ಅಣ್ಣನ ನೆನಪು
ಪೂರ್ಣಚಂದ್ರ ತೇಜಸ್ವಿಯವರ ಕೃತಿ.
ಕುವೆಂಪು ಮಹಾಕವಿ, ಪ್ರಸಿಧ್ಧ ಕನ್ನಡ ಲೇಖಕ , "ರಾಮಾಯಣ ದರ್ಶನಂ" ಕೃತಿಗಾಗಿ ಜ್ಞಾನಪೀಠ ಪಡೆದು ಕನ್ನಡಕ್ಕೆ ಹೆಮ್ಮೆಯನ್ನು ತಂದುಕೊಟ್ಟವರು ಇತ್ಯಾದಿ ಇತ್ಯಾದಿ ಎಲ್ಲರೂ ಬಲ್ಲರು. ಆದರೆ ಕುವೆಂಪುರವರನ್ನು ಒಬ್ಬ ತಂದೆಯಾಗಿ, ಉಪ್ಪು ಖಾರ ತಿನ್ನುವ ಮನುಷ್ಯನಾಗಿ ಚಿತ್ರಿಸಿದ ಒಂದು ಅಪರೂಪದ ಕೃತಿ 'ಅಣ್ಣನ ನೆನಪು' . ಈ ಪುಸ್ತಕ ತೇಜಸ್ವಿಯವರ ಅನುಭವ ಕಥನಗಳ ಸಂಕಲನ. ಪ್ರತಿಯೊಬ್ಬ ಕನ್ನಡಿಗನು ಸಾಹಿತ್ಯಾಭಿಮಾನಿಯು ಓದಲೆಬೇಕಾದ ಪ್ರಸ್ತಕ ಇದಾಗಿದ್ದು ಇದರಲ್ಲಿರುವ ಪ್ರತಿಯೊಂದು ಅಧ್ಯಾಯವು ಹಾಸ್ಯಬುಗ್ಗೆಯನ್ನು ತರಿಸುವುದರೊಂದಿಗೆ ಕುವೆಂಪುರವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಈ ಪುಸ್ತಕ ಪ್ರಕಟವಾಗಿದ್ದು ೧೯೯೬ ರಲ್ಲಿ.
ನಾನು ತೇಜಸ್ವಿಯವರ ಎಲ್ಲಾ ಕೃತಿಗಳ ಅಭಿಮಾನಿ. ಅವರ ಪುಸ್ತಕ ದೊರಕಿತೆಂದರೆ. ಈ ಪ್ರಪಂಚವನ್ನೇ ಮರೆತು ಬಿಡ್ತೀನಿ. ಅವರು ಪರಿಚಯವಾದದ್ದು ಕರ್ವಾಲೋ ಪುಸ್ತಕದ ಮೂಲಕ. ಆಗ ನಾನಿನ್ನೂ ಒಂಭತ್ತನೇ ತರಗತಿ ಓದುತ್ತಿದ್ದೆ. ಆಗ ನನ್ನ ಸ್ನೇಹಿತೆಯ ಅಣ್ಣ ಪಿಯುಸಿ ಓದುತ್ತಿದ್ದರು. ಅವರಿಗೆ ಈ ಪುಸ್ತಕ ಪಠ್ಯವಾಗಿತ್ತು. ಆಗ ಓದಿದ ಪುಸ್ತಕ. ಆಗ ನನಗೆ ಕುವೆಂಪು ಅವರ ಮಗ ಎಂದು ಕೂಡ ಗೊತ್ತಿರಲಿಲ್ಲ. ಆಗಲೇ ನಾನು ಅಭಿಮಾನಿಯಾಗಿ ಬಿಟ್ಟೆ. ಅವರ ಅನೇಕ ಪುಸ್ತಕಗಳು ಪರಿಸರದ ಕಥೆ, ಅಲೆಮಾರಿಯ ಅಂಡಮಾನ್, ಮಿಸ್ಸಿಂಗ್ ಲಿಂಕ್, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು, ಚಿದಂಬರ ರಹಸ್ಯ ಇನ್ನೂ ಅನೇಕ ಕೃತಿಗಳನ್ನು ಓದಿದ್ದೇನೆ ಮತ್ತೆ ಮತ್ತೆ ಓದುತ್ತಲೇ ಇದ್ದೇನೆ. ಪ್ರತಿದಿನ ಹೊಸದಾಗಿ ಓದಿಸಿಕೊಂಡು ಹೋಗುವ ಶಕ್ತಿ ಹೊಂದಿವೆ. ಹಾಸ್ಯ, ವೈಗ್ನಾನಿಕ, ವಿವರ, ವಿಶೇಷ ಬರೆಯುವ ರೀತಿ ಎಲ್ಲವನ್ನೂ ಒಳಗೊಂಡ ಅಪರೂಪದ ಕೃತಿಗಳು. ಅವರ ಕನ್ನಡ ಸೇವೆ ಇನ್ನೂ ಮುಂದುವರೆಯಬೇಕಿತ್ತು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |