ಎ.ಪಂಕಜಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎ.ಪಂಕಜಾ ಇವರು ೧೯೩೨ ಎಪ್ರಿಲ್ ೨೦ರಂದು ಕೋಲಾರ ಜಿಲ್ಲೆಯ ಪಾವಗಡದಲ್ಲಿ ಜನಿಸಿದರು. ಇವರ ತಾಯಿ ವಕುಳಮ್ಮ ; ತಂದೆ ಶ್ರೀನಿವಾಸಾಚಾರ್ ; ಪತಿ ಅನಂತಸ್ವಾಮಿ. ಸಂಗೀತಗಾರರ ಮನೆತನ. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರು. ಓದಿದ್ದು ಇಂಟರ್ ಮೀಡಿಯಟ್‌ವರೆಗೆ. ಹಿಂದಿ ಭಾಷೆಯಲ್ಲಿ ವಿದ್ವಾನ್‌ ಪದವಿ. ಇವರು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ “ಚಂದನಾ” ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  • ಅನುರಾಗ ಬಂಧನ
  • ಅವನೇ ಕಾರಣ
  • ಕಾಗದದ ದೋಣಿ
  • ನಾದಭಂಗ
  • ನೀನಾ (ಪತ್ತೇದಾರಿ)
  • ನೋವು ನಲಿವು
  • ಪ್ರೇಮಸಂಗಮ
  • ಬಂಗಾರದ ಬಲೆ
  • ಬಯಕೆಯ ಬೆಂಕಿ
  • ಬಲಿಪಶು
  • ಮಮತೆಯ ಮಡಿಲಲ್ಲಿ
  • ರಾಗಸುಧಾ
  • ವಿಜಯಗೀತ
  • ಸುಖಸ್ವಪ್ನ
  • ಸೊಗಸುಗಾತಿ
  • ಸ್ನೇಹಸಂಬಂಧ
  • ಹೊಸ ಹಾದಿಯಲ್ಲಿ

ನಾಟಕ[ಬದಲಾಯಿಸಿ]

  • ಊರ್ಮಿಳಾ

ವಿಚಾರ ಸಾಹಿತ್ಯ[ಬದಲಾಯಿಸಿ]

  • ಮದುವೆ ಮತ್ತು ಸ್ತ್ರೀ

ಪುರಸ್ಕಾರ[ಬದಲಾಯಿಸಿ]

ಬೇರೆ ಮಾತೃಭಾಷೆಯವರು ಕನ್ನಡ ಕೃತಿ ರಚಿಸಿದುದಕ್ಕಾಗಿ ಇಟ್ಟಿರುವ ಕೇಂದ್ರ ಸರಕಾರದ ಬಹುಮಾನ ಇವರ ಎರಡು ಕೃತಿಗಳಿಗೆ ಲಭ್ಯವಾಗಿದೆ: ‘ಸೊಗಸುಗಾತಿ’ ಮತ್ತು ‘ಕಾಗದದ ದೋಣಿ’

"https://kn.wikipedia.org/w/index.php?title=ಎ.ಪಂಕಜಾ&oldid=1159397" ಇಂದ ಪಡೆಯಲ್ಪಟ್ಟಿದೆ