಧಿಕೃತವಾದ ಒಬ್ಬ ಅರ್ಚಕನು ಒಂದು ಖಡ್ಗವನ್ನು ತೆಗೆದುಕೊಂಡು, ತಲೆಯನ್ನು ತುಂಡು ತುಂಡಾಗಿ ಕತ್ತರಿಸುತ್ತಾನೆ. ನಂತರ, 32ತುಂಡುಗಳಾಗಿ ಕತ್ತರಿಸಿದ ಅರಾವಣನ ದೇಹದ ಬಲಿಯ ಸಂಕೇತವಾಗಿ ಒಂದು ಕುಂಬಳಕಾಯಿಯನ್ನು 32 ತುಂಡುಗಳಾಗಿ ಕತ್ತರಿಸಲಾಗುತ್ತದೆ. ಇದರ ನಂತರ ಅರಾವಣನ ಮುಂದೆ ಬಲಿ ಕೊಡಲಾಗುವ ಆಡಿನ ರಕ್ತವನ್ನು , ಆತನದೇ ರಕ್ತವೆಂದು ತಿಳಿದು ಅರಾವಣನಿಗೆ ನೈವೇದ್ಯ ನೀಡಲಾಗುತ್ತದೆ. ಅರಾವಣನ ದೇಹದ ಕುತ್ತಿಗೆಯಿಂದ ಕೆಳಭಾಗವನ್ನು ರಕ್ತ ಸಿಕ್ತ ಬಿಳಿಯ ಬಟ್ಟೆಯಿಂದ ಮುಚ್ಚಲಾಗುತ್ತದೆ. ಅಂತಿಮವಾಗಿ ರಕ್ತದಿಂದ ನೆನಸಿದ ಅಕ್ಕಿ ಕಾಳುಗಳನ್ನು ಅರಾವಣನ ಮುಖದಮೇಲೆ ಚಿಮುಕಿಸಲಾಗುತ್ತದೆ. ಕುಟ್ಟಾಂತವರ್ ಧರ್ಮಾಚರಣೆಯ ಪ್ರಕಾರ, ಭಕ್ತರು ಅರಾವಣನ ಮುಖದ ಮೇಲೆನಿಂದ ಬಿದ್ದ ಈ ಅಕ್ಕಿ ಕಾಳುಗಳನ್ನು ತಿನ್ನುವುದರಿಂದ, ಗರ್ಭಧರಿಸುತ್ತಾರೆ ಎಂಬ ನಂಬಿಕೆ ಇದೆ.[೮೭]
ಕುಂಬಕೋಣಂನ ಹತ್ತಿರವಿರುವ ಕತ್ತೀರಂ ಕರಪ್ಪೂರಿನಲ್ಲಿ ,ಅರಾವಣನ ೨೫-ಅಡಿ (. ಮೀ) ಪ್ರತಿಮೆಯನ್ನು ಸಮತಟ್ಟಾಗಿ ನಿರ್ಮಿಸಲಾಗಿದ್ದು, ನೆಲದ ಮೇಲೆ ಇರಿಸಲಾಗಿದೆ ನಂತರ ಅರಾವಣನ ಕಥೆಯನ್ನು ನಟಿಸಿ ತೋರಿಸಲಾಗುತ್ತದೆ; ಕಾಳಿಯು ತನ್ನ ಮೈಮೇಲೆ ಬಂದಂತೆ ಮಾಡುವ ನಟನೊಬ್ಬ ಪ್ರತಿಮೆಯ ಎದುರು ಒಂದು ಹುಂಜದ ಕತ್ತನ್ನು ಕತ್ತರಿಸುವುದರ ಮೂಲಕ, ಬಲಿಯನ್ನು ಸಾಂಕೇತಿಕವಾಗಿ ಪ್ರದರ್ಶಿಸುತ್ತಾನೆ. ನಂತರ, ರಕ್ತ ಸಿಕ್ತ ಅಕ್ಕಿ ಕಾಳುಗಳನ್ನು ಭಕ್ತರಿಗೆ ವಿಶೇಷವಾಗಿ, ಮಕ್ಕಳಿಲ್ಲದ ಮಹಿಳೆಯರಿಗೆ ನೀಡಲಾಗುತ್ತದೆ.[೮೮] ಇಂತಹದ್ದೇ ಆದ ಸಾಂಕೇತಿಕ ಬಲಿ ಮತ್ತು ರಕ್ತ ಸಿಕ್ತ ಅಕ್ಕಿಕಾಳುಗಳ ಆಚರಣೆಯನ್ನು ಮೆಲಾಕ್ಕರೈ,[೮೯] ಅಲಾಂತೂರ್, ಪುನಾಮಲ್ಲಿ ಮತ್ತು ವಿಲ್ಲಿಪುರಂ ಗಳಲ್ಲಿ ಆಚರಿಸಲಾಗುತ್ತದೆ. ಅಲಾಂತೂರ್ ಮತ್ತು ಪುನಾಮಲ್ಲೈ ಗಳಲ್ಲಿ ಒಂದು ಆಡನ್ನು ಬಲಿ ಕೊಡಲಾಗುತ್ತದೆ, ಪಾಟಿರಿಕುಪ್ಪಂ ಮತ್ತು ವಿಲ್ಲಿ ಪುರಂ ಗಳಲ್ಲಿ ಒಂದು ಹುಂಜವನ್ನು ಬಲಿ ನೀಡಲಾಗುತ್ತದೆ.[೯೦] ಕಡಲೂರು, ತಂಜಾವೂರು ಮತ್ತು ವಿಲ್ಲಿಪುರಂ ಜಿಲ್ಲೆಗಳಲ್ಲಿ ಅರಾವಣನ ತಲೆಯನ್ನು ಅತಿ ಎತ್ತರದ ಸ್ಥಳದಲ್ಲಿ ಹಾರಿಸುವುದರ ಮೂಲಕ ಪಾತುಕಾಲಂ ನ್ನು ನೋಡುವಂತೆ ಹಾಗೂ ಮಹಾಭಾರತ ಯುದ್ಧವನ್ನು ಸಾಂಕೇತಿಕವಾಗಿ ನಟಿಸಿ ತೋರಿಸಲಾಗುತ್ತದೆ.[೬೪][೯೧]
ಜಾವನೀಯರ ಸಂಪ್ರದಾಯಗಳು[ಬದಲಾಯಿಸಿ]
ಇಂಡೋನೇಷಿಯಾದ ದ್ವೀಪವಾದ ಜಾವವನ್ನು, ಸುಮತ್ರದ ಚಕ್ರವರ್ತಿ ಶ್ರೀವಿಜಯರವರಿಂದ, 7ನೆಯ ಶತಮಾನದಿಂದಲೂ ಆಳಲಾಗುತ್ತಿತ್ತು, ಇಲ್ಲಿ ಭಾಗಶಃ ಹಿಂದುಧರ್ಮ ಆಚರಣೆಯಲ್ಲಿದೆ. ಇದು ಮಹಾಭಾರತದ ಸಂಪ್ರದಾಯಗಳ ಪ್ರಸಾರ ಮತ್ತು ಅನುಸರಣೆಯನ್ನು ಒಳಗೊಂಡಿದೆ. "ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಕೃತದ ಮಾಹಾಕಾವ್ಯಗಳನ್ನು ತೋರಿಸುವಂತಹ ಮೊದಲಿನ ಪುರಾವೆಗಳನ್ನು, ಏಡಿ 907ರಲ್ಲಿ ರಾಜ ಬಲಿತಂಗ್ರ ಹೆಸರಿನಲ್ಲಿ ಹೊರಡಿಸಿದ ಸಂಗ್ಸಾಂಗ್ ತಾಮ್ರದ ತಟ್ಟೆಯ ಶಿಲಾಲೇಖನಗಳಲ್ಲಿ ಕಾಣಲಾಗುತ್ತದೆ."[೯೨] "ಮಹಾಭಾರತವನ್ನು ಜಾವನೀಯಕ್ಕೆ ಭಾಷಾಂತರಿಸುವಿಕೆಯು, ರಾಜ ಧರ್ಮವಂಗ್ಸ Tĕguh (ಎಡಿ 990–1016)ರ ಪ್ರೋತ್ಸಾಹದಲ್ಲಿ ನಡೆಯಿತು",[೯೨] ವಿರಾಟಪಾರ್ವದ ನಿರೂಪಣೆಯಲ್ಲಿ ಸಮಾಪ್ತಿಯನ್ನು ತಲುಪಿದ್ದು 'ಒಂದು ತಿಂಗಳಿಗೆ ಒಂದು ಸಂಜೆ ಕಡಿಮೆಯಲ್ಲಿ'—14 ಅಕ್ಟೋಬರ್ರಂದು ಪ್ರಾರಂಭವಾಯಿತು ಮತ್ತು 12 ನವಂಬರ್ 996ರಂದು ಮುಕ್ತಾಯವಾಯಿತು."[೯೨] ಜಾವನೀಯಕ್ಕೆ ಮಾಡಲಾದ ಈ ಮೊದಲ ಭಾಷಾಂತರವು "ಸಂಕ್ಷೇಪವಾಗಿತ್ತು" ಮತ್ತು "ವಚನ" ರೂಪದಲ್ಲಿತ್ತು.[೯೨] ಏನೇ ಆದರೂ, ನಂತರ ಪೂರ್ವ ಜಾವನೀಯರ ಕವಿಗಳು, ಮಹಾಭಾರತದ ಪಾರ್ವಾ ಗಳನ್ನು ("ಪುಸ್ತಕಗಳು" ಅಥವಾ "ಅಧ್ಯಾಯಗಳು") ನಿರೂಪಣಾ ವಿಷಯಗಳಲ್ಲಿ ವಿಸ್ತರಿಸುತ್ತಾ ಮತ್ತು ಇವನ್ನು ಜಾವನೀಯ ಕ್ರಮಗಳಿಗೆ ಅಳವಡಿಸುತ್ತಾ ತಮ್ಮ ಸ್ಥಳೀಯ ಕಾಕವಿನ್ ತಯಾರಿಯನ್ನು ಪ್ರಾರಂಭಿಸಿದರು.[೯೨] ಪೆಟ್ರಸ್ ಜೋಸೆಫಸ್ ಝೊಯೆಟ್ಮುಲ್ಡರ್ ವ್ಯಾಖ್ಯಾನಿಸಿದ್ದು: "ಈ ಪುರುಷ ಮತ್ತು ಸ್ತ್ರೀಯರು, ಅವರ ಭಾರತೀಯ ಹೆಸರುಗಳೊಂದಿಗೆ ಅಗತ್ಯವಾಗಿ ಜಾವನೀಯರಾಗಿದ್ದಾರೆ, ಜಾವನೀಯರಾಗೆ ವರ್ತಿಸುತ್ತಿದ್ದಾರೆ, ಜಾವನೀಯರಾಗೆ ಯೋಚಿಸುತ್ತಿದ್ದಾರೆ ಮತ್ತು ಜಾವನೀಯರ ವಾತಾವರಣದಲ್ಲೇ ವಾಸಿಸುತ್ತಿದ್ದಾರೆ."[೯೩]
ಸಾಮಾನ್ಯವಾಗಿ ಜಾವದಲ್ಲಿ ಐರಾವನ್ ಎಂದು ಉಚ್ಚರಿಸುವ, ಐರಾವಣನ ಕಥೆಗಳನ್ನು, ಜಾವನೀಯ ಆವೃತ್ತದ ಮಹಾಭಾರತದಿಂದ ಆಯ್ದ ಇತರ ಕಥೆಗಳೊಂದಿಗೆ, ಸಾಂಪ್ರದಾಯಿಕ ಜಾವನೀಯರ ರಂಗಮಂದಿರದಲ್ಲಿ (ವಾಯಾಂಗ್ ), ಹಾಗು ವಾಯಾಂಗ್ ಕುಲಿತ್ ಎಂದು ಪ್ರಸಿದ್ಧಿಯಾದ ನೆರಳಿನ-ಬೊಂಬೆಯಾಟಗಳಲ್ಲೂ ಹೇಳಲಾಗಿದೆ. ಭಾರತದಲ್ಲಿನ ಮಾದರಿಯಲ್ಲಿ, ಐರಾವಣನ್ನು ಅರ್ದ್ಜುನ (ಅರ್ಜುನ) ಮತ್ತು ಉಲುಪಿಯ ಮಗನೆಂದು ವರ್ಣಿಸಲಾಗಿದೆ. ಭಾರತದಲ್ಲಿ, ಐರಾವಣನ ತಾಯಿ ಉಲುಪಿಯನ್ನು ನಾಗ (ಸರ್ಪೆಂಟ್) ಎಂದು ಹೇಳಲಾಗುತ್ತದೆ, ಜಾವನೀಯರ ದಂತಕಥೆಗಳಲ್ಲಿ ಅವಳು ಯಸರಾಟ ಹರ್ಮಿಟೇಜ್ (ಸನ್ಯಾಸಿಗಳ ಆಶ್ರಯದ) ಮುನಿ ಕಣ್ವರ (ಬೊಂಬೆಆಟದಲ್ಲಿ ಜಯವಿಲಪ್ಪ) ಮಗಳು ಎಂದು ಹೇಳಲಾಗುತ್ತದೆ. ಐರಾವಣ ಮುನಿಗಳ ಆಶ್ರಮದಲೇ ಹುಟ್ಟಿ ಬೆಳೆದನು, ಈತನು ತನ್ನ ತಂದೆ ಯಿಂದ ದೂರದಲ್ಲಿ, ತಾಯಿ ಮತ್ತು ತಾತನ ಆರೈಕೆಯಲ್ಲೇ ಬೆಳೆದನು.[೯೪][೯೫] ಐರಾವಣ ಮತ್ತು ಅವನ ಮಲಸಹೋದರ ಅಭಿಮಂಜು (ಅಭಿಮನ್ಯು) ಅಥವಾ ಅಂಗಕಾವಿಜಯ ಇಬ್ಬರು, ಪಾಂಡವರ ಕಾಲವಾದ, ಅಮರ್ಥ ಅವಧಿಯಲ್ಲಿ ನಡೆದ, 40 ಲಕೋನ್ ಗಳಿಗಿಂತಲೂ ("ದೃಶ್ಯಗಳು", "ನಾಟಕಗಳು", ಅಥವಾ "ಆಟಗಳು") ಹೆಚ್ಚಿನವುಗಳಲ್ಲಿ ಪ್ರಮುಖಪಾತ್ರವಹಿಸಿದ್ದರು.[೯೬] ಈ ಲಕೋನ್ ಗಳಲ್ಲಿ, ಐರಾವಣನನ್ನು ಲಿಜೆಪಾನ್ ಪಾತ್ರದಲ್ಲಿ ನಿರೂಪಿಸಲಾಯಿತು—"ಇದು ಒಂದು ಚಿಕ್ಕ, ತೀವ್ರ ಸಂಸ್ಕೃತಿಯ, ಹತೋಟಿಯಲ್ಲಿಟ್ಟ ಪಾತ್ರವಾಗಿದ್ದು, ಇದರ ವೈಖರಿಯು ವಿನೀತವಾಗಿತ್ತು".[೯೭] ವಾಯಾಂಗ್ ಕುಲಿತ್ ನಲ್ಲಿ, ಅವನನ್ನು ಬಂಬ್ಯಾಂಗ್ ("ಸಂಸ್ಕೃತಿಯ ಸರದಾರ")ನಂತೆ, ಬಿಳಿ ಮುಖದೊಂದಿಗೆ, ಅಳವಡಿಸಿದ ತಿಳಿ, ನಡುಗುವ ದ್ವನಿಯೊಂದಿಗೆ ನಿರೂಪಿಸಲಾಗಿದೆ.[೯೮] ಐರಾವಣನನ್ನು ನಿಶ್ಚಯದ ಮತ್ತು ನಿರಾಳವ್ಯಕ್ತಿ ಎಂದು ಸಹ ವರ್ಣಿಸಲಾಗಿದೆ.[೯೫]
ಐರಾವಣ ರಬಿ ("ಐರಾವಣನ ಮದುವೆ") ಎಂಬ ಹೆಸರಿನ ಪ್ರಸಿದ್ಧ ಲಕೋನ್ , ಐರಾವಣ ಮತ್ತು ಕ್ರೇಷ್ಣ (ಕೃಷ್ಣ)ನ ಮಗಳು ತಿತಿಸಾರಿಯ ಪ್ರೀತಿಯ ಬಗ್ಗೆ ಹೇಳುತ್ತದೆ. ತಿತಿಸಾರಿಯನ್ನು ಐರಾವಣನಿಗೆ ನಿಶ್ಚಯಮಾಡಿದಾಗ, ಕ್ರೇಷ್ಣನ ಸಹೋದರ, ಕುರವಾರ (ಕೌರವರ) ಸಂಬಂಧಿಯಾದ ಬಲದೇವ (ಬಲದೇವಾ), ಅವಳು ದುರ್ಜುದನ (ದುರ್ಯೋದನ)ನ ಮಗನಾದ ಲೆಸ್ಮನ ಮಂದ್ರಕುಮಾರನನ್ನು ವಿವಾಹವಾಗಬೇಕೆಂದು ಬಯಸಿ, ಕೌತುಕ ವಿವಾದ ಹುಟ್ಟಿಸುವ ಪ್ರಯತ್ನ ಮಾಡಿದ್ದರು. ಅನಂತರ ಉಂಟಾದ ವಿವಾದವು ಪಾಂಡವರು, ಕುರವರು, ಮತ್ತು ರಾಕ್ಷಸ-ರಾಜ್ಯವಾಗಿ ಮೂರುಭಾಗಗಳಾಗಿ ಕೊನೆಗೊಂಡಿತು, ದುಷ್ಟ ರಾಕ್ಷಸ-ರಾಜ್ಯದ ಬರಂದ್ಜನ ತಿತಿಸಾರಿಯನ್ನು ಅಪಹರಿಸುವ ಯೋಜನೆಯನ್ನು ಹೊಂದಿದ್ದ. ಅನುಸರಿಸಿದ ಗೊಂದಲವು ಕುರವರ ಸೋಲಿಗೆ ಮತ್ತು ಅಪಮಾನಕ್ಕೆ ಕಾರಣವಾಯಿತು. ಕ್ರೇಷ್ಣನ ಹಿರಿಯ ಮಗಳು ಮತ್ತು ದೂರವಾದ ಅಭಿಮಂಜುನ ಪತ್ನಿಯಾದ, ಸಿತಿ ಸೆಂದಾರಿ, ಈ ಸಂದರ್ಭದ ಲಾಭವನ್ನು ಪಡೆದುಕೊಂಡು ಐರಾವಣ ಮತ್ತು ತಿತಿಸಾರಿಯನ್ನು ಒಂದುಗೂಡಿಸುವ ಮತ್ತು ಅದೇ ಸಮಯದಲ್ಲಿ ತನ್ನ ಪತಿಯೊಂದಿಗಿನ ಸಂಬಂಧವನ್ನು ಸರಿಪಡಿಸಿಕೊಳ್ಳುವ ಯೋಜನೆಯನ್ನು ಮಾಡುತ್ತಿದ್ದಳು.[೯೯][೧೦೦] ಅಧಿಕೃತವಾಗಿ ಐರಾವಣ ಮತ್ತು ತಿತಿಸಾರಿ ಲಕೋನ್ ನ ನಾಯಕ ನಾಯಕಿಯಾಗಿದ್ದರೂ, ನಿಜ ಜೀವನದಲ್ಲಿ ಅವರು ಕೇವಲ ಪ್ರೇಕ್ಷಕರು ಮಾತ್ರ, ಆಟದಲ್ಲಿನ ಸರಿಚುಗರಲ್ಲ.[೯೯] ಬ್ರಂಡೋನ್ ಐರಾವಣನನ್ನು ಒಂದು ಅಲ್ಪ ಪಾತ್ರವೆಂದು ವ್ಯಾಖ್ಯಾನಿಸಿದ್ದಾನೆ.[೧೦೧] ಐರಾವಣನನ್ನು ಖಚಿತವಾಗಿ ಹೇಳಲಾಗದ ಮತ್ತು ಇತರರಿಂದ ಪ್ರದರ್ಶಿಸಲಾದ, ದಕ್ಷಿಣ ಏಷಿಯಾ ರಂಗಮಂದಿರಗಳಲ್ಲಿ ಸರ್ವೇಸಾಮಾನ್ಯವಾದುದಾಗಿ ಸಹ ವ್ಯಾಖ್ಯಾನಿಸಲಾಗಿದೆ.[೯೯] ಸೆರತ್ ಲಂಪಹನ್ ಪ್ರೆಜಿವ ಪ್ರೆಜಿವಾಟಿ ಎಂದು ಕರೆಯುವ ಮತ್ತೊಂದು ಲಕೋನ್ ಸಹ ಐರಾವಣ ಮತ್ತು ತಿತಿಸಾರಿಯರ ಪ್ರೇಮಕ್ಕೆ ಸಂಬಂಧಿಸಿದ ಕಥೆಯನ್ನೇ ಹೊಂದಿದೆ.[೧೦೨]
1883ರಲ್ಲಿ ಮಕಪಟ್ ಪಂಕ್ತಿಯಲ್ಲಿ, ಮಂಗ್ಕುನೆಗಾರ IVನ ಆಸ್ಥಾನ ಕವಿ ಆರ್. ಎಮ್. ಎನ್ಜಿ. ವೀರ್ಯಕುಸುಮ ಅವರಿಂದ, ಸೆರತ್ ಗಂಬೀರಾನೊಮ್ ಹೆಸರಿನ ಲಕೋನ್ ನಲ್ಲಿ ಬರೆದದ್ದು ,[೧೦೩] ಮತ್ತು ಅನಾಮಧೇಯದ ನಂತರದ ಕವಿಗಳಿಂದ ಸ್ವಾರಸ್ಯಗೊಳಿಸಲಾಗಿದ್ದು, ಐರಾವಣ ಗ್ರಾನ್ಕ್ಯಂಗ್ ಕೆನ್ಕಾನದ ರಾಜನಾಗುತ್ತಾನೆ ಮತ್ತು ಪ್ರಭು ಗಂಭೀರನೊಮ್ ಎಂಬ ಬಿರುದನ್ನು ಪಡೆಯುತ್ತಾನೆ ಎಂದು.[೧೦೪] ಐರಾವಣ ಮಲಿಂಗ್ ಅನ್ನುವ ಮತ್ತೊಂದು ಲಕೊನ್ , ಐರಾವಣ ಮತ್ತು ಅಂಗ್ಕಾವಿಜಯರ ನಡುವಿನ ದ್ವಂದಯುದ್ಧವನ್ನು ವಿವರಿಸುತ್ತದೆ.[೧೦೫]
ಪಾರ್ಥವಿಜಯ ("ಅರ್ಜುನನ ವಿಜಯ") ಎಂದು ಸಹ ಕರೆಯುವ, ಕಾಕವಿನ್ ಪಠ್ಯ ಐರಾವಣ(ಅಂ)ತಕ ("ಐರಾವಣನ ಮರಣ"), ಭರತಯುದ್ಧದಲ್ಲಿನ (ಮಹಾಭಾರತ ಯುದ್ದ) ಐರಾವಣನ ಮರಣವನ್ನು ವರ್ಣಿಸುತ್ತದೆ.[೧೦೬] ಭರತಯುದ್ಧದ ಪ್ರಾರಂಭದಲ್ಲಿ, ಐರಾವಣ ತನ್ನ ಸಹೋದರರೊಂದಿಗೆ ಯುದ್ಧಕ್ಷೇತ್ರದ ಕಡೆಗೆ ಮುನ್ನಡೆಯುತ್ತಾನೆ. ಅವರಿಬ್ಬರು ಜೊತೆಯಲ್ಲಿ ಅನೇಕ ಕುರವರನ್ನು ಸಾಯಿಸುತ್ತಾರೆ. ನಂತರ, ರಾಕ್ಷಸ (ದಿತ್ಯ ) ಕಲಸ್ರೆಂಗಿ ಐರಾವಣನನ್ನು ಸಂಧಿಸುತ್ತಾನೆ. ಕಲಸ್ರೆಂಗಿಯ ತಂದೆಯನ್ನು ಅರ್ದ್ಜುನ ಸಾಯಿಸಿರುತ್ತಾನೆ, ಐರಾವಣ ಮತ್ತು ಅರ್ದ್ಜುನ ನೋಡಲು ಒಂದೇ ರೀತಿ ಕಾಣುವುದರಿಂದ ಇವನೇ ಅರ್ದ್ಜುನ ಎಂದು ಭಾವಿಸಿ ಐರಾವಣನನ್ನು ಸಾಯಿಸುತ್ತಾನೆ.[೯೫] ನಂತರ ಐರಾವಣನ ಮರಣಕ್ಕೆ ಪ್ರತೀಕಾರವಾಗಿ ಅರ್ಜುನ ಕಲಸ್ರೆಂಗಿಯನ್ನು ಸಾಯಿಸುತ್ತಾನೆ. ಜಾವನೀಯ ಆವೃತ್ತದ ಮಹಾಭಾರತದಲ್ಲಿ ಐರಾವಣನ ಮರಣವನ್ನು ಯುದ್ಧದ ಆರಂಭದಲೇ ಸೂಚಿಸಲಾಗಿದೆ.[೧೦೭] ಈ ಕಥೆಯ ಬೊಂಬೆಯಾಟದ ಆವೃತ್ತಿಯಲ್ಲಿ ಕಲಸ್ರೆಂಗಿ ಐರಾವಣನನ್ನು ಸಂಧಿಸುವುದನ್ನು, ಐರಾವಣನು ಅವನ ತಂದೆಯನ್ನು ಬೆಟ್ಟಿಯಾಗುವ ಮೊದಲೇ, ಭರತಯುದ್ಧದ ಮುಂದೆ ಹೇಳಲಾಗುತ್ತದೆ.[೯೫]
ಟಿಪ್ಪಣಿಗಳು[ಬದಲಾಯಿಸಿ]
- ↑ ಸೊರೆನ್ಸನ್ (1902) ಪು. 345 ಐರಾವತದ ಹೆಸರಿರುವ ಸೂಚಿಗಳು.
- ↑ Somasundaram O, S (Jan–Mar 2009). "Transgenderism: Facts and fictions". Indian Journal of Psychiatry 51 (1): 73–75. doi:. PMID 19742192. PMC 2738402. http://www.ncbi.nlm.nih.gov/pmc/articles/PMC2738402/.
- ↑ ಒನೊಮ್ಯಾಸ್ಟಿಕ್ ಸಫಿಕ್ಸ್ आन् ಜೊತೆಗೆ ಸಂಧಿ. ಐರಾವಣ ಎನ್ನುವುದು ಐರಾವತದ ಪುರುಷ ಕರ್ತೃ ಏಕವಚನ ರೂಪ.
- ↑ Monier-Williams (2008). Monier Williams Sanskrit-English Dictionary. Universität zu Köln. ಮರುಕಳಿಸಿದ ದಿನಾಂಕ 7 May 2010.
- ↑ ಆಲ್ಫ್ ಹಿಲ್ಟೆಬೀಟೆಲ್ನ ವ್ಯಕ್ತಿಚಿತ್ರಣಕ್ಕಾಗಿ ನೋಡಿ Religion Department. Official site of GWU. The George Washington University (GWU). ಮರುಕಳಿಸಿದ ದಿನಾಂಕ 22 March 2010.
- ↑ ೬.೦ ೬.೧ ೬.೨ ಹಿಲ್ಟೆಬೀಟೆಲ್ (1988) ಪು. 320, ಈ ಪುಟದಲ್ಲಿ ಮ್ಯಡೆಲೀನ್ ಬೈಯರ್ಡುವನ್ನು ನಮೂದಿಸಲಾಗಿದೆ.
- ↑ ೭.೦ ೭.೧ ೭.೨ ೭.೩ ೭.೪ ಹಿಲ್ಟೆಬೀಟೆಲ್ (1995) ಪುಟಗಳು. 455–56
- ↑ ಹಿಲ್ಟೆಬೀಟೆಲ್ (1991) ಪು. 309
- ↑ ೯.೦ ೯.೧ ಹಿಲ್ಟೆಬೀಟೆಲ್ (1998) ಪುಟಗಳು. 152, 160, 162, 165 ಕೂವಗಂ ಚಿತ್ರಗಳು
- ↑ ಹಿಲ್ಟೆಬೀಟೆಲ್ (1998) ಪು. 147
- ↑ ೧೧.೦ ೧೧.೧ n.g3nd3r (Jul 2, 2008). Madukarai. Picasa Web Albums. ಮರುಕಳಿಸಿದ ದಿನಾಂಕ 27 March 2010.ರಲ್ಲಿ ಮಧುರೈ ದೇವಾಲಯದ ಚಿತ್ರಗಳನ್ನು ನೋಡಿ
- ↑ n.g3nd3r (Jul 2, 2008). Kothadai. Picasa Web Albums. ಮರುಕಳಿಸಿದ ದಿನಾಂಕ 27 March 2010.ರಲ್ಲಿ ಕೋತಡಾಯ್ನ ದೇವಾಲಯದ ಚಿತ್ರಗಳನ್ನು ನೋಡಿ
- ↑ ೧೩.೦ ೧೩.೧ n.g3nd3r (Jul 2, 2008). Pillaiyar Kuppam. Picassa Web Albums. ಮರುಕಳಿಸಿದ ದಿನಾಂಕ 27 March 2010.ರಲ್ಲಿ ಪಿಲ್ಲೈಯರ್-ಕುಪ್ಪಂನ ದೇವಾಲಯದ ಚಿತ್ರಗಳನ್ನು ನೋಡಿ
- ↑ n.g3nd3r (Jul 2, 2008). Devanampattinam. Picasa Web Albums. ಮರುಕಳಿಸಿದ ದಿನಾಂಕ 27 March 2010.ರಲ್ಲಿ ದೇವನಾಂಪಟ್ಟಿನಂನ ಚಿತ್ರಗಳನ್ನು ನೋಡಿ
- ↑ ೧೫.೦ ೧೫.೧ Kothattai Aravaan Festival. Flickr. Dilip Muralidaran (2008). ಮರುಕಳಿಸಿದ ದಿನಾಂಕ 27 March 2010.
- ↑ ದ್ರೌಪದಿ ಧರ್ಮಾಚರಣೆಗೆ ನೋಡಿ ಹಿಲ್ಟೆಬೀಟೆಲ್ (1991) ಪುಟಗಳು. 254–56, 268; ಹಿಲ್ಟೆಬೀಟೆಲ್ (1988) ಪು. 249 .
- ↑ ARAVAN KADABALI (French). ಮರುಕಳಿಸಿದ ದಿನಾಂಕ 27 March 2010.
- ↑ ೧೮.೦ ೧೮.೧ ೧೮.೨ ೧೮.೩ ಬಿಟೆನಿನ್ (1973) ಪುಟಗಳು. xxiv–xxv
- ↑ ಬ್ರೋಕಿಂಗ್ಟನ್ (1998) ಪು. 26
- ↑ ಸುತಾಂಕರ್r (1933) "ಪ್ರೊಲೆಗೊಮೆನ" ಪು. lxxxvi. ಎಂಪಸಿಸ್ ಇದರ ಮೂಲ.
- ↑ ವಿಷ್ಣು ಪುರಾಣ 4:20:49 ಮತ್ತು ಐರಾವತದ ಲೇಖನಕ್ಕಾಗಿ, ದೀಕ್ಷಿತರ್ (1951) ಪು. 199 ನ್ನು ನೋಡಿ.
- ↑ ವಿಷ್ಣುಪುರಾಣದ 4:20:12 ಭಾಷಾಂತರ Wilson, Horace Hayman (1840). The Vishnu Purana. Yahshuan Archives. ಮರುಕಳಿಸಿದ ದಿನಾಂಕ 20 March 2010.ರಲ್ಲಿ
- ↑ Aadhar, Anand. Bhāgavata Purana 9:22:32. ಮರುಕಳಿಸಿದ ದಿನಾಂಕ 20 March 2010.
- ↑ ೨೪.೦ ೨೪.೧ ೨೪.೨ ಹಿಲ್ಟೆಬೀಟೆಲ್ (1988) ಪುಟಗಳು. 318–20
- ↑ ೨೫.೦ ೨೫.೧ ಹಿಲ್ಟೆಬೀಟೆಲ್ (1991) ಪು. 284
- ↑ ಐರಾವಣನ ಸೋದರ ಸಂಬಂಧಿಯಾದ ಮಹಾಭಾರತದ ಘಟೋತ್ಕಚನ ಮಗ ಬಾರ್ಬಾರಿಕ ಎಂದು ವಿವರಿಸುತ್ತದೆ.
- ↑ ಬಾರ್ಬಾರಿಕನ ಕಥೆಗೆ ಸಮಾಂತರ ಲೇಖನಗಳಿಗಾಗಿ ಹಿಲ್ಟೆಬೀಟೆಲ್ (1999) ನೋಡಿ
- ↑ ಹಿಲ್ಟೆಬೀಟೆಲ್ (1988) ಪುಟಗಳು. 317–18
- ↑ ಹಿಲ್ಟೆಬೀಟೆಲ್ (1988) ಪು. 318
- ↑ ಪಟ್ಟನಾಯಕ್ (2000) ಪು. 37
- ↑ ೩೧.೦ ೩೧.೧ Santhanam, Kausalya. "Symbol of sacrifice", The Hindu, August 17, 2001. Retrieved on 7 May 2010.
- ↑ ಹಿಲ್ಟೆಬೀಟೆಲ್ (1988) ಪು. 332
- ↑ ಶುಲ್ಮನ್ (1978) ಪು. 132. ಐರಾಮಕ್ಯಮಿಪ್ಪುಲವರ್, ಮೆರ್ಕೊಲ್ವಿಲಕ್ಕಾ ಕ್ಕಟಾಯ್ ಅಕರವರಿಸೆಯ್ (ಮದ್ರಾಸ್, 1963), 1:40–44.
- ↑ ಶುಲ್ಮನ್ (1978) ಪು. 131
- ↑ ೩೫.೦ ೩೫.೧ ಹಿಲ್ಟೆಬೀಟೆಲ್ (1995) ಪು. 448
- ↑ Sörensen 1902, p. 345. ಬಾಂಬೇ ಆವೃತ್ತಿ ಮಹಾಭಾರತ ಪುಸ್ತಕದ 6ರ, 45, 56, 75, 81, 83, 90, 91, ಹಾಗೂ 96ನೆಯ ಅಧ್ಯಾಯಗಳಲ್ಲಿ ಐರಾವತದ ಬಗ್ಗೆ ಉಲ್ಲೇಖಿಸಲಾಗಿದೆ.
- ↑ ಐರಾವಣ ಲೇಖನಕ್ಕಾಗಿ, ನೋಡಿ ಮಣಿ (1975) ಪುಟಗಳು. 331–32.
- ↑ ೩೮.೦ ೩೮.೧ ವೋಗೆಲ್ (1995) ಪುಟಗಳು. 75–76
- ↑ ಮಣಿ (1975) ಪು. 743 (ಮಹಾಭಾರತ—ಭೀಷ್ಮ ಪರ್ವ 45:69)
- ↑ Ganguli (1883–1896). “XLV”, The Mahabharata Book 6: Bhishma Parva. Retrieved on 7 May 2010.
- ↑ ವಿಂದ ಮತ್ತು ಅನುವಿಂದರಿಗಾಗಿ, ನೋಡಿ ಮಣಿ (1975) (ಮಹಾಭಾರತ—ಭೀಷ್ಮ ಪರ್ವ 83:18–22) ಪುಟಗಳು. 45, 857
- ↑ Ganguli (1883–1896). “LXXXIV”, The Mahabharata Book 6: Bhishma Parva. Retrieved on 7 May 2010.
- ↑ ೪೩.೦ ೪೩.೧ Ganguli (1883–1896). “Section XCI”, The Mahabharata Book 6: Bhishma Parva. Retrieved on 7 May 2010.
- ↑ ಸುಭಲನ ಮಕ್ಕಳಿಗಾಗಿ, ಮಣಿ (1975) ಪುಟಗಳು. 90, 178, 217, 287, 758, 881. ಐರಾವಣನಿಗಾಗಿ, ಮಣಿ (1975) ಪುಟಗಳು. 331–32 (ಮಹಾಭಾರತ-ಭೀಷ್ಮ ಪರ್ವ 90:27–46)
- ↑ ಅಲಂಬುಶನಿಗಾಗಿ, ಮಣಿ (1975) ಪು. 24. ಐರಾವಣನಿಗಾಗಿ, ಮಣಿ (1975) ಪುಟಗಳು. 331–32 (ಭೀಷ್ಮ ಪರ್ವ 90:56–76)
- ↑ ೪೬.೦ ೪೬.೧ ೪೬.೨ ೪೬.೩ ಹಿಲ್ಟೆಬೀಟೆಲ್ (1995) ಪು. 452
- ↑ ೪೭.೦ ೪೭.೧ ೪೭.೨ ೪೭.೩ ಹಿಲ್ಟೆಬೀಟೆಲ್ (1988) ಪುಟಗಳು. 322–24
- ↑ ೪೮.೦ ೪೮.೧ ೪೮.೨ ಹಿಲ್ಟೆಬೀಟೆಲ್ (1991) ಪುಟಗಳು. 284–85
- ↑ ೪೯.೦ ೪೯.೧ ೪೯.೨ ವಿಲ್ಲಿಪುಟ್ಟಿರಾಲ್ವರ್ನ ಮಕಪರಾತಂ (ವಿಲ್ಲಿಪುಟುರಾಲ್ವರ್) 2659–2667 (ಕಲಪ್ಪಲಿ. €1.4ಬಿಲಿ ಶುಲ್ಮನ್ (1978) ಪು. 131
- ↑ ಶುಲ್ಮನ್ (1978) ಪು. 133
- ↑ ೫೧.೦ ೫೧.೧ ಹಿಲ್ಟೆಬೀಟೆಲ್ (1995) ಪು. 453
- ↑ ಪಟ್ಟನಾಯಕ್ (2002) ಪು. 87
- ↑ ಹಿಲ್ಟೆಬೀಟೆಲ್ (1988) ಪು. 324
- ↑ Doshi, Tishani. "Lessons in transformation", The Hindu, May 25, 2003. Retrieved on 19 March 2010.
- ↑ ೫೫.೦ ೫೫.೧ ೫೫.೨ ಗೋಲ್ಡ್ಮನ್ (1993) ಪು. 388
- ↑ ೫೬.೦ ೫೬.೧ ಹಿಲ್ಟೆಬೀಟೆಲ್ (1991) ಪು. 286
- ↑ ೫೭.೦ ೫೭.೧ ಹಿಲ್ಟೆಬೀಟೆಲ್ (1988) ಪು. 325
- ↑ ಹಿಲ್ಟೆಬೀಟೆಲ್ (1991) ಪು. 285
- ↑ ಹಿಲ್ಟೆಬೀಟೆಲ್ (1988) ಪು. 326
- ↑ ಹಿಲ್ಟೆಬೀಟೆಲ್ (1988) ಪು. 329
- ↑ ಹಿಲ್ಟೆಬೀಟೆಲ್ (1988) ಪು. 331
- ↑ ಹಿಲ್ಟೆಬೀಟೆಲ್ (1995) ಪುಟಗಳು. 464–65
- ↑ "ಈ ಅರಾವಣ-ಕುಟ್ಟಂತವರ್ ಧರ್ಮಾಚರಣೆಯು ದ್ರೌಪದಿ ಧರ್ಮಾಚರಣೆಗಿಂತಲೂ ಹಳೆಯದು ಹಾಗೂ ಹೆಚ್ಚುಕಡಿಮೆ ಮೊದಲಿಂದಲೂ ಇದು ಸ್ವತಂತ್ರ ಆಚರಣೇಯಾಗಿದೆ, ಇಂದು ದೊಡ್ಡದಾಗಿ ನಡೆಯುತ್ತಿದೆ " ಹಿಲ್ಟೆಬೀಟೆಲ್ (1988) ಪು. 320
- ↑ ೬೪.೦ ೬೪.೧ ೬೪.೨ ೬೪.೩ ೬೪.೪ ೬೪.೫ ಹಿಲ್ಟೆಬೀಟೆಲ್ ಉತ್ತರ ಮತ್ತು ದಕ್ಷಿಣ ಆರ್ಕೊಟ್ ಜಿಲ್ಲೆಗಳನ್ನು ಉಲ್ಲೇಖಿಸುತ್ತದೆ. 1989ರಲ್ಲಿ, ಉತ್ತರ ಆರ್ಕೊಟ್ ಎರಡು ಜಿಲ್ಲೆಗಳಾಗಿ ಒಡೆಯಿತು—ತಿರುವಣ್ಣಾಮಲೈ ಮತ್ತು ವೆಲ್ಲೂರ್; ಹಾಗೂ 1993ರಲ್ಲಿ, ದಕ್ಷಿಣ ಆರ್ಕೊಟ್ ಜಿಲ್ಲೆಯೂ ಎರಡು ಭಾಗವಾಯಿತು—ಕುಡ್ಡಲೂರ್ ಮತ್ತು ವಿಲ್ಲುಪುರಂ ಜಿಲ್ಲೆಗಳು. ಕೆಳಕಂಡ ಟೇಬಲ್ನಲ್ಲಿ ಪ್ರಸ್ತುತ ಜಿಲ್ಲೆಗಳ ಹೆಸರುಗಳ ಪ್ರಕಾರ ವರ್ಗೀಕರಿಸಲಾಗಿದೆ (ಹಿಲ್ಟೆಬೀಟೆಲ್ ಒದಗಿಸಿದ ಆಧಾರದ ಮೇಲೆ ತಾಲೂಕುಗಳು .)
- ↑ ಜಿಲ್ಲೆಗಳ ಸ್ಥೂಲ ಸಮೀಕ್ಷೆಗಾಗಿ ನೋಡಿ (ನಿರ್ಧಿಷ್ಟ ವಿವರಗಳಿಗಾಗಿ ಕೆಳಕಂಡ ಕೊಂಡಿಗಳನ್ನು ನೋಡಿ): Districts of Tamil Nadu. Official Govt. site. Government of Tamil Nadu. ಮರುಕಳಿಸಿದ ದಿನಾಂಕ 1 April 2010.
- ↑ ಹಿಲ್ಟೆಬೀಟೆಲ್ (1995) ಪು. 448. 32 ದೇವಾಲಯಗಳನ್ನು ಒಳಗೊಂಡಿರುವ ನಕ್ಷೆ ಪು. 449.
- ↑ 1996ರವರೆಗೆ, ಈರೋಡು ಜಿಲ್ಲೆಯನ್ನು ಪೆರಿಯಾರ್ ಜಿಲ್ಲೆಯೆಂದು ಕರೆಯಲಾಗುತ್ತಿತ್ತು.
- ↑ ಪುದುಚೆರಿಯನ್ನು ಮೊದಲು ಪಾಂಡಿಚೆರಿಯೆಂದು ಕರೆಯಲಾಗುತ್ತಿತ್ತು.
- ↑ ಹಿಲ್ಟೆಬೀಟೆಲ್ (1988) ಪು. 327
- ↑ ಹಿಲ್ಟೆಬೀಟೆಲ್ (1991) ಪು. 298
- ↑ ಹಿಲ್ಟೆಬೀಟೆಲ್ (1991) ಪು. 314
- ↑ ಕೂವಗಂ ಅನ್ನು ಕುವಗಂ, ಕುವ್ವಕ್ಕಂ, ಕೋವಕ್ಕಂ, ಕುವಕ್ಕಂ, ಕುವ್ನಕ್ಕಂ ಇತ್ಯಾದಿಗಳ ರೀತಿಯಲ್ಲಿ ಎಂದೂ ಬರೆಯಲಾಗುತ್ತದೆ. .
- ↑ ೭೩.೦ ೭೩.೧ Gurung, Madhu. "Journey of possibilities", The Hindu, Mar 18, 2007. Retrieved on 19 March 2010.
- ↑ ನಿಕ್ಲಾಸ್ (2003) ಪು. 14 10-ದಿನಗಳ ಪಿಲ್ಲೈಯಾರ್ಕುಪ್ಪಂ ಹಬ್ಬದ ಪ್ರಯುಕ್ತ, ಕೂವಗಂ ವಿವರಣೆಯಂತೆಯೇ ಇದೆ.
- ↑ ೭೫.೦ ೭೫.೧ ತರ್ಸ್ಟನ್ (2001) ಪುಟಗಳು. 10–12
- ↑ ಎಲ್ಮೋರ್ (2003) ಪು. 18
- ↑ Verma, Varuna. "Celebrating the third sex", The Telegraph, April 29, 2007. Retrieved on May 14, 2009.
- ↑ ಹಿಲ್ಟೆಬೀಟೆಲ್ (1995) ಪು. 454
- ↑ ೭೯.೦ ೭೯.೧ ೭೯.೨ ೭೯.೩ ೭೯.೪ ೭೯.೫ ನೋಡಿ:
- ಹಿಲ್ಟೆಬೀಟೆಲ್ (1991) ಪು. 301
- ಹಿಲ್ಟೆಬೀಟೆಲ್ (1995) ಪುಟಗಳು. 457–64
- ಪಟ್ಟನಾಯಕ್ (2002) ಪು. 87
- ↑ ತಮಿಳು ವಿವಾಹದಲ್ಲಿ ತಾಳಿ ಕಟ್ಟುವುದು ಸಂಪ್ರದಾಯವಾಗಿದೆ, ಗಂಡನ ಮನೆಯಲ್ಲಿ ತನ್ನ ಜೀವನ ಪ್ರಾರಂಭಿಸುವುದಕ್ಕೆ ಹೆಣ್ಣು ಪ್ರವೇಶಿಸುವ ಸಮಯ.
- ↑ ಮದುವೆ ಸಮಾರಂಭದ ಚಿತ್ರಗಳನ್ನು ನೋಡಿ n.g3nd3r (Jul 2, 2008). Koovagam:Marriage to Aravan. Picassa Web Albums. ಮರುಕಳಿಸಿದ ದಿನಾಂಕ 26 March 2010..
- ↑ ಅರಾವಣನ ತಲೆಯ ಕುಣಿತದ ಸಮಾರಂಭದ ಹಾಗೂ ಮೆರವಣಿಗೆ n.g3nd3r (Jul 2, 2008). Koovagam: Procession of Aravan. Picassa Web Albums. ಮರುಕಳಿಸಿದ ದಿನಾಂಕ 26 March 2010. ಮತ್ತು n.g3nd3r (Jul 2, 2008). Koovagam: Widowhood. Picassa Web Albums. ಮರುಕಳಿಸಿದ ದಿನಾಂಕ 26 March 2010.ರ ಚಿತ್ರಗಳನ್ನು ನೋಡಿ
- ↑ ಹಿಲ್ಟೆಬೀಟೆಲ್ (1988) ಪು. 145
- ↑ ಹಿಲ್ಟೆಬೀಟೆಲ್ (1995) ಪು. 462
- ↑ ೮೫.೦ ೮೫.೧ ೮೫.೨ ಹಿಲ್ಟೆಬೀಟೆಲ್ (1991) ಪು. 288
- ↑ ಹಿಲ್ಟೆಬೀಟೆಲ್ (1991) ಪು. 287
- ↑ ಹಿಲ್ಟೆಬೀಟೆಲ್ (1991) ಪುಟಗಳು. 289–93
- ↑ ಹಿಲ್ಟೆಬೀಟೆಲ್ (1991) ಪುಟಗಳು. 294–96
- ↑ ಹಿಲ್ಟೆಬೀಟೆಲ್ (1991) ಪುಟಗಳು. 292–93
- ↑ ಹಿಲ್ಟೆಬೀಟೆಲ್ (1991) ಪುಟಗಳು. 296–97
- ↑ ಹಿಲ್ಟೆಬೀಟೆಲ್ (1991) ಪು. 294
- ↑ ೯೨.೦ ೯೨.೧ ೯೨.೨ ೯೨.೩ ೯೨.೪ ಸುಪೊಮೊ (1995)
- ↑ ಝೊಯೆಟ್ಮುಲ್ದರ್ (1974) ಪುಟಗಳು. 187–188
- ↑ ಉಲುಪಿಗಾಗಿ: ಸುದಿಬ್ಯೋಪ್ರೊನೊ (1991) ಪುಟಗಳು. 551–52
- ↑ ೯೫.೦ ೯೫.೧ ೯೫.೨ ೯೫.೩ ಐರಾವಣ ಲೇಖನಕ್ಕಾಗಿ: ಸುದಿಬ್ಯೋಪ್ರೊನೊ (1991) ಪು. 237
- ↑ ಬ್ರ್ಯಾಂಡನ್ (1993) ಪು. 13
- ↑ ಬ್ರ್ಯಾಂಡನ್ (1993) ಪು. 49
- ↑ ಮ್ರಾಝೆಕ್ (2005) ಪುಟಗಳು. 274–75
- ↑ ೯೯.೦ ೯೯.೧ ೯೯.೨ ಬ್ರ್ಯಾಂಡನ್ (1993) ಪುಟಗಳು. 70–71
- ↑ Alkire, Stephen R. and Guritno, Pandam (translation); Brandon, James R (English version) (1993). “Irawan's Wedding (Irawan Rabi)”, Brandon {{{title}}}, 171–268.
- ↑ ಬ್ರ್ಯಾಂಡನ್ (1993) ಪು. 75
- ↑ ಫ್ಲೋರಿಡಾ (2000) ಪು. 309
- ↑ ಫ್ಲೋರಿಡಾ (1995) ಪು. 34
- ↑ ಫ್ಲೋರಿಡಾ (2000) ಪು. 312
- ↑ ಫ್ಲೋರಿಡಾ (2000) ಪು. 435
- ↑ Creese (1999) ಪು. 78
- ↑ ಭರತಯುದ್ಧಕ್ಕಾಗಿ: ಸುದಿಬ್ಯೋಪ್ರೊನೊ (1991) ಪು. 88
ಉಲ್ಲೇಖಗಳು[ಬದಲಾಯಿಸಿ]
- (1993) Brandon, James R. On thrones of gold: three Javanese shadow plays. University of Hawaii Press.
- Brockington, John (1998). The Sanskrit Epics. Brill. ಆಲ್ಫ್ ಹಿಲ್ಟೆಬೀಟೆಲ್ ಅವರಿಂದ ಇಂಡೋ-ಇರಾನಿಯನ್ ಜರ್ನಲ್ 43 ನಲ್ಲಿ (2000) ವಿಮರ್ಶಿಸಲಾಗಿದೆ : 161–169.
- Buitenen, Johannes Adrianus Bernadus van (1973). The Mahābhārata. University of Chicago Press.
- Creese, Helen (1999). "The Balinese kakawin tradition; A preliminary description and inventory". Bijdragen tot de Taal-, Land- en Volkenkunde (KITLV journals) 155 (1). http://www.kitlv-journals.nl/.
- Dikshitar, V. A. Ramachandra (1951). The Purāṇa Index. Delhi: Motilal Banarsidass Publ.
- Elmore, Wilber Theodore [January 1915] (2003). Dravidian Gods in Modern Hinduism; A Study of the Local and Village Deities of Southern India. Kessinger Publishing.
- Florida, Nancy K. (1995). Writing the past, inscribing the future: history as prophesy in colonial Java. Duke University Press.
- Florida, Nancy K. (2000). Javanese Literature in Surakarta Manuscripts. South East Asia Program.
- Ganguli, Kisari Mohan (1883–1896). Mahabharata. The Internet Sacred Texts Archive. Retrieved on 7 May 2010.
- Goldman, Robert P. (Jul–Sep 1993). "Transsexualism, Gender, and Anxiety in Traditional India". Journal of the American Oriental Society (American Oriental Society) 113 (3): 374–401. doi:. http://www.jstor.org/stable/605387.
- Hiltebeitel, Alf (1988). “Chapter 15: Aravan's Sacrifice”, The cult of Draupadi: Mythologies: from Gingee to Kuruksetra. University of Chicago Press.
- Hiltebeitel, Alf (1991). “Chapter 9: Aravan's battlefield sacrifice to Kali”, The cult of Draupadi: On Hindu ritual and the goddess. University of Chicago Press.
- Hiltebeitel, Alf (May 1995). "Dying Before the Mahabharata War: Martial and Transsexual Body-Building for Aravan". The Journal of Asian Studies (Association for Asian Studies) 54 (2): 447–473. doi:. http://www.jstor.org/stable/2058746.
- Hiltebeitel, Alf (1998). “Chapter 7: Hair Like Snakes and Mustached Brides: Crossed Gender in an Indian Folk Cult”, Hiltebeitel, Alf; Miller, Barbara D Hair: its power and meaning in Asian cultures. SUNY Press.
- Hiltebeitel, Alf (1999). “Chapter 12: Barbarīka, Arāvaṇ, Kūttāṇṭavar: Furthering the Case of the Severed Head”, Rethinking India's oral and classical epics: Draupadī among Rajputs, Muslims, and Dalits. University of Chicago Press.
- Mani, Vettam (1975). Puranic Encyclopaedia: A Comprehensive Dictionary With Special Reference to the Epic and Puranic Literature. Delhi: Motilal Banarsidass.
- Mrázek, Jan (2005). Phenomenology of a puppet theatre: contemplations on the art of Javanese wayang kulit. Leidan, The Netherlands: KITLV Press.
- Niklas, Ulrike (2003). "Ali festival". in Mills, Margaret Ann; Claus, Peter J.; Diamond, Sarah. South Asian folklore: an encyclopedia: Afghanistan, Bangladesh, India, Nepal, Pakistan, Sri Lanka. Taylor & Francis. ISBN 0415939194. http://books.google.co.in/books?id=ienxrTPHzzwC&pg=PA14&dq=Shulman+%22Aravan%22&lr=#PPA14,M1. Retrieved 2009-05-13.
- Pattanaik, Devdutt (2000). The goddess in India. Vermont: Inner Traditions / Bear & Co.
- Pattanaik, Devdutt (2002). The Man who was a Woman and Other Queer Tales of Hindu Lore. The Haworth Press, Inc.
- Shulman, David (November 1978). "The Serpent and the Sacrifice: An Anthill Myth from Tiruvārūr". History of Religions (The University of Chicago Press) 18 (2): 107–137. doi:. http://www.jstor.org/stable/1062582.
- Sörensen, S. (1902). An Index to the Names in the Mahābhārata, 1963 Reprint, Delhi: Motilal Banarsidass Publishers Private Ltd.
- Sudibyoprono, R. Rio (1991). Ensiklopedi wayang purwa, 1 (in Indonesian), Jakarta: Balai Pustaka.
- Sukthankar, Vishnu S. (1927–59). Mahabharata. Pune: Bhandarkar Oriental Research Institute.
- Supomo, S (1995). “Chapter 15: Indic Transformation: The Sanskritization of Jawa and the Javanization of the Bharata”, Peter S. Bellwood, JJ Fox, DT Tryon, and others The Austronesians: historical and comparative perspectives. Canberra: Conference proceedings, Comparative Austronesian Project. Retrieved on 7 May 2010.
- Thurston, Edgar [1909] (2001). Castes and Tribes of Southern India, 4, Asian Educational Services.
- Vogel, Jean Philippe [1926] (2005). “The Nāgas in the great epic”, Indian serpent-lore, or the Nāgas in Hindu Legend and Art. Kessinger Publishing. Indian Serpent-Lore Or The Nagas In Hindu Legend And Art (1926). Internet archive.ರಲ್ಲಿ ಲಭ್ಯವಿದೆ
- Zoetmulder, Petrus Josephus (1974). Kalangwan: a survey of Old Javanese literature. The Hague: Martinus Nijhoff.
ಹೆಚ್ಚಿನ ಓದಿಗಾಗಿ[ಬದಲಾಯಿಸಿ]
- Bolle, Kees W. (August 1983). "A World of Sacrifice". History of Religions (The University of Chicago Press) 23 (1): 37–63. doi:. http://www.jstor.org/pss/1062317.
- Mutaliyār, Cūḷai Municāmi (1907). Aravān kaḷapali nāṭakam (in Tamil). Cennai: Caṇmukam Piras.