ಎ.ಕೆ.ರಾಮಾನುಜನ್
ವಿಕಿಪೀಡಿಯ ಇಂದ
(೧೯೨೯-೧೯೯೩)
'ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್,' ಎನ್ನುವುದು ತಂದೆತಾಯಿಗಳು ಬಾಲ್ಯದಲ್ಲಿ ಇಟ್ಟ ಹೆಸರು, ಕಾವ್ಯಲೋಕದಲ್ಲಿ ಜನಪ್ರಿಯವಾಗಿರುವ ಹೆಸರು, 'ಡಾ. ಎ.ಕೆ.ರಾಮಾನುಜನ್.' 'ರಾಮಾನುಜನ್,', ಮೂಲತಃ ತಮಿಳು ಮಾತಾಡುವವರಾದರೂ, ಕನ್ನಡ ಭಾಷೆಯಲ್ಲಿ ಅವರು ಮಾಡಿರುವ ಸಾಹಿತ್ಯ ಕೃಷಿ ಅನನ್ಯ.
- 'ಕನ್ನಡದ ಪ್ರಮುಖ ಕವಿ,
- 'ಕತೆಗಾರ',
- 'ಭಾಷಾ ವಿಜ್ಞಾನಿ'ಹಾಗೂ
- 'ಜಾನಪದ ಸಂಪತ್ತಿನ-ತಜ್ಞ',
- 'ದ್ರಾವಿಡ ಭಾಷೆಗಳ ಪಾಂಡಿತ್ಯ ಹೊಂದಿ, ದ್ರಾವಿಡ ಸಂಸ್ಕೃತಿಯನ್ನು ಪಾಶ್ಚಾತ್ಯ-ಪ್ರಪಂಚಕ್ಕೆ ಪರಿಚಯಿಸಿದವರು'.
ಪರಿವಿಡಿ |
[ಬದಲಾಯಿಸಿ] ಸಾಧನೆ
ನವ್ಯಕವಿಯಾಗಿ ಕನ್ನಡದಲ್ಲಿ ಹಲವು ಮಹತ್ವದ ಕೃತಿಗಳನ್ನು ನೀಡಿದ್ದಾರೆ. ನವ್ಯ ಪಂಥದ ಕವಿಗಳಲ್ಲಿ ತಮ್ಮದೇ ವಿಶಿಷ್ಟ ಬಗೆಯ ಪದ್ಯ ರಚನೆ,ಪ್ರತಿಮೆಗಳ ಸಂಯೋಜನೆಗಳನ್ನು ರೂಢಿಸಿಕೊಂಡು ತಮ್ಮದೇ 'ಛಾಪು' ಮೂಡಿಸಿದರು. ಅಮೆರಿಕದಲ್ಲಿ ಇದ್ದು ಅವರು ಮಾಡಿದ ಸಾಹಿತ್ಯ ಕೃಷಿ ಅತ್ಯಂತ ಮಹತ್ವದ್ದಾಗಿದೆ.[ಉಲ್ಲೇಖದ ಅಗತ್ಯವಿದೆ]
- 'ಹಲವಾರು ಇಂಗ್ಲಿಷ್ ಕವನಗಳನ್ನು ರಚಿಸಿ ಅಲ್ಲಿಯೂ 'ಸೈ' ಎನಿಸಿದರು.[ಉಲ್ಲೇಖದ ಅಗತ್ಯವಿದೆ]
- 'ಶ್ರೇಷ್ಠ ಮಟ್ಟದ ಭಾಷಾಂತರಕಾರ' ರಾಗಿ ಹಲವು ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತಂದರು.[ಉಲ್ಲೇಖದ ಅಗತ್ಯವಿದೆ]
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕನ್ನಡ
[ಬದಲಾಯಿಸಿ] ಇಂಗ್ಲಿಷ್
- ಸ್ಪಿಕೀಂಗ್ ಆಫ್ ಶಿವ- ವಚನಗಳ ಇಂಗ್ಲೀಷ್ ಅನುವಾದ
- Folktales from India-ಭಾರತದಿಂದ ಆಯ್ದ ಜಾನಪದ ಕತೆಗಳ ಸಂಗ್ರಹ
- ಸಂಸ್ಕಾರ-ಸಂಸ್ಕಾರ ಕಾದಂಬರಿಯ ಇಂಗ್ಲಿಷ್ ಅನುವಾದ
