ಅರುಣ ಸಾಯಿರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರುಣ ಸಾಯಿರಾಮ್ / ಅರುಣಾ ಸಾಯಿರಾಮ್
ಜನನ(೧೯೫೨-೧೦-೩೦)೩೦ ಅಕ್ಟೋಬರ್ ೧೯೫೨
ಮುಂಬೈ, ಮಹಾರಾಷ್ಟ್ರ
ಸಂಗೀತ ಶೈಲಿಕರ್ನಾಟಕ ಸಂಗೀತ
ವೃತ್ತಿಶಾಸ್ತ್ರೀಯ ಸಂಗೀತ ಗಾಯಕಿ
ಸಕ್ರಿಯ ವರ್ಷಗಳು1958 - ಪ್ರಸ್ತುತ

ಅರುಣ ಸಾಯಿರಾಮ್ (ಅರುಣಾ ಸಾಯಿರಾಮ್ ) ಕರ್ನಾಟಕ ಸಂಗೀತದ ನವ ಪೀಳಿಗೆಯ ಗಾಯಕಿಯರ ಸಾಲಿನಲ್ಲಿ ಪ್ರಮುಖರು.ಇವರಿಗೆ ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿ ದೊರೆಕಿದೆ.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಅರುಣ ಸಾಯಿರಾಮ್ ಪ್ರಾಥಮಿಕ ಶಿಕ್ಷಣವನ್ನು ತಮ್ಮ ತಾಯಿ ಆಲತ್ತೂರು ಸಹೋದರರ.ಮತ್ತು ತಂಜಾವೂರು ಶಂಕರ ಐಯ್ಯರ್ ರವರ ಶಿಷ್ಯೆ ರಾಜಲಕ್ಷ್ಮೀ ಸೇತುರಾಮನ್ ರವರಿಂದ ಪಡೆದರು.[೧] ಮುಂದೆ ಹೆಚ್ಚಿನ ಶಿಕ್ಷಣವನ್ನು ಮದುರೈ ಸೋಮಸುಂದರಮ್ ಮತ್ತು ಟಿ.ಬೃಂದಾ ರವರಿಂದ ಪಡೆದರು.[೨] ರಾಗ, ತಾನ ಮತ್ತು ಪಲ್ಲವಿ ಗಾಯನವನ್ನು ಟಿ.ಆರ್.ಸುಬ್ರಹ್ಮಣ್ಯಂ ರವರಿಂದ ಪಡೆದರು.[೩]

ಸಾಧನೆ ಮತ್ತು ಗೌರವ[ಬದಲಾಯಿಸಿ]

ಅರುಣ ಸಾಯಿರಾಮ್ ದೇಶ ಹಾಗೂ ವಿದೇಶದ ಹಲವಾರು ಕಲಾವಿದರೊಂದಿಗೆ ಸೇರಿ ಕಛೇರಿಗಳನ್ನು ಅಥವಾ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಇಂತಹವರಲ್ಲಿ ಅಂತಾರಾಷ್ಟ್ರ ಖ್ಯಾತಿಯ ಡೊಮಿನಿಕ್ ವೆಲ್ಲಾರ್ಡ್ ಮುಂತಾದರೂ ಸೇರಿದ್ದಾರೆ. ಹಲವಾರು ಅಂತಾರಾಷ್ಟ್ರೀಯ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿ ಖ್ಯಾತಿ ಗಳಿಸಿದ್ದಾರೆ.
ಇವರ ಈ ಸಾಧನೆ ಗಮನಿಸಿ ಭಾರತ ಸರಕಾರ ಇವರಿಗೆ ೨೦೦೯ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.[೪]

ಉಲ್ಲೇಖಗಳು[ಬದಲಾಯಿಸಿ]

  1. "''The Hindu'': Entertainment Delhi / Music : Song of the soul". Chennai, India: Hindu.com. 2006-02-17. Archived from the original on 2006-09-13. Retrieved 2010-09-30.
  2. "''The Hindu'': Friday Review Delhi / Music : Devotion and dexterity". Chennai, India: Hindu.com. 2006-02-24. Archived from the original on 2010-09-18. Retrieved 2010-09-30.
  3. "''The Hindu'': Friday Review Chennai / Events : Odyssey of a musician". Chennai, India: Hindu.com. 2008-10-17. Archived from the original on 2008-10-21. Retrieved 2010-09-30.
  4. "The Times of India". The Times Of India. 26 January 2009. Archived from the original on 7 ಜುಲೈ 2012. Retrieved 22 January 2012.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]