ದುಬಾರೆ ಆನೆ ಶಿಬಿರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾವೇರಿ ನದಿ ದುಬಾರೆಯಲ್ಲಿ

ದುಬಾರೆ ಕಾಡು ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಒಂದು ಪ್ರವಾಸಿ ತಾಣ. ಕಾವೇರಿ ಈ ಕಾಡಿನ ಮೂಲಕ ಹರಿಯುತ್ತಾಳೆ. ದುಬಾರೆ ಕಾಡಿನಲ್ಲಿ ಆನೆ ಶಿಬಿರ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ.

ಈ ಶಿಬಿರದಲ್ಲಿ ಆನೆಗಳ ತರಬೇತಿ,ಘಾಗೂ ಪ್ರವಾಸಿಗಳಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಪ್ರತಿ ದಿನ ಬೆಳಿಗ್ಗೆ ೮ ರಿಂದ ೫.೩೦ ರ ವರೆಗೆ ಪ್ರವಾಸಿಗಳಿಗೆ ಈ ಶಿಬಿರ ತೆರೆದಿರುತ್ತದೆ. ಈ ಸಮಯದ ನಂತರ ಆನೆಗಳನ್ನು ಕಾಡಿನಲ್ಲಿ ಬಿಟ್ಟು ಬರಲಾಗುತ್ತದೆ. ರಾತ್ರಿಯಿಡಿ ಕಾಡಿನಲ್ಲಿಯೇ ಇರುವ ಆನೆಗಳನ್ನು ಮತ್ತೆ ಮುಂಜಾನೆ ಮತ್ತು ಸಾಯಂಕಾಲ ಶಿಬಿರಕ್ಕೆ ಕರೆತರಲಾಗುತ್ತದೆ.

ಪಳಗಿಸಿದ ಆನೆಗಳು[ಬದಲಾಯಿಸಿ]

ಪಳಗಿಸಿದ ಆನೆಗಳ ಹೆಸರು, ಲಿಂಗ ಮತ್ತು ವಯಸ್ಸು

ಹರ್ಷ[ಬದಲಾಯಿಸಿ]

ದುಬಾರೆ ಶಿಬಿರದ ಆನೆ. ಹರ್ಷನ ವಯಸ್ಸು ೪೪. ಎತ್ತರ೨.೫೭ ಮೀಟರ್. ಇದನ್ನು ೧೯೯೦ಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಹನ್ನೊಂದನೇ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ವಿಕ್ರಮ್[ಬದಲಾಯಿಸಿ]

ದುಬಾರೆ ಶಿಬಿರದ ಆನೆ. ವಿಕ್ರಮ್‌ಗೆ ೩೮ ವರ್ಷ. ಇದನ್ನು ೧೯೯೦ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಅರಿವಳಿಕೆ ಔಷಧಿ ನೀಡುವ ಮೂಲಕ ಸೆರೆಹಿಡಿಯಲಾಗಿತ್ತು. ಇದು ೯ನೇ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

ಪ್ರವಾಸಿ ತಾಣ[ಬದಲಾಯಿಸಿ]

ದುಬಾರೆ ಕಾಡಿನಲ್ಲಿ ಕಾವೇರಿ ದಾಟಲು ಬೋಟುಗಳು ಇವೆ. ಆನೆಯ ಸಫಾರಿ.ದುಬಾರೆ ಕಾಡಿನಲ್ಲಿ ಆನೆಯ ಸ್ನಾನ ಮಾಡಿಸುವದು ಮತ್ತು ಅಹಾರ ನೀಡುವ ವ್ಯವಸ್ಠೆ ಇದೆ.

ಚಿತ್ರ ಸಂಪುಟ[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]