ಬೂದಿಕೋಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೈದರಾಲಿ ಹುಟ್ಟಿದ ಸ್ಥಳ ಬೂದಿಕೋಟೆ

ಬೂದಿಕೋಟೆ ಪೌರಾಣಿಕವಾಗಿ ಐತಿಹಾಸಿಕವಾಗಿ ಹೆಸರಾಗಿರುವ ಗ್ರಾಮ. ಈ ಗ್ರಾಮವು ಬಾಣರು ಸೇರಿದಂತೆ ಹಲವು ರಾಜವಂಶಗಳಲ್ಲಿ ಆಳ್ವಿಕೆಯಲ್ಲಿ ಇತ್ತು ಎಂದು ಸಾರುತ್ತವೆ ಇಲ್ಲಿರುವ ಶಾಸನಗಳು. ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕೇಂದ್ರದಿಂದ ೧೨ ಕಿ.ಮೀ ದೂರದಲ್ಲಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಗಡಿ ಭಾಗದಲ್ಲಿದ್ದು ಬಹಳಷ್ಟು ಜನ ತೆಲುಗು ಮತ್ತು ತಮಿಳು ಸಹ ಮಾತನಾಡುವವರಾಗಿದ್ದಾರೆ. ಇಲ್ಲಿನ ಮುಖ್ಯ ಕಸುಬು ವ್ಯವಸಾಯ ಇಲ್ಲಿ ಎಲ್ಲಾ ವರ್ಗದ ಎಲ್ಲಾ ಜಾತಿಗೆ ಸೇರಿದ ಜನರಿದ್ದಾರೆ.

ಚರಿತ್ರೆ[ಬದಲಾಯಿಸಿ]

ಬೂದಿಕೋಟೆಯು ೧೭ ನೇ ಶತಮಾನದಲ್ಲಿ ಶಿರಾ ಸುಭೇದಾರನ ಕೆಳೆಗೆ ಪೌಜುದಾರನಾಗಿದ್ದ ಫತೇಮಹಮ್ಮದನ ಜಹಗೀರಿಯಾಗಿತ್ತು. ಫತೇಮಹಮ್ಮದನ ಮಗ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರ ತಂದೆ ಮೈಸೂರು ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ಹೈದರಾಲಿಯ ಜನ್ಮಸ್ಠಳ ಇವರು 1720 ರಲ್ಲಿ ಇಲ್ಲಿ ಜನಿಸಿದರು.

ಬೂದಿಕೋಟೆಯಲ್ಲಿ ಶಿಥಿಲವಾದ ಕೋಟೆಗಳ ಅವಶೇಷಗಳಿವೆ. ಕೋಟೆಯೊಳಗೆ ಅನೇಕ ದೇವಾಲಯಗಳು ಸಹ ಇವೆ. ಮಳೆಗಾಲದಲ್ಲಿ ಮಾರ್ಕಂಡೇಯ ನದಿಯನೀರು ಕೋಟೆಯನ್ನು ಸುತ್ತುವರೆದು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಕೋಟೆ ಓಂದರ್ಥದಲ್ಲಿ ನಿಸರ್ಗ ನಿರ್ಮಿಸಿದ ಕಲಾಶಾಲೆ. ಇಲ್ಲಿ ಕಾಣುವ ಪ್ರತಿಯೊಂದು ಕಲ್ಲಿಗೂ ಸಹ ಒಂದೊಂದು ಆಕಾರವಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಉಸ್ತುವಾರಿಯಲ್ಲಿರುವ ಬೂದಿಕೋಟೆಯ ಕೋಟೆಯೊಳಗೆ ಕಲ್ಲಿನಲ್ಲಿ ಕೆತ್ತಿದಂತಹ ಆಂಜನೇಯ ಸ್ವಾಮಿಯ ದೇವಾಲಯ ಮತ್ತು ಕೋಟೆವೇಣುಗೋಪಾಲಸ್ವಾಮಿಯ ಆಲಯವಿದೆ ಇದು ಶಿಥಿಲವಾಗಿದ್ದು ಇತ್ತೀಚೆಗೆ ಊರಿನ ಗ್ರಾಮಸ್ಥರು ಸುಂದರಗೊಳಿಸಿದ್ದಾರೆ. ಹೈದರಾಲಿಯ ಜನ್ಮಸ್ಥಳದಲ್ಲಿ ಸ್ಮಾರಕವೊಂದಿದೆ.

ಬೂದಿಕೋಟೆಗೆ ಮೊದಲು ವಿಭೂತಿಪುರ ಅಂತ ಕರೀತಾ ಇದ್ದರು ಕಾರಣ ಏನಪ್ಪ ಅಂದ್ರೆ ಇಲ್ಲಿ ಆಗಿನ ಕಾಲದಲ್ಲಿ ಋಷಿ ಮುನಿಗಳು ಎಲ್ಲಿ ನೋಡಿದರೂ ಯಾಗ ಯಜ್ಝ ಮಾಡ್ತಾ ಇದ್ದರಂತೆ ಈ ರೀತಿ ಮಾಡ್ತಾ ಇದ್ದದ್ದರ ಪರಿಣಾಮವಾಗಿ ಎಲ್ಲಿ ನೋಡಿದರೂ ಬೂದಿ ಇರುತ್ತಿತ್ತು. ಅದಕ್ಕಾಗಿ ಇದನ್ನ ವಿಭೂತಿಪುರ ಅಂತ ಕರೀತಾ ಇದ್ದರು. ನಂತರದ ದಿನಗಳಲ್ಲಿ ವಿಭೂತಿಪುರದಲ್ಲಿ "ಬೂದಿ" ಯನ್ನು ತೆಗೆದುಕೊಂಡು ಹಾಗೂ ಹೈದರಾಲಿಯ ಕೋಟೆ ಇದ್ದದ್ದರಿಂದ ಇಲ್ಲಿ "ಕೋಟೆ" ಯನ್ನು ತೆಗೆದುಕೊಂಡು ಬೂದಿಕೋಟೆ ಅಂತ ನಾಮಕರಣ ಮಾಡಿದರು. ಅಂದಿನಿಂದ ಬೂದಿಕೋಟೆಯಾಗಿ ಕರೆಯಲ್ಪಡುತ್ತಿದೆ.

ಕೋಟೆಯಿಂದ ಎತ್ತನೊಡಿದರೂ ರಮ್ಯ ನೊಟಗಳೆ ಕಾಣಿಸುತ್ತದೆ. ಬುದಿಕೋಟೆಯ ಕೋಟೆಯು ವಿಶಾಲವಿಲ್ಲದಿದ್ದರೂ ಇರುವಂತಹ ಪ್ರದೇಶದಲ್ಲಿಯೇ ದೇವಾಲಯಗಳು, ಕಾವಲುಗೋಪುರ, ತಾವರೆಕೊಳ, ಹೈದರಾಲಿಯ ಸ್ಮಾರಕ, ವಿವಿಧ ಬಗೆಯ ಶಿಲ್ಪಗಳು ಇವೆ. ಇದರ ಜೊತೆಗೆ ಮನಸ್ಸಿಗೆ ತಂಪು ನೀಡುವ ಹಸಿರು ಹೊಲಗದ್ದೆಗಳು ಇವೆ. ನಮ್ಮ ಭಾರತದ ಮಹಿಳಾ ಕ್ರಿಕೇಟಿನ ತಂಡದ ನಾಯಕಿಯಾದ ಶಾಂತರಂಗಸ್ವಾಮಿ ಬೂದಿಕೋಟೆಯವರೇ.

ಬೂದಿಕೋಟೆಯಿಂದ ಸುಮಾರು ೫ ಕಿ.ಮೀ ಸಾಗಿದರೆ ಮೈಸೂರು ಅರಸರ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ಮಾರ್ಕಂಡೆಯ ಜಲಾಶಯ ವಿಹಾರ ತಾಣವಾಗಿ ತುಂಬಾ ಪ್ರಸಿದ್ದಿಯಾಗಿದೆ. ಜೊತೆಗೆ ಕೋಲಾರ ಜಿಲ್ಲೆಯ ಮಿನಿ ಕೆ ಆರ್ ಎಸ್ ಎಂದೇ ಪ್ರಸಿದ್ದಿಯಾಗಿದೆ ಈ ಮಾರ್ಕಂಡೆಯ ಕೆರೆ. Peri.t22@gmail.com

ನಮ್ಮಧ್ವನಿ[ಬದಲಾಯಿಸಿ]

ನಮ್ಮಧ್ವನಿಯನ್ನು ಸಮುದಾಯ ರೆಡಿಯೋ ಕೇಂದ್ರ ಬೂದಿಕೋಟೆಯಲ್ಲಿ 2002 ರಲ್ಲಿ ಪ್ರಾರಂಭಿಸಿದರು. ಇಲ್ಲಿ ಪ್ರಾರಂಭಿಸಲು ಕಾರಣವೇನಂದ್ರೆ ಬೂದಿಕೋಟೆ ಕರ್ನಾಟಕ, ಅಂದ್ರಪ್ರದೇಶ ಮತ್ತು ತಮಿಳುನಾಡಿನ ಗಡಿಭಾಗದಲ್ಲಿದ್ದು, ಇಲ್ಲಿ ಅವಿಧ್ಯಾವಂತರು ಮತ್ತು ಕೂಲಿಕಾರ್ಮಿಕರು ಜಾಸ್ತಿ ಇದ್ದು, ಇವರಿಗೆ ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಸಿಗುತ್ತಿರಲಿಲ್ಲ ಆದ್ದರಿಂದ ಇಲ್ಲಿ ನಮ್ಮಧ್ವನಿಯನ್ನು ಯುನೆಸ್ಕೋ ಸಹಕಾರದಿಂದ ಪ್ರಾರಂಭಿಸಿದರು. ನಮ್ಮ ಧ್ವನಿಗೆ ಸಹಕಾರವನ್ನು ಬೆಂಗಳೂರುನಲ್ಲಿರುವ ವಾಯ್ಸಸ್ Archived 2009-02-09 ವೇಬ್ಯಾಕ್ ಮೆಷಿನ್ ನಲ್ಲಿ. ಸಂಸ್ಥೆಯು ತಾಂತ್ರಿಕ ಸಹಾಯವನ್ನು ಮಾಡುತ್ತಿದ್ದು, ಮೈರಾಡ ಸಂಸ್ಥೆಯು ಸ್ಥಳೀಯ ಮಟ್ಟದಲ್ಲಿ ಜವಾಬ್ದಾರಿಯನ್ನು ವಹಿಸುಕೊಂಡಿದೆ. ಯುನೆಸ್ಕೋ ಸಂಸ್ಥೆಯು ನಮ್ಮಧ್ವನಿಗೆ ಬೇಕಾದ ಎಲ್ಲಾ ಉಪಕರಣಗಳನ್ನು ನೀಡಿದೆ. ನಮ್ಮಧ್ವನಿ ಮುಖಾಂತರ ಹಲವಾರು ವಿಧಾನಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು 90.4 ತರಂಗಗಳಲ್ಲಿ ಕ್ರಾರ್ಯಕ್ರಮ ಪ್ರಸಾರವಾಗುತ್ತಿದೆ.