ಎಮ್.ಕೆ.ವರಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಮ್.ಕೆ.ವರಗಿರಿಯವರು ೧೯೧೨ ಜನೆವರಿ ೨೧ರಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಜನಿಸಿದರು.

ಶಿಕ್ಷಣ ,ವೃತ್ತಿ[ಬದಲಾಯಿಸಿ]

ಇವರ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ರಾಣಿಬೆನ್ನೂರು ತಾಲೂಕಿನಲ್ಲಿ ಜರುಗಿದವು. ಬಿ.ಎ. ಪದವಿಯನ್ನು ವರಗಿರಿಯವರು ಪುಣೆಯಲ್ಲಿ ಪಡೆದರು. ಎಮ್.ಎ. ಹಾಗು ಎಮ್.ಇಡಿ ಪದವಿಗಳನ್ನು ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಆಬಳಿಕ ಶಿಕ್ಷಣಾಧಿಕಾರಿಗಳಾಗಿ ಧಾರವಾಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದರು.

ಸಾಹಿತ್ಯ[ಬದಲಾಯಿಸಿ]

  • ಗಂಗಾಸಾನಿ (ಕಾದಂಬರಿ)
  • ಪ್ರೇಮತರಂಗಿಣಿ (ಕಥಾ ಸಂಕಲನ)
  • ದ್ಯಾಮ-ಕಂಚಿ (ಕಥಾಸಂಕಲನ)

(ದ್ಯಾಮ-ಕಂಚಿಯು ನಾಟಕವಾಗಿ ರೂಪಾಂತರಿಸಲ್ಪಟ್ಟು ಧಾರವಾಡ ಆಕಾಶವಾಣಿಯಿಂದ ಪ್ರಸಾರಿತವಾಯಿತು, ಅಲ್ಲದೆ ನೀನಾಸಂದಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಹ ಪ್ರಯೋಗಿಸಲ್ಪಟ್ಟಿತು.

  • ಎಮ್.ಕೆ.ವರಗಿರಿಯವರು "ಖೋ" ಕಾದಂಬರಿಯ ಸಹಲೇಖಕರು. (ಈ ಕಾದಂಬರಿಯು ೧೯೫೮ರಲ್ಲಿ ಧಾರವಾಡದ ಮನೋಹರ ಗಂಥಮಾಲೆಯಿಂದ ಪ್ರಕಟವಾಗಿದ್ದು, ಪ್ರಯೋಗಾರ್ಥವಾಗಿ ಈ ಕಾದಂಬರಿಯನ್ನು ಹನ್ನೊಂದು ಜನ ಲೇಖಕರು ಬರೆದಿದ್ದಾರೆ.)

ಎಂ.ಕೆ.ವರಗಿರಿಯವರು ೨೦೦೬ ಮೇ ೩ರಂದು ನಿಧನರಾದರು.