ಎಚ್.ವಿ.ರಂಗರಾವ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಎಚ್.ವಿ.ರಂಗರಾವ್'

ಹೊಳಲ್ಕೆರೆಯಲ್ಲಿ ಜನಿಸಿದ,'ಶ್ರೀ. ಎಚ್.ವಿ.ರಂಗರಾವ್', ಒಬ್ಬ 'ಆಡೀಟರ್' ಆಗಿ ಕೆಲಸಮಾಡಿದವರು. ವಂಶ ಪಾರಂಪರ್ಯವಾಗಿ ಶ್ಯಾನುಭೋಗರ ಮನೆಯಲ್ಲಿ ಜನ್ಮಿಸಿದ ಅವರ ವಂಶದವರು ಆ ಪ್ರದೇಶದ ಸುಂಕವನ್ನೂ ಜನರಿಂದ ವಸೂಲುಮಾಡಿ ಸರ್ಕಾರದ ಖಜಾನೆಗೆ ಜಮಾಮಾಡುತ್ತಿದ್ದರು. ಹಾಗಾಗಿ ಅವರ ಮನೆತನದವರಿಗೆ ಸುಂಕದವರು ಎಂಬ ಅಡ್ಡಹೆಸರಿತ್ತು. ಅವರು, ೩೦ ರ ದಶಕದಲ್ಲಿ, ಮುಂಬೈನಲ್ಲಿ ಹಲವು ಕಾಲ, ಬ್ರಿಟಿಷ್ ಸಂಸ್ಥೆಗಳಾದ, 'ವೋಲ್ಕಾರ್ಟ್ ಬ್ರದರ್ಸ್, ಮತ್ತು 'ರ್‌ಯಾಲಿ ಬ್ರದರ್ಸ್' ನಲ್ಲಿ ಏಜೆಂಟ್ ಆಗಿ ದುಡಿದವರು. ರಂಗರಾಯರು, 'ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರು'. 'ಬೆಂಗಳೂರಿನ ಪ್ರಖ್ಯಾತ ಆಸ್ಟ್ರೊಲಾಜಿಕಲ್ ಮ್ಯಾಗಜೈನ್' '(ಜ್ಯೋತಿಷ್ಯಶಾಸ್ತ್ರದ ಮಾಸಪತ್ರಿಕೆ}' ಯ ಸ್ಥಾಪಕ/ಸಂಪಾದಕರಾದ, 'ಡಾ. ಬಿ. ವಿ. ರಾಮನ್' ರವರ ತಾತ, 'ಶ್ರೀ. ಸೂರ್ಯನಾರಾಯಣರಾವ್, ಬಿ.ಎ;'ರ ಜೊತೆಯಲ್ಲಿ 'ಜ್ಯೋತಿಷ್ಯ ಶಾಸ್ತ್ರ'ದ ಬಗ್ಗೆ ಚರ್ಚಿಸುತ್ತಿದ್ದರು. ಪ್ರತಿವರ್ಷವೂ ಸೂರ್ಯನಾರಾಯಣರಾಯರ ಹುಟ್ಟುಹಬ್ಬದ ಸಮಾರಂಭಕ್ಕೆ ಹಾಜರಾಗುತ್ತಿದ್ದರು. ಇವರ ಪೂರ್ವಜರು, ಹಿಂದೆ 'ವಿಜಯನಗರದ ಅರಸರ ಬಳಿ ಸೇವೆ ಸಲ್ಲಿಸುತ್ತಿದ್ದರು'. ಅದರ ಪತನದ ಬಳಿಕ ದಕ್ಷಿಣ ಭಾರತಕ್ಕೆ ವಲಸೆಬಂದು ನೆಲೆಸಿದವರಲ್ಲಿ ಕೆಲವರು ಹೊಳಲ್ಕೆರೆಯಲ್ಲಿ ನೆಲೆಸಿದರು. ಸುಮಾರು ೩೦೦ ವರ್ಷಗಳಿಂತ ಹೆಚ್ಚು ಸಮಯದಿಂದ ಹೊಳಲ್ಕೆರೆ ಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರ ಇಬ್ಬರು ಮಕ್ಕಳಾದ'ಡಾ.ಎಚ್.ಆರ್.ಚಂದ್ರಶೇಖರ್' ಮತ್ತು 'ಪ್ರೊ.ಎಚ್. ಆರ್. ರಾಮಕೃಷ್ಣ ರಾವ್' ವಿದ್ಯಾಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

'ದಾಸ್ಬೋಧ್' ಹಾಗೂ 'ಅನುಭವಾಮೃತ' ಮೆಚ್ಚಿನ ಪುಸ್ತಕಗಳು [ಬದಲಾಯಿಸಿ]

ರಂಗರಾಯರ ಮನೆಯಲ್ಲಿ ಬಹು'ದೊಡ್ಡ ಪುಸ್ತಕ ಭಂಡಾರ'ವಿತ್ತು, ಅದರಲ್ಲಿ ಹಲವಾರು ಪ್ರಕಾರಗಳ ಪುಸ್ತಕಗಳಿದ್ದವು.

  • ಗುರುದೇವ, ರವೀಂದ್ರನಾಥ ಠಾಕೂರರ, 'ರೆಡ್ ಆಲೆಂಡರ್ಸ್', 'ಪೋಸ್ಟ್ ಆಫೀಸ್', 'ಗೀತಾಂಜಲಿ', 'ಗೋರಾ', 'ನೌಕಾಘಾತ', ಮುಂತಾದ ಪುಸ್ತಕಗಳಿದ್ದವು.
  • 'ಗಳಗನಾಥರ ಬಂಗಾಲಿ ಕಾದಂಬರಿಗಳ ಕನ್ನಡ ಭಾಷಾಂತರದ ಪುಸ್ತಕಗಳು', 'ಮಹಾಶ್ವೇತೆ', 'ಕಪಾಲ ಕುಂಡಲಿ',
  • 'ದೇವೀ ಚೌಧುರಾಣಿ, ಆನಂದ ಮಠ,
  • 'ಅನಕೃ'ರವರ 'ತರಾಸು'ರವರ, 'ಹೊಸಹಗಲು', 'ತಿರುಗು ಬಾಣ', 'ರಕ್ತರಾತ್ರಿ', 'ಚಂದವಳ್ಳಿಯ ತೋಟ', ಮುಂತಾದ, ಹಲವಾರು ಪುಸ್ತಕಗಳಿದ್ದವು.
  • 'ವಿ.ಸೀ'.ರವರ 'ಪಂಪಾಯಾತ್ರೆ', ಮುಂತಾದವು.
  • 'ರಾಜರತ್ನಂ'ರವರ, 'ಅಶ್ವತ್ಥಾಮನ್',
  • 'ಟಿ. ಪಿ. ಕೈಲಾಸಂ' ರವರ, 'ತಾಳೀಕಟ್ಟೋದ್ಕೂಲಿನೆ', 'ಸಾತು ತವರ್ಮನೆ', 'ಪಾತು ತವರ್ಮನೆ', 'ಪರ್ಪಸ್', ಮುಂತಾದವು.
  • 'ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು' ರವರ, 'ಮೂಳೆಯ ಹಂದರ', 'ಸ್ವಯಂವೈದ್ಯ', ಮುಂತಾದವು.
  • 'ಭಕ್ತಿವಿಜಯ', 'ನಮ್ಮ ಊರಿನ ರಸಿಕರು', ದಾಶರಥೀ ದೀಕ್ಷಿತರ, 'ಅಳಿಯದೇವರು', ಮುಂತಾದವುಗಳು,
  • 'ಬೃಹದ್ಜಾತಕಂ'

ಪತ್ರಿಕೆಗಳು [ಬದಲಾಯಿಸಿ]

  • 'ಗುಬ್ಬಿ ಚಿದಂಬರಾಶ್ರಮದ, 'ಸೇವಾಸದನ', 'ಆಸ್ಟ್ರೊಲಾಜಿಕಲ್ ಮ್ಯಾಗಜೈನ್', 'ಹೊಳೆನರಸೀಪುರದ ಪತ್ರಿಕೆಗಳು', ಇತ್ಯಾದಿಗಳು. ರಂಗರಾಯರು, ಮರಾಠಿ, ತೆಲುಗು, ಕನ್ನಡ, ಹಾಗೂ ಇಂಗ್ಲೀಷ್ ಭಾಷೆಗಳನ್ನು ಚೆನ್ನಾಗಿ ಅಭ್ಯಾಸಮಾಡಿದ್ದರು. 'ದಾಸ್ಬೋಧ್, ಶ್ರೀಧರ ಸ್ವಾಮಿಗಳ, 'ಪಾಂಡವ ಪ್ರತಾಪ್' ಗಳನ್ನು ಶ್ರವಣಮಾಡುತ್ತಾ, ಅದರ ಅರ್ಥವನ್ನು ಮನೆಯವರಿಗೆ ವಿವರಿಸುತ್ತಿದ್ದರು. 'ಗೋಂದಾವಲೆಕರ್ ಬ್ರಹ್ಮಚೈತನ್ಯ ಮಹಾರಾಜರ' ಪರಮ ಭಕ್ತರು.