ಎಂ.ಆರ್.ಲಕ್ಷ್ಮಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ.ಆರ್.ಲಕ್ಷ್ಮಮ್ಮ ಇವರು ೧೯೧೩ರಲ್ಲಿ ಜನಿಸಿದರು. ಇವರ ತಂದೆ ಆರ್.ರಾಮರಾವ್; ಪತಿ ನಾರಾಯಣ ಮೂರ್ತಿ.

ಪತ್ರಿಕೋದ್ಯಮ[ಬದಲಾಯಿಸಿ]

ಲಕ್ಷ್ಮಮ್ಮನವರು ವಯಸ್ಕರ ಶಿಕ್ಷಣ ಸಮಿತಿಯ ‘ಬೆಳಕು’ ಪತ್ರಿಕೆಯ ಪ್ರಪ್ರಥಮ ಸಂಪಾದಕಿಯಾಗಿದ್ದರು. ಮಹಿಳೆಯರಿಗಾಗಿ ‘ಸೋದರಿ’ ಎನ್ನುವ ವಾರಪತ್ರಿಕೆಯನ್ನು ೫ ವರ್ಷ ಕಾಲ ನಡೆಯಿಸಿದರು.ಆ ಬಳಿಕ ೧ ವರ್ಷ ಕಾಲ ಇದನ್ನು ಮಾಸಪತ್ರಿಕೆಯಾಗಿ ನಡೆಯಿಸಿದರು.

ಸಾಹಿತ್ಯ[ಬದಲಾಯಿಸಿ]

ಲಕ್ಷ್ಮಮ್ಮನವರು ಹಲವಾರು ಕತೆಗಳನ್ನು ರಚಿಸಿದ್ದಾರೆ ಹಾಗು ಜನಪದ ಸಾಹಿತ್ಯವನ್ನು ಸಂಗ್ರಹಿಸಿದ್ದಾರೆ.

ಸಾಮಾಜಿಕ[ಬದಲಾಯಿಸಿ]

೧೯೪೫ರಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಗೊಂಡಿದ್ದರು.

ಎಂ.ಆರ್.ಲಕ್ಷ್ಮಮ್ಮನವರು ೧೯೮೪ರಲ್ಲಿ ನಿಧನರಾದರು.